ತುಮಕೂರ್ ಲೈವ್

ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ರೌಡಿಶೀಟರ್ ಚೊಟ್ಠಕುಮಾರ್ ಹತ್ಯೆ ಮಾಡಿದ ಆರೋಪಿ ಪಂಟರ್ ರಾಜನ ಮೇಲೆ ಪೋಲೀಸರು ಗುಂಡು ಹಾರಿಸಿದ್ದಾರೆ.

ತುಮಕೂರು ಸಮೀಪದ ವಡ್ಡರಹಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುತ್ತಿದ್ದಾಗ  ಕ್ಯಾತ್ಸಂದ್ರ ಪೋಲಿಸ್ ಇನ್ಸ್ಪೆಕ್ಟರ್ ಶ್ರೀಧರ್‌   ಗುಂಡು ಹಾರಿಸಿದ್ದಾರೆ. ಕಾಲಿಗೆ ಎರಡು ಬಾರಿ ಫೈರಿಂಗ್ ಮಾಡಲಾಗಿದೆ. ಫೈರಿಂಗ್ ಮಾಡುವ ಮುನ್ನ ಶರಣಾಗುವಂತೆ ಪೊಲಿಸರು ಸೂಚಿಸಿದ್ದಾರೆ. ಆದರೆ ಪೊಲೀಸರ ಮಾತು ಕೇಳದೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಫೈರಿಂಗ್ ಮಾಡಲಾಗಿದೆ. ಸಿಪಿಐ ಶ್ರೀದರ್‌, ಸಿಬ್ಬಂದಿ ರಮೇಶ್‌ ಗೆ ಗಾಯವಾಗಿದೆ.

Comment here