Tuesday, April 16, 2024
Google search engine
Homeಜನಮನಕೃಷಿ ಕ್ಷೇತ್ರಕ್ಕೂ Covid- 19 ರ ಬಾಧೆ

ಕೃಷಿ ಕ್ಷೇತ್ರಕ್ಕೂ Covid- 19 ರ ಬಾಧೆ

ಉಜ್ಜಜ್ಜಿ ರಾಜಣ್ಣ


ತಿಪಟೂರು: ಬೆಳೆಗಳಿಗೆ ಕೀಟ ಬಾಧೆ ರೋಗಬಾಧೆ ನಿಭಾಯಿಸಿಕೊಂಡು ಮುಂದುವರಿದ ಕೃಷಿಯಲ್ಲಿ ಕೊರೊನವನ್ನು ಹೇಗೆ ನಿಭಾಯಿಸುವರೊ?

ಅಶ್ವಿನಿ ಮಳೆ ಮುಗಿದು ಇನ್ನೇನು ಭರಣಿ ಮಳೆ ಬೀಳಬೇಕು. ದೇಶವೇ ಲಾಕ್ ಡೌನ್‌ ಆಗಿದೆ. ಭರಣಿ ಮಳೆ ಬಂದರೆ ಧರಣೆಲ್ಲಾ ಹಸಿರು ಎಂಬುದು ರೈತರ ಮಾತು ಉಸಿಯಾಗದಿದ್ದರೆ ಮುಂಗಾರು ಬೀಜ ನೆಲಕ್ಕೆ ಬೀಳುತ್ತವೆ.

ಆಟೋಮೊಬೈಲ್ ಅಂಗಡಿಗಳು ಬಾಗಿಲು ತೆರೆಯದೆ ಟ್ರಾಕ್ಟರ್ ಬೇಸಾಯಕ್ಕೆ ನೆಟ್ಟೂ ಬೋಲ್ಟುಗಳೂ ದೊರೆಯದಂತಾಗಿವೆ.

ಮುಂದುವರಿದು ರೈತರಿಗೆ ಬೀಜ ಗೊಬ್ಬರ, ಕೀಟ ನಾಶಕಗಳೂ ಬೇಕಾಗಬಹುದು. ಅಂಗಡಿ ಮುಗ್ಗಟ್ಟುಗಳು ಮುಚ್ಚಿಹೋಗಿರುವುದರಿಂದ ಮುಂದೆನು ಅವರಿಗೆ ಎನ್ನುವಂತಾಯಿತು. ಕೃಷಿ, ತೋಟಗಾರಿಕೆ, ಇಲಾಖೆಗಳು ಬೀಜ, ಗೊಬ್ಬರ, ಯಂತ್ರೋಪಕರಣಗಳನ್ನು ನೀಡಬಹುದು.

ಆದರೆ, ಅವುಗಳ ದುರಸ್ತಿಯ ಸಾಮಗ್ರಿಗಳಿಗಾಗಿ ಯಂತ್ರೋಪಕರಣಗಳ ಬಿಡಿಭಾಗಗಳನ್ನು ಖರೀದಿಸಲು ಆಟೋಮೊಬೈಲ್ ಅಂಗಡಿಗಳು ಮತ್ತು ಕೃಷಿ ಯಂತ್ರಗಳ ದುರಸ್ತಿಗೆ ಆಟೋಮೊಬೈಲ್ ವರ್ಕ್ ಶಾಪ್ ಗಳು ತೆರೆಯದೆ ಕೃಷಿ ಕೆಲಸಗಳು ಪ್ರಾರಂಭದಲ್ಲಿಯೇ ಕುಂಠಿತವಾಗುವಂತಾದವು.

ನಟ್ ಬೋಲ್ಟ್ ಗಳೇನು ಕಾಸು ಕರೇಮಣಿ ಏನನ್ನೂ ಕೊಡದೆ ಬೇಲಿ ಒಳಗೆ ಉಚಿತವಾಗಿ ದೊರೆಯುವ ಕಿಚಡಿ ಬೆಣೆಗಳೇ? ಟ್ರಾಕ್ಟರ್ ಬೇಸಾಯಕ್ಕೆ ಮೂಲಭೂತವಾಗಿ ಬೇಕಾದ ಬಿಡಿಭಾಗಗಳನ್ನು ಖರೀದಿಸಲು ಬೇಸಾಯಗಾರರಿಗೆ ತೊಂದರೆ ಎದುರಾಯಿತು.

ಆಟೋಮೊಬೈಲ್ ಅಂಗಡಿಗಳನ್ನು ತೆರೆದರೆ ನಟ್ ಬೋಲ್ಟ್ ತೆಗೆದುಕೊಂಡೋಗಿ ನಮ್ಮೂರ ಬಡಗಿಗಳಿಗೆ ನೀಡಿದರೆ ಅವುಗಳನ್ನು ಅವರು ಜೋಡಿಸಿ ದುರಸ್ತಿ ಮಾಡಲು ಮರಮುಟ್ಟಿನ ನೇಗಿಲು ನೊಗ ಅಲ್ಲ.

ಬಡಗಿಗಳ ಹತ್ತಿರ ಇರೋದು ಉಳಿ, ಕೈಬಾಚಿ, ಕೊಡತಿ ಇತ್ಯಾದಿ. ಯಜ ತೋಡಿ ಉಗುಲಿಗೆ ಹೀಚಿನು ಗಳ ತೊಡಸಿ ಜಿಗಣೆ ಹೊಡೆದು ಕುಳಕಟ್ಟಿ ನೇಗಿಲನ್ನು ಆಯವಾಗಿ ಕಡದು ಬಳದು ನೋಡಿ ಸರಿಮಾಡಿ ಕೊಡಲು ಅದೇನು ಮರದ ನೇಗಿಲು ಅಲ್ಲ. ಕಬ್ಬಿಣದ ನೇಗಿಲು ಮತ್ತು ಟ್ರಾಕ್ಟರ್ ಕೂಡಿ ಇತರೆ ದುರಸ್ತಿ ಮಾಡಲು Spanner, cutting player, Screwdriver ಇತ್ಯಾದಿ ಹಿಡಿದು Mechanic ಬರಬೇಕು. Automobile work shop ಗಳು ತೆರೆಯದೆ ರೈತರು ಪರದಾಡುವಂತಾಗಿದೆ.

ಹೀಗಾಗಿ Covid- 19 ಕೊರೊನ ಬೇಸಾಯ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರಿತು. ಈಗ ಗೊತ್ತಾಗಿರಬಹುದು ಬೇಸಾಯದಾರರಿಗೆ; ಎಂತವೋ ಬ್ಯಾಸಾಯಕ್ಕೆ ನ್ಯಾರವಾಗೊ ಅಂತಹವು ಗೊಂತೆಗೆ ಒಂದು ಜೊತೆ ಎತ್ತು, ಒಂದು ಮರದ ನೇಗಿಲು ಮನೆ ಮುಂದೆ ಇದ್ದರೆ, ಆರಂಭದ ಭಂಗ ಪ್ರಾರಂಭದಲ್ಲಿಯಾದರೂ ಸರಿಹೋಗುತ್ತಿತ್ತಲ್ಲವೆ ಎಂಬುದು.

Automobile workshop ನುರಿತ ಕೆಲಸಗಾರರು ಮತ್ತು ಬೇಸಾಯಗಾರರು ಸದೂರವನ್ನು ಎರ್ಪಡಿಸಿಕೊಂಡು ಕೆಲಸ ಮಾಡುವುದು ಕಷ್ಟ ಸಾಧ್ಯವಾಗಿರುತ್ತದೆ

ಯುಗಾದಿ ಹಬ್ಬಕ್ಕೂ ಮಂಚೆ ವಿಶ್ವ ಮಹಿಳಾ ದಿನ ಹೋಗಿ ವಿಶ್ವ ಗುಬ್ಬಚ್ಚಿ ದಿನ, ವಿಶ್ವ ಅರಣ್ಯ ದಿನ, ವಿಶ್ವ ಜಲ ದಿನ, ವಿಶ್ವ ಹವಾಮಾನ ದಿನ, ವಿಶ್ವ ರಂಗಭೂಮಿ ದಿನ ಕಳೆದಂತೆ ಮಾರ್ಚ್ ಮುಗಿದ ನಂತರ ಎಪ್ರಿಲ್ ನಲ್ಲಿ ವಿಶ್ವ ಆರೋಗ್ಯ ದಿನ, ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ, ವಿಶ್ವ ಪರಂಪರೆಯ ದಿನ, ಬಸವ ಜಯಂತಿ ಮತ್ತು ವಿಶ್ವ ಭೂ ದಿನ.

ಅಶ್ವಿನಿ ಮತ್ತು ಭರಣಿ ಮಳೆ ಹಿಂದುಮುಂದು. ಮುಂಗಾರು ಬಿತ್ತನೆ ಕಾರ್ಯಗಳು ಮಳೆ ನಡೆಸಿಕೊಂಡರೆ ಬಿತ್ತಿದ ಬೀಜ ಭೂಮಿ ಮೇಲೆ ಬಂದು ಮೇಲೆಸಳಿಕ್ಕುವ ಕಾಲಕ್ಕೆ ಸರಿಯಾಗಿ ಬಸವನ ಜಯಂತಿ ಕಾಲ. ಕೆರೆ ಒಳಗೆ ಮೈತೊಳೆದು ಕೋಡಿಗೆ ಬಣ್ಣ ಕೋಡಣಸು ಬೆನ್ನು ಮೇಲೆ ಸಬರ ಹಾಕಿ ಪಾದಕ್ಕೆ ಚಿನ್ನ ಮುಟ್ಟಿಸಲು ಮನೆ ಮುಂದೆ ಒಂದು ಜೊತೆ ದನ ಕಟ್ಟಿಕೊಂಡು ಸಾಕಲಾರದ ಪರಿಸ್ಥಿತಿ ಪರಿಣಾಮವಾಗಿ ಟ್ರಾಕ್ಟರ್ ಬೇಸಾಯದ ಹೊಸ ಪರಂಪರೆ ಭಾರತದ ಬಹುತೇಕ ಹಳ್ಳಗಳಲ್ಲಿ ವಿಶೇಷವಾಗಿ ಬೆಳೆದು ಮುಂದುವರಿದಿದೆ.

ಮುಂಗಾರು ಮಳೆಯ ಹಂಗಾಮು ಹೊನ್ನಾರು ಹೂಡಲು ಬೇಸಾಯದ ಎತ್ತುಗಳಿಗೆ ಹಳ್ಳಿಗಳು ಹುಡುಕಾಟದಲ್ಲಿ ತೊಡಗುತ್ತವೆ. ಬಹುತೇಕ ಎಲ್ಲರ ಮನೆಯ ಮುಂದೆಯೂ ನೇಗಿಲು ಎಳೆಯಲು ಹೆಗಲಾಗದ ಸೀಮಹಸುಗಳು.

ಬಸವನ ಜಯಂತಿ ದಿನವೇ ವಿಶ್ವ ಪರಂಪರೆಯ ದಿನ. ಪರಂಪರೆಯ ಪುರಾತನ ಬೇಸಾಯದ ‘ಹಸೆ’ಯೇ ಹಳ್ಳಿಗಳಿಗೆ ಮರೆತು ಹೋಗಿದೆ. ಈಗಂತೂ Covid- 19 ಆರೋಗ್ಯ ಸಮಸ್ಯೆಗಳ ಜಾಗತಿಕ ವಿಪರೀತಗಳನ್ನು ಸೃಷ್ಟಿಸಿದೆ. ಕೂಡಿ ಊಟ ಮಾಡುವಂತಹ ಪರಿಸ್ಥಿತಿ ಇಲ್ಲ,

ಕೂಡಿ ಬೇಸಾಯದ ಬದುಕನ್ನೂ ಮಾಡಲಾರದ ಸ್ಥತಿ. ಕೂಡು ಬೇಸಾಯ ಮಾಡುವವರ ಪಾಡೇನೋ? ಕೃಷಿ ಮತ್ತು ಪಶುಪಾಲನಾ ಸಮುದಾಯಗಳು ಸಂಕಟಕ್ಕೀಡಾದವು. ಎಲ್ಲದಕ್ಕೂ ಸದೂರವನ್ನು ಅನುಸರಿಸಿ ಕೃಷಿ ಚಟುವಟಿಕೆಗಳನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯದಂತಾಯಿತು ಕೃಷಿಯಲ್ಲೂ ಕೊರೊನ ಸವಾಲು ಎದುರಾಯಿತು.

ಬೇಸಾಯಕ್ಕೆ ಮನೆ ಮಂದಿ ಎಲ್ಲರ ಸಹಾಯವೂ ಬೇಕಾಗಿತ್ತು. ಬೆಟ್ಟದ ಮೇಲಿನ ಕೊರಡಿನಿಂದ ಬೇಲಿ ಒಳಗಿನ ಕಿಚುಡಿ ಬೆಣೆವರೆವಿಗೂ ವ್ಯವಸಾಯ ಕಾಡು ಬೇಲಿಯ ನಿಸರ್ಗ ಸಂಬಂದ ಹೊಂದಿತ್ತು ಬೇಸಾಯ.

ಈಗ ಆಟೋಮೊಬೈಲ್ ಕ್ಷೇತ್ರ ಮತ್ತು ಪೆಟ್ಟ್ರೋಲ್ ಡೀಸೆಲ್ ಬಂಕ್ ಹಾಗು ವರ್ಕಷಾಪ್ ಗಳು ತೆರೆಯದಿದ್ದರೆ ಬಾರೆಯ ಮೇಲೆ ಬೇಸಾಯದ ಕೆಲಸಗಳು ನಿಂತು ಹೋಗುತ್ತವೆ. ಮೊದಲು ಈ ಹಿಂದೆ ಆಟೊಮೊಬೈಲ್ ಕ್ಷೇತ್ರಕ್ಕೂ ಮತ್ತು ಕೃಷಿ ಕ್ಷೇತ್ರಕ್ಕೂ ಕಬ್ಬಿಣದ ಅಂಗಡಿ ಹಾಗು ನೊಣದ ಸಂಬಂಧದಂತಿತ್ತು ಕಬ್ಬಿಣದ ಅಂಗಡಿಗಳಲ್ಲಿ ನೊಣಗಳಿಗೇನು ಸಂಬಂಧ ಎನ್ನುವಂತೆ.

ಕಾಡು, ಜಾತ್ರೆ, ಸಂತೆ ಮತ್ತು ಕುಲಮೆ ಮನೆ ಹಂತದಲ್ಲಿ ಬೇಸಾಯ ಕೆಲಸಗಳು ಕೈಗೂಡಿರುತಿದ್ದವು. ಐದಾರು ಬಾರೆ ಸುತ್ತಿದರೆ ಅಲ್ಲೊಂದು ಕಾಡು, ಅಲ್ಲೊಂದು ಜಾತ್ರೆ, ಅಲ್ಲೊಂದು ವಾರದ ಸಂತೆ, ಹತ್ತಾರು ಹಳ್ಳಿ, ಹಳ್ಳಿಗೆ ಒಂದೊಂದು ಕುಲುಮೆ ಮನೆಗಳು.

ದುಡ್ಡು ದುಗ್ಗಾಣಿ ಕೊಡಂಗಿರಲ್ಲಿಲ್ಲ, ಯಾರ ಮುಬ್ಬಾಯನೂ ಮಾಡಂಗಿರಲಿಲ್ಲ ಅರಣ್ಯಗಳಲ್ಲ ನೇಗಿಲು ಕೊರಡು, ಹೀಚಿನ ಕಡ್ಡಿ, ಅಟ್ಟಿನ ಗಳ ಮೊದಲಾದ ಮರ ಮುಟ್ಟಿನ ಸಾಮಗ್ರಿಗಳು ಉಚಿತವಾಗಿ ಯಾವ ಅಟಂಕೂ ಇಲ್ಲದೆ ದೊರೆಯುತಿದ್ದವು.

ಇವು ಹಲವಾರು ಸಲ ಕೊಪ್ಪಲು, ಬದು, ಉದಿ, ತೋಟದ ಬೇಲಿ ಸಾಲಿನಲ್ಲಿ ಬೇಸಾಯಗಾರರು ಬೆಳೆಸಿಕೊಂಡಿರುತಿದ್ದ ಕೃಷಿ ಉಪ ಅರಣ್ಯಗಳೊಳಗೆ ಪುಗುಸಟ್ಟಗೇ ಕೈ ಸೇರುತಿದ್ದವು. ಬೇಲಿಗಳಂತೂ ನಾವೇನೂ ಬೇಡವೆ ನಾವೂ ತಿಂಗಳು ತನಕ ಆಗುತೀವಿ ನಿಮ್ಮ ಬೇಸಾಯದ ಆಸರೆಗೆ. ಕಿಚುಡಿ ಬೆಣೆಗಾದರೂ ನಮ್ಮ ಬುಡದಲ್ಲಿ ಹುಡುಕಲು ನೀವು ಬರಲೇಬೇಕು.

ಬ್ಯಾಸಾಯದ ದನಗಳುನ್ನು ಮೇಯಿಸಲು ನಮ್ಮ ಒಬ್ಬೆಗೆ ನೀವು ಬರಲೇ ಬೇಕು ಎನ್ನುವಂತಿರುತಿದ್ದವು. ಕೈಬೀಸಿ ಕರೆಯುತಿದ್ದ ಕೊಪ್ಪಲು ಬೇಲಿ ಕಾಡುಗಳು ಕಣ್ಣಳತೆಯ ಕಲ್ಲೆಸೆಯುವ ದೂರದಲ್ಲೇ ಇರುತಿದ್ದವಲ್ಲ. ಬೇಸಾಯದ ಜೊತೆಗೆ ಮನೆಯ ಮರಮುಟ್ಟುಗಳನ್ನು ಬೇಲಿ ಮತ್ತು ಕೊಪ್ಪಲು ಕಾಡುಗಳೇ ಒದಗಿಸುತ್ತಿದ್ದವು. ಪಿಳ್ಳೆಗುಜ್ಜು, ತೀರು, ತೊಲೆ, ಅಡ್ಡೆ, ಬೆಲಗು, ಕವೆ, ಜವಿ, ಹಲಗೆ, ನಿಲಪಟ್ಟೆ ಎತ್ತನ ಗಾಡಿಗೆ ಹಾರೆಕೋಲು, ಒಂಕಿ, ಪಾರಿ ಮೂಕು, ಅಚ್ಚು ಬೇರೆ ಸಾಮಾನುಗಳಾದ ಕೊಡತಿ, ರೊಟ್ಟಿಮರಗೆ, ಸಾವಿಗೆ ಒರಳು ಇವುಗಳಿಗಾಗಿಯೂ ಬೇಲಿ ಮತ್ತು ಕೊಪ್ಪಲು ಕಾಡುಗಳನ್ನೇ ಹೆಚ್ಚಾಗಿ ಅವಲಂಬಿಸಲಾಗಿರುತಿತ್ತು.

ಮುಖ್ಯವಾಗಿ ದೊರೆಯುತ್ತಿದ್ದ ಮರಮಂಡಿಗಳಿಂದ ನೇಗಿಲು, ನೊಗ, ಮೇಣಿ, ಹಿಡಿಕಾಯಿ, ಹೀಚು ಮೊದಲಾದ ಕೃಷಿ ಪರಿಕರಗಳನ್ನಾಗಿ ಮಾಡಿಕೊಳ್ಳಲು ಅನುಕೂಲಕರ ವಾದ ಅಡವಿಯ ವಾತಾವರಣ ಹತ್ತಿರದಲ್ಲೇ ನಿಸರ್ಗ ನಿರ್ಮಿತವಾಗಿರುತ್ತಿತ್ತು ಕೊಪ್ಪಲು ಕಾಡುಗಳಲ್ಲಿ. ಹೊಲಗಳು ಸಾಧಾರಣವಾದ ಕೃಷಿ ಅರಣ್ಯ ಪ್ರದೇಶಗಳಾಗಿರುತಿದ್ದವು.

ಈಗಿನ ಕೃಷಿ ಸಂಬಂಧAutomobile company, Automobile workshop, Seed’s and Fertilizer company ಗಳ ಭಾಗವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?