Saturday, May 9, 2026
Google search engine
Home Blog Page 134

ಮೃತ ಶಿಕ್ಷಕರಿಗೆ ಪರಿಹಾರ ವೈ ಎ ಎನ್

ಕೋವಿಡ್ನಿಂದ ಮೃತಪಟ್ಟ ಖಾಸಗಿ ಶಾಲಾ ಶಿಕ್ಷಕರ ಕುಟುಂಬಕ್ಕೆ 10 ಸಾವಿರ ನೀಡಲು ಚಿಂತನೆ : ಡಾ.ವೈ.ಎ.ನಾರಾಯಣಸ್ವಾಮಿ

ತುರುವೇಕೆರೆ: ಕೋವಿಡ್ನಿಂದ ಶಾಲೆಗಳು ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ ಮಕ್ಕಳು ಮೊಬೈಲ್ ದಾಸರಾಗಿದ್ದು, ಲಕ್ಷಾಂತರ ಮಂದಿ ಖಾಸಗಿ ಶಾಲಾ ಶಿಕ್ಷಕರು ಮತ್ತು ಸು.1 ಕೋಟಿಗೂ ಹೆಚ್ಚು ಮಕ್ಕಳ ಭವಿಷ್ಯ ಅತಂತ್ರಗೊಂಡಿದ್ದು ಇವೆಲ್ಲಕ್ಕೂ ಪರಿಹಾರವಾಗಿ ಆಗಸ್ಟ್ ಮೊದಲ ವಾರದಿಂದಲೇ ರಾಜ್ಯದ ಎಲ್ಲ ಶಾಲಾಗಳನ್ನು ತೆರೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಡಾ.ವೈ.ಎ.ನಾರಾಯಣಸ್ವಾಮಿ ಮತ್ತು ಚಿದಾನಂದ್ ಎಂ.ಗೌಡ ಸ್ನೇಹಿತರ ಬಳಗವು ಹಮ್ಮಿಕೊಂಡಿದ್ದ ಖಾಸಗಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಬಿಜೆಪಿ ಸಕರ್ಾರ ಖಾಸಗಿ ಶಾಲಾ ಶಿಕ್ಷಕರ ಹಿತ ಕಾಪಾಡಲು ನ್ಯೂ ಎಜುಕೇಷ್ ಪಾಲಿಸಿಯಲ್ಲಿ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ನೀಡಲು ಹೆಚ್ಚಿನ ಚಿಂತನೆ ನಡೆಸಿದೆ. ಆಯುಷ್ಮಾನ್ ಭಾರತ್ ಕಾರ್ಡ್ನ್ನು ಸರ್ಕಾರ ಸಾಕಷ್ಟು ಜನರಿಗೆ ನೀಡಿದೆ. ಅದೇ ರೀತಿ ಖಾಸಗಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಉಚಿತ ಆರೋಗ್ಯ, ಚಿಕಿತ್ಸೆ ನೀಡುವ ಚಿಂತನೆಯನ್ನು ಮುಂದಿನ ದಿನಗಳಲ್ಲಿ ನಡೆಸಲಿದೆ.
ಕೋವಿಡ್ನಿಂದ ಸಾವನ್ನಪ್ಪಿದ ಖಾಸಗಿ ಶಾಲಾ ಶಿಕ್ಷಕರ ಮನೆಗೆ ಭೇಟಿ ನೀಡಿ, ಅವರಿಗೆ ಸಾಂತ್ವಾನ ಹೇಳಿ ಕನಿಷ್ಠ 10 ಸಾವಿರ ಹಣ ನೀಡುವ ಚಿಂತನೆಯನ್ನು ನಾನು ಮತ್ತು ಎಂ.ಎಲ್.ಸಿ ಚಿದಾನಂದ್ ಎಂ.ಗೌಡ ಇಬ್ಬರೂ ಒಟ್ಟಿಗೆ ನೀಡುವ ಭರವಸೆ ವ್ಯಕ್ತಪಡಿಸಿದರು.
ಕೋವಿಡ್ ವೇಳೆ ಎಲ್ಲ ರಾಜ್ಯಗಳಲ್ಲೂ ಶಿಕ್ಷಕರ, ನೌಕರರ ತಿಂಗಳ ವೇತನದಲ್ಲಿ ಅರ್ಧ ಹಣವನ್ನು ಕಟಾಯಿಸಿ ನೀಡಿವೆ. ಆದರೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪರು ನೌಕರರು ಮತ್ತು ಶಿಕ್ಷಕರ ಕುಟುಂಬಕ್ಕೆ ತೊಂದರೆಯಾಗದಂತೆ ಪೂರ್ಣ ಪ್ರಮಾಣದ ಸಂಬಳವನ್ನು ನೀಡಿದೆ. ಸರ್ಕಾರ ಇನ್ನು ಎರಡು ವರ್ಷ ಸುಭದ್ರವಾಗಿ ನಡೆಯಲಿದ್ದು ಶಿಕ್ಷಣಕ್ಕೆ, ಶಿಕ್ಷಕರಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂದರು.
ವಿಧಾನ ಪರಿಷತ್ ಸದಸ್ಯ ಚಿಂದಾನಂದ್ ಎಂ.ಗೌಡ ಮಾತನಾಡಿ, ಕೋವಿಡ್ ವೇಳೆ ಖಾಸಗಿ ಶಾಲಾ ಶಿಕ್ಷಕರು ಮತ್ತು ಅವರ ಕುಟುಂಬ 17 ತಿಂಗಳು ಸಂಬಳವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದವು. ಇದನ್ನರಿತು. ನಾನು ಮತ್ತು ವೈ.ಎನ್.ನಾರಾಯಣಸ್ವಾಮಿ ಇಬ್ಬರೂ ಕನಿಷ್ಠ 25 ಸಾವಿರ ನೀಡಬೇಕೆಂದು ಶಿಕ್ಷಣ ಸಚಿವರು ಮತ್ತು ಸಿಎಂ ಅವರ ಬಳಿ ಕೇಳಿಕೊಂಡಾಗ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ 5 ಸಾವಿರ ನೀಡುವುದಾಗಿ ಒಪ್ಪಿಕೊಂಡರು. ಇದಕ್ಕೆ ಶಿಕ್ಷಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು, ಈಗಾಗಲೇ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಸು.15 ಸಾವಿರ ಖಾಸಗಿ ಶಾಲಾ ಶಿಕ್ಷಕರುಗಳಿಗೆ ಆಹಾರದ ಕಿಟ್ ವಿತರಿಸಲಾಗಿದೆ ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕರಾದ ಕೆ.ನಾಗರಾಜಪ್ಪ ಮತ್ತು ಭೈರಪ್ಪಾ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮಾಯಣ್ಣಗೌಡ, ರೆಡ್ಡಿ, ವಕೀಲ ಧನಪಾಲ್, ವಿದ್ಯಾರಣ್ಯ ಶಾಲೆಯ ಆಡಳಿತಾಧಿಕಾರಿ ಜಯಣ್ಣ, ಇಂಡಿಯನ್ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ್, ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್.ನಾಗರಾಜಪ್ಪ, ಪಾಪಣ್ಣ, ಚಂದ್ರಶೇಖರ್ ಇದ್ದರು.

ಪತ್ರಕರ್ತ ರಮೇಶ್ ಬಾಬು ತಾಯಿ ಇನ್ನಿಲ್ಲ

ಪಬ್ಲಿಕ್ ಸ್ಟೋರಿ.ಇನ್


ತುಮಕೂರು: ಪತ್ರಕರ್ತ, ಮಾಹಿತಿ ಹಕ್ಕು ಕಾರ್ಯಕರ್ತರಾದ ರಮೇಶ್ ಬಾಬು ಅವರ ತಾಯಿ ಜಯಲಕ್ಷ್ಮಮ್ಮ ಅವರು ಮಂಗಳವಾರ ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾದರು.

ಮೃತರ ಪಾರ್ಥಿವ ಶರೀರವನ್ನು ಮಂಗಳವಾರ ಮೃತರ ಸ್ವಗೃಹದಲ್ಲಿ ಇಡಲಾಗಿತ್ತು. ಬುಧವಾರ ಬೆಳಿಗ್ಗೆ ತಿಪಟೂರು ತಾಲ್ಲೂಕು ಹೊನ್ನವಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಮೃತರಿಗೆ ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ನ್ಯಾಯಂಗದ ಕ್ರಿಯಾಶೀಲತೆ ಮೆಚ್ಚುವಂತದ್ದು.

ತುಮಕೂರು: ಕೋವಿಡ್ ಮೊದಲ ಮತ್ತು ಎರಡನೇ ಲಾಕ್ ಡೌನ್ ನಿಂದ ಜಗತ್ತೇ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದು ಬಿಟ್ಟು, ತಮ್ಮ ಸ್ವಾರ್ಥ ಮೆರೆದು ಅನ್ಯಾಯದೆಡೆಗೆ ಸಾಗಿದ್ದವು. ಇದನ್ನು ಸುಪ್ರೀಂ ಮತ್ತು ಹೈಕೋರ್ಟ್ ಗಳು ಪ್ರಶ್ನಿಸಿ ನ್ಯಾಯ ಜರುಗುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದವು ಎಂದು ಸಿ.ಐ.ಟಿ.ಯು ನ ರಾಜ್ಯ ಕಾರ್ಯದರ್ಶಿಗಳಾದ ಕೆ.ಎನ್.ಉಮೇಶ್ ತಿಳಿಸಿದರು.


ನಗರದ ಕನ್ನಡ ಭವನದಲ್ಲಿಂದು (ಜು೧೮) ಸುಫಿಯಾ ಕಾನೂನು ಕಾಲೇಜು ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಡಾ.ರಮೇಶ್ ಅವರ ಅಭಿನಂದನಾ ಸಮಾರಂಭ ಹಾಗೂ ಅಭಿವ್ಯಕ್ತಿ ಸ್ವಾತಂತ್ರ‍್ಯ, ಮಾಧ್ಯಮ ಮತ್ತು ನ್ಯಾಯಾಂಗದ ಪ್ರಸ್ತುತತೆ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ರಾಷ್ಟ್ರದೆಲ್ಲೆಡೆ ಸಮಾನತೆ, ನ್ಯಾಯ, ಪ್ರಾಮಾಣಿಕತೆ ಮರೆಯಾಗಿ ಅಧರ್ಮ, ಆನ್ಯಾಯ ಅಕ್ರಮಗಳೇ ಹೆಚ್ಚಾಗುತ್ತಿವೆ. ಇತ್ತೀಚೆಗಿನ ಪ್ರವೃತ್ತಿಗಳಂತೂ ಇನ್ನು ಮಿತಿ ಮೀರಿವೆ. ಇದನ್ನೆಲ್ಲಾ ಪ್ರಶ್ನಿಸುವವರೇ ಇಲ್ಲದಂತಾಗಿರುವುದು ಬೇಸರದ ಸಂಗತಿ ಎಂದರು. ಕೋವಿಡ್ ಸಂದರ್ಭದಲ್ಲಿ ನ್ಯಾಯಾಂಗದ ಕೊಡುಗೆ ಅಪಾರವಾಗಿತ್ತು. ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆಯಿದ್ದಾಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡದೇ ಹೋಗದಿದ್ದರೆ ರಾಜ್ಯದಲ್ಲಿ ಸಾವಿನ ಸಂಖ್ಯೆ ಅಸಂಖ್ಯೆಯಾಗಿರುತ್ತಿತ್ತು ಎಂದು ಅವರು ಹೇಳಿದರು.

ರಾಷ್ಟ್ರಕ್ಕೆ ಜಸ್ಟೀಸ್ ವಿ.ಆರ್.ಕೃಷ್ಣ ಅಯ್ಯರ್ ಅವರ ಕೊಡುಗೆ ಅಪಾರವಾಗಿದೆ. ಅನೇಕ ಕಾನೂನುಗಳನ್ನು ರೂಪಿಸಿರುವುದು, ಎಂತಹದೇ ಸಂದರ್ಭದಲ್ಲಿ ನ್ಯಾಯವನ್ನು ಎತ್ತಿ ಹಿಡಿಯುತ್ತಿದ್ದರು. ಇಂತಹ ಅಮೋಘ ನ್ಯಾಯ ಸಾಧಕರ ಕುರಿತು ರಮೇಶ್ ಎಸ್ ಅವರು ಕುವೆಂಪು ವಿವಿಯಲ್ಲಿ ಸಂಶೋದನಾ ಪ್ರಬಂಧ ಮಂಡಿಸಿ ಪಿಎಚ್.ಡಿ ಪಡೆದಿರುವುದು ಹೆಮ್ಮೆಯ ವಿಷಯ ಎಂದು ರಮೇಶ್ ಅವರಿಗೆ ಅಭಿನಂದಿಸಿದರು.

ರಾಮನಗರ ಸ್ನಾತಕೋತ್ತರ ಕೇಂದ್ರ ವಿಶೇಷಾಧಿಕಾರಿ ಹಾಗೂ ಜ್ಞಾನಭಾರತಿ ಕನ್ನಡ ಅಧ್ಯಯನ ಕೇಂದ್ರದ ಪ್ರೊ. (ಡಾ.) ಡೊಮಿನಿಕ್.ಡಿ ಅವರು ಮಾತನಾಡಿ, ಅತೀ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ಆಧುನೀಕರಣದಿಂದ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ, ಅಸತ್ಯ ಅನ್ಯಾಯ ರಾರಾಜಿಸುತ್ತಿದೆ. ನೂತನ ತಂತ್ರಜ್ಞಾನದಿAದ ಅಭಿವ್ಯಕ್ತಿ ಸ್ವಾತಂತ್ರ‍್ಯವು ಹರಣವಾಗುತ್ತಿದೆ. ಮಾಧ್ಯಮಗಳು ಗುಣಮಟ್ಟದ ಸುದ್ದಿ ಬಿಟ್ಟು ಬೇರೆಲ್ಲವನ್ನು ತೋರಿಸುತ್ತಿದೆ. ಹೀಗೆ ಮುಂದುವರೆದಲ್ಲಿ ಇದು ಇನ್ನು ಯಾವ ಹಂತ ತಲುಪುತ್ತದೆಯೋ ಎಂದು ಆತಂಕ ವ್ಯಕ್ತಪಡಿಸಿದರು. ಜಾತಿ, ಮತ, ಪಂಥ ಎಂದು ಕಚ್ಚಾಡುತ್ತಾ ನಾವೇ ಅವನತಿಯತ್ತ ಸಾಗುತ್ತಿದ್ದೇವೆ ಇದು ಬದಲಾಗಬೇಕಿದೆ ಎಂದರು.

ಎ.ಸ್ಟಡಿ ಆನ್ ಜ್ಯುಡಿಷಿಯಲ್ ಆಕ್ಟಿವಿಸಂ ವಿತ್ ಸ್ಪೆಷಲ್ ರೆಫರೆನ್ಸ್ ಟು ಕಾಂಟ್ರಿಬ್ಯೂಷನ್ ಆಫ್ ಜಸ್ಟೀಸ್ ವಿ.ಆರ್. ಕೃಷ್ಣ ಅಯ್ಯರ್ ಕುರಿತ ಸಂಶೋಧನಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಕಾನೂನು ವಿಭಾಗದಲ್ಲಿ ಪಿಎಚ್ಡಿ ಪದವಿ ಪಡೆದಿರುವ ಡಾ. ರಮೇಶ .ಎಸ್ ಅವರನ್ನು ಗೌರವಿಸಿ ಸನ್ಮಾನ ಮಾಡಲಾಯಿತು. ಅವರ ಅಪಾರವಾದ ಅಭಿಮಾನಿ ಬಳಗದವರು, ಆತ್ಮೀಯರು, ಸ್ನೇಹಿತರು, ಗುರುಗಳು ಎಲ್ಲರು ಅಭಿನಂದಿಸಿ ಶುಭಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ.ಪೂ.ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಪ್ರೊ.ಕೆ. ದೊರೈರಾಜ್ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಶೋಧನಾ ವಿಭಾಗದ ಮುಖ್ಯಸ್ಥರು (ಕಾನೂನು), ಅಲೆಯನ್ಸ್ ವಿ.ವಿ ಬೆಂಗಳೂರು ಹಾಗೂ ನಿವೃತ್ತ ಕುಲಸಚಿವರು (ಮೌಲ್ಯಮಾಪನ), ಕೆ.ಎಸ್.ಎಲ್.ಯು ನ ಪ್ರೊ. (ಡಾ.) ಬಿ.ಎಸ್. ರೆಡ್ಡಿ, ಮಾಜಿ ಶಾಸಕರು ಹಾಗೂ ಹೆಚ್.ಎಂ.ಎಸ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಡಾ. ಎಸ್. ಷಫಿ ಅಹಮದ್, ತುಮಕೂರಿನ ವಕೀಲರ ಸಂಘದ ಅಧ್ಯಕ್ಷರಾದ ದೊಡ್ಡಮನೆ ಗೋಪಾಲಗೌಡರು, ತುಮಕೂರಿನ ಗಂಗಾವಾಹಿನಿ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಆರ್. ಕಾಮರಾಜ್, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಪತ್ರಕರ್ತ ಸಿ.ಕೆ.ಮಹೇಂದ್ರ, ಅನೇಕ ಪತ್ರಕರ್ತರು, ವಕೀಲರು, ಮುಖಂಡರು, ಮಾಧ್ಯಮ ಮತ್ತು ಕಾನೂನು ವಿದ್ಯಾರ್ಥಿಗಳು ಹಾಜರಿದ್ದರು.

ಭಾನುವಾರದ ಕವಿತೆ: ಸುಂಯ್ ಗಾಳಿ

ಡಾ. ರಜನಿ ಅವರ ಕವನಗಳೆಂದರೆ ಪ್ರಕೃತಿ ಮತ್ತು ಬದುಕಿನ ಮಿಳಿತದ ಅನುಭೂತಿ. ಈಗ ನವಜೋಡಿಗಳಿಗೆ ವಿರಹ ವೇದನೆ. ಬೇರೆಯವರಿಗೆ ತಣ್ಣನೆಯ ಮಳೆಯ ಆಹ್ಲಾದನೆ. ಎರಡರ ಮಿಶ್ರಣವೇ ಈ ಕವನ. ಬದುಕು ಹೀಗೆ ಅಲ್ಲವೇ? ಆಷಾಢದ ಜಡಿ ಮಳೆ, ಸುಟ್ಟ ಮುಸುಕಿನ ಜೋಳ, ದಿನನಿತ್ಯ ಕಾಣುವುದರಲ್ಲಿ ಹೆಂಡತಿಯ ನೆನಪು,
ತಣ್ಣನೆ ಮಳೆಯಲ್ಲೂ ಮಧುರ ನೆನಹು ಬೆಚ್ಚಗೆ .


ಸುಂಯ್ ಗಾಳಿ

ತೀಡಿ ತಿಕ್ಕುವ ತಣ್ಣನೆ
ಗಾಳಿ..
ತವರಿಗೋದ ನೀನು

ಒಳಗೊಳಗೆ ಗುದುಗುಟ್ಟಿ
ಮೆತ್ತನೆ ..
ಚಾದರ ನಿನ್ನ ಕೆನ್ನೆ

ಮದ್ಯಾಹ್ನ ದ ನೀಲಿ ಬಿಳೀ
ಮೋಡ..
ನಿನ್ನ ಮುಂಗುರುಳು

ಗಾಳಿಪಟ ನಲಿದು ಹಾರಿ
ಬರೆದ..
ನಿನ್ನ ಹೆಸರು

ಕೆರೆಯ ಮೇಲೆ ಬೀಸಿ
ತಂದ..
ನಿನ್ನ ಬಿಸಿ

ಕಿಟಕಿಯ ಸಂದಿಯಲಿ ತೂರಿ
ಪಿಸುಗರೆದ..
ನಿನ್ನ ಉಸಿರು

ಪಟ ಪಟನೆ ಬಡಿದ ರೆಕ್ಕೆಯ
ಪಕ್ಷಿ..
ನಿನ್ನ ನಗು

ಸುಟ್ಟ ಜೋಳದಲ್ಲಿ
ನಿನ್ನ ..
ಸುವಾಸನೆ

ಕಪ್ಪು ಜಮ್ಮು ನೇರಳೆ
ಹಣ್ಣು..
ನಿನ್ನ ಕಣ್ಣು

ತುಟಿ ಮೇಲಿನ
ಬೆವರು..
ಬೀಳುತ್ತಿರುವ ಸೋನೆ

ಸುಂಯ್ ಗುಡುವ
ಗಾಳಿ..
ನೀಲಿ ಆಷಾಡ

ಎದೆಗೂಡ ಬಳಸಿದ್ದ
ಮುಂಗೈ..
ಬಾಳೆ ದಿಂಡು

ತಣ್ಣನೆ ತಂಪು ಮಳೆ
ಹಿಂಗಿ..
ಭೂಮಿ ಬೆಚ್ಚಗೆ

ಡಾ II ರಜನಿ

ಭಾನುವಾರ ಡಾ. ಎಸ್.ರಮೇಶ್ ಗೆ ಅಭಿನಂದನಾ ಸಮಾರಂಭ, ವಿಚಾರ ಸಂಕಿರಣ

ಪಬ್ಲಿಕ್ ಸ್ಟೋರಿ


ತುಮಕೂರು: ನಗರದ ಸೂಫಿಯಾ ಕಾನೂನು ಕಾಲೇಜು, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ಇದೇ ಭಾನುವಾರ ಜುಲೈ 18ರಂದು‌ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಡಾ. ಎಸ್.ರಮೇಶ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ವಿಚಾರಗೋಷ್ಠಿ ಆಯೋಜಿಸಿದೆ.

ಕಾನೂನು ಕಾಲೇಜಿ‌ನ ಪ್ರಾಂಶುಪಾಲರಾದ ಎಸ್. ರಮೇಶ್ ಅವರು ಈಚೆಗಷ್ಟೇ ಕಾನೂನು ವಿಭಾಗದಲ್ಲಿ ಶಿವಮೊಗ್ಗ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ರಮೇಶ್ ಅವರು ವಿದ್ಯಾರ್ಥಿ ದೆಸೆಯಿಂದಲೂ ವಿದ್ಯಾರ್ಥಿ, ಯುವಜನರ ಸಂಘಟನೆಯಲ್ಲಿ ತೊಡಗಿದ್ದವರು. ಪತ್ರಕರ್ತರಾಗಿಯೂ ಹೆಸರು ಗಳಿಸಿದವರು.

ಹೈಕೋರ್ಟ್ ವಕೀಲರಾಗಿಯೂ ಹೆಸರು ಮಾಡಿದವರು. ವರದಕ್ಣಿಣೆ ವಿರೋಧಿ ವೇದಿಕೆ, ಸ್ವಾಂತನಾ ಕೇಂದ್ರದ ಮೂಲಕ ಅಬಲ ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಡಿದವರು. ತುಮಕೂರಿನ ಅನೇಕ ಸರ್ಕಾರಿ ಶಾಲಾ,‌ಕಾಲೇಜುಗಳ ಉಳಿವಿಗಾಗಿ ಮುಂಚೂಣಿ ಹೋರಾಟ ರೂಪಿಸಿದವರು.

ಅವರು ಸಿಡಬ್ಲ್ಯುಸಿ ಯ ಸದಸ್ಯರಾಗಿದ್ದ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಅನೇಕ ಮಹತ್ವದ ಕೆಲಸ ಮಾಡಿದ್ದಾರೆ.

ಅವರ ಅವಧಿಯಲ್ಲಿ ಬಾಲ ಕಾರ್ಮಿಕರಾಗಿದ್ದ ಅನೇಕ ಮಕ್ಕಳು ಶಾಲೆ ಕಾಣುವಂತಾಯಿತು. ತುಮಕೂರು ನಗರದಲ್ಲಿ ಕಸ ಎತ್ತಲು ಬಳಕೆ ಮಾಡಿಕೊಳ್ಳುತ್ತಿದ್ದ ಬಾಲ ಕಾರ್ಮಿಕನ ಸುದ್ದಿ ನೋಡಿ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲು ಕಾರಣರಾಗಿದ್ದರು. ಆ ಹುಡುಗನಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಯಿತು.

ತುಮಕೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರು ಆಗಿರುವ ಅವರು ತುಮಕೂರು ನಗರದ ಮಾರಿಯಮ್ಮ ಕೊಳೆಗೇರಿಯ ಪ್ರಕರಣದ ಪರವಾಗಿ ವಾದ ಮಂಡಿಸಿದ್ದರು. ನಗರದ ಬಸ್ ನಿಲ್ದಾಣದ ಪಕ್ಕವೇ ಇರುವ ಈ ಜಾಗದಲ್ಲಿ ಈಗ ಕೊಳೆಗೇರಿ‌ ನಿವಾಸಿಗಳಿಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಮನೆಗಳ ನಿರ್ಮಾಣ ನಡೆಯುತ್ತಿದೆ.

ಇದನ್ನು ಓದಿ: ರಮೇಶ್ ಗೆ ಕಾನೂನು ವಿಭಾಗದಲ್ಲಿ ಡಾಕ್ಟರೇಟ್

ಯಾವಾಗಾ ಕಾರ್ಯಕ್ರಮ: ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಬೆಂಗಳೂರು ವಿ.ವಿ.ಯ ರಾಮನಗರ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ. ಡೊಮಿನಿಕ್ ಕಾರ್ಯಕ್ರಮ ಉದ್ಘಾಟಿಸುವರು. ವಿಚಾರಗೋಷ್ಠಿಯಲ್ಲಿ ಮಾಧ್ಯಮ, ನ್ಯಾಯಾಂಗದ ಪ್ರಸ್ತುತೆ ಕುರಿತು ಮಾತನಾಡುವರು.

ಬೆಂಗಳೂರಿನ ಅಲೆಯನ್ಸ್ ವಿ.ವಿ. ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎಸ್.ರೆಡ್ಡಿ, ಹಿರಿಯ ಕಾರ್ಮಿಕ ಮುಖಂಡ ಕೆ.ಎನ್.ಉಮೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ, ಗಂಗವಾಹಿನಿ ಸಂಪಾದಕ ಆರ್.ಕಾಮರಾಜು ಭಾಗವಹಿಸುವರು.

ರಾಜ್ಯದಲ್ಲಿ 3‌ ಲಕ್ಷ ಶಿಕ್ಷಕರ ಬದುಕು ಅತಂತ್ರ

ಪಾವಗಡ: ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ, ಆರೋಗ್ಯ ಕಾರ್ಡ್ ಕೊಡಿಸಲು ಒತ್ತು ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿ ತಿಳಿಸಿದರು.

ಪಟ್ಟದಲ್ಲಿ ಗುರುವಾರ ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದಾ ಎಂ.ಗೌಡ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಪಡಿತರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊವಿಡ್ ಸಂಕಷ್ಠ ಸಮಯದಲ್ಲಿ ಖಾಸಗಿ ಶಾಲಾ ಶಿಕ್ಷಕರ ಬದುಕು ಅತಂತ್ರವಾಗಿದೆ. ರಾಜ್ಯದ 3 ಲಕ್ಷ ಶಿಕ್ಷಕರಿಗೆ ತಲಾ 5 ಸಾವಿರದಂತೆ 105 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಶೀಘ್ರ ಮತ್ತೊಂದು ಕಂತಿನ ಹಣ ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು. ಹಣ ವಿತರಣೆ ಮಾಡುವಲ್ಲಿ ಭ್ರಷ್ಟಾಚಾರ ನಡೆಸದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.

ಶೀಘ್ರ ಶಾಲೆಗಳನ್ನು ಆರಂಭಿಸಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಆರೋಗ್ಯ ಕಾರ್ಡ್ ವಿತರಣೆ ಮಾಡಿ, ಕನಿಷ್ಠ ವೇತನ, ಸೇವಾ ಭದ್ರತೆ ಕಲ್ಪಿಸುವಂತೆ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರೊಡನೆ ಚರ್ಚಿಸಲಾಗುವುದು ಎಂದರು.

ಕೊವಿಡ್ ನಿಂದ ಸಾವನ್ನಪಿರುವ 125 ಕುಟುಂಬಗಳಿಗೆ ಚಿದಾನಂದಾ ಗೌಡರ ಸಹಕಾರದೊಂದಿಗೆ 10 ಸಾವಿರ ರೂ ವಿತರಣೆ ಮಾಡಲಾಗುವುದು. ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವವರಿಗೆ ಈಗಾಗಲೆ ಸಹಾಯ ಹಸ್ತ ನೀಡಲಾಗುತ್ತಿದೆ ಎಂದರು.
ಆಗ್ನೇಯ ಪಧವೀದರರ ಕ್ಷೇತ್ರದ ಶಾಸಕ ಚಿದಾನಂದ್ ಎಂ.ಗೌಡ, ಸಮಾಜದ ಮುಖ್ಯವಾಹಿನಿಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು 27 ಸಾವಿರ ಶಾಲೆಗಳಲ್ಲಿ 3 ಲಕ್ಷ ಶಿಕ್ಷಕರು ದುಡಿಯುತ್ತಿದ್ದಾರೆ. ಖಾಸಗಿ ಶಾಲಾ ಶಿಕ್ಷಕರು ಅಕ್ಷರಷಃ ಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.

ಖಾಸಗಿ ಶಾಲಾ ಶಿಕ್ಷಕರು, ಉಪನ್ಯಾಸಕರಿಗೆ ಪಡಿತರ ಕಿಟ್ ವಿತರಿಸಲಾಯಿತು.
ಉಪ ನಿರ್ದೇಶಕ ರೇವಣಸಿದ್ದಪ್ಪ, ಬಿಇಒ ಅಶ್ವಥನಾರಾಯಣ, ಪ್ರಾಧ್ಯಾಪಕ ಶ್ರೀನಿವಾಸರೆಡ್ಡಿ, ಪ್ರಾಂಶುಪಾಲ ಕೆ.ಓ.ಮಾರಪ್ಪ, ಬಿಸಿಯೂಟ ಯೋಜನಾಧಿಕಾರಿ ಹನುಮಂತರಾಯಪ್ಪ, ವೈದ್ಯ ಕಿರಣ್, ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುನಿಸ್ವಾಮಿ, ಬಿಜಿಪಿ ತಾಲ್ಲೂಕು ಘಟಕದ ಅಧ್ಯಕ್ಷ ರವಿಶಂಕರ್ ನಾಯ್ಕ, ಮುಖಂಡ ಡಾ.ಜಿ.ವೆಂಕಟರಾಮಯ್ಯ, ಕೃಷ್ಣನಾಯ್ಕ, ಶಿಕ್ಷಕರಾದ ಯತೀಶ್ ಕುಮಾರ್, ಬಸವರಾಜು, ನರಸಿಂಹ ಉಪಸ್ಥಿತರಿದ್ದರು.

ಪಾವಗಡದಲ್ಲಿ ಗುರುವಾರ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ವಿಧಾನ ಪರಿಷತ್ ಸದಸ್ಯರಾದ ವೈ ಎ ನಾರಾಯಣಸ್ವಾಮಿ, ಚಿದಾನಂದ ಎಂ ಗೌಡ ಪಡಿತರ ಕಿಟ್ ವಿತರಿಸಿದರು. ಉಪ ನಿರ್ದೇಶಕ ರೇವಣಸಿದ್ದಪ್ಪ, ಬಿಇಒ ಅಶ್ವಥನಾರಾಯಣ, ಪ್ರಾಧ್ಯಾಪಕ ಶ್ರೀನಿವಾಸರೆಡ್ಡಿ, ಬಿಜಿಪಿ ತಾಲ್ಲೂಕು ಘಟಕದ ಅಧ್ಯಕ್ಷ ರವಿಶಂಕರ್ ನಾಯ್ಕ, ಮುಖಂಡ ಡಾ.ಜಿ.ವೆಂಕಟರಾಮಯ್ಯ, ಕೃಷ್ಣನಾಯ್ಕ ಉಪಸ್ಥಿತರಿದ್ದರು.

ಭಾನುವಾರದ ಕವಿತೆ: ನೀನು ಕಾಣದೆ ಚೋಟು!

ತುರುವೇಕೆರೆ ಪ್ರಸಾದ್


ಬೇಲಿಯ ಮೇಲೆ ನೋಡಿದೆ ಅಳಿಲಿನ ಒಯ್ಯಾರ ಒನಪು
ಹಿಡಿಯಲು ತಿಪ್ಪರಲಾಗ ಹಾಕಿದ ನಿನ್ನದೇ ನೆನಪು

ಕಾರಿಡಾರಿನ ತಟ್ಟೆ ತುಂಬಾ ಕಾದು ಕೂತಿದೆ ಜೆಲ್ಲಿಮೀನಿನ ತಾಲಿ
ಮನಸ್ಸು ಮಾತ್ರ ನೀನಿಲ್ಲದೆ ಪೂರಾ ಕಾಲಿ ಕಾಲಿ

ದೀಪಗಳು ಪ್ರಜ್ವಲಿಸುತ್ತಾ ಉರಿಯುತಿವೆ ಪ್ರತಿರಾತ್ರಿ
ಹುಡುಕಿ ಕೊಡಲು ಸೋತಿವೆ ನಿನ್ನ ಕಂಗಳ ಪ್ರೀತಿ

ಮಂಚದ ತುದಿಯ ಕಾಲಬುಡದಲ್ಲಿ ನೀನಾಗಿದ್ದೆ ಮೆತ್ತೆ
ನೀನಿಲ್ಲದೆ ಒತ್ತುತಿದೆ ಕಾಲು, ಎಚ್ಚರವಾಗುತಿದೆ ಮತ್ತೆ ಮತ್ತೆ

ರತ್ನಗಂಬಳಿಯ ನೆಲಹಾಸು ಹಾಲಿನಲ್ಲಿ ಸತ್ತು ಬಿದ್ದಿದೆ
ಮೂತಿಯುಜ್ಜಿ ನಿನ್ನದಾಗಿಸಿಕೊಳ್ಳುವ ಸುಖಕೆ ಮನಸು ಕಾದಿದೆ

ಬಾಲ್ಕನಿ, ಪೋರ್ಟಿಕೋ, ಜೋಕಾಲಿಗಳಿಗೆ ನಿನ್ನದೇ ತವಕ
ನೀ ಜೀವ ತುಂಬಿದ್ದ ಎಲ್ಲವೂ ಮತ್ತಾಗಿವೆ ಸ್ಮಾರಕ

ಅರೆನಿದ್ದೆಯ ಕನವರಿಕೆಗೆ ಮೇಳೈಸಿದೆ ನಿನ್ನ ಊಊಊಊ
ಎಚ್ಚರವಾದೀತೆಂದು ಮಿಯಾಂ ಎನ್ನದ ನಿನ್ನ ಗುಟುರು ಮೋಟಾರು

ಸೋಫಾದ ತುಂಬಾ ನೀ ಗಿಬರಿ ಪರಿಚಿದ ಗೀರುಗಳು
ಹೊಸದು ಬಂದಾವು ಎಲ್ಲ, ನೀನಾಗದು ಆ ಸಾವಿರ ಬೆಕ್ಕುಗಳು!

ಆಷಾಢದ ಗಾಳಿಗೆ ತೂರಿ ಹೋಗುತಿದೆ ನೀನಾಡಿದ ಹಕ್ಕಿ ಪುಕ್ಕ
ಬಾ , ಗಪ್ಪನೆ ಹಿಡಿದು ತಂದು ಕೂರು ಬೆಚ್ಚಗೆ ನನ್ನ ಪಕ್ಕ!

ಕಿಟಕಿ ತೆರೆದೇ ಇದೆ, ಒಮ್ಮೆ ಹಾರಿ ಬಂದು ಹಿಡಿ ಕಾಲು
ಇಹದ ಪ್ರಜ್ಞೆ ಬರುವ ತನಕ ಕಚ್ಚಿ, ಗೀರಿ ಗಿಲ್ಲು!

ಬದುಕೆಂದೂ ತೋರಿಕೆಗಷ್ಟೇ ಬಣ್ಣ ಬಣ್ಣದ ಹೊಳಪು
ಚೋಟು ಜೀವ ತೋರಿದೆ ನೀ ಅದೆಂದೂ ನಿನ್ನಂತೇ ಕಪ್ಪು ಬಿಳುಪು!

ಭಾನುವಾರದ ಕವಿತೆ: ಝೆನ್ ಅಡುಗೆ

ಡಾ// ರಜನಿ ಎಂ

ಕಿವಿ ತುಂಬ ಮಾತುಗಳ ಮೊರೆತ….
ಮಲಗಿರುವ ಜನರ ಗೊರಕೆ

ಪೇಪರ್ ಓದಲು ಧಾವಂತ…
ಸರೇಗಮಾದ ರಫಿ ಬೇಡವೇ ಕಾಫಿಗೆ?

ತಾಳ್ಳೆ ಇಲ್ಲದೇ ತರಕಾರಿ ತುಂಡು …
ಬೆರಳಿಗೆ ರಕ್ತ ತಿಲಕ

ಕುಡಿಯಲು ಇಟ್ಟ
ಕುದಿಯುವ ನೀರು…

ಮನೆ ತುಂಬಾ ಹಲಸಿನ ಗಮ…
ಬಾಳೆ ಹಣ್ಣಿಗೆ ಮುತ್ತಿದ ಸಣ್ಣ ಸೊಳ್ಳೆ

ಅಡುಗೆ ಮಾಡುವಾಗ
ಧ್ಯಾನ ಮಾಡುವುದೇ?……..

ಹದವಾಗಿ ಮಾಡಿಕೊಂಡ ಕಾಫಿಯ ಕಮ
ಎಡಗೈಲಿ ಹಿಡಿದ ಪೇಪರ್ …
ಬೆನ್ನಿಗೆ ಎಳೆ ಬಿಸಿಲ ಕಾವು

ತಾಜಾ ಸಿಹಿ ಪರಂಗಿಯ ತುಂಡು …
ಗಾಜಿನ ಬೋಗುಣಿಯಲ್ಲಿ
ಗಾಜಿಗೆ ತಾಗಿದ ಫೋರ್ಕ್ ಸದ್ದು

ಹಲಸಿನ ಎಳೆ….
ಕಾಡಿನ ಜೇನು
ಆರ್ಗಾನಿಕ್ ಬೆಲ್ಲ …ಏಲಕ್ಕಿ ನೆಕ್ಕಿ

ಹೆಚ್ಚಾದ ಹಲಸು ಹಂಚಿ..
ಕಡಕ್ ಟೀ ಕೊಟ್ಟು

ಕೊನೆ ಮಾವಿನ ಜ್ಯೂಸ್ ಚಪ್ಪರಿಸಿ
ಕೈಮಾ ಉಂಡೆ ಬಾಯಿಗಿಡುವಾಗ

ಎದ್ದು ಬಂದಿರುವ ಕುಂಭಕರ್ಣರು
ಆಡದೇ ಉಳಿದ ಮಾತು…

ಕ್ಯಾರೆಟ್, ಈರುಳ್ಳಿಯಲ್ಲಿ ಮಾಡಿದ ಚಿಟ್ಟೆ …
ಬಿಳೀ ಮಜ್ಜಿಗೆಯಲ್ಲಿ ಹಸಿರು ರಂಗೋಲಿ

ಕಾವಲಿಯ ನೀರು ದೋಸೆಯಲ್ಲಿ …
ಮೂಡಿದ ಕೊರೋನಾ …

ಮುನಿಸೆಲ್ಲಾ ಮರೆತು ..

ಪರಂಗಿ ಹಣ್ಣಿಗೆ ಚುಚ್ಚಿದರೆ ಮುಳ್ಳು
ಸದ್ದಿಲ್ಲದೇ ಬಾಯಿ ಬಂದ ಹಣ್ಣು….

ಒಕ್ಕಲಿಗರ ಸಂಘದ ಚುನಾವಣೆ: ಇಂಥವರು ಬೇಕಿಲ್ಲ…

.

ತುಮಕೂರು ನಗರದ ಒಕ್ಕಲಿಗರ ಯುವ ಮುಖಂಡರಾಗಿ ಗಮನ ಸೆಳೆಯುತ್ತಿರುವ, ವಕೀಲರು ಆದ ರವಿಗೌಡ ಅವರು ಬರೆದಿರುವ ಒಕ್ಕಲಿಗರ ಕೇಂದ್ರ ಸಂಘದ ಚುನಾವಣೆ ಕುರಿತ ಚುರುಕು ನೋಟ ಇಲ್ಲಿದೆ

ಜಿಲ್ಲೆಯ ಪ್ರಬಲ ಕೋಮು ಆಗಿದ್ದರೂ ಸಹ ಇಂದು ಒಕ್ಕಲು ಮಕ್ಕಳಾದ ನಾವುಗಳು ಸಮಾಜದ ರಕ್ಷಣೆ ಮಾಡುವ ಜನನಾಯಕನಿಲೢದೆ ಅಕ್ಷರಶಃ ತಬ್ಬಲಿಗಳಾಗಿದ್ದೇವೆ .

ಕೇಂದ್ರ ಒಕ್ಕಲಿಗರ ಸಂಘ ವನ್ನು ಪ್ರತಿನಿಧಿಸಿದ ಜಿಲ್ಲೆಯ ಹಲವಾರು ನಿರ್ದೇಶಕರನ್ನು ಈಗಾಗಲೆ ನಾವು ನೋಡಿದ್ದೇವೆ. ಯಾರಿಗೂ ಸಹ ಸಮಾಜದ ಜ್ವಲಂತ ಸಮಸ್ಯೆಗಳ ಅರಿವಿಲ್ಲ .ಸಮಾಜವನ್ನು ಒಗ್ಗೂಡಿಸಬೇಕೆಂಬ ಮನೋಭಾವ ಯಾರಲ್ಲೂ ಸಹ ಇಲ್ಲ. ಸ್ವಹಿತಾಸಕ್ತಿಗೆ ಇವರುಗಳೆಲ್ಲರೂ ನಿರ್ದೇಶಕರು ಗಳಾಗುತ್ತಿದ್ದಾರೆ .

ಹುಚ್ಚಮಾಸ್ತಿಗೌಡರು ವೈ ಕೆ ರಾಮಯ್ಯನವರು ಭೈರಪ್ಪ ಜಿಯವರು ಕೆ ಲಕ್ಕಪ್ಪನವರ.ಆರ್ ನಾರಾಯಣ್ ರವರು ಇನ್ನೂ ಹಲವಾರು ಹಿರಿಯ ರಾಜಕಾರಣಿಗಳು ಸಮಾಜಕ್ಕಾಗಿ ದುಡಿದಿದ್ದಾರೆ .ಆದರೆ ಇಂದು ಅಕ್ಷರಶಃ ನಾವುಗಳು ನಮ್ಮನ್ನು ಹಾಗೂ ನಮ್ಮ ಸಮಾಜವನ್ನು ಮುನ್ನಡೆಸಬಲ್ಲ ಎಂಬ ಭರವಸೆಯುಳ್ಳ ಒಬ್ಬ ನಾಯಕರು ಸಹ ನಮಗೆ ಕಾಣುತ್ತಿಲ್ಲ ಇದು ವಿಪರ್ಯಾಸ.

ಅನ್ಯ ಸಮಾಜದ ರಾಜಕಾರಣಿಗಳಿಂದ ನಮ್ಮ ಸಮಾಜದ ಅಧಿಕಾರಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಯಾರೂ ಪ್ರಶ್ನೆ ಮಾಡುತ್ತಿಲ್ಲ .ಜಿಲ್ಲಾ ಕೇಂದ್ರದಲ್ಲಿದ್ದು ಸಮಾಜಕ್ಕಾಗಿ ದುಡಿಯುವ ಯಾವೊಬ್ಬ ನಿರ್ದೇಶಕರನ್ನು ಸಹ ನಾವು ಕಾಣಲು ಸಾಧ್ಯವಾಗುತ್ತಿಲ್ಲ..ಎಲ್ಲರೂ ಸಹ ನಾವು ಅದನ್ನು ಮಾಡಿದ್ದೇವೆ, ಇದನ್ನು ಮಾಡುತ್ತವೆಂದು ಸುಳ್ಳು ಭರವಸೆಗಳ ಸರಮಾಲೆಯನ್ನು ಬಿಚ್ಚಿಡುತ್ತಾರೆ ಆದರೆ ಇಲ್ಲಿಯವರೆಗೂ ಯಾರಿಂದಲು ಸಮಾಜದ ಉದ್ಧಾರಕ್ಕೆ ಏನು ಮಾಡಲು ಸಾಧ್ಯವಾಗಿಲ್ಲ ..

ಇವತ್ತಿನ ಯುವ ಜನತೆಗೆ ಸಮಾಜಕ್ಕೆ ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ಳುವಂತ ನಾಯಕನ ಅವಶ್ಯಕತೆ ಇದೆ. ಪ್ರತಿದಿನ ನೂರಾರು ಜ್ವಲಂತ ಸಮಸ್ಯೆಗಳು ಸಮಾಜದ ವಿದ್ಯಾರ್ಥಿಗಳು, ಅಧಿಕಾರಿಗಳು, ರೈತರ ಪರವಾಗಿ ದೃಢ ನಿಲುವುಗಳನ್ನು ತೆಗೆದುಕೊಂಡು ಅವರಿಗೆ ನ್ಯಾಯ ಒದಗಿಸುವಂತಹ ಕೆಲಸವನ್ನು ಮಾಡುವಂತಹ ನಿರ್ದೇಶಕರುಗಳು ಸಮಾಜಕ್ಕೆ ಬೇಕಾಗಿದೆ.

ವಿಪರ್ಯಾಸವೆಂದರೆ ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ಸಮಾಜದ ಒಂದು ಭವನವಿಲ್ಲದಿರುವುದು ಜಿಲ್ಲೆಯಲ್ಲಿ ನಾವು ಎಷ್ಟು ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರಿಸುತ್ತದೆ.

ಸಮಾಜದ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಕ್ಕಾಗಿ ನಗರಪ್ರದೇಶವನ್ನು ಆಶ್ರಯಿಸಬೇಕಾದ ಇಂಥ ಪರಿಸ್ಥಿತಿಯಲ್ಲಿ ಅವರುಗಳಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸುವುದು..ಈಗಾಗಲೇ ಸಮಾಜದ ಹಿರಿಯರು ಸಮಾಜಕ್ಕೆ ಅರ್ಪಿಸಿರುವ ಹಾಸ್ಟೆಲ್ ಗಳನ್ನು ಉನ್ನತ ದರ್ಜೆಗೇರಿಸಿ ಹಲವಾರು ಕ್ರಿಯಾಶೀಲ ಸಮಾಜದ ಯುವಕ ಯುವತಿಯರನ್ನು ಅವರು ಇಷ್ಟಪಡುವಂಥ ಉನ್ನತ ಶಿಕ್ಷಣವನ್ನು ಕೊಡಿಸಿ ನಂತರ ಆಯಕಟ್ಟಿನ ಜಾಗಗಳಲ್ಲಿ ಉತ್ತಮ ದರ್ಜೆ ಅಧಿಕಾರಿಗಳನ್ನಾಗಿ ನೋಡುವಂತಹ ಸಮಾಜವನ್ನು ನಿರ್ಮಾಣ ಮಾಡುವಂತಹ ನಿರ್ದೇಶಕನನ್ನು ಚುನಾಯಿಸಬೇಕಾಗಿದೆ.

ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಕಟ್ಟಕಡೆಯ ಸಮಾಜದ ಬಡ ಮಕ್ಕಳಿಗೆ ಲ್ಯಾಪ್ ಟಾಪ್ ಗಳನ್ನು ಒದಗಿಸುವಂತೆ ಕಾರ್ಯಕ್ರಮಗಳನ್ನು ಆಯೋಜಿಸ ಬೇಕಾದಂತಹ ಅನಿವಾರ್ಯ ಇರುವುದರಿಂದ ಅಂತಹ ಯೋಜನೆಗಳನ್ನು ನಿರೂಪಿಸಬೇಕಾಗಿರುವ ತಕ್ಕಂತ ನಿರ್ದೇಶಕರ ಆಯ್ಕೆ ನಮಗೆ ಬೇಕಾಗಿದೆ

ಕೊನೆಯದಾಗಿ ಹೇಳುವುದಿಷ್ಟೆ ನಾವು ಒಕ್ಕಲಿಗರು ಒಕ್ಕಲುತನವನ್ನು ಕುಲಕಸುಬಾಗಿ ಸ್ವೀಕರಿಸಿರುವವರು. ಈ ಸಮಾಜ ಎಂದಿಗೂ ಕೂಡ ಯಾರಿಗೂ ಸಹ ಮೋಸ ಅನ್ಯಾಯ ಮಾಡುವುದಿಲ್ಲ. ಎಲ್ಲರನ್ನೂ ಸಹ ಸರಿಸಮನಾಗಿ ನೋಡುವಂಥ ಸಮಾಜ ನಮ್ಮ ಒಕ್ಕಲಿಗ ಸಮಾಜ ..ಆದ್ದರಿಂದ ಒಕ್ಕಲಿಗರಾದ ನಾವು ಅತ್ಯಂತ ಜಾಗರೂಕತೆಯಿಂದ ಎಚ್ಚರಿಕೆಯಿಂದ ನಮ್ಮ ಸಮಾಜದ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಗಾಢವಾಗಿ ಆಲೋಚನೆ ಮಾಡಿ ಆಯ್ಕೆ ಮಾಡಬೇಕಾಗಿದೆ.

ಒಕ್ಕಲಿಗರ ಸಂಘದ ಚುನಾವಣೆ: ಏರುತ್ತಿದೆ ಚುನಾವಣಾ ಕಾವು

ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಗರಿ ಗೆದರಿದೆ ತುಮಕೂರು ಜಿಲ್ಲೆಯಿಂದ ಇಬ್ಬರು ನಿರ್ದೇಶಕರನ್ನು ಸಮೂದಾಯದ ಜನರು ಆಯ್ಕೆ ಮಾಡಬೇಕಾಗಿದೆ . ಈಗಲೇ ಚುನಾವಣಾ ಕಾವು ಏರ ತೊಡಗಿದೆ.


ಕೊರೊನಾ ಕಾರಣದಿಂದಾಗಿ ಚುನಾವಣೆಯನ್ನು ಮುಂದೂಡಲಾಗಿದೆ.‌ಬಹುತೇಕ ನವೆಂಬರ್ ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ

ಈ ಹಿಂದಿನ ಚುನಾವಣೆಯಲ್ಲಿ

ಶಶಿಕಿರಣ್ ಮತ್ತು ನರೇಂದ್ರ ಬಾಬು ಗೆಲುವು ಸಾಧಿಸಿದ್ದರು. ಆದರೆ ಈ ಸಲದ ಚುನಾವಣೆಯಲ್ಲಿ ಇಬ್ಬರು ಕೂಡ ಸ್ಪರ್ಧಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಹೊಸ ಮುಖಗಳಿಗೆ ಅವಕಾಶ ಸಿಗಲಿದೆ.

ಚುನಾವಣೆ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಈಗಾಗಲೇ ಮತ ಕೇಳಲು ಮತದಾರರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ಸಮುದಾಯದ ಮುಖಂಡರನ್ನು ಜೊತೆ ಸೇರಿಸಿಕೊಂಡು ಸಭೆಗಳನ್ನು ನಡೆಸುತ್ತಿದ್ದಾರೆ . ಮತಗಳಿಕೆಯ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ.

ಜಿಲ್ಲೆಯ ಎಲ್ಲ ಹನ್ನೊಂದು ವಿಧಾನಸಭಾ ವಿಧಾನ ಸಭಾಕ್ಷೇತ್ರಗಳಲ್ಲೂ ಒಕ್ಕಲಿಗರ ಮತಗಳಿವೆ. ವಿಶೇಷವಾಗಿದೆ. ಹೀಗಾಗಿ ಆಯಾ ಕ್ಷೇತ್ರದ ಶಾಸಕರನ್ನು, ಅವರ ಬೆಂಬಲವನ್ನು ಪಡೆಯಲು ಆಕಾಂಕ್ಷಿಗಳು ಪ್ರಯತ್ನ ನಡೆಸುತ್ತಿದ್ದಾರೆ

ಬೆಳ್ಳಿ ಲೋಕೇಶ್

ಈ ಸಲದ ಚುನಾವಣೆಯಲ್ಲಿ ಬೆಳ್ಳಿ ಲೋಕೇಶ್,

ಹನುಮಂತರಾಯಪ್ಪ, ಮಾಜಿ ಶಾಸಕ ಬಿ.ನಾಗರಾಜಯ್ಯ ಅವರ ಮಗ ಲೋಕೇಶ್, ಸುಜಾತಾ ನಂಜೇಗೌಡ ಇವರ ಹೆಸರುಗಳು ಕೇಳಿಬರುತ್ತಿವೆ .


ಜಿಲ್ಲೆಯಲ್ಲಿ ಒಟ್ಟು ಮೂವತ್ತು ಸಾವಿರಕ್ಕೂ ಅಧಿಕ ಮತದಾರರಿದ್ದು ಕುಣಿಗಲ್ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾರರಿದ್ದಾರೆ .

ಹನುಮಂತರಾಯಪ್ಪ


ಕುಣಿಗಲ್ ತಾಲ್ಲೂಕಿನಲ್ಲಿ 9ಸಾವಿರದ ಎಂಟುನೂರು, ತುರುವೇಕೆರೆಯಲ್ಲಿ 5ಸಾವಿರದ ಐನೂರು, ತುಮಕೂರು ತಾಲ್ಲೂಕಿನಲ್ಲಿ 7ಸಾವಿರದ ಏಳು ನೂರು, ತಿಪಟೂರಿನಲ್ಲಿ ಸಾವಿರದ ಏಳು ನೂರು, ಗುಬ್ಬಿಯಲ್ಲಿ ಸಾವಿರದ ಎಂಟು ನೂರು, ಕೊರಟಗೆರೆಯಲ್ಲಿ ಸಾವಿರದ ಐನೂರು, ಮಧುಗಿರಿಯಲ್ಲಿ ಸಾವಿರದ ಏಳು ನೂರು, ಪಾವಗಡದಲ್ಲಿ ನೂರೈವತ್ತು , ಚಿಕ್ಕನಾಯಕನಹಳ್ಳಿಗೆ ಮುನ್ನೂರೈವತ್ತು ಶಿರಾದಲ್ಲಿ ಎಂಟು ನೂರ ಐವತ್ತು ಮತದಾರರು ಇದ್ದಾರೆ.

ಈ ಸಲದ ಚುನಾವಣೆಯಲ್ಲಿ ಕುಣಿಗಲ್ ತಾಲ್ಲೂಕಿನ ಮತದಾರರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ತುರುವೇಕೆರೆ ತಾಲ್ಲೂಕಿನ ಮತದಾರರು. ತುರುವೇಕೆರೆಯಲ್ಲಿ ಯಾರ ಕಡೆ ಮುಖ ಮಾಡುತ್ತಾರೆ ಎಂಬುದು ಕೂಡ ಮುಖ್ಯವಾಗಿದೆ.


ಹನುಮಂತರಾಯಪ್ಪ ಅವರು ಕಳೆದ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋತಿದ್ದರು. ಈ ಈ ಸಲ ಅವರು ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು ಮತದಾರರು ಏನು ಮಾಡುತ್ತಾರೆ ಎಂಬುದು ಕುತೂಹಲವಾಗಿದೆ.
ಬೆಲವತ್ತ ಜಗದೀಶ್ ಸಹ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಸಲ ಸಹ ಎದುರು ಸೋತಿದ್ದರು.

ಬೆಳ್ಳಿ ಲೋಕೇಶ್ ಅವರು ಇದೇ ಮೊದಲ ಸಲ ಚುನಾವಣೆಗೆ ನಿಲ್ಲುತ್ತಿದ್ದಾರೆ.
ಶಾಸಕ ಹಾಗೂ ಮಾಜಿ ಸಚಿವ ಡಿ ನಾಗರಾಜಯ್ಯ ಅವರ ಪುತ್ರ ಲೋಕೇಶ್, ಸುಜಾತಾ ನಂಜೇಗೌಡ ಮೊದಲ ಸಲ ಚುನಾವಣೆಗೆ ನಿಲ್ಲುತ್ತಿದ್ದಾರೆ.


ಜಿಲ್ಲೆಯಲ್ಲಿ ಒಕ್ಕಲಿಗರ ಸಂಘಟನೆ ಪ್ರಬಲವಾಗಿಲ್ಲ. ಜನಸಂಖ್ಯೆಯಲ್ಲಿ ಒಕ್ಕಲಿಗರು ಹೆಚ್ಚಿದ್ದರೂ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರದಲ್ಲಿ ಅವರು ಹೆಚ್ಚು ಪ್ರಬಲರಾಗಿಲ್ಲ.
ಜನಾಂಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರಮುಖವಾಗಿ ಯಾವುದೇ ಬೆಂಬಲ ಸಿಗುತ್ತಿಲ್ಲ ಎಂಬ ದೂರುಗಳು ಸಾಕಷ್ಟಿವೆ.
ಸಮಾಜದ ವಿದ್ಯಾರ್ಥಿಗಳು ತುಮಕೂರಿಗೆ ಬಂದು ಓದುವಾಗ ಉಚಿತ ಶಿಕ್ಷಣದ ವ್ಯವಸ್ಥೆ ಅಥವಾ ಆಶ್ರಯದ ವ್ಯವಸ್ಥೆಯಿಲ್ಲದಿರುವುದು ಜನಾಂಗದ ಜನರ ಕೋಪಕ್ಕೆ ಕಾರಣವಾಗಿದೆ.


ಈ ಎಲ್ಲಾ ಹಿನ್ನೆಲೆಯಲ್ಲಿ ಈ ಸಲದ ಚುನಾವಣೆ ಪ್ರಮುಖವಾಗಿದೆ. ಯಾರು ಯಾವ, ಯಾವ ಭರವಸೆ ನೀಡುತ್ತಾರೆಂಬುದರ ಬಗ್ಗೆ ಮತದಾರರು ಕುತೂಹಲಿಗಳಾಗಿದ್ದಾರೆ