Thursday, March 28, 2024
Google search engine
Homeತುಮಕೂರು ಲೈವ್ಪಡಿತರಕ್ಕೆ ಬಂತು ಮತ್ತೊಂದು ತಲೆನೋವು...

ಪಡಿತರಕ್ಕೆ ಬಂತು ಮತ್ತೊಂದು ತಲೆನೋವು…

ಲಕ್ಷ್ಮೀಕಾಂತರಾಜು ಎಂಜಿ


ಗುಬ್ಬಿ: ರಾಜ್ಯದ ನಾಗರಿಕರ ಪಡಿತರ ಚೀಟಿಗೆ ಕುಟುಂಬದ ಎಲ್ಲ ಸದಸ್ಯರ ಬಯೋ ಸಂಗ್ರಹಣೆಯನ್ನ ರಾಜ್ಯದ ಆಹಾರ ಇಲಾಖೆ ಮಾಡುತ್ತಿದೆ. ಈ ಹಿಂದೆ ಪಡಿತರ ಚೀಟಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಿದ್ದ ಇಲಾಖೆ ಈಗ ಪಡಿತರ ಚೀಟಿಯಲ್ಲಿರುವ ಸದಸ್ಯರು ತಮ್ಮ ಕಾರ್ಡಿಗೆ ಇ ಕೆವೈಸಿ ಮಾಡುವುದು ಕಡ್ಡಾಯವಾಗಿದ್ದು ಈ ಜನವರಿ ತಿಂಗಳ ಹತ್ತನೇಯ ತಾರೀಖಿನ ಗಡುವು ನೀಡಿದೆ.

ಪಡಿತರ ಅಂಗಡಿಗೆ ಸುಮಾರು ಒಂದೂವರೆ ಸಾವಿರದಿಂದ ಎರಡು ಸಾವಿರದವರೆಗೂ ಪಡಿತರ ಚೀಟಿಗಳಿದ್ದು ನೀಡಿರುವ ಕಾಲವಕಾಶದಲ್ಲಿ ಎಲ್ಲ ಸದಸ್ಯರದ್ದು ಬಯೋ ಸಂಗ್ರಹಣೆ ಮಾಡಲು ಸಾಧ್ಯವಿಲ್ಲದಾಗಿದೆ ಎನ್ನುತ್ತಾರೆ ಪಡಿತರ ಅಂಗಡಿಯ ಸಿಬ್ಬಂದಿ.

ಪಡಿತರ ಚೀಟಿಗೆ ಜೀವಮಾಪನ ಮಾಡಿಸುವುದು ಕಡ್ಡಾಯವಾಗಿದ್ದು, ಮಾಡಿಸದ ಗ್ರಾಹಕರುಗಳಿಗೆ ಧವಸ ನೀಡುವುದೆಲ್ಲವೆಂಬ ಕಾರಣಕ್ಕೆ ಎಲ್ಲ ಗ್ರಾಹಕರುಗಳು ಸೊಸೈಟಿಗಳ ಮುಂದೆ ಕಾದು ಕುಳಿತುಕೊಳ್ಳುವಂತಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಪಡಿತರ ಚೀಟಿಗಳಿಗೆ ಸದಸ್ಯರ ಜೀವಮಾಪನ ತುಂಬಲು ಖಾಸಗಿ ಸೈಬರ್ ಸೆಂಟರ್ ಗಳಿಗೆ ಅವಕಾಶ ನೀಡದೆ ಸೊಸೈಟಿಗಳಲ್ಲಿಯೇ ಬಯೋ ಸಂಗ್ರಹಣೆ ಮಾಡುವುದರಿಂದ ಸೊಸೈಟಿಗಳಲ್ಲಿ ನೂಕು ನುಗ್ಗಲಾಗಿ ಇಲಾಖೆಯ ಸರ್ವರ್ ಕೊರತೆಯೂ ಇರುವುದರಿಂದ ಗ್ರಾಹಕರಿಗೆ ತೊಂದರೆಯಾಗಿದೆ.

ಕಾರ್ಡಿನಲ್ಲಿರುವ ಆರು ವರ್ಷಕ್ಕೂ ಮೇಲ್ಪಟ್ಟ ಎಲ್ಲ ಸದಸ್ಯರು ಕೂಡ ಜೀವಮಾಪನ ನೀಡಬೇಕಿರುವ ಕಾರಣ ಶಾಲಾ ವಿದ್ಯಾರ್ಥಿಗಳು ಕೂಡ ಶಾಲೆಗೆ ರಜೆ ಹಾಕಿ ಸೊಸೈಟಿಗಳ ಮುಂದೆ ನಿಲ್ಲುವಂತಾಗಿದೆ. ಇಲಾಖೆಯ ಜನವರಿಯ ಹತ್ತಕ್ಕೆ ಗಡುವು ನೀಡಿರುವುದು ಜನರ ಆತಂಕಗೊಂಡಿದ್ದಾರೆ.

ಕಾರ್ಡುದಾರರ ಎಲ್ಲರ ಜೀವಮಾಪನ ಪಡೆಯುವ ಕಾರ್ಯ ಈ ಹಿಂದೆ ನಡೆಸಬೇಕಿದ್ದು ಕಾರಣಾಂತರ ಇಲಾಖೆ ತಡೆ ಹಿಡಿದು ಈಗ ಒಮ್ಮೆಲೆ ಕಡಿಮೆ ಕಾಲವಕಾಶದಲ್ಲಿ ಜೀವಮಾಪನ ಸಂಗ್ರಹಣೆ ಮಾಡಲು ಹೊರಟಿರುವುದು ನಾಗರಿಕರಿಗೆ ತೊಂದರೆಯಾಗಿದೆ ಎನ್ನುತ್ತಾರೆ ಪಡಿತರ ಚೀಟಿಯ ಸದಸ್ಯರು.

ಇಲಾಖೆಯು ನೀಡಿರುವ ಸಮಯಾವಕಾಶದಲ್ಲಿ ರಾಜ್ಯ ವ್ಯಾಪಿ ಎಲ್ಲ ಸದಸ್ಯರುಗಳ ಜೀವಮಾಪನ ಪಡೆಯಲು ಸಾಧ್ಯವಿಲ್ಲದಾಗಿದ್ದು ಅವಧಿಯನ್ನ ವಿಸ್ತರಿಸುವಂತೆ ಜನರ ಒತ್ತಾಯ ಕೇಳಿ ಬರುತ್ತಿದೆ

ಆಗದ ಮಾತು


ರಾಜ್ಯ ವ್ಯಾಪಿ ಜೀವ ಮಾಪನ ಸಂಗ್ರಹಣೆಗೆ ನೀಡಿರುವ ಕಾಲಾವಕಾಶದಲ್ಲಿ ಎಲ್ಲ ಸದಸ್ಯರ ವಿವರ ಪಡೆಯುವುದು ಅಸಾಧ್ಯವಾದ ಮಾತು. ಇದುವರೆಗೆ ಕೇವಲ 32% ಸದಸ್ಯರ ಸಂಗ್ರಹಣೆಯಾಗಿದ್ದು ಅವಧಿಯನ್ನ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ.

ರಂಗನಾಥ್
ಕಾರ್ಯದರ್ಶಿ.

ವಿಎಸ್ ಎಸ್ ಎನ್,ಮಂಚಲದೊರೆ

ಇದು ಸರಿ ಇಲ್ಲ


ಕಡಿಮೆ ಕಾಲಾವಧಿಯಲ್ಲಿ ಜೀವಮಾಪನ ಸಂಗ್ರಹಣೆ ಮಾಡ ಹೊರಟಿರುವುದು ಸರಿಯಲ್ಲ. ಇದರಿಂದ ಜನರಿಗೆ ಆತಂಕದ ಜೊತೆಗೆ ಎಲ್ಲರೂ ಒಮ್ಮೆಲೆ ಇಕೆವೈಸಿ ಮಾಡಿಸಲು ಸಾಧ್ಯವಿಲ್ಲ. ಇಲಾಖೆ ಗಡುವು ದಿನಾಂಕವನ್ನು ಮುಂದೂಡಬೇಕಿದೆ.

ನೊಂದ ಗ್ರಾಹಕ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?