Friday, October 18, 2024
Google search engine
Homeಜಸ್ಟ್ ನ್ಯೂಸ್ನನಗೆ ರಾಜಕೀಯ ಮರುಹುಟ್ಟು: ಸೋಮಣ್ಣ

ನನಗೆ ರಾಜಕೀಯ ಮರುಹುಟ್ಟು: ಸೋಮಣ್ಣ

ತುರುವೇಕೆರೆ: ಎಂಟು ವಿಧಾನ ಸಭಾ ಕ್ಷೇತ್ರಗಳ ಪೈಕಿ ತುರುವೇಕೆರೆ 1.75 ಲಕ್ಷಕ್ಕೂ ಅಧಿಕ ಮತಗಳನ್ನು ನೀಡುವ ಮೂಲಕ ರಾಜಕೀಯವಾಗಿ ಮರುಹುಟ್ಟು ನೀಡಿದ ಕ್ಷೇತ್ರವಾಗಿದ್ದು ಇಲ್ಲಿನ ಜನತೆಗೆ ಋಣಿಯಾಗಿದ್ದಾನೆ ಎಂದು ಕೇಂದ್ರ ರೈಲ್ವೆ ಮತ್ತು ಜಲ ಸಂಪನ್ಮೂಲ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಪಟ್ಟಣದ ಗುರು ಸಿದ್ದರಾಮೇಶ್ವರ ಸಮುದಾಯಭವನದಲ್ಲಿ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ, ಅಭಿನಂಧನಾ ಮತ್ತು ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು

ಬಸವಣ್ಣನವರ ವಿಚಾರಧಾರೆಗಳನ್ನು ಕೇವಲ ಭಾರತವೇ ಅಲ್ಲದೆ ವಿಶ್ವವೇ ಮೆಚ್ಚಿಕೊಂಡಿದೆ. ಬುದ್ದ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ರವರಂತಹ ವಿಶ್ವ ಮೆಚ್ಚುವ ಮಾನವತಾವಾದಿ, ಸಾಮಾಜಿಕ ಚಿಂತಕರನ್ನು ವಿವಿಧ ಸ್ಥರದ ಜಾತಿಗೆ ಸೀಮಿತಗೊಳಿಸಿದ್ದು ಈ ಸಮಾಜ ಮಾಡಿದ ಬಹು ದೊಡ್ಡ ಪ್ರಮಾದವಾಗಿದೆ. ಅಂತಹ ಜ್ಞಾನಿಗಳನ್ನು ಸಮಕಾಲೀನ ಸಮಾಜಕ್ಕೆ ಅರ್ಥೈಯಿಸಬೇಕಾದ ಜರೂರಿದೆ. ದೇಶದ ಪಾರ್ಲಿಮೆಂಟ್ ಬಸವಣ್ಣನವರ ಅನುಭವ ಮಂಟಪವಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆಂದು ಅಭಿಪ್ರಾಯಪಟ್ಟರು.

ಬಸವಣ್ಣನವರು ಎಲ್ಲ ಸಮುದಾಯಗಳನ್ನು ಒಳಗೊಂಡಂತೆ ಶರಣ ಧರ್ಮ ಕಟ್ಟಿದವರು ಹಾಗಾಗಿ ಮುಂದಿನ ವರ್ಷದಿಂದ ಪ್ರತಿಭಾ ಪುರಸ್ಕಾರ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಮೀಸಲಾಗದೆ ಎಲ್ಲ ಸಮುದಾಯದ ಪ್ರತಿಭಾವಂತ ಮಕ್ಕಳಿಗೂ ನೀಡಿ ಅದಕ್ಕೆ ನಾನು ಸಹಕಾರ ನೀಡುವೆ ಎಂದು ಭರವಸೆ ನೀಡಿದರು.

ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪನವರಾಗಲಿ ಅಥವಾ ಬಿಜೆಪಿ ಮಾಜಿ ಶಾಸಕ ಮಸಾಲ ಜಯರಾಮ್ ಇಬ್ಬರೂ ಮಾತಾಡಿಕೊಂಡು ಒಬ್ಬರು ಮಾತ್ರ ನಿಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುವುದು.

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನನ್ನ ಕ್ಷೇತ್ರದಲ್ಲಿ ಹೆಚ್ಚು ಲೀಡ್ ಬರುತ್ತದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಮಸಾಲ ಜಯರಾಮ್ ಇಬ್ಬರೂ ಘಂಟಾ ಘೋಷವಾಗಿ ಹೇಳಿ ಅದರಂತೆ ಗೆಲ್ಲಿಸಿದವರು ಆದ್ದರಿಂದ ನನ್ನ ರಾಜಕೀಯ ಜೀವನದಲ್ಲಿ ಇಬ್ಬರನ್ನೂ ಮರೆಯುವಂತಿಲ್ಲ ಇದರ ಸಹ ವರ್ತಿಯಾಗಿ ಎಚ್.ಡಿ.ದೇವೇಗೌಡರು ಮತ್ತು ಕುಮಾರ ಸ್ವಾಮಿಯವರ ಪರೋಕ್ಷ ಬೆಂಬಲವೂ ನನ್ನ ಗೆಲುವಿನ ಕೈಹಿಡಿದಿದೆ. ಕುತೂಹಲವೆಂದರೆ ನಾನು ಬಯಸದೇ ಸಚಿವನಾಗುವ ಭಾಗ್ಯವನ್ನು ಭಗಂವಂತ ಕರುಣಿಸಿದ ಅದು ನನ್ನಪುಣ್ಯ.

ರಕ್ಷಣಾ ಇಲಾಖೆಯಂತೆಯೇ ರೇಲ್ವೆ ಇಲಾಖೆಯೂ ಅತ್ಯಂತ ಜವಬ್ದಾರಿಯುತ ಕೆಲಸವಾಗಿದ್ದು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇನೆ.

ನಾಫೆಡ್ ಮೂಲಕ ಉಂಡೆ ಕೊಬ್ಬರಿ ಮಾರಿದ್ದ ರಾಜ್ಯದ 27 ಸಾವಿರ ಫಲಾನುಭವಿ ರೈತರ ಹಣವನ್ನು ಸಚಿವನಾದ ತಕ್ಷಣ ಮಂಜೂರು ಮಾಡಿಸಿದ್ದೇನೆ. ತದ ನಂತರ ಮತ್ತೆ ನಾಫೆಡೆ ಮೂಲಕ ಕೊಬ್ಬರಿ ಖರೀದಿ ಮಾಡಲಾಗುವುದು ಎಂದು ಹೇಳಿಕೆ ಕೊಟ್ಟಾಗ ಕೊಬ್ಬರಿ ಬೆಲೆ ದಿಢೀರ್ 16 ಸಾವಿರಕ್ಕೇರಿತು. ಆಗ ಯಾರು ಖಷಿಪಟ್ಟರೋ ಗೊತ್ತಿಲ್ಲ ಶಾಸಕ ಎಂ.ಟಿ.ಕೃಷ್ಣಪ್ಪನವರ ಆನಂದಕ್ಕೆ ಪಾರವೇ ಇರಲಿಲ್ಲ.

ಬಾಣಸಂದ್ರದಲ್ಲಿ ಕೆಲ ರೈಲು ನಿಲುಗಡೆ ಮಾಡುವಂತೆ ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪನವರು ಮನವಿ ಮಾಡಿದ್ದು ಅದು ಶೀಘ್ರವೇ ನೆರವೇರಲಿದೆ. ಪಟ್ಟಣದಲ್ಲಿ ಪ್ರಧಾನ ಮಂತ್ರಿ ಕೌಸಲ್ಯ ಯೋಜನೆಯನ್ನು ತಹಶೀಲ್ದಾರ್ ಮೂಲಕ ಚಾಲನೆಯಾಗುವಂತೆ ಸೂಚನೆ ನೀಡಲಾಗುವುದು ಎಂದು ಸ್ಥಳೀಯರ ಹಲವು ಮನವಿ ಪತ್ರಕ್ಕೆ ಉತ್ತರಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ರೈಲ್ವೆ ಇಲಾಖೆಯಲ್ಲಿ ಪ್ರಪ್ರಥಮ ಬಾರಿಗೆ ರೈಲ್ವೆ ಇಲಾಖೆಯಲ್ಲಿ 46 ಸಾವಿರ ವಿವಿಧ ಹುದ್ದೆಗಳ ನೇಮಕಾತಿ ಕರೆದಿದ್ದು ಕ್ಷೇತ್ರದ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಿ. ಕ್ಷೇತ್ರದಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿದ್ದು ಸರ್ಕಾರ ಅನುದಾನ ನೀಡುತ್ತಿಲ್ಲವೆಂದು ತರಾಟೆಗೆ ತೆಗೆದುಕೊಂಡರು.

ಮಾಜಿ ಸಂಸದ ಜಿ.ಎಸ್.ಬಸವರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕುಮಾರ ಸ್ವಾಮಿ ಮಾತನಾಡಿದರು. ವಿರಕ್ತಮಠದ ಕರಿವೃಷಭದೇಶಿ ಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಹಾಗು ಗೋಡೆಕೆರೆಯ ಮೃತ್ಯುಂಜಯ ದೇಶಿ ಕೇಂದ್ರ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿದರು. ಇದೇ ವೇಳೆ ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಅಭಿನಂಧನೆ ಹಾಗು ಅಕ್ಕನ ಬಳಗದ ವತಿಯಿಂದ ವಚನ ಗಾಯನ ಜರುಗಿತು.

ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಪರಮೇಶ್ವರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಬಿಇಒ ಎನ್.ಸೋಮಶೇಖರ್, ಸಮುದಾಯದ ಮುಖಂಡರು, ಸಂಘದ ಪದಾಧಿಕಾರಿಗಳು ಇನ್ನಿತರರು ಪಾಳ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?