Thursday, March 28, 2024
Google search engine
Homeಜನಮನತುಮಕೂರು‌ ವಿ.ವಿ.ಯಲ್ಲೊಬ್ಬರು ಅಪರೂಪದ ಗುರುವರ್ಯ

ತುಮಕೂರು‌ ವಿ.ವಿ.ಯಲ್ಲೊಬ್ಬರು ಅಪರೂಪದ ಗುರುವರ್ಯ

ತುಮಕೂರು ವಿ.ವಿ.ಯ ಈ ವಿಭಾಗದಲ್ಲಿ ಪದವಿ ಮುಗಿಯುವ ಮೊದಲೇ ಉದ್ಯೋಗದ ಚೀಟಿ ಮಕ್ಕಳ ಕೈಸೇರುತ್ತದೆ. ಬೇರೆ ವಿಭಾಗಗಳಲ್ಲಿ ನೂರಾರು ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿ ಹೊರಬಿದ್ದರೆ, ಈ ವಿಭಾಗದಲ್ಲಿ ಮಾತ್ರ ಉದ್ಯೋಗಿಗಳಾಗಿ ಹೊರ ಬೀಳುತ್ತಾರೆ. ಇದಕ್ಕೆಲ್ಲ ಕಾರಣ ಈ ಪೊಫೆಸರ್. ಹಾಗಾದರೆ ಯಾರಿವರು?

ಸಾಮಾಜಿಕ ಕಾರ್ಯಕರ್ತರಾಗಿ ಸಮಾಜಮುಖಿ ಕಾಳಜಿಯನ್ನು ಹೊಂದಿರುವಂತಹ ಸಮಾಜಕಾರ್ಯದ ಪ್ರಾಧ್ಯಾಪಕರು, ವಾಗ್ಮಿಗಳು, ಚಿಂತಕರು, ಸಹೃದಯರಾದ ಗುರು ನಮ್ಮೆಲ್ಲರ ನಡುವಿರುವುದು ನಮ್ಮ ಭಾಗ್ಯವೆಂದೆನಿಸುವುದು.

ಸದಾಕಾಲವೂ ಸಕಾರಾತ್ಮಕ ಚಿಂತನೆಗಳ ಮಹಾಪೂರವನ್ನೆ ಹೊಲುವ ಸಹೃದಯ ಸಾಕ್ಷಿ, ಪ್ರಜ್ಞೆ ನನ್ನ ಗುರುಗಳಾದ ಅವರು ಸಕಲರಿಗೂ ಸಮ ಪ್ರೀತಿ ಹಂಚುವ ಮನದಾಳಕ್ಕೆ ಅನಂತಾನಂತ ಧನ್ಯವಾದಗಳು ತಿಳಿಸಲು ನನ್ನ ಮನಸ್ಸು ಇಚ್ಚಿಸುತ್ತದೆ.

ಅವರ ಫೇಸ್ ಬುಕ್ ಗೋಡೆಯನ್ನ ಒಮ್ಮೆ ವಿಕ್ಷಿಸಿದರೆ ಸಾಕು ಅವರ ಸಮಾಜಮುಖಿ ಕಾಳಜಿಯ ವಿಶಾಲತೆ ಏನೆಂಬುದು ಬಹುಬೇಗ ತಿಳಿಯುತ್ತದೆ. ವ್ಯಕ್ತಿ ಮಾತನಾಡಬಾರದು ವ್ಯಕ್ತಿಯ ಸಾಧನೆಗಳು‌ ಮಾತನಾಡಬೇಕು ಎನ್ನುವ ಮಾತು ನನ್ನ ಗುರುಗಳಿಗೆ ಅಕ್ಷರಶಃ ಒಪುತ್ತದೆ. ಹೃದಯದೊಳಗೊಂದು ಅಂತರಾಗವಿದೆ ಅದಕ್ಕೊಪುವಂತೆ ಬದುಕು ಮನಜ ಎನ್ನುವಂತ ಸರಳ ಸಜ್ಜನ ವ್ಯಕ್ತಿತ್ವದ ರೂಪ ದರ್ಶನವಿತ್ತು ವಿದ್ಯಾರ್ಥಿಗಳಿಂದ *ಪಾಸಿಟಿವ್ ಪರಮಾತ್ಮ* ನೆಂದೇ ಕರೆಸಿಕೊಂಡ ಸಕಾರಾತ್ಮಕ ಚಿಂತನೆಗಳ ಹೊಳಪಿನ ಕಣಜ.

ಸದಾಕಾಲವೂ ಸಮಾಜದ ಉನ್ನತಿಗಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತುಡಿಯುವ ಅವರ ಮನಸ್ಸಿನ ಉಮ್ಮಸ್ಸು ಮನದಲ್ಲಿ ಇನ್ನೂ ಹೆಚ್ಚು ಓದುವ ಉತ್ಸುಕತೆಯನ್ನು ತಂದವು.

ಇಂದು ಸಮಾಜದಲ್ಲಿ ನಡೆಯುತ್ತಿರುವ ಅನೇಕನೇಕ ಘಟನೆಗಳ ತಿರುಳು ಗಳನ್ನ ಬಹಳ ಸೂಕ್ಷ್ಮವಾಗಿ ಮತ್ತು ಅರ್ಥಗರ್ಭಿತವಾಗಿ ಸಮಾಜದ ಮುಂದೆ ಬಿತ್ತರಿಸುತ್ತ ಅಂತಹ ಸಮಸ್ಯೆಗಳನ್ನ ಎದುರಿಸಿ ನಿಲ್ಲುವ ಮಾರ್ಗೋಪಾಯಗಳನ್ನು ಸೃಷ್ಟಿಸುತ್ತ ಸಮಾಜಮುಖಿ ಕೆಲಸಗಳು ಮತ್ತ ನೂತನ ಶಿಕ್ಷಣ ಅಭಿವೃದ್ಧಿಯ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಕನಸು ಕಾಣುತ್ತಿರುವ ಗುರುವುಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ.

ಇಂದು ಸಮಾಜದ ಕೊಂಕುನುಡಿಗಳಿಗೆ ಮತ್ತು ತನ್ನ ಕುಟುಂಬಕಂಜಿ ತನ್ನಲ್ಲಿರುವ ಜ್ಞಾನವನ್ನೆಲ್ಲ ಮೂಲೆಗುಂಪು ಮಾಡಿ ನಾಲ್ಕು ಗೋಡೆಗಳ ಮಧ್ಯೆ ಬಂದಿಯಾಗಿರುವ ಎಷ್ಟೋ ಯುವಕರಿಗೆ ನಿಮ್ಮ ಸಾಧನೆ ಮತ್ತು ಚಿಂತನೆಗಳು. ಸ್ಪೂರ್ತಿಯ ಮಾತುಗಳು ಅವರನ್ನ ಎಚ್ಚರಿಸುವಂತಾಗಲಿ ಅವರ ಬದುಕಿಗೊಂದು ಅರ್ಥ ಕಲ್ಪಿಸಿವೆ.

ಪ್ರತಿಯೊಬ್ಬರು ಇವರಂತೆ ಧೈರ್ಯದಿಂದ ಮುಕ್ತವಾಗಿ ಭಯವೆಂಬ ಕಂದಾಚಾರವನ್ನು ಕಿತ್ತೊಗೆದು ಸ್ವಾತಂತ್ರ್ಯದಿಂದ ಮುನ್ನುಗಿದರೆ ಸಮಾಜದ ಸಮಸ್ಯೆಗಳನ್ನ ಬಹುಬೇಗ ಬಗೆಹರಿಸಬಹುದೆನಿಸುತ್ತದೆ.

ಸಮಾಜದ ಪ್ರತಿಯೊಬ್ಬರಲ್ಲೂ ಜ್ಞಾನವುಂಟು ಅದನ್ನ ಹೊರತರಬೇಕು ಆಗಲೇ ಅಭಿವೃಧಿ ಸಾಧ್ಯವೇನ್ನುವ ನಿಮ್ಮ ಮಾತುಗಳೇ ನೊಂದ ಮತ್ತು ಸಾಧಿಸುವ ಮನಗಳಿಗೆ ಸ್ಪೂರ್ತಿಯಾಗುತ್ತಿವೆ.

ಮೌಢ್ಯತೆಯ ಅಂಧಕಾರದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಇಂದಿನ ಯುವ ಪೀಳಿಗೆಯ ಕಣ್ಣುತೆರೆಸಿ ಅವರೊಮ್ಮೆ ನಿಮ್ಮ ಸ್ಪೂರ್ತಿಯ ಮಾತುಗಳ ಕೇಳಿ ಬದಲಾಗುವುದಾದರೆ ಅದಕ್ಕಿಂತ ಬೇರೆ ಭಾಗ್ಯವುಂಟೆ.. ಸೊಗಸಾಗಿ ಮತ್ತು ವಾಸ್ತವಿಕ ನೆಲೆಗಟ್ಟಿನ ಆಧಾರದಲ್ಲಿ ಸಮಾಜದಲ್ಲಿ ನೀವೂ ಕೈಗೊಂಡಿರುವ ಮಹತ್ವದ ಹಲವಾರು ಯೋಜನೆಗಳು ಸಮಾಜದ ಬುನಾದಿಗೆ ಅಭಿವೃದ್ಧಿಯ ಅಡಿಪಾಯವಾವೆ. ನಿಮ್ಮ ಸಾಧನೆ ಯಶೋಗಾಥೆಯಾಗಲಿ.

ಇದು ಬೇರೆ ಯಾರು ಅಲ್ಲ, ತುಮಕೂರು ವಿ.ವಿ.ಯ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಫೊ. ಪರುಶರಾಮ್ ಸರ್.

ಅವರ ಬಗ್ಗೆ ಬರೆಯುವ ಮಾತೊಂದಿದೆ.

ಪ್ರತಿಯೊಂದು ಸಮಸ್ಯೆಗಳನ್ನು ಅವರು ವಾಸ್ತವಿಕ ನೆಲೆಗಟ್ಟಿನ ದರ್ಶನ ಮಾಡಿಸುತ್ತಾರೆ. ಸಕಲ ಸಂಕೋಲೆಗಳನ್ನು ದಾಟಿ ಪ್ರತಿಯೊಬ್ಬರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವ ನಿಮ್ಮ ಮಹದಾಸೆಗೆ ನನ್ನ ಅನಂತ ಧನ್ಯವಾದಗಳು ಸರ್.

ಯಾವುದಕ್ಕೂ ಅಳುಕದೆ ಅಂಜದೆ ನಡೆಯುತ್ತಿರುವ ಸಮಸ್ಯೆಗಳನ್ನ ಸಮಾಜದ ಮುಂದೆ ಬಿತ್ತರಿಸಿ ಅದನ್ನು ಪ್ರಶ್ನಿಸುವ ಪರಿಹರಿಸುವ ಮಾರ್ಗೊಪಾಯ ಹುಡುಕುವ ನಿಮ್ಮ ಸಾಹಸಕ್ಕೆ ಎಷ್ಟು ಕೃತಜ್ಞತೆ ಹೇಳಿದರು ಕಡಿಮೆ.

ತನ್ನ ತಾನಾರಿನೊಡೆ ಸಾಕು ಎನ್ನುವ ಮಹಾಮಾತೇ ಸಾಕು ಬದುಕಿನ ಸಾರ್ಥಕತೆಗೆ ನಿಮ್ಮ ಮಾತುಗಳೇ ಸಾಕು ಸರ್.

ಸಮಾಜದ ಪ್ರತಿಯೊಬ್ಬರಿಗೂ ಮಾರ್ಗದರ್ಶನ ವಾಗಬೇಕು. ನಿಮ್ಮ ಸ್ಪೂರ್ತಿಯ ‌ಮಾತುಗಳು. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಬಹಳ ಉಪಯುಕ್ತ ಕೊಡುಗೆ ನೀಡುತ್ತವೆ ನಿಮ್ಮ ಮಾತುಗಳು.

ಪ್ರತಿಯೊಬ್ಬರೂ ನಿಮ್ಮಂತೆ ಇದ್ದದ್ದನ್ನು ಇದ್ದಹಾಗೆ ಹೇಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಸಮಾಜದ ಅಂಕುಡೊಂಕುಗಳನ್ನು ಇದ್ದ ಹಾಗೆಯೇ ಸಮಾಜದ ಮುಂದಿಡುತ್ತಿರುವ ಹಾಗೂ ಅವುಗಳಿಂದ ಹೊರ ಬರುವ ದಾರಿಯನ್ನು ಕಾಣುವಂತೆ ಮಾಡುತ್ತಿರುವ ನಿಮ್ಮ ಜ್ಞಾನಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಸಮಾಜದ ಏಳಿಗೆಯನ್ನು ಉಸಿರಿಗಿಸಿಕೊಂಡ ನಿಮ್ಮ ಜ್ಞಾನಕ್ಕೆ ನಾನಲ್ಲಿ ಮಾತಿಲ್ಲ

ಸರಕಾರಿ ಕೆಲಸ ಸಿಕ್ಕಿದೊಡೆ ಉಂಡು ಮಲಗುವ ಜನರಿರುವ ಕಾಲದಲ್ಲಿ ಸದಾ ಸಮಾಜದ ಅಭಿವೃದ್ಧಿ ಮತ್ತು ಮೌಲ್ಯಯುತ ಅಸನಾದ ಬದುಕಿನ ಕನಸು ಕಾಣುತ್ತ ಹೊಸ ನವನವೀನ ತಂತ್ರಜ್ಞಾನ ಮತ್ತು ಆಶೋತ್ತರಗಳನ್ನು ಹುಡುಕುತ್ತ ಸ್ಪೂರ್ತಿಯ ಚಿಲುಮೆಯಾಗುವ ನಿಮ್ಮ ದಣಿವರಿಯಾದ ಬದುಕಿನ ನಿಜವಾದ ಸಾಧಕರೆಂದರೆ ತಪ್ಪಾಗದು

ಈ ಕಾಲದ ಮಿತಿಯಲ್ಲಿ ನಿಮ್ಮ ಅಖಂಡವಾದ ವಿಶಾಲ ಚಿಂತನೆಗಳನ್ನ ಪೂರ್ಣ ಪ್ರಮಾಣದಲ್ಲಿ ಪಡೆಯಲಾಗದೆ ಹೋದರು ಕಂಡ ಕೆಲವಷ್ಟೇ ಮಾತುಗಳು ಕೆಲಸಗಳು ಬದುಕಿಗೊಂದು ಮಹತ್ವ ಕಲ್ಪಿಸಿಕೊಟ್ಟವು ಸರ್.ನಿಮ್ಮಂತ ಗುರುಗಳ ಪಡೆದ ನಾ ಧನ್ಯ

ಜಗತ್ಪ್ರಸಿದ್ಧವಾಗಲಿ ನಿಮ್ಮ ಹೆಸರು, ಬೆಳಗಲಿ ನಿಮ್ಮ ಜ್ಞಾನದ ಜ್ಯೋತಿ ಜಗದಾಗಲದಲಿ.


ಲೇಖಕರು: ಗಂಗಾಧರ್ ನಾಗರಾಜ್
ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತ ಸಂಶೋಧನಾ ವಿಭಾಗ ತುಮಕೂರು ವಿಶ್ವವಿದ್ಯಾಲಯ

RELATED ARTICLES

5 COMMENTS

  1. ಉತ್ತಮವಾದ ಲೇಖನ , ಪ್ರೊ.ಪರಶುರಾಮ್ ಸರ್ ರವರು ಇನ್ನಷ್ಟು ಸಮಾಜಿಮುಖಿ ಕಾಯ೯ಗಳಲ್ಲಿ ತೊಡಗಿಸಿಕೊಳ್ಳಲಿ, ವಿದ್ಯಾಥಿ೯ ಸಮುದಾಯಕ್ಕೆ ದಾರಿದೀಪವಾಗಲಿ

  2. ಹೌದು ಸರ್ ನಿಮ್ಮನ್ನು ಗುರುಗಳಾಗಿ ಪಡೆದ ನಾವೇ ಧನ್ಯರು. ನಿಜವಾಗ್ಲೂ ತುಂಬಾ ಸತ್ಯ ಯುತವಾದ ಮಾತುಗಳನ್ನು ಹೇಳಿದ್ದೀರ, ಇಂದು ನಾವು ನಮ್ಮದೇ ಆದ ಸ್ವಂತಿಕೆ ಇಂದ ಪರವಲಂಬಿಯಾಗಿ ಜೀವನ ನೆಡೆಸುತ್ತಿದ್ದೀವಿ ಅಂದರೆ ಅದಕ್ಕೆ ನೀವೇ ಕಾರಣ, ಇಂದು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ವಿಷಯಗಳು ಪ್ರತಿಯೊಂದು ಕೆಲಸದಲ್ಲಿ ಉತ್ಸಾಹ ವನ್ನು ಹೆಚ್ಚಿಸುತ್ತದೆ .

  3. Congratulation Sir.
    We are really proud of you Sir.
    This is the real social work.
    Keep growing as a role model to next generation. Wish you all the very best in future

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?