Friday, October 18, 2024
Google search engine
HomeUncategorizedಸುರಕ್ಷತೆಗೆ ಆದ್ಯತೆ-ಸೌಲಭ್ಯಕ್ಕೂ ಪ್ರಾಧಾನ್ಯತೆ ; ತಹಸೀಲ್ದಾರ್ ಕೆ ಪುರಂದರ್

ಸುರಕ್ಷತೆಗೆ ಆದ್ಯತೆ-ಸೌಲಭ್ಯಕ್ಕೂ ಪ್ರಾಧಾನ್ಯತೆ ; ತಹಸೀಲ್ದಾರ್ ಕೆ ಪುರಂದರ್

(ಪುರಸಭೆ ವತಿಯಿಂದ ಆಚರಿಸಲಾದ ಪೌರ ಕಾರ್ಮಿಕರ ದಿನಾಚರಣೆ-2024’ರ ಕಾರ್ಯಕರ್ಮದಲ್ಲಿ)

ಚಿಕ್ಕನಾಯಕನಹಳ್ಳಿ : ಪಟ್ಟಣದ ಹೊಯ್ಸಳ ಸಭಾಭವನದಲ್ಲಿ ಪೌರಾಡಳಿತ ನಿರ್ದೇಶನಾಲಯ ಮತ್ತು ಜಿಲ್ಲಾಡಳಿತ ಹಾಗೂ ಪುರಸಭಾ ಕಾರ್ಯಾಲಯ ವತಿಯಿಂದ‌ ಸೋಮವಾರ ಪೌರ ಕಾರ್ಮಿಕರ ದಿನಾಚರಣೆ–2024ನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ ಪುರಂದರ್’ರವರು ಮಾತನಾಡಿ, ಪೌರ ಕಾರ್ಮಿಕರಿಗೆ ಸರ್ಕಾರದ ಕಡೆಯಿಂದ ಮೀಸಲಿರುವ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಪೌರ ಕಾರ್ಮಿಕರು ಹಿಂಜರಿಯಬಾರದು. ಸಫಾಯಿ ಕರ್ಮಚಾರಿಗಳು ತಮಗಾಗಿ ಸರ್ಕಾರ ಒದಗಿಸುವ ನಿವೇಶನ, ವಸತಿ, ವಿಶ್ರಾಂತಿ ಕೊಠಡಿ, ಶೌಚಾಲಯ, ಮಕ್ಕಳ ಶಿಕ್ಷಣ ಸೌಲಭ್ಯ, ಇಎಸ್ಐ, ಪಿಎಫ್, ವಿಮೆ, ಪೌಷ್ಟಿಕಾಂಶ ಯುಕ್ತ ಬೆಳಗಿನ ಉಪಹಾರ ತರಹದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಅದೇರೀತಿ ಕೆಲಸದ ಸಮಯದಲ್ಲಿ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ತಪ್ಪದೆ ಅನುಸರಿಸಿ ಪಾಲಿಸಬೇಕು. ಕರ್ಮಚಾರಿಗಳ ಸುರಕ್ಷತೆಗಾಗಿ ಪುರಸಭೆ ಒದಗಿಸಿರುವ ಉಡುಪು, ಸುರಕ್ಷೆಗಾಗಿರುವ ಮಾಸ್ಕ್, ನೋಸ್ ಪೀಸ್, ಗಮ್’ಬೂಟ್ಸ್ ಇತ್ಯಾದಿ ಧರಿಸಿಕೊಂಡು, ಸುರಕ್ಷತಾ ಸಲಕರಣೆಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸಬೇಕು. ಕರ್ಮಚಾರಿಗಳು ಧೂಮಪಾನ ಮತ್ತು ಮದ್ಯಪಾನಕ್ಕೆ ದಾಸರಾಗಬಾರದು. ಅದು ಪ್ರಾಣಕಂಟಕ ದುಶ್ಚಟಗಳು ಎಂದು ಸಫಾಯಿ ಕರ್ಮಚಾರಿಗಳಿಗೆ ತಿಳಿಹೇಳಿ ಪೌರ ಕಾರ್ಮಿಕ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಸಮಾಜ ಕಲ್ಯಾಣಾಧಿಕಾರಿ ಶ್ರೀಧರ ಮೂರ್ತಿ ಮಾತನಾಡಿ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನಗಳು ಹಾಗೂ ಕಾಲ ಕಾಲಕ್ಕೆ ಸರ್ಕಾರವೇ ನೇಮಿಸಿದ್ದ ಹಲವು ಆಯೋಗಗಳು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ಸಂಬಂಧಿಸಿದಂತೆ ನೀಡಿರುವ ಸೂಚನೆಗಳನ್ನು ಉಲ್ಲೇಖಿಸುತ್ತಾ, ಕರ್ಮಚಾರಿಗಳಿಗೆ ಇರುವ ಹತ್ತುಹಲವು ಸೌಯ ಮತ್ತು ಸೌಕರ್ಯಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಸಿ ಬಸವರಾಜು ಮಾತನಾಡಿ, ಕೆಲವೊಮ್ಮೆ ಪುರಸಭಾ ಸದಸ್ಯರು ಹಾಗೂ ಪೌರ ಕಾರ್ಮಿಕರ ನಡುವೆ ನಡೆಯುವ ಅನಿವಾರ್ಯ ತಾಕಲಾಟಗಳನ್ನು ತಮಾಷೆಯಾಗಿ ವಿವರಿಸಿ, ನೆರೆದಿದ್ದ ಎಲ್ಲರನ್ನೂ ನಗಿಸಿದರು.

ಪುರಸಭೆಯ ಸಫಾಯಿ ಕರ್ಮಚಾರಿಗಳ ವ್ಯಾಪ್ತಿಗೆ ಒಳಪಡದ ಕೆಲವು ಕಚೇರಿ ಆವರಣವನ್ನು ಶುಚಿಗೊಳಿಸುವ ಕೆಲಸವನ್ನು ನಮ್ಮ ಪೌರ ಕಾರ್ಮಿಕರಿಂದ ಮಾಡಿಸಿಕೊಳ್ಳಲಾಗುತ್ತಿದೆ. ಇದು ಸಲ್ಲದ್ದು. ಪಟ್ಟಣ, ಪುರ ಮತ್ತು ಪುರಸಭೆ ವ್ಯಾಪ್ತಿಯ 23 ವಾರ್ಡುಗಳ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವುದೇ ಈಗ ದೊಡ್ಡ ಸವಾಲಾಗಿದೆ. ಅದರೊಂದಿಗೆ ಕಚೇರಿ-ನೈರ್ಮಲ್ಯವನ್ನು ಕಾಪಾಡುವ ಕೆಲಸವನ್ನೂ ಸಫಾಯಿ ಕರ್ಮಚಾರಿಗಳಿಗೆ ವಹಿಸಿದರೆ, ಅವರು ಹೇಗೆ ಕೆಲಸ ನಿರ್ವಹಿಸಲು ಸಾಧ್ಯ ಎಂದು ಪ್ರಶ್ನೆ ಎತ್ತಿದ ನಾಮ ನಿರ್ದೇಶಿತ ಪುರಸಭಾ ಸದಸ್ಯ ಮಹಮದ್ ಹುಸೇನ್ ಗುಂಡಾ, ಪೌರ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ ಕಾಪಾಡಿಕೊಂಡು ಅವನ್ನು ಪಾಲಿಸಿಕೊಂಡು ಹೋಗಬೇಕಾದ ಅಗತ್ಯತೆಯಿದೆ ಎಂದು ಪುರಸಭೆಯ ಅಧಿಕಾರಿಗಳಿಗೆ ಒತ್ತಾಯಿಸಿದರು.

ಬಹುತೇಕ ಎಲ್ಲ ಪುರಸಭಾ ಸದಸ್ಯರು ಹಾಗೂ ಅಧಿಕಾರಿಗಳು, ಸಫಾಯಿ ಕರ್ಮಚಾರಿಗಳಿಗೆ ಪೌರ ಕಾರ್ಮಿಕ ದಿನಾಚರಣೆಯ ಶುಭಾಶಯ ಕೋರಿದರು.

ಕಡೆಯಲ್ಲಿ, ಪೌರ ಕಾರ್ಮಿಕ ದಿನಾಚರಣೆಯ ಶುಭಾಶಯಗಳನ್ನು ಕೋರಿ ಮಾತನಾಡಿದ ಪುರಸಭಾ ಅಧ್ಯಕ್ಷ ಸಿ ಹೆಚ್ ದಯಾನಂದ್, ಸಫಾಯಿ ಕರ್ಮಚಾರಿಗಳು ಆರೋಗ್ಯ ಮತ್ತು ಆಯಸ್ಸಿನ ಬಗ್ಗೆ ಸದಾ ಜಾಗ್ರತೆ ವಹಿಸಬೇಕು ಎಂದು ಕಾಳಜಿ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಲವು ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಕರ್ಮಚಾರಿಗಳು ಹಾಗೂ ಉತ್ತಮ ಸೇವೆ ಸಲ್ಲಿಸಿದ ಸಫಾಯಿ ಕರ್ಮಚಾರಿಗಳು ಮತ್ತು ಹಿರಿಯ ಸಫಾಯಿ ಕರ್ಮಚಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ, ಪಟ್ಟಣ ಪುರಸಭೆಯ ಎಲ್ಲ ವಾರ್ಡುಗಳ ಎಲ್ಲ ಸದಸ್ಯರು, ಪುರಸಭೆ ಅಧಿಕಾರಿಗಳು, ಮಹಮದ್ ಹುಸೇನ್ ಗುಂಡಾ, ಪುರಸಭಾ ಸದಸ್ಯ(ನಾಮ ನಿರ್ದೇಶಿತ) ಕರ್ಮಚಾರಿಗಳು, ಕರ್ಮಚಾರಿಗಳ ಕುಟುಂಬಸ್ಥರು ಹಾಜರಿದ್ದರು.


_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?