Friday, October 18, 2024
Google search engine
HomeUncategorizedಏಕದಿನ ಸತ್ಯಾಗ್ರಹ ; ಗಾಂಧಿ ಜಯಂತಿಯ ವಾಸ್ತವಿಕ ಆಚರಣೆ

ಏಕದಿನ ಸತ್ಯಾಗ್ರಹ ; ಗಾಂಧಿ ಜಯಂತಿಯ ವಾಸ್ತವಿಕ ಆಚರಣೆ

( ಪ್ರತಿ ಗಾಂಧಿ ಜಯಂತಿಯಂದು ಕರ್ನಾಟಕ ರಾಷ್ಟ್ರ ಸಮಿತಿಯ ಏಕದಿನ ಸತ್ಯಾಗ್ರಹ)

ಚಿಕ್ಕನಾಯಕನಹಳ್ಳಿ : ಪ್ರತಿಬಾರಿ ಗಾಂಧಿ ಜಯಂತಿಯ ದಿನದಂದು ಕರ್ನಾಟಕ ರಾಷ್ಟ್ರ ಸಮಿತಿ ಪಾಲಿಸುತ್ತಾ ಬಂದಿರುವ ಏಕದಿನ ಸತ್ಯಾಗ್ರಹ’ವನ್ನು ಪಟ್ಟಣದ ನೆಹರೂ ಸರ್ಕಲ್’ನಲ್ಲಿ ಇದೇ ಅಕ್ಟೋಬರ್ 02.10.2024’ರ ಬುಧವಾರ ಬೆಳಗ್ಗೆ 09.00 ಗಂಟೆಯಿಂದ ಸಂಜೆ 04.00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಈ ಏಕದಿನ ಸತ್ಯಾಗ್ರಹದ ಧ್ಯೇಯ, ಹಳ್ಳಿ-ಹಳ್ಳಿಗಳಲ್ಲಿ ನಿರಾಂತಕವಾಗಿ ಮಾರಾಟವಾಗುತ್ತಿರುವ ಅಕ್ರಮ ಮದ್ಯ-ಮಾರಾಟವನ್ನು ತಡೆಗಟ್ಟುವಂತೆ ತಾಲ್ಲೂಕು ಆಡಳಿತ ಮತ್ತು ಅಬಕಾರಿ ಇಲಾಖೆಯನ್ನು ಒತ್ತಾಯಿಸುವುದು. ತಾಲ್ಲೂಕಿಗೆ ಬಿಡುಗಡೆಯಾಗಿರುವ ಮತ್ತು ಮುಂದೆಯೂ ಆಗಲಿರುವ ಗಣಿಭಾಧಿತ ಪ್ರದೇಶಾಭಿವೃದ್ಧಿ ಮತ್ತು ಪರಿಸರ ಪುನಶ್ಚೇತನ ಕಾರ್ಯಕ್ರಮ CEPMIZ ಯೋಜನೆಗೆ ಮೀಸಲಾದ ಕೋಟ್ಯಾಂತರ ರೂಪಾಯಿ ಹಣದ ಪ್ರಾಮಾಣಿಕ ಮತ್ತು ಪಾರದರ್ಶಕ ಸದ್ಬಳಕೆಗಾಗಿ ಒತ್ತಾಯಿಸುವುದು. ಮತ್ತು ಗ್ರಾಮ ಪಂಚಾಯ್ತಿಗಳಲ್ಲಿ ನರೇಗಾ ಯೋಜನೆಯ ಕೆಲಸ-ಕಾಮಗಾರಿಗಳಲ್ಲಿ ಯಂತ್ರಗಳನ್ನು ಬಳಸಿ ಕೆಲಸ ನಿರ್ವಹಿಸದೆ, ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರನ್ನು ಮಾತ್ರ ಬಳಸಿಕೊಂಡು ಕೆಲಸ ನಿರ್ವಹಿಸುವುದು. ತನ್ಮೂಲಕ ದೇಶದ ಎಲ್ಲ ಎಲ್ಲರಿಂದ ಸಂವಿಧಾನದ ಆಶಯಗಳನ್ನು ಅನೂಚಾನ ಎತ್ತಿ ಹಿಡಿಯುವ ಬದ್ಧತೆಯನ್ನು ಒತ್ತಾಯಿಸುವುದು.

ಈಯೆಲ್ಲ ಗಾಂಧಿ-ಮಾದರಿಯ ಸ್ವರಾಜ್ಯ ಪರಿಕಲ್ಪನೆಯ ಧ್ಯೇಯೋದ್ದೇಶಗಳ ಈಡೇರಿಕೆಯನ್ನು ಒತ್ತಾಯಿಸುವ ಸಲುವಾಗಿ, ಕರ್ನಾಟಕ ರಾಷ್ಟ್ರ ಸಮಿತಿ, ಲಂಚಮುಕ್ತ ಕರ್ನಾಟಕ, ರಾಷ್ಟ್ರೀಯ ಕಿಸಾನ್ ಸಂಘ ಮತ್ತಿತರೆ ರೈತಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘ-ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವದ ಆಶಯದ ಈಡೇರಿಕೆಯಲ್ಲಿ ಬದ್ಧತೆಯಿರುವ ಎಲ್ಲ ನಾಗರಿಕರು ಒಟ್ಟಾಗಿ ಸೇರಿ, ಶಾಂತಿಯುತವಾದ ಸಾಂಕೇತಿಕ ಪ್ರತಿಭಟನೆಯನ್ನು ದಾಖಲಿಸುವ ಉದ್ದೇಶದಿಂದ ಈ ಏಕದಿನ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಸಬ್ಬೇನಹಳ್ಳಿ ಶ್ರೀನಿವಾಸ್ ತಿಳಿಸಿದರು.

ಸಂಜೆ 4.00 ಗಂಟೆಯ ಹೊತ್ತಿಗೆ ಮಾನ್ಯ ತಹಸೀಲ್ದಾರ್’ರವರಿಗೆ ಸತ್ಯಾಗ್ರಹಿಗಳ ಒತ್ತಾಯಪತ್ರವನ್ನು ಸಲ್ಲಿಸಿದ ನಂತರ ಈ ಏಕದಿನ ಸತ್ಯಾಗ್ರಹ’ವನ್ನು ಕೊನೆಗೊಳಿಸಲಾಗುವುದು.

ಸತ್ಯಾಗ್ರಹದೊಂದಿಗೆ ಸೇರ ಬಯಸುವ ಎಲ್ಲರಿಗೂ ಸ್ವಾಗತವಿದೆ. ಆಸಕ್ತರು 73380 99271 ಸಂಖ್ಯೆಗೆ ಕರೆಮಾಡಿ ಸಬ್ಬೇನಹಳ್ಳಿ ಶ್ರೀನಿವಾಸರವರನ್ನು ಸಂಪರ್ಕಿಸಬಹುದು.

_ಸಂಚಲನ
ಚಿಕ್ಕನಾಯಕನ ಸೀಮೆಯಿಂದ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?