ತುಮಕೂರ್ ಲೈವ್

ಟ್ರಾಕ್ಟರ್ ಚಾಲಕನಿಗೆ ಜೈಲು ಶಿಕ್ಷೆ

ಟ್ರಾಕ್ಟರ್ ಡಿಕ್ಕಿ ಹೊಡೆಸಿ ವ್ಯಕ್ತಿಯ ಸಾವಿಗೆ ಕಾರಣನಾಗಿದ್ದ ಟ್ರಾಕ್ಟರ್ ಚಾಲಕನಿಗೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ  14 ತಿಂಗಳು ಜೈಲು ಶಿಕ್ಷೆ, 8 ಸಾವಿರ ರೂ ದಂಡ ವಿಧಿಸಿದೆ.

ಡಿಸೆಂಬರ್-17, 2013 ರಂದು  ಆರೋಪಿ ಮಲ್ಲಿಕಾರ್ಜುನ್ ತುಮಕೂರು ಜಿಲ್ಲೆಯ ಪಾವಗಡದ ಈಶ್ವರ ದೇಗುಲದ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಬ್ರಮಣಿ ರವರಿಗೆ ಟ್ರಾಕ್ಟರ್ ಡಿಕ್ಕಿ ಹೊಡೆಸಿರುತ್ತಾರೆ. ತೀವ್ರವಾಗಿ ಗಾಯಗೊಂಡಿದ್ದ ಸುಬ್ರಮಣಿ  ಮೃತಪಟ್ಟಿದ್ದರು.

ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾದೀಶ ಜಗದೀಶ  ಬಿಸೆರೋಟಿ ವಿಚಾರಣೆ ನಡೆಸಿ ತೀರ್ಪು ನಿಡಿದ್ದಾರೆಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ವಕೀಲ ವಿ.ಮಂಜುನಾಥ್ ವಾದ ಮಂಡಿಸಿದ್ದಾರೆಪ್ರಕರಣದ ತನಿಖೆ ನಡೆಸಿದ ಸರ್ಕಲ್ ಇನ್ ಸ್ಪೆಕ್ಟರ್ ಭಾನುಪ್ರಸಾದ್  ಅಂತಿಮ ವರದಿ ಸಲ್ಲಿಸಿದ್ದರು.

Comment here