Thursday, March 12, 2026
Google search engine
Home Blog Page 40

ಸುರೇಶ್ ಗೌಡರಿಗೆ ಭರ್ಜರಿ ಮುನ್ನಡೆ

0

ಎಂಟನೇ ಸುತ್ತಿನ ಮತ ಎಣಿಕೆ ಮುಗಿದಿದ್ದು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರು ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ತುಮಕೂರು ಗ್ರಾಮಾಂತರ 8 ನೇ ಸುತ್ತು

ಬಿಜೆಪಿ 34735
ಜೆಡಿಎಸ್ 22227

12,508 ಮತಗಳ ಬಿಜೆಪಿ ಮುನ್ನಡೆ

ತುಮಕೂರು ನಗರದಲ್ಲಿ ಮುನ್ನೆಡೆಗೆ ಬಂದ ಕಾಂಗ್ರೆಸ್

ಕಾಂಗ್ರೆಸ್ 20979
ಬಿಜೆಪಿ 18981
ಜೆಡಿಎಸ್ 20759

220 ಮತಗಳಿಂದ ಕಾಂಗ್ರೆಸ್ ಮುನ್ನಡೆ

ಸುರೇಶಗೌಡ ಮುನ್ನಡೆ

0

ತುಮಕೂರು ಗ್ರಾಮಾಂತರ

BJP ಸುರೇಶ್ ಗೌಡ 23735 ಮುನ್ನಡೆ

JDS 17612

Cong 1142

ಸಿರಾ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್ – 17404
ಜೆಡಿಎಸ್- 12775
ಬಿಜೆಪಿ- 6952

ಮುನ್ನಡೆ: 4629 ಟಿ.ಬಿ.ಜಯಚಂದ್ರ ಮುನ್ನಡೆ

ಕುಣಿಗಲ್
Cong 16229 ರಂಗನಾಥ್ ಮುನ್ನಡೆ

Bjp 11560

JDS. 9170

Gubbi: ಜೆಡಿಎಸ್ ಗೆ ಮುನ್ನಡೆ

ಗುಬ್ಬಿಯಲ್ಲಿ ಮುನ್ನಡೆಗೆ ಬಂದ ಜೆಡಿಎಸ್

ಬಿಜೆಪಿ 4005
ಕಾಂಗ್ರೆಸ್ 7660
ಜೆಡಿಎಸ್ -8003

343 ಮತಗಳಿಂದ ಜೆಡಿಎಸ್ ನಾಗರಾಜು ಮುನ್ನಡೆ

ಗುಬ್ಬಿಯಲ್ಲಿ ಮುನ್ನಡೆಗೆ ಬಂದ ಜೆಡಿಎಸ್

ಬಿಜೆಪಿ 4005
ಕಾಂಗ್ರೆಸ್ 7660
ಜೆಡಿಎಸ್ -8003

343 ಮತಗಳಿಂದ ಜೆಡಿಎಸ್ ನಾಗರಾಜು ಮುನ್ನಡೆ

ನಗರ: 6ನೇ ಸುತ್ತಿನಲ್ಲೂ JDS ಮುನ್ನಡೆ

ತುಮಕೂರು ನಗರ 6 ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಜೆಡಿಎಸ್

ಬಿಜೆಪಿ 17077
ಜೆಡಿಎಸ್ 18936
ಕಾಂಗ್ರೆಸ್ 15094

ಜೆಡಿಎಸ್ ನ ಗೋವಿಂದರಾಜು 1854 ಮತಗಳಿಂದ ಮುನ್ನಡೆ

ತುಮಕೂರು: 3ನೇ ಸುತ್ತು; ಯಾರಿಗೆ ಎಷ್ಟು ಮತ?

0

ತುಮಕೂರು ಗ್ರಾಮಾಂತರ ಬಿಜೆಪಿ 5107 ಮುನ್ನಡೆ

ಬಿಜೆಪಿ -23722
ಜೆಡಿಎಸ್-18615

ಶಿರಾ 1862 ಮತಗಳಿಂದ ಕಾಂಗ್ರಸ್ ಮುನ್ನಡೆ

ಜೆಡಿಎಸ್ ಉಗ್ರೇಶ್ 2882
ಬಿಜೆಪಿ ರಾಜೇಶ್ ಗೌಡ 1943
ಕಾಂಗ್ರೆಸ್ ಟಿಬಿ ಜಯಚಂದ್ರ 4744

ತುಮಕೂರು ನಗರ ಜೆಡಿಎಸ್ ಮುನ್ನಡೆ

ಕಾಂಗ್ರೆಸ್ : 1685
ಜೆಡಿಎಸ್: 3612
ಬಿಜೆಪಿ: 3001

ತಿಪಟೂರು
ಕಾಂಗ್ರೆಸ್ 4114
ಬಿಜೆಪಿ2740
ಜೆಡಿಎಸ್1375
ಕಾಂಗ್ರೆಸ್ 1374 ಮುನ್ನಡೆ

ಚಿಕ್ಕನಾಯಕನಹಳ್ಳಿ ಮೂರನೇ ಸುತ್ತು ಮುಕ್ತಾಯ,ಬಿಜೆಪಿ ಮುನ್ನಡೆ

ಕಾಂಗ್ರೆಸ್ : 8310
ಜೆಡಿಎಸ್: 8258
ಬಿಜೆಪಿ: 10112

1802 ಮತಗಳಿಂದ ಮಾಧುಸ್ವಾಮಿ ಮುನ್ನಡೆ

ಕುಣಿಗಲ್
ಕಾಂಗ್ರೆಸ್11861
ಬಿಜೆಪಿ8210
ಜೆಡಿಎಸ್6932
ಕಾಂಗ್ರೆಸ್ ಮುನ್ನಡೆ3651

ಅಂಚೆ ಮತ: ಇವರಿಗೆಲ್ಲ ಮುನ್ನಡೆ

0

ತುಮಕೂರು ಬ್ರೇಕಿಂಗ್…

ಅಂಚೆ ಮತ ಎಣಿಕೆ ಆರಂಭ.

ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿಯ ಮಾಧುಸ್ವಾಮಿ ಮುನ್ನಡೆ.

ತಿಪಟೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ನಾಗೇಶ್ ಮುನ್ನಡೆ.

ತುರುವೇಕೆರೆ – ಬಿಜೆಪಿ ಅಭ್ಯರ್ಥಿ ಮಸಾಲಾ ಜಯರಾಂ ಮುನ್ನಡೆ.

ಕುಣಿಗಲ್ – ಕಾಂಗ್ರೆಸ್ ಅಭ್ಯರ್ಥಿ ಡಾ.ರಂಗನಾಥ್ ಮುನ್ನಡೆ.

ತುಮಕೂರು ನಗರ – ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಮುನ್ನಡೆ.

ತುಮಕೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಸುರೇಶ್ ಗೌಡ ಮುನ್ನಡೆ.

ಕೊರಟಗೆರೆ ಕಾಂಗ್ರೆಸ್ ನ ಪರಮೇಶ್ವರ್ ಮುನ್ನಡೆ.

ಗುಬ್ಬಿ ಬಿಜೆಪಿ ದಿಲೀಪ್ ಕುಮಾರ್ ಮುನ್ನಡೆ.

ಶಿರಾ ಕಾಂಗ್ರೆಸ್ ನ ಟಿ.ಬಿ. ಜಯಚಂದ್ರ ಮುನ್ನಡೆ.

ಪಾವಗಡ ಜೆಡಿಎಸ್ ನ ತಿಮ್ಮರಾಯಪ್ಪ ಮುನ್ನಡೆ.

ಮಧುಗಿರಿ ಕಾಂಗ್ರೆಸ್ ನ ಕೆ.ಎನ್.ರಾಜಣ್ಣ ಮುನ್ನಡೆ.

ಮತ ಎಣಿಕೆಗೆ ಕ್ಷಣಗಣನೆ: ರಾಜ್ಯ ಗಮನಿಸುತ್ತಿರುವ ತುಮಕೂರಿನ ಈ 3 ಕ್ಷೇತ್ರಗಳು…

0

ತುಮಕೂರು: ವಿಧಾನ ಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಹಾಗೂ ಅವರ ಕಾರ್ಯಕರ್ತರನ್ನು ತುದಿಗಾಲಲ್ಲಿ ನಿಲ್ಲಿಸಿದೆ.

ಬೆಳಿಗ್ಗೆ 8ಕ್ಕೆ ಸರಿಯಾಗಿ ಮತ ಎಣಿಕೆ ನಡೆಯಲಿದ್ದು, ಮೊದಲಿಗೆ ಅಂಚೆ ಮತ ಎಣಿಕೆ ನಡೆಯಲಿದೆ.

8.30ಕ್ಕೆ ಇವಿಎಂ ಮತ ಎಣಿಕೆ ನಡೆಯಲಿದೆ. ಬೆಳಿಗ್ಗೆ 11.30ರ ಒಳಗೆ ಫಲಿತಾಂಶ ಬರಲಿದೆ.

ತುಮಕೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ( B C NAGESH) ಸ್ಪರ್ಧಿಸಿರುವ ತಿಪಟೂರು ಕ್ಷೇತ್ರ ಕುತೂಹಲ ಮೂಡಿಸಿದೆ. ಪಠ್ಯ ಪರಿಷ್ಕರಣೆಯ ವಿಷಯದಲ್ಲಿ ವಿವಾದಕ್ಕೆ ಒಳಗಾಗಿದ್ದರು. ಅವರ ಗೆಲುವು ಸೋಲಿನ ಬಗ್ಗೆ ಇಡೀ ರಾಜ್ಯ, ಶೈಕ್ಷಣಿಕ ವಲಯ ಕುತೂಹಲದಿಂದ ಕಾದಿದೆ. ಇಲ್ಲಿ ಕಾಂಗ್ರೆಸ್ ನ ಷಡಕ್ಷರಿ ನೇರ ಸ್ಪರ್ಧಿ.

ತಮ್ಮ ಮಾತುಗಳಿಂದಲೇ ರೈತರು, ಸ್ವಾಮೀಜಿಗಳು, ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಸಚಿವ ಜೆ.ಸಿ.ಮಾಧುಸ್ವಾಮಿ (J C Madhuswamy)ಸಹ ಕುತೂಹಲದ ಕ್ಷೇತ್ರವಾಗಿದೆ. ಇಲ್ಲಿ ತ್ರಿಕೋನ ಸ್ಪರ್ಧೆ ಇದೆ.

ಮುಖ್ಯಮಂತ್ರಿ ಗಾದಿಗೆ ಹತ್ತಿರದಲ್ಲಿರುವ ಕೊರಟಗೆರೆ ಕ್ಷೇತ್ರದ ಡಾ.ಜಿ.ಪರಮೇಶ್ವರ್ (Dr G.Parmeshwer) ಅವರ ಫಲಿತಾಂಶವನ್ನು ಸಹ ಇಡೀ ರಾಜ್ಯ ಕುತೂಹಲದಿಂದ ಗಮನಿಸುತ್ತಿದೆ. ಇಲ್ಲಿ ಜೆಡಿಎಸ್ ನೇರ ಸ್ಪರ್ಧೆ ಒಡ್ಡಿದೆ.

ಕಳೆದ ಚುನಾವಣೆಯ ನೋಟ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸೀಟುಗಳನ್ನು ಗೆದ್ದಿತ್ತು. ಆರಂಭದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇತ್ತು. ನಂತರ ಆಪರೇಷನ್ ಕಮಲದ ಮೂಲಕ ಅಧಿಕಾರದ ಗದ್ದುಗೆಗೆ ಏರಿತ್ತು. ಕಾಂಗ್ರೆಸ್‌ 78 ಮತ್ತು ಜೆಡಿಎಸ್‌ 37 ಸೀಟುಗಳನ್ನು ಗೆದಿತ್ತು.

ಈ ಬಾರಿ 224 ಕ್ಷೇತ್ರಗಳಲ್ಲಿ 2,615 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮೊದಲು ಯಾವ ಮತ ಎಣಿಸುತ್ತಾರೆ ಗೊತ್ತಾ?

0

ತುಮಕೂರು: ಮತ ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಮೊದಲಿಗೆ ಅಂಚೆ ಮತ ಪತ್ರಗಳನ್ನು ಎಣಿಕೆ ಮಾಡಲಾಗುವುದು.

ಇಟಿಪಿಬಿಎಸ್ ಮತ ಎಣಿಕೆಗಾಗಿ ಕ್ಯೂಆರ್ ಕೋಡ್ ರೀಡರ್ ವ್ಯವಸ್ಥೆ ಮಾಡಲಾಗಿರುತ್ತದೆ. ಕಂಟ್ರೋಲ್ ಯೂನಿಟ್‍ಗಳ ಮತ ಎಣಿಕೆ ಮೇಜುಗಳ ಮೇಲೆ ಕ್ರಮವಾಗಿ 1 ರಿಂದ 14ರವರೆಗೆ ಸಂಖ್ಯೆಯನ್ನು ನಮೂದಿಸಲಾಗುವುದು. ಮತಗಟ್ಟೆ ಸಂಖ್ಯೆಯ ಕ್ರಮಾಂಕದಲ್ಲಿಯೇ ಕಂಟ್ರೋಲ್ ಯೂನಿಟ್‍ಗಳನ್ನು ಎಣಿಕೆಗೆ ಪೂರೈಸಲಾಗುವುದು.

ಎಣಿಕೆ ಕಾರ್ಯ ಪೂರ್ಣಗೊಂಡ ನಂತರ ಪ್ರತಿ ವಿಧಾನಸಭಾ ಕ್ಷೇತ್ರದಿಂದ ರ್ಯಾಂಡಮ್ ಆಗಿ 5 ಮತದಾನ ಖಾತ್ರಿ(ವಿವಿ ಪ್ಯಾಟ್) ಯಂತ್ರಗಳನ್ನು ಲಾಟರಿ ಮೂಲಕ ಆರಿಸಿ ಎಣಿಕೆ ಮಾಡಲಾಗುವುದು. ಇದನ್ನು ಕಂಟ್ರೋಲ್ ಯೂನಿಟ್ ಫಲಿತಾಂಶದೊಂದಿಗೆ ತಾಳೆ ಮಾಡಲಾಗುತ್ತದೆ.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಸಂಬಂಧಿಸಿದಂತೆ ಪ್ರತಿ ಕ್ಷೇತ್ರಕ್ಕೆ 14 ಇವಿಎಂ ಟೇಬಲ್‍ನಂತೆ ಒಟ್ಟು 154 ಟೇಬಲ್, ಇಟಿಪಿಬಿಎಸ್ ಎಣಿಕೆಗಾಗಿ ತಲಾ 1ರಂತೆ ಒಟ್ಟು 11 ಟೇಬಲ್, ಅಂಚೆ ಮತಪತ್ರ ಎಣಿಕೆಗಾಗಿ ಒಟ್ಟು 30 ಟೇಬಲ್ ಸೇರಿದಂತೆ 195 ಟೇಬಲ್‍ಗಳಲ್ಲಿ ಮತ ಎಣಿಕಾ ಕಾರ್ಯವನ್ನು ನಡೆಸಲಾಗುವುದು. ಇದಕ್ಕಾಗಿ ಒಟ್ಟು 651 ಅಧಿಕಾರಿ/ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ವರ್‍ಗಳನ್ನು ನಿಯೋಜಿಸಲಾಗಿದೆ.

ಸುಗಮವಾಗಿ ಮತ ಎಣಿಕೆ ನಡೆಸುವ ನಿಟ್ಟಿನಲ್ಲಿ ಮತ ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆಯನ್ನು ಒದಗಿಸಲು 5 ಮಂದಿ ಡಿವೈ.ಎಸ್‍ಪಿ, 17 ಮಂದಿ ಪೊಲೀಸ್ ಇನ್ಸ್‍ಪೆಕ್ಟರ್, 33 ಮಂದಿ ಸಬ್ ಇನ್ಸ್‍ಪೆಕ್ಟರ್, 55 ಮಂದಿ ಸಹಾಯಕ ಸಬ್‍ಇನ್ಸ್‍ಪೆಕ್ಟರ್, 285 ಮಂದಿ ಪೊಲೀಸ್ ಸಿಬ್ಬಂದಿ, 18 ಮಂದಿ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಶಸ್ತ್ರ ಸಜ್ಜಿತ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಇಲ್ಲಿ ನಡೆಯಲಿದೆ ನಿಮ್ಮ ಕ್ಷೇತ್ರದ ಮತ ಎಣಿಕೆ

ಜಿಲ್ಲೆಯ 11ವಿಧಾನ ಸಭಾ ಕ್ಷೇತ್ರಗಳ ಎಣಿಕೆ ಎಲ್ಲೆಲ್ಲಿ ನಡೆಯಲಿದೆ ಎಂಬ ವಿವರ ಕೆಳಗಿನಂತಿದೆ.

ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಮೇ13ರಂದು ಬೆಳಗ್ಗೆ 8 ಗಂಟೆಯಿಂದ ತುಮಕೂರಿನಲ್ಲಿ ನಡೆಯಲಿದೆ.

138-ಮಧುಗಿರಿ,
137-ಪಾವಗಡ,
134-ಕೊರಟಗೆರೆ
136-ಶಿರಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ.

128-ಚಿಕ್ಕ ನಾಯಕನಹಳ್ಳಿ, 129-ತಿಪಟೂರು, 130-ತುರುವೇಕೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ವಿಶ್ವ ವಿದ್ಯಾನಿಲಯದ ಕಲಾ ಕಾಲೇಜಿನಲ್ಲಿ.

131-ಕುಣಿಗಲ್,
132-ತುಮಕೂರು ನಗರ,
133-ತುಮಕೂರು ಗ್ರಾಮಾಂತರ,
135-ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ವಿಶ್ವ ವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ.

ಡಾ.ರಜನಿ ಬರೆದ ಕವಿತೆ: ನಗು

0

ನಗು


ನೀನು ಕಣ್ಣಲ್ಲೇ
ನಗುತೀಯ.

ಬಾಯಲ್ಲಿ
ನಕ್ಕು
ಕಣ್ಣಲ್ಲಿ ಕೋಪ
ತೋರಿಸುತ್ತೀಯ

ಬಯ್ದು ಬಯ್ದು
ಸಾಕಾಗಿ
ಕೊನೆಗೆ
ನಕ್ಕುಬಿಡುತೀಯ.

ನೋವಲ್ಲಿದ್ದರೂ
ಮಗು ನಕ್ಕರೆ
ನೀನೂ ನಕ್ಕುಬಿಡುತೀಯ

ನೀನು ಬೆಳಗ್ಗೆ
ನಕ್ಕ ದಿನ
ನನಗೆ ಆಯಾಸ ಇಲ್ಲ

ಸ್ನೇಹಿತೆಯರ ಜೊತೆ
ನಿನ್ನ ಕಿಸಕಿಸ ನಗು
ನನ್ನೊಂದಿಗೆ ಬರೆ ಹುಸಿ ನಗು

ನೀನು ನಕ್ಕರೆ
ನಾನೂ ನಗುವೇ…

ಡಾ. ರಜನಿ