ತುಮಕೂರು ಲೈವ್

ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆಸ್ಪತ್ರೆಗೆ ದಾಖಲು

ತುಮಕೂರು:

ಒಂದು ಕಾಲಕ್ಕೆ ಇಡೀ ಭೂಗತ ಲೋಕವನ್ನೆ ಆಳಿದ ಮಾಜಿ ಭೂಗತ ದೊರೆ ಹಾಗು ಸಮಾಜ ಸೇವಕ ಮುತ್ತಪ್ಪ ರೈ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ‌.

ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರಿಗೆ ನಿನ್ನೆ ಆರೋಗ್ಯದಲ್ಲಿ ಏರುಪೇರಾಗಿತ್ತು‌ . ಈ ಹಿನ್ನೆಲೆ ಅವರನ್ನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಐದಾರು ತಿಂಗಳ ಕೆಳಗೆ ಕ್ಯಾನ್ಸರ್ ಇರುವುದು ಖುದ್ದು ಮುತ್ತಪ್ಪ ರೈ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು. ಕ್ಯಾನ್ಸರ್ ಇರುವುದರಿಂದ ಕರ್ನಾಟಕ ರಾಜ್ಯ ಅಥ್ಲೆಟ್ ಅಸೋಸಿಯೇಷನ್ ಗೆ ರಾಜೀನಾಮೆ ನೀಡಿದ್ದರು.

Comment here