Thursday, April 18, 2024
Google search engine
Homeತುಮಕೂರು ಲೈವ್ತುಮಕೂರು ಗ್ರಾಮಾಂತರ ಕ್ಷೇತ್ರ: ಇಂದಿನಿಂದ ಪ್ರಚಾರಾಂದೋಲನ

ತುಮಕೂರು ಗ್ರಾಮಾಂತರ ಕ್ಷೇತ್ರ: ಇಂದಿನಿಂದ ಪ್ರಚಾರಾಂದೋಲನ

Publicstory. in


ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನಪ್ರಿಯ ಶಾಸಕರಾದ ಡಿ.ಸಿ.ಗೌರಿಶಂಕರ್ರವರ ನೇತೃತ್ವದಲ್ಲಿ ನಡೆಯುತ್ತಿರುವ ಬಹುಮುಖ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದಿಂದ ನವೆಂಬರ್ 13 ರಿಂದ ಪ್ರಚಾರಾಂದೋಲನ ನಡೆಸಲು ಯೋಜಿಸಲಾಗಿದೆ ಎಂದು ಪ.ಜಾತಿ ವಿಭಾಗದ ಅಧ್ಯಕ್ಷ ಬಿ.ಎಸ್.ವೆಂಕಟೇಶ್, ಮುಖಂಡರಾದ ಸಿರಿವರ ನಾರಾಯಣಪ್ಪ ಮತ್ತು ಕಂಬಾಳಪುರ ಪಾಂಡುರಂಗಯ್ಯ ತಿಳಿಸಿದ್ದಾರೆ.

ನ.13 ರಂದು ಬೆಳಗ್ಗೆ 9 ಗಂಟೆಗೆ ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಶ್ರೀ ಆರ್.ಸಿ.ಆಂಜನಪ್ಪ ಅವರು ಈ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಿರುವರು.

ತಿಗಳ ಜನಾಂಗದ ಮುಖಂಡರಾದ ಕುಂಭಯ್ಯರವರು ಅತಿಥಿಗಳಾಗಿರುವರು. ಪಕ್ಷದ ಇತರೆ ಮುಖಂಡರುಗಳು ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮವ ವಿವರ


ನ.13 ರಂದು ಬೆಳಗುಂಬ, ಹೆಬ್ಬೂರು, ಕಣಕುಪ್ಪೆ, ನಿಡುವಳಲು, ಸಿರಿವರ, ನ.14 ರಂದು ಹೊಳಕಲ್ಲು, ಕೆ.ಪಾಲಸಂದ್ರ, ಪಾಲಸಂದ್ರ, ಹರಳೂರು, ಕೆಸರುಮಡು, ಹಿರೇಹಳ್ಳಿ, ನ.15 ರಂದು ಅರೆಗುಜ್ಜನಹಳ್ಳಿ, ಊರ್ಡಿಗೆರೆ, ಸೀತಕಲ್ಲು, ಮೈದಾಳ, ಹೊನ್ನುಡಿಕೆ, ಮಸ್ಕಲ್.

, ನ.16 ರಂದು ಸ್ವಾಂದೇನಹಳ್ಳಿ, ಅರಕೆರೆ, ಊರುಕೆರೆ, ಬುಗುಡನಹಳ್ಳಿ, ನ.17 ರಂದು ಗೂಳೂರು, ಹೆತ್ತೇನಹಳ್ಳಿ, ಬಳ್ಳಗೆರೆ, ನಾಗವಲ್ಲಿ, ಹೊನಸಿಗೆರೆ, ಗಂಗೋನಹಳ್ಳಿ, ನ.18 ರಂದು ಹೆಗ್ಗೆರೆ, ಮಲ್ಲಸಂದ್ರ, ಅರೆಯೂರು, ಗಳಿಗೇನಹಳ್ಳಿ, ದೊಡ್ಡನಾರವಂಗಲ.

ನ.19 ರಂದು ತಿಮ್ಮರಾಜನಹಳ್ಳಿ, ಸೋರೆಕುಂಟೆ, ನೆಲಹಾಳ್, ಬೆಳ್ಳಾವಿ _ ಈ ಸ್ಥಳಗಳಲ್ಲಿ ಪ್ರಚಾರಾಂದೋಲನ ಏರ್ಪಟ್ಟಿದ್ದು, ಅಂತಿಮವಾಗಿ ಬೆಳಗುಂಬ ಗ್ರಾಮದಲ್ಲಿ ಪ್ರಚಾರಾಂದೋಲನದ ಸಮಾರೋಪ ನಡೆಯಲಿದೆ. ಜೊತೆಗೆ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಹ ಅಂದು ಏರ್ಪಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?