Friday, April 19, 2024
Google search engine
Homeತುಮಕೂರು ಲೈವ್ರಾಜಕೀಯ ಚತುರತೆ, ಆದರ್ಶ ಮೆರೆದ ಶಾಸಕ ಜ್ಯೋತಿಗಣೇಶ್

ರಾಜಕೀಯ ಚತುರತೆ, ಆದರ್ಶ ಮೆರೆದ ಶಾಸಕ ಜ್ಯೋತಿಗಣೇಶ್

Publicstory. in


ತುಮಕೂರು: ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್ ಎರಡು ಕಾರಣಗಳಿಂದಾಗಿ ಜಿಲ್ಲೆಯ ಇತರ ಜನಪ್ರತಿನಿಧಿಗಳಿಗಿಂತ ವಿಭಿನ್ನ ಎಂದು ತೋರಿಸಿಕೊಟ್ಟಿದ್ದಾರೆ.

ಮೃಧು ಹಾಗೂ ಸರಳತೆಯ ಕಾರಣಳಿಂದಾಗಿಯೇ ಅವರ ವಿರೋಧಿ ಪಾಳೆಯದಲ್ಲಿ ಇಂದಿಗೂ ಟೀಕೆಗೆ ಒಳಗಾಗುತ್ತಿರುವ, ಅವರ ಮೃದು ಧೋರಣೆಯ ನಡೆಯನ್ನೇ ಅವರ ಹಿನ್ನಡೆಯಾಗಿ ತೋರಿಸಲು ಯತ್ನಿಸಿ ರಾಜಕೀಯವಾಗಿ ಅವರನ್ನು ಹಿಂದಕ್ಕೆ ನೂಕಲು ಯತ್ನಿಸುತ್ತಿರುವರಿಗೆ ಅವರು ಈಗ ಉತ್ತರ ನೀಡತೊಡಗಿದ್ದಾರೆ.

ಎಂಜಿನಿಯರಿಂಗ್ ಓದಿರುವ, ಗುಬ್ಬಿಯಂತಹ ಸಣ್ಣ ಪಟ್ಟಣದಲ್ಲಿ ಎಂಜಿನಿಯರಿಂಗ್ ಕಾಲೇಜು ಕಟ್ಟಿ ಇಂದು ದೇಶದಲ್ಲಿ ಮಂಜೂಣಿಯ ಗುಣಮಟ್ಟದ ಶಿಕ್ಷಣ ನೀಡುವ ಗ್ರಾಮೀಣ ಪ್ರದೇಶದ ಎಂಜಿನಿಯರಿಂಗ್ ಕಾಲೇಜು ಎಂದು ಬಿರುದಿಗೆ ಪಾತ್ರವಾಗಿರುವಂತೆ ಮಾಡಿರುವ ಹಿಂದೆ ಈ ಮೃದು, ಸರಳತೆಯೇ ಕಾರಣ ಎಂಬುದು ಬಹುತೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. ಜ್ಯೋತಿ ಗಣೇಶ್ ಒಂದು ರೀತಿಯಲ್ಲಿಒಲ್ಲದ ಮನಸ್ಸಿನಲ್ಲೇ ರಾಜಕಾರಣಕ್ಕೆ ಬಂದವರು.

ಎರಡು ವರ್ಷಗಳಿಂದಲೂ ಅವರು ರಾಜಕೀಯ ವಿವಾದದಿಂದಲೇ ದೂರು ಇದ್ದವರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಜ್ಯೋತಿ ಗಣೇಶ್ ತಮ್ಮ ರಾಜಕೀಯ ಶಕ್ತಿಯನ್ನು ತೋರಿಸ ತೊಡಗಿದ್ದಾರೆ.

ರಾಜಕಾರಣ ಜನರ ಆಶೋತ್ತರಗಳಿಗೆ ಒಗ್ಗಿ ನಡೆಯುವುದಿಲ್ಲ ಎಂಬುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ಆದರೆ ಜನರ ಆಶೋತ್ತರಗಳಿಗೆ ಪೂರಕವಾಗಿ ಹೆಜ್ಜೆ ಇಡುವ ಮೂಲಕ ಈ ಶಾಸಕರು ಜಿಲ್ಲೆಯಲ್ಲಿ ಹೊಸ ನಡೆಗೆ ಕಾರಣವಾಗಿದ್ದಾರೆ.

ತಿಪಟೂರು ಎಪಿಎಂಸಿ ಕಾರ್ಯದರ್ಶಿಯಾಗಿದ್ದ ನ್ಯಾಮಗೌಡ ಅವರನ್ನು ಆಗಿನ ಕಾಂಗ್ರೆಸ್ ಸರ್ಕಾರ ವರ್ಗಾವಣೆ ಮಾಡಿದಾಗ ರೈತರು ತಿಪಟೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಸಾವಿರಾರು ರೈತರು ಪಾದಯಾತ್ರೆ ನಡೆಸಿದಾಗ ಗುಬ್ಬಿ ಸಮೀಪದ ರೈತರೊಂದಿಗೆ ಸಭೆ ನಡೆಸಿದ ಅಂದಿನ ಜಿಲ್ಲಾ ಉಸ್ತುವಾರಿ ಟಿ.ಬಿ.ಜಯಚಂದ್ರ ಅವರು ಈ ಅಧಿಕಾರಿಯನ್ನು ಪುನಃ ತಿಪಟೂರು ಎಪಿಎಂಸಿ ಕಾರ್ಯದರ್ಶಿಯಾಗಿ ನೇಮಕ ಮಾಡುವ ಭರವಸೆ ನೀಡಿ ಅದರಂತೆ ನಡೆದುಕೊಳ್ಳಲಿಲ್ಲ.

ಆಗಿನ ಶಾಸಕರೊಬ್ಬರು ಇದಕ್ಕೆ ಅವಕಾಶವನ್ನು ಕೊಡಲಿಲ್ಲ.

ಇಂಥದೇ ಘಟನೆಗೆ ಈಚೆಗೆ ಸಾಕ್ಷಿಯಾಗಿದ್ದು ತುಮಕೂರು ನಗರ ಕ್ಷೇತ್ರ. ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾದ ಭೂಬಾಲನ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದಾಗ ನಗರದ ಜನರು ಸರ್ಕಾರದ ವಿರುದ್ಧ, ಶಾಸಕರ ನಡೆಯನ್ನು ಟೀಕಿಸಿದ್ದರು. ಬೇರೆ ಶಾಸಕರಾಗಿದ್ದರೆ ಇದನ್ನು ತಮ್ಮ ಪ್ರತಿಷ್ಠೆಯಾಗಿ ತೆಗೆದುಕೊಳ್ಳುತ್ತಿದ್ದರೇನೋ ಅಥವಾ ವಿರೋಧಿಗಳ ಮಾತಿಗೆ ಮಣಿಯಬಾರದು ಎಂದು ಹಠಕ್ಕೆ ಬೀಳುತ್ತಿದ್ದರೇನೋ?

ಸರ್ಕಾರಿ ಅಧಿಕಾರಿಯೊಬ್ಬರನ್ನು ಜನರ ಒತ್ತಾಯಕ್ಕೆ ಮಣಿದು ಮತ್ತೇ ಸ್ವ ಸ್ಥಾನಕ್ಕೆ ವರ್ಗಾವಣೆ ಮಾಡಿಸಿದ ಉದಾಹರಣೆ ಈ ದಶಕದ ಅವಧಿಯಲ್ಲಿ ಜಿಲ್ಲೆಯಲ್ಲಿ ಎಲ್ಲೂ ನಡೆದಿಲ್ಲ. ಇದು ಆದರ್ಶದ ರಾಜಕಾರಣಕ್ಕೆ ಮುನ್ನಡಿಯೇ ಆಗಿದೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ಶಾಲಿನಿ ರಜನೀಶ್ ಅವರನ್ನು ಜಿಲ್ಲೆಯಿಂದ ವರ್ಗ ಮಾಡಿಸಲು ಅವರ ತೋರಿದ ದೈರ್ಯ, ರಾಜಕೀಯ ನಡೆ ತುಂಬಾ ಜನರಿಗೆ ಗೊತ್ತಿರಲಿಕ್ಕಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಹಿಂದಕ್ಕಿ ಈ ವಿಷಯದಲ್ಲಿ ಅವರು ಚತುರತೆ ತೋರಿದರು. ಒಂದೇ ದಿನದಲ್ಲಿ ವರ್ಗಾವಣೆಯನ್ನು ಸಚಿವರೊಬ್ಬರು ರದ್ದು ಮಾಡಿಸಿದ್ದರು. ಆದರೆ ಮರುದಿನ ಈ ವರ್ಗಾವಣೆ ರದ್ದು ಮಾಡಿಸಿಕೊಂಡು ನೀರಾವರಿ ಯೋಜನೆಗಳ ಬಗ್ಗೆ ವಿಶೇಷ ಆಸಕ್ತಿ, ಬದ್ಧತೆ ಇರುವ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ಹಾಕಿಸಿಕೊಂಡು ತಾವು ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ವಾರ್ಡ್ ಸಮಿತಿ


ಯಾರೂ ಕೂಡ ಕೈ ಹಾಕದ ಕೆಲಸಕ್ಕೆ ಶಾಸಕ ಜ್ಯೋತಿ ಗಣೇಶ್ ಕೈ ಹಾಕಿದ್ದಾರೆ. ಮಹಾನಗರ ಪಾಲಿಕೆಯ ಪ್ರತಿ ವಾರ್ಡ್ ಗಳಲ್ಲಿ ವಾರ್ಡ್ ಸಮಿತಿ ನೇಮಕ ಮಾಡಲು ಈವರೆಗಿನ ಯಾವ ಶಾಸಕರು ಅವಕಾಶ ಮಾಡಿಕೊಟ್ಟಿರಲಿಲ್ಲ. ಆಯುಕ್ತರಾದ ಭೂ ಬಾಲನ್ ಈಗಾಗಲೇ ಆದೇಶ ಹೊರಡಿಸಿದ್ದಾರೆ.

ವಾರ್ಡ್ ಸಮಿತಿಗಳು ರಚನೆಯಾದರೆ ತುಮಕೂರು ನಗರದ ಆಡಳಿತದಲ್ಲಿ ಸ್ವಚ್ಛತೆ ಕಾಣುವುದರಲ್ಲಿ ಯಾವುದೇ ಅನುಮಾನ ಇಲ್ಲ. ಒಟ್ಟಾರೆ ಈಮೂರು ವಿಷಯಗಳಲ್ಲಿ ಜ್ಯೋತಿ ಗಣೇಶ್ ಅವರ ನಡೆ ಎಲ್ಲ ರಾಜಕಾರಣಿಗಳಿಗೂ ಬರಲಿ. ಜನರು ಕೇಳುವ ಅಧಿಕಾರಿಗಳು ಆಯಾ ಕಚೇರಿಯಲ್ಲಿ ಇರುವಂತಾಗಲಿ, ಮಧ್ಯವರ್ತಿಗಳು, ಗುತ್ತಿಗೆದಾರರು ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗ ಮಾಡಿಸಿಕೊಂಡು ಬರುವ ಕೆಲಸ ನಿಲ್ಲಲು ಈ ಹೆಜ್ಜೆ ಮುನ್ನಡಿಯಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?