ತುಮಕೂರು ಲೈವ್

ಕುಣಿಗಲ್ -ಕಾರು ಅಪಘಾತ; ಮಗುಸಾವು

ಕುಣಿಗಲ್: ಚಾಲಕನ ನಿಯಂತ್ರಣ ತಪ್ಪಿ ಕಾರ್ ಒಂದು ಉರುಳಿ ಬಿದ್ದ ಕಾರಣ ತಂದೆತಾಯಿ

ಗಾಯಗೊಂಡು , ಮಗು ಸ್ಥಳದಲ್ಲೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ
ಬ್ಯಾಲದಕೆರೆ ಗೇಟ್ ಬಳಿ ಬುಧುವಾರ ಸಂಜೆ ನಡೆದಿದೆ.

ಎರಡೂವರೆ ವರ್ಷದ ಪೂಣ್ಯಶ್ರೀ ಎಂದು ಗುರುತಿಸಲಾಗಿದೆ. ತಂದೆ ಯೋಗಾನಂದ ತಾಯಿ ಪಲ್ಲವಿ ಮತ್ತು ಸಂಬಂಧಿಯೊಬ್ಬರು, ತಿಪಟೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ
ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ.

ಗಾಯಾಳುಗಳು ಕುಣಿಗಲ್ ಸಾರ್ವಜನಿಕ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೃತೂರು ಪೊಲೀಸರು ಪ್ರಕರಣ
ದಾಖಲಿಸಿದ್ದಾರೆ.

Comment here