ತುಮಕೂರು ಲೈವ್

ಮೇ.13ಕ್ಕೆ ಸಾರಿಗೆ ಬಸ್ ರಸ್ತೆಗೆ‌ ಇಳಿಯಲ್ಲ. ಯಾಕೆ ಗೊತ್ತಾ..?

ತುಮಕೂರು

ರಾಜ್ಯ ಬಜೆಟ್ ನಲ್ಲಿ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಘೋಷಣೆ‌ ಮಾಡದ‌ ಹಿನ್ನೆಲೆ‌ ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಮೇ 13 ರಿಂದ ಎಲ್ಲಾ ವಲಯಗಳ ಬಿಎಂಟಿಸಿ, ಕೆಎಸ್ಅರ್ ಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ನೌಕರರು ‌ಬಂದ್ ಗೆ ಕರೆ‌ ನೀಡಿದ್ದಾರೆ.

ಸರ್ಕಾರಕ್ಕೆ ತೊಂದರೆ ನೀಡದೆ ಶಾಂತಿಯುತ ಸತ್ಯಾಗ್ರಹದ ಮೂಲಕ ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ.

ಹೀಗಾಗಿ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ. ಮೇ 13ರಂದು ಸಾರಿಗೆ ಬಂದ್ ಮಾಡಲು ಕರೆ ನೀಡಲಾಗಿದೆ. ಅಷ್ಟರಲ್ಲಿ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸಿಐಟಿಯು ಜಂಟಿ ಕಾರ್ಯದರ್ಶಿ ಆನಂದ್ ತಿಳಿಸಿದ್ದಾರೆ.

Comment here