Friday, October 18, 2024
Google search engine
HomeUncategorizedತುರುವೇಕೆರೆಯಲ್ಲಿ ವಾಲ್ಮೀಕಿಗೆ ನಮನ

ತುರುವೇಕೆರೆಯಲ್ಲಿ ವಾಲ್ಮೀಕಿಗೆ ನಮನ

ತುರುವೇಕೆರೆ: ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಕಾವ್ಯವು ಜಗತ್ತಿನ ಮಹಾಕಾವ್ಯಗಳಲ್ಲೇ ಅತ್ಯಂತ ದಾರ್ಶನಿಕವಾದ ಕೃತಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪಅಭಿಪ್ರಾಯ ಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕ ಜಯಂತಿ ಆಚರಣೆಯ ಅಂಗವಾಗಿ ವಾಲ್ಮೀಕಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಅವರು

ರಾಮಾಯಣದಲ್ಲಿ ದಶರತನ ಪುತ್ರ ವಾತ್ಸಲ್ಯ, ಪಿತೃಪಾರಿಪಾಲನೆ, ರಾಮನ ಆದರ್ಶ, ಪ್ರಜಾನುರಾಗಿ ಆಡಳಿತ ಇಂತಹ ಹತ್ತಾರು ಘಟನೆಗಳು, ಕಾವ್ಯದಲ್ಲಿ ಮೇಳೈಸಿವೆ. ಪರಿಪೂರ್ಣ ವ್ಯಕ್ತಿತ್ವದ ಮೂಲಕ ರಾಮನ ಆದರ್ಶ ಗುಣವನ್ನು ವಾಲ್ಮೀಕಿ ಕವಿ ವಿಶ್ವ ವಿಖ್ಯಾತಗೊಳಿಸಿದ್ದಾರೆ.

‘ರಾಮಾಯಣ’ ಕಾವ್ಯ ಕೇವಲ ಚಾರಿತ್ರಿಕ ಅಥವಾ ಪೌರಾಣಿಕ ಕತೆ ಎನಿಸದೆ ಸಮಕಾಲೀನ ಜತ್ತಿಗೆ ತನ್ನದೇ ಆದ ಮೌಲ್ಯಗಳನ್ನು ತಿಳಿಸಿಕೊಡುತ್ತದೆ. ಮಿಗಿಲಾಗಿ ರಾಮಾಯಣದಲ್ಲಿ ಬರುವ ಪಾತ್ರಗಳು ಕೇವಲ ಪಾತ್ರಗಳಾಗಿ ಉಳಿಯದೇ ನಮ್ಮ ಸಮಾಜದಲ್ಲಿನ ವಿವಿಧ ಸ್ತರದ ವ್ಯಕ್ತಿಗಳ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಕೃತಿಯಾಗಿಯೂ ಹೊರಹೊಮ್ಮಿದೆ ಎಂದರು.

ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಮಾತನಾಡಿ, ರಾಮಾಯಣ ಮತ್ತು ಮಹಾಭಾರತ ಎರಡೂ ಇಂಡಿಯಾದ ಮಹಾನ್ ಕಾವ್ಯಗಳು ಅವು ಸಾಂಸ್ಕೃತಿಕ, ಚಾರಿತ್ರಿಕ, ಧಾರ್ಮಿಕ, ಸಾಮಾಜಿಕ, ರಾಜನೀತಿ ಮತ್ತು ತಾತ್ವಿಕ ಅಂಶಗಳು ಅಡಕವಾಗಿವೆ. ಈ ಕಾವ್ಯಗಳಲ್ಲಿ ಅಪಾರ ಜೀವನ ಮೌಲ್ಯಗಳಿದ್ದು ಅವುಗಳನ್ನು ಯುವ ಪೀಳಿಗೆ ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಸೋಮಶೇಖರ್, ತೋಟಗಾರಿಕಾ ಸಹಾಯಕ ನಿರ್ದೇಶಕಿ ಪೂಜಾ.ಬಿ, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಶಿವಲಿಂಗಯ್ಯ, ಗ್ರಾಮ ಲೆಕ್ಕಾಧಿಕಾರಿ ರಮೇಶ್, ವಾಲ್ಮೀಕಿ ಆಶ್ರಮ ಶಾಲೆಯ ಎಚ್.ಎಸ್.ಚಿದಾನಂದಸ್ವಾಮಿ, ದಸಂಸ ಸಂಚಾಲಕ ದಂಡಿನಶಿವರ ಕುಮಾರ್, ವಾಲ್ಮೀಕಿ ಸಮಾಜದ ಅಧ್ಯಕ್ಷ ವಂಸತ್ ಕುಮಾರ್, ಬೋರಪ್ಪ, ಹುಳಿಸಂದ್ರ ಧನಂಜಯ, ಡೊಂಕಿಹಳ್ಳಿ ರಾಮಯ್ಯ, ಮುದ್ದಮಾರನಹಳ್ಳಿ ಶಿವಣ್ಣ, ಆನಂದ್ ರಾಜ್ ಸಮುದಾಯದ ಮುಖಂಡರು, ಅಧಿಕಾರಿಗಳು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?