ಚಿಕ್ಕನಾಯಕನಹಳ್ಳಿ: ಇಲ್ಲಿಗೆ ಡಿಸೆಂಬರ್ 29ರಂದು ತುಂಡೇರಾಯ ತಿಂಡಿಗೆ ಬರಲಿದ್ದಾನೆ. ತುಂಡೇರಾಯನನ್ನು ನೋಡಲು ಯಾರೂ ಬೇಕಾದರೂ ಬರಬಹುದು.
ಜರ್ಮನ್ ನಾಟಕಕಾರ *ಬರ್ಟೋಲ್ಟ್ ಬ್ರೆಖ್ಟ್* ರಚಿಸಿದ ‘ದ ರೆಜ಼ಿಸ್ಟೆಬಲ್ ರೈಜ಼್ ಆಫ್ ಆರ್ಥುರೋ ಊಯಿ’ ನಾಟಕದ ಕನ್ನಡರೂಪ.
ನಿರ್ದೇಶನ, *ಶಕೀಲ್ ಅಹ್ಮದ್*. ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನವಾಗಿದೆ. ನಾಟಕಾಸಕ್ತರು ಭಾಗವಹಿಸಲು ಆಹ್ವಾನಿಸಲಾಗಿದೆ.
ದಿ.*29.12.2024*, ಭಾನುವಾರ
ಸಂಜೆ, *5.45*’ಕ್ಕೆ (ಛಳಿಗಾಲದ ಪ್ರಯುಕ್ತ)
ಸ್ಥಳ, ತೀ.ನಂ.ಶ್ರೀ.ಭವನ, ಚಿಕ್ಕನಾಯಕನಹಳ್ಳಿ ಆಯೋಜಿಸಲಾಗಿದೆ.
ಮೋಡಿ ಮಾಡಬಲ್ಲ ಮೋಹಕ ಮಾತುಗಳನ್ನಾಡುವ ತುಂಡೇರಾಯ, ಬಯಸಿದ್ದನ್ನು ಪಡೆಯಲು ಏನು ಮಾಡಲೂ ಹಿಂಜರಿಯದಂವ. ತುಂಡೇರಾಯನ ದುರಾಸೆ ಮತ್ತು ಅಧಿಕಾರ ದಾಹ ಹೆಚ್ಚಾದಂತೆ ಅದನ್ನು ಸಾಧಿಸಿಕೊಳ್ಳುವ ಮಾರ್ಗಗಳೂ ಹೆಚ್ಚು ಕ್ರೂರಗೊಳ್ಳುತ್ತಾ ಹೋಗುತ್ತವೆ. ತನ್ನ ಬುದ್ಧಿ ಮತ್ತು ಬಲಪ್ರಯೋಗದಿಂದ ಅಧಿಕಾರದ ಗದ್ದುಗೆಗಳನ್ನು ಏರುವ ಹವಣಿಕೆ ಈತನದು. ಜನರನ್ನು ಮಾತಿನಲ್ಲಿ ಮರುಳು ಮಾಡುತ್ತಾ, ಮರುಳಾಗದಿದ್ದವರನ್ನು ಕೊಲ್ಲುತ್ತಾ, ತನ್ನ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬಯಸುತ್ತಾನೆ.
ಸಮಕಾಲೀನ ಜಾಗತಿಕ ರಾಜಕೀಯ ಮತ್ತು ಯಾವುದೇ ದೇಶ ಕಾಲವನ್ನೂ ಸಂಕೇತವಾಗಿ ಪ್ರತಿನಿಧಿಸಬಲ್ಲ ವಿಡಂಬನಾತ್ಮಕ ನಾಟಕವಿದು.
ಅವಧಿ, *120* ನಿಮಿಷಗಳು
ಟಿಕೆಟ್ ದರ, *50′ ರೂಪಾಯಿ ನಿಗದಿಪಡಿಸಲಾಗಿದೆ.
*ಸಂಚಲನ*(ರಿ)
ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ
ಚಿಕ್ಕನಾಯಕನಹಳ್ಳಿ–ಇವರು ನಾಟಕ ಆಯೋಜಿಸಿದ್ದಾರೆ.*ಕುವೆಂಪು ಜನ್ಮದಿನ*’ದಂದು,
*ನಿರ್ದಿಗಂತ*, ಮೈಸೂರು ಇವರು ಪ್ರಸ್ತುತಿಪಡಿಸುತ್ತಿದ್ದಾರೆ.
____________________________________________