Tuesday, January 20, 2026
Google search engine
Home Blog Page 5

ಮೂರು ಸ್ಫೋಟ, 4 ಸಾವು ; ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ ; ಸಿಐಟಿಯು ಆಕ್ರೋಶ

0

ಸಂತ್ರಸ್ತರ ಪ್ರತಿ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ
ಹಾಗೂ
ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ; ಸಿಐಟಿಯು ಅಗ್ರಹ

ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಒಂದು ಸಾವಾಗಿ ಇನ್ನೂ ನಾಲ್ಕೈದು ದಿನಗಳಷ್ಟೇ ಆಗಿದೆ. ಕಾರ್ಮಿಕ-ಸಮುದಾಯದಲ್ಲಿ ಅದರ ದುಃಖ ಆರುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ.

ತುಮಕೂರು ನಗರದ ಹೊರವಲಯದಲ್ಲಿರುವ ಅಂತರಸನಹಳ್ಳಿ-ಕೈಗಾರಿಕಾ ಪ್ರದೇಶದಲ್ಲಿನ ‘ಪರಿಮಳ ಆಗ್ರೋ ಟೆಕ್’ ಕಾರ್ಖಾನೆಯಲ್ಲಿ ಬುಧವಾರ ಭೀಕರ ಸ್ಫೋಟ ಸಂಭವಿಸಿ, ಎರಡು ಸಾವು ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿರುವ ಮೂವರು ಕಾರ್ಮಿಕರ ಸ್ಥಿತಿ ಚಿಂತಾಜನಕ.

ಹಿಂದಿನ ದಿನವಷ್ಟೇ ಕೋಪ್ಪಳ ತಾಲ್ಲೂಕಿನ ಅಲ್ಲಾನಗರದ ಹೋಸಪೇಟೆ ಸ್ಟೀಲ್ ಕಾರ್ಖಾನೆ(ಕಾಮಿನಿ ಇಂಡಸ್ಟ್ರೀಸ್)’ನಲ್ಲಿ ಮಂಗಳವಾರ ಸಂಜೆ ಅನಿಲ ಸೋರಿಕೆಯಿಂದಾಗಿ ಮಾರುತಿ ಕೊರಗಲ್ (24 ವರ್ಷ) ಹೆಸರಿನ ಕಾರ್ಮಿಕರೊಬ್ಬರು ದುರ್ಮರಣಕ್ಕೀಡಾಗಿದ್ದರು. ಈ ಸ್ಫೋಟದಲ್ಲಿ ಇನ್ನೂ 7 ಜನ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಇದು ಮಾಸುವ ಮುನ್ನವೇ ತುಮಕೂರಿನ ಸ್ಫೋಟದ-ಘಟನೆ ರಾಜ್ಯದ ಕಾರ್ಖಾನೆ ಕಾರ್ಮಿಕರಲ್ಲಿ ಆತಂಕ ಮತ್ತು ಆಕ್ರೋಶ ಹುಟ್ಟಿಸಿದೆ.

ಕಾರ್ಖಾನೆ ಮಾಲೀಕರ ಹೊಣೆಗೇಡಿತನ ಹಾಗೂ ಅಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವ ಮರ್ಜಿಯಲ್ಲಿ ದುಡಿಯುತ್ತಿದ್ದ ಈ ನಾಲ್ಕೂ ಅಮೂಲ್ಯ ಜೀವಗಳು ತಮ್ಮದಲ್ಲದ ತಪ್ಪಿನಿಂದಾಗಿ ಇಹಲೋಕ ತ್ಯಜಿಸಿವೆ.

ಬಂಡವಾಳಶಾಹಿ ನಿರ್ಲಕ್ಷ್ಯ, ಸುರಕ್ಷತಾ ಉಡುಪು ಮತ್ತು ಸಲಕರಣೆಗಳ ಕೊರತೆ ಹಾಗೂ ಯಂತ್ರೋಪಕರಣಗಳ ಸಮರ್ಪಕ ದುರಸ್ತಿ ಮಾಡಿಸದ ಕಾರ್ಖಾನೆ ಆಡಳಿತ ಮಂಡಳಿಯವರ ಬೇಜವಾಬ್ದಾರಿತನಗಳು ಮೇಲ್ನೋಟಕ್ಕೆ ಇಲ್ಲಿ ಎದ್ದು ಕಾಣುತ್ತಿವೆ.

ಕಾರ್ಖಾನೆಗಳ ಯಂತ್ರೋಪಕರಣಗಳ ಸಮರ್ಪಕವಾದ ನಿರ್ವಹಣೆಯ ಕುರಿತು ಕಾಲಕಾಲಕ್ಕೆ ಪರಿಶೀಲನೆ ನಡೆಸಿ, ಅದರ ಸುರಕ್ಷತೆಯನ್ನು ಖಾತರಿಪಡಿಸಬೇಕಿದ್ದ
‘ಫ್ಯಾಕ್ಟರೀಸ್ ಮತ್ತು ಬಾಯ್ಲರ್ ಇಲಾಖೆ’ಯ ಬೇಜವಾಬ್ದಾರಿತನವೂ ಇಲ್ಲಿ ಪ್ರಮುಖ ದೋಷಿ. ತಮ್ಮ ಹೊಣೆಗಾರಿಕೆಗಳನ್ನು ಜವಾಬ್ದಾರಿಯುತವಾಗಿ ಅನುಷ್ಠಾನಗೊಳಿಸಬೇಕಿದ್ದ ಬಹುತೇಕರ ಬೇಜವಾಬ್ದಾರಿತನದಿಂದಾಗಿ ಈ ಸಾವುಗಳು ಸಂಭವಿಸಿವೆ ಎಂದು, ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಗಂಭೀರವಾಗಿ ಅರೋಪಿಸುತ್ತದೆ. ತಮ್ಮ ಹೊಣೆಗೇಡಿತನದಿಂದಾಗಿ ಇಂತಹ ಅವಘಡಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಐಟಿಯು ಆಗ್ರಹಿಸುತ್ತದೆ. ಮತ್ತು, ಘಟನೆಯಲ್ಲಿ ಮರಣ ಹೊಂದಿರುವ ಕಾರ್ಮಿಕರ ಅವಲಂಬಿತರಿಗೆ ಅಯಾ ಕಾರ್ಖಾನೆ ಮಾಲೀಕರಿಂದ ತಲಾ 50 ಲಕ್ಷ ಪರಿಹಾರವನ್ನು ಕೊಡಿಸುವಂತೆ ಸಿಐಟಿಯು ಒತ್ತಾಯಿಸುತ್ತದೆ. ಹಾಗೂ ಎಲ್ಲಾ ಗಾಯಾಳುಗಳಿಗೂ ಉಚಿತ ಚಿಕಿತ್ಸೆ ಕೊಡಿಸುವುದಲ್ಲದೆ, ಅವರಿಗೂ ತಲಾ 15 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ತೀವ್ರವಾಗಿ ಒತ್ತಾಯಿಸುತ್ತದೆ.

ಮೃತರ ಕುಟುಂಬದ ದುಃಖದಲ್ಲಿ ಸಿಐಟಿಯು ಸದಾ ಭಾಗಿಯಾಗಿರುತ್ತದೆ.

ತುಮಕೂರು ನಗರದ ಸ್ಪೋಟದಲ್ಲಿ ಮರಣ ಹೊಂದಿರುವ ಕಾರ್ಮಿಕರು ಬಿಹಾರ ಮೂಲದದವರು. ಸಂತೋಷ್(22 ವರ್ಷ) ಮತ್ತು ಚಂದನ್ ಶರ್ಮಾ(26 ವರ್ಷ). ದೂರದ ಬಿಹಾರದಲ್ಲಿರುವ ಅವರ ಕುಟುಂಬದ ಹೊಣೆಯನ್ನು ನಿರ್ವಹಿಸಿಬೇಕಾಗಿದ್ದ ಈಯಿಬ್ಬರು ಯುವಕರು ಇಷ್ಟು ಸಣ್ಣವಯಸ್ಸಿಗೆ ಮರಣ ಹೊಂದಿರುವುದು ವಿಷಾದಕರ.

ಬಿಹಾರ ಸೇರಿದಂತೆ ಉತ್ತರಭಾರತ ಮತ್ತು ಹಲವು ಈಶಾನ್ಯ ರಾಜ್ಯಗಳಿಂದ ಲಕ್ಷಗಟ್ಟಲೆ ಕಾರ್ಮಿಕರು ನಮ್ಮ ರಾಜ್ಯ ಮತ್ತು ಜಿಲ್ಲೆಯಲ್ಲಿ ವಿವಿಧ ಕೆಲಸಕಾರ್ಯಗಳಲ್ಲಿ ತೊಡಗಿದ್ದಾರೆ. ಹೀಗೆ ಹಿಂಡು-ಹಿಂಡಾಗಿ ಕಾರ್ಮಿಕರನ್ನು ಇಲ್ಲಿಗೆ ಕರೆತಂದು, ಯಾವುದೇ ಕಾರ್ಮಿಕ ಕಾಯ್ದೆ- ಕಾನೂನುಗಳ ಕನಿಷ್ಟ ರಕ್ಷಣೆ ಇಲ್ಲದಂತೆ ದುಡಿಸಿಕೊಳ್ಳಲಾಗುತ್ತಿದೆ. ಕಡೆಗೆ ಇವರ ಜೀವಗಳಿಗೂ ಬೆಲೆಯಿಲ್ಲದಂತೆ ಇವರನ್ನು ಸಾರಾಸಗಟು ಕಡೆಗಣಿಸಿ, ನಿತ್ಯ ಶೋಷಿಸುತ್ತಿರುವುದನ್ನು ಸಿಐಟಿಯು ಖಂಡಿಸುತ್ತದೆ. ಬಂಡವಾಳಗಾರರು ಕಾರ್ಮಿಕರ ಜೀವಗಳಿಗೆ ಕನಿಷ್ಟ ಕಿಮ್ಮತ್ತನ್ನೂ ಕೊಡದೆ ತಮ್ಮ ಲಾಭದ ಕಡೆಗಷ್ಟೇ ಗಮನ ಕೇಂದ್ರಿಕರಿಸಿದ್ದಾರೆ. ವಲಸೆ ಕಾರ್ಮಿಕರ ಪಾಲಿನ ಶೋಚನೀಯ ಸ್ಥಿತಿಯಿದು.

ಈ ನಾಲ್ಕೂ ಪ್ರಕರಣಗಳಲ್ಲಿಯೂ ಕ್ರಿಮಿನಲ್ ನಿರ್ಲಕ್ಷ್ಯ ತೋರಿರುವವರ ವಿರುದ್ದ ಸೂಕ್ತವಾದ ತನಿಖೆ ನಡೆಸಿ, ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಸಿಐಟಿಯು ಅಗ್ರಹಿಸುತ್ತದೆ.

ಮುಖ್ಯವಾಗಿ, ಎಲ್ಲ ಗಾಯಾಳುಗಳಿಗೂ ಅತ್ಯುತ್ತಮವಾದ ಚಿಕಿತ್ಸೆಯನ್ನು ಸರ್ಕಾರ ಉಚಿತವಾಗಿ ಒದಗಿಸಿಕೊಡಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಕರ್ನಾಟಕದ ಸೈಯದ್ ಮುಜೀಬ್, ಎ. ಲೋಕೇಶ್, ಜಿ.ಕಮಲ ಹಾಗೂ ಅಧ್ಯಕ್ಷರು, ಜಿಲ್ಲಾ ಖಜಾಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಒತ್ತಾಯಿಸಿದ್ದಾರೆ.
__________________________________________________

*ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್*
ಜನಪರ ಚಳವಳಿ ಕೇಂದ್ರ, ಗಾಂಧಿನಗರ,
ವಿದ್ಯೋದಯ ಲಾ-ಕಾಲೇಜು ಹಿಂಭಾಗ, ತುಮಕೂರು. ಫೋ: 0816-2278960

ವರದಿ,
*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಹೆಣ್ಣುಮಕ್ಕಳಿಗೆ ಶಿಕ್ಷಣದ ಕಣ್ಣಾದ ಸಾವಿತ್ರ ಬಾಯಿಫುಲೆ

ತುರುವೇಕೆರೆ: ಹಲವು ಅಪಮಾನಗಳ ನಡುವೆ ನೊಂದವರ, ದಮನಿತ ಸಮುದಾಯಗಳ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಬಹುವಾಗಿ ಶ್ರಮಿಸಿದ ಸಾವಿತ್ರ ಬಾಯಿಫುಲೆಯವರ ಹೋರಾಟ ಸಮಕಾಲೀನ ಮಹಿಳೆಯರಿಗೆ ಪ್ರೇರಣೆಯಾಗಿದೆ ಎಂದು ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಎಚ್.ಕೆ.ಸವಿತಾರವರು ಅಭಿಪ್ರಾಯಪಟ್ಟರು.

ಪಟ್ಟಣದ ಕನ್ನಡ ಭವನದಲ್ಲಿ ತಾಲ್ಲೂಕು ಸಾವಿತ್ರ ಬಾಯಿಫುಲೆ ಶಿಕ್ಷಕಿಯರ ಸಂಘದಿಂದ ಸಾವಿತ್ರ ಬಾಯಿಫುಲೆ ಜನ್ಮದಿನದ ಅಂಗವಾಗಿ ತಾಲ್ಲೂಕಿನ ಉತ್ತಮ ಶಿಕ್ಷಕಿಯರಿಗೆ ಅಕ್ಷರದ್ವ ಪ್ರಶಸ್ತಿ ಪ್ರಧಾನ, ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಹಾಗು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತುರುವೇಕೆರೆಗೆ ಶಿಕ್ಷಣ ಇಲಾಖೆಯಿಂದ ಆಯ್ಕೆಯಾದವರಿಗೆ ಅಭಿನಂಧನಾ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಭಾಗವಹಿಸಿ ಮಾತನಾಡಿದರು.

ಸಾವಿತ್ರ ಬಾಯಿಫುಲೆಯವರು ಭಾರತೀಯ ಸಮಾಜದ ಸುಧಾರಕಿಯಾಗಿ ಮತ್ತು ಶಿಕ್ಷಣ ತಜ್ಞರಾಗಿ ದುಡಿದವರು. ಇದಕ್ಕೂ ಮೊದಲು ಜ್ಯೋತಿರಾವ್ ಪುಲೆಯವರು ತಮ್ಮ ಮಡದಿಗೆ ತಾವೇ ಶಿಕ್ಷಣಕೊಟ್ಟು ತದನಂತರ ಮಿಷನರಿ ಶಾಲೆಗೆ ಶಿಕ್ಷಕಿ ತರಭೇತಿಗೆ ಕಳುಹಿಸಿ ಶಿಕ್ಷಕಿಯಾಗುವಂತೆ ನೆರವಾಗಿದ್ದರು. ಪತಿ, ಪತ್ನಿಯರು ಬಡ, ಶೋಷಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಕಣ್ಣಾಗಿ 14 ಶಾಲೆಗಳನ್ನು ತೆರೆದು ಉಚಿತ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಮೌಢ್ಯ ಹಾಗು ತಮ್ಮ ಹಕ್ಕುಗಳನ್ನು ಪಡೆಯಲು ಪಶ್ನಿಸುವಂತೆ ಮಾಡಿದರು ಎಂದರು.

ಸಾವಿತ್ರ ಬಾಯಿಫುಲೆ ಶಿಕ್ಷಕಿಯರ ಸಂಘದ ತಾಲ್ಲೂಕು ಅಧ್ಯಕ್ಷೆ ಎಂ.ಟಿ.ಭವ್ಯ ಸಂಪತ್ ಮಾತನಾಡಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕಿಯರ ಹಲವು ಸಮಸ್ಯೆಗಳ ಈಡೇರಿಕೆಗೆ ಧ್ವನಿಯಾಗಿ ನಿಂತು ಸಂಘವು ಹೋರಾಟ ಮಾಡುತ್ತಿದೆ. ಮಹಿಳೆಯರು ಹೆಚ್ಚು ಸಂಘಟಿತರಾಗಿ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುವಂತಾಗಬೇಕು ಹಾಗು ಹೆಚ್ಚಿನ ಸಂಖ್ಯೆಯಲ್ಲಿ ತಾಲ್ಲೂಕಿನ ಶಿಕ್ಷಕಿಯರು ಸಂಘದ ಸದಸ್ಯತ್ವ ಪಡೆದುಕೊಂಡು ಸಾವಿತ್ರ ಬಾಯಿಫುಲೆಯವರ ಆಶಯಗಳಿಗೆ ಅನುಗುಣವಾಗಿ ಸಂಘವನ್ನು ಮುನ್ನಡೆಸೋಣ ಎಂದು ಕಿವಿ ಮಾತು ಹೇಳಿದರು.

ಇದೇ ವೇಳೆ ನರ್ಸ್ ಶ್ವೇತ ಕೆ.ಎಸ್ ರವರು ಗರ್ಭಕೋಶ್ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು. ಅಕ್ಷರದ್ವ ಪ್ರಶಸ್ತಿಯನ್ನು ಶಿಕ್ಷಕಿಯರಾದ ಉಮಾ, ಸಾವಿತ್ರಮ್ಮ, ಹೇಮಾವತಿ, ಲಲಿತಮ್ಮಎಸ್, ಗಾಯಿತ್ರಿ, ಶಿವನಂಜಮ್ಮ, ರಮಾರವರಿಗೆ ಪ್ರಧಾನ ಮಾಡಲಾಯಿತು. ಇದೇ ವೇಳೆ ಷಣ್ಮುಕಪ್ಪ, ಲೋಕೇಶ್, ಪ್ರಶಾಂತ್ ಮತ್ತು ಯೋಗಾನಂದ್ ಹಾಗು ನಿವೃತ್ತ ಶಿಕ್ಷಕಿಯರನ್ನು ಅಭಿನಂಧಿಸಲಾಯಿತು.

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯ ವ್ಯವಸ್ಥಾಪಕರಾದ ಕೆ.ಕೃಷ್ಣಪ್ರಸಾದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಹನುಮಕ್ಕ, ಜಲಜಾಕ್ಷಿ, ಜಿಪಿಟಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಧರ್, ಪದಾಧಿಕಾರಿಗಳಾದ ಗೀತಾ, ವನಜಾಕ್ಷಿ, ನೇತ್ರಾ ನಿರೂಪಿಸಿ, ಸುಜಾತ ರಾಮಯ್ಯ ಪ್ರಾರ್ಥಿಸಿ, ಮಮತಾ ಲೇಪಾಕ್ಷ ಮೂರ್ತಿ ಸ್ವಾಗತಿಸಿ, ರಶ್ಮಿ ಶಶಿಕುಮಾರ್ ಪ್ರಾಸ್ತಾವಿಕ ನುಡಿ ನುಡಿದು, ಸರ್ವಮಂಗಳ ಮೋಹನ್ಬಾಬು ವಂದಿಸಿದರು, ಪದಾಧಿಕಾರಿಗಳಾದ ಗೀತಾ, ವನಜಾಕ್ಷಿ ಮತ್ತಿತರರಿದ್ದರು.

ತುಮಕೂರಿನ ಸಿದ್ದು ಆರ್‌.ಜಿ.ಹಳ್ಳಿಗೆ ‘ಬಿ.ಎಸ್‌. ವೆಂಕಟರಾಂ ಪ್ರಶಸ್ತಿ’

0

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ‘ಪ್ರಜಾವಾಣಿ’ ಹಿರಿಯ ವರದಿಗಾರ ಸಿದ್ದು ಆರ್‌.ಜಿ.ಹಳ್ಳಿ ಅವರಿಗೆ ‘ಅತ್ಯುತ್ತಮ ಸ್ಕೂಪ್‌ ವರದಿ’ಗೆ ಬಿ.ಎಸ್‌. ವೆಂಕಟರಾಂ ಪ್ರಶಸ್ತಿ ಲಭಿಸಿದೆ.

ತುಮಕೂರು ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಜ. 18 ಮತ್ತು 19ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸಿದ್ದು ಅವರು ಮೂಲತಃ ತುಮಕೂರು ತಾಲ್ಲೂಕಿನ ರಾಮಗೊಂಡನಹಳ್ಳಿ ಗ್ರಾಮದವರು. ಆರಂಭದ ದಿನಗಳಲ್ಲಿ ತುಮಕೂರಿನ ‘ಪ್ರಜಾ ಪ್ರಗತಿ’ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿ, ನಂತರ ‘ಪ್ರಜಾವಾಣಿ’ಯಲ್ಲಿ ಕಳೆದ 15 ವರ್ಷಗಳಿಂದ ಮೈಸೂರು, ಹುಬ್ಬಳ್ಳಿ, ಹಾವೇರಿಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಮಂಡ್ಯ ಜಿಲ್ಲಾ ವರದಿಗಾರರಾಗಿದ್ದಾರೆ.

ಹಾವೇರಿ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ನಡೆದಿದ್ದ ‘ವಿದ್ಯಾಸಿರಿ’ ಸ್ಕಾಲರ್‌ಶಿಪ್‌ ಹಗರಣ ಕುರಿತ ಸರಣಿ ವರದಿಗೆ ಪತ್ರಕರ್ತರ ಸಂಘದಿಂದ ‘ಅತ್ಯುತ್ತಮ ತನಿಖಾ ವರದಿ’ಗೆ ಕೊಡುವ ಟಿ.ಕೆ. ಮಲಗೊಂಡ ರಾಜ್ಯ ಪ್ರಶಸ್ತಿಯೂ ಇವರಿಗೆ ದೊರೆತಿದೆ.

ಗಾಳಿಪಟ

0

ಡಾ// ರಜನಿ ಎಂ


ಸೂತ್ರ ಸರಿಯಾಗಿ
ಹಾಕಿದ್ದರೆ ..ಇಲ್ಲಾ ಗೋತ

ಮೇಲೆ ಹಾರಿ
ಸೂರ್ಯನ ಪಥ ಬದಲಿಸುವ
ನೋಡುವ ಹುನ್ನಾರ

ಅಲ್ಲೇ ಕೊಬ್ಬು ಹೆಚ್ಚಾಗಿ ತಿರುಗಿ ತಿರುಗಿ
ಆಟ ಆಡಿದರೆ
ಒಂದು ಸಾರಿ ದಾರ ಎಳೆದರೆ
ಮತ್ತೆ ಬಂತು ಒಳ್ಳೆ ಬುದ್ಧಿ .

ಒಮ್ಮೆಲೇ ದೊಡ್ಡ ಗೋತ
ಹೊಡೆದರೆ ..ಜೊತೆಗಾರರಿಗೆ
ಬಾಳ ಸಂತೋಷ

ಮೆಲ್ಲ ಮೆಲ್ಲಗೆ
ಸ್ವಲ್ಪ ಸ್ವಲ್ಪ ಎಳೆದು
ಮತ್ತೆ ದಾರಿಗೆ ತಂದರೆ ..ಆಹಾ

ಹಾರುವಾಗ ಸೂರ್ಯನ
ಬಿಸಿ
ಗಾಳಿಯ ತಂಪು
ನಿನಗೆ ಮಾತ್ರ

ದಾರ ಹಿಡಿದ ಕೈಗೆ
ಮಾತ್ರ ಗೊತ್ತು
ನಿನ್ನ ಹಾರಾಟ

ಪೂರ್ತಿ ಬಿಟ್ಟು
ಬಿಟ್ಟು
ಮತ್ತೆ ದಾರದ ಉಂಡೆ
ಹಿಡಿಯುವ ತಾಕತ್ತು ನನಗೆ ಮಾತ್ರ

ನಿನ್ನ ಬಿಗಿ ಅನುಭವಿಸಲು
ಎರಡು ನಿಮಿಷ
ಹಿಡಿಯಲು ಎರವಲು ಕೊಡುವ ಗತ್ತು ನನ್ನದು

ಗಾಳಿ ಮನೆ ಮೇಲೆ
ಹತ್ತಿದರೆ ಬೀಸುವುದಿಲ್ಲ
ಓಡಿ ಗಾಳಿಗೆ ಪಟ
ಬಿಡುವ ,ಬಾಲಂಗೋಚಿ
ಅಂಟಿಸುವ
ಗೆಳೆಯ ಬೇಕಲ್ಲ …

ರಾತ್ರಿ ಮಲಗಿದಾಗ
ಲೈಟ್ ಕಂಬಕ್ಕೆ
ಸಿಕ್ಕಿಕೊಂಡ ಗಾಳಿ ಪಟ
ಕನಸಲ್ಲಿ.

ಕನ್ನಡ ಸಾಹಿತ್ಯ ಶ್ರೀ ಸಾಮಾನ್ಯನ ಪ್ರತೀಕ ಪೂಜ್ಯ ಶ್ರೀ  ವೀರೇಶಾನಂದ ಸರಸ್ವತೀ ಸ್ವಾಮೀಜಿ

ಮೈಸೂರು


ಕನ್ನಡ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಇಡೀ ಜಗತ್ತಿಗೆ ಪರಿಚಯಿಸಿದೆ. ಶ್ರಮ ಸಂಸ್ಕೃತಿಯ ವೈಶಿಷ್ಟ್ಯತೆ ಚಿಂತನೆ ಕುರಿತಂತೆ ಪ್ರಾಚೀನ ಕಾಲದಿಂದಲೂ ಇಲ್ಲಿಯವರೆಗೂ ಸಾಹಿತಿಗಳು ವಿಶೇಷವಾಗಿ ನಿರೂಪಿಸಿದ್ದಾರೆ. ಕನ್ನಡ ಮಾತೃಭಾಷೆಯಲ್ಲದ ಅನೇಕ ಮಹನೀಯರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಸ್ಮರಣೀಯವಾದದ್ದು.ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ವಿಚಾರ ಸಂಕಿರಣದ ಗೋಷ್ಠಿಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.ಭಾಷೆಯ ಬಗೆಗೆ ಗಂಭೀರವಾದ ಚಿಂತನೆ ನಡೆಸಿದವರು ಮಾತ್ರ ಜನಮಾನಸದಲ್ಲಿ ಉಳಿಯುತ್ತಾರೆ.ಹಾಗಾಗಿ ಕನ್ನಡ ಸಾಹಿತ್ಯ ಶ್ರೀ ಸಾಮಾನ್ಯನ ಪ್ರತೀಕ ಎಂದು ತುಮಕೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.

ಉದಯಪುರದಲ್ಲಿ ಮಿಂಚಿದ ಶಿರಾದ ಮೇಸ್ಟ್ರು

0

ಕೇಂದ್ರ ಸಂಸ್ಕೃತಿಕ ಸಚಿವಾಲಯದಿಂದ ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಕರಿಗೆ ರಾಜಸ್ಥಾನ ರಾಜ್ಯದ ಉದಯಪುರದಲ್ಲಿ ನಮ್ಮ ಸಂಸ್ಕೃತಿಯಲ್ಲಿ ವಿವಿಧತೆ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿತ್ತು.

ಈ ತರಬೇತಿಯಲ್ಲಿ ಕಲೆ ಮತ್ತು ಸಾಂಸ್ಕೃತಿಕ ಅಧ್ಯಯನ ಕುರಿತು ತರಬೇತಿ ಪಡೆಯಲು ಕರ್ನಾಟಕ ರಾಜ್ಯದಿಂದ 8 ಶಿಕ್ಷಕರು ಭಾಗವಹಿಸಿ, ವಿವಿಧ ಕಲೆಗಳನ್ನು ಅನಾವರಣಗೊಳಿಸಿ, ಹಲವು ರಾಜ್ಯಗಳ ಶಿಕ್ಷಕರಿಂದ ಹಾಗೂ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಂದ ಪಡೆದಿದ್ದಾರೆ.
ಶಿರಾ ತಾಲ್ಲೂಕಿನ ಗಾಣದಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಆರ್.ತಿಪ್ಪೇಸ್ವಾಮಿ ಹಾಗೂ ಗೊಲ್ಲರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕ ನೂರ್‌ ಅಹಮದ್‌ ಸೇರಿದಂತೆ ರಾಜ್ಯದ ಚಿತ್ರದುರ್ಗ, ರಾಮನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ತಲಾ ಇಬ್ಬರು ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿ, ನಮ್ಮ ನೆಲಮೂಲ ಸಂಸ್ಕೃತಿಯ ಬಗ್ಗೆ ಅಲ್ಲಿನ ಶಿಕ್ಷಕರಿಗೆ ಮಾಹಿತಿ ನೀಡಿ, ಬೇರೆ ಬೇರೆ ರಾಜ್ಯಗಳ ಕಲೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಅಧ್ಯಯನ ಮಾಡಿ ಬಂದಿದ್ದಾರೆ.
ಕೇಂದ್ರ ಸಾಂಸ್ಕೃತಿಕ ಸಚಿವಾಲಯದಿಂದ ರಾಜಸ್ಥಾನದ ಉದಯಪುರದಲ್ಲಿ ಕಳೆದ ಡಿ.11 ರಿಂದ ಪ್ರಾರಂಭವಾದ ಈ ತರಬೇತಿ ಕಾರ್ಯಾಗಾರದಲ್ಲಿ ಪ್ರತಿದಿನವೂ ಎರಡು ರಾಜ್ಯಗಳ ವಿಸ್ತೃತ ಮಾಹಿತಿಯೊಂದಿಗೆ ಅಲ್ಲಿನ ಭೌಗೋಳಿಕ ವೈವಿಧ್ಯತೆ, ಭಾಷಾ ವೈವಿಧ್ಯತೆ, ಆಹಾರ ಪದ್ಧತಿ, ಉಡುಗೆ-ತೊಡುಗೆ, ಪ್ರಾದೇಶಿಕ ಕಲೆಗಳ ಅನಾವರಣ, ಸ್ಥಳೀಯ ನೃತ್ಯ ಪ್ರಕಾರಗಳು ಸೇರಿದಂತೆ ಹಲವು ವೈವಿಧ್ಯತೆಗಳನ್ನು ಪ್ರತಿ ಶಿಕ್ಷಕರು ಪ್ರದರ್ಶನ ನೀಡಿದರು.
ಕರ್ನಾಟಕದ ಜಾನಪದ ನೃತ್ಯ ಪ್ರಕಾರಗಳಾದ ಕಂಸಾಳೆ, ವೀರಗಾಸೆ, ಯಕ್ಷಗಾನ, ಡೊಳ್ಳು ಕುಣಿತ, ಹುಲಿ ಕುಣಿತ, ಗೊರವರ ಕುಣಿತ ಸೇರಿದಂತೆ ಹಲವು ಕಲಾಪ್ರಕಾರಗಳ ಪರಿಚಯ ಮಾಡಿಕೊಡಲಾಯಿತು. ರಾಜ್ಯದ ವಿವಿಧ ಭಾಗಗಳ ವೇಷ-ಭೂಷಣ, ಆಹಾರ ಪದ್ದತಿ, ನೃತ್ಯ ಪ್ರಕಾರಗಳನ್ನು ಪ್ರದರ್ಶನ ಮಾಡಲಾಯಿತು.
ಶಿರಾ ತಾಲ್ಲೂಕು ಗಾಣದಹುಣಸೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಸಹಶಿಕ್ಷಕ ಆರ್.ತಿಪ್ಪೇಸ್ವಾಮಿ ದಕ್ಷಿಣ ಕರ್ನಾಟಕದ ಮೈಲಾರಲಿಂಗನ ಭಕ್ತರು ಪ್ರದರ್ಶಿಸುವ ಗೊರವರ ಕುಣಿತ ನೃತ್ಯ ಪ್ರಕಾರವನ್ನು ಪ್ರದರ್ಶಿಸಿದ್ದು, ಎಲ್ಲರ ಮನ ಸೂರೆಗೊಂಡಿತು. ಹಿರಿಯೂರಿನ ಅರುಣ್‌, ಚಿದಾನಂದ್‌, ಚಿಕ್ಕಮಗಳೂರಿನ ಶಿವಕುಮಾರ್, ರಾಮನಗರ ಜಿಲ್ಲೆಯ ರಂಜಿತ ಸಂಗಡಿಗರು ಪ್ರದರ್ಶಿಸಿದ ಹುಲಿ ಕುಣಿತ ಆಕರ್ಷಣೀಯವಾಗಿತ್ತು. ನಂತರ ರಾಜ್ಯದ ವಿಶೇಷ ತಿನಿಸುಗಳನ್ನು ಎಲ್ಲಾ ಶಿಬಿರಾರ್ಥಿಗಳಿಗೂ ಹಾಗೂ ಅಧಿಕಾರಿಗಳಿಗೂ ವಿತರಿಸಿ, ಅದರ ವೈಶಿಷ್ಟ್ಯತೆ ಬಗ್ಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರು ಕರ್ನಾಟಕ ದೇಗುಲಗಳ ಬಗ್ಗೆ ತಯಾರಿಸಿದ ಪ್ರಾಜೆಕ್ಟ್‌ ಗೆ ಪ್ರಥಮ ಬಹುಮಾನ ಲಭಿಸಿತು. ರಾಮನಗರದ ಲಾವಣ್ಯ, ಚಿಕ್ಕಮಗಳೂರಿನ ಶಕೀಲ ಭಾಗವಹಿಸಿ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಕುರಿತು ಮಾಹಿತಿ ಹಂಚಿಕೊಂಡರು.

ಫೋಟೋ-1 ಮತ್ತು 2
ಶಿರಾ ತಾಲ್ಲೂಕಿನ ಶಿಕ್ಷಕರಾದ ಆರ್.ತಿಪ್ಪೇಸ್ವಾಮಿ ಹಾಗೂ ನೂರ್‌ ಅಹಮದ್‌ ಸೇರಿದಂತೆ ರಾಜ್ಯದ 8 ಜನ ಶಿಕ್ಷಕರು ರಾಜಸ್ಥಾನದ ಉದಯಪುರದಲ್ಲಿ ನಡೆದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯದ ಕಲೆಗಳ ಪ್ರದರ್ಶನ ನೀಡಿದರು.

ತಮ್ಮ ಲೇಖನಿಯ ಪರಿಣಾಮದಿಂದಲೇ ದೇಶ ಮುನ್ನಡೆಸಿದ ಡಾ.ಸಿಂಗ್ ; ಕೆ ಎಸ್ ಕಿರಣಕುಮಾರ್

0

(ಆಧಾರ್ ಪ್ರವರ್ತಕ ಡಾ ಸಿಂಗ್ ; ಸಿ ಡಿ ಚಂದ್ರಶೇಖರ್)

ಚಿಕ್ಕನಾಯಕನಹಳ್ಳಿ :‌ ಬ್ಲಾಕ್ ಕಾಂಗ್ರೆಸ್ ಕಛೇರಿ ಆವರಣದಲ್ಲಿ ಮಾಜಿ ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ರವರ ಶ್ರದ್ಧಾಂಜಲಿ ಸಭೆ ನಡೆಸಲಾಯ್ತು.

ಮಹಾತ್ಮಗಾಂಧಿ ನರೇಗಾ ಕ್ರಾಂತಿಯ ಮೂಲಕ ಬಡವರ ಒಡಲಿಗೆ ಅನ್ನ ಕಲ್ಪಿಸಿಕೊಟ್ಟ ಜ್ಞಾನಮೌನಿ ಡಾ ಮನಮೋಹನ್ ಸಿಂಗ್’ರವರ ಗೌರವಾರ್ಥ ಎರಡು ನಿಮಿಗಳ ಮೌನಾಚರಣೆ ಮಾಡಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮಾಜಿ ಶಾಸಕ ಕೆ ಎಸ್ ಕಿರಣಕುಮಾರ್ ಮಾತನಾಡಿ, ಅಬ್ಬರದ ಭಾಷಣ ಮಾಡುವವರು ಮಾತ್ರವೇ ದೇಶದ ನಾಯಕರಲ್ಲ. ತಮ್ಮ ಬಳಿಯಿರುವ ಲೇಖನಿಯ ಪರಿಣಾಮಕಾರಿ ಸದ್ಬಳಕೆಯಿಂದಲೇ ದೇಶ ಮುನ್ನಡೆಸುವ ಸಾಮರ್ಥ್ಯ ಹೊಂದಿದವರೇ ನಿಜವಾದ ಜನನಾಯಕರು. ಹಳಿ ತಪ್ಪಿದ್ದ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಮತ್ತೆ ಆರ್ಥಿಕ ಪ್ರಗತಿಯ ಗತಿಶೀಲತೆಯನ್ನು ತಂದುಕೊಟ್ಟಂಥವರು ಡಾ. ಮನಮೋಹನ್ ಸಿಂಗ್’ರವರು. ಪ್ರಧಾನಿಯಾಗಿದ್ದಾಗ, ಹೊರಗೆ ಅಡಮಾನ ಇಟ್ಟಿದ್ದ ದೇಶದ ಚಿನ್ನವನ್ನು ಮತ್ತೆ ದೇಶಕ್ಕೆ ಮರಳಿ ಗಳಿಸಿಕೊಟ್ಟವರು ಡಾ ಸಿಂಗ್. ಪ್ರಪ್ರಥಮವಾಗಿ, ಎಪ್ಪತ್ತೊಂದು ಸಾವಿರ ಕೋಟಿಗಳಷ್ಟು ರೈತರ ಸಾಲಮನ್ನಾ ಮಾಡಿದ ಮೌನದಿರಿಸಿನ ಧೀರ ವ್ಯಕ್ತಿತ್ವ ಡಾ ಮನಮೋಹನ್ ಸಿಂಗ್’ರವರದು. ಅಬ್ಬರದ ಭಾಷಣ ಮಾಡುತ್ತಾ, ಜನರನ್ನು ಮರುಳು ಮಾಡುತ್ತಾ ಕಾಲತಳ್ಳುವ ವ್ಯಕ್ತಿ ಅವರಾಗಿರಲಿಲ್ಲ. ಮಾತಾಡದೇ ಕೆಲಸ ಮಾಡುತ್ತಾ ದೇಶದ ಜನರ ಬದುಕು-ಭವಿಷ್ಯ ಎರಡನ್ನೂ ಸುಭದ್ರಗೊಳಿಸಲು ಅವಿರತ ಪ್ರಯತ್ನಿಸುತ್ತಿದ್ದವರು. ಅವರ ನಿಧನದಿಂದ ದೇಶ ನಿಜಕ್ಕೂ ಇಂದು ಬಡವಾಗಿದೆ ಎಂದು ವಿಷಾದಿಸಿದರು.

ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ ಡಿ ಚಂದ್ರಶೇಖರ್ ಮಾತನಾಡುತ್ತಾ, ಗ್ರಾಮೀಣ ಪ್ರದೇಶದ ಆರೋಗ್ಯ ಮಟ್ಟವನ್ನು ಸುಧಾರಿಸಲು ರಾಷ್ಟ್ರೀಯ ಆರೋಗ್ಯ ಮಿಷನ್ ಜಾರಿಗೆ ತಂದಂತಹ ಮಹಾವ್ಯಕ್ತಿ ಡಾ ಮನಮೋಹನ್ ಸಿಂಗ್’ರವರು. ಜನ-ಸಾಮಾನ್ಯರ ಕೈಗೆ ಅಸಾಮಾನ್ಯ ಬಲ ತಂದುಕೊಟ್ಟಂತಹ ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ’ಗಳನ್ನು ದೇಶಕ್ಕೆ ಕೊಟ್ಟ ಶ್ರೇಯಸ್ಸು ಡಾ ಸಿಂಗ್’ರವರದ್ದು. ಬಡವರಿಗಾಗಿ ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಜಾರಿಗೆ ತಂದು, ವರ್ಷವಿಡೀ ಯಾರಿಗೂ ಅನ್ನಾಹಾರಗಳ ಕೊರತೆ ಎದುರಾಗದಂತೆ ಕಾಳಜಿ ವಹಿಸಿದ್ದರು. ತಮ್ಮ ಅಧಿಕಾರಾವಧಿಯ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಅವರೊಬ್ಬ ಮಹಾನ್ ಆರ್ಥಿಕ ತಜ್ಞರಾಗಿದ್ದರು. ಮಾರುತಿ ಕಾರ್ ಎಂದರೆ, ಅವರಿಗೆ ಅತಿಯಾದ ಪ್ರೀತಿ. ಆಗೆಲ್ಲ ಕೇವಲ ಮಾರುತಿ ಕಾರ್ ಮಾತ್ರ ಕಾಣಿಸುತ್ತಿದ್ದ ಇಂಡಿಯಾದ ರಸ್ತೆಗಳಲ್ಲಿ, ನೂರಾರು ಮಾದರಿಯ ಬೇರೆ ಬೇರೆ ಕಾರುಗಳೂ ಕಾಣುವಷ್ಟರ ಮಟ್ಟಿಗೆ, ದೇಶದ ವಾಹನ ಉತ್ಪಾದನಾ ಕ್ಷೇತ್ರಕ್ಕೂ ಒತ್ತು ಕೊಟ್ಟವರು. ಕಂಪ್ಯೂಟರ್ರು, ಮೊಬೈಲು, ಟ್ಯಾಬು ಇತ್ಯಾದಿ ಗ್ಯಾಜೆಟ್ಟುಗಳು ದೇಶದ ಜನರಿಗೆ ಸುಲಭ ದರಗಳಲ್ಲಿ ದೊರೆಯುವಂತೆ ಮಾಡಿದ್ದ ಆರ್ಥಿಕ ಕ್ಷೇತ್ರದ ಅಪರೂಪದ ಸಾಧಕ. ಇಡೀ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಸಿಲುಕಿ ನಲುಗುತ್ತಿದ್ದಾಗ, ಆಯೆಲ್ಲ ಆರ್ಥಿಕ ಸಂಕಟಗಳಿಗೆ ದೇಶ ಬಲಿಯಾಗದಂತೆ ಎಚ್ಚರ ವಹಿಸಿ ಭಾರತವನ್ನು ಕಾಪಾಡಿಕೊಂಡ ಮೌನ ಕ್ರಾಂತಿಕಾರ. ದೇಶದ ಜನರಿಗೆ ಸುಗಮವಾಗಿ ಸಕಾಲದಲ್ಲಿ ಸೇವೆಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಆಧಾರ್ ಕಾರ್ಡ್ ತಂದ ಪ್ರವರ್ತಕರು ಅವರು. ಅವರನ್ನು ಮೌನಿ ಮೌನಿ ಎಂದು ಮೂದಲಿಸಿ ಜರೆಯುತ್ತಿದ್ದ ವಿರೋಧಿಗಳೂ ಕೂಡ ಇಂದು, ಡಾ. ಸಿಂಗ್ ಸಾಹೇಬರು, ದೇಶಕ್ಕೆ ನೀಡಿರುವ ಅತ್ಯಮೂಲ್ಯ ಕೊಡುಗೆಗಳನ್ನು ಎಣಿಸುತ್ತಾ ಕೂತಿದ್ದಾರೆ.

ಹುಳಿಯಾರ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ, ಟಿ, ಚಿಕ್ಕಣ್ಣ, ರಾಜ್ಯ ಸೇವಾದಳದ ಕಾರ್ಯದರ್ಶಿ ಕೆ ಜಿ ಕೃಷ್ಣೆಗೌಡ, ಬಗರ್ ಹುಕುಂ ಸಮಿತಿ ಸದಸ್ಯ ಬೇವಿನಹಳ್ಳಿ ಚನ್ನಬಸವಯ್ಯ, ಪುರಸಭೆ ಸದಸ್ಸುಗಂದರಾಜು, ಕೆಂಪಮ್ಮ, ಪುರಸಭೆ ಆಶ್ರಯ ಸಮಿತಿಸದಸ್ಯ ರಾದ ಸಿ, ಕೆ, ಪೀರ್ ಪಾಷಾ, ಸೇವಾದಳ ಅಧ್ಯಕ್ಷರಾದ ಗೋವಿಂದರಾಜು, ಸಣ್ಣತಾಯಮ್ಮ, ಜಾಣೆಹಾರ್ ಬಸವರಾಜ್, ಕೆಡಿಪಿ ಸದಸ್ಯ ರಾಮಚಂದ್ರಯ್ಯ, ಗ್ಯಾರಂಟಿ ಸಮಿತಿ ಸದಸ್ಯರಾದ ರೇಣುಕಾಸ್ವಾಮಿ, ಚಂದ್ರಯ್ಯ, ಓಂಕಾರಮೂರ್ತಿ, ಸಿದ್ದರಾಮಯ್ಯ, ಅಗಸರಹಳ್ಳಿ ನರಸಿಂಮೂರ್ತಿ, ಸೇವಾದಳದ ಮಾಜಿ ಜಿಲ್ಲಾಧ್ಯಕ್ಷ ನಿಶಾನಿ ಕಿರಣ್, ರಾಜು ಕರಿಯಪ್ಪ, ನೀಲಕಂಠಯ್ಯ, ದರ್ಘಾ ಜಾವೇದ್, ಚಿ ನಾ ಹಳ್ಳಿ ಜ಼ಾಕಿರ್ ಹುಸೇನ್, ಹೊನ್ನೇಬಾಗಿ ಜಾಫರ್, ಪ್ರಸನ್ನಕುಮಾರ್ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.

*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಚಿಕ್ಕನಾಯಕನಹಳ್ಳಿಗೆ ತಿಂಡಿಗೆ ಬರಲಿದ್ದಾನೆ ತುಂಡೇರಾಯ

ಚಿಕ್ಕನಾಯಕನಹಳ್ಳಿ: ಇಲ್ಲಿಗೆ ಡಿಸೆಂಬರ್ 29ರಂದು ತುಂಡೇರಾಯ ತಿಂಡಿಗೆ ಬರಲಿದ್ದಾನೆ. ತುಂಡೇರಾಯನನ್ನು ನೋಡಲು ಯಾರೂ ಬೇಕಾದರೂ ಬರಬಹುದು.

ಜರ್ಮನ್ ನಾಟಕಕಾರ *ಬರ್ಟೋಲ್ಟ್ ಬ್ರೆಖ್ಟ್* ರಚಿಸಿದ ‘ದ ರೆಜ಼ಿಸ್ಟೆಬಲ್ ರೈಜ಼್ ಆಫ್ ಆರ್ಥುರೋ ಊಯಿ’ ನಾಟಕದ ಕನ್ನಡರೂಪ.
ನಿರ್ದೇಶನ, *ಶಕೀಲ್ ಅಹ್ಮದ್*. ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನವಾಗಿದೆ. ನಾಟಕಾಸಕ್ತರು ಭಾಗವಹಿಸಲು ಆಹ್ವಾನಿಸಲಾಗಿದೆ.

ದಿ.*29.12.2024*, ಭಾನುವಾರ
ಸಂಜೆ, *5.45*’ಕ್ಕೆ (ಛಳಿಗಾಲದ ಪ್ರಯುಕ್ತ)
ಸ್ಥಳ, ತೀ.ನಂ.ಶ್ರೀ.ಭವನ, ಚಿಕ್ಕನಾಯಕನಹಳ್ಳಿ ಆಯೋಜಿಸಲಾಗಿದೆ.
ಮೋಡಿ ಮಾಡಬಲ್ಲ ಮೋಹಕ ಮಾತುಗಳನ್ನಾಡುವ ತುಂಡೇರಾಯ, ಬಯಸಿದ್ದನ್ನು ಪಡೆಯಲು ಏನು ಮಾಡಲೂ ಹಿಂಜರಿಯದಂವ. ತುಂಡೇರಾಯನ ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾದಂತೆ ಅದನ್ನು ಸಾಧಿಸಿಕೊಳ್ಳುವ ಮಾರ್ಗಗಳೂ ಹೆಚ್ಚು ಕ್ರೂರಗೊಳ್ಳುತ್ತಾ ಹೋಗುತ್ತವೆ. ತನ್ನ ಬುದ್ಧಿ ಮತ್ತು ಬಲಪ್ರಯೋಗದಿಂದ ಅಧಿಕಾರದ ಗದ್ದುಗೆಗಳನ್ನು ಏರುವ ಹವಣಿಕೆ ಈತನದು. ಜನರನ್ನು ಮಾತಿನಲ್ಲಿ ಮರುಳು ಮಾಡುತ್ತಾ, ಮರುಳಾಗದಿದ್ದವರನ್ನು ಕೊಲ್ಲುತ್ತಾ, ತನ್ನ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬಯಸುತ್ತಾನೆ.

ಸಮಕಾಲೀನ ಜಾಗತಿಕ ರಾಜಕೀಯ ಮತ್ತು ಯಾವುದೇ ದೇಶ ಕಾಲವನ್ನೂ ಸಂಕೇತವಾಗಿ ಪ್ರತಿನಿಧಿಸಬಲ್ಲ ವಿಡಂಬನಾತ್ಮಕ ನಾಟಕವಿದು.

ಅವಧಿ, *120* ನಿಮಿಷಗಳು
ಟಿಕೆಟ್ ದರ, *50′ ರೂಪಾಯಿ ನಿಗದಿಪಡಿಸಲಾಗಿದೆ.

*ಸಂಚಲನ*(ರಿ)
ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ
ಚಿಕ್ಕನಾಯಕನಹಳ್ಳಿ–ಇವರು ನಾಟಕ ಆಯೋಜಿಸಿದ್ದಾರೆ.*ಕುವೆಂಪು ಜನ್ಮದಿನ*’ದಂದು,
*ನಿರ್ದಿಗಂತ*, ಮೈಸೂರು ಇವರು ಪ್ರಸ್ತುತಿಪಡಿಸುತ್ತಿದ್ದಾರೆ.
____________________________________________

Publicstory ಸುದ್ದಿ ಪರಿಣಾಮ: ಅಲೆಮಾರಿಗಳ ಗಾಂಧಿನಗರದಲ್ಲಿ ಜನಸಂಪರ್ಕ ಸಭೆ

0

ಅಲೆಮಾರಿಗಳ ಮೂಲಭೂತ ಸೌಕರ್ಯ ಮತ್ತು ವಿಶ್ವಾಸ ವೃದ್ಧಿಯತ್ತ ದೃಢಹೆಜ್ಜೆ ; ತಹಸೀಲ್ದಾರ್ ಕೆ ಪುರಂದರ್

(

*ಪಬ್ಲಿಕ್ ಸ್ಟೋರಿ ಪರಿಣಾಮ*

ಚಿಕ್ಕನಾಯಕನಹಳ್ಳಿ : ಪಟ್ಟಣದ ರಾಯಪ್ಪನಪಾಳ್ಯ ರಸ್ತೆಯಲ್ಲಿರುವ ದಕ್ಕಲಿಗ ಅಲೆಮಾರಿ ಜನಾಂಗದ ಗಾಂಧಿನಗರಕ್ಕೆ ಮಂಗಳವಾರ ಭೇಟಿಕೊಟ್ಟ ತಹಸೀಲ್ದಾರ್ ಮತ್ತು ತಾಲ್ಲೂಕು ಆಡಳಿತದ ತಂಡ, ಅಲ್ಲಿನ ನಿವಾಸಿಗಳ ಕುಂದು-ಕೊರತೆಗಳನ್ನು ಆಲಿಸಿ, ಶೀಘ್ರ ಪರಿಹಾರ ಒದಗಿಸುವ ಉದ್ದೇಶದಿಂದ ಅಲೆಮಾರಿ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಶೌಚಾಲಯ, ಆಧಾರ್ ಕಾರ್ಡ್, ಪಡಿತರ ಚೀಟಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸುವ ಸಲುವಾಗಿ ತಹಸೀಲ್ದಾರ್ ಕೆ ಪುರಂದರ್’ರವರು, ಪುರಸಭೆ ಮುಖ್ಯಾಧಿಕಾರಿ ಪಿ ಮಂಜಮ್ಮನವರಿಗೆ ಹಲವು ಸೂಚನೆಗಳನ್ನು ನೀಡಿದರು.

ಅಲ್ಲಿನ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಚರ್ಚೆ ನಡೆಯಿತು. ಶೌಚಾಲಯವಿಲ್ಲದೆ ಬಯಲ ಶೌಚಾಲಯಕ್ಕೆ ಹೋಗಿ ಬರಬೇಕಾದ ಅನಿವಾರ್ಯತೆಯಿಂದ ನಿತ್ಯ ಹಿಂಸೆಪಡುತ್ತಿರುವ ಅಲ್ಲಿನ ಮಹಿಳೆಯರ ಸಮಸ್ಯೆಯನ್ನು ಮುಖ್ಯವಾಗಿ ಚರ್ಚಿಸಿ ಶೌಚಾಲಯಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ತಹಸೀಲ್ದಾರ್ ಮುಖ್ಯಾಧಿಕಾರಿಗೆ ಸೂಚಿಸಿದರು.

ಆಧಾರ್ ಕಾರ್ಡ್ ಹೊಂದಿಲ್ಲದವರು ಅಥವಾ ಕಳೆದುಕೊಂಡಿರುವವರ ಪಟ್ಟಿಮಾಡಿ ಅವರಿಗೆ ಶೀಘ್ರವೇ ಆಧಾರ್ ಕಾರ್ಡ್ ಒದಗಿಸಿಕೊಡುವಂತೆ ಸೂಚಿಸಲಾಯಿತು.

ಮಕ್ಕಳು ಮತ್ತು ಮಹಿಳೆಯರ ಸುರಕ್ಷೆ ಹಾಗೂ ರಕ್ಷಣೆಗಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ‌ ನಿರ್ದೇಶನಗಳನ್ನು ನೀಡಲಾಯಿತು. ಪಡಿತರ ಮತ್ತು ಹಸಿವುಮುಕ್ತ ಅಲೆಮಾರಿ ಕಾಲೊನಿಗಾಗಿ ಕ್ರಮಗಳನ್ನು ವಹಿಸಲು ನಿರ್ದೇಶನಗಳನ್ನು ನೀಡಲಾಯಿತು.

ಪಬ್ಲಿಕ್ ಸ್ಟೋರಿ’ಯ ವರದಿಗಾರರ ಒತ್ತಾಸೆಗೆ ಮಣಿದು ಕಳೆದ ನವೆಂಬರ್ 30’ರಂದು ಸಂಜೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ ನಾಗಲಕ್ಷ್ಮಿ ಚೌಧರಿಯವರು, ಅಲೆಮಾರಿಗಳ ಗಾಂಧಿನಗರ ಕಾಲೊನಿಗೆ ಭೇಟಿಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ತಾಲ್ಲೂಕು ಆಡಳಿತಕ್ಕೆ ಸ್ಪಷ್ಟ ನಿರ್ದೇಶನಗಳನ್ನು ನೀಡಿಹೋಗಿದ್ದರು. ಅಲ್ಲಿನ ನಿವಾಸಿಗಳ ಕುಂದು-ಕೊರತೆ ಪರಿಹರಿಸಲು ಶೀಘ್ರವೇ ಜನಸಂಪರ್ಕ ಸಭೆ ನಡೆಸಿ ವರದಿ ಕಳಿಸಿಕೊಡಿ ಎಂದು ತಾಲ್ಲೂಕು ಆಡಳಿತಕ್ಕೆ ತಾಕೀತು ಮಾಡಿ ಹೋಗಿದ್ದರು. ಅದರ ಪರಿಣಾಮವಾಗಿ, ಅಲೆಮಾರಿ ಜನಾಂಗದವರ ಕುಂದು-ಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮತ್ತು ಅಲೆಮಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬದುಕುವ ಹಕ್ಕು ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸುವ ಕಾರ್ಯಗಳನ್ನು ಜಾರಿ ಮಾಡುವತ್ತ ತಾಲ್ಲೂಕು ಆಡಳಿತ ಮುನ್ನಡೆಯುತ್ತಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಹುಳಿಯಾರು ಕೆರೆ-ದಂಡೆ ನಿವಾಸಿಗಳು ಮತ್ತು ಗಾಂಧಿನಗರ ಕಾಲೊನಿಯ ಅಲೆಮಾರಿಗಳ ಕುಂದು-ಕೊರತೆ ಬಗ್ಗೆ ನೀಡಿದ್ದ ಸೂಚನೆಗಳನ್ನು ಪಾಲಿಸಿ, ಬೇಗನೇ ಇಲ್ಲಿನ ಅಲೆಮಾರಿಗಳ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಹಸೀಲ್ದಾರ್ ಕೆ ಪುರಂದರ್ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ ಹೊನ್ನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಸ್ ಕಾಂತರಾಜು, ಪುರಸಭೆ ಮುಖ್ಯಾಧಿಕಾರಿ ಮಂಜಮ್ಮ, ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗಾಂಧಿನಗರ ಅಲೆಮಾರಿ ಜನಾಂಗದ ಕುಂದು-ಕೊರತೆ ನಿವಾರಣೆಯ ಜನಸಂಪರ್ಕ ಸಭೆಯಲ್ಲಿ ಹಾಜರಿದ್ದರು.

ಸಭೆಯಲ್ಲಿ, ಗಾಂಧಿನಗರ ಕಾಲೊನಿಯ ಅಲೆಮಾರಿಗಳು ಹಾಗೂ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.


*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ

ಅನ್ನದಾತ ಎಂಬುದೊಂದೇ ಜಾತಿ ರೈತರದು ; ಶಾಸಕ ಸಿ ಬಿ ಸುರೇಶ್ ಬಾಬು

0

ಚಿಕ್ಕನಾಯಕನಹಳ್ಳಿ : ರಾಮನಹಳ್ಳಿ ಕುಮಾರಯ್ಯ ಮತ್ತು ಸೀಬಿ ಲಿಂಗಯ್ಯ’ರವರಂತಹ ಹಿರಿಯ ರೈತ ಮುಖಂಡರೊಂದಿಗೆ, ಕೃಷಿ ಇಲಾಖೆ ಕಚೇರಿಯ ಆವರಣದಲ್ಲಿ ಅಡಿಕೆ ಸಸಿ ನೆಡುವುದರ ಮೂಲಕ ಶಾಸಕ ಸಿ ಬಿ ಸುರೇಶ್ ಬಾಬು’ರವರು ರೈತ ದಿನಾಚರಣೆಯನ್ನು ರೈತರು ಮತ್ತು ಕೃಷಿ ಅಧಿಕಾರಿಗಳ ಜೊತೆಸೇರಿ ಆಚರಿಸಿದರು.

ಸೋಮವಾರ ಬೆಳಗ್ಗೆ ತಾಲ್ಲೂಕು ಕೇಂದ್ರ ಚಿಕ್ಕನಾಯಕನಹಳ್ಳಿ ಪಟ್ಟದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2024-25 ನೇ ಸಾಲಿನ ರೈತ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕರಾದ ಹೆಚ್ ಎಸ್ ಶಿವರಾಜಕುಮಾರ್’ರವರು, ಈ ಬಾರಿ ತಾಲ್ಲೂಕಿನ ನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದ ರೈತರ ಎಲ್ಲ ಬೆಳೆಗಳಲ್ಲೂ ಉತ್ತಮ ಫಸಲು ಕಂಡುಬಂದಿದೆ. ಇಂಥ ಸಮೃದ್ಧಿಯ ಕಾಲದಲ್ಲಿ ಮತ್ತು ಈಗಿನ ಸುಗ್ಗಿ-ಸೀಜ಼ನ್’ನಲ್ಲಿ ರೈತ ದಿನಾಚರಣೆ ಅರ್ಥಪೂರ್ಣ ಮತ್ತು ಸಾರ್ಥಕ ಅನಿಸುತ್ತಿದೆ ಎಂದರು.

ಶಾಸಕ ಸಿ ಬಿ ಸುರೇಶ್ ಬಾಬು’ರವರು ಮಾತನಾಡಿ, ರೈತರಿಗೆ ಜಾತಿಯಿಲ್ಲ. ಪಕ್ಷವಿಲ್ಲ. ಅನ್ನದಾತ ಎಂಬುದೊಂದೇ ಜಾತಿ ರೈತರದು. ನೇಗಿಲಧರ್ಮ ಎಂಬುದೊಂದೇ ಧರ್ಮ ಅವರದು. ಹಾಗಾಗಿ, ನಾವೂ ಕೂಡ ಜಾತಿಬೇಧ, ಪಕ್ಷಬೇಧ ಬದಿಗಿಟ್ಟು ರೈತರ ಸೇವೆ ಮಾಡಬೇಕು. ತಾಲ್ಲೂಕು ಕೃಷಿ ಅಧಿಕಾರಿಗಳು ಅದನ್ನು ಸರ್ವಥಾ ನಿಭಾಯಿಸುತ್ತಿದ್ದಾರೆ ಎಂಬುದು ನಮಗೆ ಹೆಮ್ಮೆ.

ರೈತರ ಅನುಕೂಲಗಳಿಗಾಗಿ ಹತ್ತುಹಲವು ಯೋಜನೆಗಳನ್ನು ಸ್ಥಳೀಯವಾಗಿ ರೂಪಿಸುತ್ತಿರುವ ನಾವು, ರೈತರ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಚಿತ ಸಿಇಟಿ ಕೋಚಿಂಗ್ ಮತ್ತು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಕೃಷಿಕ ಸಮಾಜದ ಮಕ್ಕಳು ಹೆಚ್ಚೆಚ್ಚು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.

ರಾಮನಹಳ್ಳಿ ಕುಮಾರಯ್ಯ ಮಾತನಾಡಿ, ರೈತ ಹೋರಾಟಗಳು ಕಸುವು ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ, ರೈತ ದಿನಾಚರಣೆಯ ಮೂಲಕ ಮತ್ತೆ ಮತ್ತೆ ರೈತಹಕ್ಕುಗಳನ್ನು ಪ್ರತಿಪಾದಿಸುವ ಅವಕಾಶಗಳು ಸಿಗುತ್ತಿರುವುದು ಸಮಾಧಾನಕರ. ಕಿಷನ್ ಪಟ್ನಾಯಕ್, ಪ್ರೊ.ಎಂ ಡಿ ನಂಜುಂಡಸ್ವಾಮಿಯವರಂತಹ ಪ್ರಖರ ಚಿಂತಕರೂ, ದಿಟ್ಟ ಹೋರಾಟಗಾರರೂ ಕಟ್ಟಿಕೊಟ್ಟ ಚಳವಳಿಯ ಬಂಧ ಈಗಲೂ ಹಿರಿ ತಲಮಾರಿನ ಹೋರಾಟಗಾರರಲ್ಲಿ ಉಳಿದಿದೆ. ಅದೇರೀತಿ, ಕೇವಲ ಇದು ದಿನಾಚರಣೆಗಷ್ಟೇ ಸೀಮಿತವಾಗದೆ ಚೌಧರಿ ಚರಣ್ ಸಿಂಗ್’ರವರ ರೈತ ಆಶಯಗಳು ಈಡೇರುವಂತಾಗಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ, ರೈತ ಮುಖಂಡರು, ಕೃಷಿ ಅಧಿಕಾರಿಗಳು, ಸಿಬ್ಬಂದಿಗಳು, ಮಹಿಳಾ ಸಾಂತ್ವನ ಕೇಂದ್ರದ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


*ಸಂಚಲನ*
ಚಿಕ್ಕನಾಯಕನ ಸೀಮೆಯಿಂದ