Friday, July 26, 2024
Google search engine
HomeUncategorizedಭಾನುವಾರದ ಕವಿತೆ: ...

ಭಾನುವಾರದ ಕವಿತೆ: ಆ ಬೆಟ್ಟದಲ್ಲಿ

(ಕವಿ ಡಾ.ಸಿದ್ದಲಿಂಗಯ್ಯ ಅವರ ಕವನ ಪ್ರೇರಿತ)

ಧೀಮತಿ


ಆ ಬೆಟ್ಟದಲ್ಲಿ..
ಹಸಿರು ಬೆಟ್ಟದ ತಪ್ಪಲಲ್ಲಿ

ಸುಳಿದಾಡಬೇಡ ಗಳತಿ..
ಮುತ್ತುವುವು ತೋಳದ ಹಿಂಡು

ಇಳಿಯಬೇಡ ನೀ ಕಣಿವೆಗೆ..
ಕಾದಿಹರು ಕಳ್ಳು ಕುಡಿದು

ಮಲ್ಲಿಗೆಯ ನಿನ್ನ ಮೈಯ..
ಪರಚುವವರು ಇರಿದು ಇರಿದು

ಹೂಮುತ್ತಿಗಾಗಿ ಕಾದು..
ಸಂಜೆ ಬೆಳಕಲ್ಲಿ

ಅಹಾರವಾಗಬೇಡ..
ಹಸಿದ ನಾಯಿಗಳಿಗೆ

ನೀ ನೆಡಲು ಪ್ರೀತಿ ಬಳ್ಳಿ..
ಬಿಡುವರೇನೇ ರಕ್ತ ರಕ್ಕಸರು

ಕಾದು ಸವಿ ಮಾತಿಗೆ..
ಬಲಿಯಾಗಬೇಡ ಬಲಿತ ಹದ್ದುಗಳಿಗೆ

ಉಲ್ಲಾಸವನ್ನು ತಂದ ಸಂಜೆಗೆ
ಇಟ್ಟರಲ್ಲೇ ಬೆಂಕಿ ಕೊಳ್ಳಿ..

ಈ ನಿನ್ನ ಕೆನ್ನೆ ಕೆಂಪ
ನೋಡಲು ಸಂಜೆಗೆಂಪಲ್ಲಿ…..

ಆಯಿತಲ್ಲೆ ದುರ್ಗೆಗೆ
ರಕ್ತದ ಓಕುಳಿ…

ಚಂಡಾಡಿ ರಕ್ಕಸರಮುಂಡ..
ಚಾಮುಂಡಿ ಕೈಯಲ್ಲಿ

ಧೀಮತಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?