Friday, October 18, 2024
Google search engine
HomeUncategorizedಕುಲಾಂತರಿ ತಳಿ: ತಿಪಟೂರಿನಲ್ಲಿ ಬಿಸಿಬಿಸಿ ಚರ್ಚೆ

ಕುಲಾಂತರಿ ತಳಿ: ತಿಪಟೂರಿನಲ್ಲಿ ಬಿಸಿಬಿಸಿ ಚರ್ಚೆ

ತಿಪಟೂರು:  ಬೇಸಾಯ ಕ್ಷೇತ್ರಕ್ಕೆ ಕೇವಲ ಹುಸಿ ಭರವಸೆಯನ್ನು ಅಷ್ಟೇ ಕೊಡುತ್ತಿರುವುದು. ಇಡೀ ಕೃಷಿ ವ್ಯವಸ್ಥೆಯನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಸಂಚನ್ನು ಈ ತಂತ್ರಜ್ಞಾನ ಮತ್ತು ಅದನ್ನು ಹೊಂದಿರುವವರ ಉದ್ದೇಶ ಎಂದು ರಮೇಶ್ ದೇವನಹಳ್ಳಿ ತಿಳಿಸಿದರು.


ತಿಪಟೂರಿನ ರೋಟರಿ ಭವನದಲ್ಲಿ ಸೆಪ್ಟಂಬರ್ ೨೧ರಂದು ಕುಲಾಂತರಿ ಬೆಳೆಗಳು ಮತ್ತು ಆಹಾರ ಕುರಿತು ನಡೆದ ಒಂದು ದಿನದ ಸಮಾಲೋಚನೆಯು ವಿವಿಧ ಸಂಗತಿಗಳ ಕುರಿತು ಚರ್ಚೆ ನಡೆಸಿದ್ದು ,ನಮ್ಮ ಆಹಾರ ಹಾಗೂ ಕೃಷಿ ವ್ಯವಸ್ಥೆಯಲ್ಲಿ ಜೀನ್ ವರ್ಗಾವಣೆ ತಂತ್ರಜ್ಞಾನ ಪರಿಣಾಮದ ಮುನ್ನೆಚ್ಚರಿಕೆ ನೀಡುವ ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ನ್ಯಾಯಪೀಠದ ತೀರ್ಪು ಹಾಗೂ ಆದೇಶಗಳನ್ನು ನಾವು ಗಮನಕ್ಕೆ ತೆಗೆದುಕೊಂಡಿದ್ದೇವೆ ಎಂದರು.


ನಾವು, ತುಮುಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ರೈತ ಹಕ್ಕುಗಳ ಕಾರ್ಯಕರ್ತರು, ವಿವಿಧ ರೀತಿಯ ಬೇಸಾಯ ಪದ್ದತಿ ಮತ್ತು ಅಭ್ಯಾಸಗಳನ್ನು ಅನುಸರಿಸುತ್ತಿರುವ ರೈತರನ್ನು ಪ್ರತಿನಿಧಿಸುತ್ತಿದ್ದೆವೆ. ಕೃಷಿ ಕಾರ್ಮಿಕರು, ಜಾನುವಾರು ಪಾಲಕರು, ಹಿಡುವಳಿದಾರರು, ಮೀನು ಸಾಕಣಿಕೆದಾರರು, ಮಹಿಳಾ ರೈತರು, ಆಹಾರ ಉತ್ಪಾದಕರು, ಗ್ರಾಹಕರು, ಗಿಡಮೂಲಿಕೆ ಪಂಡಿತರು ಮತ್ತು ಜೇನುಸಾಕಣೆದಾರರನ್ನು ನಾವು ಭೇಟಿಯಾಗಿದ್ದೇವೆ ಎಂದರು.


ಕುಲಾಂತರಿ ಬೆಳೆಗಳ ಕುರಿತು ರಾಷ್ಟ್ರೀಯ ನೀತಿಯನ್ನು ರೂಪಿಸಲು ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನ್ಯಾಯಾಲಯವು ಸೂಚಿಸಿದೆ. ರೈತ ಪ್ರತಿನಿಧಿಗಳೂ ಒಳಗೊಂಡಂತೆ ವಿವಿಧ ಭಾಗೀದಾರರನ್ನು ಆಹ್ವಾನಿಸಿ, ನಾರ್ವಜನಿಕ ಸಮಾಲೋಚನೆಯನ್ನು ನಾಲ್ಕು ತಿಂಗಳ ಒಳಗೆ ಪೂರ್ಣಗೊಳಿಸುವಂತೆ ಅದೇಶ ನೀಡಿದೆ ಎಂದರು.

ನ್ಯಾಯಾಲಯದ ಆದೇಶವನ್ನು ನಾವು ಜಾಗರೂಕತೆಯಿಂದ ಸ್ವಾಗತಿಸುತ್ತೇವೆ.
ಲಂಗುಲಗಾಮು ಇಲ್ಲದೇ ರೂಪಿಸಲಾದ ಹಾಗೂ ಅನಿಯಂತ್ರಿತ ‘ಜೀನ್ ಎಡಿಟಿಂಗ್’ ತಂತ್ರಗಳ ಮೂಲಕ ಜಾರಿಗೆ ತಂದAತಹಕುಲಾಂತರಿ ತಂತ್ರಜ್ಞಾನವು ಭಾರತದಲ್ಲಿ ಇಗಾಗಲೇ ಅಡ್ಡ ಪರಿಣಾಮಗಳನ್ನು ಉಂಟು ಮಾಡಿವೆ ಎಂದು ವೈಜ್ಞಾನಿಕ ಸಂಶೋಧನಾ ಅಧ್ಯಯನ ಪ್ರಬಂಧಗಳು ತೋರಿಸಿವೆ.

ಭಾರತದಲ್ಲಿ ಸರ್ಕಾರಿ ಸಂಶೋಧನಾ ಸಂಸ್ಥೆಗಳು ಹಾಗೂ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಕುಲಾಂತರಿ ತಳಿಗಳು ಸುರಕ್ಷಿತವೆಂದು ಹೇಳಲಿಕ್ಕೆ ಯಾವುದೇ ಗ್ಯಾರಂಟಿಯತು ಇಲ್ಲವೇ ಇಲ್ಲ.
ಒಂದು ವೇಳೆ ಬೃಹತ ಕಾರ್ಪರೇಟ್ ಕಂಪನಿಗಳ ಏಕಸ್ವಾಮ್ಯದಲ್ಲಿರುವ ಭೌತಿಕ ಹಕ್ಕು (ಐಪಿಆರ್)-ಆಧಾರಿತ ಕುಲಾಂತರಿ ಬೆಳೆ ತಂತ್ರಜ್ಞಾನಗಳನ್ನು ಅವಲಂಬಿಸಿದರೆ, ವಿಶಾಲವಾದ ಕೃಷಿ ವ್ಯವಹಾರ ಮೌಲ್ಯಗಳ ಬದಲಾಗಿ ಕಾರ್ಪೊರೇಟ್ ವ್ಯಕ್ತಿಗಳ ಪರವಾಗಿರುವ ಸಂಕೀರ್ಣ ಕಾನೂನುಗಳಿಗೆ ಭಾರತದ ರೈತರು ಬಲವಂತವಾಗಿ ಒಡ್ಡಿಕೊಳ್ಳಬೇಕಾಗುತ್ತದೆ ಎಂಬ ಸಂಶಯ ಉಂಟಾಗುತ್ತಿದೆ. ೮. ಭಾರತದಲ್ಲಿ ಬಿಟಿ ಹತ್ತಿ ಬೆಳೆಯ ವೈಫಲ್ಯದ ಕಥೆಯು ಈ ವಿನಾಶಕಾರಿ ತಂತ್ರಜ್ಞಾನದ ಒಂದು ಶ್ರೇಷ್ಟ ನಿರ್ದೆಶನವಾಗಿದೆ ದೇಶದಲ್ಲಿ ಆಗುತ್ತಿರುವ ರೈತರ ಆತ್ಮಹತ್ಯೆಗಳಲ್ಲಿ ಹೆಚ್ಚಿನದಾಗಿ ಬಿ.ಟಿ ಹತ್ತಿ ಬೆಳೆಯುವ ರೈತರುಗಳಾಗಿದ್ದು ಎಂದು ಕೂಡಾ ಭಾರತ ಸರ್ಕಾರವು ಸ್ವತಃ ನ್ಯಾಯಾಲದಲ್ಲಿ ಅಫಿಡವಿಟ್ ನಲ್ಲಿ ತಿಳಿಸಿರುವುದು ಈ ಕುಲಾಂತರಿ ಬೆಳೆಯ ಅವಾಂತರಗಳನ್ನು ತಿಳಿಸುತ್ತದೆ.


ಅಚ್ಚರಿಯ ವಿಷಯವೆಂದರೆ, ಭಾರತ ಒಕ್ಕೂಟ ಸರ್ಕಾರವು ಒಂದೆಡೆ ನೈಸರ್ಗಿಕ ಅಥವಾ ಸಾವಯವ ಕೃಷಿಯನ್ನು ಉತ್ತೇಜಿಸುವ ಬಗ್ಗೆ ಘಂಟಾಘೋಷದಿಂದ ಮಾತಾಡುತ್ತಿದ್ದರೆ, ಇನ್ನೊಂದೆಡೆ ಕುಲಾಂತರಿ ತಳಿಗಳ ಬಗ್ಗೆ ಕದ್ದು ಮುಚ್ಚಿ ಒಲವು ತೋರುತ್ತಿದೆ. ಇದು ನೀತಿ ನಿರೂಪಣೆಯಲ್ಲಿನ ವೈರುಧ್ಯ!
ಕರ್ನಾಟಕ ರಾಜ್ಯ ರೈತ ಸಂಘದ ಅದ್ಯಕ್ಷ ಮಂಡಳಿಯ ಸದಸ್ಯರಾದ ಕೆ.ಟಿ ಗಂಗಾಧರ್ ಮಾತನಾಡಿ ನಾವು ಧೃಡ ನಿಶ್ಚಯದಿಂದ ತಿಳಿಸುವುದೇನೆಂದರೆ ಸದರಿ ರಾಷ್ಟ್ರೀಯ ನೀತಿ-ಕಾನೂನು ರೂಪಿಸುವ ಮೊದಲು ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ದೇಶದಲ್ಲಿ ವ್ಯಾಪಕವಾದ ಮತ್ತು ನಂಬಿಕಾರ್ಹ ವಿಧಾನದ ಮೂಲಕ ಪ್ರಜಾತಾಂತ್ರಿಕವಾದ ಸಮಾಲೋಚನೆ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ;ಈ ಸಮಾಲೋಚನೆಗಳಲ್ಲಿ ರಾಜ್ಯ ಸರ್ಕಾರಗಳು ಯಾವುದೇ ರೀತಿಯ ಒತ್ತಡಕ್ಕೆ ಮಣಿದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ;


ಭಾರತ ಸರಕಾರವು ಇಗಾಗಲೇ ದೇಶದ ರೈತರ ಮೇಲೆ ಹೇರಿರುವ ತೀವ್ರ ಕೃಷಿ/ಕೈಗಾರಿಕೆ ಕೃಷಿ ಮಾದರಿಯ ನಕಾರತ್ಮಕ ಪರಿಣಾಮಗಳು ಮತ್ತು ಅದರ ಬಿಕ್ಕಟ್ಟುಗಳ ಬಗ್ಗೆ ಮೊದಲು ಪರಿಹರಿಸುವಂತೆ ಮಾಡುತ್ತೇವೆ.ಸ್ವಾಯತ್ತ ಕೃಷಿ-ಜೀವಾವರಣದ ಅರಿವಿನ ಮೂಲಕ ಹೊಸ ಮಾರ್ಗವನ್ನು ರೂಪಿಸುತ್ತೇವೆ, ನಮ್ಮ ಕೃಷಿ ಕಸುಬಿಗೆ ಹೆಚ್ಚಿನ ಅಪಾಯಕಾರಿ ತಂತ್ರಜ್ಞಾನಗಳನ್ನು ಸೇರಿಸದಂತೆ ನೋಡಿಕೊಳ್ಳುತ್ತೇವೆ. ಹಾಗೂ ದೇಶಿ ಬೀಜಗಳು ಮತ್ತು ಅನುವಂಶಿಕ ತತ್ವಾಂಶಗಳ ಮೇಲೆ ಕಾರ್ಪೊರೇಟ್ ನಿಯಂತ್ರಣವು ಬೌದ್ಧಿಕ ಸೊತ್ತಿನ ಹಕ್ಕುಗಳ ಮೂಲಕ ನೆಡೆಯದಂತೆ ನೋಡಿಕೊಳ್ಳುತ್ತೇವೆ.


ಇದೇ ಸಂದರ್ಭದಲ್ಲಿ ಕ.ರಾ.ರೈ.ಸ, ಹಸಿರು ಸೇನೆ, ಸಾವಯವ ಕೃಷಿ ಪರಿಹಾರ, ಜೇನುಸಾಕಣಿಕೆದಾರ ಸಂಘ, ಸೌಹಾರ್ದ ತಿಪಟೂರು, ಕನ್ನಡ ರಕ್ಷಣಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಗ್ರಾಹಕ ಹಕ್ಕುಗಳ ಸಮಿತಿ, ನಿವೃತ್ತ ನೌಕರರ ಸಂಘ ಮತ್ತಿತರ ರಾಜ್ಯ ಮತ್ತು ತಾಲೂಕಿನ ಸಂಘಟನೆಯ ಸದಸ್ಯರುಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?