Tuesday, September 17, 2024
Google search engine
Homeಜಸ್ಟ್ ನ್ಯೂಸ್ಅಲೆಮಾರಿಗಳ ಗಾಂಧಿನಗರಕ್ಕೆ ಬಂದ ವೈದ್ಯರಿಗೆ ಕಂಡಿದ್ದೇನು?

ಅಲೆಮಾರಿಗಳ ಗಾಂಧಿನಗರಕ್ಕೆ ಬಂದ ವೈದ್ಯರಿಗೆ ಕಂಡಿದ್ದೇನು?

ಚಿಕ್ಕನಾಯಕನಹಳ್ಳಿ : ಗುರುವಾರ ಮಧ್ಯಾಹ್ನ ಪಟ್ಟಣದ ಅಲೆಮಾರಿ ವಸತಿ ಪ್ರದೇಶವಾದ ಗಾಂಧಿನಗರಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಅವರ ಸಿಬ್ಬಂದಿಗಳು ಭೇಟಿ ನೀಡಿ ಅಲೆಮಾರಿ ನಿವಾಸಿಗಳ ಆರೋಗ್ಯ ವಿಚಾರಿಸಿ, ತಪಾಸಣೆ ನಡೆಸಿದರು.

ಈ ಸಂದರ್ಭದಲ್ಲಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಯಶ್ವಂತ್ ಮಾತನಾಡಿ, ಪಬ್ಲಿಕ್-ಸ್ಟೋರಿಯಲ್ಲಿ ಪ್ರಕಟಗೊಳ್ಳುತ್ತಿರುವ ಅಲೆಮಾರಿ ಸಮುದಾಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಿದ ಪರಿಣಾಮ ನಾವು ಈಗ ಈ ಅಲೆಮಾರಿ ಸಮುದಾಯಗಳ ವಸತಿ ಪ್ರದೇಶಗಳನ್ನು ಹುಡುಕಿಕೊಂಡು ಇಲ್ಲಿಯವರೆಗೂ ಬರಲು ಸಾಧ್ಯವಾಯಿತು.

ಇಲ್ಲಿರುವ ಎಲ್ಲರ ಆರೋಗ್ಯ ತಪಾಸಣೆ ನಡೆಸಿ, ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಬರುವಂತೆ ಸೂಚಿಸಿದ್ದೇವೆ. ಇಲ್ಲಿರುವ ಒಬ್ಬ ಹೆಣ್ಣುಮಗುವಿಗೆ ಅಪಸ್ಮಾರ-ಮೂರ್ಛೆರೋಗ(ಎಪಿಲೆಪ್ಸಿ) ಸಮಸ್ಯೆಯಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಆಕೆಗೆ ಉಚಿತವಾಗಿ ನೀಡಲಾಗುವ ಮಾತ್ರೆಗಳನ್ನು ಪಡೆದುಕೊಳ್ಳುವಂತೆ ತಿಳಿಸಿದ್ದೇವೆ.

ಮತ್ತೊಂದು ಹೆಣ್ಣು ಮಗುವಿನ ಕಾಲಿನಲ್ಲಿ ತೀವ್ರತರ ಗಾಯವಿದ್ದು, ಅದಕ್ಕೆ ಚಿಕಿತ್ಸೆ ಹಾಗೂ ಶುಶ್ರೂಷೆಯ ಅಗತ್ಯವಿರುವುದನ್ನು ತಿಳಿಸಿ, ಸರ್ಕಾರಿ ಆಸ್ಪತ್ರೆಗೆ ಬರಲು ಹೇಳಿದ್ದೇವೆ. ಇಲ್ಲಿನ ವಯೋವೃದ್ಧರಿಗೆ ಬರುವ ವಯೋಸಹಜ ಬೇನೆಗಳು ಇದ್ದೇ ಇವೆ. ಆಸ್ಪತ್ರೆಯಲ್ಲಿ ಅವರ ವಿವರವಾದ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಲಾಗುವುದು. ಒಟ್ಟಾರೆ, ಗಾಂಧಿನಗರದ ಅಲೆಮಾರಿಗಳನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ನಾವು ಮನಃಪೂರ್ವಕ ಆಹ್ವಾನಿಸುತ್ತಿದ್ದೇವೆ ಎಂದರು.

ವಸತಿ ಪ್ರದೇಶದಲ್ಲಿ ಅಲ್ಲಲ್ಲಿ ಕಟ್ಟಿದ್ದ ಲಾರ್ವಾ ಶುಚಿಗೊಳಿಸಲಾಗಿದೆ. ಚರಂಡಿಗಳಲ್ಲಿ ನಿಂತ ನೀರು ಹಾಗೂ ಕೊಳಚೆಯ ಫೋಟೋ, ವಿಡಿಯೋ ಮಾಡಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಶುಚಿತ್ವ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಅಲ್ಲಿನ ಜನರಿಗೆ ಒತ್ತಿ ಒತ್ತಿ ತಿಳಿಹೇಳಲಾಗಿದೆ ಎಂದೂ ಅವರು ಪಬ್ಲಿಕ್ ಸ್ಟೋರಿ’ಗೆ ತಿಳಿಸಿದರು.

ಅಲೆಮಾರಿಗಳ ಗಾಂಧಿನಗರ ಭೇಟಿ ಸಂದರ್ಭದಲ್ಲಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನಟರಾಜ್, ಆರೋಗ್ಯ ನಿರೀಕ್ಷಕ ಮುದ್ದೇಗೌಡ ಹಾಗೂ ಆಶ್ರಿತ ರೋಗವಾಹಕ ನಿಯಂತ್ರಣದ ತಾಂತ್ರಿಕ ಮೇಲ್ವಿಚಾರಕ ಕುಮಾರ್ ಸೇರಿದಂತೆ ಆಸ್ಪತ್ರೆಯ ಇತರೆ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.


ಇದು ಇಲ್ಲಿಯ ಕತೆ

ಇಲ್ಲಿ ದಕ್ಕಲಿಗ, ಕೊರಮ, ಕೊರಚ, ಸುಡುಗಾಡು ಸಿದ್ದ, ಪಿಂಜಾರ, ಚನ್ನದಾಸರ್ ಮತ್ತು ದೊಂಬಿದಾಸ ಸೇರಿದಂತೆ ಹಲವು ಅಲೆಮಾರಿ ಕುಟುಂಬಗಳು ವಾಸವಿವೆ. ಇವರಲ್ಲಿನ ಅನೇಕರ ಬಳಿ ಆಧಾರ್ ಕಾರ್ಡ್ ಇಲ್ಲ. ಸೂರಿಲ್ಲ.

ಮನೆಯಿಲ್ಲ. ನಿವೇಶನವಿಲ್ಲ. ಉದ್ಯೋಗವಿಲ್ಲ. ಮಕ್ಕಳಿಗೆ ಶಿಕ್ಷಣದ ಸೌಲಭ್ಯವಿಲ್ಲ. ಪಡಿತರದ ಯಾವ ಗ್ಯಾರಂಟಿಯೂ ಇಲ್ಲ. ಆದರೂ ಇವು ಇಲ್ಲಿ ಹೀಗೆ ಉಸಿರು ಬಿಗಿದುಕೊಂಡು ಬದುಕುತ್ತಲೇ ಇವೆ. ನಾಗರಿಕ ಸಮಾಜ(!?) ಬಳಸಿ ಬಿಸಾಡಿದ ಚಿಂದಿ, ಬಾಟಲಿ, ಕಿಲುಬು, ತಗಡು ಆಯ್ದು ಗುಜರಿ ಅಂಗಡಿಗೆ ಮಾರಿ ಬದುಕಿನ ತಲಪರಿಗೆ ತಡಕುತ್ತಲೇ ಇವೆ.




_ವರದಿ, ಸಂಚಲನ
ಚಿಕ್ಕನಾಯಕನ ಸೀಮೆಯಿಂದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?