Tuesday, May 5, 2026
Google search engine
Home Blog Page 108

ಕೆನಡ ಸಂಸತ್ತಿನಲ್ಲಿ ಕನ್ನಡ ಕಲರವ

ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಚಂದ್ರ ಆರ್ಯ
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಅವರು ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎನ್ನುವ ಕುವೆಂಪುರವರ ಮಾತನ್ನು ಇಂದು ಸತ್ಯ ಗೊಳಿಸಿದ್ದಾರೆ. ಸತ್ಯಸಪ್ತಸಾಗರದ ಆಚೆ ಇರುವ ಕೆನಡಾದಲ್ಲಿ ಕನ್ನಡದ ಹಿರಿಮೆ ಕನ್ನಡದ ಬಾವುಟವನ್ನು ಹಾರಿಸಿದ್ದಾರೆ.

ಮೂಲತಃ ಕನ್ನಡಿಗರಾದ ಚಂದ್ರ ಆರ್ಯ ಕೆನಡಾದಲ್ಲಿಯೇ ವಾಸವಾಗಿದ್ದು ಅಲ್ಲಿನ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಸಂದರ್ಭದಲ್ಲಿ ಕನ್ನಡ ವರನಟ ರಾಜ್ ಕುಮಾರ್ ಮತ್ತು ಕನ್ನಡದ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿದ್ದಾರೆ.

ಕೆನಡಾದಲ್ಲಿ ವಾಸಮಾಡುತ್ತಿರುವ ಕನ್ನಡಿಗರು 2018 ನವಂಬರ್ 1ನೆ ತಾರೀಕಿನಂದು ಕೆನಡಾದ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಗಮನ ಸೆಳೆದಿದ್ದರು.
ಈಗ ಅದೇ ಸಂಸತ್ತಿಗೆ ಆಯ್ಕೆಯಾಗಿರುವ ಚಂದ್ರ ಆರ್ಯ ಅವರ ಮಾತೃಭಾಷೆಯಾದ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವಿಡಿಯೋ ಗಾಗಿ ಇಲ್ಲಿ ಕ್ಲಿಕ್ಕಿಸಿ https://youtube.com/shorts/a1_ATDdUbj0?feature=share

SSLC: ತುಮಕೂರಿನ ಹುಡುಗಿ ರಾಜ್ಯಕ್ಕೆ ಟಾಪರ್

Publicstory


ಈ ಸಲದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತುಮಕೂರಿನ ಹುಳಿಯಾರು ಹೋಬಳಿ ಯಳನಡು ಗ್ರಾಮದ ಹುಡುಗಿ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ.
ಗ್ರಾಮದ ಸರ್ಕಾರಿ ಶಾಲೆಯ ಭೂಮಿಕಾ 625/625 ಅಂಕ ಗಳಿಸಿದ್ದಾಳೆ.
ಬನ್ನಿಕೆರೆಯ ಶಿಕ್ಷಕ ರವೀಂದ್ರ ಅವರ ಮಗಳು.

ತುಮಕೂರು ಪಾಲಿಕೆ ಕಾರ್ಮಿಕರಿಗೆ ರೈನ್ ಕೋಟ್ ಬೇಡವೇ?

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಮತ್ತು ಆರೋಗ್ಯ ನಿರೀಕ್ಷಕರಿಗೆ ಮಳೆಗಾಲದಲ್ಲಿ ಕೆಲಸ ನಿರ್ವಹಿಸಲು ಒಂದು ಮಳೆಗಾಲ ರಕ್ಷಣೆ ಕವಚ ಅಂದರೆ ರೈನ್ ಕೋಟು ಮತ್ತು ಇನ್ನಿತರ ಸಲಕರಣೆಗಳನ್ನು ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಇಮ್ರಾನ್ ಪಾಷಾ ಒತ್ತಾಯಿಸಿದ್ದಾರೆ.

ಪೌರ ಕಾರ್ಮಿಕರಿಗೆ ಒಂದು ವಾಹನವನ್ನು ಸಹ ನೀಡಬೇಕು. ಮಳೆಗಾಲದಲ್ಲಿ ಪ್ರತಿ ಬೀದಿಯಲ್ಲೂ ಮತ್ತು ಮುಖ್ಯರಸ್ತೆಗಳಲ್ಲಿ ಸಹ ಇವರೇ ಜಾಸ್ತಿ ಕೆಲಸ ನಿರ್ವಹಿಸುತ್ತಿರುವ ಕಾರಣ ಇವರಿಗೆ ಒಂದು ವಾಹನವನ್ನು ಸಹ ಒದಗಿಸಿಕೊಡಬೇಕು. ಕೆಲವು ಅಧಿಕಾರಿಗಳಿಗೆ ಮನೆಗೆ ಹೋಗಿ ಬರಲು ಕಾರನ್ನು ನೀಡುತ್ತಿದ್ದೀರಾ ಇವರಿಂದ ಏನೂ ಪ್ರಯೋಜನ ಇಲ್ಲ ಎಂದಿದ್ದಾರೆ.

ಮಳೆಗಾಲ ಮುಗಿಯುವ ತನಕ ಆರೋಗ್ಯ ನಿರೀಕ್ಷಕರಿಗೆ ಮತ್ತು ಮಳೆಗಾಲದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ ವರ್ಗಗಳಿಗೆ ವಾಹನಗಳನ್ನು ಒದಗಿಸಿಕೊಡಬೇಕು ಮತ್ತು ರಕ್ಷಣಾ ಕವಚಗಳನ್ನು ಇವರಿಗೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

“ರೂಮಿ ” ಕಂಡ ಮಳೆ

0

” ರೂಮಿ” ಸದಾ ಕಾಡುತ್ತಾನೆ.
ಬರೇ ಪ್ರೇಮಿಗಳಿಗಲ್ಲ.
ತನ್ನ ವಿಶಿಷ್ಟ ಕವಿತೆಗಳಿಂದ.
ಮಳೆ ಬಗ್ಗೆ “ರೂಮಿ” ಏನು ಹೇಳಿರಬಹುದೆಂದು
ಹುಡುಕಿದರೆ …. ಯಾರಿಗೂ ಕಾಣದ ಮಳೆ
“ರೂಮಿ”ಗೆ ಕಾಣಿಸಿದೆ. ಆ ಶಕ್ತಿಯ ಇರುವನ್ನು
ಮಳೆ ಮೂಲಕ ಅರಿಯಬಹುದು.


ದಟ್ಟವಾದ ಮೋಡಗಳೆ
ಹೆಚ್ಚಿನ ಮಳೆ ಸುರಿಸುತ್ತವೆ.
ದೇವರು ಹಾಗೆಯೇ …..
ದುಃಖದ ನಂತರ
ಹೂಮಳೆ .

ಮಳೆ- ಮಳೆಯೇ ಆಗಿರಬೇಕು
ಎಂದು ಏನೂ ಇಲ್ಲ…
ಆಗಸದಲ್ಲಿ ಕಿನ್ನರಿಯರು
ಅಳುತ್ತಿರಬಹುದು.

ಪದಗಳು ಮಾತಾಡಬೇಕು…
ಏರಿದ ಧ್ವನಿಯಲ್ಲ.
ಗುಡುಗಿನಿಂದ ಹೂವು ಅರಳುವುದಿಲ್ಲ…
ಮಳೆ
ಸುರಿಯಬೇಕು.

ಸ್ನೇಹಿತರು ಹೇಗಿರಬೇಕು
ಎಂದರೆ…
ಬಿದ್ದ ಮಳೆಗೆ
ಒಂದು ಹೂವು ಇನ್ನೊಂದನ್ನು
ಅರಳಿಸಿದ ಹಾಗೆ.

ಮಳೆ ಬಾರದಿದ್ದರೆ
ಸುಡುವ ಸೂರ್ಯ
ಬಳ್ಳಿ ಚಿಗುರನ್ನು
ಸುಟ್ಟಾಕುತ್ತಿದ್ದ.

ಮಳೆಯಲ್ಲಿ ನೆನೆದು
ಒಂದು ಲೋಟ ಕಾಫಿ ಹಿಡಿದು
ಸಣ್ಣಗೆ ಹಾಡುವವರೂ …
ಈ ವಿಶ್ವಕ್ಕೆ
ತಮ್ಮದೆ ಕೊಡುಗೆ
ನೀಡುತ್ತಿದ್ದಾರೆ.

“ಜ್ಞಾನ “… ಹೇಗೆಂದರೆ ‘ಧೋ’ ಎಂದು
ಸುರಿಯುವ
ಮಳೆಗೆ ನೀನು ಇಟ್ಪ
ಪಾತ್ರೆಯ ಹಾಗೆ..
ಅಷ್ಟೇ ತುಂಬುತ್ತದೆ.

ನೆನೆಯ ಬೇಕು,
ನೀಲಿ ಆಕಾಶ
ನೆನೆದ ಹಾಗೆ
ಮತ್ತೆ ಹಗುರಾಗಿ….

ತೊಟ್ಟು ಮಳೆ
ಹೀರಿ,ಹಿಂಗಿ
ಬಸಿರಾಗಿ… ಭೂಮಿ
ಘಮಘಮ..

ನಿನ್ನ ಅರಿವಿನ ಹಸಿವು ಹೇಗಿರಬೇಕೆಂದರೆ….
ಮಳೆಗೆ ಬಾಯ್ತೆರೆದ
ಚಿಪ್ಪಿನ ಹಾಗೆ….
ಆರ್ಕಿಡ್ ಹೂ ಮಳೆಗೆ ಅರಳಿದ ….ಹಾಗೆ.
ನೀರಿನ ಸದ್ದು
ದಾಹ ಆದವನಿಗೆ ಕೇಳಿಸಿದ ….ಹಾಗೆ.

ದಟ್ಟ ಇರುಳು
ನಡು ರಾತ್ರಿ
ಸುರಿಯುವ ಮಳೆ
ನಿನ್ನ
ಇರುವನ್ನು
ಇನ್ನಷ್ಟು
ಖಾತ್ರಿ
ಗೊಳಿಸುತ್ತಿದೆ.

ಡಾII ರಜನಿ
(“ರೂಮಿ ” ಮಳೆ ಬಗ್ಗೆ ಹೇಳಿರುವದರ
ಭಾವಾನುವಾದ).

ರೂಮಿ ಕಂಡ‌ ಮಳೆ

0
” ರೂಮಿ” ಸದಾ ಕಾಡುತ್ತಾನೆ.
ಬರೇ ಪ್ರೇಮಿಗಳಿಗಲ್ಲ. ತನ್ನ ವಿಶಿಷ್ಟ ಕವಿತೆಗಳಿಂದ.
ಮಳೆ ಬಗ್ಗೆ “ರೂಮಿ” ಏನು ಹೇಳಿರಬಹುದೆಂದು ಹುಡುಕಿದರೆ …. ಯಾರಿಗೂ ಕಾಣದ ಮಳೆ
“ರೂಮಿ”ಗೆ ಕಾಣಿಸಿದೆ. ಆ ಶಕ್ತಿಯ ಇರುವನ್ನು
ಮಳೆ ಮೂಲಕ ಅರಿಯಬಹುದು.

ದಟ್ಟವಾದ ಮೋಡಗಳೆ
ಹೆಚ್ಚಿನ ಮಳೆ ಸುರಿಸುತ್ತವೆ.
ದೇವರು ಹಾಗೆಯೇ …..
ದುಃಖದ ನಂತರ
ಹೂಮಳೆ .

ಮಳೆ- ಮಳೆಯೇ ಆಗಿರಬೇಕು
ಎಂದು ಏನೂ ಇಲ್ಲ…
ಆಗಸದಲ್ಲಿ ಕಿನ್ನರಿಯರು
ಅಳುತ್ತಿರಬಹುದು.

ಪದಗಳು ಮಾತಾಡಬೇಕು…
ಏರಿದ ಧ್ವನಿಯಲ್ಲ.
ಗುಡುಗಿನಿಂದ ಹೂವು ಅರಳುವುದಿಲ್ಲ…
ಮಳೆ
ಸುರಿಯಬೇಕು.

ಸ್ನೇಹಿತರು ಹೇಗಿರಬೇಕು
ಎಂದರೆ…
ಬಿದ್ದ ಮಳೆಗೆ
ಒಂದು ಹೂವು ಇನ್ನೊಂದನ್ನು
ಅರಳಿಸಿದ ಹಾಗೆ.

ಮಳೆ ಬಾರದಿದ್ದರೆ
ಸುಡುವ ಸೂರ್ಯ
ಬಳ್ಳಿ ಚಿಗುರನ್ನು
ಸುಟ್ಟಾಕುತ್ತಿದ್ದ.

ಮಳೆಯಲ್ಲಿ ನೆನೆದು
ಒಂದು ಲೋಟ ಕಾಫಿ ಹಿಡಿದು
ಸಣ್ಣಗೆ ಹಾಡುವವರೂ …
ಈ ವಿಶ್ವಕ್ಕೆ
ತಮ್ಮದೆ ಕೊಡುಗೆ
ನೀಡುತ್ತಿದ್ದಾರೆ.

“ಜ್ಞಾನ “… ಹೇಗೆಂದರೆ ‘ಧೋ’ ಎಂದು
ಸುರಿಯುವ
ಮಳೆಗೆ ನೀನು ಇಟ್ಪ
ಪಾತ್ರೆಯ ಹಾಗೆ..
ಅಷ್ಟೇ ತುಂಬುತ್ತದೆ.

ನೆನೆಯ ಬೇಕು,
ನೀಲಿ ಆಕಾಶ
ನೆನೆದ ಹಾಗೆ
ಮತ್ತೆ ಹಗುರಾಗಿ….

ತೊಟ್ಟು ಮಳೆ
ಹೀರಿ,ಹಿಂಗಿ
ಬಸಿರಾಗಿ… ಭೂಮಿ
ಘಮಘಮ..

ನಿನ್ನ ಅರಿವಿನ ಹಸಿವು ಹೇಗಿರಬೇಕೆಂದರೆ….
ಮಳೆಗೆ ಬಾಯ್ತೆರೆದ
ಚಿಪ್ಪಿನ ಹಾಗೆ….
ಆರ್ಕಿಡ್ ಹೂ ಮಳೆಗೆ ಅರಳಿದ ….ಹಾಗೆ.
ನೀರಿನ ಸದ್ದು
ದಾಹ ಆದವನಿಗೆ ಕೇಳಿಸಿದ ….ಹಾಗೆ.

ದಟ್ಟ ಇರುಳು
ನಡು ರಾತ್ರಿ
ಸುರಿಯುವ ಮಳೆ
ನಿನ್ನ
ಇರುವನ್ನು
ಇನ್ನಷ್ಟು
ಖಾತ್ರಿ
ಗೊಳಿಸುತ್ತಿದೆ.

ಡಾII ರಜನಿ
(“ರೂಮಿ ” ಮಳೆ ಬಗ್ಗೆ ಹೇಳಿರುವದರ
ಭಾವಾನುವಾದ).

ಗಾಂಧಿ ಕಥನದ ‘ಹೊಸ ಮನುಷ್ಯ’ಇನ್ನಿಲ್ಲ…

0

ಲೇಖಕ, ಸಾಹಿತಿ, ಹೋರಾಟಗಾರ ಸಮಾಜವಾದದ ಕನಸುಗಾರ ಡಿ.ಎಸ್.ನಾಗಭೂಷಣ್ ಅವರು ಬುಧವಾರ ರಾತ್ರಿ ನಿಧನರಾದರು. ಅವರ ಕುರಿತು ಮೈತ್ರಿ ನ್ಯೂಸ್ ಸಂಪಾದಕರಾದ ಹೆಚ್.ವಿ.ವೆಂಕಟಾಚಲಯ್ಯ ಅವರ ನುಡಿನಮನದ ಲೇಖನ.


ದೆಹಲಿ ಆಕಾಶವಾಣಿಯಲ್ಲಿ ಆಗಾಗ ವಾರ್ತೆ ಗಳನ್ನು ಓದುತ್ತಿರುವವರು ಡಿ.ಎಸ್.ನಾಗಭೂಷಣ ಎಂಬ ಧ್ವನಿ ಕೇಳಿದ್ದೆ, 90 ರ ದಶಕದಲ್ಲಿ ಸಮಾಜವಾದಿ ಅಡಿ ಸಮತಾ ಸಂಘಟನೆ ಕಟ್ಡಿದಾಗ ಇವರನ್ನು ಕಾಣುವ ಅವಕಾಶ ಸಿಕ್ಕಿ ಗೆಳೆತನವಾಯಿತು.

ಇವರು ನಿವೃತ್ತಿ ನಂತರ ಹೊಸ ಮನುಷ್ಯ ಪತ್ರಿಕೆ ಹೊರ ತರುತ್ತಿದ್ದರು, ಅದರಲ್ಲಿ ಗಾಂಧಿ, ಅಂಬೇಡ್ಕರ್ ಅವರ ವಿಚಾರಗಳು ಹೆಚ್ಚು ಇದ್ದು ಸಮಾಜ ಗಾಂಧಿ ಹಾದಿಯಲ್ಲಿ ನಡೆಯಬೇಕೆಂದು ಬಯಸಿದವರು.

ಈ ಹಿನ್ನಲೆಯಲ್ಲಿಯೆ ಅವರು ಇತ್ತೀಚೆಗೆ ಗಾಂಧಿ ಕಥನ ಪುಸ್ತಕ ವನ್ನು ಸರಳವಾಗಿ, ವಿಸ್ತಾರವಾಗಿ ತಂದಿದ್ದರು, ಇತ್ತೀಚೆಗೆ ಅವರು ಸಮಾಜವಾದಿ ಗಳು, ಪ್ರಗತಿವಾದಿಗಳಿಗೆ ಚುರುಕು ಮುಟ್ಡುವಂತೆ ಜಾಡಿಸುತ್ತಿದ್ದರು,

ನೀವೆಲ್ಲ ಬಂಡವಾಳದ ಹಿಂದೆ ಬಿದ್ದು ಸಮಾಜವಾದ ಮರೆತ್ತಿದ್ದೀರಿ, ನಿಮ್ಮಿಂದ ಏನು ಸಾಧ್ಯವಿಲ್ಲ ಎಂದು ಕಟೋರತೆಯಿಂದ ಹೇಳಿದ್ದರು. ಒಂದೆರಡು ವರ್ಷಗಳ ಹಿಂದೆ ತಮ್ಮ‌ ಹುಟ್ಟೂರಾದ ಡಾಬಸ್ ಪೇಟೆಗೆ ಭೇಟಿ ನೀಡಿ ಅವರ ಬಾಲ್ಯವನ್ನು ಮೆಲುಕು ಹಾಕಿದ್ದರು.

ಅವರು ಗಾಂಧಿಯನ್ನು ಆಳವಾಗಿ ಅಧ್ಯಯನ ಮಾಡಿದ್ದರು, ಸಮಾಜವಾದಿಗಳಿಗೆ ಎಚ್ಚರಿಸುತ್ತಿದ್ದ ಡಿ.ಎಸ್.ನಾಗಭೂಸಣ್ ಇನ್ನಿಲ್ಲ ಎಂಬುದು ನಮ್ಮಂತವರಿಗೆ ಬಹು ದೊಡ್ಡ ನಷ್ಟ.

ಅವರಿಗೆ ಸಂತಾಪ ಸೂಚಿಸಲು ಸಾಧ್ಯವಾಗುತ್ತಿಲ್ಲ, ಯಾಕೆಂದರೆ ತೇಜಸ್ವಿ ನಂತರ ಕೆಲ ವಿಚಾರಗಳನ್ನು ಯಾವುದೇ ಮುಲಾಜಿಲ್ಲದೆ ಹೇಳುತ್ತಿದ್ದರು. ನಮ್ಮ ನಡುವೆ ಸದಾ ಎಚ್ಚರಿಕೆ, ಸರಿ ತಪ್ಪುಗಳನ್ನು ಕಠೋರವಾಗಿ ಹೇಳುತ್ತಿದ್ದ ಕಠೋರವಾದಿ ಡಿ.ಎಸ್.ನಾಗಭೂಷಣ ರವರ ಆತ್ಮಕ್ಕೆ ಶಾಂತಿ ಸಿಗಲಿ.

ಜಮದಗ್ನಿಯ ಅಗ್ಗಿಷ್ಠಿಕೆ ನಂದಿತು…

0

ಡಾ.ವಡ್ಡಗೆರೆ ನಾಗರಾಜಯ್ಯ


ಪ್ರಿಯ ಡಿ.ಎಸ್.ನಾಗಭೂಷಣ ಸರ್…,
ನೀವಿಂದು ಬಿಟ್ಟು ಹೋದಿರಿ ಕಾಯ..‌.
ಉಸಿರುಗೋಳವ ತಬ್ಬಿಕೊಂಡು,
ಬುದ್ಧ -ಗಾಂಧಿ ಲೋಹಿಯಾ ದಾರಿಯ ನಡೆಕಾರನಾಗಿ…

ಅವೊತ್ತು ಅಮಾನಿಕೆರೆ ಏರಿಯ ಮೇಲೆ
ಬಕಾಲಮುನಿಯು ಗಡ್ಡ ನೀವಿಕೊಂಡು ನಿರಭ್ರ ಆಕಾಶವೇ ಮಲ್ಲಿಗೆ ಸುರಿದಂತೆ ನಗುತ್ತಿದ್ದಾಗ,
ಕನ್ನಡಕ ಕಣ್ಣುಗಳ ಭಾಷ್ಪ ತೆಗೆದೊರೆಸಿ ಕವಿ ವೀಚಿಯೂ ನಗುತ್ತಿದ್ದಾಗ ನೀವು ಒಡನೆ ಇದ್ದಿರಿ ವೀಚಿಯ
ಸೈಕಲ್ ಹ್ಯಾಂಡಲ್ ಬಾರ್
ಹಿಡಿದುಕೊಂಡು ಮೌನವಾಗಿ…

ಬೆಳಗ್ಗೆ ರೈಲು ನಿಲ್ದಾಣದ ಬಳಿ ಪಲ್ಲವಿಯ ಮದುವೆಯಲಿ
ಕವಿ ಸಾಹಿತಿ ಹೋರಾಟಗಾರರದ್ದೇ ದಿಬ್ಬಣ ಸಂಭ್ರಮದ ನಡುವೆ
ಕುಳಿತಿದ್ದರು ನಿಮ್ಮ
ಮನೆದನ್ನೆ ಸವಿತಾ…
ಅತ್ತಲಿತ್ತ ಕೊನೆಯಂಚು ವಡ್ಡಗೆರೆ ಎಂಬ ನಾನು ಹಾಗೂ ಕವಯತ್ರಿ ಮಲ್ಲಿಕಾ ಬಸವರಾಜು…
ಜನರೆದುರುಗೋಳ ದೇವನೂರು, ಕಾರಮರಡಿಯ ಗುರು ಶಂಕರಪ್ಪ,
ಬೂದಾಳು, ನರಸೀಯಪ್ಪ, ದೊರೆರಾಜು, ಕುಂದೂರು ನಮ್ಮ ಕಲ್ಪತರು ಕರಿಗಿರಿ ತೆಂಗುಕಂಗು ಹಿಂಗಾರ ಜಾಲಗಿರಿ ಜಗಿ ಹಿಡಿದಂತೆ ನೀವು ಬುದ್ಧ ಗಾಂಧಿಯರ ಕಂಡ ಚಿಂತನೆಯ ನೆರಳಿತ್ತು, ಬೆವರ ಗಂಧ ಗಮಲಿತ್ತು…

ನಿಮ್ಮನ್ನು ಬಿಗಿದು ಕಟ್ಟಲು ಕೊಟ್ಟಿಗೆ ಹಗ್ಗ ಗೊಂತುಗೂಟ ರಂಜಣಿಗೆ ನಿಮಗೆದುರಿರಲಿಲ್ಲ
ಈ ನಾಡಿನಲ್ಲಿ

ನಿನಗೆ ನೀನೇ ದಾರಿ ನಿನಗೆ ನೀನೇ ದಿಕ್ಕೆಂದು ಹೇಳುತ್ತಲೇ
ಮದ್ದಾನೆಯು ಸರಪಳಿ ಹರಿದು
ಧೀಂಕಿಟ್ಟು ನುಗ್ಗಿ ಓಡಿದ ಹಾಗೆ ನೀವು
ಚಳವಳಿಗಳ ನಡುವೆ ಕುಂತ ಜಾಗದಿಂದಲೇ ನುಡಿವಕ್ಕರಗಳ ಮೂಲಕವೇ ನುಗ್ಗಿ
ಜಮದಗ್ನಿಯಾಗಿ ಸಿಡಿಯುತ್ತಿದ್ದಿರಿ..‌

ಅವೊತ್ತು ಪಂಚ ಗಣಾಧೀಶ ಹಟ್ಟಿತಿಪ್ಪಯ್ಯನ
ಬುಡಕಟ್ಟಿನ
ಕಾವ್ಯ ನಾಗಭೂಷಣರ ಕೂಡುಕಟ್ಟಿನಲ್ಲಿ ನೀವು ಸವಿತಾ ಅವರೊಂದಿಗಿದ್ದಿರಿ
ಚಿತ್ರದುರ್ಗದ
ಕೋಟೆ ನಾಡಿನಲ್ಲಿ
ನಿಮ್ಮನ್ನು ನೋಡಿದ್ದೇ ಕಡೇಲಾಸ್ಟು ಗಾಂಧಿ ಬುಕ್ಕಿನಲ್ಲಿ

ಇಂಥ ನೀವೀಗ ಹೋಗಿದ್ದೀರಿ ನಟ್ಟಿರುಳು ಮನೆಯಿಂದ ಸಿದ್ಧಾರ್ಥ ಎದ್ದು ನಡೆದಂತೆ ತಣ್ಣಗೆ…
ನೀವು ನಡೆದ ಸಂತೆ ದಾರಿಯ ಪಯಣಿಗರು ನಾವೆಲ್ಲಾ
ಸಂತೆ ವ್ಯಾಪಾರಕ್ಕೆ
ಜಾಡಿ ನೇಯುವ
ಕಾಯಕ ಜೀವಿಗಳು


ಲೇಖಕರು; *ಡಾ.ವಡ್ಡಗೆರೆ ನಾಗರಾಜಯ್ಯ*
*8722724174*

ತುಮಕೂರಿನ ಜನರೊಂದಿಗೆ ಸಿದ್ದರಾಮಯ್ಯ ಸಂವಾದ ಮೇ 22 ರಂದು

0

Publicstory


ತುಮಕೂರು: ನಗರದ ಬಾಲಭವನದಲ್ಲಿ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ ಗ್ರಂಥಾವಲೋಕನ ಸಂಕಿರಣ ಕಾರ್ಯಕ್ರಮವನ್ನು ಮೇ.22ರ (ಭಾನುವಾರ) ಬೆಳಿಗ್ಗೆ ೧೦ ಗಂಟೆಗೆ ಜನಮನ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಪ್ರಸ್ತಕ ಸಾಮಾಜಿಕ, ರಾಜಕೀಯ ಸಂದರ್ಭ ಮತ್ತು ಯುವ ಸಂವೇದನೆ ಕುರಿತ ಸಂವಾದ ನಡೆಯಲಿದ್ದು, ಸಮಾಜ ಮತ್ತು ಸಂಸ್ಕೃತಿ ಚಿಂತಕ ವೈ.ಎಸ್.ವಿ ದತ್ತಾ ಸಂವಾದ ನಡೆಸಿಕೊಡಲಿದ್ದಾರೆ.

ಸಂವಿಧಾನ ತತ್ವ ಮತ್ತು ಸಿದ್ದರಾಮಯ್ಯನವರ ಕಾರ್ಯಕ್ರಮಗಳು ಎಂಬ ವಿಷಯದ ಮೇಲೆ ಸಮಾಜ ಚಿಂತಕ ಡಾ.ಮೋಹನ ಚಂದ್ರಗುತ್ತಿ ಮಾತನಾಡಲಿದ್ದು, ಡಾ.ನಟರಾಜ ಬೂದಾಳು ಧರ್ಮ ಮತ್ತು ರಾಜಕಾರಣ: ಸಿದ್ದರಾಮಯ್ಯರ ಸೈದ್ಧಾಂತಿಕ ನಿಲುವು ಹಾಗೂ ವಿಶ್ರಾಂತ ಕುಲಪತಿ ಪ್ರೊ.ಎಸ್.ಜಾಫೆಟ್ ಅವರು ದುರ್ಬಲ ವರ್ಗಗಳ ಕುರಿತು ಸಿದ್ದರಾಮಯ್ಯರ ಸಾಮಾಜಿಕ ಮತ್ತು ಆರ್ಥಿಕ ಚಿಂತನೆಗಳು ಎಂಬ ವಿಷಯವನ್ನು ಮಂಡಿಸಲಿದ್ದಾರೆ.

ಇದನ್ನು ಓದಿ: https://publicstory.in/nagalamadike-markonahalli-dam-overflow/

ಗ್ರಂಥಾವಲೋಕನ ಸಂಕಿರಣದಲ್ಲಿ ಗ್ರಂಥ ಸಂಪಾದಕ ಕಾ ತ ಚಿಕ್ಕಣ್ಣ, ಜನಮನ ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ, ಅರುಣೋದಯ ಸಹಕಾರ ಸಂಘದ ಸದಸ್ಯ ಡಾ.ಎಲ್.ಮುಕುಂದ ಸೇರಿದಂತೆ ಹಲವರು ಹಾಜರಿ ಇರಲಿದ್ದಾರೆ.

ವಿಶ್ವವಿದ್ಯಾಲಯ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳ ಸದಸ್ಯರು, ಜನ ಸಾಮಾನ್ಯರಿಗೆ ಸಂವಾದಲ್ಲಿ ಸಿದ್ದರಾಮಯ್ಯ ಅವರಿಗೆ ನೇರ ಪ್ರಶ್ನೆ ಕೇಳಲು ಮುಕ್ತ ಅವಕಾಶ ಮಾಡಿಕೊಡಲಾಗಿದೆ.

ಮಳೆ: ತುಂಬಿ ಹರಿದ ಮಾರ್ಕೋನಹಳ್ಳಿ, ನಾಗಲಮಡಿಕೆ ಜಲಾಶಯ

Publicstory


ಕುಣಿಗಲ್ : ಸತತ 2ದಿನಗಳಿಂದ ಸುರಿಯುತ್ತಿರುವ ಮಳೆಗೆ ಕುಣಿಗಲ್ ಮಾಕೋನಹಳ್ಳಿ ಜಲಾಶಯ ತುಂಬಿ ಹರಿಯುತ್ತಿದೆ.

ಮಳೆಗಾಲದ ಆರಂಭದ ಜಲಾಶಯ ತುಂಬಿರುವುದು ಜನರಿಗೆ ಸಂತಸ ತಂದಿದೆ.
ಜಲಾಶಯ ತುಂಬಿರುವುದರಿಂದ ಜಲಾಶಯದ ಕೆಳಭಾಗದ ಜನರು ಎಚ್ಚರಿಕೆ ನೀಡಬೇಕು ಜನ ಜಾನುವಾರುಗಳನ್ನು ಕಣಿವೆ ಪ್ರದೇಶಕ್ಕೆ ಬಿಡಬಾರದು ಎಂದು ಕಾವೇರಿ ನೀರಾವರಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿಂಷಾ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಿಸಿದ್ದರು.

ನಾಗಲಮಡಿಕೆ ಅಣೆಕಟ್ಟು ಭರ್ತಿ.

https://youtu.be/EF58IcESYbE


ಪಾವಗಡ ತಾಲೂಕಿನ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ನಾಗಲಮಡಿಕೆ ಅಣೆಕಟ್ಟು ಸಹ ಭರ್ತಿಯಾಗಿದೆ.

ಬಿಸಿಲ ನಾಡು ಖ್ಯಾತಿಯ ಪಾವಗಡಕ್ಕೆ ಈ ಸಲ ಆರಂಭದಲ್ಲಿ ಮಳೆರಾಯ ಕೊಡುಗೆ ನೀಡಿದ್ದಾನೆ.

ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕುಗಳಲ್ಲೂ ಮಳೆ ಸುರಿದಿದೆ. ಅಲ್ಲಲ್ಲಿ ಮನೆಗಳು, ಮರಗಳು ಬಿದ್ದಿವೆ.

ತುಮಕೂರು ನಗರದಲ್ಲಿ ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತ್ತವಾಗಿವೆ.

ಜಿಲ್ಲೆಯ ಸಾಕಷ್ಟು ಕಡೆಗಳಲ್ಲಿ ಸಣ್ಣ ಪುಟ್ಟ ಹಳ್ಳಗಳು ಭರ್ತಿಯಾಗಿವೆ.