ತುಮಕೂರು; ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿ.ಐ.ಟಿ.ಯು. ತೊಂಡಗೆರೆ ಘಟಕದ ಸಭೆ ಸೋಮವಾರ ನಡೆಯಿತು.
ಜನವರಿ 8, 2020ರ ಬುಧವಾರ ನಡೆಯುವ ಅಖಿಲ ಭಾರತ ಮುಷ್ಕರದ ಭಾಗವಾಗಿ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ಕೇಂದ್ರದಲ್ಲಿ ಮುಷ್ಕರ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.
ಮುಷ್ಕರದ ಸಂಬಂಧ ಹೊರತಂದಿರುವ ಕಿರುಹೊತ್ತಿಗೆ ಬಿಡುಗಡೆ ಮತ್ತು ಮಾರಾಟಮಾಡಲಾಲಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ಜಯರಾಮಯ್ಯ, ಕಾರ್ಯದರ್ಶಿ ಗಂಗಾದರ್, ಖಜಾಂಚಿ ಲೋಕೇಶ್, ಜಿಲ್ಲಾಮುಖಂಡ ಇಬ್ರಾಯಿಂ ಖಲೀಲ್, ಜಿಲ್ಲಾ ಅಧ್ಯಕ್ಷ ಬಿ. ಉಮೇಶ್ ಉಪಸ್ಥಿತರಿದ್ದರು.
Comment here