Saturday, March 14, 2026
Google search engine
Home Blog Page 65

ತುಮಕೂರು ನಗರಕ್ಕೆ ಅಭ್ಯರ್ಥಿ ಘೋಷಿಸಿದ ಎಚ್ ಡಿಕೆ

ತುಮಕೂರು : ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸುವ ಮೂಲಕ ಆಟಿಕಾ ಗೋಲ್ಡ್ ಕಂಪನಿಯ ಬೊಮ್ಮನಹಳ್ಳಿ ಬಾಬು ಎಂಬ ಬಂಗಾರಕ್ಕೆ ಟಾಟಾ ಮಾಡಿ ಕಳಿಸಿದ್ದಾರೆ.

ಇಂದು ತುಮಕೂರು ನಗರಕ್ಕೆ “ಪಂಚರತ್ನ” ಯಾತ್ರೆಯು ಆಗಮಿಸಿದ್ದು, ಸಿದ್ಧಗಂಗಾ ಮಠದಲ್ಲಿ ಡಾ||ಶ್ರೀ ಶಿವಕುಮಾರಸ್ವಾಮಿಗಳ ಗದ್ದುಗೆ ದರ್ಶನ ಪಡೆದ ನಂತರ ಮಾತನಾಡಿದ ಕುಮಾರಸ್ವಾಂಇಯವರು, ತುಮಕೂರು ನಗರಕ್ಕೆ ಎನ್.ಗೋವಿಂದರಾಜುರವರೇ ಮುಂದಿನ 2023ರ ವಿಧಾನ ಸಭೆಯ ತುಮಕೂರು ನಗರದ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ತುಮಕೂರು ನಗರದ ಮತದಾರರಿಗಿದ್ದ ಗೊಂದಲವನ್ನು ನಿವಾರಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಆಟಿಕಾ ಗೋಲ್ಡ್ ಕಂಪನಿಯ ಬೊಮ್ಮನಹಳ್ಳಿ ಬಾಬು ತುಮಕೂರು ನಗರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಬೇಕೆಂದು ತುಮಕೂರಿನಲ್ಲಿ ಹಲವು ಕಾರ್ಯಕ್ರಮಗಳಿಗೆ ಸಹಾಯಾರ್ಥ ಹಸ್ತ ನೀಡಿದ್ದರು.

https://youtube.com/watch?v=pH6sZ-GSKd0%3Ffeature%3Doembed

ಇಂದು ಪಂಚರತ್ನಯಾತ್ರೆ ಆಗಮಿಸುವ ತುಮಕೂರು ನಗರದ ಬೀದಿಗಳಲ್ಲಿ ಕುಮಾರಸ್ವಾಮಿಯನ್ನು ಸ್ವಾಗತಿಸುವ ಬೊಮ್ಮನಹಳ್ಳಿ ಬಾಭುರವರ ದೊಡ್ಡ ದೊಡ್ಡ ಕಟೌಟ್‍ಗಳು ಎದ್ದು ಕಾಣುತ್ತಿದ್ದವು.

ತುಮಕೂರು ಜನರು ಕುಮಾರಸ್ವಾಮಿಯವರು ಆಟಿಕಾಬಾಬು ಕರೆ ತಂದು ಏನು ಮಾಡಲು ಹೊರಟಿದ್ದಾರೆ ಎಂಬ ಗೊಂದಲ ಮತದಾರರಲ್ಲಿತ್ತು.

https://youtube.com/watch?v=MGp8rZ7-XQI%3Ffeature%3Doembed

ಇತ್ತೀಚೆಗೆ ತುಮಕೂರು ನಗರಕ್ಕೆ ಆಗಮಿಸಿದ್ದು ಮೊಮ್ಮನಹಳ್ಳಿ ಬಾಬು ತಾನು ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗುತ್ತಿದ್ದೇನೆ, ನನಗೆ ತುಮಕೂರು ಗ್ರಾಮಾಂತರ ಶಾರದಾದ ಗಾಂಶಂಕರ್ ಹಾಗೂ ಕುಮಾರಣ್ಣನ ಅಪಾರವಾದ ಬೆಂಬಲ ದೊರಕಿದೆ ಅದುದರಿಂದ ತುಮಕೂರಿನಿಂದಲೇ ಸ್ಪರ್ಧಿಸುವುದಾಗಿ ಹೇಳಿಕೆಯನ್ನು ನೀಡಿದ್ದರು.

ಈ ಸಂದರ್ಭದಲ್ಲಿ ಜನರಲ್ಲಿ ಯಾವುದೇ ರೀತಿಯಾದ ಗೊಂದಲ ಬೇಡ ತುಮಕೂರು ನಗರಕ್ಕೆ ಗೋವಿಂದರಾಜು ಅವರೇ ಅಭ್ಯರ್ಥಿ ಎಂದು ಕುಮಾರಸ್ವಾಮಿ ಘೋಷಿಸಿದಾಗ ಗೋವಿಂದರಾಜುರವರ ಆನಂದಕ್ಕೆ ಪಾರವೇ ಇರಲಿಲ್ಲ. ಕುಮಾರಸ್ವಾಮಿಯವರು ಗೋವಿಂದರಾಜು ಅವರಿಗೆ ಎಲ್ಲರೂ ಅವರಿಗೆ ಸಹಕರಿಸುವಂತೆ ಕೋರಿದರು

ಲಲಿತ ಕಲೆಗಳ ತಳಹದಿಯೇ ಸಾಹಿತ್ಯ : ಪ್ರೊ.‌ನಿತ್ಯಾನಂದ ಬಿ ಶೆಟ್ಟಿ

0

ತುಮಕೂರು : ಜಗತ್ತಿನ ಸಮಗ್ರ ಲಲಿತ ಕಲೆಗಳ ತವರುಮನೆಯೇ ಸಾಹಿತ್ಯ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸುವಾಗ ಪದವಿಯ ಮೂರು ಮತ್ತು ನಾಲ್ಕನೇ ಸೆಮಿಸ್ಟರ್ ನಲ್ಲಿ ಈ ಬಾರಿ‌ ಲಲಿತಕಲೆಯನ್ನು ಮುಕ್ತ ಆಯ್ಕೆಯ ಪತ್ರಿಕೆಯಾಗಿ ನಿಗದಿಗೊಳಿಸಲಾಗಿದೆ.

ಹಾಗಾಗಿ ಕನ್ನಡ/ಇಂಗ್ಲಿಷ್ ಇತ್ಯಾದಿ ಸಾಹಿತ್ಯಕ ಪಠ್ಯಗಳಿಗೆ ಅವಕಾಶ ಇಲ್ಲ ಎಂಬ ಧೋರಣೆ ಅಧಿಕಾರಿ ವಲಯದಲ್ಲಿ ಇದ್ದಂತಿದೆ. ಇದರ ಬಗ್ಗೆ ಎಲ್ಲಾ ಭಾಷಾ ಅಧ್ಯಾಪಕರು ಎಚ್ಚರಗೊಳ್ಳಬೇಕು.

ಇಲ್ಲವಾದರೆ ಕಾರ್ಯಭಾರಕ್ಕೆ ಕುತ್ತು ಬಂದು ಎಷ್ಟೋ ಅಧ್ಯಾಪಕರ ಕೆಲಸ ನಷ್ಟ ಆಗುವ ಸಾಧ್ಯತೆ ಇದೆ. ಫೈನ್ ಆರ್ಟ್ಸ್ ವಿಷಯದಲ್ಲಿ ಸಾಹಿತ್ಯ ಪಠ್ಯ ಇರಲೇಬೇಕೆಂಬುದು ಎಲ್ಲಾ ಅಧ್ಯಾಪಕರ ಗಟ್ಟಿ ಧ್ವನಿಯಾಗಬೇಕಿದೆ ಎಂದು ತುಮಕೂರು ವಿವಿ ಪದವಿ ಮಟ್ಟದ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ ಶೆಟ್ಟಿ ಹೇಳಿದರು.

ತುಮಕೂರು ವಿವಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಗಂಣದಲ್ಲಿ ವಿವಿ ಪ್ರಸಾರಾಂಗ ಹಾಗೂ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ವತಿಯಿಂದ ಆಯೋಜಿಸಿದ್ದ ರಾಷ್ಟೀಯ ಶಿಕ್ಷಣ ನೀತಿ-೨೦೨೦ರ ಪ್ರಕಾರ ಪದವಿ ತರಗತಿಗಳಿಗೆ ಸಿದ್ಧಪಡಿಸಲಾದ ಹದಿನೆಂಟು ಕನ್ನಡ ಪಠ್ಯಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಪಠ್ಯಪುಸ್ತಕಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಎಂತಹ ಕೋಲಾಹಲ ಎದ್ದಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಶೈಕ್ಷಣಿಕ ವಿಷಯದಲ್ಲಿ ಪಕ್ಷ ರಾಜಕೀಯವೂ ಕೂಡ ಬೆಸೆದುಕೊಂಡ ಸನ್ನಿವೇಶದಲ್ಲಿ ನಾವಿದ್ದೇವೆ.
ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇವರೆಡೂ ನಮ್ಮಲ್ಲಿ ಗಂಭೀರ ವಿಷಯವಾಗದೆ, ಆದ್ಯತೆಯ ವಿಷಯವಾಗದೆ ಇರುವುದರಿಂದ ಇಂತಹ ಅಪಸವ್ಯಗಳು ನಮ್ಮಲ್ಲಿ ಸಂಭವಿಸುತ್ತವೆ. ಈ ಅರಿವಿನ ಹಿನ್ನೆಲೆಯಲ್ಲಿ ಇಲ್ಲಿಯ ಸಾಹಿತ್ಯ ಪಠ್ಯಗಳನ್ನು ಸಾಂಸ್ಕೃತಿಕ ಪಠ್ಯಗಳನ್ನಾಗಿ ನಾವು ರೂಪಿಸಿದ್ದೇವೆ. ಹಾಗಾಗಿ ಇದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸರಿಯಾದ ಕ್ರಮದಲ್ಲಿ ಅರ್ಥ ಮಾಡಿಕೊಂಡ ಪಠ್ಯಗಳಾಗಿವೆ ಎಂದರು.

ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ನಿರ್ಮಲ್ ರಾಜು ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ವಿಚಾರಗಳನ್ನು ಕಲಿತು ಅರಿತುಕೊಳ್ಳಬೇಕು. ಕನ್ನಡ ಭಾಷೆಯಲ್ಲಿ ಓದಿದ ವಿದ್ಯಾರ್ಥಿಗಳು ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಕನ್ನಡದಲ್ಲಿ ಅಭ್ಯಾಸ ಮಾಡುವವರ ಸಂಖ್ಯೆಯು ಕಮ್ಮಿಯಾಗುತ್ತಿದೆ. ವಿದ್ಯಾರ್ಥಿಗಳು ಆಧುನಿಕ ದೃಷ್ಟಿಕೋನಗಳಲ್ಲಿ ಆಲೋಚಿಸಿ, ಅಧ್ಯಯನ ಮಾಡುವ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ರಾಷ್ಟೀಯ ಶಿಕ್ಷಣ ನೀತಿಗೆ ಸಂಬಂಧಿದಂತೆ ಪಠ್ಯಪುಸ್ತಕಗಳ ತಯಾರಿ ತುಂಬಾ ಅಚ್ಚುಕಟ್ಟಾಗಿ ನಡೆದಿದೆ. ಪರಿಕಲ್ಪನೆಗಳ ಅಡಿಯಲ್ಲಿ ಪಠ್ಯಪುಸ್ತಕಗಳ ಜೋಡಣೆ ಅತಿಮುಖ್ಯ. ಭಾಷಾ ಸಾಹಿತ್ಯದ ಬೆಳವಣಿಗೆಯಲ್ಲಿ ಅಧ್ಯಾಪಕರು ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ.ಬೆಳೆಕೆರೆ ಲಿಂಗರಾಜಯ್ಯ, ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ.ಅಣ್ಣಮ್ಮ, ಪಠ್ಯಪುಸ್ತಕಗಳ ಸಂಪಾದಕರಾದ ಡಾ.ಡಿ ಶಿವನಂಜಯ್ಯ, ಡಾ.ಓ.ನಾಗರಾಜು, ಡಾ.ಗಂಗಾಧರಯ್ಯ ಪಿ, ಡಾ. ಬಾಳಪ್ಪ, ಡಾ.ಶಿವಲಿಂಗಮೂರ್ತಿ, ಅಜಿತ್ ಕುಮಾರ್, ಡಾ.ಗೋವಿಂದರಾಯ, ಡಾ.ರೇಣುಕಾಪ್ರಸಾದ್, ಡಾ.ಶಿವಣ್ಣ ಮತ್ತು ಡಾ.ಗೀತಾವಸಂತ ಹಾಜರಿದ್ದರು.

ಪ್ರೀತಿಯ ಲೆಕ್ಕ :ಚುಟುಕುಗಳು

0

ಡಾ. ರಜನಿ ಎಂ

ಚಕ್ರ ಬಡ್ಡಿ

ನಿನ್ನ ಪ್ರೀತಿಯನ್ನು
ಬಡ್ಡಿ ಸಮೇತ
ತೀರಿಸಲು ಹೋಗಿ
ಆಯಿತಲ್ಲ
ಚಕ್ರ ಬಡ್ಡಿ…
ಅಸಲೂ ತೀರುತ್ತಿಲ್ಲ.

ಪ್ರೀತಿಯ ಲೆಕ್ಕ

ನೀನು
ಶೂನ್ಯ ದಲ್ಲಿ
ಹುಟ್ಟಿ
ಶೂನ್ಯಕ್ಕೇ
ತಳ್ಳುವ
ಗುರು.


ನಾನು
ಎಲ್ಲಾ ಲೆಕ್ಕ
ಪ್ರಯತ್ನಿಸಿ ದರೂ
ಕೇವಲ ಪಾಸು
ಮಾಡುವ
ಜಿಪುಣಿ ನೀನು.

ನಿನ್ನ ಪ್ರೀತಿ
ಹೇಗೆಂದರೆ
ಮಗ್ಗಿ..
ಮುಗಿಯವ ಮುನ್ನ
ಬಲು ಮತ್ತು.


ಕೋಪದಲ್ಲಿ
ವ್ಯವಕಲನ…
ಕೋಪ
ಇಳಿದ ನಂತರ
ಬರೇ
ಸಂಕಲನ
ಗುಣಾಕಾರ ಪ್ರಿಯೆ
ನಿನ್ನ…ಮೋಹ


ನಾನೂ ನೀನೂ
ಸಮ
ಎಂದು ಸಮೀಕರಣ
ಮಾಡಲು ಹೋಗಿ
ನಾನು
ಸೋತಿದ್ದು.

ಕೊನೆಗೂ ಬಂತು ಡಿಜಿಟಲ್ ಕರೆನ್ಸಿ!

ಇನ್ಮುಂದೆ ಸಣ್ಣಪುಟ್ಟ ವ್ಯಾಪಾರಗಳಿಗೆ ಡಿಜಿಟಲ್ ರೂಪಾಯಿ ಬಳಸಬಹುದಾಗಿದೆ.

ಡಿಸೆಂಬರ್ 1ರಿಂದ ಇಂಥ ರೂಪಾಯಿಗಳಿಗೆ ಆರ್ ಬಿ ಐ ಚಾಲನೆ ನೀಡಲಿದೆ ಎಂದು ಆರ್‌ಬಿಐ ಮಂಗಳವಾರ ಹೇಳಿದೆ. ಸದ್ಯ, ನಾಲ್ಕು ನಗರಗಳಲ್ಲಿ ಇವು ಸಿಗಲಿವೆ. ಇವುಗಳಲ್ಲಿ ಬೆಂಗಳೂರು ಒಂದು.

ಆಯ್ದ ಕೆಲವು ಗ್ರಾಹಕರು ಹಾಗೂ ವ್ಯಾಪಾರಿಗಳ ನಡುವೆ ಮಾತ್ರ ಚಿಲ್ಲರೆ ವಹಿವಾಟುಗಳಿಗೆ ‍ ಡಿಜಿಟಲ್ ರೂಪಾಯಿ ಬಳಸಬಹುದಾಗಿದೆ. ಸದ್ಯ, ಎಲ್ಲರೂ ಬಳಸಲು ಸಾಧ್ಯವಿಲ್ಲ.

‘ಡಿಜಿಟಲ್ ರೂಪಾಯಿಯು ಡಿಜಿಟಲ್ ಟೋಕನ್ ರೂಪದಲ್ಲಿ ಇರಲಿದೆ. ಇದು ಕಾನೂನುಬದ್ಧ ಕರೆನ್ಸಿಯಾಗಿರುತ್ತದೆ’ ಎಂದು ಆರ್‌ಬಿಐ ಹೇಳಿದೆ.

ಸಂವಿಧಾನದ ಆಶಯ ಕಾಪಾಡಿ: ನ್ಯಾಯಾಧೀಶ ಪುಟ್ಟರಂಗಸ್ವಾಮಿ

ತುಮಕೂರು; ಸಂವಿಧಾನದ ಆಶಯಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಆಗಬೇಕು ಎಂದು ನ್ಯಾಯಾಧೀಶಾದ ಪುಟ್ಟರಂಗಸ್ವಾಮಿ ಕರೆ ನೀಡಿದರು.

ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯಾಂಗದ ಮಹತ್ವವನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದು ತಿಳಿಸಿದರು.
ಹಿರಿಯ ಪತ್ರಕರ್ತ ಡಿ.ಎಂ. ಘನಶ್ಯಾಮ ಮಾತನಾಡಿ, ಸಂವಿಧಾನದಲ್ಲಿ ಅಡಕ ಮಾಡಿರುವ ಬಹುತ್ವದ ಕಾರಣದಿಂದಲೇ ಇಂದು ಭಾರತ ಭಾರತವಾಗಿ ಉಳಿಯಲು ಸಾಧ್ಯವಾಗಿದೆ. ನಾವೆಲ್ಲ ಭಾರತೀಯರು ಎಂಬ ಭಾವ ನಮ್ಮ ಆಂತರ್ಯದಲ್ಲೇ ಅಡಗಿದೆ ಎಂದರು.

ಭಾರತೀಯರಾಗಿ ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ, ನೆಮ್ಮದಿ, ಶಾಂತತೆಯ ಬದುಕಿಗೆ ನಮ್ಮ ಸಂವಿಧಾನವೇ ಕಾರಣವಾಗಿದೆ ಎಂದರು.

ಪ್ರಾಂಶುಪಾಲರಾದ ಡಾ. ಎಸ್.ರ‌ಮೇಶ್ ಮಾತನಾಡಿ, ನ್ಯಾಯಾಂಗ ವ್ಯವಸ್ಥೆ ಗಟ್ಟಿಯಾಗಿದೆ. ಹೀಗಾಗಿಯೇ ಸಂವಿಧಾನ ಮೀರಿ ಯಾರೂ ಮುಂದಡಿ ಇಡಲು ಸಾಧ್ಯವಾಗಿಲ್ಲ, ಸಾಧ್ಯವಾಗುತ್ತಿಲ್ಲ ಎಂದರು.
ಸಂವಿಧಾನದ ಆಶಯಗಳ ದಾರಿಯಲ್ಲೇ ಎಲ್ಲರೂ ನಡೆಯಬೇಕು ಎಂದು ತಿಳಿಸಿದರು.
ಕಾಲೇಜಿನ ಆಡಳಿತ ಸಂಸ್ಥೆಯ ಅಧ್ಯಕ್ಷರಾದ ಷಫೀ ಅಹಮದ್, ಉಪ ಪ್ರಾಂಶುಪಾಲರಾದ ಟಿ. ಒಬಯ್ಯ ಇದ್ದರು.

ಚಳಿಗಾಲದ ಚುಟುಕುಗಳು

0

ಡಾ. ರಜನಿ ಎಂ


1.
ಸೌದೆ ಒಲೆಯ
ಕಾವು
ನಿನ್ನೆದೆ ಗೂಡು.

2.
ಚಳಿಯಲ್ಲಿ
ಹುದುಗಿ ಬರದ
ದೋಸೆ ಸಂಪಣ
ನಿನ್ನ ಮೌನ.

3.
ಹಾಸಿಗೆ ಮೇಲಿನ
ಚದುರಿದ
ಮಲ್ಲಿಗೆ…
ಮರ ಉದುರಿಸಿದ ಎಲೆ.

4.
ಗರಿಕೆ
ಮೇಲಿನ ಇಬ್ಬನಿ
ನಿನ್ನ ನಾಸಿಕದ
ಬೆವರು.

5.
ನಿನ್ನ
ಅಪ್ಪುಗೆ ಸಡಿಲಿಸಿದ
ಕೂಡಲೇ …
ಬೆಳಗ್ಗಿನ ಚಳಿ.

6.
ಪಿಸು ಮಾತು…
ಮುತ್ತು
ಮುಗಿಯುವ ಮುನ್ನವೆ
ಬೇಗನೆ ಕತ್ತಲ
ಕೊಡುಗೆ.

7.
ಸುರಿಯುವ
ಹಿಮದ ಬಿಳಿ
ರಗ್ಗೊಳಗಡೆ
ನಿನ್ನ ಕಣ್ಣು
ಹಲ್ಲು…

8.
ಕೊರೆಯುವ
ಕೈ
ಮುಟ್ಟಿಸಿ
ಕೆಣಕುವ
ನಿನ್ನ ಆಟ..

9.
ಬಾಟಲೊಳಗೆ
ಕೂತ
ಕೊಬ್ಬರಿ ಎಣ್ಣೆ..
ರೂಮಿಗೆ
ಬಾರದ ನೀನು…

10.
ಊಟಕ್ಕೆ
ಕೊಟ್ಟ ನೆಂಚಿಕೆ
ನಿನ್ನ
ಬಿಸಿ ಮುತ್ತು.

ಚಳಿ ಚುಟುಕು ಭಾಗ -2


ನಿನ್ನ ಮೋಹ
ನಿಧಾನವಾಗಿ
ಏರುವ
ಕಂಬಳಿಯೊಣಗಣ ಕಾವು.

ನಿನ್ನ
ಮೂಡ್…
ಬೆಳಗ್ಗೆ ಚಕ್ಕನೆ
ಕಂಬಳಿ ಕಿತ್ತಾಗಿದ ಹಾಗೆ.

ನಿನ್ನ
ನೆನಪು..
ಮಾಗಿಯ ಚಳಿಯಲ್ಲಿ
ಬೆಳಗಿನ ಜಾವದ ಕನಸಲ್ಲಿ.

ಹಿತುಕಿದ
ಅವರೆಕಾಳು ಸಾರು
ನಿನ್ನ ತಾಳ್ಮೆಯ
ಪ್ರತೀಕ.

ಗೀಟಿನ
ರಂಗೋಲಿ..
ಚಳಿಗೆ ಮಾಯವಾದ
ಚುಕ್ಕಿ ಚಿತ್ತಾರ.

ಹದವಾದ
ಕಾಫಿ..ನಿನ್ನ
ಬೆಚ್ಚನೆ
ಒಲವು.

ರಾತ್ರಿ ಊಟದ
ನಂತರ
ತೊಳೆಯದ ಪಾತ್ರೆ..
ನೀ ಕ್ಷಮಿಸಿದ
ನನ್ನ
ಅವಾಂತರಗಳು.

ಗೂಡಿಂದ ತೆಗೆದು ಕೊಟ್ಟ
ಸ್ವೆಟರ್..
ನನ್ನೆಲ್ಲಾ..
ತಪ್ಪುಗಳಿಗೆ ನೀನು
ನೀಡಿದ ಔದಾರ್ಯ.

ಕೆನರಾ ಬ್ಯಾಂಕ್ ಸಾಲ

  • ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸಿದ್ಧರಾಜು ಚಾಲನೆ ನೀಡಿದರು

ತುಮಕೂರು : ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸುವ ಜತೆಗೆ ನಿರಂತರವಾಗಿ ಸಾಮಾಜಿಕ ಸೇವಾ ಕಾರ್ಯಗಳನ್ನು ಕೆನರಾ ಬ್ಯಾಂಕ್ ಮಾಡಿಕೊಂಡು ಬಂದಿದೆ ಎಂದು ಕೆನರಾ ಬ್ಯಾಂಕ್ ತುಮಕೂರು ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸಿದ್ಧರಾಜು ತಿಳಿಸಿದರು.

ತುಮಕೂರು ಗ್ರಾಮಾಂತರದ ಅರೆಯೂರು ಗ್ರಾಮದಲ್ಲಿ ಅರೆಯೂರು ಶಾಖೆಯಿಂದ ಆಯೋಜಿಸಿದ್ದ ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಜೊತೆಗೆ ಸಾಲವನ್ನು ಪಡೆದ ಉದ್ದೇಶಕ್ಕೆ ಬಳಸಿದಾಗ ಆರ್ಥಿಕವಾಗಿ ಸದೃಢರಾಗಬಹುದು. ಸಾಲ ಸೌಲಭ್ಯ ಒದಗಿಸುವ ಮುಖೇನ ಗ್ರಾಮೀಣ ಭಾಗದ ಜನರ ಆರ್ಥಿಕ ಸದೃಢತೆಗೆ ಕೆನರಾ ಬ್ಯಾಂಕ್ ಸಹಕಾರಿಯಾಗಿದೆ ಎಂದರು.

ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಕೆನರಾ ಬ್ಯಾಂಕ್ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ೧೯೦೬ರಲ್ಲಿ ಆರಂಭವಾಗಿ ಪ್ರಸ್ತುತ ಗ್ರಾಹಕರ ವಿಶ್ವಾಸದಿಂದ ಮುನ್ನೆಡಿಯುತ್ತಿದೆ. ತುಮಕೂರು ಜಿಲ್ಲೆಯಲ್ಲಿ ೬೮೦೦ ಕೋಟಿ ವ್ಯವಹಾರ ಇದೆ, ೩೫೦೦ಕೋಟಿ ಸಾಲ ನೀಡಲಾಗಿದೆ. ಕೆನರಾ ಬ್ಯಾಂಕ್ ಸಂಸ್ಥಾಪಕರು ಎತ್ತಿನ ಗಾಡಿಯಲ್ಲಿ ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಬ್ಯಾಂಕ್ ಖಾತೆ ತೆರೆಸಿ ಬ್ಯಾಂಕ್ ಆರಂಭಿಸಿದ್ದರು ಎಂದು ಸ್ಮರಿಸಿದರು.

ರೈತರಿಗೆ ನೆರವಾಗುವಂತೆ ಕೆನರಾ ಬ್ಯಾಂಕ್ ನ ಅರ್ಧ ಶಾಖೆಗಳನ್ನು ಹಳ್ಳಿಗಳಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿ ರೈತರು ಬ್ಯಾಂಕ್ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಲಾಭದಾಯಕ ಕೃಷಿ ಮಾಡಬಹುದಾಗಿದೆ. ಬೆಳೆ ಸಾಲ, ಹೈನುಗಾರಿಕೆ ಸೇರಿದಂತೆ ಎಲ್ಲಾ ರೀತಿಯ ಸಾಲ ಸೌಲಭ್ಯಗಳು ನೀಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ೨೭ ಶಾಖೆಗಳನ್ನು ಹಳ್ಳಿಯಲ್ಲಿ ಸ್ಥಾಪಿಸಲಾಗಿದೆ. ರೈತರಿಗೆ ನೆರವಾಗುವಂತೆ ಕೃಷಿ ಸಾಲ ವಿತರಿಸಲಾಗುತ್ತಿದೆ. ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ನಿಮ್ಮ ಬೆಳವಣಿಗೆಯ ಜೊತೆ ಬ್ಯಾಂಕ್ ಬೆಳವಣಿಗೆಗೂ ಸಹಕರಿಸಬೇಕು ಎಂದರು.

ಅರೆಯೂರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ದೀಪಕ್ ಆರ್ ಮಾತನಾಡಿ, ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ 500 ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಿದ್ಧಗಂಗಾ ಪ್ರೌಢಶಾಲೆಗೆ ಕ್ರೀಡಾ ಸಾಮಗ್ರಿಗಳು ಹಾಗೂ 40 ಮಂದಿಗೆ ಹಸು ಸಾಲದ ಚೆಕ್ ವಿತರಣೆ ಮಾಡಲಾಗಿದೆ. ಕೆನರಾ ಬ್ಯಾಂಕ್ ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿದೆ. ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡು ಸರಿಯಾಗಿ ಕಟ್ಟಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ. ರೈತರಿಗೆ ಅನುಕೂಲವಾಗವಂತೆ ಕೃಷಿ ಸಾಲ ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸಿಎಸ್ ಆರ್ ಅನುದಾನದಲ್ಲಿ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಕ್ರೀಡಾ ಸಾಮಗ್ರಿ ಹಾಗೂ ಅರೆಯೂರು ವೈದ್ಯನಾಥೇಶ್ವರ ದೇಗುಲಕ್ಕೆ ಕುಡಿಯುವ ಶುದ್ಧ ನೀರಿನ ಘಟಕ ಸೇರಿದಂತೆ ಹಾಲು ಉತ್ಪಾದಕರಿಗೆ ಸಾಲದ ಚೆಕ್ ವಿತರಿಸಲಾಯಿತು.

ಕೆನರಾ ಬ್ಯಾಂಕ್ ನ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬಾರಾವ್ ಪೈ ಅವರ ಭಾವ ಚಿತ್ರಕ್ಕೆ ಹೂ ಮಾಲೆ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸಿದ್ದಗಂಗಮ್ಮ, ಉಪಾಧ್ಯಕ್ಷೆ ರೇಖಾ, ಕಟ್ಟೆಗೊಲ್ಲಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಶ್ರೀರಂಗಮ್ಮ, ಗ್ರಾಪಂ ಸದಸ್ಯರಾದ ಪ್ರಭುದೇವರು, ಕೆ.ಎಂ.ಕಿರಣ್, ಸಿದ್ದಲಿಂಗಮ್ಮ, ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಗಂಗಣ್ಣ, ಗಿರೀಶ್, ಅರೆಯೂರು ಕೆನರಾ ಬ್ಯಾಂಕ್ ನ ಸಿಬ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು.

ಫೋಟೋ: ತುಮಕೂರು ಗ್ರಾಮಾಂತರದ ಅರೆಯೂರು ಗ್ರಾಮದಲ್ಲಿ ಅರೆಯೂರು ಶಾಖೆಯಿಂದ ಆಯೋಜಿಸಿದ್ದ ಕೆನರಾ ಬ್ಯಾಂಕ್ ಸಂಸ್ಥಾಪನಾ ದಿನಾಚರಣೆಯಲ್ಲಿ ಹಸು ಸಾಕಾಣಿಕೆ ಸಾಲದ ಚೆಕ್ ವಿತರಣೆ ಮಾಡಲಾಯಿತು

ನ.19: ಕೇಬಿಯ ‘ದಕ್ಲಕಥಾ ದೇವಿಕಾವ್ಯ’ ನಾಟಕ

0

ತುಮಕೂರು: ಕವಿ ಕೆ.ಬಿ.ಸಿದ್ದಯ್ಯನವರ ಕಾವ್ಯ ಕುರಿತ ‘ದಕ್ಲಕಥಾ ದೇವಿಕಾವ್ಯ’ ನಾಟಕವನ್ನು ಕೇಬಿ ಬಳಗದಿಂದ ನವೆಂಬರ್ 19ರ ಶನಿವಾರ ಸಂಜೆ 6ಗಂಟೆಗೆ ತುಮಕೂರಿನ ಡಾ.ಗುಬ್ಬಿವೀರಣ್ಣ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ತುಮಕೂರಿನ ರಾಜ್ಯ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮತಿ, ತುಮಕೂರು ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜಾತ್ಯತೀತ ಯುವ ವೇದಿಕೆ, ಜನಪರ ಚಳಿವಳಿಗಳ ಒಕ್ಕೂಟ, ದರೈಸ್ತ್ರೀ ಕಲ್ಚರಲ್ ಟ್ರಸ್ಟ್, ಆದರ್ಶ ಫೌಂಡೇಷನ್ ಸಹಕಾರದೊಂದಿಗೆ ನಾಟಕವನ್ನು ಅಯೋಜಿಸಿದ್ದು, ಪ್ರವೇಶ ಉಚಿತವಾಗಿರುತ್ತದೆ.

ಬೆಂಗಳೂರಿನ ಜಂಗಮ ಕಲೆಕ್ಟಿವ್ ತಂಡದ ಲಕ್ಷ್ಮಣ್.ಕೆ.ಪಿ. ನಾಟಕ ರಚನೆ ಮತ್ತು ನಿರ್ದೇಶನವನ್ನು ಮಾಡಿದ್ದು, ಸಹನಿರ್ದೇಶನ ಸ್ಕಂದ ಘಾಟಿ ಮತ್ತು ಶೀಹರ್ಷ ಜಿ.ಎನ್., ಡ್ರಮಟರ್ಜಿ ಮೋಹಿತ್ ವಿಕೆಸಿ, ಬೆಳಕಿನ ವಿನ್ಯಾಸ ಮಂಜು ನಾರಾಯಣ್, ವಸ್ತ್ರ ವಿನ್ಯಾಸ ಶ್ವೇತಾರಾಣಿ ಎಚ್.ಕೆ. ಮಾಡಿದ್ದಾರೆ.

ಬಿಂದು ರಕ್ಷಿದಿ, ರಮಿಕ ಚೈತ್ರ, ಸಂತೋಷ್ ದಿಂಡ್ಗೂರು, ನರಸಿಂಹರಾಜು ಬಿ.ಕೆ. ಮತ್ತು ಭರತ್ ಡಿಂಗ್ರಿ ಪಾತ್ರದಾರಿಗಳಾಗಿದ್ದಾರೆ.

ವಿನಯ್ ಗುರೂಜಿ ಮೇಲೆ ಯಾವ ಕಣ್ಣು ಬಿತ್ತು…?

0

ಸತ್ಯ-ನ್ಯಾಯ-ಸಮಾನತೆ-ಅಹಿಂಸೆ-ಬಾತೃತ್ವದ ಪರ ಇದ್ದ ಅವಧೂತ

ವಿನಯ್ ಗುರೂಜಿ ಬಗ್ಗೆ ಮಾತನಾಡುವ ಮೊದಲು ಇತಿಹಾಸದ ಪುಟ ಅವಲೋಕಿಸದ ಹೊರತು ಸತ್ಯಸತ್ಯತೆ ತಿಳಿಯಲಾ ಗುವುದಿಲ್ಲಾ ಎನ್ನುವುದು ನ್ಯಾಯಸಮ್ಮತ. ಯತಾಸ್ಥಿತಿವಾದಿಗಳು, ಜಾತಿ ವ್ಯವಸ್ಥೆ ಕಠೋರವಾಗಿರುವ ನಮ್ಮಲ್ಲಿ, ಇಲ್ಲಿ ಯಾವ ವರ್ಗ ಯಾವ ಕೆಲಸ ಮಾಡಬೇಕೊ ಅದೇ ಕೆಲಸ ಮಾಡಿದರೇ ಪ್ರತಿಯೊಂದನ್ನು ಸಹಿಸುತ್ತದೆ.

ಗರ್ಭಗುಡಿ ಸಂಸ್ಕೃತಿ, ಶ್ರೇಷ್ಟ-ಕನಿಷ್ಟ ಈ ವ್ಯವಸ್ಥೆ ಸಾವಿರಾರು ವರ್ಷಗಳ ಮೌಡ್ಯ ಆಚರಣೆ ಇವೆಲ್ಲವನ್ನು ಬುಡಮೇಲು ಮಾಡಲೊರಟರೆ ಅವರಿಗೆ ಅಪಹಾಸ್ಯ, ಅವಮಾನ, ಚಾರಿತ್ರ್ಯಹರಣ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ವಿನಯ್ ಗುರೂಜಿ ಹೊರತಲ್ಲಾ..

ದೇಶದ ಐತಿಹಾಸಿಕ & ಮೊಟ್ಟ ಮೊದಲ ಸಮಾನತಾವಾದದ ಮೂಲಪುರುಷ ಬುದ್ಧ ಸತ್ಯ ಹೇಳ ಹೊರಟಾಗ ಈ ದೇಶದ ಯತಾಸ್ಥಿತಿವಾದಿಗಳು ಮಾಡಿದ್ದು ಅಪಪ್ರಚಾರ & ಚಾರಿತ್ರಯಹರಣವನ್ನೆ..!

12 ನೇ ಶತಮಾನದ ಬಸವಣ್ಣ ಸಮಾನತೆ ಬಯಸಿ ಸಂಘರ್ಷಕ್ಕಿ ಳಿದಾಗ ಮಾಡಿದ್ದು ಅಪಪ್ರಚಾರ & ಚಾರಿತ್ರಯಹರಣವನ್ನೆ…!

ಸತ್ಯ-ಅಹಿಂಸಾ ಮಾರ್ಗ ಅನುಸರಿಸಿ ಜೀವನದುದ್ದಕ್ಕೂ ತುಂಡು ಬಟ್ಟೆ ಧರಿಸಿದ ಮಹಾತ್ಮ ಗಾಂಧಿ ಬಗ್ಗೆ ಇಂದಿಗೂ ಅವರ ಬಗ್ಗೆ ಮಾಡುತ್ತಿರುವುದು ಅಪಪ್ರಚಾರ & ಚಾರಿತ್ರ್ಯಹರಣವನ್ನೆ.

ಬಾಬಾ ಸಾಹೇಬ್ ಅಂಬೇಡ್ಕರ್ ಸಮಾನತೆ-ಸ್ವಾತಂತ್ರ್ಯ-ಬಾತೃತ್ವ ಬಯಸಿ, ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ, ಸಂವಿಧಾನ ರಚಿಸಿ, ಕಾನೂನು ರೂಪಿಸಿ, ಸಮಾನತೆ ಜಾರಿ ಮಾಡಿದಾಗಿನಿಂದ ಇಂದಿನ ವರೆವಿಗೂ ಅವರ ಜ್ಞಾನ & ತ್ಯಾಗ ವನ್ನು ಮರೆತ ಈ ದೇಶ ಅವರ ಚಿಂತನೆಗಳನ್ನು ಜಾತಿ ಕಾರಣಕ್ಕಾಗಿ ತುಚ್ಚಿಕರಿಸಿ, ಕಡೆಯದಾಗಿ ಅವರ ಚಿಂತನೆಗಳಿಗೂ ಚಿತೆ ತಯಾರು ಮಾಡಿಕೊಂಡು ಅವರ ಚಿಂತನೆಗಳ ಸಮಾನತಾವಾದ ವನ್ನು ಸುಡುವುದಕ್ಕೆ ಕಾಯುತ್ತಿದ್ದಾರೆ..

ಇತಿಹಾಸವೇ ಹೀಗಿದ್ದ ಮೇಲೆ ವಿನಯ್ ಗುರೂಜಿಯವರ ಚಾರಿತ್ರ್ಯಹರಣದ ಹಿಂದಿರುವ ಕೈವಾಡ ಯತಾಸ್ಥಿತಿವಾದಿಗಳದ್ದೇ..
ಅಂದರೇ ಬದಲಾವಣೆ ಬಯಸದ ಸಂಪ್ರದಾಯವಾದಿಗಳದ್ದೇ..

ವಿನಯ್ ಗುರೂಜಿ ಇಷ್ಟಕ್ಕೂ ಶೂದ್ರ ಕುಟುಂಬದಿಂದ ಬಂದವರು.
ಗುರೂಜಿ, ಜ್ಯೊತಿಷಿ ಎಲ್ಲಾ ಮೌಡ್ಯ ಸಂಪ್ರದಾಯ ಮೀರಿ, ನೈಜತೆ, ಸತ್ಯತೆ, ಬದುಕಿನ ಮುಖ್ಯ ಗುರಿ, ಬದುಕಿನ ಉದ್ದೇಶ, ಕುಟುಂಬದ ಪ್ರತಿಯೊಬ್ಬರ ಜವಬ್ದಾರಿ, ಸಮಾಜದ ಪ್ರತಿ ಮನುಷ್ಯನ ಜವಬ್ದಾರಿಯನ್ನು ಮಹಾತ್ಮರ ಮಾತುಗಳಿಂದ ಪ್ರಭಾವಿತರಾಗಿ ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತ ಕೈಂಕರ್ಯ ಮಾಡುತ್ತಾ, ಸಂತನಂತೆ ಮನಃ ಪರಿವರ್ತನೆ ಮಾಡುತ್ತಿರುವ ಸಮಾಜ ಸುಧಾರಕರು ವಿನಯ್ ಗುರೂಜಿಯವರು.

ಇಂತಹ ಸರಳ ಸ್ನೇಹ ಜೀವಿಗೆ ಚಿಕ್ಕ ಮಂಗಳೂರು ಜಿಲ್ಲೆಯಲ್ಲಾ, ಕರ್ನಾಟಕ ರಾಜ್ಯವಲ್ಲಾ, ಭಾರತ ದೇಶವಲ್ಲದೇ ಪ್ರಪಂಚದಾದ್ಯಂತ ಅಸಂಖ್ಯಾತ ಹಿಂಬಾಲಕರ ನ್ನೊಂದಿರುವ ಈ ಸಂತನು, ಸಾಮಾಜಿಕ ವ್ಯವಸ್ಥೆಯ ಎಲ್ಲಾ ಅಸಮಾನತೆ ತೊಡೆದು ಹಾಕುತ್ತಾ, ಯಾವ ವರ್ಗ ತಾನೇ ಶ್ರೇಷ್ಚ ಎಂಬ ಸಂಕುಚಿತ ಮನಸ್ಥಿತಿ ಹೊಂದಿತ್ತೊ ಅವರ ಮನಸ್ಥಿತಿಗೆ ಕೊಡಲಿ ಪೆಟ್ಟಾಕಿ, ಮನುಷ್ಯರನ್ನು ಮನುಷ್ಯರಂತೆ ಕಾಣುವ ಕನಸು ಕಂಡವರಿಗೆ ಈ ತರಹದ ಅಪಪ್ರಚಾರ ನಿರೀಕ್ಷಿತವೆ.

ಗುರೂಜಿಯವರು ಬಾಯಲ್ಲಿ ಎಂದು ಬುದ್ಧ, ಬಸವ, ಅಂಬೇಡ್ಕರರ, ಗಾಂಧಿಯವರ ಚಿಂತನೆಗಳು ಬಂದವೋ ಈ ವ್ಯವಸ್ಥೆಯ ಬುಡ ಅಲುಗಾಡಿತು. ಮತ್ತೊಬ್ಬ ಸಮಾಜ ಸುಧಾರಕ ಈ ನೆಲ ಮುಟ್ಟಿದರು ಎಂದು. ಯಾವ ಸಂಪ್ರದಾಯವಾದಿಗಳು ತಾವೇ ಶ್ರೇಷ್ಚ ಎಂಬುದಾಗಿ ಹೇಳಿಕೊಂಡರೋ, ಅದೇ ಸಂಪ್ರದಾಯವಾದಿಗಳು ಗುರೂಜಿ ಯವರ ಸರಳತೆಗೆ & ಸತ್ಯ ಸಂದೇಶಕ್ಕೆ ಮೇಲ್ನೊಟಕ್ಕೆ ಶರಣಾದರು.. ಅಷ್ಟೇ ಸತ್ಯ ಆಂತರಿಕವಾಗಿ ಗುರೂಜಿಯವರು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು.

ಪರಿಸ್ಥಿತಿ, ಸಮಯಕ್ಕಾಗಿ ಕಾದು ನಿಂತ ಕೆಲವು ಪಟ್ಟಭದ್ರ ಹಿತಾ ಸಕ್ತಿಯ ಗುಂಪುಗಳು ಇಂದು ಒಂದಾಗಿ ಅವರ ಹೆಸರಿಗೆ ಮಸಿ ಬಳಿಯಲೊರಟಿವೆ.. ಅಖಂಡ ಬೌದ್ಧ ಧರ್ಮವನ್ನು ನಾಶ ಮಾಡಿದ್ದು ಇದೇ ಮನಸ್ಥಿತಿಯ ಪುಶ್ಯಮಿತ್ರ ಶೃಂಗನಲ್ಲವೇ..? ಅಭ್ಯಂತರವಿಲ್ಲಾ ಮಾಡಲಿ. ಆದರೆ ಗುರೂಜಿಯವರ ಸಾಮಾಜಿಕ ಸಮಾನತೆಗಾಗಿ ತೆಗೆದುಕೊಂಡ ಹಲವು ಪ್ರಥಮಗಳ ಬಗ್ಗೆ ನಾವು ಶಿಷ್ಯವೃಂದ ಮಾತನಾಡದಿದ್ದರೇ ನಾವೆಲ್ಲರೂ ಗುರೂಜಿಯವರಿಗೆ ಕೊಡುವ ಗುರು-ಗೌರವ ವಾದರೂ ಏನು..?

ಹತ್ತಾರು ವರ್ಷವು ಕೂಡಾ ಗುರೂಜಿಯವರ ಸೇವಾ ಕೈಂಕರ್ಯ ಸುಗಮವಾಗಿ ಸಾಗಿತ್ತು ಈ ವರ್ಷ ಯಾಕಿತರವಾಯ್ತು ಎಂಬುದರ ಬಗ್ಗೆ ಸ್ವಲ್ಪ ಚಿಂತಿಸೋಣ.

1. ಮೊದಲಿನಿಂದಲೂ ತಮ್ಮ ಆಶ್ರಮದಲ್ಲಿ ಗಾಂಧೀಜಿರವರ ಪ್ರತಿಮೆ ಇಟ್ಟಿರುವ ಕಾರಣವಾ..
2. ಗುರೂಜಿ ಯವರಿರುವುದು ಸದಾ ಜಾತ್ಯಾತೀತ ನಾಯಕರೊಟ್ಟಿಗಿನ ಒಡನಾಟ. ಅದು ಮಾಜಿ ಪ್ರಧಾನಿ ದೇವೆಗೌಡರವರಿಂದಿಡಿದು, ಎಸ್.ಎಂ ಕೃಷ್ಣ, ಯಡಿಯೂರಪ್ಪ, ರಮೇಶ್ ಕುಮಾರ್, ಡಿಕೆ ಶಿವಕುಮಾರ್ ವರೆಗು. (ಗುರೂಜಿಯವರ ಅಪಪ್ರಚಾರಕ್ಕೆ ಜಾತ್ಯಾತೀತರನ್ನು ದ್ವೇಷಿಸುವ ಕೋಮುವಾದಿಗಳ ಕೈವಾಡವೇ.?)
3. ಬುದ್ದ, ಬಸವ, ಅಂಬೇಡ್ಕರ್, ಗಾಂಧಿಯವರ ಸಮಾನತಾವಾದ/ಬದಲಾವಣೆ ವಾದದ ಬಗ್ಗೆ ಮಾತಾಡುತ್ತಿರುವುದು.( ಗುರೂಜಿಯವರ ಅಪಪ್ರಚಾರಕ್ಕೆ ಯತಾಸ್ಥಿತಿವಾದಿಗಳ ಕೈವಾಡ & ಷಡ್ಯಂತ್ರವಿರಬಹುದೆ.?).
4. ದೇಶದಲ್ಲೇ ಪೌರ ಕಾರ್ಮಿಕರ ಪಾದ ತೊಳೆದು ಅವರ ಪಾದದಡಿಯಲ್ಲಿದ್ದಾನೆ ದೈವ ಎಂಬ ಸಂದೇಶ ಕೊಟ್ಟದ್ದು ಗುರೂಜಿಯವರು. ಬಹುಷಃ ಪುರೋಹಿತಶಾಹಿಗಳ ಅಸಹಿಷ್ಣುತೆಯು ಕಾರಣವಿರಬಹುದಾ..?
5. ಗುರೂಜಿಯವರು ಲಿಂಗ ಸಮಾನತೆ ಬಗ್ಗೆ ಮಾತನಾಡುತ್ತಾ ತೃತಿಯ ಲಿಂಗಿಗಳ ಸಮಾನತೆಗಾಗಿ ಮಾತನಾಡುತ್ತಾ ಸಮಾಜದಲ್ಲಿ ಅವರನ್ನು ಗೌರವಿಸಿ ಎಂದದ್ದು ಕಿಡಿಗೇಡಿಗಳ ಗುರೂಜಿ ವಿರುದ್ದದ ಕುಕೃತ್ಯಕ್ಕೆ ಕಾರಣವಾಯ್ತಾ.?..

6. ತಮ್ಮ ಆಶ್ರಮದಲ್ಲಿ ಗರ್ಭಗುಡಿ ಸಂಸ್ಕೃತಿಗೆ ತಿಲಾಂಜಲಿ ಇಟ್ಟು ದೈವ ಸಕಲರದು ಎಂದು ಸಾರಿದ ಕಾರಣಕ್ಕಾಗಿಯೂ ಗುರೂಜಿ ಯವರ ಅಪಪ್ರಚಾರಕ್ಕೆ ಕಾರಣವಿರಬಹುದಾ..?
7. ಕೆಲವೊಂದು ಜ್ಯೊತಿಷಿಗಳ ರಹಸ್ಯ ಕಾರ್ಯಸೂಚಿಯನ್ನು ಬಯಲಿಗೆಳೆದು ಜ್ಯೊತಿಷಿಗಳು ಹೀಗೆ ಇರಬೇಕು ಎಂದು ತಾಕೀತು ಮಾಡಿ, ಸಮಾಜಕ್ಕೆ ಅವರ ಮುಖ ತೋರಿಸಿದ್ದು ಗುರೂಜಿಯವರ ಅಪಪ್ರಚಾರಕ್ಕೆ ಕಾರಣವಿ ರಬಹುದಾ..?
8. ಕುಟುಂಬ ಎಂದರೇನು..? ತಂದೆ, ತಾಯಿ, ಗಂಡ, ಹೆಂಡತಿ, ಸಹೋದರ, ಸಹೋದರಿಯರ ಕಡೆಗೆ ಮಕ್ಕಳ ಜವಬ್ದಾರಿಯನ್ನು ಮಹಾತ್ಮರ ನುಡಿಗಳನ್ನು ಗುರೂಜಿರವರು ಸರಳವಾಗಿ ಜನಸಾಮಾನ್ಯರಿಗೆ ತಲುಪಿಸಿದ್ದು ತಪ್ಪಾಯ್ತಾ..?
9. ಜಾತಿ-ಧರ್ಮ ಮೀರಿ ವಿಶ್ವದ ಎಲ್ಲಾ ಧರ್ಮಿಯರು ಅದು ಮುಸಾಲ್ಮಾನ, ಕ್ರೈಸ್ತ, ಸಿಖ್, ಬೌದ್ದ, ಸಹಿಷ್ಣು ಹಿಂಧೂಗಳೂ ಸೇರಿದಂತೆ ವಿಶ್ವದೆಲ್ಲೆಡೆ ತಮ್ಮ ಅನುಯಾಯಿಗಳೊಂದಿಗೆ ಕುವೆಂಪುರವರ “ಮನುಜ ಮತ ವಿಶ್ವ ಪಥ” ವೆಂಬ ಸಂದೇಶ ಸಾರುತ್ತಿರುವುದಕ್ಕಾ..?

ಇಷ್ಚೆಲ್ಲಾ ಕಾರಣಗಳಿಂದ ಗುರೂಜಿರವರ ಮೇಲೆ ಅಪಪ್ರಚಾರವಾಗುತ್ತಿರುವುದಾದರೇ ಆಗಲಿ ಬಿಡಿ..
ಬುದ್ಧನ ಸತ್ಯ ಮಾರ್ಗ. ಬಸವಣ್ಣನ ಸಮಾನತಾ ಸಂಘರ್ಷದ ಮಾರ್ಗ.
ಗಾಂಧಿಯ ಅಹಿಂಸ ಮಾರ್ಗ. ಬಾಬಾ ಸಾಹೇಬರ ಸ್ವಾತಂತ್ರ್ಯ, ಸಮಾನತೆ, ಬಾತೃತ್ವದ & ಸಂವಿಧಾನ / ಕಾನೂನಿನ ಮಾರ್ಗ ನಮ್ಮನ್ನು ಇನ್ನಷ್ಚು ಬಲಿಷ್ಚಗೊಳಿಸಬೇಕು ಇದನ್ನೆ ಗುರೂಜಿಯವರು ನಮಗೇಳಿಕೊಟ್ಟಿರುವುದು..
ಇದೇ ಮಾರ್ಗದಲ್ಲಿರಲಿ ನಮ್ಮ ಹೋರಾಟ.

ಯಾವ ಸಂವಿಧಾನದ 4ನೇ ಅಂಗವಾದ ಮಾಧ್ಯಮ ರಂಗದ ಮೇಲೆ ಬಾಬಾ ಸಾಹೇಬರು ನಂಬಿಕೆಯಿಟ್ಟಿದ್ದರೋ, ಆ ಮಾಧ್ಯಮ ರಂಗದ ಈ ರೀತಿಯ ನಡೆ ನೋವುಂಟು ಮಾಡಿದೆ.

ಮಾಧ್ಯಮ ರಂಗ ಸಂವಿಧಾನದ 4 ನೇ ಆಧಾರ ಸ್ತಂಭವಾಗಿರಬೇಕು. ಕರ್ನಾಟಕದ ಬಹುತೇಕ ಮಾಧ್ಯಮಗಳು ತಮ್ಮ ಸಾಮಾಜಿಕ ಜವಬ್ದಾರಿ ನಿರ್ವಹಿಸುತ್ತಿವೆ. ಒಂದೆರಡು ಮಾಧ್ಯಮ ಹಣ ದಾಸೆಗೆ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಾ, ವ್ಯಾಪಾರೀಕರಣ ಗೊಂಡಿರುವುದು ಬೇಸರ ತಂದಿದೆ..ಬಾಬಾ ಸಾಹೇಬರ ಆಶಯಗಳಿಗೆ ಕೊಳ್ಳಿ ಇಡೋ ಕೆಲಸ ಮಾಡಬೇಡಿ.

ಸತ್ಯ ಅಳುವಾಗ ಸುಳ್ಳು ನಗುತಿರುತ್ತೆ, ಅದೇ ಸತ್ಯ ಒಮ್ಮೆ ನಗಲು ಪ್ರಾರಂಭಿಸಿದರೆ ಸುಳ್ಳು ಸತ್ತೆ ಹೋಗುತ್ತೆ. ಗುರೂಜಿ & ಅವರ ಕುಟುಂಬ ಸತ್ಯ ಮಾರ್ಗಿಗಳು, ಇಂದು ಕೆಲವು ವಿಕೃತಿ ಮನಸ್ಥಿತಿಗಳು ನಮ್ಮನ್ನ ವಿಚಲಿತರನ್ನಾಗಿಸಬಹುದು ಎಂದು ಕೊಂಡಿದ್ದಾರೆ.. ಆ ಸುಳ್ಳು ಸುಳ್ಳೆಂದು ಜಗಜ್ಜಾಹಿರಾಗಲು ಕೆಲವೆ ದಿನ. ಜೀವನ & ಸಮಾಜ ಕಟ್ಟುವುದು ಸಂಘರ್ಷದ ಬದುಕು, ವಿಚಲಿತರಾಗದೇ ಮತ್ತಷ್ಟು ಶಕ್ತಿ & ವಿಶೇಷತೆಗಳಿಂದ ಸಮಾಜ ಕಟ್ಟೋಣ..

ಕೆಟ್ಟವರು ಕೆಟ್ಟದ್ದನ್ನೆ ಮಾಡುತ್ತಾರೆ.. ಸಮಾಜ ಕಟ್ಟಬೇಕಾದ ಕೆಲಸ ನಮ್ಮ ಹೆಗಲ ಮೇಲಿದೆ ನಾವು ಗುರೂಜಿರವರ ಕಾಯಕಕ್ಕೆ ಕೈ ಜೋಡಿಸೋಣಾ..

-ಲೇಖಕ: ಯಶವಂತ್ ತುಮಕೂರು✍️

ವನ್ಯಜೀವಿ ಬಾಧಿತರಿಗೆ ಸಿಕ್ಕಿಲ್ಲ ಪರಿಹಾರ

0
ಸಂತ್ರಸ್ಥರ ಪರಿಹಾರ ಬಾಕಿ ಬೆಟ್ಟದಷ್ಟು

17.15 ಲಕ್ಷ ಬಿಡುಗಡೆಗೆ ಕೋರಿ ಪತ್ರ ಬರೆದ ಅರಣ್ಯ ಇಲಾಖೆ

ವರದಿಗಾರ: ಲಕ್ಷ್ಮೀಕಾಂತರಾಜು ಎಂ ಜಿ
lakshmikantharajumg@gmail.com


ತುಮಕೂರು:: ಕಳೆದ ಮುಂಗಾರು ಹಂಗಾಮಿನಲ್ಲಿ ಅರಣ್ಯದಂಚಿನ ಹಾಗೂ ಇತರೆ ಜಮೀನುಗಳಲ್ಲಿ ವನ್ಯ ಜೀವಿಗಳಿಂದ ಹಾನಿ ಗೊಳಗಾದ ರೈತರ ಬೆಳೆ ಹಾನಿ ಪರಿಹಾರವ ಮೊತ್ತವು ತುಮಕೂರು ವಿಭಾಗದ ಅರಣ್ಯ ಇಲಾಖೆಯಿಂದ ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿನ ಪರಿಹಾರ ಮೊತ್ತ 17.15 ಲಕ್ಷ ರೂಗಳು ಬಾಕಿ ಇದ್ದು , ಸಕಾಲಕ್ಕೆ ಪರಿಹಾರ ದೊರಕದೇ ಬಾಧಿತ ಸಂತ್ರಸ್ಥರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ವನ್ಯಜೀವಿ ದಾಳಿಯಿಂದ ಸಾಕುಪ್ರಾಣಿ ಹತ್ಯೆ,ಬೆಳೆ ನಷ್ಟ,ಮಾನವ ಹತ್ಯೆ ಹಾಗು ಗಾಯಗೊಂಡ ಪ್ರಕರಣಗಳ ವೈದ್ಯಕೀಯ ವೆಚ್ಚ ಸೇರಿದಂತೆ ಪರಿಹಾರ ಮೊತ್ತವಾಗಿ ಪಾವತಿಸಲು 17.15 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಹಾಸನ ವೃತ್ತವರಿಗೆ ತುಮಕೂರು ವಿಭಾಗದ ಡಿಸಿಎಫ್ ಅಕ್ಟೋಬರ್ ಒಂದರಂದು ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ಅರಣ್ಯದಂಚಿನ ಗ್ರಾಮಗಳ ರೈತರ ಭೂಮಿಯಲ್ಲಿ ವನ್ಯಜೀವಿಗಳಿಂದ ಬೆಳೆ ಹಾನಿ, ಹಾಗೂ ಸಾಕುಪ್ರಾಣಿ ಹತ್ಯೆಗಳು ಪ್ರಕರಣಗಳು ಸಾಕಷ್ಟು ನಡೆಯುತ್ತಲೇ ಇರುತ್ತವೆ. ಕ್ರೂರ ಮೃಗಗಳು ಮಾನವನ ಮೇಲೂ ದಾಳಿ ಮಾಡಿದ ಪ್ರಕರಣಗಳಲ್ಲಿ ಮನುಷ್ಯರು ಗಾಯಗೊಂಡ ಪ್ರಕರಣಗಳು ಸಹ ಇದ್ದು ಈ ಬಾಧಿತ ಸಂತ್ರಸ್ಥರಿಗೆ ಸಕಾಲದಲ್ಲಿ ಪರಿಹಾರ ಹಣ ಪಾವತಿಸಲು ಪ್ರಾಕೃತಿಕ ವನ್ಯಜೀವಿ ಸಂರಕ್ಷಣೆ ಸಂರಕ್ಷಣೆ -015 ರ ಪೂರಕ ವೆಚ್ಚಗಳು ಅಡಿಯಲ್ಲಿ ಧಯಾತ್ಮಕ ಧನ ಅನುದಾನ ಕೋರಿ ತುಮಕೂರು ಅರಣ್ಯ ಇಲಾಖೆಯಿಂದ ತಮ್ಮ ಮೇಲಧಿಕಾರಿಗೆ ಪತ್ರ ಬರೆಯಲಾಗಿದೆ.

ವನ್ಯ ಜೀವಿಗಳಿಂದ ಬೆಳೆ ಹಾನಿಗೊಂಡ ರೈತರುಗಳು ತಮ್ಮ ‌ವ್ಯಾಪ್ತಿಯ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಬೆಳೆ ಹಾನಿಗೆ ವರದಿ ಮಾಡಿಸಿದ್ದು , ಮೂರ್ನಾಲ್ಕು ತಿಂಗಳು ಕಳೆದರೂ ಪರಿಹಾರ ದೊರಕದೇ ,ಅತ್ತ ಬೆಳೆಯೂ ಇಲ್ಲ, ಇತ್ತ ಪರಿಹಾರವೂ ಇಲ್ಲದಂತಾಗಿ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದು , ಶೀಘ್ರವಾಗಿ ಪರಿಹಾರ ಮೊತ್ತ ಪಾವತಿಸುವಂತೆ ಬಾಧಿತ ರೈತರುಗಳು ಅರಣ್ಯ ಇಲಾಖೆಗೆ ಆಗ್ರಹಿಸುತ್ತಿದ್ದಾರೆ.

ಕಳೆದ ಸೆಪ್ಟಂಬರ್ ಗೆ ಕೊನೆಗೊಂಡಂತೆ ಇಲಾಖೆಯಲ್ಲಿನ ಧಯಾತ್ಮಕ ಧನ ಯೋಜನೆಯಡಿ 13.93 ಲಕ್ಷ ರೂಗಳನ್ನ ಸಂತ್ರಸ್ಥರಿಗೆ ಪಾವತಿಸಿ ಉಳಿದ ಪರಿಹಾರ ನೀಡಲು ಅನುದಾನ ಕೋರಿ ತುಮಕೂರು ಅರಣ್ಯ ವಿಭಾಗದ ಡಿಸಿಎಫ್ ಪತ್ರ ಬರೆದಿದ್ಧಾರೆ.

………………………………

ತಾಲ್ಲೂಕುವಾರು ಪರಿಹಾರ ಬಾಕಿ ಮೊತ್ತ

(ಲಕ್ಷ ರೂಗಳಲ್ಲಿ)

ತುಮಕೂರು 1,50 ಲಕ್ಷ
ಗುಬ್ಬಿ 2 ಲಕ್ಷ
ಕುಣಿಗಲ್ 4 ಲಕ್ಷ
ತಿಪಟೂರು 1.50 ಲಕ್ಷ
ಚಿಕ್ಕನಾಯಕನಹಳ್ಳಿ 30 ಸಾವಿರ
ಮಧುಗಿರಿ 3.50 ಲಕ್ಷ
ಶಿರಾ 1 ಲಕ್ಷ
ಕೊರಟಗೆರೆ 5 ಲಕ್ಷ
ಪಾವಗಡ 2,80 ಲಕ್ಷ‌
……………………………..


ಕಳೆದ ಆಗಸ್ಟ್ ನಲ್ಲಿ ನಮ್ಮ ಜಮೀನಿನಲ್ಲಿದ್ದ ಶೇಂಗಾ ಬೆಳೆಯನ್ನ ಕಾಡು ಹಂದಿಗಳು ತಿಂದುಹಾಕಿದ್ದವು. ಇಲಾಖೆಯ ಅಧಿಕಾರಿಗಳಿಂ ವರದಿ ಮಾಡಿಸಲಾಗಿದೆ. ಪರಿಹಾರ ಮಾತ್ರ ಇನ್ನೂ ಬಂದಿಲ್ಲ.

ದಯಾನಂದ
ರೈತ, ಗುಬ್ಬಿ ತಾಲ್ಲೂಕು
………………………………..

ನಾವು ಬೆಳೆದಿದ್ದ ಟೊಮೋಟೋ ಬೆಳೆಯನ್ನ ಕಾಡುಹಂದಿಗಳು ಹಾಳು ಮಾಡಿದ್ದವು.ಆ ಸಮಯದಲ್ಲಿ ಟೊಮೋಟೋ ಬೆಲೆ ಹೆಚ್ಚಾಗಿತ್ತು.ಆದರೆ, ಕಾಡು ಹಂದಿಗಳ ನಾಶದಿಂದ ಹಣ್ಣುಗಳು ಮಾರಾಟಕ್ಕೆ ಸಿಗಲಿಲ್ಲ. ಇತ್ತ ಪರಿಹಾರವು ಸಿಗುತ್ತಿಲ್ಲ.

ಜಯರಂಗಪ್ಪ
ಹೂವಿನಕಟ್ಟೆ
………………………..

ಪರಿಹಾರ ಹಣ ಬಾಕಿಯನ್ನ ಪಾವತಿಸಲು ಅನುದಾನ ಕೋರಿ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.ಅನುದಾ‌ನ ಬಿಡುಗಡೆಯಾದ ಕೂಡಲೇ ಸಂತ್ರಸ್ಥರುಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು

ಅನುಪಮಾ
ಡಿಸಿಎಫ್
………………………..