Thursday, October 16, 2025
Google search engine
Home Blog Page 326

ತಾಯಿಯಾಗುವರೇ ದೀಪಿಕಾ; ವೈರಲ್ ಆದ `ದೀಪಾವಳಿ ಬಳಿಕ ಸಂಭ್ರಮ’ ಪೋಸ್ಟ್

ಮುಂಬೈ: ‘ದೀಪಾವಳಿ ಬಳಿಕ ಸಂಭ್ರಮ‘ ಎಂದು  ಜಾಲತಾಣದಲ್ಲಿ ದೀಪಿಕಾ ಪಡುಕೋಣೆ ಹಂಚಿಕೊಂಡಿರುವ ಸಂತಸಕ್ಕೆ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ!

ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದೀಪಿಕಾ ಈ ವಿಷಯವನ್ನು ಇನ್ನು ಖಚಿತಪಡಿಸಿಲ್ಲ. ಆದರೆ ಅವರು ಭಾನುವಾರ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ  ತಾವು ಮಗುವಾಗಿದ್ದಾಗಿನ ಫೋಟೊವನ್ನು ಪೊಸ್ಟ್‌ ಮಾಡಿ ದೀಪಾವಳಿ ಬಳಿಕ ಸಂಭ್ರಮ ಎಂದು  ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಸಾಕಷ್ಟು ವೈರಲ್‌ ಆಗಿದ್ದು ದೀಪಿಕಾ ತಾಯಿಯಾಗಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ ಎಂದು ಅವರ ಅಭಿಮಾನಿಗಳು ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ದೀಪಿಕಾ ಪೋಸ್ಟ್‌ಗೆ ಅಭಿಮಾನಿಗಳು ಅಭಿನಂದನೆಗಳನ್ನು ಹೇಳುತ್ತಿದ್ದಾರೆ.

ದೀಪಿಕಾ ಮತ್ತು ಪತಿ ರಣವೀರ್ ಅವರು ಕಳೆದ ಮಾರ್ಚ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಸೆರೆಸಿಕ್ಕ ದೃಶ್ಯಾವಳಿಯೊಂದರ ಪ್ರಕಾರ ದೀಪಿಕಾ ಅವರು ಗರ್ಭಿಣಿ ಎಂದು ಆಗಲೇ ಸುದ್ದಿಯೊಂದು ವೈರಲ್‌ ಆಗಿತ್ತು. . ಬಾಲಿವುಡ್‌ನ ಈ ಜೋಡಿ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು.

ಚಿತ್ರ ನಟ ವಿ.ರವಿಚಂದ್ರನ್ ಇನ್ನು ಮುಂದೆ ಡಾಕ್ಟರ್

ಬೆಂಗಳೂರು: ಇಲ್ಲಿ ನಡೆದ ಸಿ.ಎಂ.ಆರ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ಉನ್ನತ ಶ್ರೇಣಿಯಲ್ಲಿ  ಉತ್ತೀರ್ಣರಾದ 17 ವಿದ್ಯಾರ್ಥಿಗಳು  18 ಚಿನ್ನದ ಪದಕಗಳನ್ನು ಪಡೆದರು.

ಭಾನುವಾರ ನಡೆದ ಸಮಾರಂಭದಲ್ಲಿ ಎಂ.ಕಾಂ ವಿಭಾಗದಲ್ಲಿ ಉನ್ನತ ಶ್ರೇಣಿ ಪಡೆದ ಪ್ರಿಯಾದರ್ಶಿನಿ ಸಿ.ಎಂ.ಆರ್ ಚಿನ್ನದ ಪದಕ ಮತ್ತು ಐಎಸ್‌ಡಿಸಿ ಚಿನ್ನದ ಪದಕವನ್ನು ಪಡೆದುಕೊಂಡರು. ಚಿತ್ರನಟ ವಿ. ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು 216 ವಿದ್ಯಾರ್ಥಿಗಳಿಗೆ ಪದವಿ,  ಮೂವರಿಗೆ ಡಾಕ್ಟರೇಟ್, 198 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ವಿತರಿಸಿದರು.

ವಿ. ರವಿಚಂದ್ರನ್ ಡಾಕ್ಟರೇಟ್ ಸ್ವೀಕರಿಸಿ,  ಕಲಾ ಸೇವೆಯನ್ನು ಗುರುತಿಸಿ, ಗೌರವ ಡಾಕ್ಟರೇಟ್‌ ನೀಡಿರುವುದು ಸಂತಸ ತಂದಿದೆ. ಗೌರವ ಡಾಕ್ಟರೇಟ್ ಅನ್ನು ನನ್ನನ್ನು ಸಿನಮಾ ಕ್ಷೇತ್ರಕ್ಕೆ ಪರಿಚಯಿಸಬೇಕು ಎಂದು ಕನಸ್ಸು ಕಂಡು ಸಾಧನೆಗೆ ಪ್ರೋತ್ಸಾಹಿಸಿದ ತಂದೆಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಬೀದಿ ನಾಯಿಗಳ ದಾಳಿಗೆ ಬಾಲಕಿ ಸಾವು

0

ರಾಮನಗರ:  ಬೀದಿ ನಾಯಿಗಳ ದಾಳಿಗೆ ಮೋನಿಕಾ ಎಂಬ ಐದು ವರ್ಷದ ಬಾಲಕಿ ಬಿಡದಿ ಪಟ್ಟಣದ ಕೆಂಚನಕುಪ್ಪೆ ಜನತಾ ಕಾಲೊನಿಯಲ್ಲಿ ಮೃತಪಟ್ಟಿದ್ದಾಳೆ.

ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿ  ಮೇಲೆ ಶನಿವಾರ ಸಂಜೆ  ನಾಯಿಗಳು ಏಕಾ ಏಕಿ ಎರಗಿ ತೀವ್ರವಾಗಿ ಗಾಯಗೊಳಿಸಿದ್ದವು. ಚಿಕಿತ್ಸೆಗಾಗಿ ಬಾಲಕಿಯನ್ನು ಬೆಂಗಳೂರಿನ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆ ಬಗ್ಗೆ ಗ್ರಾಮಸ್ಥರು ಪುರಸಭೆ ನಿರ್ಲಕ್ಷ್ಯ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂತ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳ ಅಸಮಾಧಾನ; ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್

ನವದೆಹಲಿ: ಬಾಂಗ್ಲಾ ವಿರುದ್ಧ ಪಂತ್ ಮಾಡಿದ ಎಡವಟ್ಟುಗಳನ್ನು ಜೀರ್ಣಿಸಿಕೊಳ್ಳಲಾಗದ ಭಾರತದ ಕ್ರಿಕೆಟ್‌ ಅಭಿಮಾನಿಗಳು ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡಿದ್ದಾರೆ.

ಟಿ–20 ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಮೂರು ಎಸೆತಗಳು ಉಳಿದಿರುವಂತೆ ಏಳು ವಿಕೆಟ್‌ಗಳಿಂದ ಭಾರತದ ಎದುರು ಜಯಗಳಿಸಿತು. ದೋನಿ ಅನುಪಸ್ಥಿತಿ ಎ್ದು ಕಾಣುತ್ತಿತ್ತು. ದೋನಿಯ ಸ್ಥಾನದಲ್ಲಿ ವಿಕಟ್ ಕೀಪರ್ ಆಗಿದ್ದ ರಿಷಭ್ ಪಂತ್ ಅವರನ್ನು ಕಂಡು ಭಾರತದ ಅಭಿಮಾನಿಗಳು ಸೋಲಿಗೆ ಅವರೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಕೆಟ್‌ ಕೀಪರ್ ಚುರುಕಾಗಿರಬೇಕು. ಮಹೇಂದ್ರ ಸಿಂಗ್ ದೋನಿಯಿಂದ ಪಂತ್ ಕಲಿಯಬೇಕಾಗಿದ್ದು ಸಾಕಷ್ಟಿದೆ.  ಒಂದೇ ಓವರ್‌ನಲ್ಲಿ ಮೂರು ತಪ್ಪುಗಳನ್ನು ಮಾಡಿ ತಂಡದ ಸೋಲಿಗೆ ಪಂತ್ ಕಾರಣರಾದರೂ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಯಜುವೇಂದ್ರ ಚಹಲ್ ಅವರ ಓವರ್‌ನಲ್ಲಿ ಎರಡು ಬಾರಿ ಎಲ್‌ಬಿಡಬ್ಲ್ಯುಗಾಗಿ ಡಿಆರ್‌ಎಸ್ ಮನವಿ ಪಡೆಯುವ ಅವಕಾಶವಿದ್ದರೂ ರಿಷಭ್‌ ಪಂತ್ ಅದನ್ನು ಪಡೆಯಲು ಮುಂದಾಗಲಿಲ್ಲ.  ಪಂತ್ ಎಡವಟ್ಟಿನಿಂದ ಅದೇ ಓವರ್‌ನ ಅಂತಿಮ ಎಸೆತದಲ್ಲಿ ಬಾಲ್‌ ಬ್ಯಾಟಿಗೆ ತಾಗದಿದ್ದರೂ ಮನವಿ ಮಾಡುವ ಮೂಲಕ ಮಹತ್ವದ ಡಿಆರ್‌ಎಸ್ ಕಳೆದುಕೊಂಡಿತು. ದೋನಿ ಅವರ ಸಾನಿಧ್ಯ ಎಷ್ಟು ಎಂಬುದು ಇದರಿಂದಲೇ ತಿಳಿದು ಬರುತ್ತಿದೆ ಎಂದು ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ, ಪಂತ್‌ ರನ್ನು ಟ್ರೋಲ್ ಮಾಡುತ್ತಿದ್ದಾರೆ.

ಅಳವಂಡಿ ಕಟ್ಟಿದ ಆ ಹುಡುಗನ ಬದುಕು…

1

ತುಮಕೂರು: ರಾಮರಡ್ಡಿ ಅಳವಂಡಿ ಅವರ ಹೆಸರು ಪ್ರಜಾವಾಣಿ ಪತ್ರಿಕೆಯ ಓದುಗರಿಗಲ್ಲದೇ ಇತರರಿಗೂ  ಚಿರಪರಿಚಿತ. ಇವರನ್ನು ನೋಡಿದವರು ಕಡಿಮೆ ಇರಬಹುದು. ಆದರೆ  ಅವರು ಹೆಸರನ್ನು ಹೆಚ್ಚು ಜನರು ಕೇಳಿದ್ದಾರೆ.

ತುಮಕೂರು ಜಿಲ್ಲೆಯ ಪ್ರಜಾವಾಣಿ ವರದಿಗಾರರಾಗಿ ಐದು ವರ್ಷದ ಹಿಂದೆ ಬಂದ ಅವರು ಇಲ್ಲಿ ಮಾಡಿದ ಕೆಲಸ ಅಗಾಧ. ಸ್ವಚ್ಛ, ಸುಂದರ ಪತ್ರಿಕೋದ್ಯಮಕ್ಕೆ ಅವರು ಎತ್ತಿದ ಕೈ. ಮಿತಭಾಷಿ. ಒಳ್ಳೆಯ ಕೆಲಸಗಾರರು ಸಹ. ಪ್ರಜಾವಾಣಿಗೆ ವಿದಾಯ ಹೇಳಿ ಅವರು ತಮ್ಮ ಹುಟ್ಟೂರು ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನಾಡಿಗೆ ವಾಪಸ್ ಆಗುತ್ತಿದ್ದಾರೆ., ಅವರು ತುಮಕೂರು ಜಿಲ್ಲೆಗೆ ನ್ಯಾಯ ಒದಗಿಸಿದ್ದಾರೆ. ಜಿಲ್ಲೆಯ ಪರ ಪಕ್ಷಪಾತಿಯಾಗಿ ಕೆಲಸ ಮಾಡಿ ಈಗ ಅವರೂರಿಗೆ ಹೊರಟಿದ್ದಾರೆ.

ಒಂದು ಘಟನೆಯನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಲೇಬೇಕು. ಅದೊಂದು ಮುಂಜಾನೆ ಐದು ಗಂಟೆ ಸಮಯ.  ಐದಾರು ದಿನಗಳ ಕಾಲ ಅವರಿಗೆ ಕರೆ ಬರುತ್ತಲೇ ಇತ್ತು, ಆರೇಳು ವರ್ಷದ ಒಬ್ಬ ಹುಡುಗನನ್ನು ಮನೆ ಮನೆ ಕಸ ಎತ್ತಲು ಬಿಡುತ್ತಿದ್ದಾರೆ, ಏನಾದರೂ ಮಾಡಿ ಇದನ್ನು ತಪ್ಪಿಸಿ ಎಂದು.

ಎರಡು ದಿನ ಎರಡು ರಸ್ತೆಗಳನ್ನು ಕಾದರು. ಮೂರನೇ ದಿನ ಆ ಹುಡುಗ ತುಮಕೂರಿನ ಎಸ್.ಎಸ್,ಪುರಂನ ರಸ್ತೆಯೊಂದರಲ್ಲಿ ಮನೆ ಮನೆ ಕಸ ಎತ್ತುತ್ತಿದ್ದ.  ಆತನನ್ನು ಮಾತನಾಡಿಸಿದರು. ಆತ ಏನ್ನೆಲ್ಲವನ್ನು ಹೇಳಿದ. ತಾಯಿ ಇಲ್ಲದ ಬಗ್ಗೆಯೂ ತಿಳಿಸಿದ.

ಮರುದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಈ ಹುಡುಗನ ಕುರಿತು ವರದಿ ಪ್ರಕಟವಾಯಿತು. ಈ ವರದಿ ಓದಿದ ಮಕ್ಕಳ ಕಲ್ಯಾಣ ಸಮಿತಿ ಈ ವರಧಿ ಆಧಾರದಲ್ಲಿ ಸುಮೋಟೊ ದೂರು ದಾಖಲಿಸಿಕೊಂಡಿತ್ತು.  ಹುಡುಗನನ್ನು ಪತ್ತೆ ಹಚ್ಚಿತ್ತು. ಹುಡುಗನನ್ನು ಬಳಸಿಕೊಂಡ ಕಸ ಎತ್ತುವ ಟೆಂಡರ್ ಕರೆದಿದ್ದ ಗುತ್ತಿಗೆದಾರನಿಗೂ ನೋಟಿಸ್ ಹೋಯಿತು. ಹಾಗೇ, ಅಳವಂಡಿ ಅವರಿಗೂ ನೋಟಿಸ್ ನೀಡಿತು.

ಅಳವಂಡಿ ಅವರು ಹೇಳಿದ ಹೇಳಿಕೆ, ದಾಖಲಿಸಿಕೊಂಡಿದ್ದ ವಿವರಗಳು ಆ ಹುಡುಗನಿಗೆ ನ್ಯಾಯ ಒದಗಿಸಿತು. ಹುಡುಗನನ್ನು ಹಾಸ್ಟೆಲ್, ಶಾಲೆಗೆ ಸೇರಿಸಿ ನ್ಯಾಯಮಂಡಳಿ ಆದೇಶಿಸಿತು. ಅದರಂತೆ ಆತನನ್ನು ಶಾಲೆಗೆ ಸೇರಿಸಲಾಯಿತು. ಆತನ ಹೆಸರಿಗೆ ಹದಿನೈದು ಸಾವಿರ ಹಣವನ್ನು ಠೇವಣೆಯಾಗಿ ಇಡಿಸಲಾಯಿತು.ಈ ವರದಿ ಬಗ್ಗೆಯೂ ಸಮಿತಿ ಶಾಘ್ಲಿಸಿತು. ಇಂಥ ಅನೇಕ ಮಾನವೀಯ ವರದಿಗಳು ಅಳವಂಡಿ ಅವರಿಂದ ಮೂಡಿಬಂದಿವೆ, ಈಗ ಹುಡುಗ ಪದವಿಯಲ್ಲಿ ಓದುತ್ತಿರಬಹುದೇನೋ? ಇದೇ ಹೊತ್ತಲ್ಲಿ ಅಳವಂಡಿ ಅವರು ತುಮಕೂರು ತೊರೆದು  ಹೋಗುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ‘ಪಬ್ಲಿಕ್ ಸ್ಟೋರಿ’ ಆಶಿಸುತ್ತಿದೆ.

ತುಮಕೂರು: ಭೀಕರ ಅಪಘಾತ: ಸಾವು

ತುಮಕೂರು: ಭಾನುವಾರ ಮುಂಜಾನೆ ತುಮಕೂರು ಹೊರವಲಯದ NH 4 ನಲ್ಲಿ ರಂಗಾಪುರ ಮಾಜಿ ಸಚಿವ ಸೂಗಡು ಶಿವಣ್ಣರವರ ಮನೆ ಹತ್ತಿರ ಬೀಕರ ರಸ್ತೆ ಅಪಘಾತದಲ್ಲಿ ಲಾರಿ ಮತ್ತು ಬಸ್  ಮಧ್ಯದಲ್ಲಿ 3 ಜನ ಮೃತ ಪಟ್ಟಿದ್ದಾರೆ.

ಸುಮಾರು ಜನರಿಗೆ ಕಾಲು ಮುರಿದು ಆಸ್ಪತ್ರೆಗೆ   ಸ್ಥಳೀಯರೆ  ದಾಖಲು ಮಾಡಿದ್ದಾರೆ .  ಭೀಕರ ಅಪಘಾತಕ್ಕೆ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ.

ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ರೌಡಿಶೀಟರ್ ಚೊಟ್ಠಕುಮಾರ್ ಹತ್ಯೆ ಮಾಡಿದ ಆರೋಪಿ ಪಂಟರ್ ರಾಜನ ಮೇಲೆ ಪೋಲೀಸರು ಗುಂಡು ಹಾರಿಸಿದ್ದಾರೆ.

ತುಮಕೂರು ಸಮೀಪದ ವಡ್ಡರಹಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುತ್ತಿದ್ದಾಗ  ಕ್ಯಾತ್ಸಂದ್ರ ಪೋಲಿಸ್ ಇನ್ಸ್ಪೆಕ್ಟರ್ ಶ್ರೀಧರ್‌   ಗುಂಡು ಹಾರಿಸಿದ್ದಾರೆ. ಕಾಲಿಗೆ ಎರಡು ಬಾರಿ ಫೈರಿಂಗ್ ಮಾಡಲಾಗಿದೆ. ಫೈರಿಂಗ್ ಮಾಡುವ ಮುನ್ನ ಶರಣಾಗುವಂತೆ ಪೊಲಿಸರು ಸೂಚಿಸಿದ್ದಾರೆ. ಆದರೆ ಪೊಲೀಸರ ಮಾತು ಕೇಳದೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಫೈರಿಂಗ್ ಮಾಡಲಾಗಿದೆ. ಸಿಪಿಐ ಶ್ರೀದರ್‌, ಸಿಬ್ಬಂದಿ ರಮೇಶ್‌ ಗೆ ಗಾಯವಾಗಿದೆ.

ಜಾನುವಾರುಗಳ ಹಬ್ಬ; ಹೀಗೆ ಮಾಡಿದರೆ ರೋಗ ಬರುವುದಿಲ್ಲವಂತೆ

0

ಲೇಖಕರು

ಸ್ಫೂರ್ತಿ ಹೊಸಕೋಟೆ, ವೈ.ಎನ್.ಹೊಸಕೋಟೆ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಯಲ್ಲಪ್ಪನಾಯಕನ ಹೊಸಕೋಟೆ[ವೈ.ಎನ್.ಹೊಸಕೋಟೆ] ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ರೈತಾಪಿವರ್ಗ ದೀಪಾವಳಿ ಹಬ್ಬದ ಸಮಯದಲ್ಲಿ ಗೋವಿನ ಹಬ್ಬ ಆಚರಿಸುವುದು ಈ ಪ್ರದೇಶದ ಸಂಪ್ರದಾಯವಾಗಿದೆ. ಉತ್ತಮ ಫಸಲು ಬಂದು ಹೊಲಗದ್ದೆಗಳು ಹಸಿರಿನಿಂದ ಕಂಗೊಳಿಸುವ ಸಮಯದಲ್ಲಿ ಕೃಷಿಗೆ ಸಹಕರಿಸಿದ ಗೋವು, ಬಸವ, ಕುರಿ, ಮೇಕೆಗಳನ್ನು ಪೂಜಿಸುವ ವಿಧಿಯೇ ಗೋವುಗಳ ಹಬ್ಬವಾಗಿದೆ.

ಅದರಂತೆ ಈ  ವರ್ಷ ವೈ.ಎನ್.ಹೊಸಕೋಟೆ  ರೈತರು ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಕಳು ಹಬ್ಬ ಆಚರಿಸಿದರು. ಹಬ್ಬದ ಆಚರಣೆಗಾಗಿ ಊರ ಹೊರವಲಯದಲ್ಲಿ ಆಕಳು ಗೂಡು ಕಟ್ಟಲಾಗಿತ್ತು. ಗ್ರಾಮದೇವತೆ ಗೌರಸಮುದ್ರ ಮಾರಮ್ಮ ಸೇರಿದಂತೆ  ತುಮ್ಮಲಮಾರಮ್ಮ, ನಿಡಗಲ್ ಮಾರಮ್ಮ ಮತ್ತು ಕೊಲ್ಲಾಪುರದಮ್ಮ ವಿಗ್ರಹಗಳು ದೇವಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದವು.

ರಾಜ ಮನೆತನದ ಸಿಂಗರಿಸಿದ ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯವಿಟ್ಟು ಗೂಡಿನಲ್ಲಿ ಕೂತ್ತಿದ್ದ ದೇವರ ಸುತ್ತಲೂ ಪ್ರದಕ್ಷಿಣೆ ಮಾಡಿಸುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ತದನಂತರ ಸಂಸ್ಥಾನದ ಪ್ರಮುಖರ ಗೋವುಗಳನ್ನು ಸುತ್ತಿಸಲಾಯಿತು. ನಂತರ ಗ್ರಾಮಸ್ಥರು  ರಾಸುಗಳನ್ನು ದೇವರ ಸುತ್ತ ಪ್ರದಕ್ಷಿಣೆ ಹಾಕಿಸಿದರು. ಕುರಿ ಮತ್ತು ಮೇಕೆಗಳು ತಂಡೋಪತಂಡವಾಗಿ ಸುತ್ತು ತಿರುಗುತ್ತಿದ್ದ ವೇಳೆ ನೆರೆದಿದ್ದ ಜನತೆ ಕೇಕೆ ಹಾಕುತ್ತಾ ಅವುಗಳೊಂದಿಗೆ ತಾವು ಸುತ್ತುತ್ತಾ ಸಂಭ್ರಮಿಸಿದರು.

ರಾಸುಗಳನ್ನು ದೇವರ ಸುತ್ತ ಸುತ್ತಿಸುವುದರಿಂದ ದನಕರುಗಳಿಗೆ ಯಾವುದೇ ರೋಗ ರುಜಿನೆ ಬರುವುದಿಲ್ಲ. ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂಬುದು ಜನತೆಯ ನಂಬಿಕೆ. ಇದಕ್ಕೆಪೂರಕವಾಗಿ 60 ಗಾವುದ ದೂರ ಹೋಗಿ ಆಕಳು ಹಬ್ಬ ನೋಡಬೇಕು 90 ಗಾವುದ ದೂರ ಹೋಗಿ ತೊಗಲುಗೊಂಬೆ ಪ್ರದರ್ಶನ ನೋಡಬೇಕು ಎಂಬ ನಾಲ್ನುಡಿಯೂ ಚಾಲ್ತಿಯಲಿದೆ.

ಜಾನುವಾರುಗಳ ಪ್ರದಕ್ಷಿಣೆ ಮುಗಿದ ನಂತರ ಕಂಬಳಿ ಎಡೆ ಹಾಕಿ ಕುರುಬಗೌಡರ ಮನೆಯಿಂದ ಬಂದಿದ್ದ ಸಿರಿಧಾನ್ಯ ಸಜ್ಜೆಯ ಮುದ್ದೆ ಮತ್ತು ಬದನೆಕಾಯಿ ಚಟ್ನಿಯ ಪ್ರಸಾದವನ್ನು ಸವಿದ ಜನತೆ ದೇವರ ದರ್ಶನ ಪಡೆದು ಊರ ಕಡೆ ಹೆಜ್ಜೆ ಹಾಕಿದರು. ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಬಂದ ಉತ್ಸವ ಮೂರ್ತಿಗಳಿಗೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ ಉರುಮೆ ವಾದ್ಯಗಳ ತಾಳಕ್ಕೆ ತಕ್ಕಂತೆ ಕುಣಿದು ಯುವಜನತೆ ಸಂಭ್ರಮಿಸಿದರು.

 

ತುಮಕೂರು ರೈಲುಗಳ ಹಿಂದೆ ಓಡಿದ ‘ಯುವಕನಿಗೆ ರಾಜ್ಯೋತ್ಸವ’ ಗರಿ

0

ಸಿ.ಕೆ.ಮಹೇಂದ್ರ ಕೃಷ್ಣಮೂರ್ತಿ

ಇವರು ಬಹುತೇಕ ಜನರಿಗೆ ಗೊತ್ತಿಲ್ಲ. ಮೊನ್ನೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಾಗ  ಯಾರಿವರು ಎಂದವರೇ ಹೆಚ್ಚು ಜನರು. ಮುಖವಂತೂ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ ಬಿಡಿ. ಇವರನ್ನು ತುಮಕೂರು ರೈಲುಗಳ ಹಿಂದೆ ಓಡಿದ ಯುವಕ ಎಂದು ಕರೆದರೆ ತಪ್ಪಿಲ್ಲ.

ಸರ್ಕಾರಿ ಕೆಲಸದಿಂದ ನಿವೃತ್ತಿಯಾದ ಬಳಿಕ ಇವರು ಆಯ್ಕೆ ಮಾಡಿಕೊಂಡಿದ್ದು ತುಮಕೂರು ರೈಲು ಸಂಚಾರ ಸುಧಾರಣೆಯ ಕೆಲಸವನ್ನು. ಇದಕ್ಕೆ ಇವರು ಯಾರನ್ನೂ ಕಾಯಲಿಲ್ಲ. ಅಭಿವೃದ್ಧಿ ರೆವಲ್ಯೂಷನ್ ಫೋರಂನ ಕುಂದರನಹಳ್ಳಿ ರಮೇಶ್ ಸ್ನೇಹಿತರಾದ ಬಳಿಕ ಈ ಇಬ್ಬರರೂ ಒಂದೇ ಧ್ಯಾನ. ತುಮಕೂರು ರೈಲು ಸಂಪರ್ಕದ ಸುಧಾರಣೆ ಹೇಗೆ?

ಅಂದ ಹಾಗೆ ಇವರ ಹೆಸರು ರಘೋತ್ತಮ ರಾವ್. ಸಾದ ಸೀದಾ ಸರಳ ಮನುಷ್ಯ, ರಾತ್ರಿ ಹನ್ನೆರಡು- ಒಂದು ಗಂಟೆಯಾದರೂ ರೈಲ್ವೆ ಇಲಾಖೆಯ ಹೊಸ ಹೊಸ ಯೋಜನೆಗಳ ಬಗ್ಗೆ ಕಣ್ಣಾಡಿಸುತ್ತಲೇ ಇರುತ್ತಾರೆ. ಈ ಯೋಜನೆಗಳಲ್ಲಿ ಯಾವವು ತುಮಕೂರು ಮೇಲೆ ಹಾದು ಹೋಗರೆ ಎಲ್ಲಿಗೆ ಸಂಪರ್ಕ ಕಲ್ಪಿಸಬಹುದು ಎಂದು ಲೆಕ್ಕಾಚಾರದಲ್ಲಿ ತೊಡಗಿರುತ್ತಾರೆ.

ಹದಿನೈದು-ಇಪ್ಪತ್ತು ವರ್ಷಗಳ ಮಾತು.  ಈ ರಘೋತ್ತಮ ರಾವ್ ಯಾವಾಗಲೂ ಸಂಸದ ಜಿ.ಎಸ್.ಬಸವರಾಜ್ ಕಚೇರಿಗೂ ಸುತ್ತಾಡುತ್ತಿದ್ದರು. ಮಾತೆತ್ತಿದ್ದರೆ ಸಾಕು ರೈಲು,  ಸಂಸದರಿಗೂ ಬೇಜಾರು. ಇವನ್ಯಾರಪ್ಪ ದಿನಾ ಆಫೀಸಿಗೆ ಅಲೆಯುತ್ತಾನೆ ಎಂದು ಕುಂದರನಹಳ್ಳಿ ರಮೇಶ್ ಬಳಿ ಹಂಚಿಕೊಂಡರು., ನಂತರದು ಇತಿಹಾಸ,

ತುಮಕೂರಿನ ಅನೇಕ ರೈಲು ಗಾಡಿಗಳ ಸಂಪರ್ಕ, ಹೊಸ ಯೋಜನೆಗಳ ಜಾರಿ ಈ ಇಬ್ಬರ ಪರಿಶ್ರಮ ಇದೆ. ಈ ಇಬ್ಬರೂ ಸಂಸದ ಬಸವರಾಜ್ ಅವರನ್ನು ಕಾಡಿಬೇಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮಾಡಿ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸಿದ್ದಾರೆ. ಇದಕ್ಕಾಗಿ ದೆಹಲಿಗೂ ಹೋಗಿ ಬಂದಿದ್ದಾರೆ.

ಇವರ ಪರಿಶ್ರಮ, ಆಸಕ್ತಿ ಗಮನಿಸಿ ರೈಲ್ವೆ ಇಲಾಖೆಯ ನಾಗರಿಕರ ಸಮಿತಿಗೆ ರಘೋತ್ತಮರಾವ್ ಅವರನ್ನು ಸದಸ್ಯರನ್ನಾಗಿ ಸಹ ಕೇಂದ್ರ ಸರ್ಕಾರ ನೇಮಕ ಮಾಡಿತ್ತು.  ಬೆಂಗಳೂರಿನಿಂದ ತುಮಕೂರಿಗೆ ಡೆಮು ರೈಲು ಬರಬೇಕೆಂದು ಕನಸು ಕಂಡ ಮೊದಲಿಗ ಈ ರಘೋತ್ತಮ ರಾವ್.

ಈಗ ಡೆಮು ರೈಲು ಬಂದಿದೆ, ಅದು ಬರುಬರುತ್ತಲೇ ರಘೋತ್ತಮ ರಾವ್ ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಹೊತ್ತು ತಂದಿದೆ. ಪ್ರಶಸ್ತಿಯ ಮೌಲ್ಯವೂ ಹೆಚ್ಚಿದೆ. ಸಮಾಜ ಸೇವೆಯನ್ನು ಗುರುತಿಸುವ ಪರಿಗೂ ಹೊಸ ಕಣ್ಣೋಟ ಸಿಕ್ಕಿದೆ ಎನ್ನಬಹುದೇನೋ?

 

ಸ್ಮಾರ್ಟ್ ಸಿಟಿ ಎಫೆಕ್ಟ್ : ತುಮಕೂರು ಬಸ್ ನಿಲ್ದಾಣ ಸ್ಥಳಾಂತರ

ತುಮಕೂರು: ಸ್ಮಾರ್ಟ್ಸ್ ಸಿಟಿ ಯೋಜನೆಯಡಿ ನಗರದ ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದ ನಿರ್ಮಾಣ ಕಾಮಗಾರಿಯು ಆರಂಭವಾಗುತ್ತಿದೆ. ಈ ಹಿನ್ನಲೆಯಲ್ಲಿ ನವೆಂಬರ್ ೧೮ ರಿಂದ ಜೆಸಿ ರಸ್ತೆಯಲ್ಲಿರುವ ಕೆಸ್ಸಾರ್ಟಿಸಿ ಘಟಕ ೧ರ ಸ್ಥಳಕ್ಕೆ ತಾತ್ಕಾಲಿಕವಾಗಿ ಬಸ್ಸು ನಿಲ್ದಾಣ  ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಸ್ಸಾರ್ಟಿಸಿ, ಸ್ಮಾರ್ಟ್ಸಿಟಿ ಮಹಾನಗರ ಪಾಲಿಕೆ ಹಾಗೂ ಪೋಲಿಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ತುಮಕೂರು ನಗರದಲ್ಲಿರುವ  ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣ ಹೈಟೆಕ್ ಆಗಿ ನಿರ್ಮಾಣ ಮಾಡಲು ಸ್ಮಾಟ್ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಯು ಪೂರ್ಣ ಗೊಳ್ಳುವರೆಗೂ ಈಗಿರುವ ಬಸ್ಸು ನಿಲ್ದಾಣದ ಹತ್ತಿರದಲ್ಲಿರುವ ಜೆಸಿರಸ್ತೆಯ ಕೆಸ್ಸಾರ್ಟಿಸಿ ಬಸ್ಸು ಡಿಪೋ ಸ್ಥಳಕ್ಕೆ ನಿಲ್ದಾಣ ಸ್ಥಳಾಂತರಿಸಿ ಅಲ್ಲಿಂದ ಬಸ್ಸುಗಳನ್ನು ಓಡಿಸಿದರೆ ಸಾರ್ವಜನಿಕರಿಗೆ ಅನೂಕೂಲವಾಗಲಿದೆ ಎಂದರು.

ಬಸ್ಸುಗಳು ಹೊಸ ಸ್ಥಳದಿಂದ ಕಾರ್ಯಾಚರಣೆ ಆರಂಭಿಸುವ ಮೊದಲು ಅಶೋಕ ರಸ್ತೆ, ಜೆಸಿ ರಸ್ತೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರ ರಸ್ತೆ ಸೇರಿದಂತೆ ನಿಲ್ದಾಣವನ್ನು ಸಂದಿಒಸುವ ರಸ್ತೆಗಳು ಸ್ವಚ್ಛವಾಗಿರಬೇಕು.ಬಸ್ಸುಗಳ ಸಂಚಾರಕ್ಕೆ ಸಮರ್ಪಕವಾಗಿರುವಂತೆ ನವೆಂಬರ್ ೧೫ರೊಳಗೆ ಈಗಾಗಲೇ ಕೈಗೊಂಡಿರುವ ಕಾಮಗಾರಿ ಪೊರ್ಣಗೋಳಿಸಬೇಕು ಎಂದು ಸೂಚನೆ ನೀಡಿದರು.

ಜೆಸಿ ರಸ್ತೆ, ಪ್ರಶಾಂತ ಚಿತ್ರಮಂದಿರ ರಸ್ತೆ, ಕೆನರಾಬ್ಯಾಂಕ್ ರಸ್ತೆ ಹಾಗೂ ಆಶೋಕ ರಸ್ತೆಗಳಲ್ಲಿ ವಾಹನ ನಿಲುಗಡೆ ಮುಕ್ತ ರಸ್ತೆಯನ್ನಾಗಿ ಘೋಷಿಸಬೇಕಾಗಿದೆ. ಗುಬ್ಬಿವೀರಣ್ಣ ಕಲಾ ಕ್ಷೇತ್ರದ ರಸ್ತೆಯಲ್ಲಿ ಕ್ಯಾಂಟರ್ಗಳು ಗೂಡ್ಸ್ ವಾಹನಗಳ ನಿಲ್ದಾಣವಿದ್ದು ಬೇರೆಡೆಗೆ ಸ್ಥಳಾಂತರಿಸಬೇಕಿದೆ. ಈ ವಾಹನಗಳು ಟ್ರಕ್ ಟರ್ಮಿನಲ್ಲಿ ನಿಲುಗಡೆ ಮಾಡಿಕೊಳ್ಳಲ್ಲಿ ನಗರದ ಒಳಗಡೆ ದೊಡ್ಡ ವಾಹನಗಳ ಪಾರ್ಕಿಂಗ್ಗೆ ಅವಕಾಶವಿಲ್ಲ

ಮಂಡಿಪೇಟೆ ಸೇರಿದಂತೆ ನಗರದ ವಹಿವಾಟು ಪ್ರದೇಶಗಳಿಗೆ ಸರಕು ಗಳನ್ನು ತರುವ ದೊಡ್ಡ ವಾಹನಗಳಿಗೆ ರಾತ್ರಿ ೯ ಗಂಟೆಯಿಂದ ಬೆಳಿಗ್ಗೆ  ೮ ಗಂಟೆಯವರೆಗೆ ಒಳ ಪ್ರವೇಶಿಸಲು ಅವಕಾಶ ನೀಡಿದರೆ ಸೂಕ್ತ. ಇದರಿಂದ ನಗರದ ಸಂಚಾರ ದಟ್ಟಣೆ ತಡೆಗಟ್ಟಬಹುದು. ಈ ಕುರಿತು ಅಧಿಸೂಚನೆ ಹೊರಡಿಸಲು ಸೂಕ್ತ ಪ್ರಸ್ತಾವನೆ ಇನ್ನೆರಡು ದಿನಗಳಲ್ಲಿ ಸಲ್ಲಿಸುವಂತೆ ತುಮಕೂರು ಡಿವೈಎಸ್ಪಿ ತಿಪ್ಪೇಸ್ವಾಮಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಬಸ್ಸು ನಿಲ್ದಾಣದ ಬದಲಾವಣೆ ಹಾಗೂ ರಸ್ತೆ ಮಾರ್ಗದ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ನೀಡಬೇಕು. ರೂಟ್ಮ್ಯಾಪ್ನ ಬಗ್ಗೆ ೩೦ ಸೆಕೆಂಡಿನ ವಿಡೀಯೋ ಸಿದ್ದಪಡಿಸಿ ವಾಟ್ಸಾಪ್ ಗ್ರೂಫ್ಗಳಲ್ಲಿ ಶೇರ್ ಮಾಡಬೇಕು. ತಾತ್ಕಾಲಿಕ ಬಸ್ಸು ನಿಲ್ದಾಣಕ್ಕೆ ಹೊಂದಿಕೊಂಡಂತೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಮುಂಭಾಗದಲ್ಲಿ ಆಟೋಗಳಿಗೆ ನಿಲ್ದಾಣ  ಕಲ್ಪಿಸಲಾಗುವುದು ಎಂದರು.

ನಿರ್ಮಾಣ ಕಾಮಗಾರಿ ಕೈಗೊಂಡಿರುವ ಎಂ.ಜಿ ಕ್ರೀಡಾಂಗಣ ಹಾಗೂ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಕಾಂಕ್ರೀಟ್, ಜಲ್ಲಿ ಸೇರಿದಂತೆ ಅವಶ್ಯಕತೆಯಿರದ ತ್ಯಾಜ್ಯ ವಸ್ತುಗಳನ್ನು ತುಮಕೂರು ನಗರದ ಹೊರವಲಯದ ಅಮಲಾಪುರದಲ್ಲಿ ಗುರ್ತಿಸಿರುವ ಪ್ರದೇಶದಲ್ಲಿ ಸುರಿಯುವಂತೆ ಇಂಜಿನಿಯರ್ಗಳಿಗೆ ಸೂಚಿಸಿದ ಅವರು ತ್ಯಾಜ್ಯ ವಸ್ತುಗಳನ್ನು ಪುನರ್ ಬಳಕೆ ಮಾಡಲು ಚಿಂತಿಸಲಾಗಿದೆ ಎಂದು ಹೇಳಿದರು.ಳ್ಳಿ ಪಂಚಾಯತಿ ಸೇರ್ಪಡೆ ಮಾಡಿದರೆ ಅನುಕೂಲವಾಗುತ್ತದೆ.

ಕೊಳೆತು ನಾರುತಿದೆ ಖಾಸಗಿ  ಬಸ್ ನಿಲ್ದಾಣ

ಸ್ಮಾರ್ಟ್ ಸಿಟಿ ಏನೋ ಸರಿ. ಆದರೆ ಖಾಸಗಿ  ಬಸ್ ನಿಲ್ದಾಣದ ಪರಿಸ್ಥಿತಿಯನ್ನು ಸರಿಮಾಡುವುದರತ್ತಲೂ ಗಮನ ಹರಿಸಬೇಕು, ಈ ನಿಲ್ದಾಣ ಕೊಳೆತು ನಾರುತ್ತಿದೆ. ಕೊಳೆಯನ್ನು ಮೊದಲು ತೆಗೆಯಿರಿ. ನಂತರ ಕೋಟ್ಯಂತರ ರೂಪಾಯಿ ಕಾಮಗಾರಿ ಮಾಡಿ. ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಒಮ್ಮೆ ಭೇಟಿ ಕೊಟ್ಟರೆ ಸಿಟಿಯ ನಿಜ ದರ್ಶನ ಆಗಲಿದೆ.

ಕರಿಬಸವಯ್ಯ. ವಕೀಲರು