Saturday, April 20, 2024
Google search engine
Homeತುಮಕೂರು ಲೈವ್ಚಿ.ನಾ.ಹಳ್ಳಿ‌ ತಾಲ್ಲೂಕು ಕಚೇರಿ ಮುಖ್ಯದ್ವಾರ ಬಂದ್ ...

ಚಿ.ನಾ.ಹಳ್ಳಿ‌ ತಾಲ್ಲೂಕು ಕಚೇರಿ ಮುಖ್ಯದ್ವಾರ ಬಂದ್ …

ಚಿಕ್ಕನಾಯಕನಹಳ್ಳಿ: ‌ಸಾರ್ವಜನಿಕರಿಗೆ ತಾಲ್ಲೂಕು ಕಚೇರಿ ಪ್ರವೇಶಕ್ಕೆ ಸೋಮವಾರದಿಂದ ನಿರ್ಬಂಧ ವಿಧಿಸಲಾಗಿದ್ದು ಕೇವಲ ಸಿಬ್ಬಂದಿಗಳಿಗೆ ಮಾತ್ರ ಪ್ರವೇಶಕ್ಕೆ ಆಹ್ವಾನ ಕಲ್ಪಿಸಲಾಗಿದೆ.

ಕೆಲ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಕಚೇರಿ ಮುಂಭಾಗ ಪ್ರಕಟಣೆ ಮಾಡಿ ಸಂಪರ್ಕಿಸಲು ಸಾರ್ವಜನಿಕರಿಗೆ ತಿಳಿಸಲಾಗಿದೆ.

ಸೋಮವಾರ ತಾಲ್ಲೂಕು ಕಚೇರಿಯಲ್ಲಿ ಎರಡು ಮುಖ್ಯ ದ್ವಾರಗಳು ಬಂದ್ ಮಾಡಿ ಕೇವಲ ಕಚೇರಿ ಸಿಬ್ಬಂದಿಗೆ ಮಾತ್ರ ಒಳಗಡೆ ಹೋಗುತ್ತಿರುವ ದೃಶ್ಯ ಕಂಡು ಬಂದಿತು.

ಭಾನುವಾರ ಕಾಡೆನಹಳ್ಳಿ ಯಲ್ಲಿ 8 ವರ್ಷದ ಮಗುವಿಗೆ ಕೊರೊನ ಪಾಸಿಟಿವ್ ಬಂದಿರುವುದರಿಂದ ಮಗುವಿನ ತಂದೆ ಸರ್ವೆಯರ್ ಆಗಿ ತಾಲ್ಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ತಾಲ್ಲೂಕು ಕಚೇರಿಯ ಒಳಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಗೇಟ್ ಮುಂಭಾಗದಲ್ಲಿ ಕಾವಲು ಕುಳಿತಿದ್ದ ಕಚೇರಿ ಸಿಬ್ಬಂದಿ ತಿಳಿಸಿದರು.

ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಗ್ಯವೂ ಸಹ ಸಾರ್ವಜನಿಕರಿಗೆ ಅತೀ ಮುಖ್ಯವಾಗಿದೆ.‌ ಆದರೆ ಯಾವುದೇ ಮುನ್ಸೂಚನೆ ನೀಡದೆ ಕಚೇರಿಗೆ ಪ್ರವೇಶ ನಿರ್ಬಂಧ ಮಾಡಿರುವುದರಿಂದ ದೂರದ ಊರುಗಳಿಂದ ಬಂದಿರುವವರಿಗೆ ಅನಾನುಕೂಲವಾಯಿತು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?