Friday, March 29, 2024
Google search engine
Homeತುಮಕೂರು ಲೈವ್ಪರಿಸರ‌‌‌ ಚೆನ್ನಾಗಿದ್ದರೆ ಮಾತ್ರ ಬದುಕು ಹಸನು: ಸಿದ್ಧಗಂಗಾ ಶ್ರೀ

ಪರಿಸರ‌‌‌ ಚೆನ್ನಾಗಿದ್ದರೆ ಮಾತ್ರ ಬದುಕು ಹಸನು: ಸಿದ್ಧಗಂಗಾ ಶ್ರೀ

Publicstory. in


Tumkuru: ಸಿದ್ಧಗಂಗಾ ಮಠದ ಆವರಣದಲ್ಲಿ ಅರಳಿ ಗಿಡ ನೆಡುವ ಮುಖಾಂತರ ಜೀವವೈವಿದ್ಯ ಆಂದೋಲನಕ್ಕೆ ಇಂದು ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಅನಂತಕುಮಾರ್ ಹೆಗಡೆ ಆಶೀಶಿರ ಅವರು ಚಾಲನೆ ನೀಡಿದರು.

ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಈ ಅಭಿಯಾನವನ್ನ ಆಂದೋಲನವನ್ನಾಗಿ ಮಾಡುವ ಮುಖಾಂತರವಾಗಿ ಪ್ರಭೇದ, ಜೀವ ವೈವಿದ್ಯ, ಕೆರೆ ಕಟ್ಟೆಗಳನ್ನ ಉಳಿಸುವಂತದ್ದು, ಅಲ್ಲದೇ ಹೊಸ ಚೈತನ್ಯವನ್ನು ಉಂಟು ಮಾಡುವ ರೀತಿಯಲ್ಲಿ ಜೀವ ಕಳೆಯನ್ನು ತುಂಬುವ ಕೆಲಸವನ್ನು ಜೀವವೈವಿದ್ಯ ಮಂಡಳಿ ಮಾಡುತಿರುವುದು ಸಂತೋಷದ ಸಂಗತಿ.

ಇಂದು ಮನುಷ್ಯ ಆರೋಗ್ಯವಾಗಿ ಬದುಕಬೇಕೆಂದರೆ ಆಹಾರವಷ್ಟೆ ಸಾಲದು ಉತ್ತಮ ಪರಿಸರವೂ ಕೂಡ ಅಗತ್ಯವಾಗಿದೆ. ಉತ್ತಮವಾದ ಆರೋಗ್ಯವಂತ ಗಾಳಿಯನ್ನು ಸೇವನೆ ಮಾಡಬೇಕೆಂದರೆ ಒಳ್ಳೆಯ ವಾತಾವರಣ ನಿರ್ಮಾಣವಾಗಬೇಕು.

ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ಮಾತ್ರ ಬದುಕು ಚೆನ್ನಾಗಿರುತ್ತದೆ. ಅದಕ್ಕಾಗಿ ಸರ್ಕಾರ ಇಂದು ಆಂದೋಲನವಾಗಿ ಮಾಡಿದೆ. ಈ ಹಿಂದೆ ಪ್ರತಿ ಗ್ರಾಮದಲ್ಲಿಯೂ ಸಹ ಗೋಕಟ್ಟೆ, ಗೋಮಾಳ, ದೇವಸ್ಥಾನ ಇರುತ್ತೀತ್ತು. ಆದರೆ ಇಂದು ಅವೆಲ್ಲವೂ ನಾಶವಾಗಿ ಹೋಗಿದೆ. ಪ್ರತಿಯೊಬ್ಬ ನಾಗರೀಕನೂ ಈ ಆಂದೋಲನದಲ್ಲಿ ಪಾಲ್ಗೊಂಡು ಪರಿಸರಕ್ಕೆ ಕೊಡುಗೆಯನ್ನು ನೀಡಬೇಕು ಎಂದರು.

ಉಪಅರಣ್ಯ ಸಂರಕ್ಷಣಾಧಿಕಾರಿ ಸತೀಶ್‍ಬಾಬು ರೈ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಪ್ಪ, ತಿಪಟೂರಿನ ಸಹಾಯಕ ಅರಣ್ಯ ಅಧಿಕಾರಿ ಸಂತೋಷ ನಾಯಕ್, ಶಿರಾದ ಅರಣ್ಯ ಅಧಿಕಾರಿ ಅನೂಷಭಟ್, ಉಪವಲಯ ಅಧಿಕಾರಿ ರಬ್ಬಾನಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?