Friday, April 19, 2024
Google search engine
Homeಜನಮನಅಬ್ಬಾ! ಸ್ಮಾರ್ಟ್ ಸಿಟಿಯಲ್ಲಿ ಹೀಗೂ ಉಂಟು!!

ಅಬ್ಬಾ! ಸ್ಮಾರ್ಟ್ ಸಿಟಿಯಲ್ಲಿ ಹೀಗೂ ಉಂಟು!!

ಪಬ್ಲಿಕ್ ಸ್ಟೋರಿ


ತುಮಕೂರು: ನಗರದಲ್ಲಿ ಎಲ್ಲೆಲ್ಲೂ ಪಾದಚಾರಿ ಮಾರ್ಗಗಳನ್ನು ಅಂಗಡಿ ಮಾಲೀಕರು ಅತಿಕ್ರಮಣ ಮಾಡಿಕೊಳ್ಳುತ್ತಿದ್ದು ಮಹಾನಗರ ಪಾಲಿಕೆಯ ಸಿಬ್ಬಂದಿ‌ ಮಾತ್ರ ನಿದ್ದೆಯಲ್ಲಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ವೆಚ್ಚ ಮಾಡಿ ಫುಟ್ ಪಾತ್ ಗಳ ಮರು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹೀಗೆ ನಿರ್ಮಾಣವಾಗುತ್ತಿರುವ ಫುಟ್ ಪಾತ್ ಗಳು ಜನಸಾಮಾನ್ಯರಿಗೆ ಮಾತ್ರ ಬಳಕೆಗೆ ಬರುತ್ತಿಲ್ಲ. ಅಂಗಡಿ ಮಾಲೀಕರು ತಮ್ಮದೇ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ.

ಅಂಗಡಿ ಮಾಲೀಕರು, ಹೋಟೆಲ್ ಉದ್ಯಮಿಗಳು, ಜ್ಯೂಸ್ ಸೆಂಟರ್ಗಳು ಒತ್ತುವರಿ ಮಾಡಿಕೊಳ್ಳುತ್ತಿದ್ದರು ಕೂಡ ಯಾರೂ ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಜನರು ದೂರಿದ್ದಾರೆ .

ಟೌನ್ ಹಾಲ್ ವೃತ್ತದಲ್ಲಿ ಟಿಎಚ್ ಎಸ್ ಡಯಾಗ್ನಾಸ್ಟಿಕ್ ಸಮೀಪ ಇದೇ ರೀತಿಯಾಗಿದೆ.
ಇಲ್ಲಿ ಫುಟ್ ಪಾತ್ ಒತ್ತುವರಿ ಮಾಡಿಕೊಂಡು ಇಡೀ ಜಾಗವನ್ನೂ ಕಬಳಿಸಲಾಗಿದೆ.
ಎಲ್ಲಾ ಖಾಸಗಿ, ಸರ್ಕಾರಿ ಬಸ್ಸುಗಳು ಇಲ್ಲಿ ನಿಲುಗಡೆ ನೀಡುತ್ತವೆ. ಬಸ್ ಕೇಳಿದವರು ಫುಟ್ ಪಾತ್ ಬಳಕೆಗೆ ಅವಕಾಶವೇ ಇಲ್ಲದಂತಾಗಿದೆ. ಫುಟ್ ಪಾತ್ ಬದಲಿಗೆ ರಸ್ತೆ ರೆ ಬಳಸಬೇಕಾಗುವುದರಿಂದ ಅಪಘಾತದ ಸಾಧ್ಯತೆಗಳು ಹೆಚ್ಚಿವೆ.

ಕೂಡಲೇ ಇಲ್ಲಿಯ ಫುಟ್ ಪಾತ್ ತೆರವು ಗೊಳಿಸಬೇಕು ಜನಸಾಮಾನ್ಯರ ಓಡಾಟಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಫುಟ್ ಪಾತ್ ಗಳ ಅತಿಕ್ರಮಣ
—————————————


ಟಾನ್ ಹಾಲ್ ಸರ್ಕಲ್ ನಲ್ಲಿ ಬಸ್ ಇಳಿದು ನಡೆಯಲು
ಇರುವ ಫುಟ್ ಪಾತ್ ಅನ್ನು ಬೇಲಿ ನಿರ್ಮಾಣ ಮಾಡಿ
ಆಕ್ರಮಿಸಿಕೊಂಡಿದ್ದಾರೆ. ರಾಜ ಕಾಲುವೆ. ಫುಟ್ ಪಾತ್ ಆಕ್ರಮಿಸಿ ಕೊಳ್ಳುವಾಗ ಕಣ್ಣುಮುಚ್ಚಿ ಕುಳಿತು, ಆಕ್ರಮಿಸಿದವರು ಬಲಿತು ಕೊಂಡಾಗ ಅದು ಬೇರೆಯದೇ ರೂಪ ಪಡೆಯುತ್ತದೆ. ತಕ್ಷಣವೇ ಟೌನ್ ಹಾಲ್ ಬಳಿಯ ಜ್ಯೂಸ್ ಅಂಗಡಿ ಎದುರು ಫುಟ್ ಪಾತ್ ಅತಿಕ್ರಮಣ ತೆರವುಗೊಳಿಸಿ ಜನರಿಗೆ ಬಸ್ ಇಳಿದು ಸುರಕ್ಷಿತವಾಗಿ ರಸ್ತೆ ದಾಟಲು ಕ್ರಮ ವಹಿಸಬೇಕು.
ನವೀನ್ ಕುಮಾರ್, ತುಮಕೂರು


RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?