Sunday, February 22, 2026
Google search engine
Home Blog Page 323

ಪಾಸ್ ಇದ್ರೂ ಹತ್ತಂಗಿಲ್ಲ ಬಸ್ಸು

ತುಮಕೂರು:
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದ ಸಾರಿಗೆ ಸಂಸ್ಥೆ 10 ಲಕ್ಷಕ್ಕೂ ಅಧಿಕ ಹಣ ಪಡೆದು ತುಮಕೂರು ಮತ್ತು ಕೊರಟಗೆರೆ ಡಿಪೋದಿಂದ 2 ಸಾವಿರಕ್ಕೂ ಹೆಚ್ಚು ಸರಕಾರಿ ಬಸ್ಪಾಸ್ ವಿತರಣೆ ಮಾಡಿದೆ. ಪ್ರತಿನಿತ್ಯ 87 ಬಸ್ಸುಗಳ ಸಂಚಾರದ ವ್ಯವಸ್ಥೆ ಇದ್ದರೂ ಸಹ ವಿದ್ಯಾರ್ಥಿಗಳಿಗೆ ಪ್ರಯೋಜವಿಲ್ಲದಂತಾಗಿ ಮಧುಗಿರಿ, ಕೊರಟಗೆರೆಯಿಂದ ತುಮಕೂರಿಗೆ ಓಡಾಡುವ ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗಿ ಬಸ್ಸುಗಳಲ್ಲಿ ಜೀವ ಕೈಲಿಡಿದುಕೊಂಡು ಓಡಾಡುವಂತಾಗಿದೆ.
ಕೊರಟಗೆರೆ ಮತ್ತು ತುಮಕೂರು ಘಟಕದಿಂದ ವಿದ್ಯಾಥರ್ಿಗಳಿಗೆ ನೀಡಿರುವ ಬಸ್ ಪಾಸಿನ ಅಂಕಿ ಅಂಶದ ಪ್ರಕಾರ ಸರ್ಕಾರಿ ಬಸ್ಸಿನ ನಿರ್ವಹಣೆ ಇಲ್ಲದಾಗಿದೆ. ಪಾವಗಡ ಮತ್ತು ಮಧುಗಿರಿ ಘಟಕದಿಂದ ಹೊರಡುವ ಬಸ್ಸುಗಳು ಕೊರಟಗೆರೆ ನಿಲ್ದಾಣಕ್ಕೆ ಬಾರದೇ ನೇರವಾಗಿ ತುಮಕೂರು ನಗರಕ್ಕೆ ಸಂಚಾರ ನಡೆಸುತ್ತಿವೆ. ಪರಿಶೀಲನೆ ನಡೆಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಬಹುತೇಕ ಶಾಲಾ-ಕಾಲೇಜು ಪ್ರಾರಂಭ ಆಗೋದು ಬೆಳಿಗ್ಗೆ 9 ರಿಂದ 10 ಗಂಟೆಗೆ. ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಬರಲು ಬೆಳಿಗ್ಗೆ 7 ಗಂಟೆಯಿಂದ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಹೊರಡಬೇಕಿದೆ. ಈ ವೇಳೆಯಲ್ಲಿ ಸಾರಿಗೆ ಸಂಸ್ಥೆ ಬಸ್ಸಿನ ಅವಶ್ಯಕತೆ ವಿದ್ಯಾರ್ಥಿಗಳಿಗೆ ಹೆಚ್ಚಾಗಿದೆ. ಆದರೆ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಬರುವ 10 ಬಸ್ಸುಗಳಲ್ಲಿ 2ಸಾವಿರ ವಿದ್ಯಾಥರ್ಿಗಳು ಹೇಗೆ ತಾನೆ ಸಂಚಾರ ಮಾಡಬೇಕೆಂಬುದು ಸದ್ಯದ ಪ್ರಶ್ನೆಯಾಗಿದೆ. ಇತ್ತೀಚೆಗೆ ಖಾಸಗಿ ಬಸ್ ನಲ್ಲಿ ಹೆಚ್ಚು ಜನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವಾಗ ಕೊರಟಗೆರೆ ತಾಲ್ಲೂಕಿನ ಅಗ್ರಹಾರ ಬಳಿ ಅಪಘಾತಕ್ಕೀಡಾಗಿ ಸ್ಥಳದಲ್ಲೆ 5 ಜನ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸಾರಿಗೆ ಸಂಸ್ಥೆ ಬಸ್ ನಿಲ್ದಾಣಗಳಲ್ಲಿ ಮಾರ್ಗ, ನಿಗದಿತ ಸಮಯ ಇತ್ಯಾಧಿ ಸೂಚನ ಫಲಕಗಳನ್ನು ಅಳವಡಿಸಿಲ್ಲ. ಕೆಲವೊಮ್ಮೆ ಬಸ್ ನಿಲ್ದಾಣಕ್ಕೆ ಸಾರಿಗೆ ಬಸ್ಸುಗಳು ಬಾರದೇ ಹಾಗೇ ಹೋಗುತ್ತಿರುತ್ತವೆ. ಇಂತಹ ವೇಳೆ ಬಸ್ ನಿಲ್ದಾಣದಲ್ಲಿ ಕಾಯುವ ಪ್ರಯಾಣಿಕರು ತಮ್ಮ ಊರುಗಳು ತಲುಪಲು ಸಾಹಸ ಪಡಬೇಕಿದೆ.


ಸರ್ಕಾರಿ ಮತ್ತು ಖಾಸಗಿ ಬಸ್ಸಿನಲ್ಲಿ ಹಿರಿಯ ನಾಗರೀಕ, ಮಾಜಿ ಸೈನಿಕ, ಮಹಿಳೆ, ವಿಶೇಷ ಚೇತನರಿಗೆ ಪ್ರತ್ಯೇಕ ಸ್ಥಾನ ನಿಗದಿ ಮಾಡಲಾಗಿದೆ. ಆದೇಶಸಾರಿಗೆ ಕಚೇರಿಗೆ ಮಾತ್ರ ಸಿಮೀತವಾಗಿದೆ. ಸಾರಿಗೆ ಬಸ್ಸುಗಳ ಪರಿಶೀಲನೆ ನಡೆಸಬೇಕಾದ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿವರ್ಗ ತುತರ್ಾಗಿ ತುಮಕೂರು ಕಚೇರಿಯಿಂದ ಹೊರಗಡೆ ಬಂದು ಪರಿಶೀಲನೆ ನಡೆಸಬೇಕಾಗಿದೆ.
ಸಾರಿಗೆ ಬಸ್ ಸಂಚಾರದ ಕೊರತೆ ಇರುವ ಕಾರಣ ಶಾಲಾ-ಕಾಲೇಜು ವೇಳೆಯಲ್ಲಿ ನಿಯಮ ಉಲ್ಲಂಘಿಸಿ ಸಾಮರ್ಥ್ಯಕ್ಕೂ ಹೆಚ್ಚು ಜನರು ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಸಂಚರಿಸುತ್ತಿದ್ದಾರೆ. ಖಾಸಗಿ ಬಸ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ತುಂಬಿದರೆ ದಂಡ ವಿದಿಸಿ ಕಾನೂನು ರೀತ್ಯಾ ಕ್ರಮ ಜರುಗಿಸುವ ಪೊಲೀಸ್ ಹಾಗೂ ಆರ್ಟಿಓ ಇಲಾಖೆ ಸಾರಿಗೆ ಇಲಾಖೆ ಬಸ್ಸುಗಳು ಪ್ರತಿನಿತ್ಯ ಸಾಮರ್ಥ್ಯಕ್ಕಿಂತ ಹೆಚ್ಚು ತುಂಬಿಕೊಂಡು ಕಣ್ಣ ಮುಂದೇ ಓಡಾಡುತ್ತಿದ್ದರೂ ಕಣ್ಮುಚ್ಚಿ ಕುಳಿತ್ತಿದ್ದಾರೆ. ಜೊತೆಗೆ ವಾಯುಮಾಲಿನ್ಯ ತಡೆಗಟ್ಟಲು ಹೆಚ್ಚು ಹೊಗೆ ಸೂಸುವ ಖಾಸಗಿ ವಾಹನ ಕಂಡಲ್ಲಿ, ವಾಹನ ಸುಸ್ಥಿಯಲಿಲ್ಲದಿದ್ದಲ್ಲಿ ಸ್ಥಳದಲ್ಲೆ ಮನಸೋ ಇಚ್ಚೆ ದಂಡ ಶುಲ್ಕ ವಿದಿಸುತ್ತಾರೆ. ಆದರೆ ಬಹಳಷ್ಟು ಸಾರಿಗೆ ಸಂಸ್ಥೆ ಬಸ್ಸುಗಳು ಹೆಚ್ಚು ಹೊಗೆ ಸೂಸುತ್ತಲೆ ಓಡಾಡುವುದರ ಜೊತೆಗೆ ಸಾರಿಗೆ ನಿಯಮಗಳ ಪ್ರಕಾರ ಹೆಡ್ ಲೈಟ್, ಇಂಡಿಕೇಟರ್, ಬ್ರೇಕ್ ಲೈಟ್ ಇದ್ಯಾವುದೇ ಇರುವುದಿಲ್ಲ ಆಗಿದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಖಾಸಗಿ ಬಸ್ ಮಾಲೀಕರೊಬ್ಬರು ಆರೋಪ ಮಾಡುತ್ತಾರೆ.

ಕಣ್ಮುಚ್ಚಿ ಕುಳಿತ ಸಾರಿಗೆ ಮತ್ತು ಪೊಲೀಸ್ ಇಲಾಖೆ:
ಆಟೋ, ಟೆಂಪೋ, ಕಾರು ಮತ್ತು ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಸಾರಿಗೆ ನಿಯಮ ಸೀಮಿತವಾಗಿದೆ. ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಪ್ರತಿನಿತ್ಯ 80 ರಿಂದ 90ಜನ ಪ್ರಯಾಣಿಕರನ್ನು ಕುರಿಗಳ ಹಾಗೇ ತುಂಬುತ್ತಾರೆ. ಬಡವರ ಮೇಲೆ ಮಾತ್ರ ಬ್ರಹ್ಮಾಸ್ತ್ರ ತೋರಿಸುವ ಸಾರಿಗೆ ಇಲಾಖೆ ಸರ್ಕಾರಿ ಒಡೆತನದ ಬಸ್ಸುಗಳ ಮೇಲೆ ಸಾಋಇಗೆ ನಿಯಮ ಪ್ರಕಾರ ಕಾನೂನು ರೀತ್ಯಾ ಕ್ರಮ ಜರುಗಿಸುವುದಿಲ್ಲ.

ಕೊರಟಗೆರೆ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಸುಗಳ ಆಗಮನ ಮತ್ತು ನಿರ್ಗಮನದ ನಾಮಫಲಕದ ಜೊತೆ ಪಾಸಿನ ದರಪಟ್ಟಿ ಅಳವಡಿಸಲು ಸೂಚಿಸಲಾಗಿದೆ. ಇಲಾಖೆಯಿಂದ ಪಾಸ್ ಪಡೆದಿರುವ ವಿದ್ಯಾಥರ್ಿಗಳಿಗೆ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸಲು ನಿವರ್ಾಹಕರು ಕಡ್ಡಾಯವಾಗಿ ಅವಕಾಶ ಮಾಡಿಕೊಡುವಂತೆ ತಿಳಿಸಲಾಗಿದೆ ಎಂದು ಕೊರಟಗೆರೆ ಬಸ್ ನಿಲ್ದಾಣ ನಿರ್ವಹಣೆಯ ಸಂತೋಷ್ ತಿಳಿಸುತ್ತಾರೆ.

ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಮಧುಗಿರಿ ಮತ್ತು ಕೊರಟಗೆರೆಗೆ ಹೆಚ್ಚುವರಿ ಬಸ್ಸುಗಳ ಪೂರೈಕೆಗೆ ಈಗಾಗಲೇ ಸೂಚಿಸಲಾಗಿದೆ. ಮಧುಗಿರಿ ಡಿಪೋ ಬಸ್ಸುಗಳು ಕೊರಟಗೆರೆ ನಿಲ್ದಾಣಕ್ಕೆ ಆಗಮಿಸದಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆ ಇದ್ದರೂ ಮಾಹಿತಿ ನೀಡಿದರೆ ತಕ್ಷಣ ಬಗೆಹರಿಸುವುದಾಗಿ ತುಮಕೂರು ಸಾರಿಗೆ ಅಧಿಕಾರಿ ಪಕ್ರುದ್ದೀನ್ ತಿಳಿಸಿದರು.

ಮಗನೇ ಅಲ್ಲದವನ ಸಾಲ ತೀರಿಸುವಂತೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿದ್ದ ಎಸ್ ಬಿಐ ಬ್ಯಾಂಕಿಗೆ ದುಬಾರಿ ದಂಡ

ತುಮಕೂರು:  ಮಗನೇ ಅಲ್ಲದವನ ಸಾಲ ತೀರಿಸುವಂತೆ ಸಿದ್ಧಾರ್ಥ ಕಾಲೇಜಿನ ನಿವೃತ್ತ ಆಡಳಿತಾಧಿಕಾರಿ ನರಸಿಂಹಮೂರ್ತಿ ಅವರ ಬ್ಯಾಂಕ್ ಖಾತೆಯ ಮೇಲೆ ನಿರ್ಬಂಧ ಹೇರಿದ್ದ ತುಮಕೂರು ನಗರದ ಎಸ್ ಬಿಐ ಬ್ಯಾಂಕ್  ಬ್ಯಾಂಕ್  ಈಗ ದಂಡ ಕಟ್ಟುವಂತಾಗಿದೆ,!

ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಆಡಳಿತಾಧಿಕಾರ ಸಿ.ಎನ್.ನರಸಿಂಹಮೂರ್ತಿ ಅವರು ಉಳಿತಾಯ ಖಾತೆಯಿಂದ ಹಣ ಪಡೆಯದಂತೆ  ನಿರ್ಬಂಧ ಹೇರಿದ್ದ ತುಮಕೂರು ನಗರದ  ಸಿದ್ದಗಂಗಾ ಬಡಾವಣೆಯ ಸ್ಟೇಟ್ ಬ್ಯಾಂಕ್ ಇಂಡಿಯಾ ಶಾಖೆಗೆ  ಜಿಲ್ಲಾ ಗ್ರಾಹಕರ  ವ್ಯಾಜ್ಯಗಳ ಪರಿಹಾರ ವೇದಿಕೆ ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷರಾದ ಟಿ.ಶ್ರೀಕಂಠ ಹಾಗೂ ಸದಸ್ಯ ಬಾಲಕೃಷ್ಣ  ವಿ.ಮಸಳಿ ಅವರು ಈ ಆದೇಶ ನೀಡಿದ್ದಾರೆ. ವಕೀಲರಾದ ಎಸ್.ರಮೇಶ್ ಅವರು  ಸಿ.ಎನ್.ನರಸಿಂಹಮೂರ್ತಿ ಪರವಾಗಿ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ ಏನು: ಪಿರ್ಯಾದಿದಾರರಾದ .ನರಸಿಂಹಮೂರ್ತಿ ಅವರು ಬ್ಯಾಂಕ್ ಶಾಖೆಯಲ್ಲಿ ಮೂವತ್ತು ವರ್ಷಗಳಿಂದ ಖಾತೆ ಹೊಂದಿದ್ದರು. ಅವರ ಸೇವಾವಧಿಯಲ್ಲಿನ ಸಂಬಳ ಮತ್ತು ನಿವೃತ್ತರಾದ ಬಳಿಕ ನಿವೃತ್ತಿ ವೇತನದ ಹಣ ಈ ಖಾತೆಗೆ ಗಮೆ ಆಗುತ್ತಿತ್ತು.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಬ್ಯಾಂಕ್ ಮ್ಯಾನೇಜರ್ ಯಾವುದೇ ಸೂಚನೆ, ಕಾರಣ ನೀಡದೇ ನರಸಿಂಹಮೂರ್ತಿ ಅವರ ವಹಿವಾಟು ನಡೆಸದಂತೆ ನಿರ್ಬಂಧ ಹೇರಿದ್ದರು.  ಖಾತೆಗೆ ಪ್ರತಿ ತಿಂಗಳು ನಿವೃತ್ತಿ ವೇತನದ ಹಣ ಜಮೆ ಆಗುತ್ತಿದ್ದರು, ಮೂರು ಲಕ್ಷಕ್ಕೂ ಅಧಿಕ ಹಣ ಖಾತೆಯಲ್ಲಿದ್ದರೂ ಹಣ ವಾಪಸ್ ಕೊಡದಂತೆ ತಡೆ ಹಿಡಿದಿದ್ದರು. ಇದಾದ ನಂತರ  ಅವರು ತಮ್ಮ ವಕೀಲರಾದ ಎಸ್.ರಮೇಶ್ ಅವರ ಮೂಲಕ  ಬ್ಯಾಂಕ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಿದ್ದರು,

ಲೀಗಸ್ ನೋಟಿಸ್ ನೀಡಿದ ಬಳಿಕವೂ ಇದಕ್ಕೆ ಮ್ಯಾನೇಜರ್ ಉತ್ತರಿಸಿರಲಿಲ್ಲ. ಅಲ್ಲದೇ ಹಣ ತೆಗೆಯಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಲಾಗಿತ್ತು. ದೂರು ದಾಖಲಾದ ಬಳಿಕ ನರಸಿಂಹಮೂರ್ತಿ ಅವರ ಮಗ ಮೋಹನ್ ಎಂಬಾತ ಬ್ಯಾಂಕ್ ಶಾಖೆಯಲ್ಲಿ ಸಾಲ ಪಡೆದಿದ್ದು, ಸಾಲ ಕಟ್ಟಿಲ್ಲ ಎಂದು ಬ್ಯಾಂಕ್ ವಾದಿಸಿತ್ತು. ಆದರೆ ನರಸಿಂಹಮೂರ್ತಿ ಅವರು ಪರ ವಾದಿಸಿದ ವಕೀಲ ಎಸ್. ರಮೇಶ್ ಅವರು ನರಸಿಂಹಮೂರ್ತಿ ಅವರಿಗೆ ಮೋಹನ್ ಎಂಬ ಹೆಸರಿನ ಮಗನೇ ಇಲ್ಲ. ಅವರಿಗೆ ಮೂವರು ಮಕ್ಕಳಿದ್ದು., ಅವರು ಹೆಸರುಗಳು ಬೇರೆ ಇವೆ, ಅವರ್ಯಾರು ಸಾಲ ಪಡೆದಿಲ್ಲ ಎಂದು ಹೇಳಿದ್ದರು.

ಮೋಹನ್ ಅವರು ನರಸಿಂಹಮೂರ್ತಿ ಮಗ ಎಂದು ಸಾಬೀತುಪಡಿಸಲು ಬ್ಯಾಂಕ್ ವಿಫಲವಾದ ಹಿನ್ನೆಲೆಯಲ್ಲಿ  67 ಸಾವಿರ ದಂಡ ಹಾಗೂ 10 ಸಾವಿರ ರೂಪಾಯಿ ದಾವೆ ವೆಚ್ಚವಾಗಿ ನೀಡುವಂತೆ ಆದೇಶಿಸಿದೆ. ಅಲ್ಲದೇ ಕಳೆದ ಡಿಸೆಂಬರ್ ತಿಂಗಳಿಂದ ಈ ವರ್ಷದ ನವೆಂಬರ್ ವರೆಗೂ ದಿನದವರೆಗೆ ಶೇ 9ರಷ್ಟು ಬಡ್ಡಿ ಸಮೇತ ಪಾವತಿಸುವಂತೆ ಆದೇಶಿಸಿದೆ. ಆದೇಶಕ್ಕೆ ಪೂರಕವಾಗಿ ಕೇಶವ ಚಂದ್ ವರ್ಸ್ ಸ್ ಶಿಲ್ಲಾಂಗ್ ಬ್ಯಾಂಕ್ ದಾವೆಯಲ್ಲಿ ಸುಪ್ರೀಂ ಕೋರ್ಟ್  ತೀರ್ಪನ್ನು ಉಲ್ಲೇಖಿಸಿದೆ.

ಬ್ಯಾಂಕ್ ನವರು ಉಳಿತಾಯ ಖಾತೆಯನ್ನು ಚಾಲ್ತಿಯಲ್ಲಿಡಬೇಕು. ತಪ್ಪಿದ್ದಲ್ಲಿ ಚಾಲ್ತಿಯಲ್ಲಿಡುವ ತನಕ ದಿನ ಒಂದಕ್ಕೆ  200 ರೂಪಾಯಿಯಂತೆ ದಂಡ ಪಾವತಿಸಲು ಬದ್ಧರಾಗಿರುತ್ತಾರೆ ಎಂದು  ಆದೇಶದಲ್ಲಿ ತಿಳಿಸಿದೆ.

ಡಿಟೆನ್ಶನ್‌ ಸೆಂಟರ್ ನಲ್ಲಿ ಅವಕಾಶ

ಬೆಂಗಳೂರು: ಜೈಲಿನಿಂದ ಬಿಡುಗಡೆಯಾಗುವ  ವಿದೇಶಿ ಅಕ್ರಮ ನೆಲಸಿಗರಿಗೆ ಡಿಟೆನ್ಶನ್‌ ಸೆಂಟರ್ ನಲ್ಲಿ ಇರಲು ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ಬಾಂಗ್ಲಾದ ಬಾಬುಲ್ ಖಾನ್ ಹಾಗೂ ತಾನಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.‌ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌ ವಿಚಾರಣೆ ವೇಳೆ ಖುದ್ದು ಹಾಜರಿದ್ದು, ಈ ಕುರಿತಂತೆ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.

ಬೆಂಗಳೂರು ಉತ್ತರ ತಾಲ್ಲೂಕಿನ ಸೊಂಡೇಕೊಪ್ಪದಲ್ಲಿ  ಡಿಟೆನ್ಷನ್ ಸೆಂಟರ್ ಗೆ ಕಟ್ಟಡ ಗುರುತಿಸಲಾಗಿದೆ. ಈ ಕೇಂದ್ರ 2020ರ ಜನವರಿ 1ರಿಂದ ಕಾರ್ಯಾರಂಭ ಮಾಡಲಿದೆ ಎಂದು  ತಿಳಿಸಲಾಗಿದೆ.

ಅನರ್ಹರಿಗೆ ಅನ್ಯಾಯವಾಗಲು ಬಿಡುವುದಿಲ್ಲ; ಸಚಿವ  ಕೆ.ಎಸ್.ಈಶ್ವರಪ್ಪ

ಅನರ್ಹರಿಗೆ ಯಾವುದೇ ಕಾರಣಕ್ಕೂ ಅನ್ಯಾಯ ಮಾಡುವುದಿಲ್ಲ. ಅವರಿಂದಲೇ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಸಚಿವ  ಕೆ.ಎಸ್.ಈಶ್ವರಪ್ಪ ಹೇಳಿದರು.

ತುಮಕೂರು ಜಿಲ್ಲೆ ತುರುವೇಕೆರೆ ವಿರಕ್ತ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಪಟ್ಟಾಧಿಕಾರದ ರಜತ ಮಹೋತ್ಸವದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ಮೈತ್ರಿ ಸರ್ಕಾರದಿಂದ ಹೊರ ಬಂದಿದ್ದಕ್ಕಾಗಿಯೇ ಸರ್ಕಾರ ರಚನೆಯಾಗಿದೆ. ಅವರಿಗೆ ಅನ್ಯಾಯವಾಗುವ ರೀತಿಯಲ್ಲಿ ನಡೆದುಕೊಳ್ಳುವುದಿಲ್ಲ.  ಅನರ್ಹರು ಹೇಗೆ ಹೇಳುತ್ತಾರೋ, ಅದೇ ರೀತಿ ಅವರಿಗೆ ಬೆಂಬಲ ಕೊಡುತ್ತೇವೆ. ಸುಪ್ರೀಂಕೋರ್ಟ್‌ನಲ್ಲಿ ಏನು ತೀರ್ಪು ಬರುತ್ತದೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.

ಪತ್ನಿ, ಮಕ್ಕಳು, ಕುಟುಂಬದವರನ್ನು ಬಿಟ್ಟು ಒಂದು ದಿನವೂ ಇರಲು ನಮಗೆ ಸಾಧ್ಯವಾಗುವುದಿಲ್ಲ. ಆದರೆ ಸ್ವಾಮೀಜಿ ಎಲ್ಲವನ್ನು ತ್ಯಜಿಸಿ ಸಮಾಜಕ್ಕಾಗಿ 25 ವರ್ಷಗಳ ಕಾಲ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.

ತುಮಕೂರಿನಲ್ಲಿ ಮ್ಯಾನ್ಹೋಲ್ ಗಳ ಕಾಟ…!

ಸ್ಮಾರ್ಟ್ ಸಿಟಿ ತುಮಕೂರಿನಲ್ಲಿ ಒಳಚರಂಡಿಯ ಮ್ಯಾನ್ ಹೋಲ್ ಗಳು ತುಂಬಿ ಹರಿಯುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.

ಸಾವಿರಾರು ಕೋಟಿ ರೂಪಾಯಿ ಹಣ ವೆಚ್ಚ ಮಾಡಿ ಒಳಚರಂಡಿಗಳನ್ನು ನಿರ್ಮಾಣ ಮಾಡಿದ್ದರೂ ಮ್ಯಾನ್ ಹೋಲ್ ಗಳಲ್ಲಿ ಕೊಳಚೆ ನೀರು ರಸ್ತೆಗಳಿಗೆ ಹರಿಯುವುದು ಮಾತ್ರ ನಿಂತಿಲ್ಲ.

ತುಮಕೂರಿನ ಪ್ರಮುಖ ಬಡಾವಣೆಯಾದ ಸೋಮೇಶ್ವರ ಪುರಂನ 8ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆಯಲ್ಲಿ ಕಳೆದ ಒಂದು ವಾರದಿಂದಲೂ ಒಳಚರಂಡಿಯ ಮ್ಯಾನ್ ಹೋಲ್ ತುಂಬಿ ರಸ್ತೆಗೆ ಹರಿಯುತ್ತಿದೆ.

ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ದುರ್ನಾತ ಬೀರುವ ನೀರು ರಸ್ತೆಗೆ ಹರಿಯದಂತೆ ಪಾಲಿಕೆಗೆ ಮನವಿ ಮಾಡಿದ್ದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪಾಲಿಕೆ ಸಂಪೂರ್ಣ ವಿಫಲವಾಗಿದೆ.

ಈ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ನಿರ್ಮಾಣ ಮಾಡಲಾಗಿದೆ. ಅಂದರೆ ಪೂರ್ವಕ್ಕೆ ರಸ್ತೆ ತ್ಗಗ್ಗಾಗಿದೆ. ಆ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವುದು ಬಿಟ್ಟು ರಸ್ತೆ ಎತ್ತರವಿರುವ ಪಶ್ಚಿಮದ ಭಾಗಕ್ಕೆ ಒಳಚರಂಡಿಯ ಸಂಪರ್ಕ ಕಲ್ಪಿಸಿರುವುದು ಇಲ್ಲಿ ಪದೇ ಪದೇ ಮ್ಯಾನ್ ಹೋಲ್ ತುಂಬಿ ಹರಿಯಲು ಕಾರಣವಾಗಿದೆ.

ಮ್ಯಾನ್ ಹೋಲ್ ಗಳು ಮಳೆ ಬಂದಾಗ ಹರಿಯುವುದು ಸಾಮಾನ್ಯ. ಆದರೆ ಇಲ್ಲಿ ನಿರಂತರವಾಗಿ ಉಕ್ಕಿ ಹರಿಯುತ್ತಲೇ ಇರುತ್ತದೆ ಮಲಯುಕ್ತ ನೀರು. ರಸ್ತೆಯಲ್ಲಿ ಓಡಾಡಲು ಕೂಡ ಕಷ್ಟವಾಗಿದೆ. ಈ ಮ್ಯಾನ್ ಹೋಲ್ ತುಂಬಿ ರಸ್ತೆಗೆ ಹರಿದರೆ ಈ ರಸ್ತೆಯ ಬಹುತೇಕ ಮನೆಗಳ ಸಂಪರ್ಕಗಳು ತುಂಬಿ ಮಲಯುಕ್ತ ದುರ್ವಾಸೆ ಬೀರುವ ನೀರು ಮನೆಗಳಿಗೆ ಹರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮ್ಯಾನ್ ಹೋಲ್ ತುಂಬುತ್ತಿದ್ದಂತೆ ಶೌಚಾಲಯದ ಕಮೋಡ್ ಗಳು ತುಂಬಿ ಮನೆಯ ಆವರಣ ಮತ್ತು ಮನೆಗೆ ಹರಿದು ಗೊಬ್ಬು ನಾತ ಬೀರುತ್ತದೆ. ವಾರಕ್ಕೆ ಏನಿಲ್ಲವೆಂದರೂ ಒಂದು ದಿನ ಶೌಚಾಲಯಗಳು ಬ್ಲಾಕ್ ಆಗುತ್ತವೆ. ಪ್ರತಿ ಬಾರಿ ನಗರ ಪಾಲಿಕೆಯ ಸಕ್ಕಿಂಗ್ ಮಿಷನ್ ನಿರ್ವಾಹಕರಿಗೆ ಪೋನ್ ಮಾಡಿದರೆ ಅವರು ಬಂದು ಸ್ವಚ್ಛ ಮಾಡಿ ನೂರಾರು ರೂಪಾಯಿ ವಸೂಲಿ ಮಾಡಿಕೊಂಡು ಹೋಗುತ್ತಿದ್ದಾರೆ.

ಪದೇ ಪದೇ ಹಣ ನೀಡುವುದು ಆಗುತ್ತಿಲ್ಲ. ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಯ ಕಾರಣಕ್ಕೆ ಶೌಚಾಲಯಗಳ ಸಂಪರ್ಕಗಳು ತುಂಬಿ ಹರಿದರೆ ನಾವೇಕೆ ಹಣ ಕೊಡಬೇಕು. ಪಾಲಿಕೆಯ ಅಧಿಕಾರಿಗಳೇ ಸ್ವಚ್ಛ ಮಾಡಬೇಕು. ನಮ್ಮ ಮನೆಗಳ ಶೌಚಾಲಯಗಳು ಸಮರ್ಪಕವಾಗಿಲ್ಲದಿದ್ದರೆ ನಾವು ಹಣ ನೀಡಲು ಸಿದ್ದ. ಆದರೆ ಒಳಚರಂಡಿಯನ್ನೇ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು, ಅದನ್ನು ಕೂಡಲೇ ಪೂರ್ವದ ದಿಕ್ಕಿಗೆ ಸಂಪರ್ಕ ಕಲ್ಪಸಿದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಆ ಬೀದಿಯ ಜನರು ಆಗ್ರಹಿಸಿದ್ದಾರೆ.

ತುಮಕೂರಿಗೆ ಮುಖ್ಯಮಂತ್ರಿ ಬಿಎಸ್ ವೈ: ಕೆ.ಎನ್.ರಾಜಣ್ಣ

ತುಮಕೂರು: ಸಹಕಾರ ಮಹಾಮಂಡಳ ನಿಯಮಿತ ವತಿಯಿಂದ 66ನೇ ಅಖಿಲಭಾರತ ಸಹಕಾರಿ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮಗಳ ಉದ್ಘಾಟನೆಯನ್ನು ನವೆಂಬರ್ 14ರಂದು ತುಮಕೂರಿನಲ್ಲಿ ನೆರವೇರಿಸಲಾಗುವುದು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆ.ಎನ್.ರಾಜಣ್ಣ, ರಾಜ್ಯದ ವಿವಿಧ 7 ಜಿಲ್ಲೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು ಉದ್ಘಾಟನಾ ಕಾರ್ಯಕ್ರಮ ತುಮಕೂರಿನಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಹೇಳಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ನವೆಂಬರ್ 16ರಂದು ಯಾದಗಿರಿಯಲ್ಲಿ, ನವೆಂಬರ್ 17ರಂದು ಧಾರವಾಡದಲ್ಲಿ ಸಪ್ತಾಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಸಹಕಾರ ಸಪ್ತಾಹವನ್ನು ಪಕ್ಷಾತೀತವಾಗಿ, ಜಾತ್ಯತೀತವಾಗಿ ನಡೆಸುತ್ತಿದ್ದು ಎಲ್ಲಾ ಪಕ್ಷಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಾಜಿ ಸಚಿವ ಸೊಗಡು ಶಿವಣ್ಣ, ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಸೇರಿದಂತೆ ಹಲವು ಮುಖಂಡು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಸಪ್ತಾಹ ಕಾರ್ಯಕ್ರಮ ನವೆಂಬರ್ 14 ರಿಂದ 20ರವರೆಗೆ ನಡೆಯಲಿದೆ ಎಂದರು.

ಮಾಧ್ಯಮಗೋಷ್ಟಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಯುವ ಕಾಂಗ್ರೆಸ್ ಮುಖಂಡ ಆರ್.ರಾಜೇಂದ್ರ, ಡಿಸಿಸಿ ಬ್ಯಾಂಕ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆಟೋ ಚಾಲಕರ ಕನ್ನಡ ಪ್ರೇಮ

ತುಮಕೂರು ಜಿಲ್ಲೆ  ಪಾವಗಡ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ಭಾನುವಾರ ಆಟೋ ಚಾಲಕರ ಸಂಘದ ವತಿಯಿಂದ ವಿಜೃಂಭಣೆಯಿಂದ  ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಆಟೋಗಳನ್ನು ಕನ್ನಡ ಧ್ವಜ, ವಿವಿಧ ಹೂವುಗಳಿಂದ ಅಲಂಕರಿಸಿ ಚಾಲಕರು ಆಟೋಗಳನ್ನು ಹೂವಿನ ರಥಗಳನ್ನಾಗಿ ಮಾರ್ಪಡಿಸಿದ್ದರು.

ಅಲಂಕೃತ ಆಟೋಗಳೊಂದಿಗೆ ಲಿಂಗದಹಳ್ಳಿ, ಸಾಸಲಕುಂಟೆ ಸೇರಿದಂತೆ ಗಡಿಯ 30 ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿದರು.

ಆಟೋ ಚಾಲಕರಾದ ಈರಣ್ಣ, ಮಂಜುನಾಥ್, ರಘು, ಯತೀಶ್, ಕೃಷ್ಣ, ಶಿವಕುಮಾರ್, ದೇವರಾಜ್, ಶ್ರೀಕಾಂತ್, ಲೋಕೇಶ್, ಕೆಂಚಪ್ಪ, ತಿಪ್ಪೇಸ್ವಾಮಿ, ರಾಜೇಶ್, ಕೆಂಚಣ್ಣ, ಮಂಜು, ಲೋಕೇಶ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈದ್ ಮಿಲಾದ್; ಮೆಕ್ಕ ಮದೀನಾ ಮಾದರಿಗಳ ಮೆರವಣಿಗೆ

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಭಾನುವಾರ ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಸಮುದಾಯದವರು ಮೆಕ್ಕ, ಮದೀನ ಮಾಧರಿಗಳೊಂದಿಗೆ ಸಂಭ್ರಮ, ಸಡಗರದಿಂದ ಮೆರವಣಿಗೆ ನಡೆಸಿದರು.

ಜಾಮಿಯಾ ಮಸೀದಿಯಿಂದ ಆರಂಭವಾದ ಮೆರವಣಿಗೆ ಪೆನುಗೊಂಡ ಕೋಟೆ ಬಾಗಿಲ ಮೂಲಕ ರೊಪ್ಪ ಗೆ ಹೋಗಿ ಅಲ್ಲಿಂದ ಪಟ್ಟಣದ ಪ್ರಮುಖ ರಸ್ತಯ ಮೂಲಕ ಶಿರಾ ರಸ್ತೆಗೆ ಆಗಮಿಸಿತು.  ಜಾಮಿಯಾ ಮಸೀದಿ ಬಳಿ ಮೆರವಣಿಗೆ ಮುಕ್ತಾಯವಾಯಿತು.

ಯುವಕರು ರಾಷ್ಟ್ರ, ಧರ್ಮ ಧ್ವಜ ಹಿಡಿದು ಉತ್ಸಾಹದಿಂದ ಭಾಗವಹಿಸಿದರು. ಮಸೀದಿ ಆಜಂ ಪ್ರಮುಖರು ಪಟ್ಟಣದಲ್ಲಿ ಹಬ್ಬದ ಪ್ರಯುಕ್ತ ಸಿಹಿ ಹಂಚಿ ಸಂಭ್ರಮಿಸಿದರು.

ಜಾಮಿಯಾ ಮಸೀದಿಯ ಷಾದಿ ಮಹಲ್ ನಲ್ಲಿ ಸಮುದಾಯದವರಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಜಾಮಿಯಾ ಮಸೀದಿ, ನೌಜವಾನ್ ಕಮಿಟಿಯಿಂದ 3 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಮಾಡಿಸಲಾಯಿತು. ವಿವಾಹಿತ ಜೋಡಿಗಳಿಗೆ ಅಗತ್ಯ ಪೀಠೋಪಕರಣ, ಸಾಮಾನು, ಸರಂಜಾಮುಗಳನ್ನು ಕೊಟ್ಟು  ಶುಭ ಹಾರೈಸಲಾಯಿತು.

ಮೊಹಮದ್ ಫಜಲುಲ್ಲಾ, ತಾಲ್ಲೂಕು ವಕ್ಫ್ ಬೋರ್ಡ್ ಸದಸ್ಯ ಮೊಹಮದ್ ಜಾವಿದ್, ಪುರಸಭೆ ಸದಸ್ಯ ಎಂ.ಎ.ಜಿ ಇಮ್ರಾನ್, ಇದಾಯತ್ ಉಲ್ಲಾ, ಯೂನಸ್, ಶಾಕೀರ್, ಮತೀನ್, ಮಹೀದ್, ಮುಭಾರಕ್, ರಿಯಾಜ್, ಷಫಿ ಇದ್ದರು.

ಬೆಂಗಳೂರಿನಲ್ಲಿ ಮಿಂಚಿದ ತುಮಕೂರಿನ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು

ತುಮಕೂರು: ಬೆಂಗಳೂರಿನಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಯು ತನ್ನ ಅಂಗ ಸಂಸ್ಥೆಗಳ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನೃತ್ಯ ಸ್ಪರ್ಧೆಯಲ್ಲಿ ತುಮಕೂರಿನ ಗಂಗಸಂದ್ರದಲ್ಲಿರುವ ಶೇಷಾದ್ರಿಪುರಂ ನ ಪಿಯು ಕಾಲೇಜು ವಿದ್ಯಾರ್ಥಿಗಳು ಪ್ರಶಸ್ತಿಗಳ ಸರಮಾಲೆಗಳನ್ನು ಪಡೆದು ಗಮನ ಸೆಳೆದರು.

ಬೆಂಗಳೂರಿನ ಶೇಷಾದ್ರಿಪುರಂ ಸಂಯೋಜಿತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಈ ಸಮಾರಂಭದಲ್ಲಿ ಎಲ್ಲಾ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ವಿಭಿನ್ನ ರೀತಿಯುಲ್ಲಿ ಕಾರ್ಯಕ್ರಮ ನಡೆಸಿಕೊಟ್ಟು ಗಮನ ಸೆಳೆದರು.

ಖ್ಯಾತ ನೃತ್ಯಗಾರ್ತಿಯರಾದ ದೀಪ್ತಿ ಹಾಗೂ ಸರ್ವಮಂಗಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಜಿ.ಕೆ ಮಂಜುನಾಥ್ ಅವರು ವಹಿಸಿದ್ದರು. ಸಾಂಸ್ಕೃತಿಕ ಸಂಚಾಲಕರಾದ ಗೀತಾರಾಜ್ ಉಪಸ್ಥಿತರಿದ್ದರು

ವಿದ್ಯಾರ್ಥಿಗಳ ನೃತ್ಯ ನೋಡಲು ಇಲ್ಲಿ ಕ್ಲಿಕ್ ಮಾಡಿ

ಗಾಂಧಿವಾದ, ಸ್ನೇಹಶೀಲತೆ, ಬಾಂಧವ್ಯ, ಸಹೋದರತೆಯ ಗುಣಗಳನ್ನು ಯುವ ಜನಾಂಗದಲ್ಲಿ ಬೆಳೆಸುವ ಗುರಿಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ವೂಡೇ ಪಿ. ಕೃಷ್ಣ ಅವರು ಹೊಂದಿದ್ದು, ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಂಸ್ಥೆಯ ಮಕ್ಕಳು ಮುಂದಿದ್ದಾರೆ.

ವಿದ್ಯಾರ್ಥಿಗಳ ನೃತ್ಯ ನೋಡಲು ಇಲ್ಲಿ ಕ್ಲಿಕ್ ಮಾಡಿ

ತನ್ನ ಅಂಗಸಂಸ್ಥೆಗಳ ನಡುವೆ ಸೋದರತೆ, ಬಾಂಧವ್ಯ , ಸ್ನೇಹಶೀಲತೆ ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ದತ್ತಿಯು ಉತ್ತಮ ಕೆಲಸ ಮಾಡುತ್ತಿದೆ. ಉತ್ಕೃಷ್ಟ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾದ ಶೇಷಾದ್ರಿಪುರಂ ಶಿಕ್ಷಣದತ್ತಿಯ ಹಲವಾರು ಉತ್ತಮ ಕೆಲಸಗಳಿಗೆ ಮಾದರಿಯಾಗಿದೆ ಎಂದು ಪ್ರಾಂಶುಪಾಲರಾದ ಜಿ.ಕೆ ಮಂಜುನಾಥ್ ತಿಳಿಸಿದರು.

ವಿದ್ಯಾರ್ಥಿಗಳ ನೃತ್ಯ ನೋಡಲು ಇಲ್ಲಿ ಕ್ಲಿಕ್ ಮಾಡಿ

ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಶೇಷಾದ್ರಿಪುರಂ ತುಮಕೂರು ಕಾಲೇಜಿನ ವಿದ್ಯಾರ್ಥಿಗಳು ಎರಡು ಪ್ರಶಸ್ತಿಗಳನ್ನು ಪಡೆದರು. ವಿದ್ಯಾರ್ಥಿಗಳು ನೀಡಿದ ಪ್ರದರ್ಶನಕ್ಕೆ ತೀರ್ಪುಗಾರರು ತಲೆದೂಗಿದರು. ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರಾದ ಬಿ.ವಿ ಬಸವರಾಜ್ ಅಭಿನಂದಿಸಿದ್ದಾರೆ.

ಕಾರ್ಮಿಕರ ಬೃಹತ್ ಹೋರಾಟಕ್ಕೆ ಸಿದ್ಧತೆ: ಹೇಮಲತಾ

ಕೇಂದ್ರ ಸರ್ಕಾರ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಿ ಕಾನೂನುಗಳನ್ನು ಸಂಹಿತೆಗಳನ್ನಾಗಿಸಲು ಹೊರಟಿದ್ದು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಟೀಕಾಪ್ರಹಾರ ನಡೆಸಿದರು

ತುಮಕೂರಿನ ಗಾಜಿನಮನೆಯಲ್ಲಿ ಸಮಗ್ರ, ಸಮೃದ್ಧ ಮತ್ತು ಸೌಹಾರ್ದಕ್ಕಾಗಿ ಸಿಐಟಿಯು 14ನೇ ರಾಜ್ಯ ಮಟ್ಟದ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ದೇಶವನ್ನು ಮಾರಾಟ ಮಾಡಲು ಹೊರಟಿದೆ. ಬಂಡವಾಳಶಾಹಿಗಳು ಕಿರುಪಾಲುದಾರರಾಗುತ್ತಿದ್ದಾರೆ. ಕೈಗಾರಿಕೆಗಳು ಮುಚ್ಚುತ್ತಿದ್ದು ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದು ಹೇಳಿದರು.
.
ಬಂಡವಾಳ ಶಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಒಂದಾಗುತ್ತಿದೆ. ಕ್ರೂರ ವ್ಯವಸ್ಥೆ ನಮ್ಮನ್ನು ಕಪಿಮುಷ್ಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಜನರನ್ನು ಒಡೆದು ಸೌಹರ್ದತೆಯನ್ನೇ ನಾಶ ಮಾಡಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಇಂತಹ ಲೋಪದೋಷ ಪ್ರಶ್ನಿಸುವವರನ್ನು ಭಯೋತ್ಪಾದಕ ರಂತೆ ಬಿಂಬಿಸಲಾಗುತ್ತಿದೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಜೈಲಿಗೆ ಹೋದವರನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಮಾತನಾಡಿ, ಮಹಿಳೆಯರಿಗೆ ಸಮಾನ ವೇತನ ಸಿಗುತ್ತಿಲ್ಲ. ಹಲವು ಹೋರಾಟ ಮಾಡಿದರೂ ಮಹಿಳೆಯರು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸ್ಕೀಂ ನೌಕರರಿಗೆ ಕೆಲವೊಂದು ಸೌಲಭ್ಯ ಸಿಗುತ್ತದೆಯಾದರೂ ಬಿಸಿಯೂಟ ಮಹಿಳಾ ಕಾರ್ಮಿಕರಿಗೆ ತಿಂಗಳ ರಜೆ, ಹೆರಿಗೆ ರಜೆ ಸೇರಿದಂತೆ ಯಾವುದೇ ರಜೆಗಳು ಸಿಗುತ್ತಿಲ್ಲ. ಇದರ ವಿರುದ್ಧ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಐಟಿಯು ರಾಜ್ಯ ಪ್ರಧಾನಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ದೇಶದಲ್ಲಿ ಜನರ ಐಕ್ಯತೆ ಮುರಿಯುವ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಕಾರ್ಮಿಕರು ಅವಕಾಶ ನೀಡಬಾರದು ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ. ನೆರೆ ಬಂದು ಬದುಕು ಕೊಚ್ಚಿ ಹೋಗಿದ್ದರೂ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ನೋವಿನಿಂದ ಬಳಲುತ್ತಿರುವ ಜನರ ನೆರವಿಗೆ ಸರ್ಕಾರ ಬರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ದೇಶದ ಆರ್ಥಿಕ ಸ್ಥಿತಿ ಜನರ ಬದುಕನ್ನು ಬೀದಿಪಾಲು ಮಾಡಿದೆ. ಆರ್ಥಿಕ ಸಂಕಷ್ಟಗಳ ನಿವಾರಣೆಗೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಶೋಷಣೆ ಹೆಚ್ಚುತ್ತಿದೆ. ಸಾಮಾಜಿಕ ಭದ್ರತೆಗೆ ಧಕ್ಕೆ ಬಂದಿದೆ. ಸರ್ಕಾರವೇ ಜನರ ಹಕ್ಕುಗಳನ್ನು ದಮನ ಮಾಡುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ದಲಿತರು, ಮಹಿಳೆಯರು, ಕಾರ್ಮಿಕರು ಮತ್ತು ಅಲ್ಪಸಂಖ್ಯಾತರು ಭಯಭೀತರಾಗಿದ್ದಾರೆ ಎಂದು ಹೇಳಿದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ಬಿಜೆಪಿ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ. ಟಿಪ್ಪು ವಿಷಯವನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದೆ. ಚುನಾವಣೆಗಳು ಬರುತ್ತಿದ್ದಂತೆಯೇ ಇಂತಹ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇದರ ಬಗ್ಗೆ ಎಲ್ಲಾ ಕಾರ್ಮಿಕರು ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಮುಖಂಡರಾದ ವಿಜೆಕೆ ನಾಯರ್, ಕೆಎನ್.ಉಮೇಶ್, ಸೈಯದ್ ಮುಜೀಬ್ ಗುಲ್ಜಾರ್ ಬಾನು, ಶಂಕರ್, ವಸಂತಾಚಾರಿ, ವೀರಾಸ್ವಾಮಿ ಬಿ.ಷಣ್ಮುಖಪ್ಪ, ಎ.ಲೋಕೇಶ್, ಹೆಚ್.ಡಿ.ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.
ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಸ್ವಾಗತಿಸಿದರು. ಸಿಐಟಿಯು ಖಜಾಂಚಿ ಜಿ.ಕಮಲ ವಂದಿಸಿದರು.