Friday, March 29, 2024
Google search engine
Homeಜನಮನಕೊರೊನಾ: ಆರೋಗ್ಯ ಮಿತ್ರ ಎಂಬ ಶತ್ರು

ಕೊರೊನಾ: ಆರೋಗ್ಯ ಮಿತ್ರ ಎಂಬ ಶತ್ರು

ಸತೀಶ್


ಬೆಂಗಳೂರು: ಅರ್ಹ ರೋಗಿಗಳು ಬೆಡ್ ಸಿಗದೇ ರಸ್ತೆಯಲ್ಲಿ, ಮನೆಯಲ್ಲಿ ಉಸಿರು ಚೆಲ್ಲಿದ್ದಾರೆ.
ಬರೇ APP ಗಳ ಮೊರೆ ಹೋಗಿರುವ ಕರ್ನಾಟಕ Zoom ಸಭೆ ಮಾಡಿದ್ದೇ ಬಂತು.
ಎಲ್ಲದಕ್ಕೂ IAS ಅಧಿಕಾರಿ ಎನ್ನುವ ಸರಕಾರಕ್ಕೆ Bed Blocking ದಂಧೆ ಗೊತ್ತಿಲ್ಲ ಎಂದರೆ ನಂಬಲು ಅಸಾಧ್ಯವಾಗಿದೆ.

WAR Room ಮೆಲ್ವಿ ಚಾರಣಿ ಮಾಡುವ IAS ಅಧಿಕಾರಿಗೆ ಸಂಸದ ತೇಜಸ್ವಿ ಸೂರ್ಯ ಅವರ ರೀತಿಯಲ್ಲಿ ಪರಿಶೀಲಿಸಲು ಬರಲ್ಲ ಎಂದರೆ ಅದು ಸುಳ್ಳು. ಒಬ್ಬ IAS ಅಧಿಕಾರಿಗೆ ಅಷ್ಟು ಗೊತ್ತಾಗುವುದಿಲ್ಲವೇ?

ಈ ಆರೋಗ್ಯ ಮಿತ್ರರು ಎಲ್ಲ ಕಡೆಯು ಗುತ್ತಿಗೆ ಆಧಾರದ ನೌಕರರು. ಇವರ ಮೇಲೆ ಆಯಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಗಳಿಗೆ ನಿಯಂತ್ರಣ ಇರುತ್ತದೆ. ಹಾಗಾದರೆ ಇವರ ಸಂಬಳ ನೀಡುವ ಅಧಿಕಾರಿಗಳು ಅಮೇಧ್ಯ ತಿನ್ನುತ್ತಿದ್ದಾರಾ?

ಮೆಡಿಕಲ್ ಸೀಟ್ ಬ್ಲಾಕ್ ಮಾಡುವ ರೀತಿಯಲ್ಲೇ ಈ Bed Blocking ದಂಧೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲಾ ಮಟ್ಟದಲ್ಲೂ ಆರೋಗ್ಯ ಮಿತ್ರರು ಈ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಮಾತುಗಳು ಕೇಳಿ ಬರತೊಡಗಿವೆ.

SAST ಎನ್ನುವುದೇ BDA ಥರದ ಕರ್ಮಕಾಂಡ. SAS Tಅಧಿಕಾರಿಗಳನ್ನು ACB ride ಮಾಡಿದರೆ ಇವರ ಆಸ್ತಿ ಗೋಚರ ಆಗುತ್ತದೆ. ಖಾಸಗಿ ಆಸ್ಪತ್ರೆಗಳ ಬಿಲ್ ಪಾವತಿಸಲು ಇವರಿಗೆ ಮಾಮೂಲಿ ನೀಡಬೇಕೆಂಬ ಮಾತು ಖಾಸಗಿ ಆಸ್ಪತ್ರೆಗಳ ವಲಯದಲ್ಲಿದೆ.

ಕೊರೋನಾ ಅಲ್ಲದೆ ಇಥರೆ ಕ್ಯಾನ್ಸರ್, ಹೃದಯ ರೋಗಿಗಳನ್ನು ನೋಂದಾಯಿತ ಆಸ್ಪತ್ರೆಗೆ ಆರೋಗ್ಯ ಮಿತ್ರರು ರೆಫರ್ ಮಾಡಲು ಸಹ ಲಂಚ ನೀಡಬೇಕು. ಇದನ್ನು ಹೇಗೆ ಬೆಳೆಯಲು ಬಿಡಲಾಗಿದೆ‌.

ಯಾಕೆ ಕೆಲವೇ ನೊಂದಾಯಿತ ಆಸ್ಪತ್ರೆಗೆ ಹೆಚ್ಚು SAST ಪ್ರಕರಣಗಳು ರೆಫರ್ ಆಗುತ್ತವೆ ಎಂಬ ಬಗ್ಗೆ ತನಿಖೆ ಮಾಡುವ ಅಗತ್ಯವಿದೆ. ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಡೇಟಾ ನೋಡಿ.

ಖಾಸಗಿ ಆಸ್ಪತ್ರೆಗಳು ghost ರೋಗಿಗಳನ್ನು ತೋರಿಸಿ Bed Block ಮಾಡಿದ್ದರೆ ರೋಗಿಯ ಹೇಳಿಕೆ ತಗೊಳ್ಳಿ case sheet ನೋಡಿ. ವಾರಸುದಾರರ ಸಹಿ ನೋಡಿ ಅವರೂ ಶಾಮೀಲು -ಆಗಿದ್ದರೆ ಕ್ರಿಮಿನಲ್ ಮೊಕದ್ದಮೆ ಹಾಕಿ.

ಈ ದಂಧೆಯಲ್ಲಿ ತೊಡಗಿದ್ದ ಖಾಸಗಿ ಆಸ್ಪತ್ರೆಗಳ CEO ಅವರನ್ನು ಕೂಡಲೇ ಅರೆಸ್ಟ್ ಮಾಡಿ . ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಒಂದೇ ರೋಗಿಯ ಹೆಸರಲ್ಲಿ 5 Bed Block ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೂಡಲೇ ಅಲ್ಲಿಯ CEO ಅವರನ್ನು ವಿಚಾರಣೆ ನಡೆಸಿ ಸುದ್ದಿ ನಿಜವಾಗಿದ್ದರೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಇದು ಜನರಲ್ಲಿ ಸರ್ಕಾರದ ಮೇಲೆ ವಿಶ್ವಾಸ ಹೆಚ್ಚಿಸಲು ಕಾರಣವಾಗಲಿದೆ.

ಸಣ್ಣ ಜಿಲ್ಲೆಗಳಲ್ಲಿ ಕೂಡ ಆರೋಗ್ಯ ಮಿತ್ರರನ್ನು ಪರಿಶೀಲಿಸುವ ಕೆಲಸ ಯುದ್ಧೋಪಾದಿಯಲ್ಲಿ ಈಗ ನಡೆಯಬೇಕಾಗಿದೆ.

ರೋಗಿ ಆಸ್ಪತ್ರೆಗೆ ಬಂದಾಗ ಸಿಗುವ ಕಂಪ್ಯೂಟರೈಸ್ಡ್ ಚೀಟಿಯಲ್ಲಿ ರೋಗಿ ಬಂದ ಸಮಯ ದೊರೆಯುತ್ತದೆ.
Bed allot ಮಾಡದೆ ಮುಂದೆ ಬಂದ ಬೇರೆ ರೋಗಿಗೆ ಬೆಡ್ ನೀಡಿದ್ದರೆ ಕಂಡು ಹಿಡಿಯಿರಿ. ಇದುವೇ ಬ್ಲಾಕಿಂಗ್ ದಂಧೆ. ಹೀಗಾಗಿ ದಂಧೆಯನ್ನು ಸುಲಭವಾಗಿ ಕಂಡು ಹಿಡಿಯಬಹುದಾಗಿದೆ.

ಮೊದಲ ದಿನ ಬಂದ ರೋಗಿಯು ಎರಡನೇ ಅಥವಾ ಮೂರನೇ ದಿನ ಬಂದಾಗ ಅಂತ ರೋಗಿಯನ್ನು ಬೆಡ್ ಇಲ್ಲ ಎಂದು ವಾಪಸ್ ಕಳುಹಿಸಲಾಗುತ್ತದೆ ಹೊರತು ಒಪಿಡಿ ಚೀಟಿಯಲ್ಲಿ ಬೆಡ್ ಇಲ್ಲ ಎಂದು ಬರೆಯುತ್ತಿಲ್ಲ, ದಿನಾಂಕ,‌ಸಮಯವನ್ನು ನಮೂದು ಮಾಡುವುದಿಲ್ಲ. ಇಂತ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಸಾಯುತ್ತಿದ್ದಾರೆ.

ಸೋಂಕಿತ ಯಾವಾಗಲೇ, ಎಷ್ಟೇ ದಿನ ಅಸ್ಪತ್ರೆಗೆ ಬರಲೀ ಆತನ ಹೊರ ರೋಗಿಗಳ ದಾಖಲು ಚೀಟಿಯಲ್ಲಿ ಪ್ರತಿ ಸಾರಿಯೂ ದಿನಾಂಕ, ಸಮಯ ಬರೆಯಬೇಕು. ಬೆಡ್ ಇಲ್ಲದಿದ್ದರೆ ಬೆಡ್ ಇಲ್ಲ ಎಂದು ನಮೂದಿಸಬೇಕು. ಅಗ ಆರೋಗ್ಯ ಮಿತ್ರರೂ ಇಂತ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಬೇಕು. ಆರೋಗ್ಯ ಮಿತ್ರರು ಇಂತ ಕೆಲಸ ಮಾಡುತ್ತಿದ್ದಾರೆಯೇ ಎಂಬುದನ್ನು ಕೇಳುವ ಕೆಲಸವನ್ನು ಆರೋಗ್ಯ ಸಚಿವರು ಒಂದು ದಿನವಾದರೂ ಮಾಡಲಿ.

ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಆಸ್ಪತ್ರೆ ಮುಂಭಾಗ ಆರೋಗ್ಯ ಸಚಿವರು ಅರ್ಧ ಗಂಟೆ ನಿಂತು ಬೆಡ್ ಇಲ್ಲ ಎಂದು ವಾಪಸ್ ಆಗುತ್ತಿರು ವ ಸೋಂಕಿತರ ಹೊರ ರೋಗಿ ದಾಖಲು ಚೀಟಿಯನ್ನು ನೋಡಿದರೆ ಏನಾಗುತ್ತಿದೆ ಎಂಬುದು ಅವರ ಅರಿವಿಗೇನೆ ಬರಲಿದೆ.

ಒಂದೇ ಸಂಜೆಗೆ 1500 Bed Unblock ಆಯ್ತು ಅಂದರೆ ಇನ್ನು ಯಾವ ಮಟ್ಟಕ್ಕೆ ದಂಧೆ ನಡೆದಿದೆ ಊಹಿಸಿ. ಸಚಿವರು, ಸರ್ಕಾರ ಈಗಲಾದರೂ ವಾಸ್ತವದ ಕಡೆ ಕಣ್ಣಾಯಿಸಲಿ. ಮೂಲದಲ್ಲಿ ಆಗುತ್ತಿರುವ ತಪ್ಪನ್ನು ಗಮನಿಸಲಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?