Friday, March 13, 2026
Google search engine
Home Blog Page 54

ಗ್ರಾಮಾಂತರದಲ್ಲಿ ಬಿಜೆಪಿ ಗೆಲುವು: ಎಸ್ ಪಿಎಂ

0

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಂಸದ ಎಸ್ .ಪಿ. ಮುದ್ದಹನುಮೇಗೌಡ ವಿಸ್ವಾಸ ವ್ಯಕ್ತಪಡಿಸಿದರು.

ಊರ್ಡಿಗೆರೆ ಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.


2008ರಿಂದ 2018ರವರೆಗೆ ಅವರು ಮಾಡಿರುವ ಅಭಿವೃದ್ದಿ ಕೆಲಸಗಳು, ಮತದಾರರ ಮನದಲ್ಲಿ ಇರುವಂತೆ ಮಾಡಿವೆ.ಇಂತಹವರು ಮತ್ತೊಮ್ಮೆ ಶಾಸಕರಾಗಬೇಕು.‌ ಈ ನಿಟ್ಟಿನಲ್ಲಿ ಮತದಾರರು ಮುಂದಾಗುವಂತೆ ಕರೆ ನೀಡಿದರು.

ಸುರೇಶಗೌಡರಂಥ ಕೆಲಸಗಾರರನ್ನು ನಾನು ನೋಡಿಯೇ ಇಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಜಗಳವಾಡಲೂ ಸಿದ್ಧ. ಈ ಸಲ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ವಿರೋಧ ಪಕ್ಷಗಳು ಏನಾದ್ರು ಮಾತಾಡಲಿ. ಗ್ರಾಮಾಂತರದಲ್ಲಿ ಬಿಜೆಪಿಯ ಅಲೆ ಇದೆ. ಈ ಸಲ ಸುರೇಶಗೌಡ ರ ಗೆಲುವು ಖಚಿತ. ಇದೇ ಉತ್ಸಾಹವನ್ನು ಕಾರ್ಯಕರ್ತರು ಉಳಿಸಿಕೊಳ್ಳಬೇಕು ಎಂದರು.

ಭರ್ಜರಿ ಬಾಡೂಟ ಮಾಡಲಾಗಿತ್ತು. ಸುಮಾರು ಹನ್ನೆರಡು ಸಾವಿರ ಜನರು ಊಟ ಮಾಡಿದರು.

ಊಟ ತುಂಬಾ ಚೆನ್ನಾಗಿತ್ತು. ಸುರೇಶಗೌಡರು ಇದ್ದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಾಗಲಿದೆ. ಊರೂರು ಪ್ರಚಾರ ಮಾಡುತ್ತಿದ್ದು, ಇವರು ಹೋದಲೆಲ್ಲ ಯುವಕರು, ಯುವತಿಯರು, ವಿದ್ಯಾವಂತರು ಹೆಚ್ಚು ಸೇರುತ್ತಿದ್ದಾರೆ. ಸುರೇಶಗೌಡರು ಈ ಸಲ ಗೆದ್ದರೆ ಊರ್ಡಿಗೆರೆಗೆ ಅಭಿವೃದ್ಧಿಯ ಹೊಳೆಯೇ ಹರಿಯಲಿದೆ ಎಂದು ಬಿಜೆಪಿ ಕಾರ್ಯಕರ್ತ ನಾಗೇಶ್ ತಿಳಿಸಿದರು.


ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ,ಉರ್ಡಿಗೆರೆ ಗ್ರಾಮವನ್ನು ಕೇಂದ್ರ ಸ್ಥಾನವಾಗಿಟ್ಟು ಕೊಂಡು ಸುರೇಶಗೌಡ ಅವರು ಎಲ್ಲಾ ಕಡೆಗೂ ಉತ್ತಮ ಸಂಪರ್ಕ ರಸ್ತೆಗಳನ್ನು ಮಾಡಿಸಿದ್ದಾರೆ. ಅವರು ಮಾಡಿರುವ ರಸ್ತೆಗಳು ಹತ್ತಾರು ವರ್ಷ ಕಳೆದರೂ ಒಂದು ಗುಂಡಿ ಬಿದ್ದಿಲ್ಲ.ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಉರ್ಡಿಗೆರೆ ಹೋಬಳಿಗೆ 19639 ಟಿ.ಸಿ, ದೇವಾಲಯ ಗಳು, 18 ಸಾವಿರ ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.ಇಂತಹ ವ್ಯಕ್ತಿ ಮತ್ತೊಮ್ಮೆ ಶಾಸಕರಾಗಬೇಕೆಂಬುದು ಕ್ಷೇತ್ರದ ಜನರ ಬಯಕೆಯಾಗಿದೆ ಎಂದರು.

ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿ, ರೈತರಿಗೆ ನೆರವಾಗುವುದೇ ನಿಜವಾದ ಅಭಿವೃದ್ದಿ,ಶಾಲಾ, ಕಾಲೇಜು, ರಸ್ತೆಗಳು,ವಿದ್ಯುತ್ ಸಂಪರ್ಕ,ಆಸ್ಪತ್ರೆಗಳು ಹೀಗೆ ಹತ್ತು ಹಲವು ಅಭಿವೃದ್ದಿ ಕಾರ್ಯಗಳನ್ನು ನನ್ನ 10 ವರ್ಷದ ಶಾಸಕನ ಅವಧಿಯಲ್ಲಿ ಮಾಡಲಾಗಿದೆ.ಬಡ ಮಕ್ಕಳು ಓದುವ ಸರಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಷ ನೀಡಿ, ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲಾಗಿದೆ.ಸುವರ್ಣ ಗ್ರಾಮದ ಮೂಲ ಹಲವಾರು ಗ್ರಾಮಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ನನ್ನ ಕಾಲದಲ್ಲಿ ಅಭಿವೃದ್ದಿಗೆ ಮುಂದಾಗಿದ್ದ ಬಯಲು ಆಂಜನೇಯ ಸ್ವಾಮಿ ಇಂದಿಗೂ ನೆನೆಗುದಿಗೆ ಬಿದ್ದಿದೆ.ಭವಿಷ್ಯ ನಾನೇ ಶಾಸಕನಾಗಿ ಅಭಿವೃದ್ದಿ ಪಡಿಸಲಿ ಎಂಬುದು ಭಗವಂತನ ಇಚ್ಚೆಯಾಗಿರಬೇಕು.ನಿಮೆಲ್ಲರ ಪ್ರೋತ್ಸಾಹ, ಆಶೀರ್ವಾದ ಇದೇ ರೀತಿ ಇದ್ದರೆ, ನಾನು ಶಾಸಕನಾಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದರು.


ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶಂಕರಣ್ಣ, ರಘುನಾಥ ವಹಿಸಿದ್ದರು.ವೇದಿಕೆಯಲ್ಲಿ ನರಸಿಂಹಮೂರ್ತಿ,ವೈ.ಟಿ.ನಾಗರಾಜು, ರಾಜುಗೌಡ, ಓಂ ನಮೋ ನಾರಾಯಣ, ರಂಗುನಾಥಪ್ಪ, ಸುಮಿತ್ರಾ ದೇವಿ, ಕೋಡಿಹಳ್ಳಿ ಆಂದಾನಪ್ಪ, ಶಾಂತಕುಮಾರ್,ಗಂಗಾಂಜನೇಯ್ಯ, ಕೆಂಪಸಿದ್ದಯ್ಯ ಸೇರಿದಂತೆ ಎಲ್ಲಾ ಜಿ.ಪಂ, ತಾ.ಪಂ ಮಾಜಿ ಸದಸ್ಯರು, ಗ್ರಾಅವಪಂಚಾಯಿತಿಗಳ ಸದಸ್ಯರುಗಳು ಉಪಸ್ಥಿತರಿದ್ದರು.

ಮಣಿಗಯ್ಯ ತೆರೆದಿಟ್ಟ ಮಹಿಳಾ ಕಥನ: ಮೆಚ್ಚುಗೆ

ತುಮಕೂರು: ಸಂಶೋಧನಾ ಪ್ರಕಾಶನ ತುಮಕೂರು ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ತುಮಕೂರು ಇವರ ಸಹಯೋಗದಲ್ಲಿ ಪ್ರೊ.ಎಲ್ ಮಣಿಗಯ್ಯ ನವರ ಭಾರತದಲ್ಲಿ ಮಹಿಳಾ ಸಬಲೀಕರಣ ಸಮಸ್ಯೆಗಳು ಮತ್ತು ಸವಾಲುಗಳು ಕೃತಿ ಬಿಡುಗಡೆ ಸಮಾರಂಭವನ್ನು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು .

ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಗಳಾದ ಡಾ ವಿದ್ಯಾಕುಮಾರಿ ರವರು ಮಾತನಾಡಿ ಭಾರತದಲ್ಲಿ ಮಹಿಳಾ ಸಬಲೀಕರಣ ಎಂದರೆ ಕ್ಲೀಷ್ಟೀಯ ಪದ ಅನ್ನಿಸುತ್ತಿದೆ. ಯಾಕೆಂದರೆ ಮಹಿಳೆ ಇಂದಿಗೂ ಅಬಲೆಯಾಗಿಯೇ ಉಳಿದಿದ್ದಾರೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದರೂ ಶೇಖಡವಾರು ಪ್ರಮಾಡ ಕಡಿಮೆ ಇದೆ ಎಂದರು.

ಉನ್ನತ ಶಿಕ್ಷಣದಿಂದ ಇಂದಿಗೂ ವಂಚಿತರಾಗುತ್ತಿದ್ದಾರೆ ಸಮಾನ ಅವಕಾಶಗಳು ಇದ್ದರು ಬದುಕಿನಲ್ಲಿ ಸ್ಥಾನಮಾನಗಳ ವೈರುದ್ಯಗಳು ಮತ್ತು ಸಮಸ್ಯೆಗಳನ್ನು ಎದುರಿಸಿಕೊಂಡೆ ಘನತೆ ಗೌರವ ಸಾಧಿಸುತ್ತಿದ್ದಾಳೆ ಎಂದರು.

ಸಮಾಜದಲ್ಲಿ ನಿರಂತರ ಶ್ರಮ ಜೀವಿಯಾದ ಗ್ರಾಮೀಣ ಮಹಿಳೆಗೆ ನಿಜವಾದ ಸ್ವಾತಂತ್ರ್ಯ ನೀಡುವುದರ ಮೂಲಕ ಗೌರವ ನೀಡಬೇಕು. ಅದು ಆದರ್ಶ ಸಮಾಜವಾಗಿ ಕಾಣುತ್ತದೆ. ಮಹಿಳಾ ಅಂತರರಾಷ್ಟ್ರೀಯ ದಿನಾಚರಣೆಗೆ ಅರ್ಥ ಕಲ್ಪಿಸಿ ಸಮ ಸಮಾಜ ನಿರ್ಮಾಣವಾಗುತ್ತದೆ. ಇದಕ್ಕೆ ಪೂರ್ವಕವಾಗಿ ಮಣಿಗಯ್ಯ ನವರ ಈ ಕೃತಿ ಹಲವು ಅಯಾಮಗಳಲ್ಲಿ ಮಹಿಳೆಗೆ ಮಾರ್ಗಸೂಚಿಯಾಗುತ್ತದೆ ಎಂದರು.

ಬೆಂಗಳೂರು ನಗರ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಪ್ರೊ.ನರಸಿಂಹಮೂರ್ತಿ ರವರು ಗ್ರಂಥ ಬಿಡುಗಡೆ ಮಾಡಿ ಅಧುನಿಕ ಕಾಲಘಟ್ಟದಲ್ಲಿ ಕೃತಿ ಬರೆದು ಪ್ರಕಟಿಸುವುದು ಎದೆಗಾರಿಕೆ ವಿಷಯ ಎಂದರೆ ತಪ್ಪಗಲಾರದು. ಅದರಲ್ಲೂ ಮಹಿಳೆಯ ಸಮಸ್ಯೆಗಳು ಕುರಿತು ಅಕರ ಗ್ರಂಥ ರಚಿಸಿರುವುದು ಮಹಿಳಾ ಸಮುದಾಯಕ್ಕೆ ಕೊಟ್ಟ ನೈಜ ಕೊಡುಗೆ ಎಂದು ಬಣ್ಣಿಸಿದರು .

.ಕೃತಿ ಕುರಿತು ಮಾತನಾಡಿದ ಡಾ ರವಿಕುಮಾರ್ ನೀಹರವರು ಮಣಿಗಯ್ಯ ರವರ ಕೃತಿ ಹಲವಾರು ವಿದ್ಯಮಾನಗಳಿಗೆ ಮತ್ತು ಕ್ಷೇತ್ರಗಳಿಗೆ ಉತ್ತರವಾಗಿ ನಿಲುಕ ಬಲ್ಲದು .ಹೆಣ್ಣು ಸಮಾಜಿಕ ವ್ಯವಸ್ಥೆಯೊಳಗೆ ತನಗರಿವಿಲ್ಲದೆ ಶೋಷಣೆಗೆ ಒಳಗಾಗುತ್ತಿದ್ದಾರೆ 75 ರ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಸಂಬ್ರಮಿಸಬೇಕೋ ಅಥಾವ ಅತ್ಯಾಚರದ ವಿಷಯಗಳಲ್ಲಿ ಸಂಕಟದ ಭಾಗವಾಗಬೇಕೋ ಎಂಬ ಕಳವಳ ವ್ಯಕ್ತಪಡಿಸುವ ಸ್ಥಿತಿಯಲ್ಲಿ ನಾವಿದ್ದೇವೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ ರಚನ ಲಕ್ಷ್ಮೀ ಕಾಂತ್ ರವರು ಮಾತನಾಡುತ್ತಾ ಈ ದೇಶದಲ್ಲಿ ಮಹಿಳೆಗೆ ಪೂಜ್ಯ ಸ್ಥಾನ ನೀಡಲಾಗಿದೆ ಎಂದು ನಂಬಿಸಿ ಶೋಷಣೆ ಮಾಡುತ್ತಿದ್ದಾರೆ ಭ್ರೂಣ ಹತ್ಯ ವರದಕ್ಷಿಣೆ ಹತ್ಯೆ ಲಿಂಗ ತಾರತಮ್ಯ ಮರ್ಯಾದ ಹತ್ಯಗಳೇ ಸಾಕ್ಷಿಯಾಗಿವೆ ಎಂದರು.

ಹೆಣ್ಣು ಜಗದ ಜೀವ ಕಾರಣ್ಯದ ವಸ್ತು ಈ ಮಾತು ಅತಿಶಯೋಕ್ತಿಯಲ್ಲ ಎಂದು ಸಮಾನತೆ ಎಂಬುದು ಮಹಿಳೆ ಪುರಷರ ನಡುವೆ ಇದರು ಅಂತರದ ಮೌಲ್ಯ ಇಂದು ನಮ್ಮ ಮುಂದೆ ಇದೆ ಎಂದು ಸಾಹಿತಿ ಮ.ಲ.ನ ಮೂರ್ತಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ ಸಿ ಜಿ ಲಕ್ಷ್ಮೀಪತಿ ರವರು ಕೃತಿ ಕುರಿತು ಮಾತನಾಡಿ, ಗುರು ಶಿಷ್ಯ ಪರಂಪರೆಯಲ್ಲಿ ನಮ್ಮ ಗುರುಗಳಾದ ಪ್ರೊ ಮಣಿಗಯ್ಯ ನವರ ಕೃತಿ. ಅವರ ಶಿಷ್ಯನಾಗಿ ಮಾತನಾಡಿವ ಭಾಗ್ಯ ಸಿಕ್ಕಿರುವುದು ನನ್ನ ಭಾಗ್ಯ. ಇಂದಿಗೂ ಮಹಿಳೆಗೆ ಬಡತನ ಕಾರಣಕ್ಕೆ ಕಾರ್ಮಿಕರ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಈ ಎಲ್ಲ ಮಾಹಿತಿ ಕೃತಿಯಲ್ಲಿ ಅಡಗಿದೆ ಎಂದರು.

ಜನಪದ ಗಾಯಕರಾದ ದೊಡ್ಡಕ್ಕರವರನ್ನು ಸನ್ಮಾನಿಸಿದರು.ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ.ಕೆ.ವಿ ಕೃಷ್ಣ ಮೂರ್ತಿ ಸಮಾಜಶಾಸ್ತ್ರಜ್ಞರು ವಹಿಸಿದ್ದರು.ಡಾ ಮುಕುಂದ ಎಲ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಡಾ ಹನುಮಂತರಾಯಪ್ಪ ಪಾಲಸಂದ್ರ ಸ್ವಾಗತಿಸಿ ಸುಲೋಚನರವರು ನಿರೂಪಿಸಿದರು.

ತುಮಕೂರು: ಲೋಕಾಯುಕ್ತ ಬಲೆಗೆ ಅಧಿಕಾರಿ

0

ತುಮಕೂರು: ಕಾರು ಬಾಡಿಗೆಯ ಬಿಲ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ 34000 ರೂ ಲಂಚ ಪಡೆಯುತ್ತಿದ್ದ ಬಿಸಿಎಂ ಇಲಾಖೆಯ ತಾಲ್ಲೂಕು ಪ್ರಭಾರ ವಿಸ್ತರಣಾಧಿಕಾರಿ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.

ಶಿವರಾಜ್ ಎಲಿಗಾರ್ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿರುವ ವ್ಯಕ್ತಿ. ಬಿ ಸಿ ಎಂ ಇಲಾಖೆಗೆ ಬಾಡಿಗೆಗಾಗಿ ಕಾರು ಬಿಟ್ಟಿದ್ದರು. ಮೂರು ತಿಂಗಳ ಕಾರಿನ ಬಾಡಿಗೆ ಬಿಲ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಕಚೇರಿಯಲ್ಲಿ ಲಂಚ ಪಡೆಯುವಾಗ ದಾಳಿ ನಡೆಸಿ ಬಂಧಿಸಲಾಗಿದೆ.

ಕಾಂಗ್ರೆಸ್ ಸರ್ಕಾರ: ಪಾವಗಡ ಸುಭಿಕ್ಷ: ಶಾಸಕ

0

ಪಾವಗಡ : ತಾಲೂಕಿನಾದ್ಯಂತ ಸುಮಾರು 100 ಕೋಟಿ ರೂ ವೆಚ್ಚದಲ್ಲಿ ವಿವಿಧ ರಸ್ತೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಶಾಸಕರಾದ ವೆಂಕಟರಮಣಪ್ಪನವರು ತಿಳಿಸಿದರು.

ತಾಲ್ಲೂಕಿನ ನಿಡಗಲ್ ಹೋಬಳಿಯ ನ್ಯಾಯದಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬುಧವಾರ ಶಾಸಕರಾದ ವೆಂಕಟರಮಣಪ್ಪನವರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ, ಕದಿರೆಹಳ್ಳಿ ಗ್ರಾಮದ ಪಾತಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ,

ತಾಲೂಕಿನಾದ್ಯಂತ ಸುಮಾರು 100 ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಂಡಿದ್ದು ಇವುಗಳಲ್ಲಿ
ಕೆಲವು ಕಾಮಗಾರಿಗಳು ಪ್ರಪೂರ್ಣಗೊಂಡಿದ್ದು ಇನ್ನು ಕೆಲವು ಪ್ರಗತಿಯ ಹಂತದಲ್ಲಿವೆ. ಇಂದು ಸಹಾ ಕ್ಯಾತಗಾನಹಳ್ಳಿ-ಮುದ್ದಗಾನಹಳ್ಳಿ ರಸ್ತೆ ಅಭಿವೃದ್ಧಿಗೆ 25 ಲಕ್ಷ ,ಕೋಡಿಗೆಹಳ್ಳಿ-ಕದಿರೇಹಳ್ಳಿ ರಸ್ತೆ ಅಭಿವೃದ್ಧಿಗೆ 25 ಲಕ್ಷ ,ಕೋಡಿಗೆಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ , ಕದಿರೇಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ 13.90 ಲಕ್ಷ ನೀಡಲಾಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಇದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿಮ್ಮದು 10% ಸರ್ಕಾರ್ ಎಂದು ಯಾವುದೇ ಆದರವಿಲ್ಲದೆ ಅಪಪ್ರಚಾರ ಮಾಡಿದರು. ಆದರೆ ಇಂದಿನ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಮಂತ್ರಿಯವರಿಗೆ ನಮ್ಮ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದೆ ಎಂದು ನೇರವಾಗಿ ಪತ್ರ ಬರೆದರು ಸಹ ಅವರಿಂದ ಯಾವುದೇ ಉತ್ತರವಿಲ್ಲ

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕುಡಿಯುವ ನೀರಿನ ಯೋಜನೆಗಾಗಿ 2,300 ಕೋಟಿ ಬಿಡುಗಡೆ ಮಾಡಿದ್ದರು. ಡಿಕೆ ಶಿವಕುಮಾರ್ ಪವರ್ ಮಿನಿಸ್ಟರ್ ಆಗಿದ್ದಾಗ ನಮ್ಮ ತಾಲೂಕಿಗೆ ವಿಶ್ವವೆ ತಿರುಗಿ ನೋಡುವಂತಹ ಸೋಲಾರ್ ಪಾರ್ಕ್ ತಂದು ಇಲ್ಲಿನ ಜನರು ನಿಮ್ಮದೇ ಆಗಿ ಬದುಕುವಂತೆ ಮಾಡಿದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕದಿರೆಹಳ್ಳಿ ಜಗನ್ನಾಥ್, ಕ್ಯಾತಗನಹಳ್ಳಿ ನಾಗರಾಜಪ್ಪ, ಎಇಇ ಸುರೇಶ್, ಬಸವಲಿಂಗಪ್ಪ , ಕೆಂಚರಾಯ, ಈರಣ್ಣ , ಮಂಜುನಾಥ್, ರೇಣುಕಮ್ಮ , ಪೂಜಾರ್ ಹನುಮಂತರಾಯಪ್ಪ , ಗಂಗಮ್ಮ ಹಾಗೂ ಇನ್ನೂ ಹಲವರು ಉಪಸ್ಥಿರಿದರು.

ಮಹಿಳಾ ಸಮಾನತೆಗೆ ದಾರಿಮಾಡಿಕೊಟ್ಟ ಅಕ್ಕ

0

ತುಮಕೂರು: ಭಾರತೀಯ ಮಹಿಳೆಯರಿಗೆ ಅಕ್ಕ ಮಹಾದೇವಿ ಸಮಾನತೆ, ಸ್ವಾತಂತ್ರ್ಯದ ದಾರಿಯನ್ನು ತೋರಿಸಿಕೊಟ್ಟರು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಬಿ. ಗೀತಾ ಹೇಳಿದರು.

ಸುಫಿಯ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವೇದಗಳ ಕಾಲದಲ್ಲಿ ಮಹಿಳಾ ಸಮಾನತೆ ಇತ್ತು. ಮೈತ್ರೇಯಿ, ಗಾರ್ಗಿಯೆ ಮುಂತಾದ ಮಹಿಳಾ ವಿದ್ವಾಂಸರು ಇದ್ದರು. ಮಹಿಳೆಯರು ನಿರ್ಭಿಡೆಯಿಂದ ಬದುಕಬಹುದಿತ್ತು. ಆದರೆ ಕ್ರಮೇಣ ಮಹಿಳೆಯರನ್ನು ಕೋಣೆಯೊಳಗೆ ಬಂಧಿಯಾಗಿಸಲಾಯಿತು ಏಕೆ ಎಂಬುದನ್ನು ಎಲ್ಲರೂ ಅವಲೋಕಿಸಬೇಕಾಗಿದೆ ಎಂದರು.

ಸಾಕಷ್ಟು ಸುಧಾರಣೆ ಕಂಡರೂ ಇನ್ನೂ ಮಹಿಳಾ ಶೋಷಣೆ ನಿಂತಿಲ್ಲ. ಕಾನೂನು ಕ್ಷೇತ್ರದಲ್ಲಿ ಕರ್ನಾಟಕದ ಮಹಿಳೆಯರ ಸಾಧನೆ ಅಗಣಿತ ಎಂದು ಹೇಳಿದರು.

ಮಹಿಳೆಯರಿಗೆ ಗೌರವ ಕೊಡುವುದು ಮನೆಯಿಂದಲೇ ಆರಂಭವಾಗಬೇಕು. ಮಹಿಳೆಯರ ಸಾಧನೆಗೆ ಕೆಲವು ಗಂಡಸರೂ ಉದಾಸೀನ ತೋರುವುದು ಇದೆ. ಇದು ನಿಲ್ಲಬೇಕು ಎಂದರು.

ಮಹಿಳೆ ಮತ್ತು ಕಾನೂನುಗಳ ಕುರಿತು ಮಾತನಾಡಿದ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ನೂರುನ್ನೀಸಾ, ಮೇಲ್ವರ್ಗದ ಸಾಧಕ ಮಹಿಳೆಯರ ಬಗ್ಗೆ ಮಾತ್ರ ಇತಿಹಾಸ ಮಾತನಾಡುತ್ತದೆ. ಕೆಳ ವರ್ಗ, ಬಡತನದ ಮಹಿಳೆಯರ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ ಎಂದರು.

ಮಹಿಳೆಯರಿಗಾಗಿ ಅನೇಕ ಕಾನೂನು ತರಲಾಗಿದೆ. ಲೈಂಗಿಕ ದೌರ್ಜನ್ಯದ ವಿರುದ್ಧ ಕಾನೂನುಗಳು ಗಟ್ಟಿಯಾಗಿವೆ. ಆಸಿಡ್ ದಾಳಿಗೆ ಒಳಗಾದ ಹೆಣ್ಣು ಮಕ್ಕಳಿಗೆ ಪ್ರಾಧಿಕಾರ ಹತ್ತು ಲಕ್ಷ ಹಣದ ನೆರವು ನೀಡುತ್ತದೆ ಎಂದರು.

ಹಿರಿಯ ವಕೀಲ ನಾಗೇಶ್ ರಾವ್ ಗಾಯಕವಾಡ್ ಹಿಂದೂ ಉತ್ತರದಾಯಿ ಕಾಯ್ದೆ ಕುರಿತು ಮಾತನಾಡಿದರು.

ಪ್ರಾಂಶುಪಾಲ ಡಾ.ಎಸ್.ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಅನೇಕ ರಂಗಗಳಲ್ಲಿ ಸಾಧನೆ ಮಾಡಿದ್ದಾರೆ. ಮಹಿಳಾ ಕಾನೂನು ಜಾಗೃತಿ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ವಕೀಲೆ ಶೋಭಾ, ಉಪ ಪ್ರಾಂಶುಪಾಲರಾದ ಓಬಯ್ಯ, ಸಹ ಪ್ರಾಧ್ಯಪಕರಾದ ಸಿ.ಕೆ.ಮಹೇಂದ್ರ, ಮಮತಾ, ರೇಣುಕಾ, ತಬಸ್ಸಮ್, ಶ್ರೀನಿವಾಸ್, ರಂಗಧಾಮಯ್ಯ, ಕಾಲೇಜಿನ ಅಧೀಕ್ಷಕ ಜಗದೀಶ್, ಗ್ರಂಥಪಾಲಕ ಸುಬ್ರಹ್ಮಣ್ಯ ಇತರರು ಇದ್ದರು.

ಪಿಂಕ್

0

ಪಿಂಕ್


ನಾನು ಬರೆ
ಪಿಂಕ್ ಅಲ್ಲ….
ನೀಲಿ
ಕೆಂಪು
ಏನಾದರೂ ಅಗಬಲ್ಲೆ
ಬೇಕಾದರೆ… ಸಸ್ಯ ಶ್ಯಾಮಲೆ
.. ಕಾಳ ರಾತ್ರಿ..
ರುದ್ರೆ..
ಆಯ್ಕೆ ನಿನ್ನದು


ರಜನಿ..

ಬಣ್ಣ

0

ಡಾ. ರಜನಿ. ಎಂ


ನಿನ್ನ ಮುಖಕ್ಕೆ
ಏಕೆ ನಲ್ಲೆ
ಓಕುಳಿ?
ಕದಪಿನ ಕೆಂಪೇ
ಸಾಕಲ್ಲವೇ..

ನಿನ್ನ ಕಣ್ಣಲ್ಲಿ
ಸೆಕೆಂಡಿಗೆ ನೂರು
ಕಾಮನಬಿಲ್ಲು.

ನೀನಿಲ್ಲದ
ಕನಸು
ಬರೇ ಕಪ್ಪು
ಬಿಳುಪು

ಕಾಮನೆಗಳನ್ನು
ಸುಟ್ಟರೂ
ಅಳಿಸದು
ನೀ ಹಚ್ಚಿದ ..ರಂಗು.

ನೀ ಹಚ್ಚಿದ್ದು
ಹರಿಷಿನ
ಕುಂಕುಮ..
ನನ್ನೆದೆಯಲ್ಲಿ
ಬಣ್ಣದೋಕುಳಿ.

ವಿರಹದುರಿ
ಸುಡದು
ಕಾಮನನ್ನು.


ಬಣ್ಣ ಹಲವಾರು ಸಂಕೇತ.. ಮನುಷ್ಯನ ವ್ಯಕ್ತಿತ್ವಗಳ ಬಣ್ಣ, ಬದುಕಿನ ಹಲವು ಭಾವಾಭಿವ್ಯಕ್ತಿಯ ಪ್ರತಿನಿಧಿಯೂ ಹೌದು.. ರಂಗು ರಂಗಿನ ಹಬ್ಬ ಹೋಲಿಯ ಪ್ರಯುಕ್ತ ಬಣ್ಣ ಕವನ..ನಿಮಗಾಗಿ

ಹೋಳಿ ಕವ‌ನ: ಬಣ್ಣ

0

ಬಣ್ಣ


ನಿನ್ನ ಮುಖಕ್ಕೆ
ಏಕೆ ನಲ್ಲೆ
ಓಕುಳಿ?
ಕದಪಿನ ಕೆಂಪೇ
ಸಾಕಲ್ಲವೇ..

ನಿನ್ನ ಕಣ್ಣಲ್ಲಿ
ಸೆಕೆಂಡಿಗೆ ನೂರು
ಕಾಮನಬಿಲ್ಲು.

ನೀನಿಲ್ಲದ
ಕನಸು
ಬರೇ ಕಪ್ಪು
ಬಿಳುಪು

ಕಾಮನೆಗಳನ್ನು
ಸುಟ್ಟರೂ
ಅಳಿಸದು
ನೀ ಹಚ್ಚಿದ ..ರಂಗು.

ನೀ ಹಚ್ಚಿದ್ದು
ಹರಿಷಿನ
ಕುಂಕುಮ..
ನನ್ನೆದೆಯಲ್ಲಿ
ಬಣ್ಣದೋಕುಳಿ.

ವಿರಹದುರಿ
ಸುಡದು
ಕಾಮನನ್ನು.


ಡಾ. ರಜನಿ


ಸುರೇಶಗೌಡರೇ ಎಂ ಎಲ್ಎ- ಹೂವು ನೀಡಿದ ದೇವರು: ಕಾರದ ಮಠದ ಶ್ರೀ ಘೋಷಣೆ

0

ಕುಚ್ಚಂಗಿಪಾಳ್ಯ: ಸುರೇಶಗೌಡರೇ ಮುಂದಿನ ಶಾಸಕರಾಗಿ ಆಯ್ಕೆಯಾಗುವುದು ಖಚಿತ. ನಾನು ಸಂಕಲ್ಪ ಮಾಡುತ್ತಿದಂತೆ ಕುಚ್ಚಂಗಿಯಮ್ಮ ಬಲಭಾಗದಲ್ಲಿ ಹೂ ಕೊಟ್ಟಿದೆ. ಅದನ್ನೆಲ್ಲ ನೀವೇ ನೋಡಿದಿರಲ್ಲ ಎಂದು ಬೆಳ್ಳಾವಿ ಕಾರದ ಮಠದ ವೀರ ಬಸವ ಸ್ವಾಮೀಜಿ ಹೇಳಿದರು.

ಇಲ್ಲಿ‌ನ ಕುಚ್ಚಂಗಿ ಪಾಳ್ಯದಲ್ಲಿ ಕುಚ್ಚಂಗಿಯಮ್ಮನ ಪೌರ್ಣಮಿ ಪೂಜಾ ಕಾರ್ಯಕ್ರಮದಲ್ಲಿ ದೇವಿ ಸಂಕಲ್ಪದಲ್ಲಿ ಬಲಭಾಗದಲ್ಲಿ ಹೂ ಆಗಿದ ಬಳಿಕ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಒಳ್ಳೆಯ ನಾಯಕರು ಬರಬೇಕು. ಒಳ್ಳೆಯವರನ್ನು ಆಯ್ಕೆ ಮಾಡಬೇಕು. ದೇವಿಯ ಸಂಕಲ್ಪವನ್ನು ನೀವುಗಳೇ ಕಣ್ಣಾರೆ ಕಂಡಿರಿ. ಇನ್ನು ಹೆಚ್ಚು ಹೇಳಬೇಕಾಗಿಲ್ಲ ಎಂದರು.

ಮಾಜಿ ಶಾಸಕ ಬಿ.ಸುರೇಶಗೌಡರು ಪೂಜೆ, ಹೋಮ ನಡೆಸಿಕೊಟ್ಟರು. ಬಳಿಕ ಮಾತನಾಡಿ, ದೇವಿಗೆ 5 ಕೆಜಿ ಬೆಳ್ಳಿ ಕೊಡಿಸುವೆ ಎಂದರು.

ನನ್ನನ್ನು ಗೆಲ್ಲಿಸಿದರೆ ₹ 1 ಕೋಟಿ ವೆಚ್ಚದಲ್ಲಿ ದೇವಸ್ಥಾನಕ್ಕೆ ಗ್ರಾನೈಟ್, ಸಮುದಾಯಭವನ ನಿರ್ಮಿಸಿಕೊಡುವೆ. ಊರಿಗೆ ಡಾಂಬರು ರಸ್ತೆ ಮಾಡಿ ಕೊಡುವೆ ಎಂದು ಭರವಸೆ ನೀಡಿದರು.

ಸುಮಾರು ಎರಡು ಸಾವಿರ ಭಕ್ತರು,ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅರೆಕೆರೆ ಗ್ರಾ.ಪಂ. ಅಧ್ಯಕ್ಷ ರವೀಶ್, ಸೋರೆಕುಂಟೆಯ ಅಧ್ಯಕ್ಷ ಜಗದೀಶ್, ನೆಟ್ಟಗಾನಹಳ್ಳಿ ಅಧ್ಯಕ್ಷ ರಾಮಣ್ಣ, ಅಣ್ಣೇನಹಳ್ಳಿಯ ಶಿವಣ್ಣ, ಊರುಕೆರೆಯ ಸದಸ್ಯ ಶಿವಕುಮಾರ್ ಸಹಿತ ಸುತ್ತಮುತ್ತಲ ಗ್ರಾಮ ಪಂಚಾಯತಿ ಗಳ ಸದಸ್ಯರು, ಗ್ರಾಮದ ಮುಖಂಡರು ಸೇರಿದ್ದರು.

ಬಾಲ್ಯ ವಿವಾಹ ಮಾಡಲ್ಲ , ಮಾಡಲು ಬಿಡುವುದೂ ಇಲ್ಲ

ಪಾವಗಡ : ಬಾಲ್ಯ‌ವಿವಾಹ ಮಾಡಲ್ಲ, ಮಾಡಲು ಬಿಡೂವುದು ಇಲ್ಲ- ಇದು ಇಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡವರು ಮಾಡಿದ ಶಪಥ.

ಬಾಲ್ಯವಿವಾಹ ಕುರಿತಾಗಿ ತಾಲ್ಲೂಕಿನಲ್ಲಿ ಪ್ರತಿ ಗ್ರಾಮಗಳಲ್ಲಿನ ಮಕ್ಕಳಿಗೆ ಅರಿವು ಕಾರ್ಯಕ್ರವನ್ನು ಮಾಡುವುದು ಅವಶ್ಯಕ ಎಂದು ಪಾವಗಡ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ ಹೇಳಿದರು.

ಮಂಗಳವಾರ ಪಟ್ಟಣದ ಗುರುಭವನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ತುಮಕೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ, ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಕ್ಕಳ ಸಹಾಯವಾಣಿ-1098, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಮಹಿಳಾ ಸಾಂತ್ವನ ಕೇಂದ್ರ ಪಾವಗಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ತಾಲ್ಲೂಕು ಪಂಚಾಯಿತಿ ಪಾವಗಡ ಮತ್ತು ಶಿಶು ಅಭಿವೃದ್ಧಿ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಾವಗಡ ಇವರುಗಳ ಸಹಭಾಗಿತ್ವದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಯುವ ಜನಾಂಗದಲ್ಲಿ ಅರಿವು ಮೂಡಿಸಲು ತಾಲೂಕು ಮಟ್ಟದ ಯುವಮೇಳ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಆಯೋಜಿಸಿದ್ದು ಬಾಲ್ಯ ವಿವಾಹ ನಿಷೇಧ ಕಾಯ್ದೆಗಳ ಕುರಿತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಜ್ಞಾವಿಧಿ ಸ್ವೀಕಾರ: ಭಾರತದ ಪ್ರಜೆಯಾದ ನಾನು ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತವಾಗಿ ಅವರ ಹಕ್ಕುಗಳಾದ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು, ಭಾಗವಹಿಸುವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ತಿಳಿದಿರುವುದರಿಂದ ಬಾಲ್ಯವಿವಾಹ ಮುಕ್ತ ಸಮಾಜವನ್ನು ನಿರ್ಮಿಸುವುದಕ್ಕೆ ಬದ್ದನಾಗಿದ್ದೇನೆ/ಳಾಗಿದ್ದೇನೆ.

ನನ್ನ ವೈಯಕ್ತಿಕ ನೆಲೆಯಿಂದ ಮತ್ತು ಸಮಾಜದಲ್ಲಿನ ನನ್ನ ಸ್ಥಾನ ಮಾನದ ನೆಲೆಯಿಂದ ನನ್ನ ಕುಟುಂಬದಲ್ಲಿ ಬಂಧು ಬಳಗದಲ್ಲಿ ಸಮುದಾಯದಲ್ಲಿ ಹಾಗೂ ಸಮಾಜದಲ್ಲಿ ನಾನು ಬಾಲ್ಯ ವಿವಾಹಗಳನ್ನು ವಿರೋಧಿಸುತ್ತೇನೆ.

18 ವರ್ಷದೊಳಗಿನ ಹೆಣ್ಣು ಮಕ್ಕಳು ಮತ್ತು 21 ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ನಡೆಸುವ ಸಾಧ್ಯತೆ ಕಂಡು ಬಂದಲ್ಲಿ ಅದನ್ನು ತಡೆಯುತ್ತೇನೆ. ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ, ಪೊಲೀಸರಿಗೆ, ಜಿಲ್ಲಾ ನ್ಯಾಯಾಧೀಶರಿಗೆ ಹಾಗೂ ಚೈಲ್ಡ್ ಲೈನ್ 1098 ಗೆ ಮಾಹಿತಿ ನೀಡುತ್ತೇನೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರ ಪ್ರಕಾರ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ವಾಗಿರುವುದರಿಂದ ನಮ್ಮ ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸುವ ದಿಸೆಯಲ್ಲಿ ಎಲ್ಲಾ ಅಗತ್ಯ ಕ್ರಮ ತೆಗೆದುಕೊಂಡು ಮಕ್ಕಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆಂದು ಶ್ರದ್ಧಾಪೂರ್ವಕವಾಗಿ ಪ್ರಮಾಣ ಮಾಡುತ್ತೇನೆ ಎಂದು ಪಾವಗಡ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾರಾಯಣ ಅವರು ಪ್ರಮಾಣ ವಚನವನ್ನು ಬೋಧಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಧನಲಕ್ಷ್ಮಿ,ತಾಲೂಕು ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ, ಟಿ ಹೆಚ್ ಓ ತಿರುಪತಯ್ಯ, ಸಿಪಿಐ ಅಜಯ್ ಸಾರಥಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೈಯದ್ ರಿಕೀಮ್, ಇಲಾಖೆಯ ಮೇಲ್ವಿಚಾರಕೀಯರುಗಳಾದ ಭಾಗ್ಯಲಕ್ಷ್ಮಿ, ವಿಜಯಲಕ್ಷ್ಮಿ, ಜಯಲಕ್ಷ್ಮಿ, ಮಮತಾ, ಸುಧಾ, ಸೇರಿದಂತೆ ಶಾಲಾ ಕಾಲೇಜುನ ಮಕ್ಕಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಪಾವಗಡ ಗುರುಭವನದಲ್ಲಿ ವಿವಿಧ ಇಲಾಖೆಗಳಿಂದ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಬಾಲ್ಯ ವಿವಾಹ ವಿವಾಹ ನಿಷೇಧ ಕುರಿತು ಯುವ ಜನಾಂಗದಲ್ಲಿ ಅರಿವು ಮೂಡಿಸಲು ತಾಲೂಕು ಮಟ್ಟದ ಯುವಮೇಳ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ

ವರದಿ :ಕುಮಾರ ನಾಗಲಾಪುರ