Saturday, April 13, 2024
Google search engine
HomeUncategorizedಅಂಬೇಡ್ಕರ್ ಗೆ ಅವಮಾನ; ತಿಪಟೂರಿನಲ್ಲಿ ಪ್ರತಿಭಟನೆ

ಅಂಬೇಡ್ಕರ್ ಗೆ ಅವಮಾನ; ತಿಪಟೂರಿನಲ್ಲಿ ಪ್ರತಿಭಟನೆ

ತಿಪಟೂರು ನಗರದ ಪೈಹೋಟೆಲ್ ವೃತ್ತದಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಯವರು ಸರ್ಕಾರಿ ಶಾಲೆಯಲ್ಲಿ ನವಂಬರ್ 26ರಂದು ಸಂವಿಧಾನ ದಿನಾಚರಣೆ ಆಚರಿಸುವಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಕೈ ಪಿಡಿಯಲ್ಲಿ ಅಂಬೇಡ್ಕರ್ ಒಬ್ಬರೆ ಸಂವಿಧಾನ ಬರೆದಿಲ್ಲ ಎಂಬುದ್ದಾಗಿ ನಮೂದಿಸಿ ಸಂವಿಧಾನಕ್ಕೆ ಹಾಗೂ ಅಂಬೇಡ್ಕರ್ ರವರಿಗೆ ಅವಹೇಳನ ಮಾಡಿರುವುದನ್ನ ಖಂಡಿಸಿ ದಲಿತ ಪರ ,ಪ್ರಗತಿ ಪರ ,ಅಹಿಂದ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್ ರವರು ಮಾತನಾಡಿ ಜಗತ್ತೆ ಅಂಬೇಡ್ಕರ್ ರವರ ಚಿಂತನೆಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು ಅಂತರರಾಷ್ಠ್ರೀಯ ಮಟ್ಟದಲ್ಲಿ ಅಂಬೇಡ್ಕರ್ ವಾದ ಸದ್ದು ಮಾಡುತ್ತಿರುವಾಗ ರಾಜ್ಯದಲ್ಲಿರುವ ಮನುವಾದಿಗಳು ಅಂಬೇಡ್ಕರ್ ರವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಇದನ್ನು ಸಹಿಸಲು ಸಾದ್ಯವಿಲ್ಲವೆಂದ ಅವರು ಇಂತಹ ಕೃತ್ಯವನ್ನು ನಾಗರಿಕರು ಖಂಡಿಸಬೇಕು ಎಂದು ಕರೆ ನೀಡಿದರು.

ನಂತರ ಮಾತನಾಡಿದ ಚಿಂತಕ ತಿಪಟೂರು ಕೃಷ್ಣರವರು ಸರ್ಕಾರ ನೈಜ್ಯತೆಯನ್ನು ಮರೆಮಾಚಲು ಇಂತಹ ಕೃತ್ಯಗಳನ್ನು ಮಾಡುತ್ತಿದ್ದು ಜನರ ಹೋರಾಟದ ದಿಕ್ಕು ಬದಲಾಯಿಸಲು ಹೋರಟಿದೆ ಎಂದರು. ಸೌಹಾರದ್ ತಿಪಟೂರು ಸಂಘಟನೆಯ ಅಲ್ಲಾಬಕಾಶ್ ಎ ಮಾತನಾಡಿ ಟಿಪ್ಪುವಿನ ಬಗ್ಗೆ ಹಾಗೂ ಅಂಬೇಡ್ಕರ್ ರವರ ಬಗ್ಗೆ ಸರ್ಕಾರ ಅಪಪ್ರಚಾರ ಮಾಡುತ್ತಿದ್ದು ಇದನ್ನು ಅರಿಯ ಬೇಕಾಗಿದೆ ಶಿಕ್ಷನ ಇಲಾಖೆ ಹೋರಡಿಸಿರು ಆದೇಶವನ್ನು ಈ ಕೂಡಲೆ ರದ್ದು ಮಾಡ ಬೇಕು ಹಾಗೂ ಆಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಅಗ್ರಹಿಸಿದರು,

ಜಿಲ್ಲಾ ದಲಿತ ಮುಖಂಡ ರಾದ ಕುಂದೂರು ತಿಮ್ಮಯ್ಯ ಮಾತನಾಡಿ ದಲಿತ ವಿರೋದಿ ಸರ್ಕಾರದ ನೀತಿಗಳ ನಿಜ ಬಣ್ಣ ಅರಿಯಬೇಕಿದ್ದು ಸರ್ಕಾರದ ಅವಕಾಶವಾದಿತನವನ್ನು ಬಯಲು ಮಾಡಬೇಕಿದೆ ಎಂದರು, ಈ ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಬಜಗೂರು ಮಂಜುನಾಥ್, ರಂಗಸ್ವಾಮಿ, ಮಹದೇವಯ್ಯ, ಪೆದ್ದಿಹಳ್ಳಿ ನರಸಿಂಹಯ್ಯ, ನಾಗತಿಹಳ್ಳಿ ಕೃಷ್ಣಮೂರ್ತಿ, ಬಿಲಾಲ್ ಮಸೀದಿ ಮುತವಲ್ಲಿ ಷಫಿ ಉಲ್ಲಾ ಶರೀಪ್ , ರವರುಗಳು ಪ್ರತಿಭಟನಾ ಕಾರನ್ನ ಉದ್ದೇಶಿಸಿ ಮಾತನಾಡಿದರು,

ಪ್ರತಿಭಟನೆಯು ಪೈ ಹೋಟೆಲ್ ಬಳಿಯಿಂದ ಹೋರಟು ಅಂಬೇಡ್ಕರ್ ವೃತ್ತದ ಬಳಿ ಬಂದು ಻ಲ್ಲಿ ಪ್ರತಿಕೃತಿಯನ್ನು ದಹಿಸಿ ಉಪವಿಭಾಗಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕಾಂಗ್ರೇಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಸೈಪುಲ್ಲ ,ಹಬಿಬುಲ್ಲಾ, ಸೈಯದ್ ಮಹಮೂದ್ ಮೋಹಿನ್ ಖಾನ್ ಇಮ್ರಾನ್ ರಹಮತ್ ಅಂಭೇಡ್ಕರ್ ಸೆನೆಯ ಜಿಲ್ಲಾ ಉಪಾಧ್ಯಕ್ಷ ಅನಂದ್ ಬೌದ್ದ ಮಹಾ ಸಭಾದ ಮೋಹನ್ , ರಘು ವಂಸಂತ್, ರಘು ಯಗಚಿಕಟ್ಟೆ ,ಬಾಬು, ಪ್ರಗತಿಪರ ಸಂಘಟನೆಯ ರೇಣುಕ್ ಪ್ರಸಾದ್, ತಾಸೀನ್ (ಮೈಸೂರಿ) ನಿ ನಾ ಸಂ ಸತ್ತೀಶ್, ಸೇರಿದಂತೆ ನೂರಾರು ಕಾರ್ಯಕರ್ತರು ಬಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?