Friday, March 29, 2024
Google search engine
Homeತುಮಕೂರು ಲೈವ್ದೊಂಬರನಹಳ್ಳಿ:ಚಿರತೆ ದಾಳಿಗೆ 4 ಮೇಕೆಗಳು ಬಲಿ

ದೊಂಬರನಹಳ್ಳಿ:ಚಿರತೆ ದಾಳಿಗೆ 4 ಮೇಕೆಗಳು ಬಲಿ

Publicstory.in


ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿ ವ್ಯಾಪ್ತಿಯ ದೊಂಬರನಹಳ್ಳಿ ಗ್ರಾಮದ ಕೆಂಪಯ್ಯ ಅವರ ಕೊಟ್ಟಿಗೆಯಲ್ಲಿದ್ದ 4 ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದಿದೆ.

ಗ್ರಾಮದೊಳೊಗಿನ ಕೆಂಪಯ್ಯ ಎಂಬುವರು ತಮ್ಮ ಮನೆಗೆ ಹೊಂದಿಕೊಂಡಂತಿರುವ ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕೂಡಿದ್ದರು. ಭಾನುವಾರ ತಡ ರಾತ್ರಿ ಕೊಟ್ಟಿಗೆಗೆ ನುಗ್ಗಿದ ಚಿರತೆ 4 ಮೇಕೆಗಳ ಮೇಲೆ ದಾಳಿ ನೆಡೆಸಿ ಅವುಗಳ ಕುತ್ತಿಗೆಯಿಂದ ರಕ್ತ ಹೀರಿ ಕೊಂದಿದೆ.
ಕೆಂಪಯ್ಯ ಬೆಳಗ್ಗೆ ಕೊಟ್ಟಿಗೆಯ ಮೇಕೆಗಳನ್ನು ಹೊರಗಡೆ ಬಿಡಲು ಹೋದಾಗ ಚಿರತೆ ದಾಳಿ ನಡೆಸಿರುವುದು ಕಂಡು ಮರುಗಿದ್ದಾನೆ.

ಪಶುವೈದ್ಯಾಧಿಕಾರಿ ಡಾ.ನೀಲಕಂಠಸ್ವಾಮಿ ಮೇಕೆಗಳ ಮರಣೋತ್ತರ ಪರೀಕ್ಷೆ ನೆಡೆಸಿದ್ದು ಸ್ಥಳಕ್ಕೆ ಅರಣ್ಯಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನೆಡೆಸಿ ಸೋಮವಾರ ಮಧ್ಯಾಹ್ನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯಲು ಗ್ರಾಮದ ಹೊರಗೆ ಬೋನನ್ನು ಇಟ್ಟಿದ್ದಾರೆಂದು ಗ್ರಾಮಸ್ಥರು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?