Saturday, July 27, 2024
Google search engine
Homeತುಮಕೂರು ಲೈವ್ಬೊಬ್ಬೆ ಬಂದರೂ ಬಿಡದ ವಕೀಲರ ಪಾದಯಾತ್ರೆ

ಬೊಬ್ಬೆ ಬಂದರೂ ಬಿಡದ ವಕೀಲರ ಪಾದಯಾತ್ರೆ

ವಕೀಲರ ರಕ್ಷಣಾ ಕಾಯ್ದೆ ಜಾರಿ ಮಾಡುವಂತೆ ಆಗ್ರಹಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುತ್ತಿರುವ ಬಳ್ಳಾರಿಯ ವಕೀಲರ ತಂಡದ ಅಂಗಾಲುಗಳಲ್ಲಿ ಬೊಬ್ಬೆ ಗಳ ಸುರಿ ಮಳೆ.

ಕ್ಷಕಿದಾರರು, ನ್ಯಾಯಕ್ಕಾಗಿ ಅನೇಕ ವಕೀಲರು, ನ್ಯಾಯಾಧೀಶರು ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಅವರ ತ್ಯಾಗದ ಹಿಂದೆ ನಮ್ಮ ಈ ನೋವಿನ ಲೆಕ್ಕ ಬೇಡ ಸರ್ ಎಂದರು ಅವರುಗಳು.

ಸರ್ಕಾರ ವಕೀಲರಿಗೆ ಮೋಸ ಮಾಡಿದೆ. ವಿಶೇಷ ಅಧಿವೇಶನ ಕರೆದು ಮಸೂದೆ ಜಾರಿಗೆ ತರುವುದಾಗಿ ಹೇಳಿತ್ತು. ಬೆಳಗಾವಿಗೂ ವಕೀಲರು ಪಾದಯಾತ್ರೆ ನಡೆಸಿದರು. ಸರ್ಕಾರಕ್ಕೆ ತಾತ್ಸಾರ ಎಂದರು.

ಬಜೆಟ್ ಅಧಿವೇಶನವೇ ಈ ಸರ್ಕಾರದ ಕಡೇ ಅಧಿವೇಶನ. ‌ಈಗಲಾದರೂ ಮಸೂದೆ ಜಾರಿಗೆ ತರಬೇಕು ಎಂದರು ಅವರು.

ಕಾಲುಗಳಲ್ಲಿ ಎದ್ದಿದ್ದ ಬೊಬ್ಬೆಗಳನ್ನು ತೋರಿಸಿದ ವಕೀಲ ಜೆ.ಎಂ. ಗಾದಿ ಲಿಂಗಪ್ಪ ಅವರು, ಹಾದಿಯುದ್ದಕ್ಕೂ ಜನರು ವಕೀಲರಿಗೂ ರಕ್ಷಣೆ ಕೊಡಬೇಕಾಗಿದೆ ಎಂದರು. ವಕೀಲರ ಕುರಿತ ಸರ್ಕಾರದ ಅಸಡ್ಡೆ ಬಗ್ಗೆ ಜನರಿಗೂ ಬೇಸರ ಇರುವುದು ಪಾದಯಾತ್ರೆಯಲ್ಲಿ ಕಂಡುಬಂತು. ಇದು ನಮ್ಮ ನೋವು ಮರೆಸಿದೆ ಎಂದರು.

ತಂಡದಲ್ಲಿದ್ದ ಮಹಿಳಾ ವಕೀಲೆ ಡಿ.ಎನ್.ಮಹಾಲಕ್ಷ್ಮೀ ಅವರ ಅಂಗಾಲುಗಳಲ್ಲೂ ಬೊಬ್ಬೆ ಮೂಡಿದ್ದವು. ಕಾಮೇಶ್ ಟಿ.ಕೆ., ಕೆ.ಕುರಿಯರ್, ಮರಿಸ್ವಾಮಿ, ಪರಮೇಶ್ವರಪ್ಪ ಪಾದಯಾತ್ರೆ ತಂಡದಲ್ಲಿದ್ದಾರೆ.

ತುಮಕೂರು ವಕೀಲರ ಸಂಘದಲ್ಲಿ ಪಾದಯಾತ್ರಿಗಳನ್ನು ಬರ ಮಾಡಿಕೊಳ್ಳಲಾಯಿತು. ವಕೀಲರ ಸಂಘದ ಬೆಂಬಲ ಸೂಚಿಸಲಾಯಿತು.

ಪಾದಯಾತ್ರಿಗಳ ಜತೆ ತುಮಕೂರು ವಕೀಲರ ತಂಡ

ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಸಿ.ಹಿಮಾನಂದ ಅವರು ಪಾದಯಾತ್ರಿಗಳ ಯೋಗ ಕ್ಷೇಮ ವಿಚಾರಿಸಿದರು. ಈ ವೇಳೆ ಸಂಘದ ಅಧ್ಯಕ್ಷ ದೊಡ್ಮನೆ ಗೋಪಾಲಗೌಡ, ಸಂಘದ ಪದಾಧಿಕಾರಿಗಳು, ವಕೀಲರಾದ ಮಹೇಂದ್ರ ಕೃಷ್ಣಮೂರ್ತಿ ಇತರರು ಇದ್ದರು.

RELATED ARTICLES

1 COMMENT

  1. Swamy vakeelaru Hana galisuvudannu bittu berenu madutilla idakke ondu udaharane nanu ondu site na saluvagi OS Number padedu case nedasalu sumaru 1.5 lakhs kottidde Adare suit file madi number padedu ommeyadaru court ge hajaragada karana case annu court dismiss madide idena NYAYA KODISUVA PARI*-Mana nondu barediddene tappiddare kshameyirali

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?