Thursday, April 25, 2024
Google search engine
Homeತುಮಕೂರು ಲೈವ್ಡೋಲಕ್ ನುಡಿಸುತ್ತಿದ್ದ ಸೋ ಮು ಬಾಸ್ಕರಾಚಾರ್ ನೆನೆದ ಸಾಹಿತಿಗಳು

ಡೋಲಕ್ ನುಡಿಸುತ್ತಿದ್ದ ಸೋ ಮು ಬಾಸ್ಕರಾಚಾರ್ ನೆನೆದ ಸಾಹಿತಿಗಳು

Publicstory. in


Tumukuru: ಬಂಡಾಯ ಸಾಹಿತಿ ಡಾ. ಸೋ.ಮು.ಭಾಸ್ಕರಚಾರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಹಿತಿಗಳು, ಬರಹಗಾರರು, ಹೋರಾಟಗಾರರು, ಒಡನಾಡಿಗಳು, ಸಹದ್ಯೋಗಿಗಳು ತುಮಕೂರಿನ ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಮನೆಗೆ ಭೇಟಿ ನೀಡಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಬೆಳಗ್ಗೆಯೇ ವಾಟ್ಟಪ್, ಪೇಸ್ ಬುಕ್ ಗ್ರೂಪ್ ಗಳಲ್ಲಿ ಭಾಸ್ಕರಚಾರ್ ಸಾವಿನ ಸುದ್ದಿ ಹರಡಿತು. ಅಗಲಿದ ಸಾಹಿತಿಗೆ ಹಲವರು ಕಂಬನಿ ಮಿಡಿದಿದ್ದಾರೆ.

ಸಾಹಿತಿ ಎಲ್.ಎನ್. ಮುಕುಂದರಾಜ್ ತಮ್ಮ ಗುರುಗಳಾದ ಡಾ.ಸೋ.ಮು.ಭಾಸ್ಕರಾಚಾರ್ ಅಗಲಿದ್ದಾರೆ. ಅವರ ತರಗತಿಯಲ್ಲಿ ಪಾಠ ಮಾಡುತ್ತಿದ್ದ ರನ್ನನ ಗಧಾಯುದ್ದ ಈಗಲೂ ನನ್ನ ಕಿವಿಯಲ್ಲಿ ಜೀವಂತವಾಗಿದೆ ಎಂದು ಸ್ಮರಿಸಿಕೊಂಡಿದ್ದಾರೆ.

ಇಂದು ಮುಂಜಾನೆ ನಮ್ಮೆಲ್ಲರ ಆತ್ಮೀಯ ಒಡನಾಡಿಯಾಗಿದ್ದ ತುಮಕೂರಿನ ಸೋ ಮು ಭಾಸ್ಕರಾಚಾರ್ ನಿಧನರಾದ ಸುದ್ದಿಯನ್ನು ಮತ್ತೊಬ್ಬ ಆತ್ಮೀಯರಾದ ರೇವಣಸಿದ್ದಪ್ಪ ಅವರ ವಾಲ್ ನಲ್ಲಿ ನೋಡಿದೆ. ಅತ್ಯಂತ ಬೇಸರದ ವಿಷಯ. ನನ್ನ ತುಮಕೂರಿನ ಎಸ್ ವಿಜ್ಞಾನ ಚಳವಳಿಯಲ್ಲಿ ದುಡಿದಿರುವ ಈ.ಬಸವರಾಜು ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ಎಸ್.ಎಫ್.ಐ ದಿನಗಳಲ್ಲಿ ಅವರು ನಮ್ಮೊಂದಿಗಿದ್ದರು. ಎಲ್ಲೇ ಸಿಗಲಿ ಕಾಮ್ರೇಡ್ ಅನ್ನುತ್ತಿದ್ದರು. 1990 ರ ಭಾರತ ಜ್ಞಾನ ವಿಜ್ಞಾನ ಜಾಥಾದಲ್ಲಿ ಒಂದೂವರೆ ತಿಂಗಳು ಸತತ ಜೊತೆಗಿದ್ದರು. ಡೋಲಕ್ ನುಡಿಸುವುದು ಅವರ ಕೆಲಸವಾಗಿತ್ತು. ಅವರು ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದಾಗ ನಾನು ಚಿದಂಬರಯ್ಯನವರು ಹಾಗೂ ಇತರ ಸಂಗಾತಿಗಳು ಅಭಿನಂದಿಸಿ ಬಂದಿದ್ದೆವು. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಹೇಳಿದ್ದಾರೆ.

ವಿಜ್ಞಾನ ಚಳವಳಿಯಲ್ಲಿ ದುಡಿದಿರುವ ಈ.ಬಸವರಾಜು ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಇಂದು ಮುಂಜಾನೆ ನಮ್ಮೆಲ್ಲರ ಆತ್ಮೀಯ ಒಡನಾಡಿಯಾಗಿದ್ದ ತುಮಕೂರಿನ ಸೋ ಮು ಭಾಸ್ಕರಾಚಾರ್ ನಿಧನರಾದ ಸುದ್ದಿಯನ್ನು ಮತ್ತೊಬ್ಬ ಆತ್ಮೀಯರಾದ ರೇವಣಸಿದ್ದಪ್ಪ ಅವರ ವಾಲ್ ನಲ್ಲಿ ನೋಡಿದೆ. ಅತ್ಯಂತ ಬೇಸರದ ವಿಷಯ ಎಂದಿದ್ದಾರೆ.

ಎಸ್.ಎಫ್.ಐ ದಿನಗಳಲ್ಲಿ ಅವರು ನಮ್ಮೊಂದಿಗಿದ್ದರು. ಎಲ್ಲೇ ಸಿಗಲಿ ಕಾಮ್ರೇಡ್ ಅನ್ನುತ್ತಿದ್ದರು. 1990 ರ ಭಾರತ ಜ್ಞಾನ ವಿಜ್ಞಾನ ಜಾಥಾದಲ್ಲಿ ಒಂದೂವರೆ ತಿಂಗಳು ಸತತ ಜೊತೆಗಿದ್ದರು. ಡೋಲಕ್ ನುಡಿಸುವುದು ಅವರ ಕೆಲಸವಾಗಿತ್ತು. ಅವರು ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದಾಗ ನಾನು ಚಿದಂಬರಯ್ಯನವರು ಹಾಗೂ ಇತರ ಸಂಗಾತಿಗಳು ಅಭಿನಂದಿಸಿ ಬಂದಿದ್ದೆವು. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಹೇಳಿದ್ದಾರೆ.

ತುಮಕೂರಿಗೆ ಬಂದ ಹೊಸತರಲ್ಲಿ ಪರಿಚಿತರಾದವರಲ್ಲಿ ಅವರೂ ಒಬ್ಬರು. ಸದಾ ಲವಲವಿಕೆಯ, ಹಸನ್ಮುಖದ ಭಾಸ್ಕಾರಾಚಾರ್ ವಿದ್ಯಾವಾಹಿನಿ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಿದ್ದರೂ ಅಷ್ಟೇ ಆಸಕ್ತಿಯಿಂದ ವಿಜ್ಞಾನವನ್ನು ಎದೆಗಪ್ಪಿಕೊಂಡವರು.

ಎಂಬತ್ತರ ದಶಕದಲ್ಲಿ ಸಾಹಿತಿಗಳ ಗುರುತಾಗಿದ್ದ ಬಗಲು ಚೀಲ ಅವರನ್ನೆಂದೂ ಬಿಟ್ಟಿರಲಿಲ್ಲ. ಸಾಹಿತ್ಯದ,ವಿಜ್ಞಾನದ ಕಾರ್ಯಕ್ರಮಗಳಿಗೆ ಅವರಿಗೆ ಆಮಂತ್ರಣ ಬೇಕಿರಲಿಲ್ಲ.ಅವರೊಬ್ಬ ಒಳ್ಳೆಯ ಕೇಳುಗ.ಇಷ್ಟವಾಗದ ಮಾತುಗಳನ್ನು ಆಡಿದರೂ ಜಗಳಾಡದ ಸಮಾಧಾನಿ.ಗುಂಪಿನಲ್ಲಿ ಗುರುತಿಸಿಕೊಳ್ಳದಿದ್ದರೂ ಪ್ರತಿಗಾಮಿಗಳ ಜೊತೆ ಸೇರಿದವರಲ್ಲ.

ಪುಸ್ತಕಗಳನ್ನು ಬರೆದೂ ಅವರು ಸಾಹಿತ್ಯದ ಪರಿಚಾರಕ;ವಿಜ್ಞಾನದ ಕಾರ್ಯಕ್ರಮಗಳಿಗೆ ಜೊತೆಯಾಗಿದ್ದರೂ ಅವರೊಬ್ಬ ಕುತೂಹಲಿ; ಸಾಹಿತ್ಯ ಪರಿಷತ್ತಿನಲ್ಲಿದ್ದೂ ಅವರೊಬ್ಬ ಸಕ್ರಿಯ ಸದಸ್ಯ.ಕ್ರಿಯಾಶೀಲತೆ ಇದ್ದರೂ ಅವರಿಗೆ ಪಡೆಯಬೇಕಾದ ಮಾನ್ಯತೆ ದೊರಕಲಿಲ್ಲ.

ತುಮಕೂರಿಗೆ ಬಂದಾಗ ನಗುಮುಖದಿಂದ ಮಾತಾಡಿಸುತ್ತಿದ್ದ, ಹೊಸದರ ಬಗ್ಗೆ ಸದಾ ತುಡಿಯುತ್ತಿದ್ದ ಭಾಸ್ಕರಾಚಾರ್ ಇನ್ನು ಮುಂದೆ ಕಾಣಿಸುವುದಿಲ್ಲ ಎನ್ನುವುದನ್ನು ಊಹಿಸಲಾರೆ ಎಂದು ಕವಿ ನಾಗರಾಜಶೆಟ್ಟಿ ಹೇಳಿದ್ದಾರೆ.

ಇದೇ ವೇಳೆ ಪ್ರಗತಿಪರ ಚಿಂತಕ ಕೆ.ದೊರೈರಾಜ್, ವಿಶ್ರಾಂತ ಪ್ರಾಂಶುಪಾಲ ಪ್ರೊ.ಜಿ.ಎಂ. ಶ್ರೀನಿವಾಸಯ್ಯ, ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್, ಎನ್.ಕೆ. ಸುಬ್ರಮಣ್ಯ ಸೇರಿದಂತೆ ಹಲವರು ಭೇಟಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?