Monday, April 15, 2024
Google search engine
Homeತುಮಕೂರು ಲೈವ್ಅಳಿವು-ಉಳಿವಿನ ಪ್ರಶ್ನೆ: ಬಂದ್ ಬೆಂಬಲಿಸಿ

ಅಳಿವು-ಉಳಿವಿನ ಪ್ರಶ್ನೆ: ಬಂದ್ ಬೆಂಬಲಿಸಿ

Publicstory. in


Tumkuru: ಗ್ರಾಮೀಣ ಭಾರತದ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ . ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರ ರೈತರ ಗಮನಕ್ಕೆ ತರದೆ ಹೊಸ ಕಾನೂನು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ರೈತ ಸಂಘಟನೆ ಕಿಡಿಕಾರಿದೆ.

ಈ ನೀತಿಗಳು ಸಂಪೂರ್ಣ ರೈತರ ವಿರೋಧಿ ನೀತಿಗಳಾಗಿವೆ . ಮುಂದಿನ ದಿನಗಳಲ್ಲಿ ಹೊಕ್ಕಲುತನ ಕೈತಪ್ಪಿ ಕಂಪನಿಗಳ ಕೈಸೇರಲಿದೆ.

ಅಂತ ಮೂರು ಹೊಸ ಕಾನೂನುಗಳು ಜಾರಿಗೆ ತರಲಾಗಿದ್ದು ಇದನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಲು ರೈತರು ಹನ್ನೊಂದು ದಿನಗಳ ಹಿಂದೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬರುವ ತಿರ್ಮಾನವಾಗಿತ್ತು .

ಅದರಂತೆ ರೈತರು ದೆಹಲಿಗೆ ಬರುತ್ತಿದ್ದರು , ಕೇಂದ್ರ ಸರ್ಕಾರ ರೈತರ ಮೇಲೆ ದೆಹಲಿ ಪ್ರವೇಶಕ್ಕೆ ಮುಂಚೆ ರಸ್ತೆ ಬಂದ್ ಮಾಡಿ ಬರುತ್ತಿರುವಂತ ರೈತರ ಮೇಲೆ ಜಲಪಿರಂಗಿ , ಅತ್ರುವಾಯು , ಲಾಟಿ ಏಟು ರೈತರಿಗೆ ನೀಡಿದರು , ರೈತ ಸಮುದಾಯ ರೋಚ್ಚಿಗೆಳದೆ ಶಾಂತಿಯಿಂದ ಚಳುವಳಿಯನ್ನು ಮುಂದುವರೆಸಿದೆ .

ರೈತರ ಸುದ್ದಿ ದೇಶದಲ್ಲಿ ತೀವ್ರ ಚರ್ಚೆಗೆ ಜನರು ಒಳಪಡಸಲಿಲ್ಲಾ , ಆದರೆ ಈ ವಿಚಾರ ಅಂತರಾಷ್ಟ್ರೀಯ ವಿಷಯವಾಗಿ ಚರ್ಚೆಯಾಗುತ್ತಿದ್ದು , ಕೆನಡ ಪ್ರಧಾನಿ ರೈತರ ಕಷ್ಟ ಪರಿಹಾರಿಸಿ ಎಂದು ಹೇಳಿದ್ದಾರೆ ವಿಶ್ವಸಂಸ್ಥೆ ಚರ್ಚೆ ಮಾಡುತ್ತಿದ್ದೆ , ಲಂಡನ್ ದೇಶದ 37 ಜನ ಸಂಸದರು ಆ ದೇಶದ ಪತ್ರವನ್ನು ಪ್ರಧಾನಿಗೆ ಬರೆದು , ಭಾರತದ ಪ್ರಧಾನಿಗೆ ತಿಳಿಸಬೇಕೆಂದು ಹೇಳಿರುವ ಸಂಧರ್ಭದಲ್ಲಿ ಸರ್ಕಾರ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದೆ ಸುಮ್ಮನಿರುವುದು ಈ ದೇಶದ ದುರಂತವೇ ಆಗಿದೆ ಎಂದು ಹೇಳಿದೆ.

ಆದರಿಂದ ದೇಶದ ರೈತ ಸಂಘಟನೆಗಳು ಡಿಸೆಂಬರ್ 8 ನೇ ತಾರೀಖು ಮಂಗಳವಾರ ಭಾರತ್ ಬಂದ್‌ಗೆ ಕರೆ ನೀಡಿದೆ . ರೈತರು ಶ್ರಮದಿಂದ ಊಟ ಮಾಡುವ ಎಲ್ಲರೂ ಈ ಬಂದ್‌ಗೆ ಬೆಂಬಲಿಸಬೇಕು , ಹಾಗೂ ರಾಜ್ಯದ ರೈತ ಪರ ಎಲ್ಲಾ ಸಂಘಟನೆಗಳು ಈ ಬಂದ್‌ನಲ್ಲಿ ಭಾಗವಹಿಸಿವೆ .

ಈ ಬಂದ್‌ಗೆ ಕನ್ನಡ ಪರ ಸಂಘಟನೆಗಳು , ಕಾರ್ಮಿಕರ ಸಂಘಟನೆಗಳು , ಮಹಿಳಾ ಸಂಘಟನೆಗಳು , ಸ್ವಯಂ ಸೇವಾ ಸಂಸ್ಥೆಗಳು ಸಹಕರಿಸಬೇಕು. ಅಹಿಂಸ ರೀತಿಯಲ್ಲಿ ಶಾಂತಿಯಿಂದ ವರ್ತಿಸಬೇಕೆಂದು ಎಂದು ರೈತ ಸಂಘದ ಮುಖಂಡರಾದ .ಆನಂದ್ ಪಟೀಲ್ ದನಂಜಯ ಸಿದರಾಜು ಸುನಿಲ್ ಕುಮಾರ್ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?