Publicstory
ಮಧುಗಿರಿ: ಇಲ್ಲಿನ ಕಾಯಿ ತಿಮ್ಮನಹಳ್ಳಿಯಲ್ಲಿ ತಂದೆ ತಾಯಿ ಹೊಲದಲ್ಲಿ ಇರುವಾಗಲೇ ಇಬ್ಬರು ಮಕ್ಕಳು ಕೃಷಿ ಹೊಂಡಕ್ಕೆ ಬಿದ್ದು ಸಾವಿಗೀಡಾದ ಹೃದಯವಿದ್ರಾವಕ ಘಟನೆ ನಡೆದಿದೆ.
ಐದು ವರ್ಷದ ಶರತ್, ಮೂರು ವರ್ಷದ ಲೋಚನ್ ಸಾವೀಗೀಡಾದ ಮಕ್ಕಳು.
ಮಳೆ ಚೆನ್ನಾಗಿ ಆಗಿದ್ದರಿಂದ ಕೃಷಿ ಹೊಂಡ ತುಂಬಿ ತುಳುಕುತ್ತಿತ್ತು.
ಬೇಸಾಯದ ಕಾರಣಕ್ಕಾಗಿ ತಂದೆ ತಾಯಿಗಳು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು.
ಮಕ್ಕಳನ್ನು ಆಟಕ್ಕೆ ಬಿಟ್ಟು ಹೊಲದ ಇನ್ನೊಂದು ಬದಿಯಲ್ಲಿ ಕೆಲಸ ಮಾಡುತ್ತಿದ್ದರು.
ಆಡುತ್ತಿದ್ದ ಮಕ್ಕಳಿಬ್ಬರು ಕೃಷಿ ಹೊಂಡಕ್ಕೆ ಹೋಗಿ ಬಿದ್ದಿವೆ.
ಮಕ್ಕಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಊರಿಗೆ ಊರೇ ನೆರೆಯಿತು. ಎಲ್ಲರಲ್ಲೂ ದುಂಖ ಉಮ್ಮಳಿಸಿ ಬರುತ್ತಿತ್ತು.
ತಂದೆ ತಾಯಿಗಳ ರೋಧನ ಮುಗಿಲು ಮುಟ್ಟಿತ್ತು.
Comment here