Tuesday, September 17, 2024
Google search engine
HomeUncategorizedತುರುವೇಕೆರೆಗೆ ಕಾನೂನು ಕಾಲೇಜು: ಶಾಸಕ

ತುರುವೇಕೆರೆಗೆ ಕಾನೂನು ಕಾಲೇಜು: ಶಾಸಕ

ತುರುವೇಕೆರೆ: ಕ್ಷೇತ್ರದಲ್ಲಿನ ಬಡವರು, ಕೂಲಿಕಾರ್ಮಿಕರು ಮತ್ತು ರೈತರ ಮಕ್ಕಳು ಉನ್ನತ ಶಿಕ್ಷಣ ಓದಲು ಹೊರ ಜಿಲ್ಲೆಗಳಿಗೆ ಹೋಗಲು ಸಾದ್ಯವಾವಿಲ್ಲ ಆದ್ದರಿಂದ ತಾಲ್ಲೂಕಿಗೆ ಸ್ನಾತ್ತಕೋತ್ತರ ಮತ್ತು ಕಾನೂನು ಪದವಿ ಕಾಲೇಜನ್ನು ತರಲು ಚಿಂತಿಸಲಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ರವರ137ನೇ ಜನ್ಮ ಜಯಂತಿ, ಶಿಕ್ಷಕರ ದಿನಾಚರಣೆ ಹಾಗು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರ ಅವರು

ಗುಡ್ಡೇನಹಳ್ಳಿ ಪ್ರಥಮ ದರ್ಜೆ ಕಾಲೇಜು ಕ್ಯಾಂಪಸ್ ನಲ್ಲಿ ಸ್ವಾತ್ನಕೋತ್ತರ ವಿಭಾಗದ ಅರ್ಥಶಾಸ್ತ್ರ ಮತ್ತು ಎಂ.ಕಾಂ ಪದವಿಗಳನ್ನು ಹೊಸದಾಗಿ ತೆರೆಯಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಬಳಿ ಚರ್ಚಿಸಿದ್ದೇನೆ. ತುರುವೇಕೆರೆ ಜಿಲ್ಲೆಯಲ್ಲೇ ಶೈಕ್ಷಣಿಕವಾಗಿ 2ನೇ ಸ್ಥಾನದಲ್ಲಿದ್ದು ಮೊದಲ ಸ್ಥಾನಕ್ಕೆ ತಲುಪಲು ಶಿಕ್ಷಕರು, ಅಧಿಕಾರಿಗಳು ಕಠಿಣ ಶ್ರಮ ಹಾಕಿ ಎಂದರು.

ನನ್ನಅವಧಿಯಲ್ಲಿ 7 ಹೊಸ ಪ್ರೌಢ ಶಾಲೆಗಳನ್ನು ತೆರೆಯಲಾಗಿದ್ದು ಆ ಶಾಲೆಗಳಲ್ಲಿ ಕೆಲವು ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ಬಂದಿವೆ ಆದ್ದರಿಂದ ಕನ್ನಡ ಶಾಲೆಗಳನ್ನು ಮುಚ್ಚಬೇಡಿ ಹೆಣ್ಣು ಮಕ್ಕಳು ದೂರ ಹೋಗಿ ಓದಲು ಆಗುವುದಿಲ್ಲ ಹಾಗಾಗಿ ಮಾರ್ಚ್ ವರೆಗೂ ಮುಂದುವರೆಸಿ ಎಂದು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದೇನೆ. ತಾಲ್ಲೂಕಿನ ಕೆಲ ಶಿಕ್ಷಕರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ಶಿಕ್ಷಕರ ಪಾತ್ರ ಅಪಾರ. ನಮ್ಮಂತಹ ರಾಜಕಾರಣಿಗಳಿಂದ ಹಿಡಿದು ಎಲ್ಲ ವರ್ಗದ ನಾಯಕರು, ವಿದ್ವಾಂಸರು, ಚಿಂತರು, ವಿಜ್ಞಾನಿಗಳನ್ನ ರೂಪಿಸುವವರು ಶಿಕ್ಷಕರೇ ಎಂದು ಶ್ಲಾಘಿಸಿದರು.

ಈಚಿನ ದಿನಗಳಲ್ಲಿ ಅತಿ ಕಡುಬಡವರ, ಕೂಲಿಕಾರ್ಮಿಕರ ಮಕ್ಕಳು ಐಎಎಸ್, ಕೆಎಎಸ್ ಮಾಡುತ್ತಿರುವುದು ನೋಡಿದರೆ ವಿದ್ಯೆ, ಉದ್ಯೋಗ ಮತ್ತು ಅಧಿಕಾರ ಪಡೆಯಲು ಬಡತನ ಅಡ್ಡಿಬಾರದು ಎಂಬುದು ನನ್ನಅಭಿಪ್ರಾಯವಾಗಿದೆ ಹಾಗಾಗಿ ಪ್ರತಿಯೊಬ್ಬರೂ ವಿದ್ಯಾವಂತರಾಗಿ ತಮ್ಮ ಮಕ್ಕಳನ್ನು ಚನ್ನಾಗಿ ಓದಿಸಿ ಎಂದರು.

ಬಿ.ಇ.ಒ ಎನ್.ಸೋಮಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಸಾಧಿಸುವ ಛಲವಿದ್ದರೆ ಶಿಕ್ಷಕರೊಬ್ಬರು ರಾಷ್ಟ್ರಪತಿ ಹುದ್ದೆಯನ್ನೂ ಅಲಂಕರಿಸಬಹುದೆಂದು ತೋರಿಸಿಕೊಟ್ಟವರು ರಾಧಾಕೃಷ್ಣನ್ ರವರು. ಅವರ ಚಿಂತನೆ, ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬ ಶಿಕ್ಷಕರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವಿಷಮಸ್ಥಿತಿಯ ಸಮಾಜವನ್ನು ತಿದ್ದುವ ಏಕೈಕ ವ್ಯಕ್ತಿ ಎಂದರೆ ಅದು ಶಿಕ್ಷಕ ಮಾತ್ರ. ಶಿಕ್ಷಕ ವೃತ್ತಪವಿತ್ರವಾದದು ಅದರ ಗೌರವತ್ವವನ್ನು ಚಾಚೂತಪ್ಪದೆ ಕಾಪಾಡಿಕೊಳ್ಳಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ವಿರಕ್ತಮಠದ ಕರಿವೃಷಭ ದೇಶೀ ಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಮಾದಿಹಳ್ಳಿ ರಾಮಕೃಷ್ಣಮಠದ ಅಧ್ಯಕ್ಷರಾದ ಸ್ವಾಮಿ ಮಂಗಳನಾಥನಂದಾಜೀ ಮಹಾರಾಜ್ ದಿವ್ಯ ಸಾನಿಧ್ಯ ವಹಿಸಿದ್ದರು.

ಇದೇ ವೇಳೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸರ್ಕಾರಿ ಹಾಗು ಅನುದಾನಿತ 30 ನಿವೃತ್ತ ನೌಕರರು ಹಾಗು ವಿವಿಧ ವಿಷಯಗಳಲ್ಲಿನ ತಾಲ್ಲೂಕಿನ 40 ಅತ್ಯುತ್ತಮ ಶಿಕ್ಷಕರುಗಳನ್ನು ಅಭಿನಂಧಿಸಲಾಗುವುದು. ಉದಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ಎಸ್.ವಿ.ವಿಜಯಕುಮಾರ್ ಉಪನ್ಯಾಸ ನೀಡಿದರು,

ಸಮಾರಂಭದಲ್ಲಿ ತಹಶೀಲ್ದಾರ್ ಎನ್.ಎಕುಂಞಅಹಮದ್, ಇ.ಒ.ಶಿವರಾಜಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂರಾಜುಮುನಿಯೂರು, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಇಸಿಒ ಸಿದ್ದಪ್ಪ, ಬಿಆರ್ ಸಿ ಸುರೇಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ರೋಟರಿ ಅಧ್ಯಕ್ಷ ಸಾ.ಶಿ.ದೇವರಾಜು, ಇನ್ನರ್ ವೀಲ್ ಅಧ್ಯಕ್ಷೆ ನೇತ್ರಾ, ಸಾವಿತ್ರಿಭಾಯಿಫುಲೆ ಸಂಘದ ಭವ್ಯಸಂಪತ್, ಗುರುರಾಜು, ಸವಿತಾ, ಟ್ರಜರಿ ತ್ರಿನೇಶ್, ಸಿಆರ್ಪಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?