ತುಮಕೂರ್ ಲೈವ್

ತುಮಕೂರಿನಲ್ಲಿ ಸಿಐಟಿಯು ಮೂಡಿಸಿದ ಕೆಂಪು ಮೆರವಣಿಗೆ

ತುಮಕೂರು:ಸಿಐಟಿಯು 14ನೇ ರಾಜ್ಯಮಟ್ಟದ ಸಮ್ಮೇಳನದ ಭಾಗವಾಗಿ ಟೌನ್ ಹಾಲ್ ವೃತ್ತದಿಂದ ಗಾಜಿನಮನೆವರೆಗೆ ಸಾವಿರಾರು ಕಾರ್ಮಿಕರು ಬೃಹತ್ ಮೆರವಣಿಗೆ ಮಾಡಿದರು.

ಸ್ಕೀಮ್ ನೌಕರರು, ಕೈಗಾರಿಕಾ ಕಾರ್ಮಿಕರು, ಸಂಘಟಿತ, ಅಸಂಘಟಿತ ಕಾರ್ಯಕರ್ತರು, ಟೈಲರ್, ಹಮಾಲಿ, ಮನೆಗೆಲಸಗಾರರು ಸೇರಿದಂತೆ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಭಗತ್ ಸಿಂಗ್ ಅವರ ಕುರಿತ ನಾಟಕ ಗಮನ ಸೆಳೆಯಿತು.

ಗಾಜಿನ ಮನೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ವೇದಿಕೆಯಲ್ಲಿ ತಪನ್ ಸೇನ್, ಡಾ.ಹೇಮಲತ, ಎ.ಕೆ.ಪದ್ಮನಾಭನ್, ಎಸ್,ವರಲಕ್ಷ್ಮಿ, ಮೀನಾಕ್ಷಿ ಸುಂದರಂ ಕೆ.ದೊರೈರಾಜ್, ಸಯ್ಯದ್ ಮುಜೀಬ್ ಉಪಸ್ಥಿತರಿದ್ದರು

Comment here