Saturday, June 14, 2025
Google search engine
Home Blog Page 3

ಮಹಿಳಾ ದಿನದ ವಿಶೇಷ ಓದಲೇಬೇಕಾದ ಕವನ

ಆಯಿತಲ್ಲ ನಿನ್ನ
ದಿನ
ಇನ್ನು ಮುನ್ನೂರು ಅರವತ್ತು ನಾಲ್ಕು ದಿನ ನನ್ನದು

ಎಲ್ಲ ಸ್ವತಂತ್ರ
ಬಂದಿತು ..
ಮೆಟ್ರೊ , ಜೆಟ್ ಓಡಿಸಿ ಆಯಿತು
ಚಂದ್ರ ನಿಗೆ , ಮಂಗಳ ಕ್ಕೆ ಜಿಗಿದು ಆಯಿತು..
ಮುಂದೆ???
Fridge ಅಲ್ಲಿ ಪೀಸ್ ಪೀಸ್.

ಕಣ್ಣ ರೆಪ್ಪೇ
ನಕಲಿ
ಕಣ್ಣ ಲೆನ್ಸ್
ನಕಲಿ
ಕಣ್ಣೀರು ಮಾತ್ರ ಅಸಲಿ

ಬಿಟ್ಟ
ಚೂಪಾದ ಉಗುರು
ಅಪಾಯದಲ್ಲಿನ
ಅಸ್ತ್ರವೇ.

ಅಕೌಂಟ್
ಜಂಟಿ ..

ಸಾಲ ಸೋಲ
ಎಲ್ಲ ಜಂಟಿ

ಮನೆಯ
ಒಳಾಂಗಣ
ದೌರ್ಜನ್ಯಕ್ಕೆ
ಆಂತರಿಕ ದೂರು ಸಮಿತಿ?

ಮನೆಯ
ಒಳಾಂಗಣ
ದೌರ್ಜನ್ಯಕ್ಕೆ
ಆಂತರಿಕ ದೂರು ಸಮಿತಿ?

ಕುಡಿಯುವ
ಸ್ವಾತಂತ್ರ್ಯ ..
ಕುಡಿದು ಹೊಡೆಯುವ
ಸ್ವಾತಂತ್ರ್ಯಕ್ಕೆ
ಸಮವೇ?

ದುಡಿಯುವ
ಸ್ವತಂತ್ರ
ದುಡ್ಡಿನ ಮೇಲಿನ
ಸ್ವತಂತ್ರ ಅಲ್ಲ

ದುಡಿದು
ಅನ್ನಿಸಿ
ಕೊಳ್ಳುವ ದಕ್ಕಿಂತ
ದುಡಿಯದೇ…ಅನ್ನಿಸಿಕೊಂಡಿರುವುದು ಮೇಲು

ಡಾ ರಜನಿ ಎಂ

ಕನ್ನಡದ ಭವಿಷ್ಯವನ್ನು ರಕ್ಷಿಸಬೇಕಾಗಿದೆ : ಬಿಳಿಮಲೆ

ಬೆಂಗಳೂರು

ಮಾತೃ ಭಾಷೆ ಹಾಗೂ ಕೆಂಪು ಪುಸ್ತಕ ದಿನಾಚರಣೆ

ಕನ್ನಡದ ಭವಿಷ್ಯ ಕರಾಳವಾಗಿದೆ. ಕನ್ನಡ ಶಾಲೆಗಳು ನಶಿಸಿಹೋಗುವ ಹಂತದಲ್ಲಿವೆ. ಈಗಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕನ್ನಡವೇ ಕ್ರಮೇಣ ಮರೆಯಾಗುವ ಸಾಧ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.

ಕ್ರಿಯಾ ಮಾಧ್ಯಮ ಹಮ್ಮಿಕೊಂಡಿದ್ದ ಮಾತೃ ಭಾಷೆ ಹಾಗೂ ಕೆಂಪು ಪುಸ್ತಕ ದಿನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಹಾಗೂ ಅಸ್ಮಿತೆಯ ಮುಂದೆ ಹಲವು ಸವಾಲುಗಳಿವೆ. ಅದರಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ತುರ್ತು ಮುಖ್ಯವಾದದ್ದು. ಇದಲ್ಲದೆ ಕನ್ನಡ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳದೆ ಹೋದಲ್ಲಿ ಭಾಷೆ ಸಂಸ್ಕೃತಿ ನಶಿಸಿಹೋಗುತ್ತದೆ ಎಂದರು.

ಓದುವ ಹಿಗ್ಗು ಉತ್ಸವದ ಅಂಗವಾಗಿ ಹೊರತಂದ ‘ಓದುವ ಖುಷಿ ‘ ಕೃತಿಯನ್ನು ಬಿಡುಗಡೆ ಮಾಡಿದ ಸಾಹಿತಿ, ಪತ್ರಕರ್ತ ಜಿ ಎನ್ ಮೋಹನ್ ಅವರು ಪುಸ್ತಕ ಎನ್ನುವುದು ಬದಲಾವಣೆಯನ್ನು ತರುವ ಪ್ರಮುಖ ಅಸ್ತ್ರ. ಇದು ಸಮಾಜವನ್ನು ಜಡವಾಗಿ ಇರಲು ಬಿಡದ ಬದಲಾವಣೆಯ ವೇಗವರ್ಧಕ. ಪುಸ್ತಕ ಪ್ರೀತಿಯನ್ನು ಎಲ್ಲೆಡೆ ಬಲಪಡಿಸುವ, ಹಂಚುವ ಕೆಲಸವಾಗಬೇಕು ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಮುಖ್ಯಸ್ಥರಾದ ಬಸವರಾಜ ಕಲ್ಗುಡಿ ಅವರು ಮಾತನಾಡಿ ಓದುವ ಸಂಸ್ಕೃತಿ ನಶಿಸಿ ಹೋಗುವ ಹಂತದಲ್ಲಿದೆ. ಆಧುನಿಕ ಸಾಧನ ಹಾಗೂ ತಂತ್ರಜ್ಞಾನದಿಂದಾಗಿ ಯುವಪೀಳಿಗೆ ಓದಿನಿಂದ ಸಂಪೂರ್ಣ ವಿಮುಖರಾಗಿದ್ದಾರೆ. ಓದಿನತ್ತ ಮತ್ತೆ ಅವರನ್ನು ಸೆಳೆಯುವುದು ಸವಾಲಿನ ಕೆಲಸ ಎಂದರು.

ಕ್ರಿಯಾ ಮಾಧ್ಯಮದ ಎನ್ ಕೆ ವಸಂತರಾಜ್, ಕೆ ಎಸ್ ವಿಮಲಾ, ಕೃತಿಯ ಅನುವಾದಕರಾದ ತಡಗಳಲೆ ಸುರೇಂದ್ರ ರಾವ್ ಉಪಸ್ಥಿತರಿದ್ದರು.

ಎಚ್ ಜಿ ಜಯಲಕ್ಷ್ಮಿ ಹಾಗೂ ದೇವಿಕಾ ರಾಮು ಅವರು ನಿರಂಜನರ ಕೃತಿಗಳ ಆಯ್ದ ಭಾಗವನ್ನು ವಾಚಿಸಿದರು.

ಕ್ರಿಯಾ ಮಾಧ್ಯಮ ಬೆಂಗಳೂರಿನಲ್ಲಿ ಕೆಂಪು ಪುಸ್ತಕ ಹಾಗೂ ಮಾತೃಭಾಷಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಓದುವ ಖುಷಿ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಪತ್ರಕರ್ತ ಜಿ ಎನ್ ಮೋಹನ್ ಹಾಗೂ ಕೇಂದ್ರ ಸಾಹಿತ್ಯ ಆಕಾಡೆಮಿಯ ಬಸವರಾಜ ಕಲ್ಗುಡಿ, ಕ್ರಿಯಾ ಮಾಧ್ಯಮದ ಎನ್ ಕೆ ವಸಂತರಾಜ್ ಅವರು ಉಪಸ್ಥಿತರಿದ್ದರು

ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡುವುದು ಅನಿವಾರ್ಯ : ಎನ್.ಸೋಮಶೇಖರ್

0

ತುರುವೇಕೆರೆ: ಮಕ್ಕಳ ಭವಿಷ್ಯ ನಾಲ್ಕು ತರಗತಿ ಗೋಡೆಗಳ ಮಧ್ಯೆ ನಿರ್ಮಾಣವಾಗುತ್ತಿದ್ದು ಶಿಕ್ಷಕರ ಪಾತ್ರ ಶ್ಲಾಘನೀಯವಾದದು ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್ ಅಭಿಪ್ರಾಯಪಟ್ಟರು.

ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಪ್ರಿಯಾ ಪ್ರೌಢ ಶಾಲೆಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು

ಪೋಷಕರು ತಮ್ಮ ಮಕ್ಕಳಿಗೆ ಹೆಚ್ಚು ಒತ್ತಡವನ್ನು ಹೇರದೆ ಮಕ್ಕಳ ಆಸಕ್ತಿ ಮತ್ತು ಅವರ ಸಾಮರ್ಥಯ್ಯವನ್ನು ಆಧರಿಸಿದ ಶಿಕ್ಷಣ ಕೊಡಿಸುವುದು ಸೂಕ್ತ. ಬಹಳ ಮುಖ್ಯವಾಗಿ ಶಿಕ್ಷಣದ ಜೊತೆಗೆ ಕೌಟುಂಬಿಕ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳಂತ ಸಂಸ್ಕಾರಗಳನ್ನು ಕಲಿಸುವುದು ಪೋಷಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ.

ಶಿಕ್ಷಕರು ಮಕ್ಕಳಿಗೆ ಪಠ್ಯ ವಿಷಯದ ಜೊತೆಗೆ ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆಗಳಂತಹ ಪಠ್ಯೇತರ ಚಟುವಟಿಕೆಗಳ ಕಲಿಕೆಗಳ ಬಗ್ಗೆಯೂ ಮಕ್ಕಳಲ್ಲಿ ಅಭಿರುಚಿ ಬೆಳೆಸಿದಾಗ ಅವರಲ್ಲಿ ಸಮಗ್ರ ಕಲಿಕೆಯಾಗುತ್ತದೆ. ಇದುವೇ ಶಿಕ್ಷಣದ ಮೂಲಭೂತ ಆಶಯವೂ ಕೂಡ ಆಗಿದೆ. ನಾವು ಕಲಿತ ವಿದ್ಯೆ ನಮ್ಮ ಹೊಟ್ಟೆಯನ್ನಷ್ಟೇ ತುಂಬಿಸಿದರೆ ಸಾಲದು ಅಸಹಾಯಕರ, ನೊಂದವರ, ಬಡವರ ಕಷ್ಟಕ್ಕೂ ಮಿಡಿಯುವ ಹೃದಯವನ್ನು ಬೆಳೆಸಿಕೊಳ್ಳಿ ಆಗ ಮಾತ್ರ ತಾವು ಕಲಿತ ವಿದ್ಯೆಗೆ ಸಾರ್ಥಕತೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇದೇ ವೇಳೆ ಸಾಧಕರಾದ ಬೆಂಗಳೂರಿನ ಇಂಡಿಯಾ ನಾಲೆಡ್ಜ್ ಡೆವಲೆಫ್ ಮೆಂಟ್ ಟ್ರಸ್ಟ್ ನ ಛೇರ್ಮನ್ ಡಾ.ತಲಕಾಡು ಚಿಕ್ಕರಂಗೇಗೌಡ ಹಾಗು ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಉತ್ತಮ ಶಿಕ್ಷಕರನ್ನು ಅಭಿನಂಧಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರಾದ ಎಂ.ಎನ್.ಚಂದ್ರೇಗೌಡ, ಪ್ರಧಾನ ಕಾರ್ಯದರ್ಶಿ ಬಿ.ಎನ್.ಪುಷ್ಪಲತಾ, ಸಹಕಾರ್ಯದರ್ಶಿ ಚೇತನ್ ಸಿ.ಗೌಡ, ಮಿಮಿಕ್ರೀಂ ನಟ ತುರುವೇಕೆರೆ ಸಾಗರ್, ಕಲಾವಿದ ರಾಘವೇದ್ರ, ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.

ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿ ಆಗುವುದನ್ನು ತಪ್ಪಿಸಲು ಕಾಂಗ್ರೆಸ್ ನಲ್ಲಿ ಪಿತೂರಿ

ತುರುವೇಕೆರೆ: ಡಿ.ಕೆ.ಶಿವಕುಮಾರ್ ಅವರು ಮುಖ್ಯ ಮಂತ್ರಿ ಆಗುವುದನ್ನು ತಪ್ಪಿಸಲು ಕಾಂಗ್ರೆಸ್ ನ ಕೆಲ ಸಚಿವರು ಹಠಕ್ಕೆ ಬಿದ್ದಿರುವುದು ಒಕ್ಕಲಿಗ ಸಮುದಾಯದ ನಾಯಕರನ್ನು ಮೂಲೆ ಗುಂಪು ಮಾಡುವ ಹುನ್ನಾರವಾಗಿದ್ದು; ಇದು ಕೆ್ಟ್ಟ ರಾಜಕೀಯಕ್ಕೆ ಮುನ್ನುಡಿಯಾಗಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವಿಷಾಧ ವ್ಯಕ್ತಪಡಿಸಿದರು.

ಪಟ್ಟಣದ ಎಸ್.ಎ.ಸಿ ಮಯೂರ ವಿದ್ಯಾಲಯದ ಶಾಲಾ ಆವರಣಲ್ಲಿ ನೇಗಿಲ ಯೋಗಿ ತಾಲ್ಲೂಕು ಘಟಕ ಶಾಖೆ ಉದ್ಘಾಟನೆ ಹಾಗು ಸಾಧಕರಿಗೆ ಅಭಿನಂಧನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.

ಈ ಕ್ಷೇತ್ರದ ಒಕ್ಕಲಿಗ ಸಮುದಾಯದವರು ಸ್ವಾಭಿಮಾನಿಗಳು ಹಾಗಾಗಿ ನನ್ನನ್ನು ನಾಲ್ಕು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆ ಸದಾ ಬೆಂಬಲವಾಗಿರುವೆ. ಒಂದೊಮ್ಮೆ ನಮ್ಮ ಸಮುದಾಯಕ್ಕೆ ಅನ್ಯಾಯವಾದಲ್ಲಿ ಎಲ್ಲ ನಾಯಕರೂ ಪಕ್ಷಬೇಧ ಮರೆತು ಸಂಘಟಿತರಾಗಿ ಹೋರಾಟ ಮಾಡೋಣ ಎಂದು ಕರೆಕೊಟ್ಟರು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಸರ್ಕಾರಿ ಉದ್ಯೋಗ ಸಿಗಲಿಲ್ಲವೆಂದರೆ ಬದುಕೇ ಇಲ್ಲ ಎನ್ನುವ ಮಟ್ಟಿಗೆ ಸಮಾಜ ಬಂದು ನಿಂತಿದೆ. ಸಮುದಾಯ ಯುವಕರು ಉದ್ಯಮಶೀಲರಾಗಿ ನೂರಾರು ಜನರಿಗೆ ಉದ್ಯೋಗ ಕೊಡುವಂತೆ ಬೆಳೆಯ ಬೇಕು.

ಸಮುದಾಯದ ರೈತರು ತಮ್ಮ ಮಕ್ಕಳಿಗೆ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಿ ಸಾಂಪ್ರದಾಯಿಕ ಕೃಷಿಗಿಂತ ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಂಡು ಉತ್ಪಾದನಾ ಕ್ಷೇತ್ರವನ್ನು ಹೆಚ್ಚಿಸಿಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗಿ. ಶಿಕ್ಷಣ ವಲಯದಲ್ಲಿ ಪೈಪೋಟಿ ಇರುವುದರಿಂದ ತಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿ. ಒಕ್ಕಲಿಗದ ಸಮುದಾಯದ ಸಂಘ ಸಂಸ್ಥೆಗಳ ಸೇವೆ ಒಂದೇ ಜಾತಿಗೆ ಸೀಮಿತಗೊಳ್ಳದೆ ಎಲ್ಲ ಸಮುದಾಯಗಳ ಏಳಿಗೆಗೂ ಶ್ರಮಿಸುವ ಮೂಲಕ ಈ ಸಮುದಾಯದ ಜಾತ್ಯಾತೀತತೆಯ ಮನೋಭಾವನೆಯನ್ನು ಮೆರೆಯೋಣ ಎಂದರು.

ದೊಡ್ಡಬಳ್ಳಾಪುರದ ಹಿರಿಯ ಸಾಹಿತಿ ಎಂ.ಬಿ.ಚಂದ್ರಶೇಖರಯ್ಯ ಮಾತನಾಡಿ , ದೈಹಿಕ ಮತ್ತು ಬೌದ್ಧಿಕ ಶ್ರಮ ಸಂಸ್ಕೃತಿಯ ಪ್ರತೀಕವಾಗಿರುವ ನೇಗಿಲ ಯೋಗಿಯು ಇಂದು ಕೌಟುಂಬಿಕ, ಔದ್ಯೋಗಿಕ ಸೇರಿದಂತೆ ಹಲವು ಬಿಕ್ಕಟ್ಟಿಗಳನ್ನು ಎದುರಿಸುತ್ತಿದ್ದಾನೆ. ಎಲ್ಲ ವರ್ಗದ ದುಡಿಮೆಗಾರರ ಸ್ಥಿತಿ ಇಂದು ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಸಿಕ್ಕಿ ನರಳುತ್ತಿದೆ. ರೈತ ತನ್ನ ವೃತ್ತಿ ಆಯಾಮಗಳಲ್ಲಿ ಪರಿವರ್ತನೆಗಳನ್ನು ಕಂಡುಕೊಳ್ಳದಿದ್ದರೆ ಗ್ರಾಮೀಣ ಕೃಷಿ ಸಂಸ್ಕೃತಿಯ ಅಸ್ಮಿತೆ ಕಣ್ಮರೆಯಾಗಲಿದೆ. ಒಕ್ಕಲಿಗ ಸಮುದಾಯದವರು ಕೃಷಿಯ ಜೊತೆ ಜೊತೆಯಲ್ಲೇ ಸಣ್ಣ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿ ತಮ್ಮ ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಪ್ರೊ.ಪುಟ್ಟರಂಗಪ್ಪ, ವಿಜಯಲಕ್ಷ್ಮಿ ವಿಶ್ವೇಶ್ವರಯ್ಯ, ಸೇರಿದಂತೆ ಹಲವು ಸಾಧಕರನ್ನು ಅಭಿನಂಧಿಸಿಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ನೇಗಿಲ ಯೋಗಿ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಆರ್.ರಂಗನಾಥ್, ರೇಷ್ಮೆ ಇಲಾಖೆಯ ಆಯುಕ್ತರಾದ ಎಂ.ಬಿ.ರಾಜೇಶ್ ಗೌಡ, ಮೈಸೂರು ನೇಗಿಲ ಯೋಗಿ ಸೇವಾ ಸಮಾಜ ಅಧ್ಯಕ್ಷ ಡಿ.ರವಿಕುಮಾರ್, ರಾಜೇಂದ್ರ ಪ್ರಸಾದ್, ಸಂಘದ ಗೌರವಾಧ್ಯಕ್ಷ ಡಾ.ನವೀನ್, ಗೌರವ ಸಲಹೆಗಾರ ಪ್ರೊ.ಪುಟ್ಟರಂಗಪ್ಪ, ಸಂಚಾಲಕರಾದ ಡಾ.ಬಿ.ಚೌದ್ರಿನಾಗೇಶ್, ಪ್ರಧಾನ ಕಾರ್ಯದರ್ಶಿ ಎಚ್.ಆರ್.ತುಕಾರಾಮ್, ಖಜಾಂಚಿ ವೇಣುಗೋಪಾಲ್ ಮತ್ತಿತರರು ಇದ್ದರು.

ರಾಜಕೀಯ ಬಲೆಗೆ ಅಶ್ಲೀಲ ವಿಡಿಯೋ ಕಾಲ್?

0

ತುಮಕೂರು: ರಾಜಕೀಯವಾಗಿ ಬೆಳೆಯುವ ಮುಖಂಡರನ್ನು, ವಿರೋಧಿ ಬಣದಲ್ಲಿರುವರನ್ನು ಹಣೆಯಲು ಅಶ್ಲೀಲ ವಿಡಿಯೋ ಕಾಲ್ ಬಳಕೆ ಮಾಡಿಕೊಳ್ಳಲಾಗುತ್ತಿದೆಯೇ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.
ಸಾಮಾಜಿಕ ಜಾಲತಾಣಗಳ ಈ ಕಾಲಘಟ್ಟದಲ್ಲಿ ಸ್ವಲ್ಪ ಯಾಮಾರಿದರೂ ಸಾಕು ಇಂಥ ಬಲೆಗಳಿಗೆ ಸಿಕ್ಕಿಸುವುದು ಸುಲಭವಾಗಿದೆ. ಇದನ್ನು ರಾಜಕೀಯಕ್ಕೂ ಬಳಕೆ ಮಾಡಿಕೊಂಡರೆ ಅದರಂಥ ಹೀನಾಯ ಸ್ಥಿತಿ ಮತ್ತೊಂದು ಇರಲಾರದು.
ಹನಿ ಟ್ರ್ಯಾಪ್ ಹಳೆಯ ವಿಷಯ. ಅಶ್ಲೀಲ, ನಗ್ನ ವಿಡಿಯೋ ಕಾಲ್ ಮಾಡಿದಾದ ಅದನ್ನು ಒಂದೆರಡು ಸೆಕೆಂಡ್ ಗಳ ಕಾಲ ರೆಕಾಡ್ರ್ ಮಾಡಿಕೊಂಡರೂ ಸಾಕು, ಸಿಕ್ಕವನನ್ನು ಹೇಗೆ ಬೇಕಾದರೂ ಸಾಮಾಜಿಕವಾಗಿ ಮರ್ಯಾದೆ ಕಳೆದು ಆತನನ್ನು ಮುಖ್ಯವಾಹಿನಿಯಿಂದ ಹಿಂದೆ ಸರಿಸಲು.
ತುಮಕೂರಿನ ಭೈರವೇಶ್ವರ ಕೋ ಆಫರೇಟಿವ್ ಬ್ಯಾಂಕ್ ನ ಚುನಾವಣೆ ಹಿನ್ನೆಲೆಯಲ್ಲಿ ಇಂಥದೊಂದು ಚರ್ಚೆ ಜೋರಾಗಿ ವಾಟ್ಸಾಪ್ ಗ್ರೂಪ್ ಗಳಲ್ಲಿ ನಡೆದಿದೆ. ಆದರೆ ಇಂಥ ಬೆಳವಣಿಗೆಗಳು ಯಾವುದೇ ಸಮುದಾಯಕ್ಕೂ ಶೋಭೆ ತರುವಂಥವಲ್ಲ.
ಒಕ್ಕಲಿಗ ಸಮುದಾಯವರ ಹಿಡಿತದಲ್ಲಿರುವ ಈ ಬ್ಯಾಂಕ್ ನ ಚುನಾವಣೆಗಳು ಇತ್ತೀಚಿನವರೆಗೂ ಅಂಥ ಪ್ರಾಮುಖ್ಯತೆ ಗಳಿಸಿರಲಿಲ್ಲ. ಬ್ಯಾಂಕ್ ಬೆಳೆದಂತೆ ಈ ಚುನಾವಣೆ ರಂಗು ಪಡೆದುಕೊಂಡಿದೆ. ಜೋರಾಗಿ ನಡೆಯುತ್ತಿದೆ. ಒಕ್ಕಲಿಗರಲ್ಲೇ ಮೂರು-ನಾಲ್ಕು ಬಣಗಳು, ಒಳಸುಳಿಗಳು, ರಾಜಕೀಯ ಕೆಸೆರೆರಚಾಟ, ಪಾಟರ್ಿಗಳು ಇಂಥವೆಲ್ಲ ಈ ಚುನಾವಣೆಗೂ ಕಾಲಿಟ್ಟಿದೆ.

ಹೀಗಾಗಿಯೇ ವಿರೋಧಿ ಬಣದವರನ್ನು ಹಣೆಯಲು ಅಶ್ಲೀಲ ವಿಡಿಯೋ ಚಾಟ್ ನ ಬಳಕೆಗೆ ಯತ್ನಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಲು ಕಾರಣವಾಗಿದೆ.
ಬಿಜೆಪಿ ಸಕ್ರಿಯ ಮುಖಂಡರೂ ಆಗಿರುವ, ಹಿರಿಯ ವಕೀಲರಾದ ರವಿ ಗೌಡ ಅವರಿಗೆ ಎರಡು-ಮೂರು ಸಲ ವಿಡಿಯೋ ಕರೆ ಮೂಲಕ ಬಲೆಗೆ ಕೆಡವಿಕೊಳ್ಳುವ ಪ್ರಯತ್ನಕ್ಕೆ ಈ ಆರೋಪಗಳು ಇಂಬು ನೀಡಿದಂತಿವೆ.
‘ನಾನು ಚುನಾವಣೆಯಲ್ಲಿ ಸಕ್ರಿಯವಾಗಿರುವ ಕಾರಣದಿಂದಲೇ ಅಶ್ಲೀಲ ವಿಡಿಯೊ ಕರೆ ಮೂಲಕ ನನ್ನನ್ನು ಹಣೆಯಲು ಯತ್ನಿಸಿದ್ದಾರೆ. ಆದರೆ ಅದೃಷ್ಟ. ಆ ಸಂದರ್ಭ ನನ್ನ ಮೊಬೈಲ್ ಬೇರೆಯವರು ಬಳಕೆ ಮಾಡಿದ್ದರು. ಇಲ್ಲದಿದ್ದರೆ ನನ್ನನ್ನು ಸಾಮಾಜಿಕವಾಗಿ ತೇಜೋವಧೆ ಮಾಡಿಬಿಡುತ್ತಿದ್ದರು’ ಎಂದು ರವಿಗೌಡ ಅವರು ಪಬ್ಲಿಕ್ ಸ್ಟೋರಿಯೊಂದಿಗೆ ಮಾತನಾಡಿ ನೇರ ಆರೋಪ ಮಾಡಿದರು.
‘ಈ ಥರದ್ದು ಯಾರೇ ಮಾಡಿದರೂ ತಪ್ಪು, ರಾಜಕೀಯವಾಗಿ ಇದನ್ನು ಬಳಸಲೇಬಾರದು. ಆದರೆ ಈ ಥರದ್ದು ಸೈಬರ್ ಕ್ರೈಂ, ಹಣ ಕೀಳಲು ಸಹ ಮಾಡುತ್ತಿದ್ದಾರೆ. ರಾಜಕೀಯವಾಗಿ ಇದೆಯೋ, ಇಲ್ಲವೋ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಒಟ್ಟಾರೆ ಇದೊಂದು ದುರುಪಯೋಗ. ಒಟ್ಟಾರೆ ಇದೊಂದು ಜಾಲ ಇದೆ. ಸಾಮಾನ್ಯ ಜನ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಇದನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು. ರಾಜಕೀಯ ಕಾರಣದಿಂದಲೂ ಮಾಡಿರಬಹುದೇನೋ? ಒಟ್ಟಾರೆ ತನಿಖೆ ಆಗಬೇಕು’ ಎಂದು ಬೈರವೇಶ್ವರ ಬ್ಯಾಂಕ್ ಚುನಾವಣೆಯಲ್ಲಿ ವೆಂಕಟೇಶ್ ಬಾಬು ಅವರ ಬಣದಲ್ಲಿ ಗುರುತಿಸಿಕೊಂಡಿರುವ ಬೆಳ್ಳಿ ಲೋಕೇಶ್ ಅವರು ತಿಳಿಸಿದರು.
ಯಾರೇ ಆಗಲಿ, ರಾಜಕೀಯವಾಗಿ ನೇರವಾಗಿ ಎದುರಿಸಬೇಕೇ ಹೊರತು ಇಂಥ ಅಡ್ಡ ಮಾರ್ಗ ಹಿಡಿಯಬಾರದು. ಈ ಸಂಬಂಧ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ ಎಂದು ವಿವರ ಬಿಚ್ಚಿಟ್ಟರು.
ಜಿಲ್ಲಾ ಒಕ್ಕಲಿಗರ ಸಂಘ ಹಾದಿತಪ್ಪಿದಂತಿದೆ. ಅದಕ್ಕೆ ಚುನಾವಣೆ ನಡೆಸಲು, ಸರಿದಾರಿಗೆ ತರಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇಂಥ ಬಿಕ್ಕಟ್ಟಿನಲ್ಲಿ ಬೈರವೇಶ್ವರ ಬ್ಯಾಂಕ್, ಒಕ್ಕಲಿಗರ ಮುಖಂಡರ ಪ್ರಾಬಲ್ಯ ಮೆರೆಯಲು ವೇದಿಕೆಯಂಥಾಗುತ್ತಿದೆ.ಇದೇ ಕಾರಣಕ್ಕಾಗಿ ಈ ಬ್ಯಾಂಕ್ ನ ಚುನಾವಣೆ ಈ ಸಮುದಾಯದಲ್ಲಿ ಪ್ರಾಮುಖ್ಯತೆ ಗಳಿಸತೊಡಗಿದೆ.
ವೆಂಕಟೇಶ್ ಬಾಬು ಅವರ ಬಣದಲ್ಲಿ ರಾಧಾ ದೇವರಾಜ್, ಆನಂದ್, ಸುಜಾತಾ ನಂಜೇಗೌಡ ಗುರುತಿಸಿಕೊಂಡಿದ್ದಾರೆ.
ಹಿರಿಯ ವಕೀಲರಾದ ಚಿಕ್ಕರಂಗಣ್ಣ ಅವರ ಬಣದಲ್ಲಿ ಕೈದಾಳ ಸತ್ಯ, ಸ್ವಾಮಿ, ರಂಗಾಮಣಿ ಇತರರು ಗುರುತಿಸಿಕೊಂಡಿದ್ದಾರೆ.

ಶಾಸಕ ಶ್ರೀನಿವಾಸ್ ಅವರಿಂದ ರಾಜೀ?

ಶಾಸಕರೂ ಆಗಿರುವ ರಾಜ್ಯ ಸಾರಿಗೆ ನಿಗಮಗಳ ಅಧ್ಯಕ್ಷರಾದ ಎಸ್.ಆರ್.ಶ್ರೀನಿವಾಸ್ ಅವರು ಎರಡೂ ಬಣಗಳ ನಡುವೆ ರಾಜೀಸೂತ್ರ ಮಾಡಿ, ಚುನಾವಣೆ ನಡೆಯದಂತೆ ತಡೆಯಲು ಸೋಮವಾರ (ಇಂದು) ಸಭೆ ಕರೆದಿದ್ದಾರೆ.
ಚುನಾವಣೆ ನಡೆದರೆ ಸಮುದಾಯದ ನಡುವೆ ಬಿರುಕು ಮೂಡಲಿದೆ. ಎಲ್ಲರೂ ಸೇರಿ ಒಂದಾಗಿ ಬ್ಯಾಂಕ್ ಅನ್ನು ಇನ್ನೂ ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಎರಡು ಬಣದವರ ಸಭೆ ಕರೆದಿದ್ದಾರೆ. ಶಾಸಕ ಶ್ರೀನಿವಾಸ್ ಅವರ ಮಾತಿಗೆ ಒಪ್ಪಿಗೆ ಸೂಚಿಸಿದರೆ ಚುನಾವಣೆ ನಡೆಯುವುದಿಲ್ಲ.

ಜನರ ಪ್ರಶ್ನೆಗಳಿಗೆ ಉತ್ತರ ನೀಡುವ ಪಿಟ್ಕಾಯಣ

ಅಯ್ಯೋ ಅವನಿಗಿನ್ನೂ ಚಿಕ್ಕ ವಯಸ್ಸು, ರಾತ್ರಿ ಮಲಗಿದ್ದಲ್ಲೇ ಸತ್ತೋದಗಿದ್ನಂತೆ!, ಅಯ್ಯೋ, ಪ್ರೈವೆಟ್ ನನಗೇನು ಲಾಭ ಅಲ್ವಾ? ನಮ್ಮ ಕೊಳವೆಬಾವಿ ಮೋಟರ್ ಗೆ ಸ್ಮಾರ್ಟ್ ವಿದ್ಯುತ್ ಮೀಟರ್ ಹಾಕಲಿಕ್ಕೂ, ಅದಾನಿಗೋ, ಅಂಬಾನಿಗೂ, ಟಾಟಾಗೋ ಯಾರೊ ಕಂಪನಿಯನವರಿಗೇನು ಲಾಭ? ಅಯ್ಯೋ, ಇದೇನು ಈ ಮಾತ್ರೆ ಕೆಲ್ಸನೇ ಮಾಡಲ್ಲ?, ಬಿಡ್ಲೇ ಕೊಟ್ಟವರು ಕೋಡಂಗಿ, ಈಸ್ಕೋಂಡೋನು ಈರಭದ್ರ!
ಹಳ್ಳಿಕಟ್ಟೆಯ ಮೇಲೆ ಅಥವಾ ಸಿಟಿಯೊಳಗಿನ ಉಸಿರುಕಟ್ಟಿಸುವ ಮನೆಯೊಳಗೆ ಹೀಗೇ ಮಾತನಾಡಿಕೊಳ್ಳುವ, ಅಯ್ಯೋ ನಮ್ಮ ದೇಶ ಶ್ರೀಮಂತ ದೇಶ ಆಗೋದ್ಯಾವಾಗಾ? ದಿಲ್ಲಿಯಲ್ಲಿ ಬಿಸಿಲು ಹೆಚ್ಚಾದರೆ ನಮ್ಮೂರಲ್ಲಿ ಏಕೆ ಸೆಖೆ? ಇಂಥ ಪ್ರಶ್ನೆಗಳಿಗೆ ಸರಳ ಉತ್ತರ ಹೇಳಬೇಕೆನಿಸಿದರೆ ಅವರ ಕೈಗೆ ಪಿಟ್ಕಾಯಣ ಪುಸ್ತಕ ಕೊಟ್ಟರೆ ಸಾಕು.

ದೇಶಗಳನ್ನು ಸುಭದ್ರವಾಗಿ ಕಟ್ಟಬೇಕು. ನಮ್ಮ ಮುಂದಿನ ಮಕ್ಕಳು, ಮರಿಮಕ್ಕಳಾದರೂ ಸುಖವಾಗಿ (ಒಳ್ಳೆಯ ಭದ್ರತೆಯ ಉದ್ಯೋಗ, ಉತ್ತಮ ಮನೆ, ಖಚರ್ೆ ಇಲ್ಲದ ಉತ್ತಮ ಸಕರ್ಾರಿ ಆಸ್ಪತ್ರೆ, ಶಿಕ್ಷಣ, ಒಳ್ಳೆಯ ಪರಿಸರ) ಬದುಕಬೇಕೆಂದರೆ ಇಂಥ ಪಿಟ್ಕಾಯಣ ಪುಸ್ತಕಗಳು ಮನ, ಮನೆ ತಲುಪಬೇಕು. ಈ ಮೂಲಕ ಜನಸಾಮಾನ್ಯರಿಗೆ ನಮ್ಮ ಆಡಳಿತದ ನೀತಿಗಳು ಹೇಗೆ ನಮ್ಮನ್ನು ಕತ್ತು ಸೀಳುತ್ತಿವೆ, ರಾಜಕಾರಣಿಗಳು, ಮಧ್ಯವರ್ತಿಗಳು, ಕೆಲವೇ ಮಾಧ್ಯಮ ಸಂಸ್ಥೆಗಳು, ಕೆಲವೇ ಕಾರ್ಪೋರೇಟ್ ಕಂಪನಿಗಳು, ವಿದೇಶಿ ಸಖ್ಯದ ಕಂಪೆನಿಗಳು ಎಷ್ಟೆಷ್ಟು ಬೇಗ ಶ್ರೀಮಂತವಾಗುತ್ತವೆ ಎಂಬುದರ ರಹಸ್ಯ ತಿಳಿಸಲು ಯತ್ನಿಸುತ್ತವೆ ಇಲ್ಲಿನ ಲೇಖನಗಳು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಆಡಳಿತದ ನೀತಿಗಳನ್ನು ಪ್ರಶ್ನೆ ಮಾಡುವುದು ಎಷ್ಟು ಮುಖ್ಯ ಎಂಬುದು ಅರಿವಾಗಲಿದೆ. ಪಿಟ್ಕಾಯಣ ಪುಸ್ತಕ ಓದುತ್ತಿದಂತೆ ಇಂಥ ಪುಸ್ತಕಗಳ್ಯಾಕೆ ವಿಶ್ವವಿದ್ಯಾನಿಲಯ, ಕಾಲೇಜುಗಳಿಗೆ ಪಠ್ಯವಾಗಬಾರದು ಎನಿಸಿದರೆ ಅದೇನು ಭಾವುಕ ಎನಿಸಲಾರದು.
ಹಲವು ಮಿತಿಗಳ ನಡುವೆ, ವಾರ್ತಾಭಾರತಿ ಪತ್ರಿಕೆಗೆ ಬರೆದಿರುವ ಅಂಕಣ ಬರಹಗಳ ಒಟ್ಟು ಸಂಕಲನವೇ ಈ ಪಿಟ್ಕಾಯಣ ಪುಸ್ತಕ. ಇಲ್ಲಿರುವ ಎಲ್ಲ ಅಂಕಣಗಳು ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನೆ ಮಾಡುತ್ತವೆ. ಕೆಲವು ಬರಹಗಳು ಅಂಕಿ ಅಂಶಗಳನ್ನು ಮುಂದಿಡುತ್ತವೆ. ಕೆಲವು ಬರಹಗಳು ಅಚನಾಕಾಗಿ ಕೊನೆಗೊಂಡಂತಿವೆ. ನಾಡಿನ ಹೆಸರಾಂತ ಪ್ರಕಾಶನ ಸಂಸ್ಥೆಯಾದ ಬಹುರೂಪಿ ಈ ಪುಸ್ತಕವನ್ನು ಪ್ರಕಟಿಸಿದೆ.
ಮೊದಲೆಲ್ಲ ಸ್ವಾತಂತ್ರ್ಯ, ಸ್ವಾತಂತ್ರ್ಯ, ಯಾರಿಗೆ ಬಂತು ಸ್ವಾತಂತ್ರ್ಯ, ಟಾಟಾ, ಬಿರ್ಲಾರ ಜೇಬಿಗೆ ಬಂತು ಸ್ವಾತಂತ್ರ್ಯ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆಯ ವೇಳೆ ಕೂಗುತ್ತಿದ್ದರು. ಈಗ ಇದು ಹೇಗೆ ಬದಲಾಗಿದೆ, ಟಾಟಾ, ಬಿರ್ಲಾರ ಬದಲಿಗೆ ಯಾರ ಹೆಸರುಗಳು ಮುನ್ನೆಲೆಗೆ ಬಂದಿವೆ ಎಂಬುದನ್ನು ಹೇಳಬೇಕಾಗಿಲ್ಲ.
ಪಕ್ಷ ರಾಜಕೀಯವನ್ನು ಬದಿಗಿಟ್ಟು ಎಲ್ಲರೂ ಓದುವಂಥ, ಪ್ರಶ್ನೆ ಮಾಡುವಂಥ ಪುಸ್ತಕ ಇದಾಗಿದೆ. ಕಥೆ, ಕಾದಂಬರಿಯಂತೆ ಕುತೂಹಲಕಾರಿಯಾಗಿ ಎಲ್ಲೂ ನಿಲ್ಲಿಸದಂತೆ ಓದಿಸಿಕೊಂಡು ಹೋಗುತ್ತವೆ ಇಲ್ಲಿನ ಬರಹಗಳು.
ಈ ಬರಹಗಳನ್ನು ಬರೆಯಲು ಲೇಖಕರು ಯಾವ, ಯಾವ ಮೂಲಗಳಿಂದ ಮಾಹಿತಿಗಳನ್ನು ತೆಗೆದಿದ್ದಾರೆ, ಸಂಗ್ರಹಿಸಿದ್ದಾರೆ ಎಂಬುದನ್ನು ಅವರ ಮಾತುಗಳಲ್ಲೇ ಓದಿಕೊಳ್ಳಬಹುದಾಗಿದೆ.
ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಈ ಪುಸ್ತಕದ ಲೇಖಕರು. ಪಿಟ್ಕಾಯಣ ಹೆಸರು ಹೇಗೆ ಬಂತು ಎಂಬುದು ಪುಸ್ತಕದ ಆರಂಭದಲ್ಲೇ ರಾಮಾಯಣ ಕಾಲಕ್ಕೆ ಸಂಬಂಧಿಸಿದಂತೆ ರಾಜ್ಯದ ಕರಾವಳಿ ಭಾಗದಲ್ಲಿ ಚಾಲ್ತಿಯಲ್ಲಿದ್ದ ಕಥೆಯೊಂದರ ಹಿನ್ನೆಲೆಯಲ್ಲಿ ಈ ಪದದ ಅರ್ಥವನ್ನು ಲೇಖಕರೇ ವಿವರಿಸಿದ್ದಾರೆ. ಹೀಗಾಗಿ ಪುಸ್ತಕ ಕೊಂಡು ಓದಿದಾಗಲೇ ಅದು ನಿಮಗೆ ಗೊತ್ತಾದರೆ ಚೆನ್ನ.
ಸಂವಾದಕ್ಕೆ ಎಳೆಯುವ ಶಕ್ತಿಯೂ ಈ ಪುಸ್ತಕಕ್ಕೆ ಇದೆ. ಅದನ್ನು ಯಾರೂ ಬೇಕಾದರೂ ಮಾಡಬಹುದು. ಸಂವಾದಗಳೇ ಪ್ರಜಾಪ್ರಭುತ್ವದ ಶಕ್ತಿ. ಪುಸ್ತಕ ಎಲ್ಲರ ಮನೆ ತಲುಪಲಿ. ಎಲ್ಲ ದಿಕ್ಕುಗಳಿಂದಲೂ ಈ ಪುಸ್ತಕಕ್ಕೆ ಪ್ರಶ್ನೆಗಳು, ಉತ್ತರಗಳು ಬಂದ್ದಲ್ಲಿ ನಾಡುಕಟ್ಟುವ ಪ್ರಕ್ರಿಯೆಗೆ ಒಂದಿಷ್ಟು ಶಕ್ತಿ ತುಂಬಿದಂತಾಗುತ್ತದೆ.
ಬಹುರೂಪಿಯ ಆನ್ ಲೈನ್ ಜಾಲತಾಣದ ಮೂಲಕವು ಪುಸ್ತಕವನ್ನು ತರಿಸಿಕೊಳ್ಳಬಹುದಾಗಿದೆ. ಪುಸ್ತಕದ ಬೆಲೆ ರೂ.300.

ಮೂರು ಸ್ಫೋಟ, 4 ಸಾವು ; ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ ; ಸಿಐಟಿಯು ಆಕ್ರೋಶ

0

ಸಂತ್ರಸ್ತರ ಪ್ರತಿ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ
ಹಾಗೂ
ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ; ಸಿಐಟಿಯು ಅಗ್ರಹ

ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಒಂದು ಸಾವಾಗಿ ಇನ್ನೂ ನಾಲ್ಕೈದು ದಿನಗಳಷ್ಟೇ ಆಗಿದೆ. ಕಾರ್ಮಿಕ-ಸಮುದಾಯದಲ್ಲಿ ಅದರ ದುಃಖ ಆರುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ.

ತುಮಕೂರು ನಗರದ ಹೊರವಲಯದಲ್ಲಿರುವ ಅಂತರಸನಹಳ್ಳಿ-ಕೈಗಾರಿಕಾ ಪ್ರದೇಶದಲ್ಲಿನ ‘ಪರಿಮಳ ಆಗ್ರೋ ಟೆಕ್’ ಕಾರ್ಖಾನೆಯಲ್ಲಿ ಬುಧವಾರ ಭೀಕರ ಸ್ಫೋಟ ಸಂಭವಿಸಿ, ಎರಡು ಸಾವು ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿರುವ ಮೂವರು ಕಾರ್ಮಿಕರ ಸ್ಥಿತಿ ಚಿಂತಾಜನಕ.

ಹಿಂದಿನ ದಿನವಷ್ಟೇ ಕೋಪ್ಪಳ ತಾಲ್ಲೂಕಿನ ಅಲ್ಲಾನಗರದ ಹೋಸಪೇಟೆ ಸ್ಟೀಲ್ ಕಾರ್ಖಾನೆ(ಕಾಮಿನಿ ಇಂಡಸ್ಟ್ರೀಸ್)’ನಲ್ಲಿ ಮಂಗಳವಾರ ಸಂಜೆ ಅನಿಲ ಸೋರಿಕೆಯಿಂದಾಗಿ ಮಾರುತಿ ಕೊರಗಲ್ (24 ವರ್ಷ) ಹೆಸರಿನ ಕಾರ್ಮಿಕರೊಬ್ಬರು ದುರ್ಮರಣಕ್ಕೀಡಾಗಿದ್ದರು. ಈ ಸ್ಫೋಟದಲ್ಲಿ ಇನ್ನೂ 7 ಜನ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದು ಮಾಸುವ ಮುನ್ನವೇ ತುಮಕೂರಿನ ಸ್ಫೋಟದ-ಘಟನೆ ರಾಜ್ಯದ ಕಾರ್ಖಾನೆ ಕಾರ್ಮಿಕರಲ್ಲಿ ಆತಂಕ ಮತ್ತು ಆಕ್ರೋಶ ಹುಟ್ಟಿಸಿದೆ.

ಕಾರ್ಖಾನೆ ಮಾಲೀಕರ ಹೊಣೆಗೇಡಿತನ ಹಾಗೂ ಅಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವ ಮರ್ಜಿಯಲ್ಲಿ ದುಡಿಯುತ್ತಿದ್ದ ಈ ನಾಲ್ಕೂ ಅಮೂಲ್ಯ ಜೀವಗಳು ತಮ್ಮದಲ್ಲದ ತಪ್ಪಿನಿಂದಾಗಿ ಇಹಲೋಕ ತ್ಯಜಿಸಿವೆ.

ಬಂಡವಾಳಶಾಹಿ ನಿರ್ಲಕ್ಷ್ಯ, ಸುರಕ್ಷತಾ ಉಡುಪು ಮತ್ತು ಸಲಕರಣೆಗಳ ಕೊರತೆ ಹಾಗೂ ಯಂತ್ರೋಪಕರಣಗಳ ಸಮರ್ಪಕ ದುರಸ್ತಿ ಮಾಡಿಸದ ಕಾರ್ಖಾನೆ ಆಡಳಿತ ಮಂಡಳಿಯವರ ಬೇಜವಾಬ್ದಾರಿತನಗಳು ಮೇಲ್ನೋಟಕ್ಕೆ ಇಲ್ಲಿ ಎದ್ದು ಕಾಣುತ್ತಿವೆ.

ಕಾರ್ಖಾನೆಗಳ ಯಂತ್ರೋಪಕರಣಗಳ ಸಮರ್ಪಕವಾದ ನಿರ್ವಹಣೆಯ ಕುರಿತು ಕಾಲಕಾಲಕ್ಕೆ ಪರಿಶೀಲನೆ ನಡೆಸಿ, ಅದರ ಸುರಕ್ಷತೆಯನ್ನು ಖಾತರಿಪಡಿಸಬೇಕಿದ್ದ
‘ಫ್ಯಾಕ್ಟರೀಸ್ ಮತ್ತು ಬಾಯ್ಲರ್ ಇಲಾಖೆ’ಯ ಬೇಜವಾಬ್ದಾರಿತನವೂ ಇಲ್ಲಿ ಪ್ರಮುಖ ದೋಷಿ. ತಮ್ಮ ಹೊಣೆಗಾರಿಕೆಗಳನ್ನು ಜವಾಬ್ದಾರಿಯುತವಾಗಿ ಅನುಷ್ಠಾನಗೊಳಿಸಬೇಕಿದ್ದ ಬಹುತೇಕರ ಬೇಜವಾಬ್ದಾರಿತನದಿಂದಾಗಿ ಈ ಸಾವುಗಳು ಸಂಭವಿಸಿವೆ ಎಂದು, ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಗಂಭೀರವಾಗಿ ಅರೋಪಿಸುತ್ತದೆ. ತಮ್ಮ ಹೊಣೆಗೇಡಿತನದಿಂದಾಗಿ ಇಂತಹ ಅವಘಡಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಐಟಿಯು ಆಗ್ರಹಿಸುತ್ತದೆ. ಮತ್ತು, ಘಟನೆಯಲ್ಲಿ ಮರಣ ಹೊಂದಿರುವ ಕಾರ್ಮಿಕರ ಅವಲಂಬಿತರಿಗೆ ಅಯಾ ಕಾರ್ಖಾನೆ ಮಾಲೀಕರಿಂದ ತಲಾ 50 ಲಕ್ಷ ಪರಿಹಾರವನ್ನು ಕೊಡಿಸುವಂತೆ ಸಿಐಟಿಯು ಒತ್ತಾಯಿಸುತ್ತದೆ. ಹಾಗೂ ಎಲ್ಲಾ ಗಾಯಾಳುಗಳಿಗೂ ಉಚಿತ ಚಿಕಿತ್ಸೆ ಕೊಡಿಸುವುದಲ್ಲದೆ, ಅವರಿಗೂ ತಲಾ 15 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ತೀವ್ರವಾಗಿ ಒತ್ತಾಯಿಸುತ್ತದೆ.

ಮೃತರ ಕುಟುಂಬದ ದುಃಖದಲ್ಲಿ ಸಿಐಟಿಯು ಸದಾ ಭಾಗಿಯಾಗಿರುತ್ತದೆ.

ತುಮಕೂರು ನಗರದ ಸ್ಪೋಟದಲ್ಲಿ ಮರಣ ಹೊಂದಿರುವ ಕಾರ್ಮಿಕರು ಬಿಹಾರ ಮೂಲದದವರು. ಸಂತೋಷ್(22 ವರ್ಷ) ಮತ್ತು ಚಂದನ್ ಶರ್ಮಾ(26 ವರ್ಷ). ದೂರದ ಬಿಹಾರದಲ್ಲಿರುವ ಅವರ ಕುಟುಂಬದ ಹೊಣೆಯನ್ನು ನಿರ್ವಹಿಸಿಬೇಕಾಗಿದ್ದ ಈಯಿಬ್ಬರು ಯುವಕರು ಇಷ್ಟು ಸಣ್ಣವಯಸ್ಸಿಗೆ ಮರಣ ಹೊಂದಿರುವುದು ವಿಷಾದಕರ.

ಬಿಹಾರ ಸೇರಿದಂತೆ ಉತ್ತರಭಾರತ ಮತ್ತು ಹಲವು ಈಶಾನ್ಯ ರಾಜ್ಯಗಳಿಂದ ಲಕ್ಷಗಟ್ಟಲೆ ಕಾರ್ಮಿಕರು ನಮ್ಮ ರಾಜ್ಯ ಮತ್ತು ಜಿಲ್ಲೆಯಲ್ಲಿ ವಿವಿಧ ಕೆಲಸಕಾರ್ಯಗಳಲ್ಲಿ ತೊಡಗಿದ್ದಾರೆ. ಹೀಗೆ ಹಿಂಡು-ಹಿಂಡಾಗಿ ಕಾರ್ಮಿಕರನ್ನು ಇಲ್ಲಿಗೆ ಕರೆತಂದು, ಯಾವುದೇ ಕಾರ್ಮಿಕ ಕಾಯ್ದೆ- ಕಾನೂನುಗಳ ಕನಿಷ್ಟ ರಕ್ಷಣೆ ಇಲ್ಲದಂತೆ ದುಡಿಸಿಕೊಳ್ಳಲಾಗುತ್ತಿದೆ. ಕಡೆಗೆ ಇವರ ಜೀವಗಳಿಗೂ ಬೆಲೆಯಿಲ್ಲದಂತೆ ಇವರನ್ನು ಸಾರಾಸಗಟು ಕಡೆಗಣಿಸಿ, ನಿತ್ಯ ಶೋಷಿಸುತ್ತಿರುವುದನ್ನು ಸಿಐಟಿಯು ಖಂಡಿಸುತ್ತದೆ. ಬಂಡವಾಳಗಾರರು ಕಾರ್ಮಿಕರ ಜೀವಗಳಿಗೆ ಕನಿಷ್ಟ ಕಿಮ್ಮತ್ತನ್ನೂ ಕೊಡದೆ ತಮ್ಮ ಲಾಭದ ಕಡೆಗಷ್ಟೇ ಗಮನ ಕೇಂದ್ರಿಕರಿಸಿದ್ದಾರೆ. ವಲಸೆ ಕಾರ್ಮಿಕರ ಪಾಲಿನ ಶೋಚನೀಯ ಸ್ಥಿತಿಯಿದು.

ಈ ನಾಲ್ಕೂ ಪ್ರಕರಣಗಳಲ್ಲಿಯೂ ಕ್ರಿಮಿನಲ್ ನಿರ್ಲಕ್ಷ್ಯ ತೋರಿರುವವರ ವಿರುದ್ದ ಸೂಕ್ತವಾದ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಸಿಐಟಿಯು ಅಗ್ರಹಿಸುತ್ತದೆ.

ಮುಖ್ಯವಾಗಿ, ಎಲ್ಲ ಗಾಯಾಳುಗಳಿಗೂ ಅತ್ಯುತ್ತಮವಾದ ಚಿಕಿತ್ಸೆಯನ್ನು ಸರ್ಕಾರ ಉಚಿತವಾಗಿ ಒದಗಿಸಿಕೊಡಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಕರ್ನಾಟಕದ ಸೈಯದ್ ಮುಜೀಬ್, ಎ. ಲೋಕೇಶ್, ಜಿ.ಕಮಲ ಹಾಗೂ ಅಧ್ಯಕ್ಷರು, ಜಿಲ್ಲಾ ಖಜಾಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಒತ್ತಾಯಿಸಿದ್ದಾರೆ.
__________________________________________________

*ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್*
ಜನಪರ ಚಳವಳಿ ಕೇಂದ್ರ, ಗಾಂಧಿನಗರ,
ವಿದ್ಯೋದಯ ಲಾ-ಕಾಲೇಜು ಹಿಂಭಾಗ, ತುಮಕೂರು. ಫೋ: 0816-2278960

ವರದಿ,
*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಹೆಣ್ಣುಮಕ್ಕಳಿಗೆ ಶಿಕ್ಷಣದ ಕಣ್ಣಾದ ಸಾವಿತ್ರ ಬಾಯಿಫುಲೆ

ತುರುವೇಕೆರೆ: ಹಲವು ಅಪಮಾನಗಳ ನಡುವೆ ನೊಂದವರ, ದಮನಿತ ಸಮುದಾಯಗಳ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಬಹುವಾಗಿ ಶ್ರಮಿಸಿದ ಸಾವಿತ್ರ ಬಾಯಿಫುಲೆಯವರ ಹೋರಾಟ ಸಮಕಾಲೀನ ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದು ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಎಚ್.ಕೆ.ಸವಿತಾರವರು ಅಭಿಪ್ರಾಯಪಟ್ಟರು.

ಪಟ್ಟಣದ ಕನ್ನಡ ಭವನದಲ್ಲಿ ತಾಲ್ಲೂಕು ಸಾವಿತ್ರ ಬಾಯಿಫುಲೆ ಶಿಕ್ಷಕಿಯರ ಸಂಘದಿಂದ ಸಾವಿತ್ರ ಬಾಯಿಫುಲೆ ಜನ್ಮದಿನದ ಅಂಗವಾಗಿ ತಾಲ್ಲೂಕಿನ ಉತ್ತಮ ಶಿಕ್ಷಕಿಯರಿಗೆ ಅಕ್ಷರದ್ವ ಪ್ರಶಸ್ತಿ ಪ್ರಧಾನ, ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಹಾಗು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತುರುವೇಕೆರೆಗೆ ಶಿಕ್ಷಣ ಇಲಾಖೆಯಿಂದ ಆಯ್ಕೆಯಾದವರಿಗೆ ಅಭಿನಂಧನಾ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಭಾಗವಹಿಸಿ ಮಾತನಾಡಿದರು.

ಸಾವಿತ್ರ ಬಾಯಿಫುಲೆಯವರು ಭಾರತೀಯ ಸಮಾಜದ ಸುಧಾರಕಿಯಾಗಿ ಮತ್ತು ಶಿಕ್ಷಣ ತಜ್ಞರಾಗಿ ದುಡಿದವರು. ಇದಕ್ಕೂ ಮೊದಲು ಜ್ಯೋತಿರಾವ್ ಪುಲೆಯವರು ತಮ್ಮ ಮಡದಿಗೆ ತಾವೇ ಶಿಕ್ಷಣಕೊಟ್ಟು ತದನಂತರ ಮಿಷನರಿ ಶಾಲೆಗೆ ಶಿಕ್ಷಕಿ ತರಭೇತಿಗೆ ಕಳುಹಿಸಿ ಶಿಕ್ಷಕಿಯಾಗುವಂತೆ ನೆರವಾಗಿದ್ದರು. ಪತಿ, ಪತ್ನಿಯರು ಬಡ, ಶೋಷಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಕಣ್ಣಾಗಿ 14 ಶಾಲೆಗಳನ್ನು ತೆರೆದು ಉಚಿತ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಮೌಢ್ಯ ಹಾಗು ತಮ್ಮ ಹಕ್ಕುಗಳನ್ನು ಪಡೆಯಲು ಪಶ್ನಿಸುವಂತೆ ಮಾಡಿದರು ಎಂದರು.

ಸಾವಿತ್ರ ಬಾಯಿಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ಎಂ.ಟಿ.ಭವ್ಯ ಸಂಪತ್ ಮಾತನಾಡಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕಿಯರ ಹಲವು ಸಮಸ್ಯೆಗಳ ಈಡೇರಿಕೆಗೆ ಧ್ವನಿಯಾಗಿ ನಿಂತು ಸಂಘವು ಹೋರಾಟ ಮಾಡುತ್ತಿದೆ. ಮಹಿಳೆಯರು ಹೆಚ್ಚು ಸಂಘಟಿತರಾಗಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುವಂತಾಗಬೇಕು ಹಾಗು ಹೆಚ್ಚಿನ ಸಂಖ್ಯೆಯಲ್ಲಿ ತಾಲ್ಲೂಕಿನ ಶಿಕ್ಷಕಿಯರು ಸಂಘದ ಸದಸ್ಯತ್ವ ಪಡೆದುಕೊಂಡು ಸಾವಿತ್ರ ಬಾಯಿಫುಲೆಯವರ ಆಶಯಗಳಿಗೆ ಅನುಗುಣವಾಗಿ ಸಂಘವನ್ನು ಮುನ್ನಡೆಸೋಣ ಎಂದು ಕಿವಿ ಮಾತು ಹೇಳಿದರು.

ಇದೇ ವೇಳೆ ನರ್ಸ್ ಶ್ವೇತ ಕೆ.ಎಸ್ ರವರು ಗರ್ಭಕೋಶ್ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು. ಅಕ್ಷರದ್ವ ಪ್ರಶಸ್ತಿಯನ್ನು ಶಿಕ್ಷಕಿಯರಾದ ಉಮಾ, ಸಾವಿತ್ರಮ್ಮ, ಹೇಮಾವತಿ, ಲಲಿತಮ್ಮಎಸ್, ಗಾಯಿತ್ರಿ, ಶಿವನಂಜಮ್ಮ, ರಮಾರವರಿಗೆ ಪ್ರಧಾನ ಮಾಡಲಾಯಿತು. ಇದೇ ವೇಳೆ ಷಣ್ಮುಕಪ್ಪ, ಲೋಕೇಶ್, ಪ್ರಶಾಂತ್ ಮತ್ತು ಯೋಗಾನಂದ್ ಹಾಗು ನಿವೃತ್ತ ಶಿಕ್ಷಕಿಯರನ್ನು ಅಭಿನಂಧಿಸಲಾಯಿತು.

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯ ವ್ಯವಸ್ಥಾಪಕರಾದ ಕೆ.ಕೃಷ್ಣಪ್ರಸಾದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಹನುಮಕ್ಕ, ಜಲಜಾಕ್ಷಿ, ಜಿಪಿಟಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಧರ್, ಪದಾಧಿಕಾರಿಗಳಾದ ಗೀತಾ, ವನಜಾಕ್ಷಿ, ನೇತ್ರಾ ನಿರೂಪಿಸಿ, ಸುಜಾತ ರಾಮಯ್ಯ ಪ್ರಾರ್ಥಿಸಿ, ಮಮತಾ ಲೇಪಾಕ್ಷ ಮೂರ್ತಿ ಸ್ವಾಗತಿಸಿ, ರಶ್ಮಿ ಶಶಿಕುಮಾರ್ ಪ್ರಾಸ್ತಾವಿಕ ನುಡಿ ನುಡಿದು, ಸರ್ವಮಂಗಳ ಮೋಹನ್ಬಾಬು ವಂದಿಸಿದರು, ಪದಾಧಿಕಾರಿಗಳಾದ ಗೀತಾ, ವನಜಾಕ್ಷಿ ಮತ್ತಿತರರಿದ್ದರು.

ತುಮಕೂರಿನ ಸಿದ್ದು ಆರ್‌.ಜಿ.ಹಳ್ಳಿಗೆ ‘ಬಿ.ಎಸ್‌. ವೆಂಕಟರಾಂ ಪ್ರಶಸ್ತಿ’

0

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ‘ಪ್ರಜಾವಾಣಿ’ ಹಿರಿಯ ವರದಿಗಾರ ಸಿದ್ದು ಆರ್‌.ಜಿ.ಹಳ್ಳಿ ಅವರಿಗೆ ‘ಅತ್ಯುತ್ತಮ ಸ್ಕೂಪ್‌ ವರದಿ’ಗೆ ಬಿ.ಎಸ್‌. ವೆಂಕಟರಾಂ ಪ್ರಶಸ್ತಿ ಲಭಿಸಿದೆ.

ತುಮಕೂರು ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಜ. 18 ಮತ್ತು 19ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಿದ್ದು ಅವರು ಮೂಲತಃ ತುಮಕೂರು ತಾಲ್ಲೂಕಿನ ರಾಮಗೊಂಡನಹಳ್ಳಿ ಗ್ರಾಮದವರು. ಆರಂಭದ ದಿನಗಳಲ್ಲಿ ತುಮಕೂರಿನ ‘ಪ್ರಜಾ ಪ್ರಗತಿ’ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿ, ನಂತರ ‘ಪ್ರಜಾವಾಣಿ’ಯಲ್ಲಿ ಕಳೆದ 15 ವರ್ಷಗಳಿಂದ ಮೈಸೂರು, ಹುಬ್ಬಳ್ಳಿ, ಹಾವೇರಿಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಮಂಡ್ಯ ಜಿಲ್ಲಾ ವರದಿಗಾರರಾಗಿದ್ದಾರೆ.

ಹಾವೇರಿ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ನಡೆದಿದ್ದ ‘ವಿದ್ಯಾಸಿರಿ’ ಸ್ಕಾಲರ್‌ಶಿಪ್‌ ಹಗರಣ ಕುರಿತ ಸರಣಿ ವರದಿಗೆ ಪತ್ರಕರ್ತರ ಸಂಘದಿಂದ ‘ಅತ್ಯುತ್ತಮ ತನಿಖಾ ವರದಿ’ಗೆ ಕೊಡುವ ಟಿ.ಕೆ. ಮಲಗೊಂಡ ರಾಜ್ಯ ಪ್ರಶಸ್ತಿಯೂ ಇವರಿಗೆ ದೊರೆತಿದೆ.

ಗಾಳಿಪಟ

0

ಡಾ// ರಜನಿ ಎಂ


ಸೂತ್ರ ಸರಿಯಾಗಿ
ಹಾಕಿದ್ದರೆ ..ಇಲ್ಲಾ ಗೋತ

ಮೇಲೆ ಹಾರಿ
ಸೂರ್ಯನ ಪಥ ಬದಲಿಸುವ
ನೋಡುವ ಹುನ್ನಾರ

ಅಲ್ಲೇ ಕೊಬ್ಬು ಹೆಚ್ಚಾಗಿ ತಿರುಗಿ ತಿರುಗಿ
ಆಟ ಆಡಿದರೆ
ಒಂದು ಸಾರಿ ದಾರ ಎಳೆದರೆ
ಮತ್ತೆ ಬಂತು ಒಳ್ಳೆ ಬುದ್ಧಿ .

ಒಮ್ಮೆಲೇ ದೊಡ್ಡ ಗೋತ
ಹೊಡೆದರೆ ..ಜೊತೆಗಾರರಿಗೆ
ಬಾಳ ಸಂತೋಷ

ಮೆಲ್ಲ ಮೆಲ್ಲಗೆ
ಸ್ವಲ್ಪ ಸ್ವಲ್ಪ ಎಳೆದು
ಮತ್ತೆ ದಾರಿಗೆ ತಂದರೆ ..ಆಹಾ

ಹಾರುವಾಗ ಸೂರ್ಯನ
ಬಿಸಿ
ಗಾಳಿಯ ತಂಪು
ನಿನಗೆ ಮಾತ್ರ

ದಾರ ಹಿಡಿದ ಕೈಗೆ
ಮಾತ್ರ ಗೊತ್ತು
ನಿನ್ನ ಹಾರಾಟ

ಪೂರ್ತಿ ಬಿಟ್ಟು
ಬಿಟ್ಟು
ಮತ್ತೆ ದಾರದ ಉಂಡೆ
ಹಿಡಿಯುವ ತಾಕತ್ತು ನನಗೆ ಮಾತ್ರ

ನಿನ್ನ ಬಿಗಿ ಅನುಭವಿಸಲು
ಎರಡು ನಿಮಿಷ
ಹಿಡಿಯಲು ಎರವಲು ಕೊಡುವ ಗತ್ತು ನನ್ನದು

ಗಾಳಿ ಮನೆ ಮೇಲೆ
ಹತ್ತಿದರೆ ಬೀಸುವುದಿಲ್ಲ
ಓಡಿ ಗಾಳಿಗೆ ಪಟ
ಬಿಡುವ ,ಬಾಲಂಗೋಚಿ
ಅಂಟಿಸುವ
ಗೆಳೆಯ ಬೇಕಲ್ಲ …

ರಾತ್ರಿ ಮಲಗಿದಾಗ
ಲೈಟ್ ಕಂಬಕ್ಕೆ
ಸಿಕ್ಕಿಕೊಂಡ ಗಾಳಿ ಪಟ
ಕನಸಲ್ಲಿ.