Sunday, December 28, 2025
Google search engine
Home Blog Page 326

ಹಳೆಗನ್ನಡ ಓದು ಬೆಳೆಯಲಿ

ಆಧುನಿಕ ಯುಗದಲ್ಲಿ ಹಳೆಗನ್ನಡದ ಓದು ಕಡಿಮೆಯಾಗಿದ್ದರೂ ಅದು ಇನ್ನೂ ನಿಂತಿಲ್ಲ. ಮನೆಮನೆಗಳಲ್ಲಿ ಹಳಗನ್ನಡ ಓದುವ ಸಂಸ್ಕೃತಿ ಬೆಳೆಯಬೇಕಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಭೀಮಸೇನ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಮಾರವ್ಯಾಸ ಅಧ್ಯಯನ ಪೀಠ ಹಾಗೂ ಮಂಗಳೂರು ವಿವಿಯ ರತ್ನಾಕರವರ್ಣಿ ಅಧ್ಯಯನ ಪೀಠ ಸಹಯೋಗದಲ್ಲಿ ಏರ್ಪಡಿಸಿದ್ದ ಹಳೆಗನ್ನಡ ಕಾವ್ಯಗಳ ಓದು ಮತ್ತು ವ್ಯಾಖ್ಯಾನ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಗೂಗಲ್ ಓದುವಿನೊಂದಿಗೆ ಗ್ರಂಥಾಲಯ ಓದು ಕೂಡ ಆರಂಭವಾಗಿದೆ.ಹಳಗನ್ನಡ ಓದು ಪ್ರತೀ ಮನೆಯಲ್ಲೂ ಬೆಳೆಯಬೇಕಿದೆ. ತುಮಕೂರು ನಾಟಕ ಕಲೆಗೆ ಹೆಸರಾಗಿದ್ದು, ನಾಟಕ ರಂಗದಲ್ಲಿ ಆಗುವ ತಪ್ಪುಗಳನ್ನು ಗುರುತಿಸುವ ಜ್ಞಾನ ಇಲ್ಲಿನ ಸಾಮಾನ್ಯ ಪ್ರೇಕ್ಷಕನಲ್ಲಿದೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ವೈ.ಎಸ್ ಸಿದ್ದೇಗೌಡ ಮಾತನಾಡಿ, ಹಳೆಗನ್ನಡ ಬೇರಿನಲ್ಲಿ ಹೊಸಗನ್ನಡದ ಚಿಗುರು ಇದೆ.

ಯಾವುದೇ ಭಾಷೆ ಅಲ್ಲಿನ ಭೌಗೋಳಿಕ ಪ್ರದೇಶ, ಜನಜೀವನ ಹಾಗೂ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ಪ್ರತಿಬಿಂಬವಾಗಿರುತ್ತದೆ ಎಂದು ಹೇಳಿದರು.
ಪ್ರೌಢರಾದಂತೆ ಓದುವ ಕೌಶಲ್ಯ, ಜ್ಞಾನ, ವಿವೇಕ ಬೆಳೆಯಬೇಕು. ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದರ ಕುರಿತ ತಿಳುವಳಿಕೆ ಓದಿಗೆ ಮಾತ್ರ ಸೀಮಿತವಾಗದೆ, ಅವರ ಜೀವನ ಕ್ರಮ ಅನುಸರಿಸಬೇಕು, ನಮಲ್ಲಿ ಸಂಪದ್ಭರಿತ ಇತಿಹಾಸವಿದೆ. ನಾವು ಐತಿಹಾಸಿಕ ವ್ಯಕ್ತಿಗಳ ಆದರ್ಶಗಳನ್ನು ಅಳವಡಿಸಿಕೊಳ್ಳವುದರ ಮೂಲಕ ಜೀವನದಲ್ಲಿ ಮುಂದುವರಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಮೈಸೂರು ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ. ಮಳಲಿ ವಸಂತ್ ಕುಮಾರ್, ತುಮಕೂರು ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ಡಿ.ವಿ. ಪರಮಶಿವಮೂರ್ತಿ, ಕುಮಾರವ್ಯಾಸಪೀಠದ ಸಂಯೋಜಕ ಡಾ. ಪಿ. ಎಂ. ಗಂಗಾಧರಯ್ಯ, ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕ ಪ್ರೊ. ಸೋಮಣ್ಣ ಉಪಸ್ಥಿತರಿದ್ದರು.

ನವೆಂಬರ್ -21 ರಂದು ಪಾವಗಡ ತಾಲ್ಲೂಕು ಬಂದ್ ಗೆ ಕರೆ

ಪಾವಗಡ: ತಾಲ್ಲೂಕಿನಾದ್ಯಂತ ಸಾಕಷ್ಟು ಸಮಸ್ಯೆಗಳಿದ್ದರೂ ಅಧಿಕಾರಿಗಳು ಬೇಜವಬ್ಧಾರಿತನ ಪ್ರದರ್ಶಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವತ್ತ ಗಮನಹರಿಸದಿದ್ದರೆ ನವೆಂಬರ್-21 ರಂದು ತಾಲ್ಲೂಕು ಬಂದ್ ನಡೆಸಲಾಗುವುದು ಎಂದು ಹಸಿರು ಸೇನೆ ಅಧ್ಯಕ್ಷ ಪುಜಾರಪ್ಪ ಎಚ್ಚರಿಸಿದರು.

6 ತಿಂಗಳಿಂದ ಸರ್ಕಾರ ನೀಡುವ ವೃದ್ಧಾಪ್ಯ ವೇತನ, ಅಂಗ ವಿಕಲ ವೇತನವಿಲ್ಲದೆ ಬಡ ಜನತೆ ಅಂಚೆ ಕಚೇರಿ ತಹಶೀಲ್ದಾರ್ ಕಚೇರಿ ಅಲೆಯುತ್ತಿದ್ದಾರೆ. ಆಧಾರ್ ಮಾಡಿಸಿಕೊಳ್ಳಲು ಆಂಧ್ರ ಸೇರಿದಂತೆ ಬೇರೆಡೆ ಹೋಗಬೇಕಿದೆ. ರೈತರ ಸಾಲ ಮನ್ನಾ ಕೇವಲ ಕಡತಗಳಿಗೆ ಸೀಮಿತವಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮನೆ ಇರುವರಿಗೆ, ಹಣ ಕೊಡುವರಿಗೆ ಮನೆ ಹಾಕಿ ಕೊಡುತ್ತಿದ್ದಾರೆ. ಸರ್ಕಾರ ಕೊಡುವ 1.5 ಲಕ್ಷ ರೂಪಾಯಿ ಪಾಯ ಹಾಕಿಸಲೂ ಸಾಲುತ್ತಿಲ್ಲ  ಎಂದು ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆರೋಪಿಸಿದರು.

ಜೆಡಿಎಸ್ ಪಕ್ಷದ ವಕ್ತಾರ ಅಕ್ಕಲಪ್ಪ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾಗೆ ಅಗತ್ಯವಿರುವ ಅನುದಾನ ಮೀಸಲಿಟ್ಟಿದ್ದರು. ಈಗಿನ ಸರ್ಕಾರ ಕೂಡಲೇ ಸಾಲ ಮನ್ನಾ ಅನುದಾನವನ್ನು ರೈತರ ಖಾತೆಗೆ ವರ್ಗಾಯಿಸಬೇಕು. ರೈತರ ಬಗ್ಗೆ ಬಿಜೆಪಿ ಸರ್ಕಾರ ತಾತ್ಸಾರ ಮನೋಭಾವ ಪ್ರದರ್ಶಿಸಬಾರದು. ಜೆಡಿಎಸ್ ತಾಲ್ಲೂಕು ಘಟಕ ರೈತರು ನಡೆಸಲಿರುವ ಬಂದ್ ಗೆ ಬೆಂಬಲ ನೀಡಲಿದೆ ಎಂದರು.

ರೈತ ಮುಖಂಡ ಗಂಗಾಧರ್ ಮಾತನಾಡಿ,  ಸರ್ಕಾರ, ಜನಪ್ರತಿನಿಧಿಗಳ ಅಸಮರ್ಥತೆಯಿಂದ ಬಡ ಜನತೆಗೆ ಅನ್ಯಾಯವಾಗುತ್ತಿದೆ. ಸಾಕಷ್ಟು ಮಂದಿ ರೈತರ ಖಾತೆಗೆ ಸಾಲ ಮನ್ನಾ ಹಣ ಬಂದಿಲ್ಲ  ಎಂದು ದೂರಿದರು.

ಮುಖಂಡ ಅಶ್ವಥಪ್ಪ, ಪಾತಣ್ಣ, ಹನುಮಂತರಾಯಪ್ಪ, ಶಿವಕುಮಾರ್, ಸಿದ್ದಪ್ಪ, ನರಸಪ್ಪ, ಈರಣ್ಣ, ಗಿರಿಯಪ್ಪ, ಮೂಡಲಪ್ಪ, ತಿಮ್ಮಣ್ಣ, ಚನ್ನಗಿರಪ್ಪ  ಉಪಸ್ಥಿತರಿದ್ದರು.

ಕಚೇರಿ ಅಲೆದು ಬೇಸತ್ತು, ತಹಶೀಲ್ದಾರ್ ಗೆ ಬೆಂಕಿ ಇಟ್ಟ ಘಾತುಕ! ಮುಂದೇನಾಯಿತು?

ತೆಲಾಂಗಣ: ತಹಶೀಲ್ದಾರ್ ಮೇಲೆ ಪೆಟ್ರೋಲ್ ಸುರಿದು ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್​​ ನಲ್ಲಿ ಸೋಮವಾರ (ನ.4)ದಂದು ನಡೆದಿದೆ.

ಅಬ್ದುಲ್ಲಾಪುರಮೆಟ್​​ ಈಚೆಗೆ ಮಂಡಲ್ ಆಗಿ ಪರಿವರ್ತೆನೆಯಾದ ನಂತರ ವಿಜಯಾರೆಡ್ಡಿ ಮೊದಲ ತಹಶೀಲ್ದಾರ್ ಆಗಿ ಅಧಿಕಾರಿ ಸ್ವೀಕರಿಸಿದ್ದರು. ವ್ಯಕ್ತಿಯೋರ್ವ ಬ್ಯಾಗ್ ಹಿಡಿದು ಕಚೇರಿ ಒಳಗೆ ಪ್ರವೇಶಿಸಿದ್ದ. ನಂತರ ತಹಶೀಲ್ದಾರ್ ಕೋಣೆಗೆ ಏಕಾ ಏಕಿ ಪ್ರವೇಶಿಸಿ ಪೆಟ್ರೋಲ್ ಎಣ್ಣೆ ಸುರಿದು ಬೆಂಕಿ ಹೊತ್ತಿಸಿ, ತಾನೂ ಬೆಂಕಿ ಇಟ್ಟುಕೊಂಡಿದ್ದ.  ತಹಶೀಲ್ದಾರ್ ವಿಜಯರೆಡ್ಡಿ ಸ್ಥಳದಲ್ಲಿಯೇ ಮತಪಟ್ಟಿದ್ದಾರೆ.

https://youtu.be/SrRs5A3w14A

ತಹಶೀಲ್ದಾರ್ ವಿಜಯರೆಡ್ಡಿ ಅವರನ್ನು ಕಾಪಾಡಲು ಹೋದ ಇಬ್ಬರು ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ.  ಬೆಂಕಿ ಹೊತ್ತಿಸಿಕೊಂಡ ಆರೋಪಿ ಕಚೇರಿಯಿಂದ ಚೀರಾಡಿಕೊಂಡು ಹೊರಹೋದನು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ವಿಜಯ ರೆಡ್ಡಿ ಅವರ ಶವವನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ. ನಂತರ ಆರೋಪಿ ಸುರೇಶ್‌ ಅವರನ್ನು ಬಂಧಿಸಲಾಗಿದೆ.

ಸುರೇಶ್ ಭೂ ವಿವಾದ ಬಗೆಹರಿಸುವಂತೆ ಹಲ ದಿನಗಳಿಂದ ತಹಶೀಲ್ದಾರ್ ಕಚೇರಿ ಅಲೆಯುತ್ತಿದ್ದ. ಿದೇ ವಿಚಾರಕ್ಕೆ ತಹಶೀಲ್ದಾರ್ ಬಳಿ ಮಾತನಾಡಬೇಕು ಎಂದು ಅನುಮತಿ ಪಡೆದು ತಹಶೀಲ್ದಾರ್ ಕೊಠಡಿ ಒಳ ಹೋಗಿದ್ದ. ಊಟಕ್ಕೆ ಹೊರಟಿದ್ದ ತಹಶೀಲ್ದಾರ್ ಈತನ ಜೊತೆ ಸುಮಾರು ಅರ್ಧ ಗಂಟೆ ಕಾಲ ಚರ್ಚಿಸಿದ್ದರು. ನಂತರ ಆರೋಪಿ ಸುರೇಶ್ ಕೊಠಡಿ ಬಾಗಿಲು ಮುಚ್ಚಿ ಹಲ್ಲೆ ನಡೆಸಿದ್ದಾನೆ. ತಹಶೀಲ್ದಾರ್ ಚಾಲಕ ಬಾಗಿಲು ತೆಗೆಯಲು ಯತ್ನಿಸಿ ವಿಫಲರಾಗಿದ್ದಾರೆ.

ಕಡೆಗೆ ಸುರೇಶ್ ತಹಶೀಲ್ದಾರ್ ಕೊಠಡಿ ಬಾಗಿಲು ತೆಗೆದು ಬೆಂಕಿ ಹೊತ್ತಿದ್ದ ಷರ್ಟ್ ಬಿಸಾಕಿ ಷಾರ್ಟ್ ಸರ್ಕ್ಯುಟ್ ನಿಂದ ಕೊಠಡಿಗೆ ಬೆಂಕಿ ವ್ಯಾಪಿಸಿದೆ ಎಂದು ಚೀರುತ್ತಾ ಓಡಿ ಹೋಗಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ನಂತರ ಸಂಪೂರ್ಣ ತಹಶೀಲ್ದಾರ್ ಕಚೇರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಂದಾಯ ಇಲಾಖೆಯ ಸಿಬ್ಬಂದಿ, ನೌಕರರು ತಹಶೀಲ್ದಾರ್ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಯಿಯಾಗುವರೇ ದೀಪಿಕಾ; ವೈರಲ್ ಆದ `ದೀಪಾವಳಿ ಬಳಿಕ ಸಂಭ್ರಮ’ ಪೋಸ್ಟ್

ಮುಂಬೈ: ‘ದೀಪಾವಳಿ ಬಳಿಕ ಸಂಭ್ರಮ‘ ಎಂದು  ಜಾಲತಾಣದಲ್ಲಿ ದೀಪಿಕಾ ಪಡುಕೋಣೆ ಹಂಚಿಕೊಂಡಿರುವ ಸಂತಸಕ್ಕೆ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ!

ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದೀಪಿಕಾ ಈ ವಿಷಯವನ್ನು ಇನ್ನು ಖಚಿತಪಡಿಸಿಲ್ಲ. ಆದರೆ ಅವರು ಭಾನುವಾರ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ  ತಾವು ಮಗುವಾಗಿದ್ದಾಗಿನ ಫೋಟೊವನ್ನು ಪೊಸ್ಟ್‌ ಮಾಡಿ ದೀಪಾವಳಿ ಬಳಿಕ ಸಂಭ್ರಮ ಎಂದು  ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಸಾಕಷ್ಟು ವೈರಲ್‌ ಆಗಿದ್ದು ದೀಪಿಕಾ ತಾಯಿಯಾಗಲಿದ್ದಾರೆ ಎಂಬುದನ್ನು ಖಚಿತಪಡಿಸಿದೆ ಎಂದು ಅವರ ಅಭಿಮಾನಿಗಳು ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ದೀಪಿಕಾ ಪೋಸ್ಟ್‌ಗೆ ಅಭಿಮಾನಿಗಳು ಅಭಿನಂದನೆಗಳನ್ನು ಹೇಳುತ್ತಿದ್ದಾರೆ.

ದೀಪಿಕಾ ಮತ್ತು ಪತಿ ರಣವೀರ್ ಅವರು ಕಳೆದ ಮಾರ್ಚ್‌ನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಸೆರೆಸಿಕ್ಕ ದೃಶ್ಯಾವಳಿಯೊಂದರ ಪ್ರಕಾರ ದೀಪಿಕಾ ಅವರು ಗರ್ಭಿಣಿ ಎಂದು ಆಗಲೇ ಸುದ್ದಿಯೊಂದು ವೈರಲ್‌ ಆಗಿತ್ತು. . ಬಾಲಿವುಡ್‌ನ ಈ ಜೋಡಿ ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿರಿಸಿತ್ತು.

ಚಿತ್ರ ನಟ ವಿ.ರವಿಚಂದ್ರನ್ ಇನ್ನು ಮುಂದೆ ಡಾಕ್ಟರ್

ಬೆಂಗಳೂರು: ಇಲ್ಲಿ ನಡೆದ ಸಿ.ಎಂ.ಆರ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ಉನ್ನತ ಶ್ರೇಣಿಯಲ್ಲಿ  ಉತ್ತೀರ್ಣರಾದ 17 ವಿದ್ಯಾರ್ಥಿಗಳು  18 ಚಿನ್ನದ ಪದಕಗಳನ್ನು ಪಡೆದರು.

ಭಾನುವಾರ ನಡೆದ ಸಮಾರಂಭದಲ್ಲಿ ಎಂ.ಕಾಂ ವಿಭಾಗದಲ್ಲಿ ಉನ್ನತ ಶ್ರೇಣಿ ಪಡೆದ ಪ್ರಿಯಾದರ್ಶಿನಿ ಸಿ.ಎಂ.ಆರ್ ಚಿನ್ನದ ಪದಕ ಮತ್ತು ಐಎಸ್‌ಡಿಸಿ ಚಿನ್ನದ ಪದಕವನ್ನು ಪಡೆದುಕೊಂಡರು. ಚಿತ್ರನಟ ವಿ. ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು 216 ವಿದ್ಯಾರ್ಥಿಗಳಿಗೆ ಪದವಿ,  ಮೂವರಿಗೆ ಡಾಕ್ಟರೇಟ್, 198 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ ವಿತರಿಸಿದರು.

ವಿ. ರವಿಚಂದ್ರನ್ ಡಾಕ್ಟರೇಟ್ ಸ್ವೀಕರಿಸಿ,  ಕಲಾ ಸೇವೆಯನ್ನು ಗುರುತಿಸಿ, ಗೌರವ ಡಾಕ್ಟರೇಟ್‌ ನೀಡಿರುವುದು ಸಂತಸ ತಂದಿದೆ. ಗೌರವ ಡಾಕ್ಟರೇಟ್ ಅನ್ನು ನನ್ನನ್ನು ಸಿನಮಾ ಕ್ಷೇತ್ರಕ್ಕೆ ಪರಿಚಯಿಸಬೇಕು ಎಂದು ಕನಸ್ಸು ಕಂಡು ಸಾಧನೆಗೆ ಪ್ರೋತ್ಸಾಹಿಸಿದ ತಂದೆಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಬೀದಿ ನಾಯಿಗಳ ದಾಳಿಗೆ ಬಾಲಕಿ ಸಾವು

0

ರಾಮನಗರ:  ಬೀದಿ ನಾಯಿಗಳ ದಾಳಿಗೆ ಮೋನಿಕಾ ಎಂಬ ಐದು ವರ್ಷದ ಬಾಲಕಿ ಬಿಡದಿ ಪಟ್ಟಣದ ಕೆಂಚನಕುಪ್ಪೆ ಜನತಾ ಕಾಲೊನಿಯಲ್ಲಿ ಮೃತಪಟ್ಟಿದ್ದಾಳೆ.

ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿ  ಮೇಲೆ ಶನಿವಾರ ಸಂಜೆ  ನಾಯಿಗಳು ಏಕಾ ಏಕಿ ಎರಗಿ ತೀವ್ರವಾಗಿ ಗಾಯಗೊಳಿಸಿದ್ದವು. ಚಿಕಿತ್ಸೆಗಾಗಿ ಬಾಲಕಿಯನ್ನು ಬೆಂಗಳೂರಿನ  ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆ ಬಗ್ಗೆ ಗ್ರಾಮಸ್ಥರು ಪುರಸಭೆ ನಿರ್ಲಕ್ಷ್ಯ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂತ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳ ಅಸಮಾಧಾನ; ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್

ನವದೆಹಲಿ: ಬಾಂಗ್ಲಾ ವಿರುದ್ಧ ಪಂತ್ ಮಾಡಿದ ಎಡವಟ್ಟುಗಳನ್ನು ಜೀರ್ಣಿಸಿಕೊಳ್ಳಲಾಗದ ಭಾರತದ ಕ್ರಿಕೆಟ್‌ ಅಭಿಮಾನಿಗಳು ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡಿದ್ದಾರೆ.

ಟಿ–20 ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಮೂರು ಎಸೆತಗಳು ಉಳಿದಿರುವಂತೆ ಏಳು ವಿಕೆಟ್‌ಗಳಿಂದ ಭಾರತದ ಎದುರು ಜಯಗಳಿಸಿತು. ದೋನಿ ಅನುಪಸ್ಥಿತಿ ಎ್ದು ಕಾಣುತ್ತಿತ್ತು. ದೋನಿಯ ಸ್ಥಾನದಲ್ಲಿ ವಿಕಟ್ ಕೀಪರ್ ಆಗಿದ್ದ ರಿಷಭ್ ಪಂತ್ ಅವರನ್ನು ಕಂಡು ಭಾರತದ ಅಭಿಮಾನಿಗಳು ಸೋಲಿಗೆ ಅವರೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಕೆಟ್‌ ಕೀಪರ್ ಚುರುಕಾಗಿರಬೇಕು. ಮಹೇಂದ್ರ ಸಿಂಗ್ ದೋನಿಯಿಂದ ಪಂತ್ ಕಲಿಯಬೇಕಾಗಿದ್ದು ಸಾಕಷ್ಟಿದೆ.  ಒಂದೇ ಓವರ್‌ನಲ್ಲಿ ಮೂರು ತಪ್ಪುಗಳನ್ನು ಮಾಡಿ ತಂಡದ ಸೋಲಿಗೆ ಪಂತ್ ಕಾರಣರಾದರೂ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಯಜುವೇಂದ್ರ ಚಹಲ್ ಅವರ ಓವರ್‌ನಲ್ಲಿ ಎರಡು ಬಾರಿ ಎಲ್‌ಬಿಡಬ್ಲ್ಯುಗಾಗಿ ಡಿಆರ್‌ಎಸ್ ಮನವಿ ಪಡೆಯುವ ಅವಕಾಶವಿದ್ದರೂ ರಿಷಭ್‌ ಪಂತ್ ಅದನ್ನು ಪಡೆಯಲು ಮುಂದಾಗಲಿಲ್ಲ.  ಪಂತ್ ಎಡವಟ್ಟಿನಿಂದ ಅದೇ ಓವರ್‌ನ ಅಂತಿಮ ಎಸೆತದಲ್ಲಿ ಬಾಲ್‌ ಬ್ಯಾಟಿಗೆ ತಾಗದಿದ್ದರೂ ಮನವಿ ಮಾಡುವ ಮೂಲಕ ಮಹತ್ವದ ಡಿಆರ್‌ಎಸ್ ಕಳೆದುಕೊಂಡಿತು. ದೋನಿ ಅವರ ಸಾನಿಧ್ಯ ಎಷ್ಟು ಎಂಬುದು ಇದರಿಂದಲೇ ತಿಳಿದು ಬರುತ್ತಿದೆ ಎಂದು ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ, ಪಂತ್‌ ರನ್ನು ಟ್ರೋಲ್ ಮಾಡುತ್ತಿದ್ದಾರೆ.

ಅಳವಂಡಿ ಕಟ್ಟಿದ ಆ ಹುಡುಗನ ಬದುಕು…

1

ತುಮಕೂರು: ರಾಮರಡ್ಡಿ ಅಳವಂಡಿ ಅವರ ಹೆಸರು ಪ್ರಜಾವಾಣಿ ಪತ್ರಿಕೆಯ ಓದುಗರಿಗಲ್ಲದೇ ಇತರರಿಗೂ  ಚಿರಪರಿಚಿತ. ಇವರನ್ನು ನೋಡಿದವರು ಕಡಿಮೆ ಇರಬಹುದು. ಆದರೆ  ಅವರು ಹೆಸರನ್ನು ಹೆಚ್ಚು ಜನರು ಕೇಳಿದ್ದಾರೆ.

ತುಮಕೂರು ಜಿಲ್ಲೆಯ ಪ್ರಜಾವಾಣಿ ವರದಿಗಾರರಾಗಿ ಐದು ವರ್ಷದ ಹಿಂದೆ ಬಂದ ಅವರು ಇಲ್ಲಿ ಮಾಡಿದ ಕೆಲಸ ಅಗಾಧ. ಸ್ವಚ್ಛ, ಸುಂದರ ಪತ್ರಿಕೋದ್ಯಮಕ್ಕೆ ಅವರು ಎತ್ತಿದ ಕೈ. ಮಿತಭಾಷಿ. ಒಳ್ಳೆಯ ಕೆಲಸಗಾರರು ಸಹ. ಪ್ರಜಾವಾಣಿಗೆ ವಿದಾಯ ಹೇಳಿ ಅವರು ತಮ್ಮ ಹುಟ್ಟೂರು ಉತ್ತರ ಕರ್ನಾಟಕದ ಗಂಡು ಮೆಟ್ಟಿದ ನಾಡಿಗೆ ವಾಪಸ್ ಆಗುತ್ತಿದ್ದಾರೆ., ಅವರು ತುಮಕೂರು ಜಿಲ್ಲೆಗೆ ನ್ಯಾಯ ಒದಗಿಸಿದ್ದಾರೆ. ಜಿಲ್ಲೆಯ ಪರ ಪಕ್ಷಪಾತಿಯಾಗಿ ಕೆಲಸ ಮಾಡಿ ಈಗ ಅವರೂರಿಗೆ ಹೊರಟಿದ್ದಾರೆ.

ಒಂದು ಘಟನೆಯನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಲೇಬೇಕು. ಅದೊಂದು ಮುಂಜಾನೆ ಐದು ಗಂಟೆ ಸಮಯ.  ಐದಾರು ದಿನಗಳ ಕಾಲ ಅವರಿಗೆ ಕರೆ ಬರುತ್ತಲೇ ಇತ್ತು, ಆರೇಳು ವರ್ಷದ ಒಬ್ಬ ಹುಡುಗನನ್ನು ಮನೆ ಮನೆ ಕಸ ಎತ್ತಲು ಬಿಡುತ್ತಿದ್ದಾರೆ, ಏನಾದರೂ ಮಾಡಿ ಇದನ್ನು ತಪ್ಪಿಸಿ ಎಂದು.

ಎರಡು ದಿನ ಎರಡು ರಸ್ತೆಗಳನ್ನು ಕಾದರು. ಮೂರನೇ ದಿನ ಆ ಹುಡುಗ ತುಮಕೂರಿನ ಎಸ್.ಎಸ್,ಪುರಂನ ರಸ್ತೆಯೊಂದರಲ್ಲಿ ಮನೆ ಮನೆ ಕಸ ಎತ್ತುತ್ತಿದ್ದ.  ಆತನನ್ನು ಮಾತನಾಡಿಸಿದರು. ಆತ ಏನ್ನೆಲ್ಲವನ್ನು ಹೇಳಿದ. ತಾಯಿ ಇಲ್ಲದ ಬಗ್ಗೆಯೂ ತಿಳಿಸಿದ.

ಮರುದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಈ ಹುಡುಗನ ಕುರಿತು ವರದಿ ಪ್ರಕಟವಾಯಿತು. ಈ ವರದಿ ಓದಿದ ಮಕ್ಕಳ ಕಲ್ಯಾಣ ಸಮಿತಿ ಈ ವರಧಿ ಆಧಾರದಲ್ಲಿ ಸುಮೋಟೊ ದೂರು ದಾಖಲಿಸಿಕೊಂಡಿತ್ತು.  ಹುಡುಗನನ್ನು ಪತ್ತೆ ಹಚ್ಚಿತ್ತು. ಹುಡುಗನನ್ನು ಬಳಸಿಕೊಂಡ ಕಸ ಎತ್ತುವ ಟೆಂಡರ್ ಕರೆದಿದ್ದ ಗುತ್ತಿಗೆದಾರನಿಗೂ ನೋಟಿಸ್ ಹೋಯಿತು. ಹಾಗೇ, ಅಳವಂಡಿ ಅವರಿಗೂ ನೋಟಿಸ್ ನೀಡಿತು.

ಅಳವಂಡಿ ಅವರು ಹೇಳಿದ ಹೇಳಿಕೆ, ದಾಖಲಿಸಿಕೊಂಡಿದ್ದ ವಿವರಗಳು ಆ ಹುಡುಗನಿಗೆ ನ್ಯಾಯ ಒದಗಿಸಿತು. ಹುಡುಗನನ್ನು ಹಾಸ್ಟೆಲ್, ಶಾಲೆಗೆ ಸೇರಿಸಿ ನ್ಯಾಯಮಂಡಳಿ ಆದೇಶಿಸಿತು. ಅದರಂತೆ ಆತನನ್ನು ಶಾಲೆಗೆ ಸೇರಿಸಲಾಯಿತು. ಆತನ ಹೆಸರಿಗೆ ಹದಿನೈದು ಸಾವಿರ ಹಣವನ್ನು ಠೇವಣೆಯಾಗಿ ಇಡಿಸಲಾಯಿತು.ಈ ವರದಿ ಬಗ್ಗೆಯೂ ಸಮಿತಿ ಶಾಘ್ಲಿಸಿತು. ಇಂಥ ಅನೇಕ ಮಾನವೀಯ ವರದಿಗಳು ಅಳವಂಡಿ ಅವರಿಂದ ಮೂಡಿಬಂದಿವೆ, ಈಗ ಹುಡುಗ ಪದವಿಯಲ್ಲಿ ಓದುತ್ತಿರಬಹುದೇನೋ? ಇದೇ ಹೊತ್ತಲ್ಲಿ ಅಳವಂಡಿ ಅವರು ತುಮಕೂರು ತೊರೆದು  ಹೋಗುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ‘ಪಬ್ಲಿಕ್ ಸ್ಟೋರಿ’ ಆಶಿಸುತ್ತಿದೆ.

ತುಮಕೂರು: ಭೀಕರ ಅಪಘಾತ: ಸಾವು

ತುಮಕೂರು: ಭಾನುವಾರ ಮುಂಜಾನೆ ತುಮಕೂರು ಹೊರವಲಯದ NH 4 ನಲ್ಲಿ ರಂಗಾಪುರ ಮಾಜಿ ಸಚಿವ ಸೂಗಡು ಶಿವಣ್ಣರವರ ಮನೆ ಹತ್ತಿರ ಬೀಕರ ರಸ್ತೆ ಅಪಘಾತದಲ್ಲಿ ಲಾರಿ ಮತ್ತು ಬಸ್  ಮಧ್ಯದಲ್ಲಿ 3 ಜನ ಮೃತ ಪಟ್ಟಿದ್ದಾರೆ.

ಸುಮಾರು ಜನರಿಗೆ ಕಾಲು ಮುರಿದು ಆಸ್ಪತ್ರೆಗೆ   ಸ್ಥಳೀಯರೆ  ದಾಖಲು ಮಾಡಿದ್ದಾರೆ .  ಭೀಕರ ಅಪಘಾತಕ್ಕೆ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ.

ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ರೌಡಿಶೀಟರ್ ಚೊಟ್ಠಕುಮಾರ್ ಹತ್ಯೆ ಮಾಡಿದ ಆರೋಪಿ ಪಂಟರ್ ರಾಜನ ಮೇಲೆ ಪೋಲೀಸರು ಗುಂಡು ಹಾರಿಸಿದ್ದಾರೆ.

ತುಮಕೂರು ಸಮೀಪದ ವಡ್ಡರಹಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುತ್ತಿದ್ದಾಗ  ಕ್ಯಾತ್ಸಂದ್ರ ಪೋಲಿಸ್ ಇನ್ಸ್ಪೆಕ್ಟರ್ ಶ್ರೀಧರ್‌   ಗುಂಡು ಹಾರಿಸಿದ್ದಾರೆ. ಕಾಲಿಗೆ ಎರಡು ಬಾರಿ ಫೈರಿಂಗ್ ಮಾಡಲಾಗಿದೆ. ಫೈರಿಂಗ್ ಮಾಡುವ ಮುನ್ನ ಶರಣಾಗುವಂತೆ ಪೊಲಿಸರು ಸೂಚಿಸಿದ್ದಾರೆ. ಆದರೆ ಪೊಲೀಸರ ಮಾತು ಕೇಳದೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಫೈರಿಂಗ್ ಮಾಡಲಾಗಿದೆ. ಸಿಪಿಐ ಶ್ರೀದರ್‌, ಸಿಬ್ಬಂದಿ ರಮೇಶ್‌ ಗೆ ಗಾಯವಾಗಿದೆ.