ತುಮಕೂರ್ ಲೈವ್

ತಿಪಟೂರಿನಲ್ಲಿ ನ.10ರಂದು ಟಿಪ್ಪು ಜಯಂತಿ

ನವಂಬರ್ 10 ರಂದು ತಿಪಟೂರು ನಗರದ ಗಾಂಧಿನಗರದ ಶಾಧಿ ಮಹಲ್ ನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಹಜರತ್ ಟಿಪ್ಪು ಸುಲ್ತಾನ್ ರಹಮತ್ ಅಲೈ ರವರ ಜಯಂತಿಯನ್ನು ಅಚರಿಸಲು ನಿರ್ದರಿಸಲಾಗಿದೆ ಎಂದು ಸೌಹಾರ್ದ ತಿಪಟೂರು ಕಾರ್ಯದರ್ಶಿ ಅಲ್ಲಾಬಕಾಶ್ ಎ ತಿಳಿಸಿದರು.

ನಗರದ ಗಾಂಧಿನಗರದಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಜಿ ಎನ್ ನಾಗರಾಜ್ ನೆರವೇರಿಸುವರು. ಹಾಜಿ ರಹಿಂ ಖಾನ್ ಹಿರಿಯ ಮುಸ್ಲಿಂ ಮುಖಂಡರು ದ್ವಜಾರೋಹಣ ಮಾಡಲಿದ್ದು ಈ ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ ಷಡಕ್ಷರಿ ವಹಿಸುವರು.

ಮುಖ್ಯ ಅತಿಥಿಗಳಾಗಿ ಡಾ ಶ್ರೀಧರ್, ಸಿ.ಬಿ ಶಶಿದರ್ , ಕರ್ನಾಟಕ ರಾಜ್ಯ ರೈತ ಸಂಘದ ದೇವರಾಜ್ , ಸಾಹಿತಿ ಗಳಾದ ಮಾಕಳ್ಳಿ ಗಂಗಾದರ್, ಪ್ರಾಂತ ರೈತ ಸಂಘದ ಅರ್ ಎಸ್ ಚನ್ನಬಸವಣ್ಣ, ಹಸಿರು ಸೇನೆಯ ತಿಮ್ಲಾಪುರ ದೇವರಾಜ್ , ಕನ್ನಡ ರಕ್ಷಣಾ ವೇದಿಕೆಯ ವಿಜಯಕುಮಾರ್, ಕಾಂಗ್ರೆಸ್ ಅಲ್ಪಸಂಖ್ಯಾತದ ಘಟಕದ ಅಧ್ಯಕ್ಷರಾದ ಎಂ ಸೈಪುಲ್ಲಾ , ಸೇರಿದಂತೆ ಎಲ್ಲಾ ಮಸೀದಿಗಳ ಮುತವಲ್ಲಿಗಳು ನಗರದ ಎಲ್ಲಾ ನಗರ ಸಭಾ ಸದಸ್ಯರುಗಳು ಬಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಾತನಾಡಿದ ಸಿ.ಬಿ ಶಶಿಧರ್ ರವರು ಟಿಪ್ಪು ಜಯಂತಿಯನ್ನು ತಿಪಟೂರಿನಲ್ಲಿ ಎಲ್ಲ ಜನಪರ ಸಂಘಟನೆಗಳು ಜಂಟಿಯಾಗಿ ಅಚರಿಸುತ್ತಿದ್ದು ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವೀಜೆತರಾದ ಕುಂದೂರು ತಿಮ್ಮಯ ದಲಿತ ಮುಖಂಡರು ಹಾಗೂ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ರಂಗಸ್ವಾಮಿ ಸೇರಿದಂತೆ ಎಲ್ಲಾ ಸಮಾಜಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸ ಲಾಗುವುದು ಎಂದರು,

ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನ ಮಾಡಲಾಗುವುದು ಎಂದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ ಸೈಪುಲ್ಲಾ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮುಸ್ಲೀಂ ಜಮಾಯತ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಕರ್ನಾಟಕ ರಾಜ್ಯ ರೈತ ಸಂಘ, ಸಿ ಐ ಟಿ ಯು, ಸೌಹಾರ್ದ ತಿಪಟೂರು, ಜನಸ್ಪಂದನ ಟ್ರಸ್ಟ್ , ದಲಿತ ಸಂಘರ್ಷ ಸಮಿತಿ, ಜಯ ಕರ್ನಾಟಕ, ಅಂಬೇಡ್ಕರ್ ಸೇನೆ, ಕನ್ನಡ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಜನಸ್ಪಂದನ ಟ್ರಸ್ಟ್, ಸವಿತಾ ಸಮಾಜ, ಕರ್ನಾಟಕ ಪ್ರಾತ್ಯ ರೈತ ಸಂಘ, ಹಸಿರು ಸೇನೆ ಸೇರಿದಂತೆ ಹಲವಾರು ಸಂಘಟನೆಗಳೂ ಸೇರಿ ಕಾರ್ಯಕ್ರಮ ನೆರವೇರಿಸುತ್ತಿವೆ.

Comment here