ತುಮಕೂರ್ ಲೈವ್

ಡಿ.ಟಿ ಲಸಿಕೆ: ಮಗು ಸಾವು- ಆರೋಪ

ಮಧುಗಿರಿ: ಶಾಲೆಯಲ್ಲಿ ನೀಡಿದ ಡಿ.ಟಿ ಲಸಿಕೆಯಿಂದ ಪಟ್ಟಣದ ಖಾಸಗಿ ಶಾಲೆಯ 5ನೇ ತರಗತಿಯ ವಿಧ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ತಾಲ್ಲೂಕಿನ ಪುರವರ ಹೋಬಳಿಯ ಗೋವಿಂದನಹಳ್ಳಿ ಗ್ರಾಮದ ನರೇಂದ್ರ ಕುಮಾರ್ ಹಾಗೂ ರಾಧಮಣಿ ಎಂಬುವರ ಪುತ್ರ ನವೀನ್ (11) ಮೃತಪಟ್ಟವನಾಗಿದ್ದು, ಸೋಮವಾರ ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳಿಗೆ ಡಿ.ಟಿ ಲಸಿಕೆಯನ್ನು ನೀಡಲಾಗಿತ್ತು. ಶಾಲೆ ಬಿಟ್ಟ ನಂತರ ಮನೆಗೆ ಬಂದ ವಿದ್ಯಾರ್ಥಿ ನವೀನ್ ನೀರು ಕುಡಿದು ಕುಸಿದು ಬಿದ್ದಿದ್ದಾನೆ. ಪೋಷಕರು ಕೂಡಲೇ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅಸುನೀಗಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು. ಡಿವೈಎಸ್ ಪಿ ಪ್ರವೀಣ್ , ಪಿಎಸ್ ಐ ಕಾಂತರಾಜು, ಡಿಡಿಪಿಐ ಚನ್ನಬಸಪ್ಪ,

ಬಿಇಒ ರಂಗಪ್ಪ , ಚಿಕ್ಕಮಾಲೂರು ಗ್ರಾ.ಪಂ.ಅಧ್ಯಕ್ಷ ವಿ.ಆರ್.ಭಾಸ್ಕರ್, ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದರು.

Comment here