Friday, March 29, 2024
Google search engine
Homeತುಮಕೂರು ಲೈವ್ತುರುವೇಕೆರೆಯಲ್ಲಿ ಸೂತಕ ಚಿತ್ರತಂಡ ಬೀಡು

ತುರುವೇಕೆರೆಯಲ್ಲಿ ಸೂತಕ ಚಿತ್ರತಂಡ ಬೀಡು

ಸಿದ್ದನಹಟ್ಟಿ (ತುರುವೇಕೆರೆ): ಸಮಾಜದ ಒರೆಕೋರೆಗಳನ್ನು ತಿದ್ದುವ ಕೆಲಸದ ಜೊತೆಗೆ ಸಾಮಾಜಿಕ ಕಳಿಕಳಿಯನ್ನು ಮನೋಜ್ಞವಾಗಿ ‘ಸೂತಕ’ ಚಿತ್ರದ ಮೂಲಕ ತೆರೆಯಮೇಲೆ ತರುವ ಪ್ರಯತ್ನವನ್ನು ಮಾಡಲಾಗುವುದೆಂದು ಚಿತ್ರದ ನಾಯಕನಟ ಹಾಗೂ ನಿರ್ದೇಶಕ ನಂದೀಶ್ಕುಮಾರ್ ತಿಳಿಸಿದರು.

ತಾಲೂಕಿನ ವಿವಿಧೆಡೆ ‘ಸೂತಕ’ ಚಿತ್ರತಂಡ ಚಿತ್ರೀಕರಣ ನಡೆಸಲು ಮುಂದಾದ ವೇಳೆ ಸಿದ್ದನಹಟ್ಟಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಚಿತ್ರದ ಬಹುಮುಖ್ಯ ಆಶಯ ಬಗ್ಗೆ ಆಸ್ಥೆ ತೋರಿ ಮಾತನಾಡಿದರು.

ನಾನು ಸಾದ್ಯವಾದಷ್ಟೂ ಸಮಾಜದ ಏಳಿಗೆಗಾಗಿ ಶ್ರಮಿಸಬೇಕಂಬ ಹಂಬಲ. ಸಮಾಜದಲ್ಲಿನ ಅನಿಷ್ಟ ಪದ್ದತಿಗಳಿಂದ ಆಗುತ್ತಿರುವ ಪರಿಣಾಮಗಳು ಹಾಗೂ ಅನಿಷ್ಟ ಪದ್ದತಿಗಳ ನಿರ್ಮೂಲನೆಗೆ ಕೈಗೊಳ್ಳಬಹುದಾದ ಕ್ರಮಗಳನ್ನು ಕುರಿತು ಚಿತ್ರವನ್ನು ಮಾಡಲಾಗುತ್ತಿದೆ.

ಗ್ರಾಮೀಣ ಸೊಗಡಿನ ಚಿತ್ರವಾಗಿರುವುದರಿಂದ ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಿಗೆ ಈಗಾಗಲೇ ಭೇಟಿ ನೀಡಿದ್ದು, ನಮ್ಮ ಚಿತ್ರಕ್ಕೆ ಸರಿ ಹೊಂದುವಂತಹ ಹಳ್ಳಿ ಪರಿಸರವನ್ನು ಹುಡುಕುವಂತಹ ಪ್ರಯತ್ನದಲ್ಲಿ ನಮ್ಮ ಚಿತ್ರತಂಡವಿದೆ ಎಂದರು.

ಚಿತ್ರದ ಸಹನಿರ್ಮಾಪಕ ವಿದ್ಯಾರಣ್ಯ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಂಗಸ್ವಾಮಿ ಮಾತನಾಡಿ, ಚಿತ್ರೋದ್ಯಮದಲ್ಲಿ ಇದು ನನ್ನ ಮೊದಲ ಪ್ರಯತ್ನವಾದರೂ ಸಾಮಾಜಿಕ ಕಳಕಳಿಯ ಜೊತೆಗೆ ಸಾಮಾಜಿಕ ಬದಲಾವಣೆ ತರುವ ಚಿತ್ರವಾದ್ದರಿಂದ ಸಹ ನಿರ್ಮಾಣ ಮಾಡುವ ಕನಸನ್ನು ಹೊಂದಿದೆ. ಈ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿ ಭಾಷೆಗಳಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ ಎಂದರು.

ಈ ವೇಳೆ ಸ್ಥಳೀಯ ಮುಖಂಡರಾದ ಹಟ್ಟಿಹಳ್ಳಿ ಪುಟ್ಟಣ್ಣ, ತೋವಿನಕೆರೆ ಪಟೇಲ್, ಗೋಪಾಲಯ್ಯ ಮತ್ತು ಚಿತ್ರತಂಡದ ಸದಸ್ಯರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?