Saturday, May 9, 2026
Google search engine
Home Blog Page 127

ಭಾನುವಾರದ ಕವನ: ಏಳಲೇಬೇಕು

ಬದುಕು ಯಾವತ್ತೂ ಸ್ವಾತಂತ್ರದಿಂದ ಕೂಡಿಲ್ಲ. ಇಷ್ಟವಿದೆಯೋ, ಇಲ್ಲವೋ ಅನಿವಾರ್ಯತೆಗೆ ಸಿಲುಕಿಬಿಡುತ್ತದೆ. ಒಬ್ಬರಿಗೊಬ್ಬರು, ಒಂದಕ್ಕೊಂದು ಸಂಬಂಧದ ಜಟಿಲತೆಯೇ ಬದುಕು.
ಧೀಮತಿ ಅವರು ಬರೆದಿರುವ ಈ ಕವನ ಬೆಳಿಗಿನ ಜಾವದ ಕನವರಿಕೆಯಂತೆ ಭಾವಿಸಿಕೊಂಡರೂ ಅದು ಬದುಕಿನಾಳವನ್ನು ತೆರೆದಿಟ್ಟಿದೆ.

ಏಳಲೇಬೇಕು

ಬೆಳಗ್ಗಿನ ಮರು ನಿದ್ರೆ
ಬಲು ಮತ್ತು

ರಾತ್ರಿ ಕಂಡ ಕನಸುಗಳ
ಮಸುಕು ನೆನಪು

ನಿಜವೊ ಸ್ವಪ್ನವೋ
ಅರಿಯದ ಗಳಿಗೆ

ಎಲ್ಲೊ ರಸ್ತೆಯಲ್ಲಿ
ಸ್ಕೂಟಿ ಸದ್ದು

ಕೆಲಸದವಳ ಪಾತ್ರೆ
ತೊಳೆಯುವ ಶಬ್ದ

ಅಮ್ಮ ಬೇಗೆದ್ದು
ಕೂಗಿಸಿದ ಕುಕ್ಕರ್

ಹೂವಿನವಳ
ಹೂ ದನಿ

ಅಂಗಳದಲ್ಲಿ ಬಿದ್ದಿರುವ
ಪೇಪರ್

ಸಂಪು ತುಂಬಿ ಹರಿದು
ಹೋಗುತ್ತಿರುವ ನೀರು

ಕೈ ತಾಗಿದರೆ ಪಕ್ಕದಲ್ಲೆ
ಮಿನುಗಿದ ಮೊಬೈಲ್

ಏಳಲೇ ಬೇಕು
ಗಂಟೆ ಏಳಕ್ಕಾದರೂ

ಎಲ್ಲರೂ ಎದ್ದು ತಮ್ಮ
ಕೆಲಸ ಶುರು ಮಾಡಿರುವುದಕ್ಕಾಗಿ

ಅರೆ ಬರೆ ನಿದ್ರೆ…
ಸೋರಿದ ಕಟವಾಯಿ

ರಜಾಯಿಯ ಮೆತ್ತೆ
ದಿಂಬಿನ ಗೌರಿ ಮಲ್ಲಿಗೆಯ ಗಮ

ಎಲ್ಲವ ಬಿಟ್ಟು ಏಳಲೇ ಬೇಕು
ಎಲ್ಲರೂ ಎದ್ದಿರುವುದಕ್ಕಾಗಿ

ಏನಿಲ್ಲವೆಂದರೂ
ಬೆಳಗಿನ ಕಾಫಿಗಾಗಿ

ಬದುಕಿದ್ದೇನೆ
ಎಂದು ತೋರಿಸಲಿಕ್ಕಾಗಿ.


ಧೀಮತಿ

ಭಾನುವಾರದ ಕವಿತೆ: ಏಳಲೇಬೇಕು


ಬೆಳಗ್ಗಿನ ಮರು ನಿದ್ರೆ
ಬಲು ಮತ್ತು

ರಾತ್ರಿ ಕಂಡ ಕನಸುಗಳ
ಮಸುಕು ನೆನಪು

ನಿಜವೊ ಸ್ವಪ್ನವೋ
ಅರಿಯದ ಗಳಿಗೆ

ಎಲ್ಲೊ ರಸ್ತೆಯಲ್ಲಿ
ಸ್ಕೂಟಿ ಸದ್ದು

ಕೆಲಸದವಳ ಪಾತ್ರೆ
ತೊಳೆಯುವ ಶಬ್ದ

ಅಮ್ಮ ಬೇಗೆದ್ದು
ಕೂಗಿಸಿದ ಕುಕ್ಕರ್

ಹೂವಿನವಳ
ಹೂ ದನಿ

ಅಂಗಳದಲ್ಲಿ ಬಿದ್ದಿರುವ
ಪೇಪರ್

ಸಂಪು ತುಂಬಿ ಹರಿದು
ಹೋಗುತ್ತಿರುವ ನೀರು

ಕೈ ತಾಗಿದರೆ ಪಕ್ಕದಲ್ಲೆ
ಮಿನುಗಿದ ಮೊಬೈಲ್

ಏಳಲೇ ಬೇಕು
ಗಂಟೆ ಏಳಕ್ಕಾದರೂ

ಎಲ್ಲರೂ ಎದ್ದು ತಮ್ಮ
ಕೆಲಸ ಶುರು ಮಾಡಿರುವುದಕ್ಕಾಗಿ

ಅರೆ ಬರೆ ನಿದ್ರೆ…
ಸೋರಿದ ಕಟವಾಯಿ

ರಜಾಯಿಯ ಮೆತ್ತೆ
ದಿಂಬಿನ ಗೌರಿ ಮಲ್ಲಿಗೆಯ ಗಮ

ಎಲ್ಲವ ಬಿಟ್ಟು ಏಳಲೇ ಬೇಕು
ಎಲ್ಲರೂ ಎದ್ದಿರುವುದಕ್ಕಾಗಿ

ಏನಿಲ್ಲವೆಂದರೂ
ಬೆಳಗಿನ ಕಾಫಿಗಾಗಿ

ಬದುಕಿದ್ದೇನೆ
ಎಂದು ತೋರಿಸಲಿಕ್ಕಾಗಿ

ಧೀಮತಿ

ಹಳ್ಳಿ ಹುಡುಗರ ದಾರಿದೀಪವಾದ ಅಚ್ಚುಮೆಚ್ಚಿನ ಮೇಷ್ಟ್ರು

0

ಮಹೇಂದ್ರ ಕೃಷ್ಣಮೂರ್ತಿ


ಆಗಿನ್ನೂ ನಾನು ಐದನೇ ತರಗತಿಯಲ್ಲಿದ್ದೆ. ಸಿ.ಎಸ್.ಪುರದ ಸರ್ಕಲ್ ನಲ್ಲಿದ್ದ ಕಟ್ಟಡದಲ್ಲಿ ನಮ್ಮ ಶಾಲೆ ಇತ್ತು. ಏಳನೇ ತರಗತಿ ಶಾಲೆ ಸಿ.ಎಸ್.ಪುರದ ಬಸ್ ನಿಲ್ದಾಣದ ಸಮೀಪದಲ್ಲಿತ್ತು. ನಾವು ಪಕ್ಕದ ಸಿ.ಎನ್.ಪಾಳ್ಯದಿಂದ ನಡೆದು ಈ ಶಾಲೆಗೆ ಬರುತ್ತಿದ್ದವು.

ಸರ್ಕಲ್ ನಿಂದ ಬಸ್ ನಿಲ್ದಾಣದ ದಾರಿಯಲ್ಲೇ ನಾವು ನಡೆದುಹೋಗಿರಲಿಲ್ಲ. ಶಾಲೆ ಮುಗಿಸಿ ಮನೆ, ಮನೆಯಿಂದ ಶಾಲೆ ಇಷ್ಟೇ. ಆದರೆ ಆಗೆಲ್ಲ ಒಬ್ಬರ ಮಾತು ಕೇಳಿ ಬರುತ್ತಿತ್ತು. ಪಿಯುಸಿ ಉಪನ್ಯಾಸಕರ ಹೆಸರು ನಮ್ಮಲ್ಲಿ ಬಾಳಾ ಚಾಲ್ತಿಯಲ್ಲಿತ್ತು. ಅವರ ಬಗ್ಗೆ, ಅವರ ಪಾಠ, ಶಿಸ್ತಿನ ಬಗ್ಗೆ ಅನೇಕ ಹುಡುಗರು ಹೇಳುತ್ತಿದ್ದರು. ನಮ್ಗೂ ಕಾಲೇಜಿಗೆ ಹೋಗುವ ಆಸೆ ಮೂಡಿದ್ದು ಈ ಎಚ್ ಕೆ ಎನ್ ಎಂಬ ಹೆಸರಿನ ಆಸೆಯಿಂದ .
ಪ್ರೈಮರಿ ಮುಗಿಸಿ ಹೈಸ್ಕೂಲ್ ಹೋದಾಗ ಎಚ್ ಕೆ ಎನ್ ( ಎಚ್.ಕೆ.ನರಸಿಂಹಮೂರ್ತಿ) ಅವರನ್ನು ನೋಡುವ ಭಾಗ್ಯ ನಮ್ಮದಾಗಿತ್ತು.

ಆದರೆ ಅಲ್ಲಿ ಕಾಲೇಜು ಬೆಳಿಗ್ಗೆ, ಕಾಲೇಜು ಮುಗಿಯುವ ಹೊತ್ತಿಗೆ ನಮ್ಮ ಹೈಸ್ಕೂಲ್ ಆರಂಭವಾಗುತ್ತಿತ್ತು. ನಾವು ಶಾಲೆ ಒಳಗೆ ಹೋಗುವಾಗ ಸ್ಟಾಪ್ ರೂಂನಿಂದ ಎಚ್ ಕೆ ಎನ್ ಮಾತುಗಳು ಕೇಳುತ್ತಿದ್ದವು. ಆದರೆ ಅವರನ್ನು ದಿನಾಲು ನೋಡಲು ಸಿಗುತ್ತಿರಲಿಲ್ಲ.
ದೂರದಿಂದಲೇ ಅವರನ್ನು ನೋಡುವುದೇ ನಮಗೆಲ್ಲ ಏನೋ ಒಂಥರಾ ಆಸೆ. ಅಲ್ನೋಡಿ ಎಚ್ ಕೆ ಎನ್ ಹೋಗ್ತಾ ಇದ್ದಾರೆ ಎಂದು ಹುಡುಗರು ಹೇಳುತ್ತಿದ್ದರೆ ಎಲ್ಲರೂ ನೋಡುತ್ತಿದ್ದವು. ಇಂತಹ ಎಚ್ ಕೆಎನ್ ಅವರನ್ನು ನೋಡುವ ಭಾಗ್ಯ ಕೊನೆಗೂ ನಮಗೆ ಬಂತು. ಆದರೆ ಅಷ್ಟರಲ್ಲಾಗಲೇ ಕಾಲೇಜು ಕಟ್ಟಡ ಸಿ.ಎಸ್,ಪುರದಿಂದ ನಮ್ಮೂರಿಗೆ ಶಿಫ್ಟ ಆಗಿತ್ತು.

ಎಚ್ ಕೆಎನ್ ಅವರ ಮೊದಲ ಕ್ಲಾಸ್ ಬಗ್ಗೆ ನನಗೆ ನೆನಪಿಲ್ಲ. ಆದರೆ ಪಿಯುಸಿಗೆ ಹೋದ ನಂತರವಷ್ಟೇ ಅವರೊಂದಿಗೆ ಬೆರೆಯುವ ಅವಕಾಶ ಅವರ ಶಿಷ್ಯನಾಗಿ ಸಿಕ್ಕಿತು. ಎಚ್ ಕೆ ಎನ್ ಎಂದರೆ ಬರೀ ಹುಡುಗರಿಗಷ್ಟೇ ಅಲ್ಲ ಸಿ.ಎಸ್.ಪುರದ ಸುತ್ತಮುತ್ತಲಿನ ಎಲ್ಲ ಜನರ ಬಾಯಲ್ಲಿ ಅವರು ಮನೆ ಮಾತಾಗಿದ್ದರು.

ಅವರೊಂಥರಾ ಹೀರೋ. ಸಿನಿಮಾ ಹೀರೋ ಥರಾ ಅಲ್ಲ. ಮಕ್ಕಳಿಂದ ಹಿರೀಕರವರೆಗೂ ಅವರಿಗೆ ಗೌರವ ಸಲ್ಲುತ್ತಿತ್ತು. ಇದು ಕೆಲವರಿಗೆ ಅತಿ ಶಯೋಕ್ತಿ ಎನ್ನಿಸಬಹುದು ಅಥವಾ ಸುಳ್ಳಂತೆಯೂ ಭಾಸವಾಗಬಹುದು. ಆಗ ಎಚ್ ಕೆ ಎನ್ ಗೆ ಸಿಗುತ್ತಿದ್ದ ಗೌರವ ಮಾತ್ರ ಯಾವ ಮೇಷ್ಟ್ರುಗಳಿಗೂ ಸಿಕ್ಕಿರಲಾರದು, ಸಿಗಲಾರದು. ಈಗಲೂ ಸಿ.ಎಸ್.ಪುರ ಸುತ್ತಮುತ್ತಲಿನ ಯಾವ ಗ್ರಾಮಕ್ಕೆ ಹೋಗಿ ಕೇಳಿದರೂ ಎಚ್ ಕೆ ಎನ್ ಜನಜನಿತ.

ಕಾಲೇಜು ಮುಖವನ್ನೇ ನೋಡದ ಜನರ ಮನೆಯಲ್ಲೂ ಎಚ್ ಕೆಎನ್ ಬಗ್ಗೆ ಗೊತ್ತಿತ್ತು. ಅವರನ್ನು ಕಂಡರೆ ಸಿಕ್ಕಾಪಟ್ಟೆ ಗೌರವ ಕೊಡುತ್ತಿದ್ದರು. ಸರ್ಕಲ್ ನಲ್ಲಿ ಪ್ರತಿ ದಿನ ಬಸ್ ಇಳಿಯುತ್ತಿದ್ದ ಮೇಷ್ಟ್ರು ಸೀದಾ ನಮ್ಮೂರಿನವರೆಗೂ ದಾರಿ ಉದ್ದಕ್ಕೂ ಅವರು ನಡೆದುಕೊಂಡು ಬರುತ್ತಿದ್ದರು (ಸುಮಾರು ಒಂದುಕಿಲೋ ಮೀಟರ್). ಅಷ್ಟೇ ಗಾಂಬೀರ್ಯ. ಸಹದ್ಯೋಗಿಗಳೊಂದಿಗೆ ಮಾತನಾಡಿಕೊಂಡು ಅವರು ಬರುತ್ತಿದ್ದರೂ ಎಂದಿಗೂ ಅವರು ರಸ್ತೆಯಲ್ಲಿ ನಿಂತು ನಗಾಡಿದ್ದನ್ನು ಯಾರೂ ಕಂಡಿಲ್ಲ.

ವಿದ್ಯಾರ್ಥಿಗಳಿಗೆ ಅವರು ಗದರಿದ್ದು ಇಲ್ಲ. ಹೆಣ್ಣು ಮಕ್ಕಳನ್ನು ತಾಯಿ ಎಂದೇ ಅವರು ಕರೆಯುತ್ತಿದ್ದದ್ದು. ಸ್ನೇಹಮಯಿ ಉಪನ್ಯಾಸಕ ಅನ್ನುವುದಕ್ಕಿಂತಲೂ ಮಾರ್ಗ ತೋರುತ್ತಿದ್ದ ಕಾರುಣ್ಯದ ಗುರು ಅವರಾಗಿದ್ದರು.

ಆದರೆ ಅವರಿಗೆ ಪಾಠ ಬಿಟ್ಟರೆ ಬೇರೇನೂ ಬೇಕಿರಲಿಲ್ಲ. ಅವರೊಮ್ಮೆ ಕೆಎಎಸ್ ಹುದ್ದೆಗೆ ಆಯ್ಕೆಯಾಗಿದ್ದ ನೆನಪು. ಆಡಳಿತಾತ್ಮಕ ಹುದ್ದೆಗಳಲ್ಲಿ ಲಂಚ ತೆಗೆದುಕೊಳ್ಳಬೇಕಾಗುತ್ತದೆ ಹಾಗೂ ಕೊಡಬೇಕಾಗುತ್ತದೆ ಎಂದು ( ರಾಜಕಾರಣಿಗಳು, ಹಿರಿಯ ಅಧಿಕಾರಿಗಳಿಗೆ) ಅವರು ಹುದ್ದೆ ತಿರಸ್ಕರಿಸಿ ಉಪನ್ಯಾಸಕ ಹುದ್ದೆಯಲ್ಲೇ ಉಳಿದರು.

ಅವರ ಪಾಠ ಕೇಳುವುದೇ ಚೆನ್ನ. ಬೋರ್ಡ್ ಮೇಲೆ ಅವರ ಬರಹ ಇನ್ನೂ ಚೆನ್ನ. ಒಂದು ಗಂಟೆ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ. ಯಾರಿಗೂ ಕನ್ನಡ ಕಷ್ಟ ಎನ್ನಿಸಲೇ ಇಲ್ಲ. ಕವಿಗಳ ಬಗ್ಗೆ, ಅವರ ಜೀವನದ ಬಗ್ಗೆಯೂ ಹೇಳುತ್ತಿದ್ದರು.

ಅವರೊಮ್ಮೆ ಪಾಠ ಮಾಡುವಾಗ ಸಾಹಿತಿ ಶಿವರಾಮಕಾರಂತರ ಬಗ್ಗೆ, ಅವರ ಮೂಕಜ್ಜಿಯ ಕನಸುಗಳ ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದರು. ಅದೇ ದಿನ ಸಿ.ಎಸ್,ಪುರದ ಲೈಬ್ರರಿಗೆ ತೆರಳಿ ಮೂಕಜ್ಜಿಯ ಕನಸು ಕಾದಂಬರಿ ಪಡೆದು ಓದಲು ಶುರು ಹಚ್ಚಿದೆ. ಅದೂ ಮುಗಿಯವರೆಗೂ ಊಟ, ತಿಂಡಿ ಸೇರಲಿಲ್ಲ. ವಾರಗಳ ಕಾಲ ಮೂಕಜ್ಜಿಯೇ ನನ್ನ ಮುಂದೆ ಬಂದಂಗೆ ಆಗುತ್ತಿತ್ತು. ನಿಜವಾಗಲೂ ಮೂಕಜ್ಜಿ ಇರಲೇಬೇಕೆಂದು ನಂಬಿದ ನಾನು ಶಿವರಾಮ ಕಾರಂತರಿಗೆ ಕೋಕಿಲ ಹೆಸರಿನಲ್ಲಿ ಅಜ್ಜಿಯನ್ನು ನೋಡುವ ಆಸೆ ವ್ಯಕ್ತಪಡಿಸಿ ಒಂದು ಪತ್ರ ಬರೆದೆನು.

ವಾರದ ಬಳಿಕ ಕಾಲೇಜಿನ ವಿಳಾಸಕ್ಕೆ ಶಿವರಾಮ ಕಾರಂತರಿಂದ ಪತ್ರ ಬರಬೇಕೆ. ಅಂಥ ಅಜ್ಜಿ ಇದ್ದಿದ್ದರೆ ಅದಕ್ಕಿಂತ ಪುಣ್ಯ ಇನ್ನೇನು ಇರುತ್ತಿತ್ತು. ಕಾದಂಬರಿಯಲ್ಲಿ ಅದು ಒಂದು ಪಾತ್ರ ಅಷ್ಟೇ ಎಂದು ಪತ್ರದಲ್ಲಿ ಬರೆದಿದ್ದರು. ಕಾಲೇಜಿನಲ್ಲಿ ದೊಡ್ಡ ಚರ್ಚೆಯೇ ಶುರುವಾಯಿತು. ಏಕೆಂದರೆ ಕೋಕಿಲ ಎಂಬ ಹುಡುಗಿಯೇ ಕಾಲೇಜಿನಲ್ಲಕಿ ಇರಲಿಲ್ಲ. ಯಾರು, ಯಾರು ಎಂಬುದೇ ಚರ್ಚೆ. ನನಗೂ ಹೇಳಲು ಭಯ.

ಪತ್ರ ಬಂದು ಎರಡು ದಿನದ ಬಳಿಕ ಕಾಲೇಜಿಗೆ ಪತ್ರವನ್ನು ತಂದ ಎಚ್ ಕೆ ಎನ್ ಅವರು ಕಾರಂತರ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಮತ್ತಷ್ಟು ಹೇಳಿದರು. ಯಾರೇ ಕಾರ್ಡ್ ಬರೆದರೂ ಕಾರಂತರು ಉತ್ತರಿಸುತ್ತಾರೆ. ಅದಕ್ಕಾಗಿ ಹೆಣ್ಣು ಮಕ್ಕಳ ಹೆಸರಿನಲ್ಲೇ ಬರೆಯಬೇಕಿಲ್ಲ. ತಗೋ ಮಹೇಂದ್ರ, ಪತ್ರ ನೀನೇ ಬರೆದಿರೋದು ಅನ್ನೋದೆ.

ಆನಂತರದಲ್ಲಂತೂ ಶಿಷ್ಯನ ಮೇಲೆ ಅವರ ಪ್ರೀತಿ ಮುಮ್ಮಡಿಯಾಯಿತು.

ನಾವು ಕಾಲೇಜಿನಲ್ಲಿ ಓದುವಾಗ ಕಾಲೇಜು ಮುಚ್ಚುವ ಹಂತಕ್ಕೆ ಬಂತು. ಆಗ ಪ್ರವೇಶ ಹೆಚ್ಚಿರದ ಕಾಲೇಜುಗಳನ್ನು ಮುಚ್ಚುವ ನಿರ್ಧಾರವನ್ನು ಆಗಿನ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಕೈಗೊಳ್ಳಲಾಗಿತ್ತು. ಹಳ್ಳಿಗಳ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಕ ಮಾಡದ ಸರ್ಕಾರ ಮಕ್ಕಳ ಕೊರತೆ ನೆಪಹೇಳಿ ಮುಚ್ಚುವ ಕೆಲಸ ಮಾಡಿತು.

ನಮ್ಮ ಕಾಲೇಜಿನಲ್ಲಿ ಇದ್ದದ್ದು ಎಚ್ ಕೆಎನ್ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಚಿತ್ತಯ್ಯ ಅವರು. ಹೀಗಾಗಿ ನಮ್ಮ ಕಾಲೇಜಿಗೆ ಸೇರಲು ಹುಡುಗರು ಮುಂದೆ ಬರಲಿಲ್ಲ. ಪ್ರಥಮ ಪಿಯುಸಿಯಿಂದ ದ್ವಿತೀಯ ಪಿಯುಸಿಗೆ ಪ್ರವೇಶ ಮುಂದುವರೆಸದೆ ಅನೇಕ ಹುಡುಗರು ಟಿಸಿ ತೆಗೆದುಕೊಂಡು ಕಲ್ಲೂರು, ಮಾವಿನಹಳ್ಳಿಗೆ ಹೊರಟರು.

ಆಗ,ನನ್ನನ್ನು ಕರೆದ ಎಚ್ ಕೆಎನ್ ಹೇಗಾದರೂ ಮಾಡಿ ಕಾಲೇಜು ಉಳಿಸಿಕೋ. ಈಗ ಕಾಲೇಜು ಮುಚ್ಚಿದರೆ ಮುಂದೆ ತೆಗೆಯೋದು ಕಷ್ಟ. ಇದರಿಂದ ಹಳ್ಳಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಎಂದು ಹೇಳಿದರು. ಆಗ ನಾನು, ನಾಗರಾಜ, ಗಂಗಾಧರ್, ಶಿವ, ಚಂದ್ರಮ್ಮ, ಪೂರ್ಣಿಮಾ ಇನ್ನೂ ಮುಂತಾದವರೆಲ್ಲ ಸೇರಿ ಒಂದು ನಿರ್ಧಾರ ಮಾಡಿದೆವು.

ನನ್ನ ಮಾತು ಕೇಳಿ 24 ಹುಡುಗರು ನಮ್ಮ ಕಾಲೇಜಿನಲ್ಲೇ ಉಳಿಯುವ ನಿರ್ಧಾರ ಮಾಡಿದರು. ಕೊನೆಗೆ ನನ್ನನ್ನು ಬಿಟ್ಟು ಎಲ್ಲರೂ ಫೇಲಾದರು. ಆದರೆ ಕಾಲೇಜು ಉಳಿಸಿಕೊಳ್ಳುವಲ್ಲಿ ಇವರ ಶ್ರಮ, ಬದುಕನ್ನು ಪಣಕಿಟ್ಟಿದ್ದು ಈಗ ಯಾರಿಗೂ ಬೇಕಾಗಿಲ್ಲ.

ನಮ್ಮ ಶಿಕ್ಷಣ ಹಾಳಾಗಬಾರದು ಎಂದು ಎಚ್ ಕೆ ಎನ್ ಅವರು ಕನ್ನಡದ ಜತೆ ಇತಿಹಾಸ, ಸಮಾಜಶಾಸ್ತ್ರವನ್ನು ಬೋಧಿಸಿದರು. ನಮಗೆ ಇಂಗ್ಲಿಷ್ ನದೇ ಕೊರತೆಯಾಯಿತು. ಉಪನ್ಯಾಸಕರು ಬೇಕೆಂದು ನನ್ನ ನೇತೃತ್ವದಲ್ಲಿ ಸಿ.ಎಸ್ ಪುರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿಯಾಯಿತು. ಉಪವಾಸ ಸತ್ಯಾಗ್ರಹ ಮಾಡಿದೆವು. ತುಮಕೂರಿನ ಡಿಡಿಪಿಯು ಕಚೇರಿಗೆ ಲಾರಿಯಲ್ಲಿ ತೆರಳಿ ಮುತ್ತಿಗೆ ಹಾಕಿಬಂದೆವು. ಆದರೆ ಏನೇನು ಪ್ರಯೋಜನವಾಗಲಿಲ್ಲ.

ಆಗ ಪಿಯು ಬೋರ್ಡ್ ನ ನಿರ್ದೇಶಕರಾಗಿ ಜಯರಾಮೇ ಅರಸ್ ಎಂಬುವವರು ಇದ್ದರು. ಪಿಯು ಬೋರ್ಡ್ ಗೆ ಹೋಗಿ ನಿರ್ದೇಶಕರನ್ನು ಕಾಣುವಂತೆ ಹೇಳಿದವರು ಎಚ್ ಕೆಎನ್. ತಮಾಷೆ ಎಂದರೆ, ಅಲ್ಲಿಯವರೆಗೂ ನಾನು ಒಬ್ಬನೇ ಹೋಗಿ ಬೆಂಗಳೂರನ್ನೇ ನೋಡಿರಲಿಲ್ಲ. ನಿರ್ದೇಶಕರ ಕಚೇರಿಯನ್ನು ವಿಳಾಸವನ್ನು, ಅಲ್ಲಿಗೆ ಮೆಜೆಸ್ಟಿಕ್ ನಲ್ಲಿ ಇಳಿದು ಹೇಗೆ ಹೋಗಬೇಕೆಂದು ಒಂದು ಹಾಳೆಯಲ್ಲಿ ಸ್ಕೆಚ್ ಹಾಕಿಕೊಟ್ಟವರು ಎಚ್ ಕೆ ನರಸಿಂಹಮೂರ್ತಿಗಳು.

ಪ್ರತಿ ಹುಡುಗರು ಮೂವತ್ತು-ಮೂವತ್ತು ರೂಪಾಯಿ ಹಾಕಿಕೊಂಡು ಕಾಣದ ಬೆಂಗಳೂರಿಗೆ ಹೊರಟೆವು. ನಿರ್ದೇಶಕರನ್ನು ಭೇಟಿ ಮಾಡಿದ ಸಾಹಸವೇ ಒಂದು ದೊಡ್ಡ ಕತೆ. ಯಾವತ್ತಿಗೂ ನೋಡದ ಲಿಫ್ಟ್ ನೋಡಿದ್ದು. ಅದೆಲ್ಲ ಇರಲಿ, ಇಲ್ಲಿ ಬೇಡ. ಇದರ ಪರಿಣಾಮದಿಂದ ನಮಗೆ ಇಂಗ್ಲಿಷ್, ಸಮಾಜಶಾಸ್ತ್ರಕ್ಕೆ ಉಪನ್ಯಾಸಕರು ಬಂದರು.

ಹೀಗೆ ಕಾಲೇಜು ಉಳಿಯಿತು. ಈಗ ನೂರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಪಿಯು ಕಾಲೇಜಿನ ಪರಿಣಾಮದಿಂದಾಗಿ ಸಿ.ಎಸ್,ಪುರದಲ್ಲಿ ಪದವಿ ಕಾಲೇಜು ತೆರೆದಿದೆ.

ಎಚ್.ಕೆ.ನರಸಿಂಹಮೂರ್ತಿ ಅವರೊಬ್ಬರು ಕೇವಲ ಮೇಷ್ಟ್ರು ಆಗಿರಲಿಲ್ಲ. ಅವರು ಹಳ್ಳಿ ಹುಡುಗರಿಗೆ ದಾರಿ ತೋರುವ ಗುರು, ದೇವರು ಆಗಿದ್ದರು. ಕಾಲೇಜು ಮುಗಿದ ಬಳಿಕವೂ ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳಲು ಆಸರೆಯಾಗಿ ನಿಂತರು. ಅವರುಗಳು ಉನ್ನತ ವಿದ್ಯಾಭ್ಯಾಸಗಳಿಸಲು ಹೆಚ್ಚು ಸಹಕಾರಿಯಾದರು.

ಬದುಕನ್ನು ಹೆದರಿಸುವ ಬಗೆಯನ್ನು ಹೇಳಿಕೊಟ್ಟರು. ವಿದ್ಯಾರ್ಥಿಗಳು ಜೀವನದಲ್ಲಿ ಭದ್ರ ನೆಲೆಯಾಗಿ ನಿಲ್ಲುವುದನ್ನು ದೂರದಿಂದಲೇ ಗಮನಿಸುವ ಕೆಲಸ ನಿರತರವಾಗಿ ಮಾಡುತ್ತಾ ಬಂದಿದ್ದಾರೆ. ನೆಲೆವೂರದ ವಿದ್ಯಾರ್ಥಿಗಳನ್ನು ಕರೆದು ಬುದ್ದಿವಾದ ಹೇಳುವ ಕೆಲಸವನ್ನು ಈಗಲೂ ಮುಂದುವರೆಸಿದ್ದಾರೆ.

ನಗರಕ್ಕೆ ಅಂಟಿಕೊಳ್ಳುವ ಉಪನ್ಯಾಸಕರ ಬದಲಿಗೆ ಇವರು ಸೇವೆಯನ್ನು ಹಳ್ಳಿಗಳೇ ಮಾಡಿದರು. ಬಿದ್ದು ಹೋಗುತ್ತಿದ್ದ ಹಳ್ಳಿಗಳ ಕಾಲೇಜುಗಳನ್ನು ಕಟ್ಟಿ ತೋರಿಸಿದರು. ಇದು ಅವರ ಶಿಷ್ಯಕೋಟಿಗಷ್ಟೇ ಅಲ್ಲದೇ ಮುಂದಿನ ತಲೆಮಾರುಗಳಿಗೆ ಪಿಯು ಶಿಕ್ಷಣಕ್ಕೆ ಬುನಾದಿ ಹಾಕಿಕೊಟ್ಟ ಮೇಷ್ಟ್ರು ಅವರು. ಹೀಗಾಗಿಯೇ ಎಚ್ ಕೆ ಎನ್ ಕೇವಲ ವಿದ್ಯಾರ್ಥಿಗಳ ಹೃದಯದಲ್ಲಿ ಮಾತ್ರವೇ ಸ್ಥಾನಪಡೆದಿಲ್ಲ ಹಳ್ಳಿಗರ ಹೃದಯದಲ್ಲಿ ಭದ್ರವಾಗಿ ಸ್ಥಾನಪಡೆದುಕೊಂಡಿದ್ದಾರೆ.

ಅವರು ಈಗ ಡಿಡಿಪಿಯು ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾದರು. ಅವರ ಪ್ರಾಮಾಣಿಕತೆ ಅವರಿಗೆ ಅನೇಕ ನೋವುಗಳನ್ನು ತಂದುಕೊಟ್ಟಿದೆ. ಆದರೆ ಹೀಗೆ ನೋವು ನುಂಗಿಕೊಂಡೂ ಪ್ರಾಮಾಣಿಕತೆಯ ಹಾದಿ ಬಿಡದ ಸಾವಿರಾರು ಶಿಷ್ಯರನ್ನು ಅವರು ರೂಪಿಸಿದ್ದಾರೆ. ಅವರಿಗೆ ಸಲಾಂ.

ಶಿಕ್ಷಕರ ದಿನಾಚರಣೆ: ಪ್ರತಿ ದಿನ ನೆನಪಾಗುವ ನನ್ನ ಗುರುಗಳು

0

ಶಿಲ್ಪಾ ಎಂ


ನಾವು ಅಂಗನವಾಡಿಗೆ ಹೋಗುವ ವಯಸ್ಸಾದರು ನಮ್ಮೂರಿನಲ್ಲಿ ಅಂಗನವಾಡಿಯೆ ಇರದ ದಿನಗಳಲ್ಲಿ ಪ್ರ್ಯೆಮರಿ ಶಾಲೆಯ ಮೇಷ್ಟ್ರು ನಮಗೆ ಅಕ್ಷರಗಳನ್ನು ಕಲಿಸಲು ಫ್ರಾರಂಭಿಸಿದ್ದರು.

ನಾವು ಖುಷಿಯಿಂದ ಶಾಲೆಗೆ ಹಾಜರುಗುತಿದ್ದೆವು. ಆ ಸಮಯಕ್ಕೆ ಅಂಗನವಾಡಿ ನಮ್ಮೂರ ದೇವಸ್ಥಾನದಲ್ಲಿ ಫ್ರಾರಂಭವಾಗಿತ್ತು ಮತ್ತೆ ನೀವು ಅಂಗನವಾಡಿಗೆ ಹೋಗಬೇಕು ಎಂದಾಗ ಹಠ ಮಾಡಿ ಶಾಲೆಯಲ್ಲೆ ಉಳಿದೆವು.

ಅಷ್ಟು ಚೆಂದ ಕಲಿಕೆ ನಮ್ಮ ಮೇಷ್ಟ್ರೆಯಿಂದನೇ ಆಗುತಿತ್ತು ಬಿಟ್ಟು ಹೋಗುವ ಮನಸೆ ಇರಲಿಲ್ಲ. ಅಂಗನವಾಡಿಯನ್ನು ಶಾಲೆಯಲ್ಲೆ ಕಲಿತು ಒಂದನೇ ತರಗತಿಯಿಂದ ೫ ನೇ ತರಗತಿ ಅಲ್ಲೆ ಮುಂದುವರೆಯಿತು.

ನಮ್ಮ ಮೇಷ್ಟ್ರು ಬಸ್ಸು ಹತ್ತಿ ಬಂದು ಒಂದು ಕಿ.ಲೋ ಮೀಟರ್ ನೆಡೆದು ನಮ್ಮೂರಿನ ಶಾಲೆಗೆ ಬರುತ್ತಿದ್ದರು. ಈಗ ನನ್ನ ಕಲ್ಪನೆಯಲ್ಲಿರುವ ಗುರುಕುಲ ಆಗ ನಮ್ಮ ಶಾಲೆಯೆ ಗುರುಕುಲದಂತಿತ್ತು ಎಂದು ಹೆಮ್ಮೆ ಆಗುತ್ತದೆ.

ಶಿಕ್ಷಣ ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಎಂದು ನಮ್ಮ ಮೇಷ್ಟ್ರು ಹೆಚ್ಚು ತಿಳಿದಿದ್ದರು ಎನಿಸುತ್ತಿದೆ.

ಶಾಲೆ ಚಿಕ್ಕದಾದರು ಜೀವನಕ್ಕೆ ಬುನಾದಿ ಹಾಕುವ ಪ್ರ್ಯೆಮರಿ ಸ್ಕೂಲ್ ಗಳ ಶಿಕ್ಷಕರ ಪಾತ್ರ ಮತ್ತು ಶಿಕ್ಷಣ ದೊಡ್ದದಿರುತ್ತದೆ.

ನಮ್ಮ ಚಿಕ್ಕ ಶಾಲೆಯನ್ನು ಸ್ವಚ್ಛ ಮಾಡಲು ಮುಂದಾಗುತಿದ್ದ ಶಿಕ್ಷರೊಟ್ಟಿಗೆ ಮಕ್ಕಳು ಕೈ ಜೋಡಿಸಿ ಸ್ವಚ್ಚತೆಯ ಪಾಠ ಕಲಿಯಿತಿದ್ದೆವು .

ಹಲಗೆಗಳನ್ನು ಜೋಡಿಸಿ ಶಿಸ್ತಾಗಿ ಕೂರುವ ಅಭ್ಯಾಸ ಮಾಡಿಸಿದ್ದರು. ಅವರು ಬರುವವರೆಗು ಓದು ಬರಹದಲ್ಲಿ ನಿರತರಾಗುತ್ತಿದ್ದೆವು.

ಎಂತಹ ದಡ್ಧ ಮಗುವಿಗು ಅಕ್ಷರ ಕಲಿಸುವುದರಲ್ಲಿ ಸೋಲುತ್ತಿರಲಿಲ್ಲ. ಸಕಾ೯ರಗಳಿಂದ ಆಗ ಅಷ್ಟೇನು ಸೌಲಭ್ಯಗಳಿರಲಿಲ್ಲ ಆದರೆ ಅದನ್ನೆ ನೆಪ ಮಾಡಿಕೊಳ್ಳದೆ ಅನಾವಶ್ಯಕವಾಗಿ ಏಟು ಕೊಡದೆ ಕಲಿಸುತ್ತಿದ್ದರು.

ನಮ್ಮ ಜೊತೆ ಓದುತ್ತಿದ್ದ ಒಬ್ಬ ಹುಡುಗ ಅಂಗವಿಕಲನಿದ್ದ ಅವನಿಗೆ ಕಲಿಸುವುದು ಕಷ್ಟವಿತ್ತು ಆದರೆ ನಮ್ಮ ಮೇಷ್ಟ್ರು ಅವನಿಗೆ ಕಲಿಸುವುದರಲ್ಲಿ ಸೋತಿರಲಿಲ್ಲ ಅವನಿಗೆ ಕಲ್ಲು ಹೂ ಎಲೆ ಇಂಗೆ ತುಂಬಾ ಉದಾಹರಣೆಗೆಯೊಟ್ಟಿಗೆ ಅಕ್ಷರ ಕಲಿಸಿದ್ದರು ನಮ್ಮೂರಿಗು ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು.

ನಾವು ಊಟ ಮಾಡುವಾಗಲೆಲ್ಲ ನಮ್ಮೂಟ್ಟಿಗೆ ಕೂತು ಊಟ ಮಾಡುತ್ತಿದ್ದರು ಯಾರಾದರೂ ಊಟವಿಲ್ಲದೆ ಬಂದರೆ ತಮ್ಮ ಊಟವನ್ನೆ ಕೊಟ್ಟು ಮಕ್ಕಳನ್ನು ಶಾಲೆಯಲ್ಲಿದ್ದಾಗ ತಾಯಿಯಂತೆ ಪೋಷಿಸುತ್ತಿದ್ದರು.

ಸ್ವತಂತ್ರ ದಿನ ಗಣರಾಜ್ಯೋತ್ಸವ ಇಂತಹ ದಿನಗಳಲ್ಲಿ ಎಲ್ಲರಿಗೂ ನೃತ್ಯ ಹಾಡುಗಳನ್ನು ಕಲಿಸಿ ಅವಕಾಶಕೊಟ್ಟು ಧ್ಯೆಯ೯ ತುಂಬುತಿದ್ದರು.

ಅವರೊಮ್ಮೆ ೫ ದಿನ ಟ್ರ್ಯೆನಿಂಗ್ ಹೋಗಿದ್ದರು ಅವರ ಬದಲು ಬೇರೆ ಮೇಷ್ಟ್ರು ಬಂದಿದ್ದರು ಅವರು ನಮಗೆ ಟೆಸ್ಟ್ ಕೊಟ್ಟರು ನಾವೇಲ್ಲ ದೂರ ದೂರ ಕೂತು ಬರೆಯಲು ಶುರುಮಾಡಿದೆವು ಆದರೆ ಮೇಷ್ಟ್ರು ಅಯ್ಯೊ ಬುಕ್ ನೋಡಿಕೊಂಡು ಬರಿರಿ ಅಂದರು ನಾವು ಇಲ್ಲ ಸರ್ ನಮ್ಮ ಮಾಷ್ಟ್ರು ಬ್ಯೆತ್ತಾರೆ ಅಂದಾಗ ಏನಾಗಲ್ಲ ಬರಿರೂ ನೋಡಿಕೊಂಡು ಅಂತ ಗದರಿದರು ನಾವು ಭಯಕ್ಕೆ ನೋಡಿಕೊಂಡೆ ಉತ್ತರಿಸಿದೆವು. ನಮ್ಮ ಮೇಷ್ಟ್ರು ಟ್ರ್ಯೆನಿಂಗ್ ಮುಗಿಸಿಕೊಂಡು ಬಂದು ಟೆಸ್ಟ್ ಪೇಪರ್ ನ ಕರೆಕ್ಷನ್ ಮಾಡುವಾಗ ಏನು ನೋಡಿಕೊಂಡ ಬರೆದರ ಅಂದರು ನಾವು ಹು ಅವರೇ ಹೇಳಿದ್ದರು ಎಂದಾಗ ಬೇಜಾರಾಗಿ ಆ ಪೇಪರ್ ನ ಕರೆಕ್ಷನ್ ಮಾಡುವುದನ್ನೆ ನಿಲ್ಲಸಿದರು ಅಂದರೆ ಕಾಪಿ ಮಾಡುವುದು ಸರಿಯಲ್ಲ ಅನ್ನುವುದನ್ನು ನಮಗೆ ಆ ಚಿಕ್ಕ ವಯಸ್ಸಿನಲ್ಲಿ ಆ ಪ್ರಜ್ಞೆಯನ್ನು ಅರಿವಾಗಿಸಿದ್ದರು.

ಇಂತಹ ಅದೆಷ್ಟುೂ ವಿಚಾರಗಳನ್ನು ನಮಗೆ ಕಲಿಸಿದ್ದ ಅವರು ಇಂದು ನಾವೆಲ್ಲ ಮಾತಿಗೆ ಕೂತಾಗ ಅವರನ್ನು ನೆನಪಿಸಿಕೊಳ್ಳದೆ ಇರಲಾರೆವು.
ನಾವು ಪ್ರ್ಯೆಮರಿ ಮುಗಿಸುವಷ್ಟರಲ್ಲಿ ಅವರು ನಮ್ಮ ಊರು ಶಾಲೆಯನ್ನು ಬಿಟ್ಟು ಬೇರೆ ಊರಿಗೆ ವಗಾ೯ವಣೆ ಆದರೂ ಆಮೇಲೆ ಬಂದವರೆಲ್ಲ ದಡ್ದರನೆಲ್ಲ ದಡ್ಡರಾಗಿ ಉಳಿಸಿದರು ಕಲಿತ ಅಕ್ಷರಗಳನೆಲ್ಲ ಮರೆಸಿದರು ಮಕ್ಕಳಲ್ಲಿದ್ದ ಬದ್ದತೆಯನ್ನು ಕಸಿದುಕೊಂಡರು.

ಬದ್ದತೆ ಶಿಸ್ತು ಕಲಿಕೆ ಕಲಿಸಿದ ಗುರುವಿಗೆ ನಮ್ಮ ಮತ್ತು ನಮ್ಮೊರಿನ ಮೆಚ್ಚಿನ ಗುರುವಿಗೆ ಎಂದು ಮರೆಯದ ವಸಂತಕುಮಾರ್ ಮೇಷ್ಟ್ರಿಗೆ ನಿಮ್ಮ ಚರಣಗಳಿಗೆ ನಮನ..

ಶಿಲ್ಪ ಎಂ

ಶಿಕ್ಷಕರು ನೈತಿಕತೆಯನ್ನು ಎತ್ತಿಹಿಡಿಯಬೇಕು: ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ

Public story


ತುಮಕೂರು: ನೈತಿಕ ಮೌಲ್ಯಗಳು ಕುಸಿಯುತ್ತಿರುವ ಕಾಲದಲ್ಲಿ ಗುರುವಿನ ಪಾತ್ರ ತುಂಬ ಮಹತ್ವದ್ದು. ಸಮಾಜದಲ್ಲಿ ನೈತಿಕತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯವು ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನ ಬಾಳನ್ನು ಮೇಣದಂತೆ ಕರಗಿಸಿ ಇನ್ನೊಬ್ಬರಿಗೆ ಬೆಳಕಾಗುವ ಮಹಾನ್ ಕಾಯಕ ಶಿಕ್ಷಕನದ್ದು ಎಂದರು.

ಶಿಕ್ಷಕನ ಜೀವನದ ಮಾರ್ಗವೇ ವಿದ್ಯಾರ್ಥಿಗಳಿಗೆ ಮಾದರಿ. ಆದ್ದರಿಂದ ಶಿಕ್ಷಕ ಮೊದಲು ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ಪರಮಹಂಸ, ವಿವೇಕಾನಂದ, ಠ್ಯಾಗೋರ್, ರಾಧಾಕೃಷ್ಣನ್, ಕುವೆಂಪು ಅವರಂತಹ ಮಹಾನ್ ಗುರುಗಳ ಆದರ್ಶಗಳನ್ನು ಪಾಲಿಸಬೇಕು ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಪ್ರೊ. ಮೀನಾಕ್ಷಿ ಖಂಡಿಮಠ, ಶಿಕ್ಷಕವೃತ್ತಿ ಕೇವಲ ಕಾಟಾಚಾರದ, ಹೊಟ್ಟೆಪಾಡಿನ ಉದ್ಯೋಗ ಆಗಬಾರದು; ಅದನ್ನೊಂದು ಸೇವೆ ಹಾಗೂ ತಪಸ್ಸು ಎಂದು ಭಾವಿಸಬೇಕು ಎಂದರು.

ಶಿಕ್ಷಕನಿಗೆ ಮೌಲ್ಯಗಳನ್ನು ಬಿತ್ತುವ ಹಾಗೂ ಸಮಾಜ ಕಟ್ಟುವ ಶ್ರೇಷ್ಠ ಅವಕಾಶ ಇದೆ. ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬೆಳೆಸುವ, ಉನ್ನತ ಬದುಕನ್ನು ಒದಗಿಸುವ ಮಹತ್ತರ ಹೊಣೆಗಾರಿಕೆ ಇದೆ ಎಂದರು.

ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ ಮಾತನಾಡಿ, ಶಿಕ್ಷೆ ಕೊಡುವವನು ಶಿಕ್ಷಕನಲ್ಲ; ಬದುಕಿನ ಶಿಕ್ಷಣ ಕೊಡುವವನೇ ನಿಜವಾದ ಶಿಕ್ಷಕ. ಶಿಕ್ಷಕ ವೃತ್ತಿಗೆ ಗೌರವ ತರುವಂಥ ಗುಣಗಳನ್ನು ಅಧ್ಯಾಪಕರು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

ಡಾ. ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪ್ರಾಧ್ಯಾಪಕ ಪ್ರೊ. ಪಿ. ಪರಮಶಿವಯ್ಯ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಡಾ. ಸುರೇಶ್ ಡಿ. ವಂದಿಸಿದರು.

ಭಾನುವಾರದ ಕವಿತೆ: ಗುರುಗಳು

ಶಿಕ್ಷಕರ ದಿನಾಚರಣೆ ಅಂಗವಾಗಿ ಕವಯತ್ರಿ ಡಾ. ರಜನಿ‌ ಅವರು ಗುರುಗಳ ಕಷ್ಟಸುಖವನ್ನು ಈ ಕವನದಲ್ಲಿ ತೆರೆದಿಟ್ಟಿದ್ದಾರೆ.

ಗುರುಗಳು ಆಗುವುದು ಸುಲಭವಲ್ಲ
ತಾವೂ ದಿನಾ ಓದಬೇಕು

ಏನೇ ದುಃಖ ದುಮ್ಮಾನ ಇದ್ದರೂ
ಮುಖದಲ್ಲಿ ನಗು ತುಂಬಿರಬೇಕು

ಅರಿಯಲಾಗದವರಿಗೂ
ಅರಿವು ಮೂಡಿಸಬೇಕು

ಅಡ್ಡದಾರಿ ಹಿಡಿದವರಿಗೆ
ಸರಿ ದಾರಿ ತೋರಿಸಬೇಕು

ಅದೇ ಅದೇ ಪಾಠವಿದ್ದರೂ
ಹೊಸತನವಿರಬೇಕು

ತುಂಟರನ್ನೂ
ಮಕ್ಕಳಂತೆ ಸಾವರಿಸಬೇಕು

ನಾಳೆಯ ಪಾಠವ ಇಂದೇ
ತಲೆಗೆ ಮೆತ್ತಿಕೊಳ್ಳಬೇಕು

ಮಕ್ಕಳ ಜೊತೆಗೆ ಅವರ
ಹೆತ್ತವರಿಗೂ ಕಿವಿಯಾಗಬೇಕು

ಬಿತ್ತಿದ ಅಕ್ಷರ ಮೊಳೆತು ಮರವಾಗಿ
ಹೃದಯ ತುಂಬಿ ಬರಬೇಕು

ನಮ್ಮ ಗುರುಗಳು ಎನ್ನಲು
ಸೈರಣೆ ಗುರುವಾಗಬೇಕು

ಸೈರಣೆ
ಸುಲಭದ್ದಲ್ಲ.

ಇದನ್ನು ತಡೆಯಲು ಯಾರು ಬರಬೇಕಿದೆ, ಅಯೋಧ್ಯೆಯಲ್ಲಿ ಇರುವ ರಾಮನೇ?

0

ಶಿಲ್ಪಾ ಎಂ


ಮೊನ್ನೆ ಮೊನ್ನೆ ಸ್ವತಂತ್ರ ದಿನವನ್ನು ಆಚರಿಸಿದ ನಾವು ತಲೆ ತಗ್ಗಿಸಬೇಕಾದ ವಿಚಾರ ನೆಡೆದು ಹೋಗಿದೆ. ಅದು, ಸಾಮೂಹಿಕ ಅತ್ಯಾಚಾರ.

ಪದೇ ಪದೇ ಆಕ್ರೋಶಕ್ಕೆ ಕಾರಣವಾಗುವ ಪದೇ ಪದೇ ಚಚೆ೯ಗೆ ಸಿಗುವ ಮಾಮೂಲಿನ ವಿಚಾರವಾಗಿದೆ.

ಇದು ಮಾಮೂಲಿನ ವಿಚಾರವಾಗಿರುವುದೇ ವಿಷಾದ ಅನ್ನಿಸುತ್ತಿದೆ.

ಹೆಣ್ಣಿನ ಮೇಲಾದ ಅತ್ಯಚಾರ ಚಚೆ೯ಗೆ ಬಂದಾಗೆಲ್ಲ ಏನಾಗುತ್ತದೆ ಸುದ್ದಿವಾಹಿನಿಗಳು ಒಂದು ಎರಡು ದಿನ ಅಯ್ಯೋ ಪಾಪ ಎನ್ನುವರೇನೂ ,ಆರೋಪಿಗಳಿಗೆ ಉಗಿಯುವರೇನೂ, ಜನಸಮಾನ್ಯರು ಮನದಲ್ಲಿ ಆಕ್ರೋಶ ವ್ಯಕ್ತಪಡಿಸಿ ಮರೆತು ಬಿಡುವರೇನೂ ,ರಾಜಕಾರಣಿಗಳು ಮನಬಂದಂತೆ ಮಾತಾಡುವವರೇನೂ ,ಕಾನೂನು ಆರೋಪಿಗಳನ್ನು ಬಂಧಿಸಿಬಿಡಿವರೇನೂ.

ಇದರ ಮೇಲೆ ಇನ್ನೇನು ಆಗಿದೆ ಮತ್ತೆ ಮತ್ತೆ ಅಲ್ಲಿ ಇಲ್ಲಿ ಅತ್ಯಚಾರಗಳಾಗುತ್ತಲೇ ಇವೆ.

ಹೀಗಾಗಿ ಇದು ಮಾಮೂಲಿನ ವಿಚಾರವಾಗಿದೆ. ಅತ್ಯಾಚಾರದ ವಿಕೃತ ಯಾರಿಗೂ ಅರ್ಥವಾಗುತ್ತಿಲ್ಲವ ಎಂಬುದು ಪ್ರಶ್ನೇ ಆಗಿದೆ.

ಇದನ್ನು ತಡೆಯಲು ಯಾರು ಬರಬೇಕಿದೆ ಅಯೋಧ್ಯೆಯಲ್ಲಿ ಇರುವ ರಾಮನೇ? ಇಲ್ಲ ಮಧ್ಯೆ ರಾತ್ರಿ ಒಬ್ಬಳು ಹೆಣ್ಣು ಮಗಳು ಧ್ಯೆಯ೯ವಾಗಿ ಓಡಾಡಲು ಸ್ವತಂತ್ರ ವಿದೆಯೆಂದು ತಿಳಿಸಲು ಮತ್ತೆ ಸ್ವತಂತ್ರಿಸಲು ಗಾಂಧೀಜಿಯೆ?

ಅತ್ಯಚಾರಗಳಾದಗಲೆಲ್ಲ ಹೆಣ್ಣು ಪ್ರಶ್ನೆಗೆ ಬರುತ್ತಿದ್ದಾಳೆ ಇವಳು ಏಕೆ ಅಷ್ಟೂತ್ತಲಿ ಅಲ್ಲಿ ಹೋಗಿದ್ದಳು ? ೭ ಗಂಟೆಯ ಒಳಗೆ ಮನೆ ಸೇರಬೇಕಿರುವ ಹೆಣ್ಣು ರಾತ್ರಿ ಅಲ್ಲಿ ಏನು ಮಾಡುತ್ತಿದ್ದಳು?

ಹೌದು ಆಕೆ ಅಲ್ಲೆ ಏಕೆ ಹೋಗಿದ್ದಳು ? ಅವಳು ಮನುಷ್ಯಳಲ್ಲವೇ ಅವಳಿಗೆ ಒಂದು ಏಕಾಂತದಲ್ಲಿ ತನ್ನ ಗೆಳೆಯನೊಟ್ಟಿಗೆ ಓಡಾಡುವ ಹಕ್ಕಿಲ್ಲವೇ?

ಅವಳು ಅಲ್ಲಿ ಕೆಲಸವಿಲ್ಲದೆ ಗೆಳೆಯನೊಟ್ಟಿಗೆ ಹೋಗಿದ್ದಕ್ಕೆ ಅತ್ಯಾಚಾರ ವಾಯಿತು. ಅಲ್ಲಿ ಹೋಗಿದ್ದು ಅವಳದ್ದೆ ಅಪರಾಧವಿರಬಹುದು. ಇದು ಬೆಳಕಿಗೆ ಬಂದ ವಿಕೃತಿ ಹಾಗಾಗಿ ಜನ ಆಕೆಯನ್ನು ಪ್ರಶ್ನಿಸುತ್ತಿದ್ದಾರೆ.

ಆದರೆ ಬೆಳಕಿಗೆ ಬಾರದ ಬಂದರು ಮುಚ್ಚಿಹೋಗುವ ಪ್ರಕರಣಗಳ ಬಗ್ಗೆ ಜನರ ತಕರಾರು ಇಲ್ಲ ಏಕೆ ?

ಸಾಮಾಜಿಕ ಜಾಲಾತಾಣಗಳಲ್ಲಿ ಹೆಣ್ಣಿನ ಬಗ್ಗೆ ಪ್ರಶ್ನೆ ಎದ್ದಿವೆ. ಇದು ನಿಜವಾಗಲೂ ದುರಂತ.

ರಾತ್ರಿ ಪಾಳಯ ಮುಗಿಸಿ ಮನೆಗೆ ಬರುವ ಅದೆಷ್ಟು ಹೆಣ್ಣುಮಕ್ಕಳಿದ್ದಾರೆ ? ಇವರಿಗೆಲ್ಲ‌ ಇವರ ಉತ್ತರ ಏನು. ಹಾಗಾದರೆ ರಾತ್ರಿ ಪಾಳಿ ಬೇಡವೇ? ಹಗಲು ಸಮಯದಲ್ಲಿ ಓಡಾಡುವುದೇ ಕಷ್ಟವಾಗಿರುವ ಈ ಸಮಾಜದಲ್ಲಿ ಹೆಣ್ಣಿಗೆ ನಿಭ೯ಯತೆ ಎಲ್ಲಿದೆ.

ಯೋಚಿಸಿ ಹೆಣ್ಣು ಎಲ್ಲಿಗಾದರೂ ಎಷ್ಟು ಹೊತ್ತಾಲ್ಲಾದರು ಒಂಟಿಯಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಇದಕ್ಕೆ ಕಾರಣ ಹೆಣ್ಣನ್ನು ಪ್ರಶ್ನೆಗೆ ತರುವುವರೇ.

ಅವಳ ಬಟ್ಟೆಯನ್ನು, ಅವಳ ಸಮಯವನ್ನು ಪ್ರಶ್ನಿಸುವುದಾದರೆ ಪುರುಷನಿಗೆ ನಿಮ್ಮ ಪ್ರಶ್ನೆಗಳೇನು?

ಅತ್ಯಾಚಾರ ನಿಲ್ಲಬೇಕೆಂದರೆ ಹೆಣ್ಣು ಮನೆಯಲ್ಲಿ ಬಂಧಿಯಾಗಬೇಕು. ಇದೇ ಮಾಗ೯ವಾದರೆ , ಹೆಣ್ಣು ಗಂಡು ಸಮಾನರೆಂದು ಸಾರಿ ಸಾರಿ ಹೇಳಿದ ಸಾವಿತ್ರಿ ಬಾ ಪುಲೆ ,ಅಂಬೇಡ್ಕರ್ ,ಗಾಂಧೀಜಿ, ಇವರೆಲ್ಲರ ಹೋರಾಟಕ್ಕೆ ಬೆಲೆ ಎಲ್ಲಿದೆ.

ನಾವು ಯೋಚಿಸಬೇಕಿದೆ ಪ್ರತಿ ಮನೆಯಲ್ಲಿ ಹೆಣ್ಣನ್ನು ಬೆಳೆಸುವಷ್ಟು ಸೂಕ್ಷ್ಮವಾಗಿ ಗಂಡನ್ನು ಬೆಳೆಸಬೇಕಿದೆ. ಪದೇ ಪದೇ ಅತ್ಯಾಚಾರಗಳಾಗುತ್ತಿವೆ. ಈ ವಿಷಯಕ್ಕೆ ಯಾರು ಕಾರಣರು? ಕಾನೂನು ,ಸಕಾ೯ರಗಳು ,ಅಲ್ಲದೇ ಸಮಾಜ ಕೂಡ?

ಗಂಡು ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಸಮಾಜ ಸೋತಿದೆ ಇದನ್ನು ಒಪ್ಪಿಕೊಳ್ಳಬೇಕಿದೆ.

ಕಾರ್ಮಿಕರ ಕಿಟ್ ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚುತ್ತಿರುವ ಬೆಮಲ್ ಕಾಂತರಾಜು

Public story


ತುರುವೇಕೆರೆ: ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕುಗಳ ಕಾರ್ಮಿಕರಿಗೆ ಸರ್ಕಾರ ನೀಡಿದ 2 ಸಾವಿರ ಕಿಟ್ ಗಳನ್ನು ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಸ್ವಾರ್ಥ ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ವಿತರಣೆ ಮಾಡುತ್ತಿದ್ದಾರೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಬೆಮೆಲ್ ಕಾಂತರಾಜು ಜಿಲ್ಲೆಯ 10 ತಾಲೂಕಿನಲ್ಲಿ ಮತ ಪಡೆದು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಆದರೆ ತುರುವೇಕೆರೆ ಕ್ಷೇತ್ರದಲ್ಲಿನ ಜನರಿಗೆ ಮಾತ್ರ ಸರ್ಕಾರ ನೀಡಿರುವ ಕಿಟ್ ಅನ್ನು ನೀಡುತ್ತಿದ್ದು, ಇತರೆ ತಾಲ್ಲೂಕಿನ ಜನರಿಗೆ ಅನ್ಯಾಯ ಮಾಡುತ್ತಿದ್ದು ಇದು ಕಾನೂನು ಬಾಹಿರವಾಗಿದೆ ಎಂದರು.

ಶ್ರಮಿಕರಿಗೆ, ಕಾರ್ಮಿಕರಿಗೆ ನೀಡುವುದು ಸರ್ಕಾರದ ಉದ್ದೇಶವೇ ವಿಫಲವಾಗಿದೆ. ವಿಧಾನ ಪರಿಷತ್ ಸದಸ್ಯರು ತನ್ನ ಸ್ವಾರ್ಥಕ್ಕಾಗಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತಿದ್ದಾರೆ. ಕಾರ್ಮಿಕರಿಗೆ ನೀಡುತ್ತಿಲ್ಲ. ಆದ್ದರಿಂದ ಸದ್ಯದಲ್ಲಿಯೇ ಲೇಬರ್ ಕಮಿಷನರ್ ಅಕ್ರಂಪಾಷ ಅವರನ್ನು ಖುದ್ದು ಬೇಟಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡುವಂತೆ ಮನವಿ ಮಾಡಲಾಗುವುದು‌ಎಂದರು.

ಜಿಲ್ಲಾಧಿಕಾರಿಗಳು ಕೂಡ ಈ ಬಗ್ಗೆ ವಿಧಾನ ಪರಿಷತ್ ಅಧ್ಯಕ್ಷರಿಗೆ ಪತ್ರ ಬರೆದು ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಇದುವರೆವಿಗೂ ದೇಶದ ಪ್ರಜೆಗಳಿಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಅಲ್ಲದೆ ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗಿದ್ದರೂ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಇವರೊಬ್ಬ ಪ್ರಪಂಚದ ದೊಡ್ಡ ಸುಳ್ಳುಗಾರನೆಂದು ಟೀಕಿಸಿದರು.

ಗೋಷ್ಠಿಯಲ್ಲಿ ಬಾಣಸಂದ್ರ ಗ್ರಾ.ಪಂ ಅಧ್ಯಕ್ಷ ಆನಂದ್ಮರಿಯಾ, ಮುಖಂಡರಾದ ವೆಂಕಟಾಪುರ ಯೋಗೀಶ್, ಬಾಣಸಂದ್ರ ರಮೇಶ್, ರೇಣಕಪ್ಪ, ಕಾಂತರಾಜು ದಲಿತ ಮುಖಂಡರಾದ ತಿಮ್ಮೇಶ್, ಹನುಮಂತಯ್ಯ, ರಮೇಶ್, ಗಿರೀಶ್, ರಾಘವೇಂದ್ರ ಇತರರು ಇದ್ದರು.

ನೆಲಮಂಗಲ: ಕೊಳೆತು ನಾರುತಿದೆ ಬೆನಕ ಲೇಔಟ್

Public story


ನೆಲಮಂಗಲ: ಇಲ್ಲಿನ ಪುರಸಭೆಗೆ ಸೇರಿರುವ ಬೆನಕ ಲೇಔಟ್ ಕೊಳೆತು ನಾರುತ್ತಿದ್ದರೂ ಕೇಳುವವರೇ ಇಲ್ಲವಾಗಿದ್ದಾರೆ.

ಕೊರೊನಾ ಜತೆ ಮಳೆಗಾಲದ ಡೆಂಗಿ,‌ಚಿಕುನ್ ಗುನ್ಯಾ ಜ್ವರ ಮತ್ತಿತರ ಸಾಂಕ್ರಾಮಿಕ ರೋಗಗಳ ಕಾರಣ ನಗರ ಸ್ವಚ್ಛತೆ ಕಡೆಗೆ ಗಮನ ನೀಡುವಂತೆ ಸರ್ಕಾರದ ಸೂಚನೆ ಇದ್ದರೂ ಇಲ್ಲಿನ ಪುರಸಭೆ ಅಧಿಕಾರಿಗಳು ತಾತ್ಸಾರ ತೋರಿದಂತೆ ಕಾಣುತ್ತಿದೆ.

ಬಡಾವಣೆಯ ಚರಂಡಿಗಳು ಮಳೆ ನೀರು ನಿಂತು ಗಬ್ಬು ವಾಸನೆ ಹೊಡೆಯುತ್ತಿವೆ. ಸೊಳ್ಳೆಗಳು ತಾಂಡವವಾಡುತ್ತಿವೆ. ಈ ಬಗ್ಗೆ ಗೊತ್ತಿದ್ದು ಗೊತ್ತಿಲ್ಲದಂತೆ ಅಡಳಿತ ವರ್ತಿಸುತ್ತಿದೆ.

ಬಡಾವಣೆಯಲ್ಲಿ ಸೊಳ್ಳೆಗಳ ಕಾಟಕ್ಕೆ ಜನರು ಬೇಸತ್ತಿದ್ದಾರೆ. ರೋಗ ರುಜಿನಗಳು ಹೆಚ್ಚಾಗುತ್ತಿವೆ. ಪುರಸಭೆ ಮುಖ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಸ್ವಚ್ಛ ನೆಲಮಂಗಳ ಯೋಜನೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆಯಾದರೂ ಇಂಥ ನಿರ್ಲಕ್ಷ್ಯಗಳಿಂದಾಗಿ ಪುರಸಭೆಗೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.

ಭಾನುವಾರದ ಕವಿತೆ: ಆ ಬೆಟ್ಟದಲ್ಲಿ

0

(ಕವಿ ಡಾ.ಸಿದ್ದಲಿಂಗಯ್ಯ ಅವರ ಕವನ ಪ್ರೇರಿತ)

ಧೀಮತಿ


ಆ ಬೆಟ್ಟದಲ್ಲಿ..
ಹಸಿರು ಬೆಟ್ಟದ ತಪ್ಪಲಲ್ಲಿ

ಸುಳಿದಾಡಬೇಡ ಗಳತಿ..
ಮುತ್ತುವುವು ತೋಳದ ಹಿಂಡು

ಇಳಿಯಬೇಡ ನೀ ಕಣಿವೆಗೆ..
ಕಾದಿಹರು ಕಳ್ಳು ಕುಡಿದು

ಮಲ್ಲಿಗೆಯ ನಿನ್ನ ಮೈಯ..
ಪರಚುವವರು ಇರಿದು ಇರಿದು

ಹೂಮುತ್ತಿಗಾಗಿ ಕಾದು..
ಸಂಜೆ ಬೆಳಕಲ್ಲಿ

ಅಹಾರವಾಗಬೇಡ..
ಹಸಿದ ನಾಯಿಗಳಿಗೆ

ನೀ ನೆಡಲು ಪ್ರೀತಿ ಬಳ್ಳಿ..
ಬಿಡುವರೇನೇ ರಕ್ತ ರಕ್ಕಸರು

ಕಾದು ಸವಿ ಮಾತಿಗೆ..
ಬಲಿಯಾಗಬೇಡ ಬಲಿತ ಹದ್ದುಗಳಿಗೆ

ಉಲ್ಲಾಸವನ್ನು ತಂದ ಸಂಜೆಗೆ
ಇಟ್ಟರಲ್ಲೇ ಬೆಂಕಿ ಕೊಳ್ಳಿ..

ಈ ನಿನ್ನ ಕೆನ್ನೆ ಕೆಂಪ
ನೋಡಲು ಸಂಜೆಗೆಂಪಲ್ಲಿ…..

ಆಯಿತಲ್ಲೆ ದುರ್ಗೆಗೆ
ರಕ್ತದ ಓಕುಳಿ…

ಚಂಡಾಡಿ ರಕ್ಕಸರಮುಂಡ..
ಚಾಮುಂಡಿ ಕೈಯಲ್ಲಿ

ಧೀಮತಿ