ತುಮಕೂರು ಲೈವ್

ಶಾಸಕರ ಹಿಂಬಾಲಕರ ದುಂಡಾವರ್ತನೆ: ಜೆಡಿಎಸ್ ಪ್ರತಿಭಟನೆ

ತುರುವೇಕೆರೆ: ಬಿಜೆಪಿ ಶಾಸಕರ ಹಿಂಬಾಲಕರ ದುಂಡಾವರ್ತನೆ ತಾಲ್ಲೂಕಿನಲ್ಲಿ ಮಿತಿಮೀರಿದ್ದು ಶಾಸಕರ ಕುಮ್ಮಕ್ಕಿನಿಂದ ಜೆಡಿಎಸ್‍ ಕಾರ್ಯಕರ್ತರ ಮೇಲೆ ನಿರಂತ ಹಲ್ಲೆ ನಡೆಯುತ್ತಿದೆಂದು ಆರೋಪಿಸಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.ಜೆಡಿಎಸ್‍ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಶಾಸಕರೊಂದಿಗೆ ಸೇರಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸುತ್ತಾ ಶಾಸಕರ ಹಿಂಬಾಲಕರ ಗುಂಡಾ ವರ್ತನೆಗೆ ಧಿಕ್ಕಾರ ಕೂಗಿ, ಹಲ್ಲೆ ನಡೆಸಿದ ಆರೋಪಿಯನ್ನು ಬಂದಿಸುವಂತೆ ಘೋಷಣೆ ಕೂಗುತ್ತಾ ಠಾಣೆಯ ಎದುರು ಜಮಾಯಿಸಿದರು.ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಮುನಿಯೂರಿನಲ್ಲಿ ವಸಂತಕುಮಾರ್ ಮೇಲೆ ಬಿಜೆಪಿ ಕಾರ್ಯಕರ್ತ ಪುನೀತ್ ಜಮೀನು ವಿಚಾರವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದರೂ ಆರೋಪಿಯನ್ನು ಇದುವರೆಗೂ ಬಂಧಿಸದಿರುವುದು ಪೊಲೀಸರ ಅದಕ್ಷತೆಯನ್ನು ತೋರಿಸುತ್ತದೆ. ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು ಶಾಸಕರ ದುರಾಡಳಿತದ ಎಲ್ಲೆ ಮೀರಿದೆ ಎಂದು ಕಿಡಿಕಾರಿದರು.ಬಡವರಿಗೆ ರೈತರಿಗೆ ರಕ್ಷಣೆಯಿಲ್ಲದಂತಾಗಿದೆ. ಬಿಜೆಪಿ ಕಾರ್ಯಕರ್ತರು ಮಾಡುವ ಎಲ್ಲ ದೌರ್ಜನ್ಯಗಳಿಗೆ ಶಾಸಕರು ಬೆನ್ನೆಲುಬಾಗಿ ನಿಂತಿರುವುದು ದುರದೃಷ್ಟಕರ. ಕೂಡಲೇ ಆರೋಪಿಯನ್ನು ಬಂದಿಸುವಂತೆ ಆಗ್ರಹಿಸಿದರು.ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೊಳಾಲಗಂಗಾಧರ್ ಮಾತನಾಡಿ, ತಾಲ್ಲೂಕಿನಲ್ಲಿ ನಡೆಯುವ ಅಹಿತಕರ ಘಟನೆಗೆ ಶಾಸಕ ಮಸಾಲಜರಾಂರ ದೊಂಬರಾಟದ ರಾಜಕಾರಣ ಎಂದು ಆರೋಪಿಸಿ, ತಾಲ್ಲೂಕಿನ ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆಂದು ದೂರಿದರು.ಪ್ರತಿಭಟನೆಯಲ್ಲಿ ಜೆಡಿಎಸ್‍ ಮುಖಂಡರುಗಳು, ಕಾರ್ಯಕರ್ತರು ಮತ್ತು ಮುನಿಯೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.

Comment here