ತುಮಕೂರು ಲೈವ್

ಮಹಿಳಾ ಆಯೋಗಕ್ಕೆ ಪ್ರತಿದಿನ 200 ದೂರು!

ತುಮಕೂರು: ಮಹಿಳಾ ಆಯೋಗಕ್ಕೆ ಬರುತ್ತಿರುವ ಸಮಸ್ಯೆಗಳನ್ನು ಗಮನಿಸಿದರೆ ಮಹಿಳೆಯರೂ ಕಾನೂನುಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲ ಎಸ್.ಕುಂದರ್ ತಿಳಿಸಿದರು.

ಮಹಿಳೆಯರಿಗೆ ಆಸ್ತಿ; ರಮೇಶ್ ಮಾತು

ತುಮಕೂರು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕಾನೂನುಗಳ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಸಮ್ಯೆಗಳನ್ನು ಪರಾಮರ್ಶಿಸಿದಾಗ ಮಹಿಳೆಯರೂ ಪುರುಷರಂತೆ ಕಾನೂನುಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರು.

ವಕೀಲ ಎಸ್.ರಮೇಶ್ ಅವರು ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು ಕುರಿತಂತೆ ಮಾತನಾಡಿದರು.

ಅತ್ತೆ ಮಾವಂದಿರನ್ನು ಸೊಸೆ ತಂದೆ-ತಾಯಿಗಳಂತೆ ನೋಡಬೇಕು. ಹಾಗೆಯೇ ಅತ್ತೆ ಮಾವಂದಿರು ಸೊಸೆಯನ್ನು ತನ್ನ ಮಗಳು ಎಂಬ ಭಾವನೆಯಿಂದ ನೋಡಬೇಕು ಹಾಗಾದಾಗ ಮಾತ್ರ ಸಂಸಾರದಲ್ಲಿ ಸಂತೋಷ ಕಾಣಲು ಸಾಧ್ಯ ಎಂದು ವಿಶ್ಲೇಷಿಸಿದರು.

ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ಇರುತ್ತವೆ ಎನ್ನುತ್ತಾರೆ. ಅದು ಸತ್ಯ. ಭಾರತದಲ್ಲಿ ಮಹಿಳೆಗೆ ಗೌರವ ದೊರೆತಿದೆ. ಭೂಮಿಯನ್ನು ಮಾತೆಗೆ ಹೋಲಿಸಲಾಗಿದೆ. ಭಾರತಮಾತೆ ಕೂಡ ಒಬ್ಬ ಹೆಣ್ಣು, ದೇಶದಲ್ಲಿ ಹರಿಯುವ ಪ್ರತಿಯೊಂದು ನದಿಯೂ ಕೂಡ ಹೆಣ್ಣಿನ ಹೆಸರಿಂದ ಕೂಡಿದೆ. ಅಂದಾಗ ಹೆಣ್ಣಿಗೆ ಇರುವ ಮಹತ್ವ ತಿಳಿಯುತ್ತದೆ ಎಂದು ಹೇಳಿದರು.

ಹಿಂದೆ ಸಂಜೆಯ ವೇಳೆ ಮನೆಗಳಲ್ಲಿ ಭಜನೆಗಳು ಕೇಳಿಬರುತ್ತಿದ್ದವು. ಇಂದು ಅವು ಮಾಯವಾಗಿವೆ. ಆದುನಿಕ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಆದರೆ ಹೆಚ್ಚು ಬಳಕೆ ಇರಬಾರದು. ಇಂದು ಎಲ್ಲರೂ ಮೊಬೈಲ್ ಬಳಸುತ್ತಾರೆ. ಮನೆಯಲ್ಲೇ ಇರುವ ಮಗ-ಳನ್ನು ಕರೆಯಲೂ ಪೋನ್ ಮಾಡುವಂತಹ ಪರಿಸ್ಥಿತಿ ಬಂದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಿವಿಮಾತು ಹೇಳಿದರು.

ಮಹಿಳೆಗೆ ಆಗುತ್ತಿರುವ ಅನ್ಯಾಯವನ್ನು ನೋಡಿ ಸುಮ್ಮನೆ ಕೂರದೆ ಪ್ರತಿಭಟಿಸಬೇಕು. ಅನ್ಯಾಯಕ್ಕೊಳಗಾದವರ ದನಿಗೆ ದನಿಗೂಡಿಸಬೇಕು. ಇದು ಆಗದಿದ್ದರೆ ನಮ್ಮ ಮನೆಯಲ್ಲೂ ಅನ್ಯಾಯ ನಡೆಸುವ ಸಾಧ್ಯತೆ ಇದೆ. ಹಾಗಾಗಿ ಅಂಥವುಗಳನ್ನು ಪ್ರತಿಭಟಿಸಬೇಕು ಎಂದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಾತನಾಡಿ ಆಯೋಗಕ್ಕೆ ನಿತ್ಯವೂ 150-200 ಅರ್ಜಿಗಳು ಬರುತ್ತಲೇ ಇವೆ. ಅಂದರೆ ಸಮಸ್ಯೆಗಳು ಸಾಕಷ್ಟಿವೆ ಎಂಬುದನ್ನು ಇದು ತೋರಿಸುತ್ತದೆ. ನಾವು ಸುಮಾರು 9 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ. ಆದರೂ ಇನ್ನೂ ಅರ್ಜಿಗಳು ಇವೆ. ಪೊಲೀಸರು ನಮಗೆ ಸಹಕಾರ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ. ವೈ.ಎನ್.ಸಿದ್ದೇಗೌಡ ಮಾತನಾಡಿ, ಮಹಿಳೆಗೆ ಮೊದಲಿನಿಂದಲೂ ಸ್ಥಾನಮಾನವಿದೆ. ಗಾಂಧೀ ಅಂದೇ ಹೇಳಿದ್ದರು. ಪುರುಷನಿಗೆ ವಿದ್ಯಾಭ್ಯಾಸ ಕೊಟ್ಟರೆ, ಅವನು ಮಾತ್ರ ಅಭಿವೃದ್ಧಿಯಾಗುತ್ತಾನೆ. ಮಹಿಳೆಯರಿಗೆ ವಿದ್ಯಾಭ್ಯಾಸ ಕೊಟ್ಟರೆ ಇಡೀ ಕುಟುಂಬ ಮತ್ತು ಸಮುದಾಯ ಅಭಿವೃದ್ದಿಯಾಗುತ್ತದೆ. ಹಾಗಾಗಿ ಮಹಿಳೆಯರಿಗೆ ವಿದ್ಯೆ ಕೊಡಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಪುರುಷರಿಗೂ ಪ್ರಜ್ಞೆ ಬಂದಿದೆ. ಕುಟುಂಬದಲ್ಲಿ ಹೆಂಡತಿಯ ಒಪ್ಪಿಗೆ ಪಡೆಯದೇ ಒಂದು ನಿರ್ಧಾರವನ್ನೂ ಯಾವೊಬ್ಬ ಪುರುಷನೂ ತೆಗೆದುಕೊಳ್ಳುವುದಿಲ್ಲ. ಪತ್ನಿಯನ್ನು ಏಕವಚನದಲ್ಲಿ ಬೈದರೂ ಕೂಡ ಅವಳ ಒಪ್ಪಿಗೆ ಪಡೆದೇ ತೀರ್ಮಾನ ಮಾಡುವಂತ ಕಾಲ ಹಿಂದಿನಿಂದಲೂ ಇದೆ. ಅದು ಹೊರಗೆ ಮಾತ್ರ ಕಾಣುವುದಿಲ್ಲ ಎಂದರು.

ವಕೀಲ ಎಸ್.ರಮೇಶ್ ಅವರು ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕು ಕುರಿತಂತೆ ಸವಿಸ್ತಾರವಾಗಿ ಮಾತನಾಡಿದರು.

Comment here