Friday, March 29, 2024
Google search engine
Homeಜನಮನಮಂಡ್ಯ: ಈ ಸರ್ಕಾರಿ ಶಾಲೆ ನೋಡಿದರೆ ಎಂಥವರೂ ಮೂಕವಿಸ್ಮಿತರಾಗುತ್ತಾರೆ...

ಮಂಡ್ಯ: ಈ ಸರ್ಕಾರಿ ಶಾಲೆ ನೋಡಿದರೆ ಎಂಥವರೂ ಮೂಕವಿಸ್ಮಿತರಾಗುತ್ತಾರೆ…

ಲಕ್ಷ್ಮೀಕಾಂತರಾಜು ಎಂಜಿ.


Mandya: ಸರ್ಕಾರಿ ಶಾಲೆ ವಾಸಸ್ಥಳಕ್ಕೆ ಹತ್ತಿರವಿದ್ದರೂ ದೂರದ ಖಾಸಗಿ ಶಾಲೆಯಲ್ಲಿ ಆರ್ ಟಿ ಇ ಸೀಟು ಪಡೆದು ಖಾಸಗಿ ಶಾಲೆಗಳಿಗೆ ಸೇರಿಸುವ ವ್ಯಾಮೋಹ ಹೊಂದಿರುವ ಈ ಕಾಲದಲ್ಲೂ ತಾಲ್ಲೂಕು ಕೇಂದ್ರವೊಂದರಲ್ಲಿ ಸರ್ಕಾರಿ ಶಾಲೆಯೊಂದು ವಿದ್ಯಾರ್ಥಿಗಳ ಅಧಿಕ ಹಾಜರಾತಿಯಿಂದ ತುಂಬಿತುಳುಕುತ್ತಿದೆ.

ಹೌದು. ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಟೌನ್ ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ನಮ್ಮ ಈ ವರದಿಯ ಕೇಂದ್ರಬಿಂದು. 1910 ರಲ್ಲಿ ಆರಂಭವಾದ ಈ ಶಾಲೆಯು ಅಂದು ಆ ಭಾಗದ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿ ಹೆಚ್ಚೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದಿಕೊಳ್ಳುತ್ತಿದ್ದು ನಂತರ ಖಾಸಗಿ ಶಾಲೆಯ ವ್ಯಾಮೋಹ ದ ಕಾರಣ ಪೋಷಕರುಗಳು ತಮ್ಮ‌ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದ್ದರಿಂದ ಈ ಶಾಲೆಗೆ ಹಾಜರಾತಿ ಕೊರತೆ ಉಂಟಾಯಿತು.

ಶಾಲೆ ಶಿಕ್ಷಕಿಯರಿಗೂ ಇಲ್ಲಿ ಸಮವಸ್ತ್ರ

1910 ರ ಸ್ವಾತಂತ್ರ್ಶ ಪೂರ್ವದಲ್ಲಿಯೇ ಆರಂಭವಾಗಿ ಇಂದು 119 ವರ್ಷಗಳು ಕಳೆದು ಶತಮಾನದ ಶಾಲೆಯೆಂದೇ ಹೆಸರಾಗಿರುವ ಈ ಶಾಲೆಯನ್ನ ಅಭಿವೃದ್ಧಿಗೊಳಿಸಿ ಉಳಿಸಬೇಕೆಂಬ ಉದ್ದೇಶದಿಂದ ಅಲ್ಲಿನ‌ ಶಿಕ್ಷಣಾಸಕ್ತರು,ಉತ್ಸಾಹಿಗಳು ಸೇರಿ ಶಾಲೆಯ ಬಗ್ಗೆ ಗಮನಹರಿಸಿ 2014 ರಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿಗಳಾಗಿದ್ದ ಡಾ. ಎಚ್ ಎಲ್ ನಾಗರಾಜು ಅವರ ಅಧ್ಯಕ್ಷತೆಯಲ್ಲಿ‌ ಒಂದು ಸಮಿತಿ ರಚಿಸಿ ಕೊಂಡು ಶಾಲೆಗೆ ಹಾಜರಾತಿ ಹೆಚ್ಚಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಂಡು ಸಮಿತಿಯಲ್ಲಿನ ಉಪನ್ಯಾಸಕರುಗಳು ಹಾಗೂ ಇತರೆ ಸರ್ಕಾರಿ ನೌಕರರುಗಳು ತಮ್ಮ‌ ಮಕ್ಕಳನ್ನೂ ಈ ಶಾಲೆಗೆ ಸೇರಿಸುವ ಮೂಲಕ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದ ಈ ಶಾಲೆಗೆ ಹಾಜರಾತಿ ಹೆಚ್ಚಿಸುವತ್ತಾ ಹೆಜ್ಜೆ ಇಟ್ಟರು.

ಶತಮಾನದ ಶಾಲೆಯ ಇಂದಿನ‌ ಎಸ್ ಡಿ ಎಂಸಿ ಅಧ್ಯಕ್ಷರಾಗಿರುವ ಉಪನ್ಯಾಸಕ ವಾಸು ಹಾಗೂ ಉಪವಿಭಾಗಾಧಿಕಾರಿ ಎಚ್ ಎಲ್ ನಾಗರಾಜು ಅವರು ಸೇರಿದಂತೆ ಅಲ್ಲಿನ ಶಾಲಾ ಶಿಕ್ಷಕರುಗಳ ಶ್ರಮದಿಂದ ಇಂದು ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 874 ಆಗಿದ್ದು ಪ್ರತಿಷ್ಟಿತ ಖಾಸಗಿ ಶಾಲೆಯಂತೆ ನಡೆಯುತ್ತಿದೆ.

ಈ ಶಾಲೆಯಲ್ಲಿ ಎಲ್ ಕೆ ಜಿಯ ಮಕ್ಕಳ ಮನೆಯು‌ ನಡೆಯುತ್ತಿದ್ದು ಇದಕ್ಕೆ ಸರ್ಕಾರದ ಯಾವುದೇ ಅನುದಾನವಿಲ್ಲದೇ,ಇಲ್ಲಿನ ಶಾಲೆಯ ಅಭಿಮಾನಿಗಳ ದಾನಿಗಳ ನೆರವಿನಿಂದ ಶಿಕ್ಷಕರ ವೇತನ ನೀಡಿ ಮಕ್ಕಳ ಮನೆ ನಡೆಸಲಾಗುತ್ತಿದೆ ಎನ್ನುತ್ತಾರೆ ಎಸ್ ಡಿ ಎಂಸಿ ಅಧ್ಯಕ್ಷರಾದ ವಾಸು ಅವರು.

ಈ ವರ್ಷದಿಂದ ಈ ಶತಮಾನದ ಶಾಲೆಯನ್ನ ಶಿಕ್ಷಣ ಇಲಾಖೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಘೋಷಣೆ ಮಾಡಿದ್ದು ಈ ಯೋಜನೆಯಡಿ ಆಂಗ್ಲ ಮಾಧ್ಯಮಕ್ಕೂ ಪ್ರವೇಶವಾಗಿದ್ದು ಇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 28 ಮಕ್ಕಳು ರಷ್ಟು ಆಂಗ್ಲ ಮಾಧ್ಯಮಕ್ಕೆ ಉಳಿದ ವಿದ್ಯಾರ್ಥಿಗಳು ಕನ್ನಡ ಮಾದ್ಯಮಕ್ಕೆ ಪ್ರವೇಶ ಪಡೆದಿದ್ದಾರೆ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕರಾದ ರಾಚಯ್ಯ ಅವರು.

ಶತಮಾನದ ಶಾಲೆಯಲ್ಲಿ ಖಾಯಂ ಶಿಕ್ಷಕರು ಹಾಗೂ ಅತಿಥಿ ಶಿಕ್ಷಕರುಗಳು ಸೇರಿದಂತೆ ಒಟ್ಟು 28 ಶಿಕ್ಷಕರುಗಳಿದ್ದು ಶಾಲಾ‌ಶಿಕ್ಷಕರುಗಳು ಸಹ ವಿದ್ಯಾರ್ಥಿಗಳಂತೆ ಸಮವಸ್ತ್ರ ಹೊಂದಿ ಶಾಲೆಗೆ ಬರುವುದು‌ ವಿಶೇಷವಾಗಿದೆ.

ಇಲ್ಲಿ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಆಧುನಿಕ‌ ಕಂಪ್ಯೂಟರ್ ಗಳನ್ನ ಹಾಕಿಸಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಹೇಳಿಕೊಡುವುದರ ಜೊತೆಗೆ ಉತ್ತಮ ಗ್ರಂಥಾಲಯವನ್ನ ಸಹ ಹೊಂದಿರುವುದು ಮಕ್ಕಳ ಅಧ್ಯಯನಕ್ಕೆ ಅನುಕೂಲವಾಗಿದೆ

2014 ರಿಂದ ಇಲ್ಲಿ ಆರಂಭವಾದ ಮಕ್ಕಳ ಮನೆಯಲ್ಲಿ ಕಲಿಸುತ್ತಿರುವ ಶಿಕ್ಷಕರ ವೇತನ ಮತ್ತಿತರ ಖರ್ಚುಗಳನ್ನ ಸಮಿತಿಯಲ್ಲಿನ ದಾನಿಗಳೇ ಭರಿಸುವ ಮೂಲಕ ಶಾಲೆಯ ಕುರಿತು ತಮ್ಮ‌ ತಮಗಿರುವ ಆಸ್ತಕಿಯನ್ನ ಪ್ರದರ್ಶಿಸಿದ್ದಾರೆ.

ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವ ಅದರಲ್ಲೂ ಸರ್ಕಾರಿ ನೌಕರರು ತಮ್ಮ‌ ಮಕ್ಕಳನ್ನ ಖಾಸಗಿ ಶಾಲೆಗಳಿಗೆ ಸೇರಿಸುವ ಈ ಕಾಲಮಾನದಲ್ಲೂ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸುವದರ ಮೂಲಕ ಈ ಶಾಲೆಯನ್ನ ಅಭಿವೃದ್ಧಿಗೊಳಿಸವಲ್ಲಿ ಇಲ್ಲಿನ ಅನೇಕ ಸರ್ಕಾರಿ ನೌಕರರುಗಳ ಶ್ರಮವಿದೆ. ಇಂದು ಗ್ರಾಮಾಂತರ ಭಾಗದಲ್ಲಿಯೇ ಪೋಷಕರು ತಮ್ಮ ಮಕ್ಕಳನ್ನ ದೂರದ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದು ಹಳ್ಳಿಕಡೆಯಲ್ಲಿಯೇ ಸರ್ಕಾರಿ ಶಾಲೆಗಳು ಹಾಜರಾತಿ ಕೊರೆತೆಯಿಂದ ಮುಚ್ಚುತ್ತಿರುವಾಗ ಇಂದು ತಾಲ್ಲೂಕು ಕೇಂದ್ರವೊಂದರಲ್ಲಿ ಅಧಿಕ ವಿದ್ಯಾರ್ಥಿಗಳ ಸಂಖ್ಯೆಯೊಂದಿಗೆ ಸರ್ಕಾರಿ ಶಾಲೆಯೊಂದು ನಡೆಯುತ್ತಿರುವುದು ಸುಮ್ಮನೆ ಮಾತಲ್ಲ.

ಎಲ್ಲ ಭಾಗದಲ್ಲಿಯೂ ಸರ್ಕಾರಿ ಶಾಲೆಗಳು ಕೆಆರ್ ಪೇಟೆಯ ಶತಮಾನದ ಶಾಲೆಯಂತೆ ಅಭಿವೃದ್ಧಿಗೊಂಡು ಹೆಚ್ಚಿನ ಹಾಜರಾತಿ ಹೊಂದಿದರೆ ಸರ್ಕಾರಿ ಶಾಲೆಗಳ ಹಳೆಯ ವೈಭವದ ಮೆರಗನ್ನ ನಾವು ಮತ್ತೆ ಕಾಣಬಹುದಾಗಿದೆ.

ಶಾಲೆ ಉಳಿಸುವುದೇ ನಮ್ಮ ಗುರಿಯಾಗಿತ್ತು

ಅಳಿವಿನಂಚಿನಂತಾಗಿರುವ ಸರ್ಕಾರಿ ಕನ್ನಡ ಶಾಲೆಗಳನ್ನ ಉಳಿಸುವ ಉದ್ದೇಶದಿಂದ ನಾನು ಹಾಗೂ ಶತಮಾನದ ಶಾಲೆಯ ಹಳೇಯ ವಿದ್ಯಾರ್ಥಿಗಳು ಸೇರಿ ಡಾ. ಎಚ್ ಎಲ್ ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಮಿತಿ ರಚಸಿಕೊಂಡು 2014 ರಲ್ಲಿ 110 ಹಾಜರಾತಿ ಹೊಂದಿದ್ದ ಶಾಲೆಯನ್ನ ಇಂದು 850 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಶಾಲೆ ಹೊಂದಿದೆ. ಇಲ್ಲಿ ನಾವು ಎಲ್ ಕೆ ಜಿ ಯ ಮಕ್ಕಳ ಮನೆ ಆರಂಭಿಸಿದ್ದು ಸರ್ಕಾರಿ ಶಾಲೆಯಲ್ಲಿ ಎಲ್ ಕೆ ಜಿ ಆರಂಭಿಸಲು ನಮ್ಮ ಮಕ್ಕಳ ಮನೆಯೇ ಸರ್ಕಾರಕ್ಕೆ ಪ್ರೇರಕವೆಂಬುದು ನಮಗೆ ಸಂತೋಷವೆನಿಸುತ್ತಿದೆ.


ವಾಸು. ಉಪನ್ಯಾಸಕ ಹಾಗೂ ಶತಮಾನದ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ.

ನಾವು ಮನಸ್ಸು ಮಾಡಬೇಕು

ಸರ್ಕಾರಿ‌ ಶಾಲೆಗಳು ಅಭಿವೃದ್ಧಿ ಹಾಗೂ ಹಾಜರಾತಿ ಹೆಚ್ಚಬೇಕಂದರೆ ಆ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಇರಲೇಬೇಕು. ನಾವು ಆ ಉದ್ದೇಶದಿಂದ ಕೆ ಆರ್ ಪೇಟೆ ಶಾಲೆಯಲ್ಲಿ ಪೂರ್ವಪ್ರಾಥಮಿಕ ಶಾಲೆ ಮಕ್ಕಳ ಮನೆ ಆರಂಭಿಸಿದ್ದು. ಇದರ ಪರಿಣಾಮ 130 ಮಕ್ಕಳು ಎಲ್‌ಕೆ ಜಿ ಗೆ ಪ್ರವೇಶ ಪಡೆದು ಶಾಲೆಯ ಹಾಜರಾತಿ ಹೆಚ್ಚಾಯ್ತು.ಎಲ್ಲ ಯೋಜನೆಗಳನ್ನ ಸರ್ಕಾರವೇ ಮಾಡಲು ಸಾಧ್ಯವಿಲ್ಲ. ಶಿಕ್ಷಣಾಸಕ್ತರು,ಸಾರ್ವಜನಿಕರು ಸರ್ಕಾರಿ ಶಾಲೆಗಳ ಕಡೆ ಒಲವು ತೋರಿ ಸಹಕರಿಸಿದರೆ ಸರ್ಕಾರಿ ಕನ್ನಡ ಶಾಲೆಗಳನ್ನ ಉಳಿಸಬಹುದಾಗಿದೆ.


ಡಾ.ಎಚ್ ಎಲ್ ನಾಗರಾಜು. ಉಪವಿಭಾಗಾಧಿಕಾರಿ,ಚಿಕ್ಕಮಗಳೂರು. ಹಾಗೂ ಅಧ್ಯಕ್ಷರು ಕೆ ಆರ್ ಪೇಟೆಯ ಶತಮಾನದ ಶಾಲೆಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷ.

RELATED ARTICLES

2 COMMENTS

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?