ಕರ್ನಾಟಕದ ವಿಧಾನ ಪರಿಷತ್ ಗೆ ನಾಲ್ಕು ಸ್ಥಾನಗಳಿಗೆ ರಾಜ್ಯ ಕಾಂಗ್ರೆಸ್ ನಾಯಕರು ಸಿದ್ಧಪಡಿಸಿದ್ದ ನಾಲ್ವರ ಪಟ್ಟಿಗೆ ಕೊನೆಗೂ ಹೈ ಕಮಾಂಡ್ ತಡೆ ಹಿಡಿದಿದೆ. ಹೀಗಾಗಿ ಕಾಂಗ್ರೆಸ್ ಹೈ ಕಮಾಂಡ್ ಪಕ್ಷಕ್ಕಾಗಿ ಹಗಲಿರುಗಳು ದುಡಿದ, ದುಡಿಯುತ್ತಿರುವ ಕಾರ್ಯಕರ್ತರ ಬೆನ್ನಿಗೆ ನಿಲ್ಲಬಹುದು ಎಂಬ ಹೊಸ ಲೆಕ್ಕಾಚಾರಗಳು ಪಕ್ಷದಲ್ಲಿ ಚರ್ಚೆಯ ಮುನ್ನೆಲೆಗೆ ಬಂದಿವೆ.
‘ಕಾಂಗ್ರೆಸ್ ಯಾವಾಗಲೂ ಕಾಂಗ್ರೆಸ್ಸಿನಿಂದಲೇ ಸೋಲಿಸಿಕೊಳ್ಳುತ್ತದೆ. ಗೆದ್ದಾಗಲೆಲ್ಲ ಗೆಲುವಿಗೆ ಪಣತೊಟ್ಟು ದುಡಿದ ಸಾಮಾನ್ಯ ಕಾರ್ಯಕರ್ತರನ್ನು ಮರೆತುಬಿಡುತ್ತದೆ. ಹೀಗಾಗಿ ಪಕ್ಷ ಗೆದ್ದಾಗ ಪಕ್ಷದ ಪರ ದನಿ ಎತ್ತುವ ಕಾರ್ಯಕರ್ತರ ಕೊರತೆ ಆ ಪಕ್ಷಕ್ಕೆ ಯಾವಾಗಲೂ ಕಾಡುತ್ತದೆ. ಹೀಗಾಗಿಯೇ ಅದು ಬಿಜೆಪಿ, ಜೆಡಿಎಸ್ ಎದುರು ಸಪ್ಪೆಸಪ್ಪೆಯಾಗಿ ಕಾಣತೊಡಗುತ್ತದೆ’ ಎಂಬ ಮಾತುಗಳನ್ನು ರಾಜಕೀಯ ಪಂಡಿತರು ಯಾವಾಗಲೂ ಹೇಳುತ್ತಿರುತ್ತಾರೆ.
ವಿಧಾನ ಪರಿಷತ್ ಗೆ ನಾಮಕರಣ ಮಾಡಲು ರಾಜ್ಯ ಕಾಂಗ್ರೆಸ್ಸಿಗರು ಸಿದ್ಧಪಡಿಸಿರುವ ಪಟ್ಟಿ ಕಾರ್ಯಕರ್ತರಲ್ಲಿ ಇಂಥ ಭಾವನೆ ಗಟ್ಟಿಗೊಳ್ಳಲು ಮತ್ತೂ ಕಾರಣವಾಗಿದೆ. ಹೀಗಾಗಿ ಈ ಸಲ ಪಕ್ಷದ ನಿಜ ಕಾರ್ಯಕರ್ತರನ್ನು, ಅಲ್ಲದೇ ಕನರ್ಾಟಕದ ಜಾತ್ಯತೀತತೆಯನ್ನು ಉಳಿಸಿಕೊಳ್ಳಲು ಬೇಕಾದ ಬುದ್ಧಿವಂತರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣ ಮಾಡಿದರೆ ಅಷ್ಟರ ಮಟ್ಟಿಗೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಬಾಯಿಬಡುಕತನಕ್ಕೆ ಬೀಗ ಹಾಕಲು ಆ ಪಕ್ಷಕ್ಕೆ ಸಾಧ್ಯವಾಗಲಿದೆ. ಗ್ಯಾರಂಟಿಗಳಿಂದಷ್ಟೇ ಆ ಪಕ್ಷ ಚುನಾವಣೆಯಲ್ಲಿ ಅಧಿಕಾರ ಮರುಗಳಿಸಲು ಸಾಧ್ಯವಿಲ್ಲ ಎಂಬ ಚರ್ಚೆಯೂ ಈಗ ಮುನ್ನೆಲೆಗೆ ಬಂದಿರುವುದು ಆ ಪಕ್ಷದಲ್ಲಿ ಗುಟ್ಟಾಗೇನು ಉಳಿದಿಲ್ಲ.
ಬಿಜೆಪಿಯ ಅಧಿಕಾರವಧಿಯಲ್ಲಿ ಬಿಜೆಪಿ ದನಿಯನ್ನು ಅಡಗಿಸಲು ಬಂಡಾಯ ಸಂಘಟನೆಯ ಹುಟ್ಟುಹಾಕಿದ ಸಾಹಿತಿ ಬರಗೂರು ರಾಮಚಂದ್ರಪ್ಪನವರು ತಂಡ ಕಾರಣ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

ಪಠ್ಯ ಪುಸ್ತಕದ ವಿವಾದ ಬಿಜೆಪಿಯ ಮರು ಅಧಿಕಾರದ ಕನಸಿನ ಅರ್ಧವನ್ನು ಆಪೋಷನ ತೆಗೆದುಕೊಳ್ಳುವಲ್ಲಿ ಬರಗೂರು ರಾಮಚಂದ್ರಪ್ಪನವರು ಆ ವಿವಾದವನ್ನು ಎದುರಿಸಿದ ರೀತಿಯೇ ಕಾರಣವಾಯಿತು.
ಪಠ್ಯ ಪುಸ್ತಕದ ವಿವಾದವನ್ನು ಬಿಜೆಪಿಯವರು ಎಬ್ಬಿಸಿದಾಗ ಅದರ ಮೂಲಕವೇ ಬಿಜೆಪಿಯ ಬಣ್ಣ ಬಯಲಿಗೆಳೆಯುವಲ್ಲಿ ಬರಗೂರು ಚಿಂತನೆಗಳು, ವಿವಾದದದ ಸಂಧರ್ಭದಲ್ಲಿ ಬರಗೂರು ನಡೆದುಕೊಂಡ ರೀತಿಯೇ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಅನೇಕ ಭಾಗ್ಯಗಳ ಹೆಸರನ್ನು ಕೊಟ್ಟವರೇ ಬರಗೂರು ಅವರು. ಅಂಥ ಹೆಸರುಗಳಿಂದಲೇ ಆಸ್ಮಿತೆಯನ್ನು ಗಟ್ಟಿಮಾಡಿಕೊಂಡ ಕಾಂಗ್ರೆಸ್ ಅವರನ್ನೇ ಮರೆತಂತೆ ಕಾಣುತ್ತದೆ.
ಗಾಂಧೀಜಿ, ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ ಅವರ ವಿಚಾರಧಾರೆಗಳು, ಸಮಾಜವಾದ- ಕಮ್ಯೂನಿಸ್ಟ್ ವಿಚಾರಧಾರೆಗಳ ಸಮ್ಮಿಳಿತವಾಗಿಯೂ. ಇವುಗಳನ್ನು ಹೊರತಾಗಿಯೂ ಈ ದಿನಮಾನಕ್ಕೆ ಜನಸಾಮನ್ಯರಿಗೆ, ರಾಜ್ಯಕ್ಕೆ, ದೇಶಕ್ಕೆ ಬೇಕಾದಂಥ ತಮ್ಮದೇ ಆದ ಒಂದು ಸೈಂದಾತಿಕ ನಿಲುವು ಹೊಂದಿರುವ ಬರಗೂರು ಅವರನ್ನು ‘ಬಯಲುಸೀಮೆಯ ಕುವೆಂಪು’ ಎಂದೇ ಬಣ್ಣಿಸುವುದುಂಡು.
ಜಾತ್ಯತೀತ ಶಕ್ತಿಗಳು ದುರ್ಬಲಗೊಳ್ೞುವುದನ್ನು ತಡೆಯಲು ಬರಗೂರು ಅವರ ಮಾತುಗಳು,, ಚಿಂತನೆಗಳು ಬಲವಾಗಿ ಪ್ರಯೋಜನಕ್ಕೆ ಬರುತ್ತಿದ್ದವು. ಇದು ರಾಜ್ಯದಲ್ಲಿ ಅಷ್ಟೇ ಅಲ್ಲದೇ ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್ ಅನ್ನು ಬಲಪಡಿಸಲು ನೆರವಾಗುತ್ತಿದ್ದವು.
ಬರಗೂರರು ಎಂದೂ ಕಾಂಗ್ರೆಸ್ ಜತೆ ನೇರ ಭಾಗಿಯಾದವರಲ್ಲ. ನಿಷ್ಠುರತೆಗೆ ಹೆಸರಾದ ಅವರ ಚಿಂತನೆಗೞು ಖಂಡಿತವಾಗಲೂ ಕಾಂಗ್ರೆಸ್ ನ ಬಿಟ್ಟರೆ ಬೇರೆ ಪಕ್ಷಗಳಿಗೆ ಅನುಕೂಲ ಸಿಂಧುವಾಗುವುದಿಲ್ಲ.
ಕರ್ನಾಟಕದಲ್ಲಿ ಜಾತ್ಯತೀತತೆಯು ಮುಂದುವರೆಯಬೇಕೆಂಬ ಅಭಿಲಾಷೆ, ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಮಾತುಗಳಿಗೆ ಪರ್ಯಾಯ ರೂಪಿಸಲು ವಿಧಾನ ಪರಿಷತ್ ನಲ್ಲಿ ಬರಗೂರು ಇದ್ದರೆ ಅದು ಬೇರೆಯೇ ಆಗಿರುತ್ತಿತ್ತು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಲದಲ್ಲಿ ವಿಧಾನ ಪರಿಷತ್ ಸ್ಥಾನ ಹುಡುಕಿಕೊಂಡು ಬಂದರೂ ಅದನ್ನು ತಿರಸ್ಕರಿಸಿದವರು ಬರಗೂರು ರಾಮಚಂದ್ರಪ್ಪನವರು. ಅವರಿಗೆ ಈ ಸಲ ಅವಕಾಶ ಕೊಡುವ ಮೂಲಕ ಜನರ ದನಿಯನ್ನು ವಿಧಾನ ಪರಿಷತ್ನಲ್ಲಿ ಜೀವಂತವಾಗಿ ಇಡುವ ಒಂದು ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡರೆ ಅದು ಕಾಂಗ್ರೆಸ್ಸಿಗಾಗುವ ನಷ್ಟವೇ ಹೊರತು ಬರಗೂರು ರಾಮಚಂದ್ರಪ್ಪನವರಿಗೆ ಅಲ್ಲ. ಬರಗೂರು ಮಾತುಗಳು, ಪಠ್ಯ ಪುಸ್ತಕ ವಿವಾದದ ವೇಳೆ ಇಡೀ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ತೆರಳಿ ಬಿಜೆಪಿ ಮುಖವಾಡವನ್ನು ಬಯಲಿಗೆಳೆದ ಬರಗೂರು ಅಭಿಮಾನಿಗಳ ಕೆಲಸ ಕಾಂಗ್ರೆಸ್ ಚೇತರಿಸಿಕೊಳ್ಳಲು ಸಹಾಯ ಮಾಡಿದ್ದನ್ನು ಕಾಂಗ್ರೆಸ್ ಮರೆಯಬಾರದು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಒಂದು ಮಾತು ಹೇಳುವುದುಂಟು. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಪಕ್ಷ ಕೈ ಬಿಡುವುದಿಲ್ಲ ಎಂದು. ಆದರೆ ಈ ಮಾತು ಯಾಕೋ ಮಾತಾಗಿಯೇ ಉಳಿಯುವಂತೆ ಕಾಣುತ್ತಿದೆ.
ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಪಕ್ಷಾಂತರ ಮಾಡಿ ವಕ್ತಾರರಾಗಿರುವ ರಮೇಶ್ ಬಾಬು ಅವರು ವಿಧಾನ ಪರಿಷತ್ ನಾಮನಿರ್ದೇಶಿತರಾದರು ಪಟ್ಟಿಯಲ್ಲಿ ಸೇರಿದ್ದು ಹೇಗೆಂದು ಈಗ ಡಿ.ಕೆ.ಶಿವಕುಮಾರ್ ಅವರೇ ಹೇಳಬೇಕಾಗಿದೆ.
ಪಕ್ಷವನ್ನು ವಕ್ತಾರರೊಬ್ಬರಿಗೆ ಆ ಸ್ಥಾನ ನೀಡಬೇಕೆಂಬ ಅಭಿಲಾಷೆ ಆ ಪಕ್ಷಕ್ಕೆ ಇದ್ದರೆ ಟಿ.ವಿ., ಸಮೂಹ ಮಾಧ್ಯಮ, ಸಾಮಾಜಿಕ ಮಾಧ್ಯಮ, ಪತ್ರಿಕೆಗಳಲ್ಲಿ ಕಾಂಗ್ರೆಸ್ ನ ವಕ್ತಾರಿಕೆಯನ್ನು ಸಮರ್ಥವಾಗಿ ಎದುರಿಸುತ್ತಿರುವ ಎ.ಎನ್. ನಟರಾಜಗೌಡ ಅವರಿಗೆ ನ್ಯಾಯವಾಗಿ ಸಲ್ಲಬೇಕಾಗಿತ್ತು.
ಅತ್ಯಂತ ಕಡುಬಡತನದ ಕುಟುಂಬದ ಹಿನ್ನೆಲೆಯ ನಟರಾಜಗೌಡರು, ವಿದ್ಯಾಥರ್ಿ ದೆಸೆಯಿಂದಲೇ ಎನ್ಎಸ್ಯುಐ ಕಾರ್ಯಕರ್ತರಾಗಿ ದುಡಿದವರು. ಹಾಗೇ, ನೋಡಿದರೆ, ನಟರಾಜಗೌಡರು ಕೆಪಿಸಿಸಿ ಮುಖ್ಯವಕ್ತಾರರು. ಯುವಕರ ಪ್ರತಿನಿಧಿಯಾಗಿ ಅವರು ಮಾಡಿರುವ ಕೆಲಸ ಆಗಾಧವಾದದು. ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಯುವಜನರಿಗೆ ಕಂಪ್ಯೂಟರ್ ಶಿಕ್ಷಣಕ್ಕೆ ಆಸರೆಯಾದವರು.
ಚೀಫ್ ಮೀಡಿಯಾ ಕೋ ಆಡರ್ಿನೇಟರ್ ಆಗಿ ಟಿ.ವಿ. ಚಾನಲ್ ಗಳ ಸಾವಿರಾರು ಡಿಬೇಟ್ ಗಳಲ್ಲಿ ಆ ಪಕ್ಷವನ್ನು ಸಮರ್ಥಿಸಿಕೊಂಡವರು. ಯೂತ್ ಐಕಾನ್ ಆಗಿರುವ ಅವರಿಗೆ ವಿಧಾನ ಪರಿಷತ್ ಸ್ಥಾನ ನೀಡಲಾಗುತ್ತದೆ ಎಂದು ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಹೇಳಲಾಗುತ್ತಿತ್ತು. ಆದರೆ ಪಟ್ಟಿಯಲ್ಲಿ ಅವರ ಹೆಸರು ಇಲ್ಲದೇ ಹೋಗಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಷಿಯಲ್ ಮೀಡಿಯಾವನ್ನು ನಿರ್ವಹಿಸಿದ ಬಗೆ ಎಲ್ಲರಿಗೂ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಹುಲ್ ಗಾಂಧಿಯವರ ಜನಾರ್ಶೀವಾದ ಯಾತ್ರೆಯಂತೆ ಸಾಗಿ ಪ್ರಚಾರದ ನೊಗ ಹೊತ್ತಿದ್ದರು. ತೆಲಂಗಾಣ ಚುನಾವಣೆಯಲ್ಲಿ ವಾರ್ ರೂಂ ನಿರ್ವಹಿಸಿ ಎಐಸಿಸಿ ಮೆಚ್ಚುಗೆಗೂ ಪಾತ್ರರಾಗಿದ್ದರು. ಆದರೆ ಇಂಥವರ ಹೆಸರೂ ಸಹ ಚರ್ಚೆಗೆ ಬಾರದೇ ಹೋಗಿದೆ.