Saturday, May 9, 2026
Google search engine
Home Blog Page 118

ಏಕೆ ಬರೆಯಬೇಕು? ನಟರಾಜ್ ಬೂದಾಳ್ ಪ್ರಶ್ನೆ

ಅರುಂಧತಿ ಅವರ ‘ಜೀವಜಾಲದ ಸಗ್ಗ’ ಕವನ ಸಂಕಲನ ಲೋಕಾರ್ಪಣೆ

Publicsrory


Tumkuru: ಏಕೆ ಬರೆಯಬೇಕು ಎಂಬುದರ ಕುರಿತು ಬರಹಗಾರರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಾಹಿತಿ-ಚಿಂತಕ ಡಾ. ಎಸ್. ನಟರಾಜ ಬೂದಾಳು ಅವರು ಉದಯೋನ್ಮುಖ ಬರಹಗಾರರಿಗೆ ಸಲಹೆ ನೀಡಿದರು.

ಧಾನ್ಯ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸಂಯುಕ್ತಾಶ್ರಯದಲ್ಲಿ ಭಾನುವಾರದಂದು ತುಮಕೂರು ನಗರದ ಕನ್ನಡ ಭವನದಲ್ಲಿಆಯೋಜಿಸಿದ್ದ ಸಮಾರಂಭದಲ್ಲಿ ಕವಯತ್ರಿ ಡಿ. ಅರುಂಧತಿ ಅವರ ‘ಜೀವಜಾಲದ ಸಗ್ಗ’ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇವತ್ತಿನ ದಿನಗಳಲ್ಲಿ ಬಹಳಷ್ಟು ಬರಹಗಾರರು ತಮ್ಮ ತಮ್ಮ ಕೃತಿಗಳ ಮೂಲಕ ಹೊರ ಬರುತ್ತಿರುವುದು ಸಂತಸದ ಸಂಗತಿ. ಆದರೆ, ಬರಹದ ಮುನ್ನ ತಾನೇಕೆ ಬರೆಯುತ್ತಿರುವೆ ಎಂಬ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಉತ್ತಮ ಸಾಹಿತ್ಯ ಕೃತಿ ರಚನೆಗೂ ಸ್ವ-ಅವಲೋಕನದ ನಡೆಯು ಕಾರಣವಾಗುತ್ತದೆ. ಅಂತಹ, ಪ್ರಾಮಾಣಿಕ ಕೃತಿಯು ಬರಹದ ವೈವಿಧ್ಯಮಯ ಆಯಾಮಗಳಲ್ಲಿ ಸೌಂದರ್ಯವನ್ನು ತುಂಬಿಕೊಂಡಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಮರಸ್ಯಕ್ಕೆ ಧಕ್ಕೆ: ರಾಷ್ಟ್ರಪ್ರೇಮದ ಹೆಸರಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ವಿದ್ಯಮಾನಗಳು ನಡೆಯುತ್ತಿವೆ. ತಿಂದ ತಟ್ಟೆಗೆ ಒದೆಯುವ ಅಪಾಯಕಾರಿ ಪ್ರವೃತ್ತಿ ಕಾಣುತ್ತಿದ್ದೇವೆ. ಮುಂದೆ ಉಣ್ಣಲು ತಟ್ಟೆ ಬೇಕಾಗುತ್ತದೆ ಎಂಬ ಕನಿಷ್ಠ ಅರಿವು ಇಲ್ಲದಂತೆ ವರ್ತಿಸುತ್ತಿರುವುದು ವಿಷಾದದ ಸಂಗತಿ. ಬದುಕಿನ ಸೂಕ್ಷ್ಮತೆಗಳನ್ನು ತಿಳಿದು ಸಾಮರಸ್ಯದಿಂದ ಬಾಳಬೇಕಿದೆ ಎಂದು ಆಶಿಸಿದರು.

ಕಾವ್ಯ ಜೈವಿಕ ಕ್ರಿಯೆಯಲ್ಲ: ಕಾವ್ಯ ಎಂದಿಗೂ ಜೈವಿಕ ಕ್ರಿಯೆ ಆಗದು. ಅದು, ಭಾಷೆಯೂ ಜೈವಿಕವಲ್ಲ. ಆದರೆ, ಇವುಗಳಲ್ಲಿ ಜೀವ ಇದೆ. ಜೀವಿಗಳಿಗೆ ಮಾತ್ರವಲ್ಲ ಕಾವ್ಯವು ಸಮಸ್ತ ಲೋಕಕ್ಕೂ ಅಗತ್ಯವಿದೆ. ಲೋಕದ ನಡೆಯಲ್ಲಿ ಪ್ರಜ್ಞೆಯು ವ್ಯಕ್ತವಾಗುತ್ತದೆ. ಈ ಪ್ರಜ್ಞೆಯ ಚಲನಶೀಲತೆಯಿಂದಾಗಿ ಲೋಕ ಆರೋಗ್ಯವಾಗಿದೆ. ಚಲನಶೀಲತೆ, ಬಹುತ್ವ ಎಲ್ಲವೂ ಮುಖ್ಯ ಎಂದರು.

ಲೇಖಕ ಡಾ.ಓ.ನಾಗರಾಜು ಅವರು ಕವನ ಸಂಕಲನ ಕುರಿತು ಮಾತನಾಡಿದರು, ಚಿಂತಕ ಕೆ.ದೊರೈರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪಮುಖ್ಯ ಅತಿಥಿಗಳಾಗಿದ್ದರು. ಕವಯತ್ರಿ ಡಾ.ಅರುಂಧತಿ, ಧಾನ್ಯ ಪ್ರಕಾಶಕನದ ಮಲ್ಲಿಕಾರ್ಜುನ ಹೊಸಪಾಳ್ಯ ಸೇರಿದಂತೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಡಾ. ಹೆಚ್.ವಿ.ರಂಗಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಲಕ್ಷಿರಂಗಯ್ಯ ನಿರೂಪಿಸಿದರು, ವಿಜಯ ಡಿ. ಮತ್ತು ಅಕ್ಕಮ್ಮ ಪ್ರಾರ್ಥಿಸಿದರು. ರಾಣಿ ಚಂದ್ರಶೇಖರ್ ವಂದಿಸಿದರು.

ಕಾವ್ಯ ಸಂಸ್ಕೃತಿಯನ್ನು ಕಟ್ಟಿದವರು ಕಣವಿ;ಡಾ.ನಾಗಭೂಷಣ ಬಗ್ಗನಡು ಅಭಿಮತ

ತುಮಕೂರು: ಸಮನ್ವಯತೆ ಮೀರಿ ಸಾಮಾಜಿಕ ಸಂಕಟಗಳಿಗೆ ಕಾವ್ಯದ ಮೂಲಕ ಪ್ರತಿಸ್ಪಂದಿಸಿದ ಮೃದು ಮಾತಿನ ಕಣವಿ ಅವರು ಯುವ ಮನಸ್ಸುಗಳಿಗೆ ಕಾವ್ಯ ಪ್ರೀತಿಯನ್ನು ಕಲಿಸಿದವರು ಎಂದು ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ನಾಗಭೂಷಣ ಬಗ್ಗನಡು ಅಭಿಪ್ರಾಯಪಟ್ಟರು.

ನಗರದ ತುಮಕೂರು ವಿಶ್ವವಿದ್ಯಾನಿಲಯದ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಗುರುವಾರ ನಡೆದ ಹಿರಿಯ ಕವಿ ಚೆನ್ನವೀರ ಕಣವಿ ಅವರಿಗೆ ಕಾವ್ಯ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಸಾಹಿತ್ಯಿಕ ಪರಂಪರೆಗಳ ವಾಗ್ವಾದದ ಜೊತೆ ಇದ್ದಂತವರು ಚೆನ್ನವೀರ ಕಣವಿ. ಸದಾ ತಮಗನಿಸಿದ್ದನ್ನು ನೇರವಾಗಿ ಮಾತನಾಡುವ ಸಾಹಿತ್ಯದ ಶಕ್ತಿ ಅವರಿಗಿತ್ತು.
ಮೂಲತಃ ಧಾರವಾಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು. ಜತೆಗೆ ಕನ್ನಡ ಸಾಹಿತ್ಯದ ಪರಂಪರೆಯೊಳಗೆ ಕಣ್ಮರೆಯಾಗಿದ್ದುಕೊಂಡು ಕಾವ್ಯ ಉಳುಮೆ ಮಾಡಿದವರು.

ನವೋದಯ, ನವ್ಯ, ದಲಿತ ಬಂಡಾಯ ಒಳಗೊಳಿಸಿಕೊಂಡು ಸಮನ್ವಯತೆಯನ್ನು ಮೀರದವರು. ಮಕ್ಕಳಿಗೆ ಸಾಹಿತ್ಯ ಅಭಿರುಚಿ ಬೆಳೆಸುವ ಆಕಾಂಕ್ಷೆಯಿಂದ ಮಕ್ಕಳ ಕವಿತೆಗಳನ್ನು ಬರೆಯುತೀದ್ದರು. ಹನ್ನೆರಡು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಸೌಮ್ಯಾ ಕವಿಯಾದ ಕಣವಿಯವರು ರಾಜಕೀಯ, ಭ್ರಷ್ಟಾಚಾರ ಕುರಿತು ಖಾರವಾಗಿಯೇ ಕವಿತೆ ರಚಿಸಿ ಕಠೋರ ಟೀಕೆ ಮಾಡಿದವರು. ಕನ್ನಡ ನಾಡಿನಲ್ಲಿ ಕಾವ್ಯ ಸಂಸ್ಕೃತಿಯ ಜೊತೆಗೆ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿದ ಇವರ ನಿರ್ಗಮನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು.

ಪ್ರಾಧ್ಯಾಪಕ ಪಿ.ಎಂ.ಗಂಗಾಧರಯ್ಯ ಮಾತನಾಡಿ ಚನ್ನವೀರ ಕಣವಿ ಅವರು ಸಮಕಾಲಿನ ವಾಸ್ತವ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸಾಮಾಜಿಕ ಅಸಮಾನತೆ, ಶೋಷಣೆ ವಿರುದ್ಧ ಪ್ರತಿಭಟಿಸಿದವರು.ಸಹೃಯ ವಿಮರ್ಶಕರಾಗಿದ್ದ ಇವರು ಗೋಕಾಕ ಚಳುವಳಿಯಲ್ಲಿ ಕನ್ನಡಕ್ಕಾಗಿ ಜೈಲು ವಾಸ ಅನುಭವಿಸಿದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕ ಚನ್ನವೀರ ಕಣವಿ ಅವರ ಕೊಡುಗೆ ಅಪಾರವಾದುದು ಎಂದರು

ಚೆನ್ನವೀರ ಕಣವಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆಯಿಂದ ಕಾವ್ಯ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವ್ಯಾಲೆಂಟೇನ್ ಡೇ: ರಜನಿ ಕಣ್ಣಲ್ಲಿ ರೂಮಿ ಕವನ ಓದಿ

0
ಪ್ರೇಮಿಗಳ ದಿನದ ಸಂದರ್ಭದಲ್ಲಿ 13 ನೇ ಶತಮಾನದ ಪರ್ಶಿಯಾ ಕವಿ ರೂಮಿಯವರ 3 ಕವನಗಳನ್ನು ಅನುವಾದಿಸಿದ್ದಾರೆ ಡಾII ರಜನಿ. “Love is the bridge between you and everything ” ಎಂದ ಕವಿ. ಇಡೀ ಪ್ರಪಂಚವೆ ರೂಮಿ ಕವನಗಳನ್ನು ಆಸ್ವಾದಿಸಿದೆ.

ಪ್ರೇಮಿಗಳ ದಿನಾಚರಣೆ- ಕವನ ಓದಿ: ನಿನ್ನ ನೆನಪುಗಳು

0

ಡಾ.ರಜನಿ


ಬದುಕ ದಾಟಲು
ಹಾಯಿ ದೋಣಿ
ನಿಜ…
ಆದರೂ
ನಿನ್ನ ನೆನಪಲ್ಲಿ
ಹುಟ್ಟು ಹಾಕುವುದ
ಮರೆತಿರುವೆ.

ಬದುಕಿನ
ಮರುಭೂಮಿಯಲ್ಲಿ
ಒಯಸಿಸ್ ಗಳು.

ಪ್ರತೀ ಜಾತ್ರೆಯಲ್ಲೂ
ನುಗ್ಗಿ ಬರುವ
ಸುನಾಮಿಗಳು.

ಇಹ ಲೋಕವನ್ನೇ
ಕನಸು ಮಾಡಿ …
ನೆನಪನ್ನೇ ಸತ್ಯ ಮಾಡುವ
ಮಂತ್ರಗಳು.

ನನ್ನ ನಿತ್ಯ
ಬದುಕಿನಲ್ಲಿ
ಆವರಿಸಿಕೊಂಡ ಗುಂಗು.

ಪ್ರತಿಯೊಂದರಲ್ಲೂ
ನಿನ್ನನ್ನೇ
ಹುಡುಕುವ
ಪರಿ.

ಹೊಸ ಪ್ರೇಮಿಗಳ
ಕ್ಷಣಗಳಿಗೂ
ನಮ್ಮ ಹಳವಂಡಗಳಿಗೂ
ಸಮೀಕರಣ.

ರಜನಿ

ಪ್ರೇಮಿಗಳ ದಿನಾಚರಣೆ ಕವನ: ಪ್ರೇಮಿಗಳು

0
ಇಂದು ಪ್ರೇಮಿಗಳ ದಿನಾಚರಣೆ. ಕಚಗುಳಿ ಇಡುವ ನೆನಪುಗಳ ಮಾತೇ ಮಧುರ. ಪ್ರೇಮಿಗಳ ನೆನಪು, ಆಟೋಟಗಳು ಸಹ ಮಧುರ. ಇಂತಹ ನೆನಪುಗಳನ್ನು ಕವನವಾಗಿಸಿದ್ದಾರೆ ಡಾ.ರಜನಿ ಅವರು.

ಯಾವಾಗಲೋ
ಸರಿದ ಮಧುರ
ಕ್ಷಣಗಳ ಮೆಲುಕಲ್ಲಿ..

ನಿನ್ನದೇ ಸ್ಪರ್ಶದ
ಹಳವಂಡದಲ್ಲಿ…

ಮಾತಿನ ವರಸೆಯ
ಗುಂಗಿನಲ್ಲಿ..

ಕೆಂಪು ಗುಲಾಬಿಗೆ
ಹುಡುಕುವ ಹೇರ್ಪಿನ್ನಲ್ಲಿ..

ಕೈ ಒರೆಸಲು ಕೊಟ್ಟ
ಕರ್ಚಿಫ್ ನಲ್ಲಿ…

ಆರ್ಡರ್ ಮಾಡಿದ
ಚಿಕನ್ ಕಬಾಬಿನಲ್ಲಿ

ವೈಟರ್ ಗೆ ಬಿಟ್ಟ
ಟಿಪ್ಸ್ ನಲ್ಲಿ..

ಆಯ್ದು ತಂದ
ಪಾರಿಜಾತದಲ್ಲಿ..

ಯಾವಾಗಲೋ ಉಟ್ಟಿದ್ದ
ಕೆಂಪು ಸೀರೆ ಫೋಟೋದಲ್ಲಿ..

ನಿನ್ನ ನೆನಪುಗಳ
ಭರಾಟೆಯ ತೇರು..

ಹೊಸ ನೆನಪುಗಳ
ಉಂಟು ಮಾಡು ಬಾ..

ಪ್ರೇಮಿಗಳ ದಿನದ
ನೆಪದಲ್ಲಿ.


ಡಾ. ರಜನಿ.

ಪ್ರೇಮಿಗಳ ದಿನಾಚರಣೆ ಕವನ: ಪ್ರೇಮಿಗಳು

0
ನಾಳೆ ಪ್ರೇಮಿಗಳ ದಿನಾಚರಣೆ. ಕಚಗುಳಿ ಇಡುವ ನೆನಪುಗಳ ಮಾತೇ ಮಧುರ. ಪ್ರೇಮಿಗಳ ನೆನಪು, ಆಟೋಟಗಳು ಸಹ ಮಧುರ. ಇಂತಹ ನೆನಪುಗಳನ್ನು ಕವನವಾಗಿಸಿದ್ದಾರೆ ಡಾ.ರಜನಿ ಅವರು.

ಯಾವಾಗಲೋ
ಸರಿದ ಮಧುರ
ಕ್ಷಣಗಳ ಮೆಲುಕಲ್ಲಿ..

ನಿನ್ನದೇ ಸ್ಪರ್ಶದ
ಹಳವಂಡದಲ್ಲಿ…

ಮಾತಿನ ವರಸೆಯ
ಗುಂಗಿನಲ್ಲಿ..

ಕೆಂಪು ಗುಲಾಬಿಗೆ
ಹುಡುಕುವ ಹೇರ್ಪಿನ್ನಲ್ಲಿ..

ಕೈ ಒರೆಸಲು ಕೊಟ್ಟ
ಕರ್ಚಿಫ್ ನಲ್ಲಿ…

ಆರ್ಡರ್ ಮಾಡಿದ
ಚಿಕನ್ ಕಬಾಬಿನಲ್ಲಿ

ವೈಟರ್ ಗೆ ಬಿಟ್ಟ
ಟಿಪ್ಸ್ ನಲ್ಲಿ..

ಆಯ್ದು ತಂದ
ಪಾರಿಜಾತದಲ್ಲಿ..

ಯಾವಾಗಲೋ ಉಟ್ಟಿದ್ದ
ಕೆಂಪು ಸೀರೆ ಫೋಟೋದಲ್ಲಿ..

ನಿನ್ನ ನೆನಪುಗಳ
ಭರಾಟೆಯ ತೇರು..

ಹೊಸ ನೆನಪುಗಳ
ಉಂಟು ಮಾಡು ಬಾ..

ಪ್ರೇಮಿಗಳ ದಿನದ
ನೆಪದಲ್ಲಿ.


ಡಾ. ರಜನಿ.

ಪೌರಕಾರ್ಮಿಕರ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಕಾಂಗ್ರೆಸ್ ಮುಖಂಡ ಶಶಿಧರ್

0

Public story


ತಿಪಟೂರು : ತಾಲ್ಲೂಕಿನ ಬಡವರು, ನೊಂದವರೊಂದಿಗೆ ಸದಾಕಾಲ ನಿಲ್ಲುವ ಮೂಲಕ ಹೆಸರಾಗಿರುವ ಕಾಂಗ್ರೆಸ್ ಮುಖಂಡರಾದ ಜನಸ್ಪಂದನ ಟ್ರಸ್ಟ್ ಅಧ್ಯಕ್ಷರಾದ ಸಿ.ಬಿ.ಶಶಿಧರ್ ಅವರು ಸೋಮವಾರ ಪೌರಕಾರ್ಮಿಕರ ಜತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ತಾಲ್ಲೂಕಿನ ಜನರ ಮೆಚ್ಚುಗೆಗೆ ಪಾತ್ರರಾದರು.

ರವರು ತಮ್ಮ ಹುಟ್ಟು ಹಬ್ಬವನ್ನು ಬೆಳಗಿನ ಜಾವ 6;00 ಗಂಟೆಗೆ ಪೌರಕಾರ್ಮಿಕರೊಂದಿಗೆ ಅಚರಿಸಿಕೊಂಡರು.

ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಳೆ ಚಳಿ ಗಾಳಿ ಎನ್ನದೆ ಕೆಲಸ ಮಾಡುವ ಪೌರಕಾರ್ಮಿಕರು ನಿಜವಾದ ಜನಸೇವಕರು‌ ನಿಮ್ಮ ಸೇವೆ ಶ್ಲಾಘನೀಯ , ಕೊರೋನಾ ದಂತ ಮಾಹಾಮಾರಿಯ ಅಟ್ಟಹಾಸದಲ್ಲಿ ಕೂಡ ನೀವು ಶ್ರಮ ವಹಿಸಿ ಸ್ವಚ್ಚತೆ ಕಾಪಾಡಿದ್ದು ಅದರ ಅಪಾಯ ತಗ್ಗಲು ಕಾರಣವಾಯಿತು ಹುಟ್ಟು ಹಬ್ಬವನ್ನು ನಿಮ್ಮೊಂದಿಗೆ ಅಚರಿಸುತ್ತಿರುವುದು ನನಗೆ ಸಂತೋಷವಾಗಿದೆ ಎಂದರು.

ನಾನು ಈ ದಿನವನ್ನು ಸದಾ ನೆನಪಿನಲ್ಲಿ ಇಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಹುಟ್ಟು ಹಬ್ಬದ ನೆನಪಿಗಾಗಿ 120 ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಸ್ವೆಟರ್ ಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂತೋಷ್ ಮತಿಘಟ್ಟ, ಕಿರಣ್, ಕೆ ಇ ಬಿ ಪುರುಶೋತ್ತಮ, ಗೌತಮ್ ಪೌರಕಾರ್ಮಿಕರ ಸಂಘದ ಕಾಂತರಾಜು, ಅರೋಗ್ಯ ನಿರೀಕ್ಷಕ ಶ್ರೀನಿವಾಸ್ ಸೇರಿದಂತೆ ನೂರಾರು ಪೌರಕಾರ್ಮಿಕರು ಉಪಸ್ಥಿತರಿದ್ದರು.

ನಂತರ ಅಭಿಮಾನಿಗಳ ಜೊತೆ ಹತ್ಯಾಳು ನರಸಿಂಹಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ ತಾಲ್ಲೂಕಿನ ಕಿಬ್ಬನಹಳ್ಳಿ, ಹೊನ್ನವಳ್ಳಿ, ನೊಣವಿನಕೆರೆ ಹಾಗು ಕಸಬಾ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಪೂಜೆ ಹಾಗು ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಹೆಣ್ಣು ಮಗು ದಿನಾಚಣೆ: ಕವನ ಓದಿ- ಪೋರಿ

0
ಹೆಣ್ಣೆಂದರೆ ಏನು? ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಪ್ರಯುಕ್ತ ಡಾ. ರಜನಿ ಬರೆದಿರುವ ಪೋರಿ ಕವನವೂ ಹೆಣ್ಣನ್ನು‌ ನೋಡಬೇಕಾದ ಬಗೆಯನ್ನು ಚಿತ್ರಿಸಿದೆ ಮಾತ್ರವಲ್ಲ ಆಕೆಯ ಶಕ್ತಿ ಏನೆಂಬುದನ್ನು ಹೇಳಿದೆ

ಪೋರಿ
******

ನಾನು ಅಪ್ಪನ ಕನಸು
ಅಮ್ಮನ ಮುದ್ದು ….

ನಾನು ಪಿಂಕ್ ಅಲ್ಲ
ನೀಲಿ ಕಣ್ಣು
ರಕ್ತ ಕೆಂಪು ಏನು ಬೇಕಾದರೂ …

ನಾನು ನಿನ್ನ
ಮಗಳಾಗಲು
ಸಾಧಕಿ ಆಗಬೇಕಿಲ್ಲ …

ನಾನು ರಕ್ತ ಮಾಂಸದ
ಮುದ್ದೆಯಲ್ಲ …

ದೇವರ ಅತ್ಯುನ್ನತ ಸೃಷ್ಠಿ…
ನಾನು ಸೃಷ್ಠಿಸಬಲ್ಲೆ…

ನಾನೇ…

ಒಂದು ಭೂಮಿ
ಒಂದು ನೀಲಿ ಆಕಾಶ…

ನಿನ್ನ ಯೋಚನೆ
ಯೋಜನೆ ನನಗೆ
ಹೇಳಬಲ್ಲೆ…

ನನಗೆ ಆತ್ಮವಿದೆ
ಹೃದಯವಿದೆ….

ನಾನು ಯೋಚಿಸಬಲ್ಲೆ..

ನಾನು…

ನಾನೇ….


ಡಾII ರಜನಿ

ಕವಿತೆ ಓದಿ: ಬಿಸಿಲು

0
ಚಳಿ ಕೊನೆಗಾಣುವಾಗ

ಬಿಸಿಲಿಗೆ ಮಹತ್ವ . ಬಿಸಿಲಲ್ಲಿ ಬಗೆ ಬಗೆ .
ಬಿಸಿಲು ಕೊನೆಯಾಗುವಾಗ ಮಳೆಯ
ಹಂಬಲದ ಆಶಯ ಕವನದಲ್ಲಿ ಕಾಣಿಸಿದ್ದಾರೆ ಡಾ. ರಜನಿ


.ಬಿಸಿಲು


*****

ಮರಗಳ ಮಧ್ಯೆ
ಹೊಂಗಿರಣದಿಂದ
ಶುರು…
ಬಿಸಿಲ ದಾರಿ

ಮಂಜನ್ನು ಸೀಳಿ
ಇಬ್ಬನಿಗೆ
ಕಾವು ಕೊಟ್ಟಿ…

ಬೆಳಗಿನ ಎಳೆ
ಬಿಸಿಲಿಗೆ ಮುಖವೊಡ್ಡಿ
ಬೆನ್ನು ಕಾಯಿಸಿ
ಕಾಫಿ ಹೀರಿ
ಪೇಪರ್ ಓದಿ…

ಉರಿ ಬಿಸಿಲು
ಬಿರು ಬಿಸಿಲಿನಲ್ಲಿ
ಮಧ್ಯಾಹ್ನದ
ಹೊಟ್ಟೆ ಪಾಡು…

ಚುರುಗುಡುವ
ಹೊಟ್ಟೆಗಾಗಿ
ಚುರುಗುಡುವ
ಬಿಸಿಲಲ್ಲಿ ದುಡಿಮೆ…

ಚಳಿಗೆ ಹೊಡೆದ
ಚರ್ಮ ಚುರು
ಚುರು

ನಡುಮನೆಯಲ್ಲಿ
ಬಿಸಿಲು ಮಚ್ಚಿನಿಂದ
ಬಿದ್ದ ಬಿಸಿಲ ಕೋಲು

ಗೇದು ಸಂಜೆ
ಬರುವಾಗ
ಸಾಯಂಕಾಲದ
ಕೆಂಬಿಸಿಲು…

ಬಿಸಿಲಿಗೆ
ಬೆವೆತ
ದುಡಿಯುವ ಕೈಗೆ

ತಂಪು
ನೀರು.


ಡಾ.ರಜನಿ


ಅಂಬಾಸಿಡರ್ ಕಾರು ಹಾಗೂ ಅಣ್ಣನ ನೆನಪು

0

ಮಹೇಂದ್ರ ಕೃಷ್ಣಮೂರ್ತಿ


ನಿನ್ನೆ ಅಂದರೆ ಜನವರಿ 17 ರಂದು ಪಾವಗಡದ ಹಳ್ಳಿಯೊಂದರಿಂದ ಬಂದಿದ್ದ ಶಿವಶಂಕರ್ ಅವರ ಅಂಬಾಸಿಡರ್ ಕಾರಿನೊಳಗೆ ಕುಳಿತ ತಕ್ಷಣ ಅಣ್ಣನ ಲೋಕಕ್ಕೆ ಕರೆದುಕೊಂಡು ಹೋಯಿತು. ಇದೇ ದಿನ ಅಣ್ಣನ ಹನ್ನೊಂದನೇ ವರ್ಷದ ಪುಣ್ಯ ಸ್ಮರಣೆ ಕಾಕತಾಳೀಯವಷ್ಟೇ ಆಗಿತ್ತು.

ಬನ್ನಿ ಗುರುಗಳೇ ಎಂದೇ ಕರೆಯುವ ಶಿವ ಶಂಕರ್ ಅವರ ಕಾರು ನೋಡಿದಾಗ ಅಚ್ಚರಿಯಾಯಿತು.

ಹೊಸ ತಲೆಮಾರಿನ ಜನರಿಂದ ಮರತೇ ಹೋದಂತಿರುವ ಅಂಬಾಸಿಡರ್ ಕಾರನ್ನು ಅವರು ಜತನದಿಂದ ಕಾಪಿಟ್ಟುಕೊಂಡು ಬಂದಿದ್ದಾರೆ.

ಇದು ಪ್ರಧಾನ ಮಂತ್ರಿಗಳ ಕಾರು, ಭಯ ಬೀಳಬೇಡಿ ಎಂದರು. ಹಿಂದೆಲ್ಲ ಅಂಬಾಸಿಡರ್ ಕಾರು ಎಂದರೆ ಅದು ಪ್ರಧಾನಿಗಳು, ಮುಖ್ಯಮಮಂತ್ರಿಗಳ ಭದ್ರತೆಯ ಕಾರಾಗಿತ್ತು. ಹೀಗಾಗಿ ಅದನ್ನು ಬಳಸುವುದು ಅತಿ ಪ್ರತಿಷ್ಠೆಯ ವಿಷಯವಾಗಿತ್ತು.

ಅಂಬಾಸಿಡರ್ ಕಾರು ನನ್ನ ತಂದೆಯವರ ಅಚ್ಚುಮೆಚ್ಚಿನ ಕಾರು. ನಾವು ಸಣ್ಣವರಿದ್ದಾಗ ಅಣ್ಣ ಸಾಕಷ್ಟು ಸಲ ಅದರ ಬಗ್ಗೆ ಹೇಳುತ್ತಿದ್ದರು. ಮಧ್ಯ ರಾತ್ರಿಗಳಲ್ಲಿ ಯಾರು, ಯಾರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುವ ಪ್ರಸಂಗಗಳು, ಜೀವ ಬದುಕಿಸಿದ ಸಂತಸಗಳನ್ನು ಹಂಚಿಕೊಳ್ಳುತ್ತಿದ್ದರು. ನಾವು ಸಣ್ಣವರಿದ್ದ ಕಾರಣ ಅಷ್ಟೊಂದು ನೆನಪಿಲ್ಲ. ಆದರೆ ಈ ಎಲ್ಲ ಅವರ ಸಹಾಯ ಹಸ್ತದ ಕತೆಗಳನ್ನು ಹೇಳುವ ವೇಳೆಗೆ ಅವರು ಕಾರು ಮಾರಾಟ ಮಾಡಿದ್ದರು. ತೀರಾ ಬಡತನದಲ್ಲಿದ್ದರು.

ಕನ್ನಡದ ಹೋರಾಟದ ಹುಚ್ಚು ಹತ್ತಿಸಿಕೊಂಡಿದ್ದ ಅಣ್ಣನಿಗೆ ಕನ್ನಡ ಹೋರಾಟಗಾರ, ಮ.ರಾಮಮೂರ್ತಿ ಅವರ ಬಗ್ಗೆ ವಿಶೇಷ ಪ್ರೀತಿ. ಅವರ ನೆನಪಿಗಾಗಿ ಅಣ್ಣ ತಮ್ಮ ಸಹಿಯನ್ನು ಬದಲಿಸಿಕೊಂಡಿದ್ದರು.

ಕನ್ನಡದ ಹೋರಾಟದಿಂದ ರೈತ ಹೋರಾಟದ ಕಡೆಗೆ ಆಕರ್ಷಿತರಾಗಿ ಪಿಡಬ್ಲ್ಯುಡಿ ಗುತ್ತಿಗೆದಾರಿಕೆಯನ್ನು ಬಿಟ್ಟು ಕಡುಕಷ್ಟಕ್ಕೆ ಬಂದಿದ್ದು ಬೇರೆಯದೇ ಕತೆ. ವೈ.ಕೆ.ರಾಮಕೃಷ್ಣಯ್ಯ ಅಣ್ಣನ ಸ್ನೇಹಿತರು.

ಹೋರಾಟದ ಹಾದಿಯಲ್ಲಿ ಕಳೆದುಕೊಂಡ ಅಂಬಾಸಿಡರ್ ಕಾರಿನ ಬಗ್ಗೆ ಎಂದೂ ವ್ಯಥೆ ಪಟ್ಟವರಲ್ಲ ಅಣ್ಣ. ರೈತ ಸಂಘ ಚುನಾವಣೆಗೆ ನಿಂತು, ಸೋತು, ಮತ್ತೇ ಚುನಾವಣೆಗೆ ನಿಲ್ಲದಂತ ಸ್ಥಿತಿಗೆ ಬಂದಂತ ದಿನಗಳು ಅವು.

ರೈತ ಸಂಘದ ಚುನಾವಣೆಯ ಸೋಲು ಅವರಿಗೆ ಸಂಘದ ಸೋಲಾಗಿರಲಿಲ್ಲ. ಅವರಿಗೆ ವಿಪರೀತವಾದ ನಂಬಿಕೆ ಇತ್ತು. ರೈತ ಸಂಘದ ಸರ್ಕಾರ ಬರಲಿದೆ. ಹೀಗಿರುವ ಪಕ್ಷಗಳಿಗೆ ಉಳಿಗಾಲ ಇರುವುದಿಲ್ಲ ಎಂಬುದು ಅವರ ತರ್ಕ.

ರೈತರ ಮಕ್ಕಳಿಗೆ ಉಚಿತ ಶಿಕ್ಷಣ, ಸ್ಕಾಲರ ಶಿಪ್ ಸಿಗಬೇಕು ಎನ್ನುತ್ತಿದ್ದರು. ಈಗಿನ ಬಸವರಾಜ್ ಬೊಮ್ಮಾಯಿ ಸರ್ಕಾರ ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ಯೋಜನೆ ಜಾರಿಗೆ ತಂದಿದೆ. ಇದು ಅಣ್ಣನ ಕಲ್ಪನೆಯಾಗಿತ್ತಲ್ಲ ಅನ್ನಿಸಿತು.

ಹೋರಾಟಗಾರರಲ್ಲಿ ನಾನು ಎರಡು ಪಂಗಡಗಳನ್ನು ಗುರುತಿಸಿಕೊಂಡಿದ್ದೇನೆ. ಹೋರಾಟಗಾರರಾದ ನಂತರ ಆಸ್ತಿ, ರಾಜಕೀಯ ಶಕ್ತಿ, ಮಾಧ್ಯಮಗಳಲ್ಲಿ ಪ್ರಚಾರ, ಮಂಚೂಣಿ ನಾಯಕತ್ವದ ಮುಂದಾಳುಗಳಾಗಿ ಎಲ್ಲವನ್ನು ಅನುಭವಿಸುವರು.

ಇನ್ನೊಂದು ಪಂಗಡ. ಆಸ್ತಿ, ಅಂತಸ್ತು, ಶ್ರೀಮಂತಿಕೆಯ ಜತೆಗೆ ಬಂದವರು, ಹೋರಾಟದ ಹುಚ್ಚು ಹತ್ತಿಸಿಕೊಂಡು ಅವರು ಏನು ಅಲ್ಲದಂತೆ ಎಲ್ಲವನ್ನು ಕಳೆದುಕೊಂಡು ಸಂಸಾರವನ್ನು ಬೀದಿ ಪಾಲು ಮಾಡುವರು ಅಥವಾ ನಿರ್ಗತಿಕ ಸ್ಥಿತಿಗೆ ತಂದುಕೊಂಡು ತಮ್ಮದೇ ಸಂಘಟನೆಗಳಲ್ಲಿ ಮೂಲೆ ಗುಂಪಾಗುವರು.

ಸಂಘಟನೆಗೆ ಬಂದು ರಕ್ತ ಕಣ್ಣೀರಾದವರ ಉದಾಹರಣೆಗಳು ಎಲ್ಲ ಕಡೆಯೂ ಇದೆ. ನಿಜವಾದ ಹೀರೋಗಳು ತೆರೆಮೆರೆಗೆ ಸರಿದು ಹೋಗಿ ಬಿಡುತ್ತಾರೆ. ಅಣ್ಣನೂ ಇಂಥವರ ಸಾಲಿನಲ್ಲಿ ಸೇರಿ ಹೋದರು. ಆದರೆ ಬಡವರು, ದಲಿತರು, ರೈತರು, ಕೂಲಿ ಕಾರ್ಮಿಕರ ಪರ ಹೋರಾಟಗಾರರು ಬೇಕು ಅನ್ನುತ್ತಿದ್ದರು. ನನ್ನನ್ನು ಸರ್ಕಾರಿ ನೌಕರ ಆಗಬೇಕು ಎಂದೂ ಹೇಳಲಿಲ್ಲ. ರೈತರ ಪರ ಹೋರಾಟಗಾರನಾಗಬೇಕು ಎಂಬುದೇ ಅವರ ಆಸೆಯಾಗಿತ್ತು. ಕಳೆದುಹೋದ ಅಂಬಾಸಿಡರ್ ಕಾರಿನ ಬಗ್ಗೆ ಎಂದೂ ವ್ಯಥೆ ಪಟ್ಟಿದ್ದನ್ನು, ಅದನ್ನು ಮರಳಿ ಗಳಿಸಬೇಕೆಂದು ಅವರು ಎಂದೂ ಕನವರಿಸಲಿಲ್ಲ. ಆದರೆ ರೈತರ ಸರ್ಕಾರ ಬಂದೇ ಬರಲಿದೆ ಎಂಬ ಅವರ ನಂಬಿಕೆಗೆ ನಾವುಗಳು ಪದೇಪದೇ ಕಿವಿಗಳಾಗಬೇಕಿತ್ತು. ಹಾಗೇ, ನಗಾಡುತ್ತಿದ್ದವು.

ಅಪ್ರತಿಮಾ ರೈತ ಹೋರಾಟಗಾರದ ಪ್ರೊಫೆಸರ್ ನಂಜುಂಡಸ್ವಾಮಿ ಅವರು ಕಡೇ ಗಳಿಗೆಯಲ್ಲಿ ಮಲಗಿದ್ದ ಕಿದ್ವಾಯಿ ಆಸ್ಪತ್ರೆಯ ಪಕ್ಕದ ವಾರ್ಡ್ ನಲ್ಲಿ ಅಣ್ಣನೂ ಚಿಕಿತ್ಸೆ ಪಡೆದದ್ದು ಮಾತ್ರ ದುರಂತ. ಎಂದೂ ಸಿಗರೇಟ ಸೇದದ ಅವರು ರೈತದ ಸಂಘದ ಸಂಪರ್ಕಕ್ಕೆ ಬಂದ ನಂತರ ಚೈನ್ ಸ್ಮೋಮ್ಕರ್ ಆಗಿದ್ದು, ಎಷ್ಟೋ ವರ್ಷಗಳಾದ ಬಳಿಕ ಬಿಟ್ಟಿದ್ದು ಮತ್ತೊಂದು ನೆನಪು.

ಅಂದರೆ ಹೋರಾಟದ ಹಾದಿಯಲ್ಲಿ ಎಲ್ಲವನ್ನು ಕಳೆದುಕೊಂಡು ಮೂಲೆ ಗುಂಪಾದವರ ಬಗ್ಗೆ ಬರೆಯಬೇಕು ಎನ್ನಿಸುತ್ತದೆ. ಕಳೆದ ವರ್ಷ ತೀರಿಕೊಂಡ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿದ್ದ ದೇವರಾಜಣ್ಣ ಅವರ ಕನಸು ಇದೇ ಆಗಿತ್ತು.‌ ಕಳೆದು ಹೋದವರು ಬರೀ ರೈತ ಸಂಘದಲ್ಲಿ ಮಾತ್ರವೇ ಇಲ್ಲ ಕಮ್ಯೂನಿಷ್ಟರು, ಸಂಘ ಪರಿವಾರದಲ್ಲೂ ಇದ್ದಾರೆ. ಅವರ ಮನೆಯವರನ್ನು ನೋಡಿದಾಗ, ಇಲ್ಲಾ ಅವರನ್ನೇ ನೋಡಿದಾಗ ಹೋರಾಟದ ಆಂತರ್ಯದಲ್ಲೂ ಇರುವ ಕುತಂತ್ರ, ರಾಜಕಾರಣ, ಜಾತಿಯ ಗುಮ್ಮ, ಗುಂಪುಗಾರಿಕೆ ಕಾಣ ಸಿಗುತ್ತದೆ. ಮತ್ತದೇ ಪ್ರಶ್ನೆ ಮೂಡುತ್ತದೆ… ಮಾನವ ರಾಜಕಾರಣವು ಎಲ್ಲ ಕಾಲ, ದೇಶ, ಸಿದ್ದಾಂತಿಗಳಲ್ಲಿ ಹೀಗಿಯೇ ತೆರೆಮರೆಯಲ್ಲಿ ನಗುತ್ತಿರುತ್ತದೆ. ಶಿಕಾರಿಯ ಜನಕಾರಣದಿಂದ ಚಳವಳಿ, ಸಿದ್ದಾಂತಗಳು ಸತ್ತು ಮತ್ತೇ ಹೊಸ ಮುಖಗಳಾಗಿ ರೂಪುಗೊಳ್ಳುತ್ತವೆ.

ಕಳೆದು ಹೋದ ನನ್ನ ಜನರ ಬಗ್ಗೆ ಬರವಣಿಗೆ ಆರಂಭಿಸುವುದೊಂದೇ ಅವರಿಗೆ ನಾವು ಸಲ್ಲಿಸುವ ಕೃತಜ್ಞತೆ ಎಂಬುದು ನನ್ನ ಅನಿಸಿಕೆ. ಆಸಕ್ತರು ಕೈಜೋಡಿಸಿ ಬರವಣಿಗೆ ಆರಂಭಿಸಿ.