Tuesday, September 17, 2024
Google search engine
HomeUncategorizedಊರಿಗೆ ಬಂದಾ ಹುಡ್ಗರು ಮಾಡಿದ್ರು ಮೋಡಿ!!!

ಊರಿಗೆ ಬಂದಾ ಹುಡ್ಗರು ಮಾಡಿದ್ರು ಮೋಡಿ!!!

ಅದಾ, ಆ ಊರಿನವರೇ ಮೂಗು ಮುರಿಯುತ್ತಿದ್ದರು. ಈಗ, ನೋಡಿ ಈ ಹುಡಗ್ರು ಮೋಡಿ ಮಾಡೇ ಬಿಟ್ಟರು…

ಬ್ಯಾತ ಗ್ರಾಮದ ಜನರು ಒಬ್ಬೊಬ್ಬರಾಗಿ ಹೇಳುತ್ತಾ ಸಾಗಿದರು.


ಇದು ಯಾರೋ ಮಾಡಿದ ಮೋಡಿಯೂ ಅಲ್ಲ, ಛೂ ಮಂತ್ರವೂ ಅಲ್ಲ!

ತುಮಕೂರಿನ ಸುಫಿಯಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ತುಮಕೂರು ತಾಲ್ಲೂಕು, ಊರ್ಡಿಗೆರೆ ಹೋಬಳಿಗೆ ಸೇರಿದ ಬ್ಯಾತ ಗ್ರಾಮದಲ್ಲಿ ನಡೆಸಿದ ಹತ್ತು ದಿನಗಳ ಶ್ರಮದಾನದಿಂದ ಬದಲಾವಣೆ.


ಎನ್ ಎಸ್ ಎಸ್ ಶಿಬಿರಕ್ಕೂ ಗ್ರಾಮದಲ್ಲಿದ್ದ ಅರಳಿ ಕಟ್ಟೆಗಳು ಗಿಡ ಕೊಳೆಗಳಿಂದ ತುಂಬಿ ಹೋಗಿದ್ದವು. ಈಗ ಶ್ರಮದಾನದ ಪರಿಣಾಮ ಅರಳಿ ಕಟ್ಟೆಗಳು ಲಕ ಲಕ ಹೊಳೆಯುವಂತಾಗಿವೆ. ಹಳ್ಳಿ ಜನ ಕೂತು ಹರಟೆ ಹೊಡೆಯುವ ಸ್ಥಳಗಳಾಗಿವೆ. ವಿದ್ಯಾರ್ಥಿಗಳು ಕ್ಲೀನ್ ಮಾಡುತ್ತಿದ್ದಂತೆ ಗ್ರಾಮದ ಜನರು ಒಬ್ಬೊಬ್ಬರೇ ಬಂದು ಅರಳಿಕಟ್ಟೆಯ ಮೇಲೆ ಕುಳಿತು ಕಾನೂನು ವಿದ್ಯಾರ್ಥಿಗಳ ಶ್ರಮದಾನಕ್ಕೆ ತಲೆ ತೂಗಿದರು.

ಕಸವೇ ಗುಡಿಸುವವರು ಇಲ್ಲದೇ ಕಸದ ತೊಟ್ಟಿಯಂತಿದ್ದ ಸರ್ಕಾರಿ ಶಾಲೆಗೆ ಸಚ್ಛತೆಯ ಮಂತ್ರವನ್ನು ವಿದ್ಯಾರ್ಥಿಗಳು ಕಲಿಸಿಕೊಟ್ಟರು.
ಶಾಲೆ ಪರಿಸರಕ್ಕೆ ಹೊಸ ಸ್ಪರ್ಶ ಕೊಟ್ಟರು.
ಗ್ರಾಮದ ಬೀದಿ ಬೀದಿಗಳನ್ನು ಸ್ವಚ್ಚ ಮಾಡಿದರು. ಬೇಲಿ, ಮುಳ್ಳಿನ ಗಿಡ ನೆಟ್ಟರು.
ಪ್ರತಿ ದಿನ ಸಂಜೆ ಕಾನೂನು ವಿಷಯ, ಹೆಣ್ಣು ಮಕ್ಕಳ ಹಕ್ಕು, ಪೋಸ್ಕೋ ಮುಂತಾದ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಜಾಗೃತಿ ಮೂಡಿಸಲಾಯಿತು.
ಶಿಬಿರವನ್ನು ಬ್ಯಾತ ಗ್ರಾಮ ಪಂಚಾಯತಿ ಅಧ್ಯಕ್ಷ ಉಮೇಶ್ ಉದ್ಘಾಟಿಸಿದರು. ಪ್ರಾಂಶುಪಾಲ ಎಸ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು‌.
ಸಮಾರೋಪ ಸಮಾರಂಭದಲ್ಲಿ ಎನ್ ಎಸ್ ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪಿ.ಎಲ್. ಮಮತಾ ಮಾತನಾಡಿ, ಯೋಜನೆಯ ಉದ್ದೇಶ, ಶ್ರಮದಾನದ ಅಗತ್ಯತೆ ಬಗ್ಗೆ ಒತ್ತಿ ಹೇಳಿದರು. ಪ್ರೊ. ಅಶ್ವತ್ಥಯ್ಯ ಅವರು ವಿದ್ಯಾರ್ಥಿಗಳ ಶ್ರಮದಾನದ ಮುಂದಾಳತ್ವವನ್ನು ವಹಿಸಿದ್ದರು. ಹತ್ತು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಹಲವಾರು ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?